Police Bhavan Kalaburagi

Police Bhavan Kalaburagi

Tuesday, May 9, 2017

Yadgir District Reported Crimes


                                                                   Yadgir District Reported Crimes

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ: 279, 304(ಎ) ಐಪಿಸಿ ಮತ್ತು ಕಲಂ: 134(ಎ),(ಬಿ) ಐ.ಎಮ್.ವಿ ಆಕ್ಟ್ ;- ದಿನಾಂಕ 09/05/2017 ರಂದು ಬೆಳಿಗ್ಗೆ 9-30 ಎ.ಎಮ್ಕ್ಕೆ ಸಮುದಾಯ ಆರೋಗ್ಯ ಕೇಂದ್ರ ಗುರುಮಠಕಲ್ಗೆ ಭೇಟಿ ನೀಡಿ ಮೃತ ಕಾತರ್ಿಕನ ತಂದೆ ಮಲ್ಲಪ್ಪ ತಂದೆ ಶರಣಪ್ಪ ಗಣಪೂರ ವ||40 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ||ರಾಮಸಮುದ್ರ ಹಾ||ವ||ಪಸಪುಲ್ ತಾ||ಜಿ||ಯಾದಗಿರಿ ಈತನು ಕೊಟ್ಟ ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೇಂದರೆ, ನಾನು ಈ ಮೇಲ್ಕಂಡ ಹೆಸರು ಮತ್ತು ವಿಳಾಸದವನಿದ್ದು ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಹೆಂಡತಿಯ ತವರೂರು ಪಸಪುಲ್ ಗ್ರಾಮವಿದ್ದು ಹೀಗೆ 6 ತಿಂಗಳುಗಳ ಹಿಂದೆ ನಾವು ಗಂಡ ಹೆಂಡತಿ ಮತ್ತು ನನ್ನ ಒಬ್ಬನೇ ಮಗನಾದ 6 ವರ್ಷದ ಕಾತರ್ಿಕನೊಂದಿಗೆ ನನ್ನ ಹೆಂಡಯಿಯ ತವರೂರಾದ ಪಸಪುಲ್ ಗ್ರಾಮದಲ್ಲಿ ಬಂದು ನೆಲೆಸಿದೆವು. ನಾವು ಸುಮಾರು ದಿನಗಳಿಂದ ಗುಂಜನೂರು ಗ್ರಾಮದ ಅಬ್ಬಾಸಲ್ಲಿ ಮಸೀದಿಗೆ ನಡೆದುಕೊಳ್ಳುತ್ತೇವೆ. ಹೀಗಿದ್ದು ದಿನಾಂಕ 08/05/2017 ರಂದು ನಾನು ಮತ್ತು ನನ್ನ ಹೆಂಡತಿ ಹೊನ್ನಮ್ಮ ಹಾಗೂ ಮಗ ಕಾತರ್ಿಕ ಮೂರು ಜನ ಕೂಡಿ ಗುಂಜನೂರು ಗ್ರಾಮದ ಅಬ್ಬಾಸಲಿ ಮಸೀದಿಗೆ ಹೋಗಿ ರಾತ್ರಿ ದೇವರ ದರ್ಶನ ಪಡೆದುಕೊಂಡು ಅಲ್ಲಿಯೇ ಮಲಗಿಕೊಂಡಿದ್ದೇವು. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಎದ್ದು ಪಸಪುಲ್ ಗ್ರಾಮಕ್ಕೆ ಬರಲು ಗುಂಜನೂರು ಗೇಟ್ ಹತ್ತಿರ ಬಂದು ನಿಂತಿದ್ದೇವು. ನಾರಾಯಣಪೇಠ ಕಡೆಯಿಂದ ಒಂದು ಖಾಸಗಿ ವಾಹನ ಬಂತು ಅದರಲ್ಲಿ ನಾವು ಮೂರು ಜನ ಕುಳಿತು ಪಸಪುಲ್ ಗೇಟ್ಗೆ ಬಂದು ಇಳಿದೆವು. ರೋಡಿ ಎಡಬದಿಯಿಂದ ರೋಡಿನ ಬಲಗಡೆ ಇರುವ ಪಸಪುಲ ಗ್ರಾಮದ ಕಡೆಗೆ ಹೋಗಲು ನಾವು ರೋಡ್ ದಾಟುತ್ತಿದ್ದೇವು. ನಾವು ರೋಡ್ ದಾಟುವ ಕಾಲಕ್ಕೆ ಇಂದು ದಿನಾಂಕ 09/05/2017 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಯಾದಗಿರಿ ಕಡೆಯಿಂದ ಬಂದ ತೆಲಂಗಾಣ ರಾಜ್ಯದ ಸಾರಿಗೆ ಬಸ್ ನಂ: ಎಪಿ-21-ಜೆಡ್-0407 ನೇದ್ದರ ಬಸ್ ಚಾಲಕನಾದ ನರಸಿಂಹಲು ತಂದೆ ಬಾಲಯ್ಯ ಈತನು ತನ್ನ ಬಸ್ನ್ನು ಒಂದೇ ಸಮನೆ ಜೋರಾಗಿ ಓಡಿಸಿಕೊಂಡು ಬಂದು ಬಸ್ನ ಹಾನರ್್ ಹೊಡೆಯದೇ ಮತ್ತು ರಸ್ತೆ ದಾಟುತ್ತಿರುವ ನಮ್ಮನ್ನು ಲೆಕ್ಕಿಸದೇ ಅಲಕ್ಷತದಿಂದ ನಡೆಸಿ ನನ್ನ ಕೈ ಹಿಡಿದು ಕೊನೆಯ ರೋಡ್ ದಾಟುತ್ತಿರುವ ನನ್ನ ಮಗನಾದ ಕಾತರ್ಿಕಗೆ ಬಸ್ ಡಿಕ್ಕಿಪಡಿಸಿತು. ಆಗ ನನ್ನ ಮಗ ಬಸ್ ಡಿಕ್ಕಿಯ ರಭಸಕ್ಕೆ ಪುಟಿದು ರೋಡಿನ ಮೇಲೆ ಬಿದ್ದನು. ಅವನ ಹಣೆಗೆ ಮತ್ತು ತುಟಿಗೆ ಗುಪ್ತಗಾಯ ಮತ್ತು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟನು. ನನಗೆ ಮತ್ತು ನನ್ನ ಹೆಂಡತಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ರಾಜ್ಯ ಹೆದ್ದಾರಿ ಸಂಖ್ಯೆ 16 ಸಿಂದಗಿ-ಕೊಡಂಗಲ್ ಮುಖ್ಯ ರಸ್ತೆಯ ಪಸಪುಲ್ ಗೇಟ್ ಸಮೀಪ ರೋಡ್ ದಾಟುತ್ತಿರುವ ನನ್ನ ಮಗನಿಗೆ ಬಸ್ ನಂ: ಎಪಿ-21-ಜೆಡ್-0407 ನೇದ್ದರ ಚಾಲಕ ತನ್ನ ಬಸ್ನ್ನು ಅತಿವೇಗ ಮತ್ತು ಅಲಕ್ಷತದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿರುತ್ತಾನೆ. ಅಲ್ಲದೇ ತನ್ನ ಬಸ್ನ್ನು ನಿಲ್ಲಿಸದೇ ಕಂದಕೂರ ಗೇಟ್ನ ವರೆಗೆ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಕಾರಣ ಸದರಿ ಬಸ್ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ. ನಾನು ಹೇಳಿದನ್ನು ಗುರುಮಠಕಲ್ ವೃತ್ತ ಕಛೇರಿಯ ನೂರಂದ ಪಿಸಿ-368 ರವರು ಬರೆದು ಪುನಃ ನನಗೆ ಓದಿ ಹೇಳಿದರು. ಅದು ನಾನು ಹೇಳಿದಂತೆ ಸರಿ ಇರುತ್ತದೆ ಅಂತಾ ಹೇಳಿ ಬರೆಯಿಸಿದ ಹೇಳಿಕೆ ಪಡೆದುಕೊಂಡು ನಂತರ ಪೊಲೀಸ್ ಠಾಣೆಗೆ 11-00 ಎ.ಎಮ್ಕ್ಕೆ ಬಂದು ಠಾಣೆ ಗುನ್ನೆ ನಂ: 111/2017 ಕಲಂ: 279, 304(ಎ) ಐಪಿಸಿ ಮತ್ತು ಕಲಂ: 134 (ಎ & ಬಿ) ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 149/2017  ಕಲಂ 279 337 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್;- ದಿನಾಂಕಃ 07/05/2017 ರಂದು 10-15 ಪಿ.ಎಮ್ ಕ್ಕೆ ಶಹಾಪೂರ ಸಕರ್ಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಪಡೆಯುತ್ತಿದ್ದ ಫಿಯರ್ಾದಿಯ ಹೇಳಿಕೆ ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ಇಂದು ಗಂಗಾನಾಯಕ ತಾಂಡಾದಲ್ಲಿ ಮರೆಮ್ಮ ದೇವಿ ಜಾತ್ರೆಗೆ ಹೋಗಬೆಕೆಂದು ನಾನು ಮತ್ತು ನನ್ನ ಸ್ನೇಹಿತನಾದ ಪಪ್ಪು ತಂದೆ ಮಾನು ರಾಠೋಡ ಸಾ|| ಬಳಬಟ್ಟಿ ತಾಂಡಾ ಇಬ್ಬರೂ ರಾತ್ರಿ 8-30 ಗಂಟೆಯ ಸುಮಾರಿಗೆ ನಮ್ಮ ತಾಂಡಾದಿಂದ ಪಪ್ಪು ರಾಠೋಡ ಇತನ ಮೋಟರ ಸೈಕಲ್ ನಂಬರ ಒಊ12 ಉಆ 2059 ನೇದ್ದರ ಮೇಲೆ ಗಂಗಾನಾಯಕ ತಾಂಡಾಕ್ಕೆ ಹೊರಟಿದ್ದೇವು. ಮೋಟರ ಸೈಕಲ್ ಪಪ್ಪು ರಾಠೋಡ ಇತನು ನಡೆಸುತ್ತಿದ್ದು ನಾನು ಆತನ ಹಿಂದುಗಡೆ ಕುಳಿತಿದ್ದೇನು. ರಾತ್ರಿ 9-45 ಗಂಟೆಯ ಸುಮಾರಿಗೆ ಶಹಾಪೂರ ನಗರದ ಚರಬಸವೇಶ್ವರ ಕಮಾನ ಹತ್ತಿರ ಎದರುಗಡೆಯಿಂದ ಕಾರ ನಂಬರ ಏಂ36 ಓ 4789 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಮುಖ್ಯರಸ್ತೆಯ ಮೇಲೆ ಹೊರಟಿದ್ದ ನಮ್ಮ ಮೋ.ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾವಿಬ್ಬರೂ ಮೋಟರ ಸೈಕಲ್ ಸಮೇತವಾಗಿ ರಸ್ತೆಯ ಮೇಲೆ ಬಿದ್ದ ಪರಿಣಾಮ ನನಗೆ ರಕ್ತಗಾಯಗಳಾಗಿ ಮೈಯಲ್ಲಿ ಒಳಪೆಟ್ಟಾಗಿದ್ದು, ಪಪ್ಪು ಇತನಿಗೆ ಎಡಗಾಲು ಮೊಣಕಾಲಿನ ಕೆಳಗಡೆ ಮುರಿದು ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ಸಾದಾ ಹಾಗು ಭಾರಿ ರಕ್ತಗಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಬಳಿಕ ಕಾರ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 149/2017 ಕಲಂ 279 337 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 150/2017  ಕಲಂ 78(3) ಕೆ.ಪಿ ಆಕ್ಟ್;- ದಿನಾಂಕಃ 08/05/2017 ರಂದು 5-30 ಪಿ.ಎಮ್ ಕ್ಕೆ ಶ್ರೀ ಸೋಮಲಿಂಗಪ್ಪ ಎ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಶಹಾಪೂರ ಪಟ್ಟಣದ ಮೋಟಗಿ ಲಾಡ್ಜ್ ಮುಂಭಾಗದ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ವಿಷಯ ತಿಳಿಸಿ, ಸಿಬ್ಬಂದಿಯವರಾದ ಪಿಸಿ 141, 189, 180 ರವರು ಹಾಗು ಪಂಚರೊಂದಿಗೆ ಠಾಣೆಯ ಜೀಪಿನಲ್ಲಿ ಹೋಗಿ ಮೋಟಗಿ ಲಾಡ್ಜ್ ಸಮೀಪದಲ್ಲಿ ಜೀಪ ನಿಲ್ಲಿಸಿ ಲಾಡ್ಜ್ ಕಂಪೌಂಡ ಗೋಡೆಗೆ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಹಾಗು ಜಾಯಿಂಟ್ ಅಂಕಿಗೆ 1 ರೂಪಾಯಿಗೆ 80/-ರೂಪಾಯಿ ಕೊಡುತ್ತೇನೆ ಎಂದು ಕೂಗಿ ಹೇಳುತ್ತ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು 4-00 ಪಿ.ಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ 1) ನಗದು ಹಣ 18,500/- ರೂ.ಗಳು 2) ಒಂದು ಮಟಕಾ ನಂಬರ ಬರೆದ ಚೀಟಿ ಅ||ಕಿ||00=00 ರೂ.ಗಳು 3) ಒಂದು ಬಾಲ್ ಪೆನ್ ಅ||ಕಿ|| 00=00 ರೂ.ಗಳು, ಇವುಗಳನ್ನು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಒಪ್ಪಿಸಿದ್ದರಿಂದ ಗುನ್ನೆ ನಂಬರ 150/2017 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 68/2017 ಕಲಂ: 420 ಐಪಿಸಿ;- ದಿನಾಂಕ: 08/05/2017 ರಂದು 5-30 ಪಿಎಮ್ ಕ್ಕೆ ಶ್ರೀಮತಿ ಸೈಯದ ಅಹಮದಿ ಬಾನು @ ಸೈಯದ ಅಹೆಮೆದಿನ್ನಿಸಾ ಬೇಗಂ ಗಂಡ ಲೇಟ್ ಸೈಯದ ಶಾ ನ್ಯಾಮತುಲ್ಲಾ ಖಾದ್ರಿ 45, ಜಾ:ಮುಸ್ಲಿಂ, ಸಾ:ಮನೆ ನಂ. 24/76 ಮೊದಲನೆ ಮಹಡಿ ದರಗಾ ರೆಹಮಾನಿಯಾ ಮಳಖೇಡ ತಾ: ಸೇಡಂ ಜಿ:ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿದ ಅಜರ್ಿ ಹಾಜರಪಡಿಸಿದ್ದೇನಂದರೆ ನಮ್ಮ ಯಜಮಾನರು ಜೀವಂತ ಇದ್ದಾಗ ಶಹಾಪೂರ ತಾಲೂಕಿನ ಹೈಯ್ಯಾಳ (ಬಿ) ಸೀಮಾಂತರದಲ್ಲಿ ಸವರ್ೆ ನಂ. 147/ಈ ವಿಸ್ತಿರ್ಣ 3 ಎಕರೆ 33 ಗುಂಟೆ ಸ್ವಯಾಜರ್ಿತ ಕೃಷಿ ಜಮೀನು ಹೊಂದಿರುತ್ತಾರೆ. ಅದರಂತೆ ಬೇರೆ ಬೇರೆ ಊರುಗಳಲ್ಲಿ ಕೃಷಿ ಜಮೀನು ಮತ್ತು ಇತರ ಆಸ್ತಿಗಳನ್ನು ಹೊಂದಿದ್ದು ಇರುತ್ತದೆ. ನಮ್ಮ ಯಜಮಾನರ ಮೊದಲನೆ ಹೆಂಡತಿ ಸೈಯದಾ ಹಾಫಿಜಾ ಜಮಾಲ ಇವರು ತೀರಿಕೊಂಡಿದ್ದು, ಇವರಿಗೆ ಕೂಡಾ ಮಕ್ಕಳು ಇರುವುದಿಲ್ಲ. ದಿನಾಂಕ: 06/06/2005 ರಂದು ನಮ್ಮ ಯಜಮಾನರು ತೀರಿಕೊಂಡಿರುತ್ತಾರೆ. ನಮಗೂ ಮಕ್ಕಳು ಇರುವುದಿಲ್ಲ. ನಮ್ಮ ಯಜಮಾನರಿಗೆ ಖಾಸ ಅಣ್ಣತಮ್ಮಂದಿರು ಕೂಡಾ ಯಾರು ಇರುವುದಿಲ್ಲ. ಅವರ ಆಸ್ತಿಗೆ ನಾನೊಬ್ಬಳೆ ವಾರಸುದಾರಳು ಇರುತ್ತೇನೆ. ನಮ್ಮ ಯಜಮಾನರು ಜೀವಂತ ಇರುವವರೆಗೆ ಈ ಜಮೀನು ನಮ್ಮ ಸ್ವಾಧಿನದಲ್ಲಿ ಇದ್ದು, ತದನಂತರ ನಾನು ನನ್ನ ವೈಯಕ್ತಿಕ ಕಾರಣಗಳಿಂದ ಈ ಆಸ್ತಿಯ ಕಡೆ ಗಮನ ಹರಿಸದೆ ಇರುವುದನ್ನು ಸದುಪಯೋಗ ಪಡಿಸಿಕೊಂಡ ನಮಗೆ ಅಥವಾ ನಮ್ಮ ಕುಟುಂಬಕ್ಕೆ ಯಾವುದೇ ರೀತಿಯ ರಕ್ತ ಸಂಬಂಧ ಇರದ ಸೈಯದ ಶಾ ಮುಸ್ತಾಫ ಖಾದ್ರಿ ತಂದೆ ಸೈಯದ ಮುತರ್ುಜಾ ಖಾದ್ರಿ ಇವರು ದಿನಾಂಕ: 02/04/2007 ರಂದು ಮಾನ್ಯ ವಿಶೇಷ ತಹಶೀಲ್ದಾರರು ವಡಗೇರಾ ರವರಲ್ಲಿ ನಮ್ಮ ದೊಡ್ಡಪ್ಪನವರಾದ ಸೈಯದ ಶಾ ನ್ಯಾಮತುಲ್ಲಾ ಖಾದ್ರಿ ಸಾಹೇಬರು ಮಳಖೇಡ ಇವರು ಮೃತಪಟ್ಟಿರುತ್ತಾರೆ. ಮೃತನಿಗೆ ನಾನೇ ವಾರಸುದಾರನಿರುತ್ತೇನೆ. ಅವರಿಗೆ ಯಾವ ಸಂತಾನ ಇರುವುದಿಲ್ಲ ಮತ್ತು ಇವರ ಹೆಂಡತಿಯು ತೀರಿಹೋಗಿರುತ್ತಾಳೆ (ದೊಡ್ಡಮ್ಮನವರು) ಕಾರಣ ಮೃತರ ಹೆಸರು ಕಡಿಮೆ ಮಾಡಿ ನನ್ನ ಹೆಸರಿನಿಂದ ವಿರಾಸತ ಮಾಡಲು ಕೋರಿಕೆ ಎಂದು ನಾನು ಜೀವಂತ ಇದ್ದವಳಿಗೆ ಮೃತಪಟ್ಟಿರುತ್ತಾಳೆ ಎಂದು ಪತ್ರದಲ್ಲಿ ತೋರಿಸಿ, ಸುಳ್ಳು ಪತ್ರ ಸಲ್ಲಿಸಿ, ಯಾವುದೇ ಅವಶ್ಯ ದಾಖಲೆಗಳಾದ ವಂಶಾವಳಿ ಪತ್ರ ಮತ್ತು ಸೂಕ್ತ ಪಂಚನಾಮೆ ಇಲ್ಲದೆ ಜಮೀನನ್ನು ತನ್ನ ಹೆಸರಿನಿಂದ (ಮುಟೇಷನ) ವಗರ್ಾವಣೆ ಮಾಡಿಸಿಕೊಂಡು ಈ ಜಮೀನನ್ನು ತದ ನಂತರ ಶ್ರೀ ವ್ಹಿ. ಲೀಲಾಜೀರಾವ ತಂದೆ ವೆಂಕಟರಾವ ಎಂಬುವರಿಗೆ ಮಾರಾಟ ಮಾಡಿ ಹಣವನ್ನು ಪಡೆದುಕೊಂಡು ನಮಗೆ ಮೋಸ ಮಾಡಿರುತ್ತಾನೆ. ಕಾರಣ ನಾನು ಬದುಕಿರುವಾಗಲೇ ನನ್ನ ಗಂಡನಿಗೆ ಯಾರೂ ವಾರಸುದಾರರು ಇರುವುದಿಲ್ಲ ಮೃತಪಟ್ಟಿರುತ್ತಾರೆ. ಮೃತರಿಗೆ ನಾನೇ ವಾರಸುದಾರನಿರುತ್ತೇನೆ ಎಂದು ಸುಳ್ಳು ಪತ್ರವನ್ನು ಸಲ್ಲಿಸಿ, ನನ್ನ ಗಂಡನ ಆಸ್ತಿಯನ್ನು ತನ್ನ ಹೆಸರಿಗೆ ವಗರ್ಾವಣೆ ಮಾಡಿಸಿಕೊಂಡು ನಂತರ ಸದರಿ ಜಮೀನನ್ನು ತನ್ನ ವೈಯಕ್ತಿಕ ಲಾಭಕ್ಕಾಗಿ ಭಾರಿ ಮೊತ್ತಕ್ಕೆ ಮಾರಿಕೊಂಡು ನನಗೆ ಮೋಸ ಮಾಡಿರುತ್ತಾನೆ. ಆದ್ದರಿಂದ ನನಗೆ ಮೋಸ ಮಾಡಿರುವ ಸೈಯದ ಶಾ ಮುಸ್ತಾಫ ಖಾದ್ರಿ ತಂದೆ ಸೈಯದ ಮುತರ್ುಜಾ ಖಾದ್ರಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಜರ್ಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 68/2017 ಕಲಂ: 420 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 137/2017 ಕಲಂ:143.147.148.341.323.324.504.506.ಸಂ.149 ಐಪಿಸಿ ದಿನಾಂಕ:07-05-2017 ರಂದು 5:00 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ ದೇವಪ್ಪ ತಂದೆ ಭೀಮಣ್ಣ ಕೊಡವಿಬೋವಿ ವಯ|| 50 ವರ್ಷ ಉ|| ಒಕ್ಕಲತನ ಜಾ|| ಕಬ್ಬಲಿಗ ಸಾ|| ದೇವಿಕೇರಾ ತಾ|| ಶೊರಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದರ ಸಆರಾಂಶವೇನಂದರೆ     ನಮ್ಮ ಅಳಿಯನಾದ ಹಣಮಂತ ತಂದೆ ಭಿಮಣ್ಣ ಬುಡ್ಡಕಾಯಿ ಇವನು ಒಂದು ಟಂ,ಟಂ ಅಟೋ  ಬಾಡಿಗೆ ಹೋಡೆದು ಉಪಜಿವನ ಮಾಡುತ್ತಿರುತ್ತಾನೆ. ಸದರಿ ಅಟೋವನ್ನು ದೇವಿಕೇರಾದಿಂದ ರಂಗಂಪೇಟಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವದು ಮತ್ತು ತಂದು ಬಿಡುವದು ಮಾಡುತ್ತಿರುತ್ತಾನೆ. ಹಿಗಿದ್ದು ಮೋನ್ನೆ ದಿನಾಂಕ: 04/05/2017 ರಂದು ಮದ್ಯಾಗ್ನ 3.00 ಗಂಟೆಗೆ ನನ್ನ ಅಳಿಯ ಲಕ್ಷ್ಮಪೂರ ಕ್ರಾಸ ಹತ್ತಿರ ಮರೆಪ್ಪ ತಂದೆ ತಿಪ್ಪಣ್ಣ ಅಡ್ಡೆದವರ ಈತನು ನಮ್ಮ ಅಳಿಯನ ಅಟೋದಲ್ಲಿ ದೇವಿಕೇರಾಕ್ಕೆ ಹೋಗಲು ಕುಳಿತಿದ್ದನು. ಅದೆ ಸಮಯಕ್ಕೆ ಮೈಲಾರಪ್ಪ @ ಮೇಲ ತಂದೆ ಭಿಮಣ್ಣ ಅಡ್ಡೆದವರು ಈತನು ಬಂದು ಒಂದು ಸೈಕಲ ಮೋಟಾರ ಮೇಲೆ ಮರೆಪ್ಪನ್ನು ಕೂಡಿಸಿಕೊಂಡು ಹೋದನು. ಇದೆ ವಿಷಯಕ್ಕೆ ನಮ್ಮ ಅಳಿಯನಿಗು ಮತ್ತು ಮೈಲಾರಪ್ಪನಿಗೂ ಬಾಯಿ ಮಾತಿನ ತಕರಾರು ಆಗಿದ್ದು ಇರುತ್ತದೆ. ನಂತರ ಸದರಿ ಮೇಲೆ ಹೇಳಿರುವಂತೆ ವಿಷಯಕ್ಕೆ ಸಂಬಂದಿಸಿದಂತೆ ದಿನಾಂಕ: 05/05/2017 ರಂದು ಮದ್ಯಾಹ್ನ 1.30 ಪಿಎಂ ಕ್ಕೆ ನಮ್ಮ ಅಳಿಯನ ಟಂ ಟಂ ಅಟೋದಲ್ಲಿ ನಮ್ಮ ಅಳಿಯ ಮತ್ತು  ಪರಷುರಾಮ ತಂದೆ ಹಣಮಂತ ಕೊಡವಿಬೋವಿ, ಅಯ್ಯಪ್ಪ ತಂದೆ ಭೀಮಣ್ಣ ಕೊಡವಿಬೋವಿ ಮೂವರು ಹಾಗು ನಾನು ಕೂಡಿ ದೇವಿಕೇರಾದಿಂದ ರಂಗಂ ಪೇಟ ಸಂತೆಗೆ ಬರುತ್ತಿರುವಾಗ ಮೈಲಾರಪ್ಪ ಈತನ ಮನೆಯ ಮುಂದೆ 1. ಮೈಲಾರಪ್ಪ @ ಮೇಲ ತಂದೆ ಭಿಮಣ್ಣ ಅಡ್ಡೆದವರ 2. ಯಲ್ಲಪ್ಪ ತಂದೆ ಭೀಮಣ್ಣ ಅಡ್ಡೆದವರ 3. ಮರೆಪ್ಪ ತಂದೆ ತಿಪ್ಪಣ್ಣ ಅಡ್ಡೆದವರ 4. ಹಣಮಂತ ತಂದೆ ಭೀಮಣ್ಣ ಅಡ್ಡೆದವರ 5. ಭೀಮಣ್ಣ ತಂದೆ ಕರೆಪ್ಪ 6. ಯಲ್ಲಪ್ಪ ತಂದೆ ದೇವಿಂದ್ರಪ್ಪ ಕಚಕನೂರ 7. ನಾಗಪ್ಪ ತಂದೆ ನಿಂಗಪ್ಪ ವಾಳದ 8. ಜಟ್ಟೆಪ್ಪ ತಂದೆ ದೇವಿಂದ್ರಪ್ಪ ಎಲ್ಲರೂ ಸಾ|| ರಂಗಂಪೇಟ ಹಾಗೂ 9. ಯಲ್ಲಪ್ಪ ತಂದೆ ಶಿವಪ್ಪ ಕಟ್ಟಿಗಲ 10. ದೇವಪ್ಪ ತಂದೆ ಶಿವಪ್ಪ ಕಟಿಗಲ್ಲ 11. ಅಯ್ಯಪ್ಪ ತಂದೆ ನಿಂಗಪ್ಪ ಕಟ್ಟಿಗಲ 12. ಲಕ್ಷ್ಮಣ ತಂದೆ ಯಲ್ಲಪ್ಪ ಆಡಿನ 13. ಯಲ್ಲಪ್ಪ ತಂದೆ ಹಯ್ಯಾಳಪ್ಪ ಕಟಿಗಲ ಸಾ|| ಎಲ್ಲರು ದೇವಿಕೇರಾ ತಾ|| ಶೋರಾಪೂರ ಎಲ್ಲರು ಬಂದು ನಮ್ಮ ಅಳಿಯನ ಅಟೋವನ್ನು ತಡೆದು ನಿಲ್ಲಿಸಿ ನಿನ್ನೆ ದಿನಾಂಕ 04/05/2017 ರಂದು ನಮ್ಮೋಂದಿಗೆ ತಕರಾರು ಮಾಡುತ್ತಿಯಾ ಸೂಳೆ ಮಗನೆ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು ಹಣಮಂತ ಈತನಿಗೆ ಮರೆಪ್ಪ ತಂದೆ ತಿಪ್ಪಣ್ಣ ಅಡ್ಡೆದವರ ಈತನು ಕಟ್ಟಿಗೆ , ಕಲ್ಲಿನಿಂದ ಹೋಡೆದು ಗುಪ್ತಗಾಯ ಪಡಿಸಿದನು ಪರಷುರಾಮನಿಗೆ  ಮೈಲಾರಪ್ಪ ಮತ್ತು ಅಯ್ಯಪ್ಪ ತಂದೆ ನಿಂಗಪ್ಪ ಕಟ್ಟಿಗಲ ಇಬ್ಬರು ಕಟ್ಟಿಗೆಯಿಂದ ತಲೆಗೆ ಹೊಡೆದರು. ಅಯ್ಯಪ್ಪ ತಂದೆ ಭಿಮಣ್ಣ ಈತನಿಗೆ ಮೈಲಾರಪ್ಪ ತಂದೆ ಭೀಮಣ್ಣ ಅಡ್ಡೆದ ಮತ್ತು ಹಣಮಂತ ತಂದೆ ಭೀಮಣ್ಣ ಅಡ್ಡೆದವರು, ಜಟ್ಟೆಪ್ಪ ತಂದೆ ದೇವಿಂದ್ರಪ್ಪ ಕೂಡಿ ಕಟ್ಟಿಗೆ, ಕಲ್ಲಿನಿಂದ ತಲೆಗೆ ಹೋಡೆದು ರಕ್ತಗಾಯ ಮಾಡಿರುತ್ತಾರೆ, ಮತ್ತು ಈ ಮೇಲೆ ತೋರಿಸಿದ ಎಲ್ಲರು ಕೈಯಿಂದ ಕಟ್ಟಿಗೆಯಿಂದ ಮನ ಬಂದಂತೆ ಹೋಡೆದರು. ಅದೆ ಸಮಯಕ್ಕೆ ಸಂತೆ ಮಾಡಿಕೊಂಡು ದೇವಿಕೆರಾಕ್ಕೆ ಹೋಗುತ್ತಿದ್ದ 1. ಯಂಕಪ್ಪ ತಂದೆ ಭೀಮಣ್ಣ ಕೊಡವಿಬೋವಿ 2. ಬಸಪ್ಪ ತಂದೆ ಹಣಮಂತ ಕೊಡವಿಬೋವಿ ಸಾ|| ಇಬ್ಬರು ದೇವಿಕೇರಾ ಜಗಳ ನೋಡಿ ಜಗಳ ಬಿಡಿಸಿದರು. ನಂತರ ಎಲ್ಲರೂ ಸೂಳೆ ಮಕ್ಕಳೆ ನಿವು ಈಗ ಉಳದಿದ್ದಿರಿ ಇನ್ನೋಮ್ಮೆ ನಮ್ಮಗೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು.ಈ ಬಗ್ಗೆ ನಾನು ನಮ್ಮ ಅಳಿಯ ಹಣಮಂತನನ್ನು ಮತ್ತು ಪರಷುರಾಮ ತಂದೆ ಹಣಮಂತ ಕೊಡವಿಬೋವಿ. ಅಯ್ಯಪ್ಪ ತಂದೆ ಭಿಮಣ್ಣ ಕೊಡವಿ ಬೋವಿ ಮೂರು ಜನರನ್ನು ಸಕರ್ಾರಿ ಆಸ್ಪತ್ರೆ ಶೊರಾಪೂರಕ್ಕೆ ಉಪಚಾರಕ್ಕಾಗಿ ಸೇರಿಕೆ ಮಾಡಿ ಅಲ್ಲಿ ವೈದ್ಯರ ಸಲಹೆ ಮೇರೆಗೆ ಸಕರ್ಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿ ಅಲ್ಲಿ ಉಪಚಾರ ಕೊಡಿಸಿ ಇಂದು ದಿನಾಂಕ 07/05/2017 ರಂದು ತಡವಾಗಿ ಠಾಣೆಗೆ ಬಂದು ಈ ಅಜರ್ಿಯನ್ನು ಕೊಟ್ಟಿದ್ದು ನಮ್ಮ ಅಳಿಯ ಹಣಮಂತ ಮತ್ತು ಪರಷುರಾಮ, ಅಯ್ಯಪ್ಪ ಇವರಿಗೆ ಹೋಡೆ ಬಡೆ ಮಾಡಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ
 

BIDAR DISTRICT DAILY CRIME UPDATE 09-05-2017

                                                                   
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-05-2017

 ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ. 75/17 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 08/05/2017 ರಂದು ಸಾಯಂಕಾಲ 1600 ಗಂಟೆಗೆ   ವೀರಶೆಟ್ಟಿ ಎ.ಎಸ್.ಐ ರವರು ಠಾಣೆಯಲ್ಲಿದ್ದಾಗ ಒಂದು ಖಚಿತ ಭಾತ್ಮಿ ಬಂದಿದ್ದೆನೆಂದರೆ ಚಿಟಗುಪ್ಪಾ ಪಟ್ಟಣದ ಸರದಾರ ವೃತ್ತದ ಹತ್ತಿರ ಸಾರ್ವಜನಿಕರ ಸ್ಥಳದದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಅವರಿಗೆ ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80 ರೂಪಾಯಿ ನೀಡುತ್ತೇನೆ ಅಂತ ಹೇಳಿ ಸರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿ ಅವರಿಗೆ ಮಟಕಾ ಚಿಟಿ ಬರೆದುಕೋಡುತ್ತಿದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಮಕಬೂಲ ತಂದೆ ಫತ್ರುಸಾಬ ಕೂಲಿ ವಯ 48 ವರ್ಷ ಜಾತಿ ಮುಸ್ಲಿಂ ಉದ್ಯೋಗ ಕೂಲಿ ಕೆಲಸ ಸಾ|| ಫಕಿರ ತಕ್ಕಿಯಾ ಗಲ್ಲಿ ಇತನಿಗೆ ದಸ್ತಗಿರಿ ಮಾಡಿ ಅವನ ಹತ್ತಿರ ಒಂದು ಪೇನ, ಮೂರು ಮಟಕಾ ಚಿಟಗಳು ಮತ್ತು ನಗದು ಹಣ 1970/- ರೂ. ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ:08/05/2017 ರಂದು 1645 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ   ಆಸ್ಪತ್ರೆಗೆ ಭೇಡಿ ನೀಡಿ  ಸಿಡಿಲು ಬಡಿದು ಮೃತ ಎಮ್.ಡಿ ಇರ್ಫಾನ ತಂದೆ ಎಮ್.ಡಿ ಮೈನೊದ್ದಿನ ವಯ:19 ವರ್ಷ ಜಾ:ಮುಸ್ಲಿಮ ಉ:ಕೂಲಿ ಸಾ:ಮಳಚಾಪೂರ ತಾ:ಭಾಲ್ಕಿ ಈತನ ಶವವನ್ನು ಪರಿಶಿಲಿಸಿ ಹಾಜರಿದ್ದ ಶ್ರೀಮತಿ ಬಿಪಾಷಾ ಗಂಡ ಎಮ್.ಡಿ ಮೈನೊದ್ದಿನ ಜ್ಯಾಂತೆ ಸಾ:ಮಳಚಾಪೂರ ರವರು  ಲಿಖಿತ ದೂರು ಅರ್ಜಿ ಸಲ್ಲಿಸಿದ್ದನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ :  ಫಿರ್ಯಾದಿ ಗಂಡ ಮೈನೊದ್ದಿನ ಮಳಚಾಪೂರ ಗ್ರಾಮದ ವೈಜಿನಾಥ ತಂದೆ ಗುಂಡೆರಾವ ಧನ್ನೂರೆ ರವರ ಹೊಲವನ್ನು ಪಾಲಕ್ಕಾಗಿ ಮಾಡಿಕೊಂಡಿದ್ದು ಇರುತ್ತದೆ. ಹೀಗಿರುವಲ್ಲಿ ದಿನಾಂಕ:08/05/2017 ರಂದು 1530 ಗಂಟೆಗೆ ಫೀರ್ಯಾದಿ ಮತ್ತು ಅವರ ಗಂಡ ಮೈನೊದ್ದಿನ ಹಾಗೂ  4ನೇ ಮಗ ಎಮ್.ಡಿ ಇರ್ಫಾನ ವಯ:19 ವರ್ಷ ರವರು ಕುಡಿ ಹೋಲದಲ್ಲಿ ಕೆಲಸ ಮಾಡುತ್ತಿರುವಾಗ ಗಾಳಿ, ಧೂಳಿ ಪ್ರಾರಂಭವಾಗಿ ಮಳೆ ಬರುತ್ತಿರುವಾಗ ಒಮ್ಮೇಲೆ  ಇವರ ಮಗನ ಎದೆಯ ಮೇಲೆ ಸಿಡಿಲು ಬಡೆದು ಎದೆಯ ಮಧ್ಯಭಾಗದಿಂದ ಕೇಳ ಹೊಟ್ಟೆಯ ವರೆಗೆ ಉದ್ದನೆಯ ಸುಟ್ಟಗಾಯವಾಗಿದ್ದು ,  ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಒಂದು ಖಾಸಗಿ ಆಟೋದಲ್ಲಿ ತರುತ್ತಿರುವಾಗ ದಾರಿ ಮಧ್ಯೆ ಗುರುನಾನಕ ಗೇಟ ಬೀದರ ಹತ್ತಿರ ಫಿರ್ಯಾದಿ ಮಗ ಅಂದಾಜು 1605 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

ಹೋಕ್ರಾಣಾ ಪೊಲೀಸ್ ಠಾಣೆ ಗುನ್ನೆ ನಂ. 49/2017 ಕಲಂ 147, 148, 341, 323, 324, 504, 307 ಜೊತೆ 149  ಐಪಿಸಿ ;-

ದಿನಾಂಕ 08-05-2017 ರಂದು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಗುರುಪಾದಪ್ಪಾ ರವರು ಧಾಬಕಾ ಗ್ರಾಮದಲ್ಲಿ ರಾಜಕುಮಾರ ಔರಾದೆ ರವರ ಹೊಲಕ್ಕೆ ಹೋಗಿ ಕೊಡಲಿ ಕಾವು ಮಾಡಿಕೊಂಡು ತಮ್ಮ ಹೊಲದ ಮುಖಾಂತರ ಮನೆಗ ಬರುತ್ತಿರುವಾಗ   ಗ್ರಾಮದ 1] ಮಾರುತಿ ತಂದೆ ಗ್ಯಾನೋಬಾ ಸಿಂಧೆ 2] ಪಪ್ಪು ತಂದೆ ಮಾರುತಿ ಸಿಂಧೆ 3] ವೈಜಿನಾಥ ತಂದೆ ಮಾರುತಿ ಸಿಂಧೆ 4] ನವನಾಥ ತಂದೆ ಮಾರುತಿ ಸಿಂಧೆ 5] ಮರುಬಾಯಿ ಗಂಡ ಮಾರುತಿ ಸಿಂಧೆ 6] ರಂಜನಾ ಗಂಡ ನವನಾಥ ಸಿಂಧೆ ಮತ್ತು 7] ಹೇಮಾ ಗಂಡ ಪಪ್ಪು ಸಿಂಧೆ ರವರೆಲ್ಲರೂ 1630 ಗಂಟೆ ಸುಮಾರಿಗೆ ತಮ್ಮ ಕೈಗಳಲ್ಲಿ ಬಡಿಗೆ ಕತ್ತಿ ಹಿಡಿದುಕೊಂಡು ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿ ಎದುರಿಗೆ ಬಂದು   ಮುಂದೆ ಹೋಗದಂತೆ ಅಕ್ರಮವಾಗಿ ತಡೆದು ಇವರಲ್ಲಿ ಮಾರುತಿ ಸಿಂಧೆ ಮತ್ತು ಪಪ್ಪು ಸಿಂಧೆ ಇಬ್ಬರೂ ಸೇರಿ ನಮ್ಮ ಹೊಲದ ಕಡೆಗೆ ಏಕೆ ಬರುತ್ತಿದ್ದಿ ಭೋಸಡಿ ಮಗನೆ ಅಂತಾ ಬೈಯುವಾಗ ಫಿರ್ಯಾದಿಯು ಅವರಿಗೆ ನಿಮ್ಮ ಹೊಲ ಎಲ್ಲಿದೇ ಇದು ನಮ್ಮ ಹೊಲ ಇದೆ ಅಂತಾ ಅಂದಾಗ ಮಾರುತಿ ಇತನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಬಡಿಗೆಯಿಂದ  ತಲೆಯ ಹಿಂಬದಿಯಲ್ಲಿ ಹೊಡೆದು ರಕ್ತಗಾಯಪಡಿಸಿದನು. ಪಪ್ಪು ಸಿಂಧೆ ಇತನು ತನ್ನ ಕೈಯಲ್ಲಿದ್ದ ಕಮ್ಮ ಕತ್ತಿಯಿಂದ ನನ್ನ ಎಡಗೈ ಮೋಳಕೈ ಮೇಲೆ, ಮೋಳಕೈ ಹತ್ತಿರ ಹೊಡೆದು ಭಾರಿ ರಕ್ತಗಾಯಪಡಿಸಿದನು. ಮತ್ತು ವೈಜಿನಾಥ ಸಿಂಧೆ ಇತನು ಮಾರುತಿ ಸಿಂಧೆ ಇವರ ಕೈಯಲ್ಲಿದ್ದ ಬಡಿಗೆಯನ್ನು ಕಸಿದುಕೊಂಡು ಎರಡು ಮೋಳಕಾಲು ಮೇಲೆ ಹೊಡೆದು ಕಂದುಗಟ್ಟಿದ ಗಾಯಪಡಿಸಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಹೋಕ್ರಾಣಾ ಪೊಲೀಸ್ ಠಾಣೆ ಗುನ್ನೆ ನಂ. 50/17 ಕಲ 323, 504, 354 ಐಪಿಸಿ ಮತ್ತು 3(1) (10) ಎಸ್.ಸಿ/ಎಸ್.ಟಿ. ಕಾಯ್ದೆ  1989 :-

ದಿನಾಂಕ 08-05-2017 ರಂದು 1630  ಗಂಟೆ ಸುಮಾರಿಗೆ ಫಿರ್ಯಾದಿ ಮಾರುತಿ ತಂದೆ ಗ್ಯಾನೊಬಾ ಸಿಂಧೆ ಸಾ: ಧಾಬಕಾ ರವರ ನೀಡಿದ ದೂರಿನ ಸಾರಾಂಶವೆನೆಂದರೆ ಇವರ ಮಗ ಪಪ್ಪು, ವೈಜಿನಾಥ,  ಹೆಂಡತಿ ಮರುಬಾಯಿ,  ಸೋಸೆ ರಂಜನಾ ಸಿಂಧೆ ಮತ್ತು ಹೇಮಾ ಸಿಂಧೆ ರವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಮಲ್ಲಿಕಾರ್ಜುನ ಸೂಲಪಲ್ಲೆ ಇತನು ಬಂದು '' ಏ ಮಾದೀಗ ಭೋಸಡಿ ಮಕ್ಕಳೆ ನಮ್ಮ ಹೋಲದಲ್ಲಿ ಏಕೇ ಕೆಲಸ ಮಾಡುತ್ತಿದೀರಿ ಅಂತಾ ಬೈಯುತ್ತಿರುವಾಗ ಫಿರ್ಯಾದಿಯು ಆತನಿಗೆ ''10 ವರ್ಷಗಳ ಹಿಂದೆ ನಮ್ಮ ಹತ್ತಿರ 2 ಲಕ್ಷ 10 ಸಾವಿರ  ರೂಪಾಯಿ ತೆಗೆದುಕೊಂಡು ನಮಗೆ ಹೊಲ ಮಾರಾಟ ಮಾಡಿ ಸದರಿ ಹೊಲ ನಮ್ಮ ಹೆಸರಿಗೆ ಮಾಡಕೊಡದೇ ಸತಾಯಿಸುತ್ತಾ ಬಂದು ಇವಾಗ  ಸದರಿ ಜಮಿನು ನಮಗೆ ಸಾಗುವಳಿ ಮಾಡಕೊಳ್ಳಲು ಕೊಟ್ಟಿದ್ದು ಇರುತ್ತದೆ. ಅಂತಾ ಅಂದಾಗ ಮಲ್ಲಿಕಾರ್ಜುನ ಸೂಲಪಲ್ಲೆ ಇತನು ಸುಮಾರು 10 ವರ್ಷಗಳ ಹಿಂದಿನಿಂದ ನಮ್ಮ ಹೊಲವನ್ನು ಸಾಗುವಳಿ ಮಾಡಲಿ ಕೋಟ್ಟಿದ್ದು ನಮ್ಮ ಹೊಲ 3 ಎಕರೆ 3 ಗುಂಟೆ ಜಮೀನು ನೀವು ಸಾಗುವಳಿ ಮಾಡುತ್ತಾ ಬಂದಿರುತ್ತೀರಿ ನಿಮಗೆ ನಾನು ಯಾವಾಗ ಮಾರಾಟ ಮಾಡಿರುತ್ತೇನೆ ಅಂತಾ ಅವಾಚ್ಯವಾಗಿ ಬೈದು ತನ್ನ ಬಲಗೈಯಿಂದ ನನ್ನ ಬೆನ್ನಲ್ಲಿ ಹೊಡೆದು ಗುಪ್ತಗಾಯ ಪಡಿಸಿದನು. ನನ್ನಹೆಂಡತಿ ಬಿಡಸಿಲು ಬಂದಾಗ ಅವಳಿಗೆ ಮಲ್ಲಿಕಾರ್ಜುನ ಸೂಲಪಲ್ಲೆ ಇತನು ತನ್ನ ಬಲಯಗೈಯಿಂದ ನನ್ನ ಹೆಂಡತಿ ಮರುಬಾಯಿ ಇವಳ ಎಡಗಡೆ ಎದೆಯಲ್ಲಿ, ಎಡಗಡೆ ರೊಂಡಿಗೆ, ಎಡಗಡೆ ಫಕಳಿಯಲ್ಲಿ ಹೊಡೆದು ಗುಪ್ತಗಾಶಯಪಡಿಸಿದನು. ಆವಾಗ ನನ್ನನ ಸೊಸೆ ಹೇಬಾಯಿ ಮತ್ತು ರಂಜನಾಬಾಯಿ ಇಬ್ಬರೂ ಜಗಳವನ್ನು ನೋಡಿ ಮಧ್ಯದಲ್ಲಿ ಬಂದಾಗ ಮಲ್ಲಿಕಾರ್ಜುನ ಸೂಲಪಲ್ಲೆ ಇತನು ನಮ್ಮ ಎಲ್ಲರಿಗೂ ಸಹ ಕೈಯಿಂದೆ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಫಿರ್ಯಾದಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Kalaburagi District Reported Crimes

ಸಿಡಿಲು ಬಡಿದು ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 08/05/2017 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಆಗ ನನ್ನ ತಂದೆ ಕಲ್ಲಣ್ಣಾ ಇವರು ನಮ್ಮ ತೋಟದ ಹೋಲಾ ಸರ್ವೆ ನಂ 08 ನೇದ್ದಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದರು. ಸ್ವಲ್ಪ ಸಮಯದ ನಂತರ ನೈಸರ್ಗಿಕ ವಿಕೋಪದಲ್ಲಿ ಬದಲಾಣೆಯಾಗಿ ವಿಪರಿತ ಗಾಳಿ ಮತ್ತು ಸಿಡಿಲು ಮಿಂಚು ಆಗುತ್ತಿದ್ದರಿಂದ್ದ ನಾನು ಕೂಡಾ ನಮ್ಮ ಹೋಲಕ್ಕೆ ಹೋಗಿ ಹೋಲದಲ್ಲಿದ್ದ ಎಮ್ಮೆಗಳಿಗೆ ಮೇವು ಹಾಕಿ ಕರೆಂಟ ಮೋಟಾರ ಬಂದ ಮಾಡಿ ಹಾಗೆಯೆ ಹೋಲದಲ್ಲಿ ನಡೆದುಕೊಂಡು ನಮ್ಮ ಹೋಲದಲ್ಲಿರುವ ಹುಣಸೆ ಗಿಡದ ಕಡೆಗೆ ಬಂದಾಗ ಆಗ ಸದರಿ ನನ್ನ ತಂದೆ ಕಲ್ಲಣ್ಣಾ ಇವರು ಹುಣಸೆ ಗಿಡದ ಕೆಳೆಗೆ ಬಿದ್ದಿದ್ದರು ಹತ್ತಿರ ಹೋಗಿ ನೋಡಲಾಗಿ ಅವರಿಗೆ ಸಿಡಿದು ಬಡಿದು ಎಡ ಮಗ್ಗಲಿಗೆ, ಬೆನ್ನಿಗೆ ಸುಟ್ಟಗಾಯ ಮತ್ತು ಎಡಕಾಲು ತೋಡೆಗೆ ಸುಟ್ಟು ಕಪ್ಪಾಗಿದ್ದು ನನ್ನ ತಂದೆಗೆ ಮಾತಾಡಿಸಲು ಮಾತಾಡದೇ ಬೆಹೋಸ ಆಗಿದ್ದರು ಗಾಬರಿಗೊಂಡು ನಾನು ಒಂದೇ ಸವನೇ ಚೀರಾಡುತ್ತಿದ್ದಾಗ ಆಗ ನಮ್ಮ ಗ್ರಾಮದ ದೇವಾನಂದ ಬಬಲಾದ, ಅಹೆಮ್ಮದ ಅಲಿ, ಈರಣ್ಣಾ ಲೋಡ್ಡನ್, ಸೈಯ್ಯದ ಚಾವುಸ್ ಇವರುಗಳು ಬಂದಿದ್ದು ನಾವೆಲ್ಲರೂ ಕೂಡಿಕೊಂಡು ಯಾವುದೋ ಒಂದು ಆಟೋದಲ್ಲಿ ನನ್ನ ತಂದೆಯವರಿಗೆ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಜಿರಾಯು ಆಸ್ಪತ್ರೆಗೆ ಒಯ್ಯುವಾಗ ಆಗ ಅಲ್ಲಿನ ವೈದ್ಯರು ನನ್ನ ತಂದೆಯವರಿಗೆ ನೋಡಿ ಸದರಿಯವನು ಈಗಾಗಲೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಕಲ್ಲಣ್ಣಾ ಜಿಡಗಿ ಸಾ:ಸಿಂದಗಿ (ಬಿ) ತಾ:ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
,ಶಾಹಾಬಾದ ನಗರ ಠಾಣೆ : ಶ್ರೀ ಶಿವರಾಜ ತಂದೆ ತಮ್ಮಣ್ಣ ಬಜಂತ್ರಿ ಸಾ: ಹೊನಗುಂಟಾ ಇವರು ಮತ್ತು ಆತನ ಗೆಳೆಯನಾದ ರವಿ ತಂದೆ ರಾಜು ಬಂಜತ್ರಿ ಇಬ್ಬರೂ ಕೂಡಿ ನಿನ್ನೆ ದಿನಾಂಕ: 07/05/2017 ರಂದು ಮುಂಜಾನೆ ಮೋಟಾರ ಸೈಕಲ ನಂಬರ ಕೆ.ಎ.01 ಇ ಎನ್ 6068 ನೇದ್ದರ ಮೇಲೆ ಚಾಮನೂರ ಗ್ರಾಮಕ್ಕೆ ಬ್ಯಾಂಡ ಬಾಜಿ ಬಾರಿಸಲು ಹೋಗಿ ಮರಳಿ ಇಬ್ಬರೂ ಕೂಡಿ ಶಹಾಬಾದ ಮಾರ್ಗವಾಗಿ ಹೊನಗುಂಟಾಕ್ಕೆ ಹೋಗುವಾಗ ನಮ್ಮೂರ ಅಶೋಕ ತಂದೆ ದುರ್ಗಪ್ಪ 2) ತಮ್ಮಣ್ಣ ತಂದೆ ಮರೇಪ್ಪ 3) ಕೃಷ್ಣ ತಂದೆ ಅಶೋಕ ಇವರು ಸೀಮೆ ಮರಗಮ್ಮ ಗುಡಿಯ ಹತ್ತಿರ ರಾತ್ರಿ 9-30 ಗಂಟೆಗೆ  ನಿಂತಾಗ  ನಾವು ಕೂಡ ಅಲ್ಲೆ ಮಾತನಾಡುತ್ತಾ ನಿಂತುಕೊಂಡಾಗ ಅದೇ ವೇಳೆಗೆ ಹೊನಗುಂಟಾ ಕಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮಾತನಾಡುತ್ತಾ ನಿಂತಾ ನಮ್ಮ ಎಲ್ಲಾರಿಗೆ ಡಿಕ್ಕಿ ಪಡಿಸಿದಾಗ ನಮಗೆ ಎಲ್ಲಾರಿಗೂ ಭಾರಿ ರಕ್ತಗಾಯಾ ಮತ್ತು ಗುಪ್ತಗಾಯಾಗಳಾಗಿರುತ್ತವೆ. ಟ್ರಾಕ್ಟರ ಮುಂದೆ ಹೋಗಿ  ಪಲ್ಟಿಯಾಗಿ ಬಿದ್ದಾಗ ಚಾಲಕ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಆಗ ಗಾಯ ಪೆಟ್ಟು ಹೊಂದಿದ್ದ ನಮಗೆ ಉಪಚಾರ ಕುರಿತು ನಮಗೆ ಪರಿಚಿಯದ ಆಶಾಪ್ಪ ತಂದೆ ಮರೇಪ್ಪ 2) ಚಂದ್ರಾಮ ತಂದೆ ಶರಣಪ್ಪ ಇವರು ಕೂಡಿ 108 ಅಂಬುಲೇನ್ಸನಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾರೆ ಟ್ರಾಕ್ಟರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ವರದಕ್ಷಣೆ ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಕಲಾವತಿ ಗಂಡ ಮಾದಣ್ಣಾ ಭೂತೆ, ಸಾಃ ಕೋಹಿನೂರ ಗ್ರಾಮ, ತಾಃ ಬಸವ ಕಲ್ಯಾಣ, ಜಿಃ ಬೀದರ ಇವರು ನನ್ನ ಕಿರಿಯ ಮಗಳಾದ ಶರಣಮ್ಮ ಇವಳಿಗೆ ಈಗ ಸುಮಾರು 04 ವರ್ಷಗಳ ಹಿಂದೆ ಆಳಂದ ತಾಲೂಕಿನ ಕೇರಿ ಅಂಬಲಗಾ ಗ್ರಾಮದ ಭೀಮಶ್ಯಾ ಧರಿ ಎಂಬುವವರ ಮಗನಾದ ಪ್ರಕಾಶ ಎಂಬುವವರೊಂದಿಗೆ ಮದುವೆ ನಿಶ್ಚಯ ಮಾಡಿ ಮದುವೆ ಕಾಲಕ್ಕೆ ನನ್ನ ಮಗಳಿಗೆ ವಧು ದಕ್ಷಿಣೆಯಾಗಿ 50 ಸಾವಿರ ನಗದು ಹಣ, ಎರಡುವರೆ ತೊಲೆ ಬಂಗಾರ ಹಾಗೂ ಮಂಚ, ಗಾದಿ, ತಿಜೋರಿ ಮತ್ತು ಗೃಹಬಳಕೆ ಸಾಮಾನುಗಳು ಕೊಡಬೇಕೆಂದು ಮಾತುಕತೆಯಾಗಿದ್ದು, ಅದರಂತೆ ಮೇಲ್ಕಂಡ ಹಣ, ಬಂಗಾರ ಮತ್ತು ವಸ್ತುಗಳನ್ನು ಕೊಟ್ಟು ಸಾಂಪ್ರದಾಯಿಕವಾಗಿ ವರನ ಮನೆಯ ಮುಂದೆ ಮದುವೆ ಮಾಡಿಕೊಟ್ಟಿದ್ದು ಅವಳಿಗೆ ಈಗ ಮೂರು ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ ಮಗಳ ಮದುವೆಯಾದ ಸುಮಾರು 02 ವರ್ಷಗಳವರೆಗೆ ಅವಳ ಗಂಡ, ಅತ್ತೆ-ಮಾವ, ನಾದಿನಿ ಹಾಗೂ ಮೈದುನರು ಅವಳನ್ನು ಚೆನ್ನಾಗಿ ನೋಡಿಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಎಂದು ಅವಳಿಗೆ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರಿಂದ ಅವರ ಕಿರುಕುಳ ಸಹಿಸದೆ ಈಗ ಒಂದು ವರ್ಷದ ಹಿಂದೆ ನನ್ನ ಮಗಳು ಶರಣಮ್ಮಳು ತವರು ಮನೆಗೆ ಬಂದು ವಾಸವಾಗಿದ್ದಾಗ ನಾನು, ನನ್ನ ಮಕ್ಕಳಾದ ಅಂಬಾರಾಯ, ಅಣ್ಣಾರಾಯ ಹಾಗೂ ಮೊಮ್ಮಗನಾದ ಶರಣಬಸವ ಮತ್ತು ನಮ್ಮೂರಿನ ದೇವಿದಾಸ ತಂದೆ ಲಾಡಪ್ಪ ಸಜ್ಜನ, ರಾಜೇಂದ್ರ ತಂದೆ ಭೀಮಶ್ಯಾ ಹೊಸಮನಿ ರವರುಗಳು ಕೂಡಿಕೊಂಡು ನನ್ನ ಮಗಳನ್ನು ಕರೆದುಕೊಂಡು ಕೇರಿ ಅಂಬಲಗಾ ಗ್ರಾಮಕ್ಕೆ ಬಂದು ನನ್ನ ಮಗಳ ಗಂಡನ ಮನೆಯವರ ಇಚ್ಛೇಯಂತೆ ಹಾಗೂ ಮಗಳ ನೆಮ್ಮದಿಯ ಜೀವನಕ್ಕಾಗಿ ಅವಳ ಗಂಡ ಪ್ರಕಾಶ, ಮಾವ ಭೀಮಶ್ಯಾ ತಂದೆ ಲಕ್ಕಪ್ಪ ಧರಿ, ಅತ್ತೆ ರಂಗುಬಾಯಿ ಗಂಡ ಭೀಮಶ್ಯಾ ಧರಿ, ನಾದಿನಿ ಪ್ರತಿಭಾ ತಂದೆ ಭೀಮಶ್ಯಾ ಧರಿ, ಮೈದುನರಾದ ಪ್ರಶಾಂತ ತಂದೆ ಭೀಮಶ್ಯಾ ಧರಿ, ರಾಜು ತಂದೆ ಭೀಮಶ್ಯಾ ಧರಿ ರವರುಗಳಿಗೆ 25 ಸಾವಿರ ರೂಗಳು ಹಾಗೂ 01 ತೊಲೆ ಬಂಗಾರ ಕೊಟ್ಟು ನನ್ನ ಮಗಳಿಗೆ ತೊಂದರೆ ಕೊಡದ ಹಾಗೆ ಸರಿಯಾಗಿ ನೋಡಿಕೊಳ್ಳುವಂತೆ ಹೇಳಿ ನನ್ನ ಮಗಳನ್ನು ಗಂಡನ ಮನೆಯಲ್ಲಿ ಬಿಟ್ಟು ಬಂದಿರುತ್ತೇವೆ. ಆದರೂ ಸಹ ನನ್ನ ಮಗಳ ಗಂಡ ಹಾಗೂ ಅವರ ಮನೆಯವರು ಕೂಡಿ ವರದಕ್ಷಿಣೆ ವಿಷಯವಾಗಿ ಅವಳಿಗೆ ದಿನಾಲೂ ಕೈಯಿಂದ ಹೊಡೆಯುವುದು ಮತ್ತು ಬೈಯುವುದು ಮಾಡುತ್ತಾ ನಾನಾ ರೀತಿಯಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು ಅಲ್ಲದೆ ನಿನಗೆ ಬರಿ ಹೆಣ್ಣು ಮಕ್ಕಳು ಮಾತ್ರ ಹುಟ್ಟುತ್ತವೆ ನಿನಗೆ ಗಂಡು ಮಕ್ಕಳು ಆಗುವುದಿಲ್ಲವೆಂದು ನಿಂದಿಸಿ ಕಿರುಕುಳ ಕೊಡುತ್ತಿದ್ದರು. ಹೀಗಿದ್ದು ಇಂದು ದಿನಾಂಕಃ 07/05/2017 ರಂದು ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ನಾನು, ನನ್ನ ಮಗ ಆನಂದರಾಯ, ಸೋಸೆ ಪ್ರಭಾವತಿ ರವರುಗಳು ಮನೆಯಲ್ಲಿದ್ದಾಗ ಮಗ ಆನಂದರಾಯನಿಗೆ ಸಂಗೋಳಗಿ(ಸಿ) ಗ್ರಾಮದ ನಮ್ಮ ಸಂಬಂಧಿಕರಾದ ದೇವಿಂದ್ರ ತಂದೆ ರಾಜೇಂದ್ರ ಹೊಸಮನಿ ರವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗಳಾದ ಶರಣಮ್ಮ ಇವಳ ಮೈಗೆ ಬೆಂಕಿ ಹತ್ತಿ ಮೈಸುಟ್ಟು ಮೃತ ಪಟ್ಟಿರುತ್ತಾಳೆ ಎಂದು ತಿಳಿಸಿದ ಮೇರೆಗೆ ತಕ್ಷಣವೆ ನನ್ನ ಮಗ ಆನಂದರಾಯನು ಗಾಬರಿಗೊಂಡು ನಮ್ಮ ಬೀಗನಾದ ಭೀಮಶ್ಯಾ ಧರಿ ಇವರಿಗೆ ಫೋನ್ ಮಾಡಿ ವಿಚಾರಿಸಲಾಗಿ ಅವರು ನಾವು ಬೆಳಿಗ್ಗೆಯಿಂದ ಎಲ್ಲರೂ ಕೂಡಿ ನಿಮ್ಮ ಮಗಳು ಶರಣಮ್ಮಳಿಗೆ ಹೊಡೆ-ಬಡೆ ಮಾಡಿ ಕೊಲೆ ಮಾಡಿ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತೇವೆ ಅವಳ ಹೆಣವು ನಮ್ಮ ಮನೆಯಲ್ಲಿ ಸುಡುತ್ತಿದೆ. ಬೇಕಾದರೆ ನೀವೆ ಬಂದು ನೋಡಿಕೊಂಡು ಏನು ಮಾಡುತ್ತಿರಿ ಮಾಡಿಕೊಳ್ಳಿ ಅಂತ ಹೇಳಿ ಫೋನ್ ಕಟ್ ಮಾಡಿದರು. ನಂತರ ಈ ವಿಷಯವನ್ನು ನನ್ನ ಮಗನು ನನ್ನ ಎಲ್ಲಾ ಗಂಡು ಮಕ್ಕಳಿಗೆ ತಿಳಿಸಿದ್ದು, ಅಲ್ಲದೆ ಓಣಿಯವರಿಗೂ ಸಹ ತಿಳಿಸಿದ್ದು ನಾನು ನನ್ನ ಮಕ್ಕಳಾದ ಅಂಬಾರಾಯ, ಆನಂದರಾಯ, ಸೂರ್ಯಕಾಂತ, ಅಣ್ಣಾರಾಯ ಹಾಗೂ ಓಣಿಯವರಾದ ದೇವಿದಾಸ ತಂದೆ ಲಾಡಪ್ಪ ಸಜ್ಜನ, ಶಿವಶರಣಪ್ಪ ಬಿಲಗುಂದಿ, ಬಾಬುರಾವ ಗಡ್ಡದ, ನಾಮದೇವ ಅಪ್ಪೆ ರವರೆಲ್ಲರೂ ಕೂಡಿ ಕ್ರೂಸರ ಜೀಪನಲ್ಲಿ ಸಾಯಂಕಾಲ 04-30 ಗಂಟೆ ಸುಮಾರಿಗೆ ಕೇರಿ ಅಂಬಲಗಾ ಗ್ರಾಮಕ್ಕೆ ಬಂದು ಅವರ ಮನೆಗೆ ಹೋಗಿ ನೋಡಲಾಗಿ ನನ್ನ ಮಗಳ ದೇಹವು ಅವಳ ಮಲಗುವ ಕೋಣೆಯಲ್ಲಿ ಸುಟ್ಟು ಕರಕಲಾಗಿರುವ ಸ್ಥೀತಿಯಲ್ಲಿತ್ತು. ದಿನಾಂಕಃ 07/05/2017 ರಂದು ಮಧ್ಯಾಹ್ನ 01-30 ಗಂಟೆಯಿಂದ 02-00 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಗಳಾದ ಶರಣಮ್ಮ ಇವಳಿಗೆ ಅವಳ ಗಂಡ ಪ್ರಕಾಶ, ಮಾವ ಭೀಮಶ್ಯಾ, ಅತ್ತೆ ರಂಗುಬಾಯಿ, ನಾದಿನಿ ಪ್ರತಿಭಾ, ಮೈದುನರಾದ ಪ್ರಶಾಂತ ಮತ್ತು ರಾಜೀವರವರುಗಳೆಲ್ಲರು ಸೇರಿ ವರದಕ್ಷಿಣೆ ವಿಷಯವಾಗಿ ನನ್ನ ಮಗಳನ್ನು ಹೊಡೆ-ಬಡೆ ಮಾಡಿ ಕೊಲೆ ಮಾಡಿ ಅವಳ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.