¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-01-2018
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 02/2018, ಕಲಂ. 279, 304(ಎ)
ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 10-01-2018 ರಂದು ಫಿರ್ಯಾದಿ ಮಹಾದೇವಿ ಗಂಡ ವೀರಬಸಪ್ಪಾ ಹಿಂದೊಡ್ಡೆ ವಯ:
55
ವರ್ಷ, ಜಾತಿ: ಲಿಂಗಾಯತ, ಸಾ:
ವಾಂಜರಿ ಗಲ್ಲಿ ಹುಮನಾಬಾದ ರವರ ಚಿಕ್ಕಪ್ಪನಾದ ವೀರಪ್ಪಣ್ಣಾ ತಂದೆ ವೀರಭದ್ರಪ್ಪಾ ಹಿಂದೊಡ್ಡೆ ಸಾ: ವಾಂಜರಿಗಲ್ಲಿ ಹುಮನಾಬಾದ ರವರು ಪ್ರತಿ ದಿನದಂತೆ ವಾಟರ್
ಬಾಟಲಗಳನ್ನು ಆಯಲು ಮನೆಯಿಂದ ಹೋಗಿ
ಹುಮನಾಬಾದ ಅಂಬೇಡ್ಕರ
ಚೌಕದಿಂದ ವಾಟರ್ ಬಾಟಲಗಳನ್ನು ಆಯ್ದುಕೊಳ್ಳುತ್ತಾ ನಡೆದುಕೊಂಡು ಕಲ್ಲೂರ ರೋಡ ಮುಖಾಂತರ ವಾಂಜರಿ ಗಲ್ಲಿಗೆ ಬರುತ್ತಿರುವಾಗ ನಾಗೇಶ್ವರಿ ಹೋಟೆಲ್ ಹತ್ತಿರ ಬಂದಾಗ ಯಾವುದೋ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅಂಬೇಡ್ಕರ್ ವೃತ್ತದ ಕಡೆಯಿಂದ ಅತಿವೇಗ ಮತ್ತು ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿಯ
ಚಿಕ್ಕಪ್ಪನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಕಾರಣ
ಸದರಿ ಅಪಘಾತದಿಂದ ಫಿರ್ಯಾದಿಯವರ
ಚಿಕ್ಕಪ್ಪನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತಗಾಯವಾಗಿ ಎರಡು ಕಿವಿಯಿಂದ ರಕ್ತಸ್ರಾವ ಆಗಿ ವಾಂತಿ ಮಾಡಿಕೊಳ್ಳುತ್ತಿದ್ದಾಗ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು 108
ಅಂಬುಲೆನ್ಸದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬೀದರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿಯ ಮಧ್ಯ ಮೃತಪಟ್ಟಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 11-01-2018
ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment