Police Bhavan Kalaburagi

Police Bhavan Kalaburagi

Monday, March 12, 2018

Yadgir District Reported Crimes Updated on 12-03-2018


                                              Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 43/2018 ಕಲಂ: 279, 337,338, 304(ಎ) ಐಪಿಸಿ & 187 ಐ.ಎಮ.ವಿ ಕಾಯ್ದೆ;- ದಿನಾಂಕ 11-03-2018 ರಂದು ಮದ್ಯಾಹ್ನದ ಸುಮಾರಿಗೆ ನಾನು, ನನ್ನ ತಮ್ಮಂದಿರಾದ  ಚಾಂದಪಾಶಾ ತಂದೆ ಶಿಲಾರೊದ್ದಿನ ಚೌದರಿ, ಅಂಹುಸೇನ ತಂದೆ ಶಿಲಾರೊದ್ದಿನ ಚೌದರಿ ಎಲ್ಲರೂ ನಮ್ಮೂರ ಬಸ್ ನಿಲ್ದಾಣದ ಹತ್ತಿರ ಇರುವಾಗ ನಮ್ಮೂರ ಅಂಬೆಡಕರಚೌಕ ಹತ್ತಿರ ಅಪಘಾತವಾಗಿದ್ದನ್ನು ನೋಡಿ ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಮಗಳು ಸಾನಿಯಾಗೆ ಅಪಘಾತದಲ್ಲಿ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದಗಾಯಗಳು ಆಗಿದ್ದವು, ಈ ಘಟನೆ ಬಗ್ಗೆ ತರಕಸಪೇಠ ಗ್ರಾಮದ ಮಲ್ಲಿಕಾಜರ್ುನ ಇವರಿಗೆ ವಿಚಾರಿಸಲಾಗಿ ಅವರು ತಿಳಿಸಿದ್ದೆನೆಂದರೆ ಇಂದು ನನ್ನ ಹೆಂಡತಿಗೆ ದವಾಖಾನೆಗೆ ತೋರಿಸಿಕೊಂಡು ಬರುವ ಕುರಿತು ಬೆಳಿಗ್ಗೆ 10-00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಪಾರ್ವತಿ ಇಬ್ಬರೂ ಯಾದಗಿರಿಗೆ ಬಂದಿದೆವು, ಅಲ್ಲಿ ದವಾಖಾನೆಗೆ ತೋರಿಸಿಕೊಂಡು ನಂತರ ನನ್ನ ತಂಗಿ ಊರಾದ ಯಾಗಾಪೂರಕ್ಕೆ ಹೋಗಬೇಕು ಅಂತಾ ಯಾದಗಿರಿಯ ಹತ್ತಿಕುಣಿ ಕ್ರಾಸ್ ಹತ್ತಿರ ನಿಂತಾಗ ಅಲ್ಲಿ ಒಬ್ಬ ಅಟೋ ಚಾಲಕನು ಯಾಗಾಪೂರಕ್ಕೆ ನನ್ನ ಅಟೋ ಹೋಗುತ್ತದೆ ಅಂತಾ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ಪಾರ್ವತಿ ಇಬ್ಬರೂ ಅಟೋದಲ್ಲಿ ಕುಳಿತುಕೊಂಡೆವು, ಆಗ ಅಟೋ ಚಾಲಕನು ತನ್ನ ಅಟೋವನ್ನು ಚಾಲು ಮಾಡಿಕೊಂಡು ಯಾದಗಿರಿಯಿಂದ ಯಾಗಾಪೂರ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದನು, ಮಾರ್ಗಮಧ್ಯ ಬಂದಳ್ಳಿ ಗ್ರಾಮ ದಾಟಿದ ನಂತರ ಅಟೋ ಚಾಲಕನು ಬಂದಳ್ಳಿ-ಯಡ್ಡಳ್ಳಿ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಅಡಾದಿಡ್ಡಿಯಾಗಿ ಓಡಿಸಿಕೊಂಡು ಹೋಗುತ್ತಾ ಯಡ್ಡಳ್ಳಿ ಗ್ರಾಮದಲ್ಲಿ ಅಂಬೇಡಕರ ಚೌಕ ಹತ್ತಿರ ರೋಡಿನ ಎಡಭಾಗಕ್ಕೆ ನಿಂತ ಒಬ್ಬಳು ಹುಡುಗಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅಟೋ ಪಲ್ಟಿಯಾಗಿ ಬಿತ್ತು, ಆ ಅಪಘಾತದಲ್ಲಿ ನನ್ನ ಎಡಗಾಲು ಮೊಳಕಾಲಿಗೆ, ಪಾದದ ಮೇಲೆ ರಕ್ತಗಾಯವಾಗಿರುತ್ತದೆ, ಬಲಮೊಳಕಾಲಿಗೆ ಗುಪ್ತಗಾಯವಾಗಿರುತ್ತದೆ, ನನ್ನ ಹೆಂಡತಿ ಪಾರ್ವತಿ ಇವಳ ಬಲಗಾಲು ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗೈ ಮೊಳಕೈಗೆ ತರಚಿದಗಾಯ, ಬಲಗೈ ಭುಜಕ್ಕೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಮತ್ತು ರೋಡಿನ ಬದಿಗೆ ನಿಂತ ನಿನ್ನ ಮಗಳು ಸಾನಿಯಾ  ಚೌದರಿ ಇವಳ ತಲೆಗೆ ಭಾರಿ ರಕ್ತಗಾಯವಾಗಿದ್ದು, ಮೂಖಕ್ಕೆ ಮತ್ತು ಎದೆಗೆ ತರಚಿದ ಗಾಯವಾಗಿರುತ್ತದೆ ಈ ಅಪಘಾತವು ಇಂದು ದಿನಾಂಕ 11-02-2018 ರಂದು ಮಧ್ಯಾಹ್ನ 12-15 ಗಂಟೆಗೆ ಅಂಬೇಡಕರಚೌಕ ಹತ್ತಿರ ನಡೆದಿರುತ್ತದೆ. ಅಪಘಾತಕ್ಕಿಡಾದ ಟಂ.ಟಂ ಅಟೋ ನಂ ಕೆ.ಎ-33-9339 ಅಂತಾ ಇದ್ದಿರುತ್ತದೆ, ಅಂತಾ ತಿಳಿಸಿದಾಗ ಆಗ ನಾವೆಲ್ಲರೂ ಕೂಡಿಕೊಂಡು ಪೋನ ಮಾಡಿ ಸ್ಥಳಕ್ಕೆ 108 ಅಂಬುಲೆನ್ಸಕ್ಕೆ ಕರೆಯಿಸಿ ಗಾಯ ಹೊಂದಿದ್ದ ಅವರನೆಲ್ಲಾ ಅದರಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೆವೆ, ನಂತರ ವೈಧ್ಯರ ಸಲಹೆ ಮೇರೆಗೆ ನನ್ನ ಮಗಳನ್ನು ಹೆಚ್ಚಿನ ಉಪಚಾರಕ್ಕಾಗಿ ಕಲಬುಗರ್ಿಗೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯ ಚಿತ್ತಾಪೂರ ಸಮೀಪ ಮಧ್ಯಾಹ್ನ 3-15 ಗಂಟೆಗೆ ಸತ್ತಿರುತ್ತಾಳೆ, ಅದರ ಚಾಲಕನ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ, ಟಂ.ಟಂ. ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 43/2018 ಕಲಂ 279, 337, 338, 304(ಎ) ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ  279,338 ಐಪಿಸಿ ಸಂ.187 ಐ.ಎಂ.ವಿ ಕಾಯ್ದೆ ;- ದಿನಾಂಕ:11-03-2018 ರಂದು 5 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ತಾರಾ ಗಂಡ ಸಾಯಬಣ್ಣ ಮಕಾಸಿ ಸಾ:ಸತ್ಯಂಪೇಠ ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:09-03-2018 ರಂದು ಸಾಯಂಕಾಲ ಸುಮಾರಿಗೆ ನಾನು ಮನೆಯಲ್ಲಿರುವಾಗ ಗಂಡನಾದ ಸಾಯಬಣ್ಣ ಈತನು ಖಾಸಗಿ ಕೆಲಸ ಕುರಿತು ಲಕ್ಷ್ಮಿಪೂರಕ್ಕೆ ಹೋಗಿ ಬರುತ್ತೆನೆ ಮನೆಯಿಂದ ಹೊಗಿದ್ದನು. ಅಂದಾಜು ರಾತ್ರಿ 11-15 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ದಿವಳಗುಡ್ಡದ ಮರೆಪ್ಪ ತಂದೆ ಪರಮಪ್ಪ ಸ್ವಾಮಿನವರ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಇಂದು ರಾತ್ರಿ 11 ಗಂಟೆ ಸುಮಾರಿಗೆ ನಾನು ಸತ್ಯಂಪೇಠ ಗೋಪಾಲ ತಂದೆ ಸಣ್ಣ ಯಂಕಣ್ಣ ಶುಕ್ಲಾ ಇಬ್ಬರು ಹಸನಾಪೂರ ಕ್ಯಾಂಪದ ಪೆಟ್ರೊಲ ಪಂಪ ಹತ್ತಿರ ಮಾತನಾಡುತ್ತಾ ನಿಂತಿರುವಾಗ ಅದೇ ಸಮಯಕ್ಕೆ ಲಕ್ಷ್ಮಿಂಪೂರ ಕಡೆಯಿಂದ ಸತ್ಯಂಪೇಠ ಕಡೆಗೆ ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೊಗುತ್ತಿದ್ದ ನಿನ್ನ ಗಂಡನಾದ ಸಾಯಬಣ್ಣ ಈತನಿಗೆ ಒಂದು ಟ್ಯಾಕ್ಟರ ಇಂಜಿನ ನೇದ್ದರ ಚಾಲಕನು ಸುರಪೂರ ಕಡೆಯಿಂದ ತನ್ನ ಟ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ನಿಮ್ಮ ಗಂಡನಾದ ಸಾಯಬಣ್ಣ ಈತನಿಗೆ ಮುಂದಿನಿಂದ ಡಿಕ್ಕಿ ಪಡಿಸಿದಾಗ ಸಾಯಬಣ್ಣ ಈತನು ಕೆಳಗೆ ಬಿದ್ದಿದ್ದು ಟ್ಯಾಕ್ಟರದ ದೊಡ್ಡಗಾಲಿ ಅವನ ಹೊಟ್ಟೆಯ ಮೆಲೆ ಹಾಯ್ದಾಗ ಸಾಯಬಣ್ಣ ಈತನ ಹೊಟ್ಟೆಯ ಎಡಬಾಗದ ಪಕ್ಕೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ನಿಲ್ಲಿಸಿ ಕೆಳಗೆ ಇಳಿದು ನಮ್ಮನ್ನು ನೋಡಿ ಮತ್ತೆ ಟ್ಯಾಕ್ಟರ ಚಾಲು ಮಾಡಿಕೊಂಡು ಹೊರಟು ಹೋಗಿದ್ದು ಟ್ಯಾಕ್ಟರ ಇಂಜಿನ ನಂಬರ ಕೆಎ-33, ಟಿಎ 8169 ನೇದ್ದು ಇರುತ್ತದೆ. ಬೇಗ ಬನ್ನಿರಿ ಅಂತಾ ಘಟನೆಯನ್ನು ಕಣ್ಣಾರೆ ಕಂಡು ನನಗೆ ವಿಷಯ ತಿಳಿಸಿದಾಗ ನಾನು ಗಾಭರಿಗೊಂಡು ನನ್ನ ತಾಯಿಯಾದ ಮರೆಮ್ಮ ತಮ್ಮನಾದ ಗೋಪಾಲ ಇವರಿಗೂ ವಿಷಯ ತಿಳಿಸಿ ಮೂವರು ಕೂಡಿ ಒಂದು ಅಟೋದಲ್ಲಿ ಘಟನಾ ಸ್ಥಳವಾದ ಹಸನಾಪೂರ ಕ್ಯಾಂಪ ಪೆಟ್ರೊಲ ಪಂಪ ಹತ್ತಿರ ಹೋಗಿ ನೋಡಲು ಗಂಡನಾದ ಸಾಯಬಣ್ಣ ಈತನು ರೋಡಿನ ಪಕ್ಕದಲ್ಲಿ ಬಿದ್ದಿದ್ದು ಹೊಟ್ಟೆಯ ಎಡಬಾಗದ ಪಕ್ಕೇಯ ಹತ್ತಿರ ಭಾರಿ ರಕ್ತಗಾಯವಾಗಿ ಹೊರಳಾಡುತ್ತಿದ್ದನ್ನು ನೋಡಿ ಕೂಡಲೆ ಅವನನ್ನು ಅಟೋದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರದಲ್ಲಿ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಬಸವೇಶ್ವ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಅಲ್ಲಿಂದ ಅಂದೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ.  ನನ್ನ ಗಂಡ ಕೋಮಾ ಸ್ಥಿತಿಯಲ್ಲಿ ಇದ್ದು ನಿನ್ನೆ ದಿನಾಂಕ:10-03-2018 ರಂದು ಅವನಿಗೆ ಆಪರೇಶನ ಇರುವದರಿಂದ ನಾನು ಕಲಬುರಗಿಯಲ್ಲಿಯೆ ಇದ್ದು ನನ್ನ ಗಂಡನಿಗೆ ನಿನ್ನೆ ಆಪರೇಶನ ಮಾಡಿದ ನಂತರ ಇಂದು ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಅಪಘಾತ ಮಾಡಿದ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ ಅವನನ್ನು ನೋಡಿದರೆ ಗುರುತಿಸುವದಾಗಿ ಮರೆಪ್ಪ, ಗೋಪಾಲ ಇವರು ತಿಳಿಸಿದ್ದು ಇರುತ್ತದೆ. ಟ್ಯಾಕ್ಟರ ನಂಬರ ಕೆಎ-33 ಟಿಎ 8169 ನೇದ್ದರ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೆಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

 
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 16/2018 ಕಲಂ: 78() ಕೆ.ಪಿ ಯಾಕ್ಟ್;- ದಿನಾಂಕ:10/03/2018 ರಂದು ಆರೋಪಿತರು ನಾರಾಯಣಪೂರ ಗ್ರಾಮದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಠಾಣೆಯಿಂದ ಹೋಗಿ ದಾಳಿ ಮಾಡಿ ಈ ಬಗ್ಗೆ 04:30 ಪಿ.ಎಮ್. ದಿಂದ 05:30 ಪಿ.ಎಮ್.ದವರೆಗೆ ಪಂಚನಾಮೆ ಕೈಗೊಂಡು ಒಟ್ಟು 1500/-ರೂ ನಗದು ಹಣ, ಒಂದು ಬಾಲ್ ಪೆನ್ ಹಾಗೂ ಮಟಕಾ ಸಂಖ್ಯೆಗಳನ್ನು ಬರೆದ ಎರಡು ಚೀಟಿಯನ್ನು ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ನೀಡಿದ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಆರೋಪಿತರ ವಿರುದ್ದ ಕ್ರಮ ಜರುಗಿಸಿದ್ದು ಅದೆ.  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 84/2018 ಕಲಂ 279 337 338 ಐ.ಪಿ.ಸಿ;- ದಿನಾಂಕ 11/03/2018 ರಂದು ಮದ್ಯಾಹ್ನ 14-30 ಗಂಟೆಗೆ ಫಿರ್ಯಾದಿ ಶ್ರೀ ಸದ್ದಾಂ ಹುಸೇನ್ ತಂದೆ ಶಿಲಾರುದ್ದಿನ್ ಟಪ್ಪೆವಾಲೆ ವಯ 36 ವರ್ಷ ಜಾತಿ ಮುಸ್ಲಿಂ ಉಃ ಗೌಂಡಿ ಕೆಲಸ ಸಾಃ ಜೈನಾ ಮಸೀದ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 10/03/2018 ರಂದು ರಾತ್ರಿ ತುಮಕೂರಿನ ರಾಜಾಭಕ್ಷ ದಗರ್ಾದಲ್ಲಿ ತಮ್ಮ ಸಂಬಂಧಿಕರು ದೇವರ ಮಾಡಿದ್ದರಿಂದ ಸದರಿ ಕಾರ್ಯಕ್ರಮಕ್ಕೆ ಫಿರ್ಯಾದಿ ಮತ್ತು ಫಿರ್ಯಾದಿ ಮಗ ಅಮರ್ಾನ ವಯ 9 ವರ್ಷ ಇಬ್ಬರೂ ಕೂಡಿ ಟಿವಿಎಸ್ ಘಿಐ ಮೋಟರ ಸೈಕಲ್ ನಂ  ಕೆಎ-37-ಕೆ-3475 ನೇದ್ದರ ಮೇಲೆ ಶಹಾಪೂರನಿಂದ ತುಮಕೂರಿಗೆ ಹೋಗಿ ದೇವರ ಕಾರ್ಯಕ್ರಮದಲ್ಲಿ ಬಾಗಿಯಾಗಿ,   ಇಂದು ದಿನಾಂಕ 11/03/2018 ರಂದು ತುಮಕೂರಿನಿಂದ ಫಿರ್ಯಾದಿ ಮತ್ತು ಫಿರ್ಯಾದಿ ಮಗ ತಮ್ಮ ಟಿವಿಎಸ್ ಮೋಟರ ಸೈಕಲ್ ಮೇಲೆ ಶಹಾಪೂರಕ್ಕೆ ಬರುತಿದ್ದಾಗ ಮದ್ಯಾಹ್ನ 12-00 ಗಂಟೆಗೆ ಹತ್ತಿಗೂಡುರ ಗ್ರಾಮದ ಸರಕಾರಿ ಆಸ್ಪತ್ರೆಯ ಎದರುಗಡೆ ರೋಡಿನ ಮೇಲೆ ಹೋಗುತಿದ್ದಾಗ ಎದರುಗಡೆಯಿಂದ ಅಂದರೆ ವಿಭೂತಿಹಳ್ಳಿ ಕಡೆಯಿಂದ ಆರೋಪಿತನು ಟವೇರಾ ವಾಹನ ನಂ ಕೆಎ-35-ಎಮ್-2673 ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ರೋಡಿನ ಮೇಲೆ ಅಡ್ಡಾ-ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟರ ಸೈಕಲಗೆ ಡಿಕ್ಕಿ ಮಾಡಿದರಿಂದ ಫಿರ್ಯಾದಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ ಮತ್ತು ಫಿರ್ಯಾದಿಯ ಮಗನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸದರಿ ಅಪಘಾತಕ್ಕೆ ಟವೇರಾ ಚಾಲಕನ ನಿಷ್ಕಾಳಜೀತನ ಮತ್ತು ಅತಿ ವೇಗದಿಂದ ಈ ಘಟನೆ ಜರುಗಿದ್ದು ಸದರಿ ಚಾಲಕನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 84/2018 ಕಲಂ 279 337 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 47/2018 ಕಲಂ. 32 34 ಕನರ್ಾಟಕ ಅಭಕಾರಿ ಕಾಯ್ದೆ;- ದಿನಾಂಕ:11/03/2018 ರಂದು 12.00 ಪಿ.ಎಂ ಗಂಟೆಯ ಸುಮಾರಿಗೆ ಆರೋಪಿ ನಂ.2 ಈತನು  ಸರಕಾರದಿಂದಾ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿ ರೋಡಿನ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.1 ರವರು ಹೇಳಿದಂತೆ ಮಾರಾಟ ಮಾಡುತ್ತಿದ್ದಾಗ ಪಿಯರ್ಾದಿ ಹಾಗೂ ಸಿಬ್ಬಂದಿಯಾದ ಹೆಚ್.ಸಿ-130 ಪಿಸಿ-233, 152 ಎಪಿಸಿ-144 ರವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಆರೋಫಿತನಿಗೆ ಹಿಡಿದು ಆರೋಪಿತನಿಂದಾ 90 ಎಂಎಲ್ ದ 96  ಓರಿಜನಲ್ ಚಾಯ್ಸ್ ಡಬ್ಬಿಗಳು ಅಕಿ:2660-00 ರೂ ರೂ ಕಿಮ್ಮತಿನ ಮದ್ಯವನ್ನು  ಜಪ್ತಿ ಮಾಡಿಕೊಂಡು ಸ್ಥಳದಲ್ಲಿ ಪಂಚನಾಮೆ ಬರೆದುಕೊಂಡು ಬಂದಿದ್ದು ಅಂತಾ ಇತ್ಯಾದಿ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.


ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ 27/2018  ಕಲಂ 273,284 ಕಅ ಸಸಂ 32 34 K E Act- ದಿನಾಂಕ: 11.03.2018 ರಂದು 05.30 ಪಿ. ಎಂಕ್ಕೆ  ಪಿಎಸ್ಐ  ಸಾಹೇಬರು ತಾವು ಪುರೈಸಿದ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಹಾಜರಾಗಿ ಜ್ಞಾಪನಾ ಪತ್ರದ ಜಪ್ತಿ ಪಂಚನಾಮೆಯ ಸಾರಾಂಶವೆನೆಂದರೆ ಇಂದು ದಿನಾಂಕ: 11.03.2018 ರಂದು 3.00 ಪಿಎಮ್ ಸುಮಾರಿಗೆ  ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಜುಮಾಲಪೂರ ಸೀಮಾಂತರ ತುಕರಾಮ ತಂದೆ ಬಂಗೆಪ್ಪ ಚವ್ಹಾಣ ರವರ ಹೊಲದ ಹತ್ತಿರ ಜಾಲಿಗಿಡದ ಮರೆಯಲ್ಲಿ ಸಕರ್ಾರಿ ಜಾಗೆಯಲ್ಲಿ ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ ಲಿಂಗಪ್ಪ ಪಿಸಿ-216, ಶಂರಕರಗೌಡ ಪಿಸಿ-299, ವಿಶ್ವನಾಥ ಪಿಸಿ-319 ರವರಿಗೆ ವಿಷಯ ತಿಳಿಸಿ ಶಂಕರಗೌಡ ರವರಿಗೆ ಪಂಚರನ್ನು ಕರೆದುಕೊಂಡು ಬರಲು ಕಳುಹಿಸಿದ್ದು ಶಂಕರಗೌಡ ಪಿಸಿ-299 ರವರು 3.15 ಪಿಎಮ್ಕ್ಕೆ ಇಬ್ಬರು ಪಂಚರಾದ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ ಮತ್ತು ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ:ಕೊಡೇಕಲ್ಲ ರವರನ್ನು ಹಾಜರಪಡಿಸಿದ್ದು ಸದರಿ ಪಂಚರಿಗೆ ವಿಷಯ ತಿಳಿಸಿ ಅವರು ಪಂಚರಾಗಲು ಒಪ್ಪಿಕೊಂಡ ಮೇರೆಗೆ  ಮಾನ್ಯ ಸಿಪಿಐ ಹುಣಸಗಿ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜನರಾದ ಶಂರಕರಗೌಡ ಪಿಸಿ-299, ವಿಶ್ವನಾಥ ಪಿಸಿ-319 ಲಿಂಗಪ್ಪ ಪಿಸಿ-216 ಇವರನ್ನು ಸರಕಾರಿ ಜೀಪ ನಂ. ಕೆಎ-33 ಜಿ 475 ನೇದ್ದರಲ್ಲಿ ಎಲ್ಲರೂ ಕೂಡಿ ಠಾಣೆಯಿಂದ 3.20 ಪಿಎಮ್ಕ್ಕೆ ಬಿಟ್ಟು 15.50 ಗಂಟೆಗೆ ಜುಮಾಲಪುರ ಸೀಮಾಂತರ ತುಕರಾಮ ಬಂಗೆಪ್ಪ ಚವ್ಹಾಣ ರವರ ಹೊಲದ ಹತ್ತಿರ ಮರೆಯಲ್ಲಿ ನಮ್ಮ ಜೀಪನ್ನು ನಿಲ್ಲಿಸಿ ನಾವು ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನೋಡಲಾಗಿ ಒಬ್ಬ ನಿಂತು ಗಿರಾಕಿಗಳಿಗೆ ಗ್ಲಾಸಿನಲ್ಲಿ ಅವರಿಂದ ಹಣ ಪಡೆದು ಮಾರಾಟ ಮಾಡುತ್ತಿರುವನ್ನು ನೋಡಿ ಖಚಿತಪಡಿಸಿಕೊಂಡು 16.00 ಗಂಟೆಗೆ ನಾನು ಸಿಬ್ಬಂದಿಯವರು ಪಂಚರ ಸಮಕ್ಷಮ ಸದರಿಯವನ್ನು ಹಿಡಿಯಲು ಹೋದಾಗ ಸಮವಸ್ತ್ರದಲ್ಲಿದ್ದನ್ನು  ನಮ್ಮನ್ನು ನೋಡಿ ಓಡಿಹೋಗಿದ್ದು ಅಲ್ಲಿಯೇ ಇದ್ದ ಹಣಮಪ್ಪ ತಂದೆ ಬಸಪ್ಪ ಬಾಚ್ಯಾಳ ನನ್ನು ವಿಚಾರಿಸಲಾಗಿ ಭಟ್ಟಿ ಸರಾಯಿ ಮಾರಾಟ ಮಾಡುವವನ ಹೆಸರು ತುಕರಾಮ ತಂದೆ ಬಂಗೆಪ್ಪ ಚವ್ಹಾನ ಸಾ: ಜುಮಾಲಪುರ ದೊಡ್ಡ ತಾಂಡ ಅಂತಾ ತಿಳಿಸಿದ್ದು ನಾನು ಪಂಚರ ಸಮಕ್ಷಮ ಸ್ಥಳದಲ್ಲಿ ಬಿಟ್ಟು ಹೋದ ಪ್ಲಾಸ್ಟೀಕ್ ಡಬ್ಬಿ ಇದ್ದು ಪರಿಶೀಲಿಸಿ ನೋಡಲಾಗಿ 5 ಲೀಟರ ಪ್ಲಾಸ್ಟೀಕ್ ಡಬ್ಬಿ ಇದ್ದು. ಅದರಲ್ಲಿ ಸುಮಾರು 4.5 ಲೀಟರಿನಷ್ಟು ಭಟ್ಟಿ ಸರಾಯಿ ಇದ್ದು. ಮತ್ತು ಒಂದು ಸ್ಟೀಲಿನ ಗ್ಲಾಸ್ ಇದ್ದವು ಒಂದು 180 ಎಎಲ್ ನ ಗಾಜಿನ ಬಾಟಲಿ ತೆಗೆದುಕೊಂಡು ಅದನ್ನು ನೀರಿನಲ್ಲಿ ಚನ್ನಾಗಿ ತೊಳೆದು ಸದರಿ ಪ್ಲಾಸ್ಟೀಕ್ ಡಬ್ಬದಲ್ಲಿನ ಭಟ್ಟಿ ಸರಾಯಿಯನ್ನು ಈ ಬಾಟಲಿಯಲ್ಲಿ ತುಂಬಿ ಇದಕ್ಕೆ ಬಿಳಿಯ ಅರಿವೆಯ ಚೀಲದಲ್ಲಿ ಹಾಕಿ ಹೊಲೆದು ಅದರ ಮೇಲೆ ಎ.ಡಿ.ಬಿ ಅಂತಾ ಇಂಗ್ಲೀಷ್ ಅಕ್ಷರದಲ್ಲಿ ಶೀಲ್ ಮಾಡಿದ್ದು, ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಎಲ್ಲಾ ಮುದ್ದೆ ಮಾಲನ್ನು ನನ್ನ ತಾಬಾಕ್ಕೆ ತೆಗೆದುಕೊಂಡಿದ್ದು ಸ್ಥಳದ ಪಂಚನಾಮೆಯನ್ನು ಪಂಚರ ಸಮಕ್ಷಮ 16.00 ಪಿಎಮ್ ದಿಂದ 17.00 ಪಿಎಮ್ ದವರೆಗೆ ಪುರೈಸಿಕೊಂಡು ಮುದ್ದೆಮಾಲುನೊಂದಿಗೆ ಠಾಣೆಗೆ 17.30 ಪಿಎಮಕ್ಕೆ ಬಂದು ಜಪ್ತಿ ಪಂಚನಾಮೆಯಲ್ಲಿ ನಮೂದಿಸಿದ ಆರೋಪಿತ ಮೇಲೆ ಕ್ರಮ ಜರುಗಿಸುವ ಕುರಿತು ಜ್ಞಾಪನ ಪತ್ರ ಮೂಲಕ.ಸೂಚಿಸಿದ್ದ. ಅಂತಾ ವಗೈರೆ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 27/2018 ಕಲಂ 273,284 ಐಪಿಸಿ ಸಂಗಡ 32 34 ಕೆ ಇ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: