Police Bhavan Kalaburagi

Police Bhavan Kalaburagi

Friday, July 27, 2018

BIDAR DISTRICT DAILY CRIME UPDATE 27-07-2018

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-07-2018

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ. 136/18, ಕಲಂ 302 ಐಪಿಸಿ :-
ಫಿರ್ಯಾದಿ ಮನೋಹರ ತಂದೆ ರಾಮಣ್ಣಾ ಕಾಡವಾದೆ, ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಸಿಂಧನಕೇರಾ ರವರ ಮಗನಾದ ಪ್ರಕಾಶ ವಯ: 26 ವರ್ಷ ಇತನು ಜೂಜಾಟ ಡು ಸ್ವಭಾವ ಹೊಂದಿದ್ದು, ದಿನನಿತ್ಯದಂತೆ ಫಿರ್ಯಾದಿಯು ಮನೆಯಲ್ಲಿ ಮಲಗಿಕೊಂಡಾಗ 0130 ಗಂಟೆ ಸುಮಾರಿಗೆ ಗ್ರಾಮದ ರವಿ ಪಾಟೀಲ ಹಾಗು ಗುರುನಾಥ ಮರಕಲ ರವರು ಮನೆಗೆ ಬಂದು ಫಿರ್ಯಾದಿ ಮಗ ಪ್ರಕಾಶ ತನು ಬಸ ನಿಲ್ದಾಣ ಹತ್ತಿರ ಮೋಟರ ಸೈಕಲ ಮೇಲಿಂದ ಬಿದ್ದು ಗಾಯಗೊಂಡ ಬಗ್ಗೆ ತಿಳಿಸಿದ ಕೂಡಲೇ ಫಿರ್ಯಾದಿ ಹಾಗು ಮಕ್ಕಳಾದ ಆಕಾಶ, ಲಕ್ಷ್ಮಣ, ಣ್ಣ ಶಿವರಾಜ ಹಾಗು ಇತರರು ಹೋಗಿ ನೋಡಿ ವಿಚಾರಿಸಲು ತಿಳಿದು ಬಂದಿದ್ದೆನೆಂದರೆ  ದಿನಾಂಕ 26-07-2018 ರಂದು 1800 ಗಂಟೆ ಸುಮಾರಿಗೆ ಪ್ರಕಾಶ ಇತನು ಮನೆ ಗಿಲಾವಕ್ಕೆಂದು ತಂದಿಟ್ಟಿದ್ದ 1.5 ಲಕ್ಷ ರೂಪಾಯಿ ತೆಗೆದುಕೊಂಡು ಅವನ ಗೆಳೆಯರಾದ ರವಿ ಪಾಟೀಲ, ನಾಗೇಶ ತೇಲಂಗ ಹಾಗು ಗುರುನಾಥ ಮರಕಲ ಹಾಗು ಇತತರೊಂದಿಗೆ ಕೂಡಿಕೊಂಡು ಗ್ರಾಮದ ಶಿವಾರದಲ್ಲಿರುವ ಹುಮನಾಬಾದ ಪುರಸಭೆ ಕಸರಾಶಿ ಜಾಗೆಯಲ್ಲಿರುವ ಕೊಣೆಯೊಂದರಲ್ಲಿ ಜೂಜಾಟ ಆಡಿ, ಸರಾಯಿ ಕುಡಿದಿದ್ದು, ರಾತ್ರಿ 1200 ಗಂಟೆಯಿಂದ 0100 ಗಂಟೆ ಅವಧಿಯಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಅವರ ಮದ್ಯೆ ಜಗಳವಾಗಿ ಫಿರ್ಯಾದಿ ಮಗನಿಗೆ ಆರೋಪಿತರಾದ ರವಿ ಪಾಟೀಲ, ನಾಗೇಶ ತೇಲಂಗ ಹಾಗು ಗುರುನಾಥ ಮರಕಲ ಹಾಗು ಇತರರು ಪ್ರಕಾಶನಿಗೆ ರಾಡ ಹಾಗು ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದಿನಾಂಕ 27-07-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 182/2018, ಕಲಂ. 457, 380 ಐಪಿಸಿ :-
ದಿನಾಂಕ 25-07-2018 ರಂದು 2300 ಗಂಟೆಯಿಂದ ದಿನಾಂಕ 26-07-2018 ರಂದು 0400 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಗೊಪು ತಂದೆ ವೇಣು ಅಡೆ ವಯ: 50 ವರ್ಷ, ಜಾತಿ:  ಲಮಾಣಿ, ಸಾ: ಖಾನಾಪೂರ ರವರು ಮಲಗಿದ ಕೊಣೆಗೆ ಕೊಂಡಿ ಹಾಕಿ ಪಕ್ಕದ ಕೊಣೆಯ ಬಾಗಿಲ ಕೀಲಿ ಮುರಿದು ಅಲಮಾರದಲ್ಲಿಟ್ಟಿದ ನಗದು ಹಣ 79,000/- ಸಾವಿರ ರೂ., 5 ತೊಲಿ ಬಂಗಾರ ಅ.ಕಿ 1 ಲಕ್ಷ ರೂಪಾಯಿ ಮತ್ತು 20 ತೊಲಿ ಬೆಳ್ಳಿ ಅ.ಕಿ 6000/- ಸಾವಿರ ರೂಪಾಯಿ ಹೀಗೆ ಒಟ್ಟು ಅ.ಕಿ 1,85,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-07-2018ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: