Police Bhavan Kalaburagi

Police Bhavan Kalaburagi

Tuesday, April 10, 2018

Yadgir District Reported Crimes Updated on 10-04-2018


                                          Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 81/2018 ಕಲಂ:  87 ಕೆ.ಪಿ ಎಕ್ಟ್ 1963;- ದಿನಾಂಕ;08.04.2018 ರಂದು 6-30 ಪಿಎಮ್ಮ ಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ರವರು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಪತ್ರವನ್ನು ಒಪ್ಪಿಸಿದ್ದರ ಸಾರಾಂಶವೆನೆಂದರೆ,ಇಂದು ದಿನಾಂಕ: 08.04.2018  ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಯಾದಗಿರಿ ನಗರದ ಗಂಜ ಏರಿಯಾದಲ್ಲಿನ ಆತ್ಮಲಿಂಗೇಶ್ವರ ದೇವಸ್ಥಾನದ ಮುಂದುಗಡೆ ರಸ್ತೆಯ ಆಚೆಯಲ್ಲಿನ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವರು ಇಸ್ಪೀಟ ಜೂಜಾಟದಲ್ಲಿ ತೊಡಗಿದ ಬಗ್ಗೆ ಮಾಹಿತಿ ಬಂದಿದ್ದು ಖಚಿತ ಭಾತ್ಮೀ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಕೂಡಿಕೊಂಡು ಹೋಗಿ 5-00 ಪಿಎಂಕ್ಕೆ ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಸದರಿಯವರು ತಮ್ಮ ಹೆಸರುಗಳು ಒಬ್ಬಬ್ಬರಾಗಿ 1) ಮಹೇಶ ತಂದೆ ಹಣಮಂತ ಬಂದಳ್ಳಿ ವ;30 ಜಾ; ಮೇಧ ಉ; ಕಟ್ಟಿಗೆ ಅಡ್ಡೆ ಕೆಲಸ ಸಾ; ಗಂಜ ಏರಿಯಾ ಯಾದಗಿರಿ 2) ಶ್ರೀನಿವಾಸ ತಂದೆ ಹಣಮಂತ ಮೇಧ ವ; 35 ಜಾ; ಮೇಧ ಉ; ಕೂಲಿ ಸಾ; ಗಂಜ ಏರಿಯಾ ಯಾದಗಿರಿ 3) ಮಲ್ಲಿಕಾಜರ್ುನ ತಂದೆ ಅಯ್ಯಣ್ಣ ಅಂಬಿಗೇರ ವ;50 ಉ; ಚಾಲಕ ಸಾ; ಮೈಲಾಪೂರ ಅಗಸಿ ಯಾದಗಿರಿ 4) ನಾರಾಯಣ ತಂದೆ ರಾಮಲಿಂಗಪ್ಪ ಬಡಿಗೇರ ವ; 28 ಜಾ; ಕಬ್ಬಲಿಗ ಉ; ಇಲೆಕ್ಟ್ರಿಕಲ್ ಕೆಲಸ ಸಾ; ಚಟ್ಟಿತೋಟ ಮೈಲಾಪೂರ ಅಗಸಿ ಯಾದಗಿರಿ 5) ರೆಡ್ಡೆಪ್ಪ ತಂದೆ ಗಾಲೆಪ್ಪ ಕ್ಯಾಶಪ್ಪನಳ್ಳಿ ವ;36 ಜಾ; ಕಬ್ಬಲಿಗ ಉ; ಕೂಲಿ ಸಾ; ಮುಂಡರಗಿ ತಾ; ಜಿ; ಯಾದಗಿರಿ 6) ಸಾಬ್ಬಣ್ಣ ತಂದೆ ಸಾಬ್ಬಣ್ಣ ಮುಂಡರಗಿ ವ;40 ಜಾ ಮೇಧ ಉ: ಕೂಲಿ ಸಾ; ಮುಂಡರಗಿ ತಾ;ಜಿ; ಯಾದಗಿರಿ 7) ವೆಂಕಟೇಶ ತಂದೆ ನರಸಪ್ಪ ಮೇಧರ್ ವ;37 ಉ; ಮೆಕ್ಯಾನಿಕ್ ಸಾ; ಮೇಧರ ಓಣಿ ಸುರುಪೂರ ಹಾ.ವ. ಹೊಸ ಬಸ್ಸ ನಿಲ್ದಾಣ ಹತ್ತಿರ ಯಾದಗಿರಿ ಅಂತಾ ತಿಳಿಸಿದ್ದು ಅವರ ಅಂಗಶೋದನೆ ಮಾಡಲಾಗಿ ಸದರಿಯವರ ಹತ್ತಿರ 2480-00 ನಗದು ಹಣ, ಮತ್ತು ಮೊಬೈಲಗಳು, ಹಾಗೂ 52 ಇಸ್ಪೀಟ ಎಲೆಗೆಳು ಸಿಕ್ಕಿದ್ದು, ನಂತರ ಸದರಿ ಮುದ್ದೆ ಮಾಲನ್ನು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡಿದ್ದು ಜಪ್ತಿ ಪಂಚಾನಾಮೆಯನ್ನು 5-00 ಪಿ.ಎಮ್ ದಿಂದ 6-00 ಪಿ.ಎಮ್ ದವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ 6-30 ಪಿಎಂಕ್ಕೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದು ಇಂದು ದಿನಾಂಕ.09/04/2018 ರಂದು 12-15 ಪಿಎಂಕ್ಕೆ  ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪಿಸಿ-168 ರವರು ತಂದು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.81/2018 ಕಲಂ.87 ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 81/2018 ಕಲಂ: 32,34 ಕೆ.ಇ ಎಕ್ಟ್ 1965;- ದಿನಾಂಕ: 09/04/2018 ರಂದು 10-15 ಎಎಮ್ ಕ್ಕೆ ಮಾನ್ಯ ಸಿ.ಪಿ.ಐ ಯಾದಗಿರಿ ವೃತ್ತ ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 09/04/2018 ರಂದು ನಾನು  ಪ್ರಕಾಶ ಹೆಚ್.ಸಿ 18, ಸೈಯದ ಅಲಿ ಹೆಚ್.ಸಿ 191 ಮತ್ತು ಅಂಬ್ರೇಶ ಎಪಿಸಿ 114 ವೃತ್ತ ಕಛೇರಿ ಜೀಪ ಚಾಲಕರವರೊಂದಿಗೆ ವಡಗೇರಾ ಕ್ರಾಸ ಹತ್ತಿರ ಇದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ನಾಯ್ಕಲ್ ಗ್ರಾಮದ ಬಟಗೇರಿ ಶರಣಗೌಡನ ಹಳೆ ಗಿರಣಿ ಹತ್ತಿರ ಖಾಲಿ ಸ್ಥಳದಲ್ಲಿ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0161 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಹಿಡಿಯಬೇಕು ಎನ್ನವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಆಗ ಅಲ್ಲಿಯೇ ಇದ್ದ ಪೊಲೀಸ್ ಬಾತ್ಮಿದಾರರಿಗೆ ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲಾಗಿ ಮರೆಪ್ಪ ತಂದೆ ಮರೆಪ್ಪ ಬೈರಳ್ಳಿ, ವ:25, ಜಾ:ಹೊಲೆಯ, ಉ:ಕೂಲಿ ಸಾ:ನಾಯ್ಕಲ್ ಎಂದು ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ರಟ್ಟಿನ ಕಾಟನ ಬಾಕ್ಸಗಳಲ್ಲಿ ಕಿಂಗಫೀಶಯರ ಸ್ಟ್ರಾಂಗ 650 ಎಮ್.ಎಲ್ ದ ಬಿಯರ ಬಾಟ್ಲಿಗಳು ಇದ್ದು, ಎಣಿಸಿ ನೋಡಲಾಗಿ 8 ಬಾಟಲಿಗಳು ಇದ್ದವು. 650 ಎಮ್.ಎಲ್*8=5200 ಎಮ್.ಎಲ್ ಹೀಗೆ ಒಟ್ಟು 5 ಲೀಟರ 200 ಎಮ್.ಎಲ್ ಮದ್ಯವಾಗುತ್ತಿದ್ದು, ಎಮ್.ಆರ್.ಪಿ ಬೆಲೆ 125*8=1000=00 ರೂ.ಗಳು ಆಗುತ್ತಿದ್ದು, ಎಲ್ಲಾ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು 8 ಎಎಮ್ ದಿಂದ 9 ಎಎಮ್ ದವರೆಗೆ ಪಂಚನಾಮೆ ಜರುಗಿಸಿ, 10-15 ಎಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 81/2018 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 206/2018 ಕಲಂ 498[ಎ] 494   323 354   504 506  ಸಂ 149 ಐ.ಪಿ.ಸಿ  ;- ದಿನಾಂಕ 09/04/2018 ರಂದು ಮದ್ಯಾಹ್ನ 14-15 ಗಂಟೆಗೆ ಫಿರ್ಯಾದಿ ಶ್ರೀಮತಿ ಶೀಲಾ ಗಂಡ ಸಾಯಬಣ್ಣ ನಾಯ್ಕೋಡಿ ವಯ 23 ವರ್ಷ ಜಾತಿ ಕಬ್ಬಲೀಗ ಉಃ ಮನೆ ಕೆಲಸ ಸಾಃ ವಿಭೂತಿಹಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ತನ್ನ ತಂದೆ, ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ತಂದೆ ತಾಯಿಗೆ ಇಬ್ಬರೂ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿರುತ್ತಾನೆ. ಮನೆಗೆ ಹಿರಿಯ ಮಗಳು ತಾನೆ ಇರುತ್ತೆನೆ ತನಗೆ 2013 ನೇ ಸಾಲಿನಲ್ಲಿ ದಿನಾಂಕ 20/05/2013 ರಂದು ವಿಭೂತಿಹಳ್ಳಿ ಗ್ರಾಮದ ಆರೋಪಿ ನಂ 1 ಸಾಯಬಣ್ಣ ತಂದೆ ನಾಗಪ್ಪ ನಾಯ್ಕೋಡಿ ಈತನ ಜೊತೆ ಮದುವೆಯಾಗಿದ್ದು, ಮದುವೆಯಾದ ನಂತರ ಎರಡು ವರ್ಷ ಚನ್ನಾಗಿ ನೋಡಿಕೊಂಡಿದ್ದು, ಒಂದು ಹೆಣ್ಣು ಮಗುವಾಗಿದ್ದು, ಸಾನ್ವಿ ಅಂತ  ನಾಮಕರಣ ಮಾಡಿದ್ದು ಸದ್ಯ 18 ತಿಂಗಳ ಮಗಳಿರುತ್ತಾಳೆ. ಹೆಣ್ಣು ಮಗು ಹುಟ್ಟಿದ ಸಂಬಂಧ ವಿನಾಕಾರಣ ತನ್ನ ಗಂಡ ಮತ್ತು ಗಂಡನ ಕುಟುಂಬದವರು ಕಿರಿಕಿರಿ ಕೊಡಲಾರಂಬಿಸಿದರು, ನಂತರ 2017 ಸಾಲಿನ ಡಿಸೆಂಬರ್ ತಿಂಗಳಲ್ಲಿ ಎರಡನೇ ಹೆರಿಗೆ ಹೋಗಿದ್ದು ಎರಡನೇ ಹೆರಿಗೆ ಜನೇವರಿ 2018 ನೇ ಸಾಲಿನಲ್ಲಿ ಆಗಿದ್ದು ಹೆಣ್ಣು ಮಗು ಹುಟ್ಟಿದ್ದು, ಮಗು ಸರಿಯಾಗಿ ಬೆಳವಣಿಗೆಯಾದರಿಂದ ಎರಡು ದಿನಗಳಲ್ಲಿಯೇ ಮೃತ ಪಟ್ಟಿರುತ್ತದೆ. ತಾನು ತವರು ಮನೆಯಲ್ಲಿದ್ದಾಗ ತನ್ನ ಗಂಡ ದಿನಾಂಕ 04/04/2018 ರಂದು ಎರಡನೇ ಮದುವೆ ಮಾಡಿಕೊಂಡಿದ್ದಾನೆ ಅಂತ ವಿಷಯ ಗೊತ್ತಾಗಿ ಫಿರ್ಯಾದಿ ಮತ್ತು ಫಿರ್ಯಾದಿಯ ತಂದೆ, ತಾಯಿ ಮತ್ತು ಗ್ರಾಮದವರು  ದಿನಾಂಕ 07/04/2018 ರಂದು ಮದ್ಯಾಹ್ನ 12-30 ಗಂಟೆಗೆ ವಿಭೂತಿಹಳ್ಳಿ ಗ್ರಾಮಕ್ಕೆ ಹೋದಾಗ ಆರೋಪಿತರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಫಿರ್ಯಾದಿಯ ಮೈದುನ ಬ್ಲೌಜ್ ಹಿಡಿದು ಎಳೆದಾಡಿ ಹರಿದಿರುತ್ತಾನೆ. ಸದರಿಯವರ ಮೇಲೆ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 206/2018 ಕಲಂ 498[ಎ] 494, 323, 354, 504, 506, ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 211/2018 ಕಲಂ 15 [ಎ] 32 [3] ಕೆ.ಇ ಆಕ್ಟ;- ದಿನಾಂಕ 09/04/2018  ರಂದು ರಾತ್ರಿ 20-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ  ನಾಗರಾಜ ಜಿ ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಆರೋಪಿ ಶಿವಕುಮಾರ ತಂದೆ ಬಸವರಾಜ ರಸ್ತಾಪೂರ ಸಾಃ ಮಡ್ನಾಳ ಇವನು ಮಡ್ನಾಳ ಗ್ರಾಮದಲ್ಲಿ ತನ್ನ ಕಿರಾಣಿ ಅಂಗಡಿಯ ಹಿಂದುಗಡೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ  ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾಧಿಯವರು ಪಂಚರು ಮತ್ತು ಸಿಬ್ಬಂಧಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 1] 90 ಎಮ್.ಎಲ್.ನ  40 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ಗಳು ಇದ್ದು, ಒಂದು 90 ಎಮ್.ಎಲ್.ನ   ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ನ ಕಿಮ್ಮತ್ತ 28 ರೂಪಾಯಿ 13 ಪೈಸೆ ಇದ್ದು, 40 ಪಾಕೇಟಗಳ ಕಿಮ್ಮತ್ತ 1125 ರೂಪಾಯಿ ಆಗುತ್ತದೆ. 2] 90 ಎಮ್.ಎಲ್.ನ 3 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಖಾಲಿ ಪಾಕೇಟಗಳು ಸಾರ್ವಜನಿಕರು ಉಪಯೋಗಿಸಿರುತ್ತಾರೆ. ಅಂ.ಕಿ 00-00 3] 5 ಪ್ಲಾಸ್ಟೀಕ್ ಗ್ಲಾಸ್ಗಳು ಇದ್ದು, ಸದರಿ ಗ್ಲಾಸ್ ಮದ್ಯ  ಕುಡಿಯಲು ಉಪಯೋಗಿಸಿದ್ದು ಅಂ.ಕಿ 00,  ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 18-10 ಗಂಟೆಯಿಂದ 19-10 ಗಂಟೆಯ ವರೆಗೆ  ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಫಿರ್ಯಾಧಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 211/2018 ಕಲಂ 15[ಎ] 32[3] ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 99/2018 ಕಲಂ. 32 34 ಕನರ್ಾಟಕ ಅಭಕಾರಿ ಕಾಯ್ದೆ;- ದಿನಾಂಕ:09/04/2018 ರಂದು 07.20 ಗಂಟೆಯ ಸುಮಾರಿಗೆ ಆರೋಪಿತನು ಸರಕಾರದಿಂದಾ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿ ಹೆಬ್ಬಾಳ(ಬಿ) ಗ್ರಾಮದ ಆರೋಪಿತನ ಅಂಗಡಿಯ ಮುಂದೆ ರೋಡಿನ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದಾಗ ಪಿಯರ್ಾದಿ ಹಾಗೂ ಚಂದ್ರನಾಥ ಎ.ಎಸ್.ಐ, ಸಿಬ್ಬಂದಿಯಾದ ಹೆಚ್.ಸಿ-130, 67 ಪಿಸಿ-288 ರವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಲು ಸರಾಯಿ ಮಾರಾಟ ಮಾರವುನು ಪೊಲೀಸರನ್ನು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿದ್ದ 1) 180 ಎಂಎಲ್ ದ 16 ಓಲ್ಡ್ ಟವರನ ಕಂಪನಿಯ ವಿಸ್ಕಿ ಡಬ್ಬಿಗಳು ಅಕಿ:1096.00 ರೂ 2) 90 ಎಂಎಲ್ ದ 14 ಎಂಸಿ ರಮ್ ಡಬ್ಬಿಗಳು ಅಕಿ:575.00 ರೂ 3) 90 ಎಂಎಲ್ ದ 6 ಓರಿಜನಲ್ ಚಾಯ್ಸ್ ಡಬ್ಬಿಗಳು ಅಕಿ:168.00 ರೂ 4) 90 ಎಂಎಲ್ ದ 6 ಎಂಸಿ ರಮ್ ಪ್ಲಾಸ್ಟಿಕ್ ಬಾಟಲಿಗಳು ಅಕಿ:168.00 ರೂ ಹೀಗೆ ಒಟ್ಟು ಆರೋಪಿತನು ಮಾರಾಟ ಮಾಡುತ್ತಿದ್ದ  ಒಟ್ಟು ಅಕಿ:2085-00 ರೂ ಕಿಮ್ಮತಿನ ಮದ್ಯವನ್ನು  ಜಪ್ತಿ ಮಾಡಿಕೊಂಡು ಬಾತ್ಮಿದಾರರಿಂದಾ ಆರೋಪಿತನ ಹೆಸರು ತಿಳಿದುಕೊಂಡು ಸ್ಥಳದಲ್ಲಿ ಪಂಚನಾಮೆ ಬರೆದುಕೊಂಡು ಬಂದಿದ್ದು ಅಂತಾ ಇತ್ಯಾದಿ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 87/2018 ಕಲಂ 454, 457, 380 ಐಪಿಸಿ;- ದಿನಾಂಕ 10/04/2018 ರಂದು ಮಧ್ಯಾಹ್ನ 01-15 ಗಂಟೆಗೆ ಫಿಯರ್ಾಧಿ ಶ್ರೀಮತಿ ಸುಷ್ಮಾ ಗಂಡ ರಾಹೂಲ ಪವ್ಹಾರ ವಯಾ 34 ವರ್ಷ, ಜಾ|| ಮರಾಠ ಉ|| ವಕೀಲ ವೃತ್ತಿ ಸಾ|| ಅನಪೂರ ಲೇಔಟ್ ಯಾದಗಿರಿ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ದೂರು ನೀಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಗಂಡ ರಾಹೂಲ ತಂದೆ ಸುಭಾಷ ಪವ್ಹಾರ ಹಾಗೂ ಇಬ್ಬರು ಮಕ್ಕಳಾದ ರೋಹಿತ (16), ಮತ್ತು ವೈಷ್ಣವಿ ಹೀಗೆ ನಾಲ್ಕು ಜನರು ವಾಸವಾಗಿರುತ್ತೇವೆ. ನಮ್ಮ ಅತ್ತೆ-ಮಾವರವರು ಸೊಲ್ಲಾಪೂರದಲ್ಲಿ ವಾಸವಾಗಿರುತ್ತಾರೆ. ದಿನಾಂಕ 07/04/2018 ರಂದು ಮಧ್ಯಾಹ್ನ 04-00 ಗಂಟೆಗೆ ನಮ್ಮ ಅತ್ತೆ-ಮಾವಂದಿರರ ಯೋಗ ಕ್ಷೇಮ ವಿಚಾರಿಸಿಕೊಂಡು ಬರಲು ಹೋಗುವಾಗ ಯಾದಗಿರಿಯಲ್ಲಿ ಇರುವ ನಮ್ಮ ಮನೆಯ ಬೀಗ ಹಾಕಿಕೊಂಡು ಹೋದೆವು. ನಂತರ ನಿನ್ನೆ ದಿನಾಂಕ 09/04/2018 ರಂದು ರಾತ್ರಿ 11 ಪಿ.ಎಂ ಸುಮಾರಿಗೆ ನಾನು, ನನ್ನ ಗಂಡ-ಮಕ್ಕಳೊಂದಿಗೆ ಮರಳಿ ಯಾದಗಿರಿ ಯಲ್ಲಿಯ ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಕೀಲಿಯ ಕೊಂಡಿ ಮುರಿದಿದ್ದು, ಅಲ್ಪ-ಸ್ವಲ್ಪ ಮುಚ್ಚಿದಂತೆ ಕಂಡು ಬಂತು. ಗಾಭರಿಯಾಗಿ ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದದ್ದವು. ಹಾಗೂ ಬೆಡ್ ರೂಮದಲ್ಲಿ ನೋಡಲಾಗಿ ಅಲಮರಿಯ ಕೀಲಿ ಮುರಿದಿದ್ದು, ಅದರಲ್ಲಿಯ 1) ಒಂದು 02 ತೊಲೆಯ ಬಂಗಾರದ ಚೈನ್, ಅ.ಕಿ 50,000/ ರೂ||, 2) ಒಂದು ಜೊತೆಯ 09 ತೊಲೆಯ ಬೆಳ್ಳಿ ಕಾಲು ಚೈನ್, ಅ.ಕಿ 3,600/ ರೂ||, 3) ಒಂದು 05 ತೊಲೆಯ ಬೆಳ್ಳಿಯ ನಂದಾ ದೀಪ, ಅ.ಕಿ 2000/ ರೂ||,  ಹಾಗೂ 19,000/ ರೂಪಾಯಿ ನಗದು ಹಣ ಕಾಣಲಿಲ್ಲ. ಸದರಿ ವಿಷಯವನ್ನು ನನ್ನ ಗಂಡ ತಮಗೆ ಪರಿಚಯದವರಾದ ಸಂತೋಷ ತಂದೆ ಶಂಕರ ಪವ್ಹಾರ, ಮತ್ತು ಸಾವಿತ್ರಿ ಎಂ.ಪಾಟೀಲ್ ಇವರಿಗೆ ತಿಳಿಸಿದಾಗ ಅವರು ಕೂಡ ನಮ್ಮ ಮನೆಗೆ ಬಂದು ನೋಡಿದರು. ಕಾರಣ ದಿನಾಂಕ 07/04/2018 ರಂದು ಮಧ್ಯಾಹ್ನ 04-00 ಗಂಟೆಯಿಂದ ದಿನಾಂಕ 09/04/2018 ರಂದು ರಾತ್ರಿ 11 ಗಂಟೆಯ ಅವಧಿಯಲ್ಲಿ ನಮ್ಮ ಮನೆಯ ಕೀಲಿಯ ಕೊಂಡಿ ಮುರಿದು ಮನೆ ಒಳಗೆ ಪ್ರವೇಶಮಾಡಿ ಬೆಡ್ ರೂಮಿನ ಅಲಮರಿಯಲ್ಲಿ ಇದ್ದ ಸುಮಾರು 74,600=00 ರೂಪಾಯಿ ಕಿಮ್ಮತ್ತಿನ ಬಂಗಾರ, ಬೆಳ್ಳಿ ಮತ್ತು ನಗದು ಹಣ ಯಾರೋ ಕಳ್ಳರು ಮನೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಮನೆಯಲ್ಲಿ ಕಳ್ಳತನವಾದವುಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಮನೆಯಲ್ಲಿ ವಿಚಾರಣೆ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 87/2018 ಕಲಂ 454, 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
 

No comments: