Police Bhavan Kalaburagi

Police Bhavan Kalaburagi

Wednesday, September 18, 2019

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಸೈಯದ ಗುಲ್ಜರ ಶಾಹಾ ತಂದೆ ಸೈಯ್ಯದ ಉಸ್ಮಾನ್ ಶಾಹಾ ಸಾಃ ಹಜ್ ಕಮಿಟಿ ನಯಾಮೊಹಲ್ಲಾ ಕಲಬುರಗಿ,  ರವರ ಮಗಳಾದ ರುಬಿನಾ ಬೇಗಂ ಇವಳನ್ನು ಇದೇ ವರ್ಷ ಎಪ್ರಿಲ್ ತಿಂಗಳಲ್ಲಿ ಗುರು ಹಿರಿಯರು ಸೇರಿ ಜೇವರಗಿ ತಾಲೂಕಿನ ಮದರಿ ಗ್ರಾಮದ ಯಾಕೂಬ ಶಾಹಾ ತಂದೆ ಮದರ ಶಾಹಾ ಈತನನ್ನು ನೊಡಿ ನಿಶ್ಚಯ ಮಾಡಿದ್ದು ದಿ; 04.04.19 ರಂದು ಇದೇ ಕಲಬುರಗಿಯ ಮಿಲನ್ ಪಂಕ್ಷನ್ ಹಾಲ್ ಹಾಗರಗಾ ರೊಡದಲ್ಲಿ ಮಗಳ ಮದುವೆ ಮಾಡಿ ಕೊಟ್ಟಿರುತ್ತೇವೆ. ಮದುವೆಯಲ್ಲಿ ಅಳಿಯನಿಗೆ 3 ತೊಲಿ ಬಂಗಾರ, 51000 ರೂ ನಗದು, ಬಟ್ಟೆ ಬರೆ ಸಲುವಾಗಿ, ಹಾಗು 150000 ರೂ ಬೆಲೆ ಬಾಳುವ ಪಾತ್ರೆ ಸಾಮಾನುಗಳು, ಅಲಮಾರಿ, ಪಲ್ಲಂಗ್, ಇತ್ಯಾದಿ ಮನೆ ಸಾಮಾನುಗಳನ್ನು ಕೊಟ್ಟಿರುತ್ತೆವೆ. ಮದುವೆ ಆದ ನಂತರ ಮಗಳು ಗಂಡನ ಮನೆಗೆ ನಡಿಯಲು ಹೋಗಿರುತ್ತಾಳೆ. ಗಂಡನ ಮನೆಯಲ್ಲಿ ಗಂಡ ಯಾಕುಬ್ ಶಾಹಾ ತಂದೆ ಮದರ ಶಾಹಾ ಈತನ ತಾಯಿ ಖುರ್ಶಿದ್ ಬೀ, ನಾದನಿ ತಬಸುನ್ ಗಂಡ ಮೈಬೂಬ್ ಶಾಹಾ, ಸನ್ನಹಾ ಗಂಡ ರಪೀಕ್ ಶಾಹಾ ಹೀಗೆ ಇರುತ್ತಿದ್ದರು. ಗಂಡ ಮೆಕಾನಿಕ್ ಕೆಲಸ ಮಾಡಿಕೊಂಡು ಇರುತ್ತಿದ್ದನು. ಎರಡು ತಿಂಗಳ ಕಳೆದ ಮೇಲೆ ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ ಕೊಡಲು ಪ್ರಾರಂಬಿಸಿದ್ದು ಮಗಳಿಂದ ಗೊತ್ತಾಗಿತ್ತು. ಒಂದು ಸಲ ಆಸ್ಪತ್ರೆಗ ತೊರಿಸಿಕೊಳ್ಳಲು ನಮ್ಮ ಹತ್ತಿರ ಬಂದಿದ್ದು ಆ ವೇಳೆಯಲ್ಲಿ ಮಗಳು ಕಣ್ಣೀರಿಟ್ಟು ಗಂಡನ ಮನೆಯಲ್ಲಿ ಅವಳ ಗಂಡ, ಅತ್ತೆ, ಇಬ್ಬರು ನಾದನಿಯರು ಸೇರಿ ಗ್ಯಾರೇಜ ಸಲುವಾಗಿ ಮಶೀನ್ ಖರಿದಿಸಲು ತವರಿಂದ 2,00,000/- ರೂ ತೆಗೆದುಕೊಂಡು ಬಾ ಎಂದು ದಿನಾಲು ಮನೆಯಲ್ಲಿ ಅವಾಚ್ಯವಾಗಿ ಬೈದು ಹಲ್ಲೆ ಮಾಡುವದು ಮಾಡಿ ಮಾನಸಿಕ ಕಿರುಕುಳ ಹಿಂಸೆ ನಿಡುತ್ತಿದ್ದಾರೆ ಎಂದು ತಿಳಿಸಿದಳು. ಇಂದಿಲ್ಲ ನಾಳೆ ಸರಿ ಹೋಗಬಹುದು ತಾಳಿಕೊಂಡು ಸಂಸಾರ ಮಾಡು ಎಂದು ಮಗಳಿಗೆ ದೈರ್ಯ ತುಂಬಿದ್ದೇವು. ಆದರು ಕೂಡ ಮಗಳಿಗೆ ತವರಿಂದ ಹಣ ತರದೆ ಹೋದಲ್ಲಿ ಜೀವಂತ ಬಿಡುವದಿಲ್ಲ ಎಂದು ಹೆದರಿಕೆ ಹಾಕಿದ್ದು ಮಗಳು ನಮಗೆ ವಿಷಯ ತಿಳಿಸಬಹುದೆಂದು ಮೊಬೈಲ್ ಸಹ ಕೊಡುತ್ತಿರಲಿಲ್ಲ. ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ/ಹಿಂಸೆ ಕೊಡುತ್ತಿರುವ ವಿಚಾರ ಅಕ್ಕ ಪಕ್ಕದ ಜನರಿಗು ಕೂಡ ಗೊತ್ತಿರುತ್ತದೆ. ದಿ; 16.09.19 ರಂದು ಸಂಜೆ 5-00 ಘಂಟೆಯ ಹೊತ್ತಿಗೆ ಅಳಿಯ ಯಾಕೂಬ್ ಶಾಹಾ ಪೋನ್ ಮಾಡಿ ನಿನ್ನ ಮಗಳು ಉರುಲು ಹಾಕಿಕೊಂಡು ಸತ್ತಿರುತ್ತಾಳೆ ಎಂದು ತಿಳಿಸಿದ. ಸುದ್ದಿ ಕೇಳಿ ನಾನು ಮತ್ತು ಮಹ್ಮದ್ ಗೌಸ್ ಅಹ್ಮದ್ , ಸೈಯದ್ ಜಾಫರ್ ಶಾಹಾ, ಸೈಯದ್ ಅಮೀರ ಶಾಹಾ , ರಶೀದಾಬೇಗಂ, ಹಾಗು ಇತರರು ಕೂಡಿಕೊಂಡು ಮದರಿ ಗ್ರಾಮಕ್ಕೆ ರಾತ್ರಿ ಹೋಗಿ ಮಗಳ ರುಬಿನಾ ಬೇಗಂ ಇವಳ ಮೃತ ದೇಹ ನೋಡಿದೇವು. ಮಗಳ ಗಂಡ, ಅತ್ತೆ, ನಾದನಿಯರು, ಯಾರೂ ಇರಲಿಲ್ಲ, ದಿನಾಂಕ; 16.09.19 ರಂದು ಹಗಲು ಹೊತ್ತಿನಲ್ಲಿ ತವರಿಂದ ಹಣ ತರುವಂತೆ ಬೇಡಿಕೆ ಇಟ್ಟು ಮಗಳಿಗೆ ಹೊಡೆ ಬಡೆ ಮಾಡಿ ಮಾನಸಿಕ ಹಿಂಸೆ/ಕಿರುಕುಳ ನೀಡಿ ಕೊಲೆಗೈದು ಅವಳ ಶವವನ್ನು ಓಡಣಿಯಿಂದ ಬಿಗಿದು ಕೋಣೆಯ ಪೈಪಿಗೆ ಸಿಗಿಸಿರುತ್ತಾರೆ. ಶವದ ಕಾಲುಗಳು ಪೂರ್ತಿ ನೆಲದ ಮೇಲೆ ಕುಳಿತಿರುತ್ತವೆ. ಆದ್ದರಿಂದ ಅಳಿಯ ಯಾಕೂಬ್ ಶಾಹಾ, ಅತ್ತೆ ಖುರ್ಶಿದ ಬೀ, ನಾದನಿ ತಬಸುನ್ ಹಾಗು ಸನ್ನಹಾ ಇವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾಂತಪ್ಪ ತಂದೆ ಯಶ್ವಂತ್ರಾಯ ಅಮ್ಮಣ್ಣಿ ಸಾ: ಘತ್ತರಗಿ ತಾ||ಅಫಜಲಪೂರ ರವರು ದಿನಾಂಕ :17/09/2019 ರಂದು ಪಾನ ಶಾಪ ಅಂಗಡಿಯಲ್ಲಿ ಕುಳಿತಿದ್ದಾಗ ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು 35 ವಯಸ್ಸಿನವನು ಸರಾಯಿ ಕುಡಿದ ಅಮಲಿನಲ್ಲಿ ನಮ್ಮ ಪಾನ ಶಾಪ ಮುಂದೆ ಬಂದು ನಮ್ಮ ಪಾನ ಶಾಪ್ ಮುಂದೆ ಹಾಕಿರುವ ಲೈಟಿನ ವಾಯರನ್ನು ಕೈಯಿಂದ ಹಿಡಿದು ಜಗ್ಗಿದನು ಆಗ ಸದರಿಯವನಿಗೆ ಒಮ್ಮೆಲೆ ವಿದ್ಯುತ ತಗುಲಿ ನೆಲಕ್ಕೆ ಬಿದ್ದನು ಆಗ ನಾನು ಮತ್ತು ನಮ್ಮ ಪಾನಶಾಪ್ ಹತ್ತೀರ ನನ್ನ ಜೋತೆ ಮಾತನಾಡುತ್ತಾ ನಿಂತಿದ್ದ ನನ್ನ ಸ್ನೇಹಿತರಾದ 1)ಹಣಮಂತರಾಯ ತಂದೆ ಅವಪ್ಪಗೌಡ ಪಾಟೀಲ 2)ಜಗದೇವಪ್ಪ ತಂದೆ ದತ್ತು ಲಾಳಸಂಗಿ ಮೂರು ಜನ ಹೋಗಿ ಹತ್ತೀರ ನೋಡಲಾಗಿ ಸ್ಥಳದಲ್ಲಿಯೆ ಮೃತಪಟ್ಟನು ಸದರಿ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ ಸದರಿಯವನು ಅಂದಾಜು 5 ರಿಂದ 5 ½ ಇಂಚು ಎತ್ತರ ಸದೃಡವಾದ ದೇಹ ಹೊಂದಿದ್ದು ಮೈಮೇಲೆ ಒಂದು ಬಿಳಿ ಟವಲ ಸುತ್ತಿಕೊಂಡಿದ್ದು ಯಾವುದೆ ಬಟ್ಟೆ ಉಟ್ಟಿರುವದಿಲ್ಲ ದುಂಡು ಮುಖ ಗೋದಿ ಬಣ್ಣ ಹೊಂದಿರುತ್ತಾನೆ.  ಕಾರಣ ಸದರಿ ಅಪರಿಚಿತ ವ್ಯಕ್ತಿ ಅಂದಾಜು ವಯಸ್ಸು 35 ಈತನು ಕುಡಿದ ಅಮಲಿನಲ್ಲಿ ನಮ್ಮ ಪಾನ ಶಾಪ ಮುಂದೆ ಹಾಕಿರುವ ಲೈಟಿನ ವಾಯರ್ ಹಿಡಿದು ಎಳೆದಿದ್ದರಿಂದ ಸದರಿಯವನಿಗೆ ವಿದ್ಯುತ ತಗಲಿ ಆಕಸ್ಮೀಕವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 18-09-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-09-2019

©ÃzÀgÀ UÁæ«ÄÃt ¥Éưøï oÁuÉ AiÀÄÄ.r.Dgï £ÀA. 09/2019, PÀ®A. 174 ¹.Dgï.¦.¹ :-
ದಿನಾಂಕ 14-09-2019 ರಂದು ಫಿರ್ಯಾದಿ ಅನಿತಾ ಗಂಡ ಸಿದ್ದಪ್ಪಾ ಕೈಕಡಿ ವಯ: 23 ವರ್ಷ, ಜಾತಿ: ಎಸ್.ಸಿ ಕೋರವಾ, ಸಾ: ಇಮಾಮಬಾದ (ಹಳ್ಳಿ) ರವರ ಗಂಡನಾದ ಸಿದ್ದಪ್ಪಾ ತಂದೆ ಮಹೇಶ ಕೈಕಡಿ ವಯ: 25 ವರ್ಷ ರವರು ತಮ್ಮ ಹೋಲದಲ್ಲಿನ ಹತ್ತಿ ಬೆಳಗೆ ಔಷಧಿಯನ್ನು ಹೊಡಯಲು ತಮ್ಮೂರ ಧನರಾಜ ಮಾತಮನಶೇಟ್ಟಿ ಮತ್ತು ರಮೇಶ ಮೇತ್ರೆ ರವರೊಂದಿಗೆ ಹೋಗಿ ಔಷಧಿ ಹೊಡಯುವಾಗ ಗಂಡ ಸಿದ್ದಪ್ಪಾ ರವರ ಎಡಗಾಲಿನ ಹಿಮ್ಮಡಿ ಮೇಲೆ ಕಣ್ಣಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಖಾಸಗಿ ಚಿಕಿತ್ಸೆ ಕುರಿತು ರತ್ನಾಪೂರಗೆ ಕರೆದೊಯ್ದು ನಂತರ ಅಲ್ಲಿಂದ ಮನೆಗೆ ಬಂದಿದ್ದು, ನಂತರ ದಿನಾಂಕ 16-09-2019 ರಂದು ಗಂಡ ಸಿದ್ದಪ್ಪ ರವರ ಕಾಲು ಉಬ್ಬಿದ್ದರಿಂದ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರಯಲ್ಲಿ ದಾಖಲು ಮಾಡಿದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಿಗೆ ಹೋಗಲು ತಿಳಿಸಿದ್ದರಿಂದ ಅವರಿಗೆ ದಿನಾಂಕ 17-09-2019 ರಂದು ಹೈದ್ರಾಬಾದಗೆ ಅಂಬುಲೆನ್ಸದಲ್ಲಿ ತೆಗದುಕೊಂಡು ಹೋಗುವಾಗ ದಾರಿಯಲ್ಲಿ ಜಹಿರಾಬಾದ ಹತ್ತಿರ  ಮೃತ್ತಪಟ್ಟಿದ್ದು ಇರುತ್ತದೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 92/2019, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 17-09-2019 ರಂದು ಫಿರ್ಯಾದಿ ಶಾಹಿಸ್ತಾ ಬೇಗಂ ಗಂಡ ಮಹ್ಮದ ಎಕ್ಬಾಲ, ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಗವಾನ ಚೌಕ ಹತ್ತಿರ ಬೀದರ ರವರು ಮತ್ತು ನಾದನಿ ಅಜಮತ್ ಬೇಗಂ ಗಂಡ ಅಬ್ದುಲ ಖುದ್ದುಸ ವಯ 33 ವರ್ಷ, ಸಾ: ಪನ್ಸಾಲ ತಾಲೀಮ ಬೀದರ ಮತ್ತು ಅತ್ತೆ ಕುಬರಾ ಬೀ ಗಂಡ ಶೇಕ್ ಮೆಹಬೂಬ ಸಾಬ ಮೂವರು ಕೂಡಿ ಅತ್ತೆಯಾದ ಕುಬರಾ ಬೀ ಇವರಿಗೆ ಬೀದರ ಕಾಮತ ಹೊಟೆಲ ಹತ್ತಿರ ಇರುವ ರಾಜಶೇಖರ ಕುಲಕರ್ಣಿ ಆಸ್ಪತ್ರೆಗೆ ತೋರಿಸಿಕೊಂಡು ಮರಳಿ ಗವಾನ ಚೌಕ ಹತ್ತಿರ ಇರುವ ಮನೆಗೆ ಬರಲು ಆಟೋ ನಂ. ಕೆಎ-38/1252 ನೇದ್ದರಲ್ಲಿ ಕುಳಿತು ಬರುತ್ತಿರುವಾಗ ಕನ್ನಡಾಂಬೆ ವೃತ್ತ ದಾಟಿ ಆಮಂತ್ರಣ ಹೊಟೆಲ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಕನ್ನಡಾಂಬೆ ವೃತ್ತದ ಕಡೆಯಿಂದ ಅಪರಿಚಿತ ಆಟೋ ಚಾಲಕನು ತನ್ನ ಆಟೋವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರು ಕುಳಿತ ಆಟೋದ ಬಲಭಾಗಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಓಡಿ ಹೋಗಿರುತ್ತಾನೆ, ಪರಿಣಾಮ ಆಟೋ ಒಳಗಿದ್ದ ನಾದನಿ ಅಜಮತ ಬೇಗಂ ಇವಳ ಎದೆಗೆ, ತಲೆಯ ಹಿಂದೆ ಭಾರಿ ಗುಪ್ತಗಾಯ, ಸೊಂಟದ ಎಡಭಾಗಕ್ಕೆ ತರಚಿದ ಗಾಯವಾಗಿರುತ್ತದೆ, ಫಿರ್ಯಾದಿ ಮತ್ತು ಅತ್ತೆಗೆ ಸಾದಾ ಗಾಯವಾಗಿದ್ದು ನಾವು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ, ನಂತರ ನಾದನಿಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಅಜಮತ ಬೇಗಂ ಇವಳು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 18-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 108/2019, ಕಲಂ. 279, 338, 304(ಎ) ಐಪಿಸಿ :-
ದಿನಾಂಕ 17-09-2019 ರಂದು ಶಕುಂತಲಾ ಪಾಟೀಲ್ ವಸತಿ ಶಾಲೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ-65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಹೈದ್ರಾಬಾದ ಕಡೆಯಿಂದ ಟ್ಯಾಂಕರ್ ಸಂ. ಎಂ.ಹೆಚ್-04/ಎಫ್.ಡಿ-1550 ನೇದರ ಚಾಲಕನಾದ ಜಯಪ್ರಕಾಶ ತಂದೆ ರಾಮಶಬದ ವಿಶ್ವಕರ್ಮ ಸಾ: ಸುಖಿಪೂ,  ಜಿಲ್ಲಾ: ಆಜಮಗಡ ಉತ್ತರ ಪ್ರದೇಶ ಇವನು ತನ್ನ ಟ್ಯಾಂಕರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ರೋಡಿನ ಎಡಗಡೆಗೆ ಬಂದು ಸಿಗ್ನಲ್ ಹಾಕದೇ ಒಮ್ಮೇಲ್ಲೆ ಬ್ರೇಕ್ ಹಾಕಿ ನಿಲ್ಲಿಸಿದ್ದು ಅದೇ ಸಮಯಕ್ಕೆ ಫಿರ್ಯಾದಿ ಪ್ರಭು ತಂದೆ ಗಣಪತಿ ಕೆಳಕೇರಿ ಸಾ: ಸಿಂಧನಕೇರಾ, ತಾ: ಚಿಟಗುಪ್ಪಾ, ಜಿಲ್ಲಾ: ಬೀದರ ರವರ ಮಗನಾದ ಮಗ ರಾಹುಲ ತಂದೆ ಪ್ರಭು ಕೆಳಕೇರಿ ಸಾ: ಸಿಂಧನಕೇರಾ ಇವನು ತನ್ನ ಮೋಟಾರ್ ಸೈಕಲ್ ಸಂ. ಕೆಎ-39/ಎಲ್-5865 ನೇದರ ಮೇಲೆ ಶಿವಕುಮಾರ ಇವನಿಗೆ ಕೂಡಿಸಿಕೊಂಡು ಸಿಂಧನಕೇರಾ ಗ್ರಾಮದಿಂದ ಹುಮನಾಬಾದ ಕಡೆಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಶಕುಂತಲಾ ಪಾಟೀಲ್ ವಸತಿ ಶಾಲೆಯ ಎದುರುಗಡೆ ರೋಡಿನ ಮೇಲೆ ತನ್ನ ಮೋಟಾರ್ ಸೈಕಲ್ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಟ್ಯಾಂಕರ ಚಾಲಕನು ಒಮ್ಮೇಲ್ಲೆ ಬ್ರೇಕ್ ಮಾಡಿದರಿಂದ ಟ್ಯಾಂಕರನ ಹಿಂದಿನ ಎಡಗಡೆಯ ಭಾಗಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ  ತನ್ನ ಮೋಟಾರ್ ಸೈಕಲ್ ಮೇಲಿಂದ ರೋಡಿನ ಮೇಲೆ ಬಿದ್ದಿದ್ದರಿಂದ ರಾಹುಲ ಇವನಿಗೆ ತೀವ್ರ ರಕ್ತಗಾಯಗಳು ಆಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಶಿವಕುಮಾರ ಇವನಿಗೆ ತೀವ್ರ ಗುಪ್ತಗಾಯಗಳು ಆಗಿರುತ್ತವೆ ಅಂತ ಫಿರ್ಯಾದಿಯವರು ನೀಡಿದ ಲಿಖಿತ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 105/2019, ಕಲಂ. 3 & 4 ಇ.ಸಿ ಕಾಯ್ದೆ :-
ದಿನಾಂಕ 17-09-2019 ರಂದು ಫಿರ್ಯಾದಿ ರವಿ ಸೂರ್ಯವಂಶಿ ಆಹಾರ ನಿರೀಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ರವರು ತಹಸೀಲ್ ಕಛೇರಿ ಬಸವಕಲ್ಯಾಣದಲ್ಲಿರುವಾಗ ಮೋಬೈಲ್ ಮೂಲಕ ಮಾಹಿತಿ ಬಂದಿದ್ದೆನೆಂದರೆ ಅನಧಿಕೃತವಾಗಿ ಅಶೋಕ ಲೆಲ್ಯಾಂಡ ಲಾರಿ ನಂ. ಕೆ.-56/3605 ನೇದರಲ್ಲಿ ಪಿ.ಡಿ.ಎಸ್ ಅಕ್ಕಿ ಲೋಡ ಮಾಡಿಕೊಂಡು ಮುಂಬೈಗೆ ಸಾಗಾಟ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿಯವರು ನೀಲಮ್ಮಾ ಆಹಾರ ಶಿರಸ್ತೆದಾರ ಮತ್ತು ರಾಜೇಶ್ವರಿ ಎಸ್.ಡಿ. ಆಹಾರ ಶಾಖೆ ಬಸವಕಲ್ಯಾಣ ಮತು ಇಬ್ಬರು ಪಂಚರನ್ನು ಬರಮಾಡಿಕೊಂಡು ಮಿನಿ ವಿಧಾನ ಸೌಧ ಬಸವಕಲ್ಯಾಣದಿಂದ ಹೊರಟು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯ ಹತ್ತಿರ ನಿಂತಿರುವಾಗ ಹುಮನಾಬಾದ ಕಡೆಯಿಂದ ಬಾತ್ಮಿಯಂತೆ ಲಾರಿ ನಂ ಕೆ.-56/3605 ನೇದರ ಚಾಲಕ ಅರೋಪಿ ಮಹ್ಮದ ಇಮ್ರಾನ್ ತಂದೆ ಸರ್ದಾರಮಿಯಾ ಶೇಖ್ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ತ್ರೀಪೂರಾಂತ ಬಸವಕಲ್ಯಾಣ ಇತನು ಚಲಾಯಿಸಿಕೊಂಡು ಬರುವಾಗ ಫಿರ್ಯಾದಿಯು ಲಾರಿ ನಿಲ್ಲಿಸಲು ಕೈ ಸನ್ನೆ ಮಾಡಿದಾಗ ಲಾರಿ ಚಾಲಕ ಲಾರಿ ನಿಲ್ಲಿಸಿದಾಗ ಫಿರ್ಯದಿಯವರು ಲಾರಿಯನ್ನು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆ ಕಂಪೌಂಡ ಒಳಗಡೆ ತೆಗೆಕೊಳ್ಳಲು ಸೂಚಿಸಿದಾಗ ಲಾರಿಯನ್ನು ಠಾಣೆಯ ಆವರಣದೊಳಗೆ ತೆಗೆದುಕೊಂಡಾಗ ಲಾರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಿದಾಗ ಅವನು ಅಕ್ಕಿ ತುಂಬಿದ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಸದರಿ ಲೋಡಿಗೆ ಸಂಬಂಧಿಸಿದ ದಾಖಲಾತಿಗಳನ್ನು ಹಾಜರಪಡಿಸಲು ಸೂಚಿಸಿದಾಗ ಚಾಲಕ ದಾಖಲಾತಿಗಳನ್ನು ಹಾಜರ ಪಡಿಸಿದ್ದು ಸೂಕ್ತದಾಖಲೆಗಳು ಇರಲಿಲ್ಲ, ಲಾರಿಯಲ್ಲಿದ್ದ ಅಕ್ಕಿ ಲೋಡ ಪರಿಶೀಲಿಸಿ ನೋಡಲು ಅಂದಾಜು 50 ಕೆ.ಜಿ ತೂಕದ ಒಟ್ಟು 500 ಗೋಣಿ ಚೀಲಗಳು ಇದ್ದು ಅಕ್ಕಿ ಪರೀಶಿಲಿಸಿ ನೋಡಲು ಪಿ.ಡಿ.ಎಸ್. ಅಕ್ಕಿಗೆ ಹೋಲುವ ಅಕ್ಕಿ ಇದ್ದುದ್ದರಿಂದ ಒಟ್ಟು 7,07,500/- ರೂ. ಬೆಲೆಯ ಅಕ್ಕಿ ಮತ್ತು 15 ಲಕ್ಷ ಬೆಲೆಯ ಲಾರಿಯನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 109/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 17-09-2019 ರಂದು ಬಾಜೋಳಗಾ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಎಂದು ಕೂಗಿ ಕೂಗಿ ಹೇಳಿ ಜನರಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಸುದರ್ಶನರೆಡ್ಡಿ ಪಿ.ಎಸ್. ಖಟಕಚಿಂಚೊಳಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಜೋಳಗಾ ಕ್ರಾಸಗೆ ಹೊಗಿ ಬಸ್ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೊಡಲು ಬಾಜೋಳಗಾ ಕ್ರಾಸ್ ಹತ್ತಿರ ಇರುವ  ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ರಾಜೇಶ ತಂದೆ ಜನಾರ್ಧನ ಮಾನತೆ ವಯ: 35 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ದಾಡಗಿ ಇತನು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತ ಕೂಗಿ ಕೂಗಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಅವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವನ ಅಂಗ ಜಡ್ತಿ ಮಾಡಲು ಅವನಿಂದ ಮಟಕಾ ಆಟದಿಂದ ಬಂದ 1860/- ನಗದು ಹಣ ಮತ್ತು ಒಂದು ಬಾಲ ಪೇನ್, ಒಂದು ಮಟಕಾ ಚೀಟಿ ನೇದ್ದವುಗಳನ್ನು ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.