Police Bhavan Kalaburagi

Police Bhavan Kalaburagi

Monday, November 25, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಸುರೇಶ ತಂದೆ ತಿಮ್ಮಯ್ಯ ದೊಡಮನಿ ಸಾ; ಬೇಲೂರ ಗ್ರಾಮ ತಾ; ಜೇವರ್ಗಿ  ರವರ ಮಾವನಾದ ಮಲ್ಲಪ್ಪ ಮಂದೇವಾಲ ಇವರು ದಿನಾಂಕ; 23/11/2019 ರಂದು ಸಾಯಂಕಾಲ ತನ್ನ ಮಗಳಾದ ಕಾವೇರಿ ಇವಳನ್ನು ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ ತಮ್ಮ ಬಜಾಜ್ ಡಿಸ್ಕವರಿ ಮೋಟಾರ ಸೈಕಲ್ ನಂ; ಕೆ.-32-.ಬಿ-3735 ನೇದ್ದರ ಮೇಲೆ ಬೇಲೂರದಿಂದ ಜೇರಟಗಿ ಕಡೆಗೆ ಹೋದರು. ನಂತರ ನನಗೆ ಸಾಯಂಕಾಲ 7-30 ಘಂಟೆ ಸುಮಾರಿಗೆ ವಿಷಯ ಗೊತ್ತಾಗಿದ್ಧೇನೆಂದರೆ ಜೇರಟಗಿ - ಯಾತನೂರ ರೋಡಿನ ಮೇಲೆ ನಮ್ಮ ಮಾವನವರಿಗೆ ಕಾರ್ ಅಪಘಾತ ಆಗಿರುತ್ತದೆ ಅವರಿಗೆ 108 ಅಂಬುಲೆನ್ಸದಲ್ಲಿ ಜೇವರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ಎಂದು ವಿಷಯ ಕೇಳಿ ನಾನು ಮತ್ತು ನಮ್ಮ ಅಣ್ಣನಾದ ಯಂಕಪ್ಪ ದೊಡಮನಿ, ಹಾಗು ವಿಕ್ರಮ ತಂದೆ ಪೀರಪ್ಪ ದೊಡಮನಿ ಇವರು ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನಮ್ಮ ಮಾವನವರ ಮೋಟಾರ ಸೈಕಲ್ ನಂ; ಕೆ.-32-.ಬಿ-3735 ಇದ್ದು ಹೊಲದಲ್ಲಿ ಒಂದು ಬಿಳಿ ಬಣ್ಣದ ಕಾರ್ ಇದ್ದು ಅದರ ನಂ; ಎಮ್ ಹೆಚ್.-06-.ಯು-9779 ಇತ್ತು ನಂತರ ನಮ್ಮ ಮಾವ ಮತ್ತು ಸೊಸೆ ಇವರಿಗೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದು ವಿಷಯ ಕೇಳಿ ನಾವು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಅಲ್ಲಿ ನಮ್ಮ ಮಾವ ಮಲ್ಲಪ್ಪ ಮಂದೇವಾಲ ಇವರಿಗೆ ಬಲ ಕಾಲಿನ ತೊಡೆಯ ಮೇಲೆ ಭಾರಿ ರಕ್ತ ಘಾಯವಾಗಿ ಮೂಳೆ ಮುರಿದು ಮೂಳೆ ಹೊರ ಬಂದಿದ್ದು ಮತ್ತು ಗುಪ್ತಾಂಗಕ್ಕೆ ತಲೆಯ ಮೇಲೆ ರಕ್ತ ಘಾಯ ಮತ್ತು ಭಾರಿ ಗುಪ್ತಗಾಯವಾಗಿ ಮೃತಪಟ್ಟಿದ್ದರು.   ನಂತರ ಅಲ್ಲಿಯೇ ಇದ್ದ ನಮ್ಮ ಸೊಸೆ ಕಾವೇರಿ ಇವಳಿಗೆ ವಿಚಾರಿಸಲು ವಿಷಯ ತಿಳಿಸಿದ್ದೇನೆಂದರೆ., ಇಂದು ದಿನಾಂಕ; 23/11/2019 ರಂದು ಸಾಯಂಕಾಲ 6-00 ಘಂಟೆಯ ಸುಮಾರಿಗೆ ನನಗೆ ಜ್ವರ ಬರುತ್ತಿದ್ದರಿಂದ ಇಂಜೀಕ್ಷನ್ ಮಾಡಿಸಿಕೊಳ್ಳುವ ಸಲುವಾಗಿ ನಾನು ಮತ್ತು ನನ್ನ ತಂದೆ ಕೂಡಿ ನಮ್ಮ ಮೋಟಾರ ಸೈಕಲ್ ನಂ; ಕೆ.-32-.ಬಿ-3735 ನೇದ್ದರಲ್ಲಿ ಕುಳಿತುಕೊಂಡು ಜೇರಟಗಿಗೆ ಬಂದಿರುತ್ತೇವೆ. ನಂತರ ಆಸ್ಪತ್ರೆಗೆ ತೋರಿಸಿಕೊಂಡು ಇಬ್ಬರು ಕೂಡಿ ಮತ್ತೆ ಅದೇ ಮೋಟಾರ ಸೈಕಲ್ ಮೇಲೆ ನಾನು ಹಿಂದೆ ಕುಳಿತು ನಮ್ಮ ತಂದೆಯವರು ಮೋಟಾರ ಸೈಕಲ್ ಚಲಾಯಿಸಿಕೊಂಡು ಬೆಲೂರ ಕಡೆಗೆ ಹೋಗುತ್ತಿರುವಾಗ ಸಾಯಂಕಾಲ 7-00 ಘಂಟೆಯ ಸುಮಾರಿಗೆ ಜೇರಟಗಿ-ಯಾತನೂರ ಮದ್ಯದಲ್ಲಿ ರೊಡಿನ ಮೇಲೆ ಮೆಣಸಿಗಿಡದ ಹೊಲದ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಗಾಣಗಾಪೂರ ಕಡೆಯಿಂದ ಒಂದು ಬಿಳಿ ಬಣ್ಣದ ಕಾರ್ ಚಾಲಕನು ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದವನೆ ರೋಡಿನ ಪಕ್ಕದಲ್ಲಿ ಹೋಗುತ್ತಿದ್ದ ನಮ್ಮ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದನು. ಆಗ ನಾವು ಕೆಳಗಡೆ ಬಿದ್ದಿದ್ದು.ಕಾರ್ ಕೂಡ ಸ್ವಲ್ಪ ಮುಂದೆ ಹೋಗಿ ಒಂದು ಹೊಲದಲ್ಲಿ ನಿಂತಿರುತ್ತದೆ. ಇದರಿಂದ ನನಗೆ ಬಲ ಕಾಲಿನ ತೊಡೆ ಮೇಲೆ ಸೊಂಟಕ್ಕೆ ಭಾರಿ ಗುಪ್ತಘಾಯ ಮತ್ತು ರಕ್ತ ಘಾಯವಾಗಿದ್ದು ನಮ್ಮ ತಂದೆಯವರಿಗೆ ತೊಡೆಯ ಮೇಲೆ ಭಾರಿ ರಕ್ತಘಾಯವಾಗಿ ತೊಡೆಯ ಮೂಳೆ ಮುರಿದು ಹೊರ ಬಂದಿರುತ್ತದೆ. ಮತ್ತು ತಲೆಗೆ ಎದೆಗೆ ಗುಪ್ತಾಂಗಕ್ಕೆ ರಕ್ತಘಾಯ ಮತ್ತು ಗುಪ್ತ ಘಾಯವಾಗಿ ಬೇಹೋಸ್ ಆಗಿ ಬಿದ್ದಿದ್ದರು.ನಾನು ಅಲ್ಲಿಯೇ ಹೊಲದಲ್ಲಿ ಹೋಗಿ ನಿಂತಿದ್ದ ಬಿಳಿ ಬಣ್ಣದ ಕಾರ್ ಇದ್ದು ನಂಬರ್ ನೋಡಲಾಗಿ ಎಮ್ ಹೆಚ್.-06-.ಯು-9779 ಇದ್ದು ಅದರ ಚಾಲಕನು ಅಲ್ಲಿಂದ ಓಡಿ ಹೋಗಿದ್ದನು. ನಂತರ ಯಾರೋ 108 ಅಂಬುಲೆನ್ಸಗೆ ಪೋನ್ ಮಾಡಿದ್ದರಿಂದ ಅಂಬುಲೆನ್ಸ ಬಂದು ನಮಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಜೇವರಗಿ ಕರದುಕೊಂಡು ಬರುವಾಗ ಮಾರ್ಗ ಮದ್ಯದಲ್ಲಿ ಜೇವರಗಿ ಸಮೀಪ ಓಂ ನಗರ ಹತ್ತಿರ ಬಂದಾಗ ಸಾಯಂಕಾ; 7-30 ಘಂಟೆಯ ಸುಮಾರಿಗೆ ನಮ್ಮ ತಂದೆಯವರು ಮೃತಪಟ್ಟಿರುತ್ತಾರೆ. ಅಂತಾ ತಿಳಿಸಿದ್ದರ ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಭಾಳಪ್ಪ ತಂದೆ ರಾಮಗೊಂಡ ಸಂಬಾಳೆ ಸಾ: ಮಣೂರ ರವರು ಗ್ರಾಮದಲ್ಲಿರುವ ಯಲ್ಲಮ್ಮ ದೇವಸ್ಥಾನದ ಕಾರ್ಯಾಲಯದಲ್ಲಿದ್ದಾಗ ಶಂಕರ ತಂದೆ ಮುತ್ತಪ್ಪ ಸಿನ್ನೂರ ಇವರು ಕರೆ ಮಾಡಿ ನದಿಯಲ್ಲಿರುವ ಗುಡಿಯ ಹತ್ತಿರ ಬ್ರೀಡ್ಜ ಸಮೀಪ ನದಿಯ ದಡದಲ್ಲಿ ಒಂದು ಯಾವುದೋ ಪ್ರಾಣಿ ಸತ್ತು ಬಿದ್ದು ವಾಸನೆ ಬರುತ್ತಿದೆ ಅದು ಮನುಷ್ಯನದೋ ಯಾವ ಪ್ರಾಣಿದೋ ಗೋತ್ತಾಗುತ್ತಿಲ್ಲ ಅಂತಾ ತಿಳಿಸಿದ ಮೇರೆಗೆ ನಾನು ನದಿಯಲ್ಲಿದ್ದ ದೇವಸ್ಥಾನದ ಹತ್ತಿರ ಹೋಗಿ ನಾನು ಮತ್ತು ಶಂಕರ ಕೂಡಿಕೊಂಡು ಶವದ ಹತ್ತಿರ ಹೋಗಿ ನೋಡಲಾಗಿ ಅಂದಾಜು 10 ರಿಂದ 15 ವಯಸ್ಸಿನ ಮನುಷ್ಯನ ಶವ ಇತ್ತು ಸದರಿ ಶವವು ಯಲ್ಲಿಯೋ ಸುಟ್ಟು ನದಿ ನೀರಿನಲ್ಲಿ ಹರಿದುಕೊಂಡು ನದಿಯಲ್ಲಿರುವ ಯಲ್ಲಮ್ಮ ದೇವಸ್ಥಾನದ ಬ್ರೀಡ್ಜ್ ಪಕ್ಕ ನದಿಯ ದಡದಲ್ಲಿ ಬಿದ್ದಿದ್ದು ಇರುತ್ತದೆ. ಸದರಿ ಶವದ ಎರಡು ಕೈಗಳು ಮುಂಗೈದವರೆಗೆ ಮತ್ತು ಒಂದು ಕಾಲು ಇರುವುದಿಲ್ಲಾ ಇನ್ನೊಂದು ಕಾಲಿನ ಅರ್ಧ ಭಾಗ ಮತ್ತು ಹೊಟ್ಟೆಯ ಭಾಗ ಪೂರ್ತಿ ಸುಟ್ಟಿದ್ದು ಸ್ವಲ್ಪ ಮಾಂಸ ಕಂಡಗಳು ಉಳಿದಿರುತ್ತವೆ. ದೇಹದ ಮೇಲಿನ ಚರ್ಮ ಮತ್ತು ಮಾಂಸ ಹಾಗೂ ತಲೆಯ ಮೇಲಿನ ಕೂದಲು ಇರುವುದಿಲ್ಲಾ ತಲೆ ಡೋಗಿ ಮಾತ್ರ ಇರುತ್ತದೆ ಸದರಿ ಶವವು ಹೆಣ್ಣೊ ಅಥವಾ ಗಂಡೊ ಅಂತಾ ಗೊತ್ತಾಗಿರುವುದಿಲ್ಲಾ ಮತ್ತು ವಯಸ್ಸು ನಿಖರವಾಗಿ ಗೊತ್ತಾಗಿರುವುದಿಲ್ಲಾ ಸದರಿ ಶವವು ಸುಮಾರು 15-20 ದಿನಗಳ ಹಿಂದ ಸತ್ತಿದ್ದು ಇರಬಹುದು ಅಂತಾ ಕಂಡು ಬಂದಿರುತ್ತದೆ.       ಸಾಮಾನ್ಯವಾಗಿ ನನ್ನ ಗ್ರಾಮದ ಸುತ್ತಮುತ್ತಲಿನ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಯಾವುದಾದರೂ ಊರಲ್ಲಿ ಮೃತಪಟ್ಟರೆ ನದಿಯ ಪಕ್ಕದಲ್ಲು ಸುಡುವುದು ರೂಡಿ ಇರುತ್ತದೆ ಹೀಗಾಗಿ ಸದರಿ ಶವ ಎಲ್ಲೋ ಸುಟ್ಟಿರುವುದು ನೀರಿನಲ್ಲಿ ತೇಲಿ ಬಂದಿರುವುದು ಕಂಡು ಬಂದಿರುತ್ತದೆ. ಕಾರಣ ಸದರಿ ಶವದ ಸಾವಿನ ಬಗ್ಗೆ ಸಂಶಯ ಸದರಿ ಘಟನೆ ಬಗ್ಗೆ ದೇವಸ್ಥಾನದ ಮಂಡಳಿಯವರೊಂದಿಗೆ ಚರ್ಚಿಸಿ ತಡವಾಗಿ ದೂರು ಸಲ್ಲಿಸಿದ್ದು ಇರುತ್ತದೆ.  ತಾವು ಮುಂದಿನ ಕ್ರಮ ಕೈಕೊಳ್ಳಬೇಕೆಂದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ;13.11.2019 ರಂದು ಸಾಯಂಕಾಲ ಫಿರ್ಯಾದಿ ನೀಡಿದ ದೂರಿನ ಸಾರಂಶವೇನೆಂದರೆ;“ನನ್ನ ಮಗಳಾದ ಕುಮಾರಿ ಇವಳನ್ನು ಅವಳ ಅಜ್ಜ ಅಜ್ಜಿಯ ಹತ್ತಿರ ಬಿಟ್ಟಿದ್ದು, ಅವಳು ಶಹಾಪೂರದ ಚರ ಬಸವೇಶ್ವರ ಕಾಲೇಜಿನಲ್ಲಿ ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದು ಪ್ರತಿದಿನ ಬಿಳವಾರದಿಂದ ಶಹಾಪೂರಕ್ಕೆ ಕಾಲೇಜಿಗೆ ಹೋಗಿ ಬಂದು ಮಾಡುತ್ತಾಳೆ. ಆಗಾಗ ನಮ್ಮ ಊರಿಗೆ ಬಂದು ಹೋಗುತ್ತಿದ್ದಳು. ಇತ್ತೀಚೆಗೆ ಕೆಲವು ದಿನಗಳಿಂದ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ನಾನು ಹೋದಲೆಲ್ಲ ನನ್ನ ಹಿಂದೆ ಬಂದು ನನಗೆ ಕಣ್ಣು ಹೊಡೆಯುವದು, ಹುಬ್ಬು ಹಾರಿಸುವದು, ಕೈ ಸನ್ನೆ ಮಾಡಿ ಕರೆಯುವದು, ಮತ್ತು ನಿನಗೆ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ನನಗೆ ಚುಡಾಯಿಸುತ್ತಾ ಬಂದು ತೊಂದರೆ ಕೊಡುತ್ತಿದ್ದಾನೆ ಎಂದು ಊರಿಗೆ ಬಂದಾಗ ನಮ್ಮ ಮಗಳು ನನಗೆ ತಿಳಿಸಿರುತ್ತಾಳೆ. ನಂತರ ನಾನು ಮತ್ತು ನನ್ನ ಅಣ್ಣ , ತಮ್ಮ  ಕೂಡಿ ಬಿಳವಾರ ಗ್ರಾಮದಲ್ಲಿ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನಿಗೆ ಭೇಟಿಯಾಗಿ ನಮ್ಮ ಮಗಳ ತಂಟೆಗೆ ಬರಬೇಡ, ಅವಳಿಗೆ ತೊಂದರೆ ಕೊಡಬೇಡ ಎಂದು ಬುದ್ದಿವಾದ ಹೇಳಿ ಬಂದಿರುತ್ತೇವೆ. ಆದರು ಕೂಡ ಅವನು ಅದೇ ಚಾಳಿ ಮುಂದುವರೆಯಿಸಿರುತ್ತಾನೆ. ಆಗ ನಾವು ಕೊಡು-ತಗೊ ಮಗಳು ಇದ್ದಾಳೆ ,ಅಲ್ಲಿರುವದು ಸರಿ ಇರುವದಿಲ್ಲ ಎಂದು ಮರ್ಯಾದೆಗೆ ಅಂಜಿ ಇತ್ತೀಚೆಗೆ ದೀಪಾವಳಿ ಹಬ್ಬದ ಸಲುವಾಗಿ ಆಂದೋಲಾಕ್ಕೆ ಕರೆದುಕೊಂಡು ಬಂದಿರುತ್ತೇವೆ. ದಿನಾಂಕ; 09/11/2019 ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿ ನಮ್ಮ ಮಾವನವರು ಅನಾರೋಗ್ಯದಿಂದ ನಿಧನವಾಗಿರುತ್ತಾರೆ. ನಾವೆಲ್ಲರು ಅವರ ಅಂತ್ಯ ಕ್ರಿಯೆ ಕುರಿತು ಭಾಗವಹಿಸಿದ್ದು ನಮ್ಮ ಮಗಳು ಮತ್ತು ಇತರ ಮಕ್ಕಳೆಲ್ಲರು ಮನೆಯಲ್ಲಿಯೇ ಇದ್ದರು, ಬಿಳವಾರದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಅನ್ನುವವನು ಕೂಡ ಅಲ್ಲಿಗೆ ಬಂದು ಅಂತ್ಯಕ್ರಿಯೆಯಲ್ಲಿ ಓಡಾಡುತ್ತಿದ್ದನು. ಅವನಿಗೆ ನೋಡಿ ನಮ್ಮ ಅಣ್ಣ ಇವರು ಖೂನ (ಗುರುತು) ಹಿಡಿದಿರುತ್ತಾರೆ. ನಾವು ನಮ್ಮ ಮಾವನ ಅಂತ್ಯ ಕ್ರಿಯೆ ಮಾಡಿ ಸಾಯಂಕಾಲ  5-30 ಘಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು ಮಲ್ಲಮ್ಮ ಇರಲಿಲ್ಲ. ಅಲ್ಲಿಯೇ ಇದ್ದ ಚಿಕ್ಕ ಮಳಿಗೆ ವಿಚಾರಿಸಲು ಅವಳು ತಿಳಿಸಿದ್ದೇನೆಂದರೆ; ಇಂದು ಮದ್ಯಾಹ್ನ 3-00 ಘಂಟೆಯ ಸುಮಾರಿಗೆ ನಮ್ಮ ಮನೆಯ ಹಿಂದೆ ದಾರಿಯಲ್ಲಿ ಬಿಳವಾರದ ನಮ್ಮಅಜ್ಜಿಯ ಮನೆಯ ಹತ್ತಿರ ಇರುವ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಬಂದು ಅಕ್ಕ ಮಲ್ಲಮ್ಮಳಿಗೆ ಕೈ ಮಾಡಿ ಕರೆಯುತ್ತಿದ್ದನು.  ಮತ್ತು ಅವಳು ಅಲ್ಲಿ ಹೋದಾಗ ಅವಳಿಗೆ ತನ್ನ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿರುತ್ತಾನೆ. ಎಂದು ತಿಳಿಸಿದಳು ದಿ; 09.11.19 ರಂದುಮದ್ಯಾಹ್ನ 3-00 ಘಂಟೆಯ ಸುಮಾರಿಗೆ ಬಿಳವಾರದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಆಂದೋಲಾ ಗ್ರಾಮಕ್ಕೆ ಬಂದು ನಮ್ಮ ಅಪ್ರಾಪ್ತ ವಯಸ್ಸಿನ ಮಗಳನ್ನು ಪುಸಲಾಯಿಸಿ ಅವಳ ತೆಲೆ ಕೆಡಿಸಿ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಅವಳಿಗೆ ನಂಬಿಸಿ ಒತ್ತಾಯ ಪೂರ್ವಕವಾಗಿ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ 21.11.2019 ರಂದು ಸದರಿ ಪ್ರಕರಣದ ತನಿಖೆ ಮುಂದುವರೆಯಿಸಿ ಸದರಿ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಕುಮಾರಿ ಇವಳಿಗೆ ಮತ್ತು  ಮತ್ತು ಆರೋಪಿ ಭೀಮಾಶಂಕರ ತಂದೆ ಮಲ್ಕಾಜಪ್ಪ ಕೂಡಿ ಸಾಃ ಬಿಳವಾರ   ಇವರ ಪತ್ತೆ ಕುರಿತು ನಾನು ಮತ್ತು ನಮ್ಮ ಠಾಣೆಯ ಶ್ರೀಮತಿ ನಿರ್ಮಲಾ ಮ.ಹೆಚ್.ಸಿ. 443, ಶ್ರೀ ಪರಮೇಶ್ವರ ಹೆಚ್.ಸಿ. 36  ಶ್ರೀ ವಿಜಯಕುಮಾರ ಸಿಪಿಸಿ 691 ರವರಿಗೆ ನೇಮಿಸಿ ಕೊಟ್ಟು ಕಳಿಸಿದ್ದು ಇರುತ್ತದೆ. ದಿನಾಂಕ 23/11/2019 ರಂದು ಮದ್ಯಾಹ್ನ 2.00 ಗಂಟೆಗೆ  ಸದರಿ ಪ್ರಕರಣದಲ್ಲಿ ಪತ್ತೆ ಕುರಿತು ಹೋದ ನಮ್ಮ ಠಾಣೆಯ ಸಿಬ್ಬಂದಿಯವರು ಠಾಣೆಗೆ ಬಂದು  ಸದರಿ ಪ್ರಕರಣದಲ್ಲಿನ  ಅಪಹರಣಕ್ಕೋಳಗಾದ ಬಾಲಕಿ ಮತ್ತು ಆರೋಪಿತನ ಬಗ್ಗೆ ಮಾಹಿತಿ ಸಂಗ್ರಹಿಸಿ  ಬೆಂಗಳೂರಕ್ಕೆ ಹೋಗಿ ದೇವನಹಳ್ಳಿ ಬೆಂಗಳೂರದಲ್ಲಿ ಸದರಿ ಪ್ರಕರಣದಲ್ಲಿನ ಮತ್ತು ಅಪಹರಣಕ್ಕೊಳಗಾದ ಬಾಲಕಿ ಇವಳಿಗೆ ದಿ. 22/11/2019 ರಂದು ರಾತ್ರಿ 10 ಗಂಟೆಗೆ ವಶಕ್ಕೆ ಪಡೆದುಕೊಂಡು ಇಂದು ದಿ. 23/11/2019  ರಂದು ಮದ್ಯಾಹ್ನ  2.00  ಗಂಟೆಗೆ ಠಾಣೆಗೆ ಬಂದಿದ್ದು  ನಂತರ ಸದರಿ ಪ್ರಕರಣದಲ್ಲಿ ನೊಂದ ಬಾಲಕಿ ಇವಳಿಗೆ ವಿಚಾರಿಸಿ ನಮ್ಮ ಠಾಣೆಯ ಶ್ರೀಮತಿ ನಿರ್ಮಲಾ  .ಹೆಚ್.ಸಿ. 443 ರವರ ಸಮಕ್ಷಮದಲ್ಲಿ ಹೇಳಿಕೆ ಪಡೆಯಲಾಗಿ ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಆಂದೋಲಾದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿರುತ್ತೇನೆ. ನಂತರ ನಾನು ಬಿಳವಾರಕ್ಕೆ ಹೋಗಿ ಅಲ್ಲಿ ನಮ್ಮ ಆಯಿ ಮುತ್ಯಾ ರವರ ಹತ್ತಿರ ವಾಸವಾಗಿದ್ದುಕೊಂಡು ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸರಕಾರಿ ಪ್ರೌಢ ಶಾಲೆ ಬಿಳವಾರದಲ್ಲಿ ವ್ಯಾಸಂಗ ಮಾಡಿರುತ್ತೇನೆ. ನಾನು ಶಹಾಪೂರದ ಸಿ.ಬಿ (ಚರ ಬಸವೇಶ್ವರ) ಕಾಲೇಜಿನಲ್ಲಿ ಪಿ.ಯು.ಸಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಶಹಾಪೂರದ ಬಿ.ಸಿ.ಎಮ್ ವಸತಿ ನಿಲಯದಲ್ಲಿ ಕೆಲವು ದಿನಗಳು ಇದ್ದು ಆಗಾಗ ಬಿಳವಾರದಿಂದ ಕಾಲೇಜಿಗೆ ಹೋಗಿ ಬಂದು ಮಾಡುತ್ತೇನೆ. ನಾನು ಬಿಳವಾರ ಗ್ರಾಮದಲ್ಲಿ ಓದುತ್ತಿದ್ದಾಗ ನಮ್ಮ ಅಜ್ಜಿಯ ಮನೆಯ ಹತ್ತಿರ ಇರುವ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಅವನು ಆಗಿನಿಂದ ನನಗೆ ನೋಡಿ ನಗುವದು, ನನ್ನ ಹಿಂದೆ ಬರುವದು, ನನಗೆ ಕಣ್ಣು ಹೊಡೆಯುವದು, ಹುಬ್ಬು ಹಾರಿಸುವದು, ಮಾಡುತ್ತಿದ್ದನು. ನಾನು ಈ ವಿಷಯ ಮನೆಯಲ್ಲಿ ಹೇಳಿದರೆ ನನಗೆ ಶಾಲೆ ಬಿಡಿಸುತ್ತಾರೆ ಎಂದು ನಾನು ಯಾರಿಗೂ ಹೇಳಿರುವದಿಲ್ಲ.  ನಂತರ ನಾನು ಶಹಾಪೂರದಲ್ಲಿ ಕಾಲೇಜು ಮಾಡಿರುತ್ತೇನೆ. ಆಗಾಗ ನಾನು ಕಾಲೇಜಿಗೆ ಹೋಗುವಾಗ ನನ್ನ ಹಿಂದೆ ಬಂದು ನನಗೆ ಕೈ ಸನ್ನೆ ಮಾಡಿ ಕರೆಯುವದು, ಮತ್ತು ನಿನಗೆ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ನೀನು ನನಗೆ ತುಂಬಾ ಇಷ್ಟವಾಗಿದ್ದಿ ಎಂದು ಹೇಳಿ ನನಗೆ ಚುಡಾಯಿಸುತ್ತಾ ಬಂದು ತೊಂದರೆ ಕೊಡುತ್ತಿದ್ದನು. ಅವನ ಕಾಟ ತಾಳಲಾರದೆ ನಾನು ಈ ವಿಷಯವನ್ನು ನಮ್ಮ ತಂದೆ ತಾಯಿಗೆ ಮತ್ತು ಮಾವನವರಿಗೆ  ತಿಳಿಸಿರುತ್ತೇನೆ. ನಂತರ ಅವರು ಬೀಮಾಶಂಕರ್ ಈತನಿಗೆ ಬುದ್ದಿವಾದ ಹೇಳಿರುತ್ತಾರೆ. ಆದರು ಕೂಡ ಅವನು ಅದೇ ಚಾಳಿ ಮುಂದುವರೆಯಿಸಿ ನನ್ನ ಹಿಂದೆ ಬಿದ್ದು ಅವನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ನಿನಗೆ ಬಿಟ್ಟು ಇರಲು ಆಗುತ್ತಿಲ್ಲ ನೀ ಸಿಗದಿದ್ದರೆ ನಾನು ಸತ್ತೆ ಹೋಗುತ್ತೇನೆ ನಿನಗೆ ಕೈ ಬಿಡುವದಿಲ್ಲ ಎಂದು ಹೇಳಿ ನನಗೆ ತಲೆ ಕೆಡಿಸಿರುತ್ತಾನೆ. ನಂತರ ನಮ್ಮ ಮನೆಯವರು ನನಗೆ ಕಾಲೇಜು ಬಿಡಿಸಿ ಆಂದೋಲಾ ಗ್ರಾಮಕ್ಕೆ ಕರೆದುಕೊಂಡು ಬಂದಿರುತ್ತಾರೆ. ನಾನು ಆಂದೋಲಾದಲ್ಲಿಯೇ ನಮ್ಮ ತಂದೆ ತಾಯಿಯ ಹತ್ತಿರ ವಾಸವಾಗಿರುತ್ತೇನೆ. ದಿನಾಂಕ; 09/11/2019 ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿ ನಮ್ಮ ಮುತ್ಯಾ ಅನಾರೋಗ್ಯದಿಂದ ನಿಧನವಾಗಿರುತ್ತಾರೆ. ಮನೆಯವರೆಲ್ಲರು ಅವರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದು ಅದೇ ವೇಳೆಗೆ ಅಲ್ಲಿಗೆ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಅನ್ನುವವನು ಕೂಡ ಅಲ್ಲಿಗೆ ಬಂದಿದ್ದನು. ಮದ್ಯಾಹ್ನ 3-00 ಘಂಟೆಯ ಸುಮಾರಿಗೆ ಭೀಮಾಶಂಕರ್ ಕೂಡಿ ಇತನು ನಮ್ಮ ಮನೆಯ ಹಿಂದೆ ಬಂದು ನನಗೆ ಕೈ ಮಾಡಿ ಕರೆಯುತ್ತಿದ್ದನು. ಅವನು ಮೊದಲೆ ಪರಿಚಯವಿರುವದರಿಂದ ಯಾಕೆ ಕರೆಯುತ್ತಾನೆ ಎಂದು ನಾನು ಹತ್ತಿರ ಹೋದಾಗ ಅವನು ನಿನಗೆ ಕಾಲೇಜು ಬಿಡಿಸಿರುತ್ತಾರೆ, ನಿನಗೆ ಕೂಲಿ ಕೆಲಸಕ್ಕೆ ಹಚ್ಚಿರುತ್ತಾರೆ, ನೀನು ನನ್ನೊಂದಿಗೆ ಬಾ, ನಿನಗೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನ್ನ ಬಿಟ್ಟು ನನಗೆ ಇರಲು ಆಗುತ್ತಿಲ್ಲ ನನ್ನೊಂದಿಗೆ ನಡೆ ಹೋಗೋಣ ಎಂದು ಹೇಳಿ ನನ್ನ ತಲೆ ಕೆಡಿಸಿದನು. ಆಗ ನಾನು ಇನ್ನು ಚಿಕ್ಕವಳಿದ್ದೇನೆ ನನಗೆ ವಯಸ್ಸಾಗಿರುವದಿಲ್ಲ ಇನ್ನು ಸ್ವಲ್ಪ ದಿನ ತಾಳು ಎಂದು ಹೇಳಿದಾಗ ಅವನು ನನಗೆ ಸ್ವಲ್ಪ ಮೋಟಾರ ಸೈಕಲ್ ಮೇಲೆ ಕೂಡು ನಿನಗೆ ಎಲ್ಲಾ ಹೇಳುತ್ತೇನೆ ಎಂದು ನನಗೆ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಕೆಂಬಾವಿಯವರೆಗೆ ಕರೆದುಕೊಂಡು ಹೋದನು. ಅಲ್ಲಿಯೇ ಬಸ್ ನಿಲ್ದಾಣದಲ್ಲಿ ಮೋಟಾರ ಸೈಕಲ್ ನಿಲ್ಲಿಸಿ ಯಾರಿಗೋ ಪೋನ್ ಮಾಡಿ ಮೋಟಾರ ಸೈಕಲ್ ತೆಗೆದುಕೊಂಡು ಹೋಗಲು ತಿಳಿಸಿದನು. ನಂತರ ಅಲ್ಲಿಂದ ನನಗೆ ಒಂದು ಬಸ್ಸಿನಲ್ಲಿ ಕೂಡಿಸಿಕೊಂಡು ಸುರಪೂರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಕೂಡಿಸಿಕೊಂಡು ಬೆಂಗಳೂರಕ್ಕೆ ಹೋಗಿರುತ್ತಾನೆ. ಬೆಂಗಳೂರದ ದೇವನಹಳ್ಳಿಯ ಏರಿಯಾದಲ್ಲಿ ಕೆಲಸ ಮಾಡುವ ಅವನ ಗೆಳೆಯ ಮಾಳಪ್ಪ ನೇರಡಗಿ ಈತನು ವಾಸವಾಗಿರುವ ಒಂದು ಮನೆಯಲ್ಲಿ ನನಗೆ ಇಟ್ಟನು. ಅವನು ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ದಿ; 10/11/2019 ರಂದು ಬೆಂಗಳೂರದಲ್ಲಿ ಇದ್ದಾಗ ರಾತ್ರಿ 11-00 ಘಂಟೆಯ ಸುಮಾರಿಗೆ ನನಗೆ ಮಲಗಲು ಬಾ ಎಂದು ಕರೆದು ನಾನು ಬೇಡ ಎಂದರು ಕೂಡ ಜಬರದಸ್ತಿಯಿಂದ ನನಗೆ ಸಂಬೋಗ ಮಾಡಿರುತ್ತಾನೆ. ನಂತರ ಅಲ್ಲಿಯೇ ದಿನಾಲು ರಾತ್ರಿ ವೇಳೆಯಲ್ಲಿ ಹಲವು ಬಾರಿ ನನಗೆ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಈ ಮೊದಲು ಒಂದು ವರ್ಷದ ಹಿಂದೆ ನಾನು ಬಿಳವಾರ ಗ್ರಾಮದ ನಮ್ಮ ಅಜ್ಜಿಯ ಮನೆಯಲ್ಲಿ ಇದ್ದಾಗ ಒಂದು ದಿನ ಮದ್ಯಾಹ್ನ ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ಬೀಮಾಶಂಕರ್ ಈತನು ನಮ್ಮ ಮನೆಗೆ ಬಂದು ನನಗೆ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಮತ್ತು ಈ ವಿಷಯ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ನಿನ್ನ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಹೆದರಿಸಿ ಹೀಗೆ 2-3 ಬಾರಿ ಸಂಬೋಗ ಮಾಡಿರುತ್ತಾನೆ. ಆದ್ದರಿಂದ ನಾನು ಮರ್ಯಾದೆಗೆ ಅಂಜಿ ಈ ವಿಷಯ ಯಾರಿಗು ಹೇಳಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 25-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-11-2019

ಚಿಂತಾಕಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 24-11-2019 ರಂದು ಫಿರ್ಯಾದಿ ಬಬೀತಾ ಗಂಡ ನಾರಾಯಣ ಕೋಳಿ ವಯ: 45 ವರ್ಷ, ಜಾತಿ: ಕೋಳಿ, ಸಾ: ಕರಂಜಿ(ಕೆ) ರವರ ಗಂಡನಾದ ನಾರಾಯಣ ತಂದೆ ರಾಮಣ್ಣಾ ಕೋಳಿ ವಯ: 55 ವರ್ಷ ರವರು ವಿ.ಎಸ್.ಎಸ್.ಎನ್. ಕರಂಜಿ(ಬಿ) ನೇದರಲ್ಲಿ ತಮ್ಮ ಹೊಲದ ಮೇಲೆ 25,000/- ರೂಪಾಯಿ ಸಾಲ, ಮನೆಯ ಸಂಕಷ್ಟಕ್ಕಾಗಿ, ಹೊಟ್ಟೆಯ ಉಪಜೀವನಕ್ಕಾಗಿ ಹೊರಗಿನ ಖಾಸಗಿ ಸಾಲ ಅಂದಾಜು 2,00,000/-(ಎರಡು ಲಕ್ಷ) ರೂ. ಸಾಲ ಮಾಡಿದ್ದು, ಸದರಿ ಸಾಲವನ್ನು ತಿರಿಸಲು ಆಗದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕ್ರಿಮಿ ಕಿಟನಾಶಕ ಔಷಧಿಯನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲು ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 11/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಪ್ರಭು ವಯ: 60 ವರ್ಷ, ಜಾತಿ: ಎಸ್. ಟಿ ಗೊಂಡ, ಸಾ: ಭಾಲ್ಕಿ ರವರ ಮಗಳಾದ ಶಾಮಲಾ ಗಂಡ ಕಾಳಪ್ಪಾ ಇವಳಿಗೆ ಒಂದು ವರ್ಷದಿಂದ ಹೊಟ್ಟೆ ನೋವು ಇದ್ದು ಖಾಸಗಿ ಚಿಕಿತ್ಸೆ ತೆಗೆದುಕೂಂಡಿದ್ದು ಕಡಿಮಯಾಗದ ಕಾರಣ 24-11-2019 ರಂದು ಹೊಟ್ಟೆ ನೋವು ತಾಳಲಾರದೆ ಹೋಲದಲ್ಲಿ ಬೆಳಗೆ ಹೋಡೆಯುವ ಔಷದ ಕೂಡಿದಿದ್ದು ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ, ಆಕೆಯ ಸಾವಿನ ಬಗ್ಗೆ ಯಾವುದೇ ಯಾರ ಮೇಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 93/2019, ಕಲಂ. 279, 304() ಐಪಿಸಿ :-
ದಿನಾಂಕ 23-11-2019 ರಂದು ಫಿರ್ಯಾದಿ ರಂಜೀತ ತಂದೆ ವಿಠಲ ಜಾಧವ ಜಾತಿ: ಮರಾಠಾ, ಸಾ: ಚಿತ್ತಕೋಟಾ(ಬಿ) ತಾ: ಬಸವಕಲ್ಯಾಣ ರವರ ಭಾಗಾದಿ ಸುನೀಲ ತಂದೆ ಬಾಲಾಜಿ ಜಾಧವ ವಯ: 22 ವರ್ಷ, ಜಾತಿ: ಮರಾಠಾ, ಸಾ: ಚಿತ್ತಕೋಟಾ, ಸದ್ಯ: ಭೋಸಗಾ, ತಾ: ಬಸವಕಲ್ಯಾಣ ಇವನು ಬೋಸಗಾ-ಜೋಗೆವಾಡಿ ರೋಡಿನ ಮೇಲೆ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-56/ಜೆ-1535 ನೇದ್ದನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಅದರ ಮೇಲಿನ ನಿಯಂತ್ರಣ ಕಳೆದುಕೊಂಡು ರೋಡಿನ ಪಕ್ಕದಲ್ಲಿ ಸ್ಕಿಡ್ ಮಾಡಿ ರೋಡಿನ ಪಕ್ಕ ತಗ್ಗಿನಲ್ಲಿ ಮೋಟಾರ್ ಸೈಕಲ ಸಮೇತ ಬಿದ್ದಿದ್ದರಿಂದ ಮುಖಕ್ಕೆ ಕಲ್ಲು ಬಡಿದು ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 174/2019, ಕಲಂ. 279, 338 ಐಪಿಸಿ :-
ದಿನಾಂಕ 24-11-2019 ರಂದು ಫಿರ್ಯಾದಿ ಗೋರಖ ತಂದೆ ಮಾಣಿಕ ಸಂತಪೂರೆ ವಯ: 50 ವರ್ಷ, ಜಾತಿ: ಎಸ.ಸಿ ಹೊಲಿಯಾ, ಸಾ: ಅಮದಾಬಾದ ರವರು ತನ್ನ ಮಗಳಾದ ಕು.ಮಂಜುಳಾ ತಂದೆ ಗೋರಖ ಸಂತಪೂರೆ ವಯ: 25 ವರ್ಷ ಇವಳ ಜೊತೆಯಲ್ಲಿ ಇಬ್ಬರು ನೀರು ತರಲು ತಮ್ಮ ಗ್ರಾಮದ ಹಲಬರ್ಗಾ ಅಂಬೇಸಾಂಗವಿ ರೋಡಿನ ಪಕ್ಕದಲ್ಲಿ ಹೊದಾಗ ಹಲಬರ್ಗಾ ಕಡೆಯಿಂದ ಬಜಾಜ್ ಪಲ್ಸರ್ ಮೋಟಾರ ಸೈಕಲ ನಂ. ಕೆಎ-38/ಡಬ್ಲು-4866 ನೇದರ ಸವಾರನಾದ ಆರೋಪಿ ಸಚಿನ ತಂದೆ ಸಂಜುಕುಮಾರ ಸಾ: ಸೇವಾನಗರ ತಾಂಡಾ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಮಂಜುಳಾ ಇವಳಿಗೆ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಮಂಜುಳಾ ಇಕೆಯ ಬಲಗಾಲ ಮೋಳಕಾಲ ಕೆಳಗೆ ರಕ್ತಗಾಯ ಹಾಗು ಭಾರಿ ಗುಪ್ತಗಾಯ, ಎಡಗಾಲು ಮುರಿದು ಭಾರಿ ಗುಪ್ತಗಾಯ, ಮತ್ತು ಎಡಗೈ ಮುಂಗೈ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ತನ್ನ ಮಗಳಿಗೆ ಒಂದು ಜೀಪನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಭಾಲ್ಕೆ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.