Police Bhavan Kalaburagi

Police Bhavan Kalaburagi

Monday, May 22, 2017

Yadgir District Reported Crimes

                        Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 170/2017  ಕಲಂ 279 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ದಿನಾಂಕಃ 21/05/2017 ರಂದು ಫಿಯರ್ಾದಿಯ ತಮ್ಮನಾದ ಸಂತೋಷಕುಮಾರ ತಂದೆ ರಾಜಶೇಖರ ಯಕ್ಷಿಂತಿ ಇತನು ಬಜಾಜ ಡಿಸ್ಕವರ ಮೋಟರ ಸೈಕಲ್ ನಂಬರ ಕೆ.ಎ 32 ಇ.ಎ 3480 ನೇದ್ದರ ಮೇಲೆ ಶಹಾಪೂರದಿಂದ ಹಾಲಬಾವಿ ಭೋಜಲಿಂಗೇಶ್ವರ ಮಠಕ್ಕೆ ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ, ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಶಹಾಪೂರ ಸಿಮಾಂತರದ ಪರವತರೆಡ್ಡಿಗೌಡ ಹಳಿಸಗರ ಇವರ ಹೊಲದ ಹತ್ತಿರ ಬರುವ ರಸ್ತೆಯ ತಿರುವಿನಲ್ಲಿ ಹಾಲಬಾವಿ ಕಡೆಯಿಂದ ಶಿಪ್ಟ ಕಾರ ನಂಬರ ಕೆ.ಎ 36 ಎಮ್ 8826 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿ, ಸಾದಾ ಹಾಗು ತೀವೃ ಸ್ವರೂಪದ ಗಾಯಪಡಿಸಿ ಕಾರ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 170/2017 ಕಲಂ 279 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 171/2017.ಕಲಂಃ 279 338.ಐ.ಪಿ.ಸಿ. &ನ 187 ಐ.ಎಮ್.;- ದಿನಾಂಕ 22/05/2017 ರಂದು 00-20 ಗಂಟೆಗೆ ವಾತ್ಸಲ್ಯ ಆಸ್ಪತ್ರೆ ಕಲ್ಬುಗರ್ಿ ಯಿಂದ ನರಸಿಂಗಪ್ಪ ಎಚ್.ಸಿ 39 ರವರು ಆಸ್ಪತ್ರೆಯಲ್ಲಿ ಉಪಚಾರ ಪಡೆಡಯುತ್ತಿದ್ದ ಗಾಯಾಳು ಶಿವಣ್ಣ ತಂದೆ ಗುರಪ್ಪ ವ|| 59 ಸಾ|| ಸಗರ(ಬಿ) ಇವರ ಹೇಳಿಕೆಯನ್ನು ಪಡೆದು ಕೊಂಡು ಬಂದು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ಹೀಗಿದ್ದು ದಿನಾಂಕ 21/05/2017 ರಂದು ಬೆಳಿಗ್ಗೆ ಚರಬಸವೆಶ್ವರ ಗದ್ದಿಗೆಗೆ ಹೋಗಿ ಧರ್ಶನ ಮಾಡಿ ಮರಳಿ ಬಸವೇಶ್ವರ ಸರ್ಕಲ್ ಕಡೆಗೆ ಬರಲು ಚರಬಸವೇಶ್ವರ ಕಮಾನ ದಾಟಿ ಬರುವಾಗ ಭೀ.ಗುಡಿ ಕಡೆಯಿಂದ ನಮ್ಮ ಹಿಂದಿನಿಂದ ಒಂದು ಮೋಟರ್ ಸೈಕಲ್ ನಂ ಮೋಟರ್ ಸೈಕಲ್ ನಂ ಏಂ-33 ಗ-2315 ನ್ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನನಗೆೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ನೆಲಕ್ಕೆ ಬಿದ್ದೆನು ಆಗ ನನ್ನ ಮಗ ಲಕ್ಷ್ಮಣ್ಣನು ಎಬ್ಬಿಸಿ ಕೂಡಿಸಿದನು. ಸದರಿ ಅಫಗಾತದಲ್ಲಿ ನನಗೆ ಎಡಗಾಲ ಚೆಪ್ಪಿ ಗುಡಿಗಿಗೆ ಭಾರಿ ಗುಪ್ತಪೆಟ್ಟಾಗಿ ಮುರಿದಂತಾಗಿರುತ್ತದೆ. ನಂತರ ನನಗೆ ಅಪಘಾತಮಾಡಿದ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ರಿಯಾಜ್ ತಂದೆ ಎಂ, ಹನೀಫ್ ಸಾ|| ಶಹಾಪೂರ ಅಂತಾ ತಿಳಿಸಿದ್ದು ಸ್ವಲ್ಪ ನಿಂತಹಾಗೆ ಮಾಡಿ ಓಡಿಹೊದನು ಸದರಿ ಅಪಘಾತ ವಾದಾಗ ಸಮಯ ಬೆಳಿಗ್ಗೆ ಸುಮಾರು 10-00 ಗಂಟೆ ಯಾಗಿತ್ತು ನಂತರ ನನ್ನ ಮಗ ಲಕ್ಷ್ಮಣ್ಣ ನನ್ನ ಸೋಸಿ ಲಕ್ಷ್ಮೀ ಇಬ್ಬರು ನನಗೆ ಹೆಚ್ಚಿನ ಉಪಚಾರಕ್ಕಾಗಿ ವಾತ್ಸಲ್ಯ ಆಸ್ಪತ್ರೆ ಕಲ್ಬುಗರ್ಿಗೆ ತಂದು ಸೆರಿಕೆ ಮಾಡಿದ್ದು ಇರುತ್ತದೆ.
         ಕಾರಣ ನನಗೆ ಅಪಘಾತ ಮಾಡಿ ಭಾರಿ ಸ್ವರೂಪದ ಗುಪ್ತಗಾಯಪಡಿಸಿ ಓಡಿ ಹೊಗಿರುವ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೆಕೆಂದು ಹೇಳಿಕೆ ಕೊಟ್ಟಿದ್ದು ನಿಜವಿದೆ. ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 171/2017 ಕಲಂ 279.338.ಐ.ಪಿ.ಸಿ.187 ಐ.ಎಂ.ವಿ ಆ್ಯಕ್ಟ ಪ್ರಕಾರ ಗುನ್ನೆ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 117/2017 ಕಲಂ: 376(2)(?) ಕಲಂ 4, 6 ಪೋಕ್ಸೊ ಆಕ್ಟ್ -2012;- ದಿನಾಂಕ 20-05-2017 ರಂದು ಸಮಯ ರಾತ್ರಿ 7.35 ಗಂಟೆಗೆ ವಿ.ಆರ್ ಜಾದವ ಪಿ.ಸಿ-148 ಗುರುಮಠಕಲ ರವರು ಠಾಣೆಗೆ ಹಾಜರಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀ ಮಂಜೂಳಾ ಮ.ಪಿ.ಎಸ್.ಐ ಯಾದಗಿರಿ ನಗರ ಠಾಣೆ (ಸಿ) ರವರಿಂದ ಹೇಳಿಕೆ ಪಿರ್ಯಾಧಿ ಪಡೆದುಕೊಂಡು ಹಾಜರುಪಡಿಸಿದ್ದು  ಸದರಿ ಪಿರ್ಯಾಧಿ ಹೇಳಿಕೆಯ ಸಾರಾಂಶೆನೆಂದರೆ

       ನಾನು ಶ್ರೀಮತಿ ಜಾನಕಮ್ಮ ಗಂಡ ನಾಗಪ್ಪ ಪೂಜಾರಿ ವಃ 38 ಜಾಃ ಕುರಬರು ಉಃ ಮನೆಕೆಲಸ ಸಾಃ ಚಿಂತಕುಂಟಾ ತಾಃಜಿಃ ಯಾದಗಿರಿ ಹಾಃವಃ ಅಜೀಜ ಕಾಲೋನಿ ಯಾದಗಿರಿ ಅಂತಾ ಇದ್ದು ನಾನು ಮನೆ ಕೆಲಸ ಮಾಡಿಕೊಂಡು ಯಾದಗಿರಿದ ಅಜೀಜ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತೇವೆ. ನಮ್ಮ ಸ್ವಂತ ಊರು ಚಿಂತಕುಂಟ ಗ್ರಾಮವಿದ್ದು ನನ್ನ ಗಂಡ ನಾಗಪ್ಪ ಪೂಜಾರಿ ಈತನು ಸಹ ಶಿಕ್ಷಕ ಅಂತಾ ವಂಕಸಂಬ್ರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ನಮಗೆ ಮೂರು ಜನ ಮಕ್ಕಳಿದ್ದು 1) ನವೀನ ಕುಮಾರ 15 ವರ್ಷ 9 ನೇ ತರಗತಿ, 2) ದೇವಿಕಾ  ವಃ 13 ವರ್ಷ  5ನೇ ತರಗತಿ, 3) ಭೂಮಿಕಾ ವಃ 7 ವರ್ಷ 2 ನೇ ತರಗತಿ  ಈಗ್ಗೆ ಮೂರ ಜನ ಮಕ್ಕಳಿರುತ್ತಾರೆ. ಈಗ ಬೇಸಿಗೆ ರಜೆ ಇದ್ದುದ್ದರಿಂದ ಈ ಒಂದು ತಿಂಗಳ ಹಿಂದೆ ನಾನು ಮತ್ತು ನನ್ನ ಗಂಡ ನಾಗಪ್ಪ ಹಾಗೂ ನಮ್ಮ ಮಕ್ಕಳು ಕೂಡಿಕೊಂಡು ನಮ್ಮ ಊರಾದ ಚಿಂತಕುಂಟಾ ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದೆವು.
     ಹೀಗಿದ್ದು ಇಂದು ದಿನಾಂಕ 20/05/2017 ರಂದು ಬೆಳಿಗ್ಗೆ ನನ್ನ ಮಗಳಾದ ಭೂಮಿಕ ಇವಳು ಮನೆಯಿಂದ ಹೊರಗೆ ಆಟ ಆಡಲು ಹೋದಳು. ನಂತರ ಸುಮಾರು ಸಮಯ ಬೆಳಿಗ್ಗೆ 11.15 ಗಂಟೆ ಸುಮಾರಿಗೆ ನನ್ನ ಮಗಳು ಭೂಮಿಕಾ ಇವಳು ತನ್ನ ಹೊಟ್ಟೆ ಹಿಡಿದುಕೊಂಡು ಅಳುತ್ತಾ ಮನೆಗೆ ಓಡಿ ಬಂದಳು ಆಗ ನಾನು ಅತ್ತೆ ಮಲ್ಲಮ್ಮ ಹಾಗೂ ನನ್ನ ಮಗಳು ದೇವಿಕಾ ಕೂಡಿಕೊಂಡು ಭೂಮಿಕಾ ಇವಳಿಗೆ ಏನಾಯ್ತು ಅಂತಾ ಕೇಳಿದಾಗ ಅವಳು ನಮ್ಮ ಮುಂದೆ ತಿಳಿಸಿದ್ದೆನೆಂದರೆ. ನಾನು ಅಂಗಳದಲ್ಲಿ ಆಟ ಆಡುತ್ತಿರುವಾಗ ಮಾವನಾದ ಮಾಳಪ್ಪ ತಂದೆ ರಾಮಣ್ಣ ಪೂಜಾರಿ ಸಾಃ ಚಿಂತಕುಂಟಾ ಈತನು ನನಗೆ ಬಾ ಭೂಮಿಕಾ ಅಂತಾ ಕರೆದಾಗ ನಾನು ಆಟ ಆಡಿಕೊಂಡು ಅವನ ಹತ್ತಿರ ಹೋದಾಗ ಅವನು ತಮ್ಮ ಮನೆಗೆ ಹೊಂದಿಕೊಂಡಿರುವ ಆಡುಗಳು ಕೂಡಿ ಹಾಕುವ ಕೋಠಡಿಯಲ್ಲಿ ನನಗೆ ಕರೆದುಕೊಂಡು ಹೋದನು. ನಂತರ ಮಾಳಪ್ಪ ಈತನು ನನ್ನ ಚಡ್ಡಿಯನ್ನು ಬಿಚ್ಚಿ ಅವನ ಚೆಡ್ಡಿಯನ್ನು ಬಿಚ್ಚಿ ನನ್ನ ಮೇಲೆ ಬಿದ್ದು ತಿಕ್ಕಾಡ  ತೋಡಗಿದನು. ಅವನಲ್ಲಿಂದ ಹಾಲಿನಂತಹದ್ದು ನನ್ನ ಮೇಲೆ ಬಿತು ನಾನು ಹೊಟ್ಟೆ ಬಿಸಿಯಾಗಿ ಊರಿತಿತ್ತು ಹಾಲಿನಂತಹದ್ದು ನನ್ನ ಬಟ್ಟೆಗೆ ವರಿಸಿಕೊಂಡನು ಅವನು ಎದ್ದು ಹೋದನು. ನನಗೆ ಹೊಟ್ಟೆ ಬೇನೆ ಆಗಿ ಕೆಳಗೆ ಉರಿತಿದೆ ಅಂತಾ ತಿಳಿಸಿದ್ದು ಸದರಿ ಘಟನೆ 11 ಎ.ಎಂ  ಸುಮಾರಿಗೆ ಜರುಗಿದ್ದು ಇರುತ್ತದೆ. ನನ್ನ ಗಂಡ ನಾಗಪ್ಪ ಈತನಿಗೆ ಮನೆಯಿಂದ ಹೊರಗೆ ಹೋಗಿದ್ದು ನನ್ನ ಗಂಡನಿಗೆ ಮನೆಗೆ ಬರಮಾಡಿಕೊಂಡು ವಿಷಯ ತಿಳಿಸಿ ನನ್ನ ಮಗಳಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ.
   ಕಾರಣ ಅಪ್ರಾಪ್ತ ಬಾಲಕಿಯಾದ ನನ್ನ ಮಗಳು ಭೂಮಿಕಾ ತಂದೆ ನಾಗಪ್ಪ ಪೂಜಾರಿ ವಃ 7 ವರ್ಷ ಇವಳಿಗೆ ಏನು ಅರಿಯದ ವಯಸ್ಸಿನಲ್ಲಿ ಮಾಳಪ್ಪ ಈತನು ತನ್ನ ಮನೆಯ ಆಡುಗಳು ಕೂಡಿ ಹಾಕುವ ಕೋಠಡಿಯಲ್ಲಿ ಕರೆದುಕೊಂಡು ಹೋಗಿ ಸಂಭೋಗ ಮಾಡಿರುತ್ತಾನೆ. ಕಾರಣ ಸದರಿಯವನ ವಿರುದ್ಧ ಕಾನೂನು ಪ್ರಕಾರ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 117/2017 ಕಲಂ 376(2)(ಐ)ಐಪಿಸಿ ಮತ್ತು ಕಲಂ 4, 6 ಪೊಕ್ಸೋ ಕಾಯ್ದೆ -2012ರ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ.
   
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ: 379 ಐಪಿಸಿ ಮತ್ತು ಕಲಂ: 4(1), 4(1ಎ), 21 ಎಮ್.ಎಮ್. ಆರ್.ಡಿ ಆಕ್ಟ್ ಹಾಗೂ ನಿಯಮ 3, 42, 43, 44  ಕೆ.ಎಮ್.ಎಮ್.ಸಿ ರೂಲ್ -1994;- ದಿನಾಂಕ 20.05.2017 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಸರಕಾರಿ ತಫರ್ೆ ಶ್ರೀ ಕಿರಣ ಡಿ.ಆರ್. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ದಿನಾಂಕ 19.05.2017 ರಂದು ರಾತ್ರಿ 8-50 ಗಂಟೆಗೆ ಪ್ರಾಧೇಶಿಕ ಸಾರಿಗೆ ಅಧಿಕಾರಿಗಳು, ಯಾದಗಿರಿ ರವರು ಠಾಣೆಗೆ ಒಂದು ಮರಳಿ ತುಂಬಿದ ಟ್ರ್ಯಾಕ್ಟರನ್ನು ಠಾಣೆಯ ಆವರಣದಲ್ಲಿ ನಿಲ್ಲಿಸಿ ಮುಂದಿನ ಆದೇಶ ಹೊರಡಿಸುವವರೆಗೆ ಸದರಿ ಮರಳು ತುಂಬಿದ ಟ್ರ್ಯಾಕ್ಟರ್ನ್ನು ಸುರಕ್ಷಿತ ಅಭಿರಕ್ಷೆಯಲ್ಲಿ ತಡೆಹಿಡಿಯಲು ನಮೂನೆ ಸಂಖ್ಯೆ 27  ನೇದ್ದರ ಪ್ರತಿಯನ್ನು ನೀಡಿ ಠಾಣೆಯ ಆವರಣದಲ್ಲಿ ನಿಲ್ಲಿಸಿದ ಮರಳು ತುಂಬಿದ ಟ್ರ್ಯಾಕ್ಟರ್ನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಃ 118/2017 ಕಲಂ: 379 ಐಪಿಸಿ ಮತ್ತು ಕಲಂ: 4(1), 4(1ಎ), 21 ಎಮ್.ಎಮ್. ಆರ್.ಡಿ ಆಕ್ಟ್ ಹಾಗೂ ನಿಯಮ 3, 42, 43, 44  ಕೆ.ಎಮ್.ಎಮ್.ಸಿ ರೂಲ್ -1994 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 22-05-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-05-2017

ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 49/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 21-05-2017 ರಂದು ಫಿರ್ಯಾದಿ ಶಿವರಾಜ ತಂದೆ ಸಂಗಪ್ಪಾ ಬೀರಾದಾರ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಕಟ್ಟಿ ತುಗಾಂವ, ಸದ್ಯ: ಮಾಧವ ನಗರ ಬೀದರ ರವರು ಪ್ರತಾಪ ನಗರದ ಸೋನಾಲೀಕಾ ಟ್ರಾಕ್ಟರ ಶೋರೂಮ ಎದುರುಗಡೆ ಮಾಧವ ನಗರ ಕಡೆ ಹೋಗಲು ಬೀದರ ನೌಬಾದ ರೋಡ ದಾಟುತ್ತಿರುವಾಗ ಬೀದರ ಕಡೆಯಿಂದ ನೌಬಾದ ಕಡೆಗೆ ಒಂದು ಸ್ಕೂಟಿ ಮೊಟಾರ ಸೈಕಲ ನಂ. ಕೆಎ-38/ಜೆ-8379 ನೇದ್ದರ ಸವಾರನಾದ ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ಮೋಟಾರ್ ಸೈಕಲ ಸಮೇತ ನೌಬಾದ ಕಡೆ ಓಡಿಸಿಕೊಂಡು ಹೊದನು, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಭಕಾಳಿಯಲ್ಲಿ ಭಾರಿ ಗುಪ್ತಗಾಯ, ಎಡಗಾಲಿನ ಮೋಳಕಾಲು ಕೆಳಗೆ ರಕ್ತಗಾಯ, ಎರಡು ಕಾಲಿನ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ, ಅಲ್ಲೆ ಇದ್ದ ಫಿರ್ಯಾದಿಗೆ ಪರಿಚಯ ಇರುವ ಶ್ಯಾಮ ತಂದೆ ಶಿವರಾಜ ಬಿರಾದಾರ ಸಾ: ಬಸನಾಳ, ಸದ್ಯ: ಬೀದರ ಇವರು ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 57/2017, ಕಲಂ. 279, 338 ಐಪಿಸಿ :-
ದಿನಾಂಕ 21-05-2017 ರಂದು ರವಿವಾರ ಅಂಗಡಿ ಪ್ರಯುಕ್ತ ಫಿರ್ಯಾದಿ ರಾಮಣ್ಣಾ @ ಶರಣಪ್ಪಾ ತಂದೆ ನರಸಪ್ಪಾ ಜವಳಗಿ, ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಮಲಕಾಪೂರವಾಡಿ, ತಾ: ಹುಮನಾಬಾದ ರವರು ಹುಮನಾಬಾದಕ್ಕೆ ತಮ್ಮ ಮೋಟಾರ್ ಸೈಕಲ ನಂ. ಕೆಎ-39/ಎ-8634 ನೇದ್ದರ ಮೇಲೆ ಬಂದಾಗ ಫಿರ್ಯಾದಿಯ ಅಣ್ಣನ ಮಗ ರಾಜಕುಮಾರ ಹಾಗು ಅವನ ಗೆಳೆಯ ರವಿ ಪ್ರಭಾನೋರ ರವರು ಸಿಕ್ಕಿದ್ದು ಎಲ್ಲರು ಚಹಾ ಕುಡಿದು ಹೋಗುವಾಗ ಹುಮನಾಬಾದ ಪಟ್ಟಣದ ಮೇನ ರೋಡ ಮೇಲೆ ಎ.ಪಿ.ಎಮ್.ಸಿ.ಯಿಂದ ಐ.ಬಿ. ಕ್ರಾಸ್ ಕಡೆಗೆ ಹೋಗುವಾಗ ಎ.ಪಿ.ಎಮ್.ಸಿ. ಗೇಟ ಎದುರು ಬಂದಾಗ ಬಸ ನಿಲ್ದಾಣ ಕಡೆಯಿಂದ ಬಂದ ಒಂದು ಕಾರ ನಂ. ಎಮ್.ಹೆಚ್-01/ಎ.ಇ-1812 ನೇದ್ದರ ಚಾಲಕನಾದ ಆರೋಪಿ ಮಾಣಿಕರಡ್ಡಿ ಮಂಡಾ ಸಾ: ಶಿವಪೂರ ಹುಮನಾಬಾದ ಈತನು ತನ್ನ ಕಾರನ್ನು ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಫಿರ್ಯಾದಿಯ ಹಣೆ, ಬಲಗಲ್ಲಕ್ಕೆ, ಬಲಭುಜಕ್ಕೆ, ಬಲಮುಂಗೈಗೆ ತರಚಿದಗಾಯ ಹಾಗು ಬಲಗಾಲ ಮೋಳಕಾಲ ಕೆಳಗೆ ಮೂಳೆ ಮುದಿರು ಭಾರಿ ಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಮಟಕಾ ಜೂಜು ಕೋರರ ಬಂಧನ:
ರಾಘವೇಂಧ್ರ ನಗರ ಠಾಣೆ: ದಿನಾಂಕ:20/05/2017 ರಂದು ಶ್ರೀ ಕಪಿಲದೇವ ಪಿಐ ಡಿಸಿಬಿ ಘಟಕ ಕಲಬುರಗಿ ಇವರು ನಗರದ ಗಸ್ತಿನಲ್ಲಿದ್ದಾಗ ಶೇಟ್ಟಿ ಕಾಂಪ್ಲೆಕ್ಸ ಆಳಂದ ರೋಡ ಹತ್ತಿರ ಇಬ್ಬರು ವ್ಯಕ್ತಿಗಳು ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಡಿ.ಸಿಬಿ ಘಟಟಕ ಸಿಬ್ಬಂದಿ ಮತ್ತು ಪಂಚರೊಂದಿಗೆ ಶೆಟ್ಟಿ ಕಾಂಪ್ಲೆಕ್ಸ ಹತ್ತಿರದ ಶೆಟ್ಟಿ ಟಾಕಿಸ್ನ ಮೇನ್ಗೇಟ್ಹತ್ತಿರ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಅಯ್ಯಾಂಗಾರ ಬೆಕರಿ ಮುಂದಗಡೆ ಸಾರ್ವಜನಿಕ ಸ್ಥಳದ ಬೇವಿನ ಗೀಡ ನೆರಳಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಕೊಡುತ್ತಾ ಮೋಸ ಮಾಡುತ್ತಿರುವದನ್ನು ನೋಡಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ2 ಜನರನ್ನು ವಶಕ್ಕೆ ಪಡೆದು ಅವರಲ್ಲಿ 1) ಚಂದ್ರಕಾಂತ ತಂದೆ ಹಣಮಂತಪ್ಪಾ ಪಾಟೀಲ್ಸಾ:ಕೈಲಾಸ ನಗರ ಕಲಬುರಗಿ ಈತನಿಂದ ಆತನಿಂದ ಮಟಕಾ ಚೀಟಿ ಬರೆಯಲು ಉಪಯೋಗಿಸುತ್ತಿದ್ದ  ಒಂದು ಬಾಲ್ಪೆನ್, 6 ಮಟಕಾ ಚೀಟಿಗಳು, ನಗದು ಹಣ ರೂ 2090/- ಮತ್ತು ಒಂದು ಸ್ಯಾಮಸಂಗ್ಮೋಬೈಲ್ಫೊನ್ಮತ್ತು 2) ಸಂಗಣ್ಣಾ ತಂದೆ ಬಸವಂತಪ್ಪಾ ಸಾಲಿ ಸಾ:ಶಿವಾಜಿ ನಗರ ಕಲಬುರಗಿ ಇತನಿಂದ ನಗದು ರೂ 1800/- ಹಣ ಮತ್ತು 3 ಮಟಕಾ ಚೀಟಿಗಳು ವಶಪಡಿಸಿಕೊಂಡು ಸದರಿಯವರ ವಿರುದ್ದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಯತ್ನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:- ದಿನಾಂಕ: 18-05-2017 ರಂದು ಶ್ರೀ ಗುರುಲಿಂಗಪ್ಪ ಆತನೂರ ಸಾ: ಬಡದಾಳ ಇವರು ಠಾಣೆಗೆ ಹಾಜರಾಗಿ ತಾನು ಗ್ರಾಮದ ಶರಣಬಸಪ್ಪ ತಂದೆ ಮಲಕಾಜಪ್ಪ ಮೇತ್ರೆ ರವರ ಬಡದಾಳ ಸಿಮಾಂತರದ  ಹೊಲ ಸರ್ವೇ ನಂ 268 ನೇದ್ದರಲ್ಲಿ 4 ಎಕರೆ ಹೊಲ ಎರಡು ವರ್ಷಕ್ಕೆ 1,15,000/-ರೂಪಾಯಿಗೆ ಕಂಡಿಷನ ನಂತೆ ಉಳುಮೆ ಮಾಡುತ್ತಿದ್ದು. ಅದರಲ್ಲಿ ನಾನು ಶರಣಬಸಪ್ಪ ರವರಿಗೆ 5,000/-ರೂ ಮುಂಗಡವಾಗಿ ಕೊಟ್ಟಿದ್ದು ಉಳಿದ ಹಣ ಕೆಲವು ದಿನಗಳಲ್ಲಿ ಕೊಡುವ ಮಾತಾಗಿದ್ದು, ಶರಣಬಸಪ್ಪರವರ ತಂದೆ ಮಲಕಾಜಪ್ಪ ಮೇತ್ರೆ ಇವರು ನನಗೆ ಹೊಲದ ಉಳಿದ ಬಾಕಿ ಹಣ ನನಗೆ ಕೊಡು ನನ್ನ ಮಗನಿಗೆ ಕೊಡಬೇಡ ಎಂದು ಹೇಳಿದಾಗ ನಾನು ಹೊಲ ನಿಮ್ಮ ಮಗನ ಹೆಸರಿಗೆ ಇರುತ್ತದೆ ಅವರು ನನಗೆ ಹೊಲ ಕಂಡಿಷನಗೆ ಹಾಕಿರುತ್ತಾರೆ ನಾನು ಹಣ ನಿಮ್ಮ ಮಗನಿಗೆ ಕೊಡುತ್ತೇನೆ ನೀವು ನಿಮ್ಮ ಮಗನ ಕಡೆಯಿಂದ ತಗೆದುಕೊಳ್ಳಿ ಅಂತ ಹೇಳಿದ್ದು. ಈ ವಿಷಯಕ್ಕೆ ಮಲಕಾಜಪ್ಪ ರವರು ನನ್ನ ಮೇಲೆ ದ್ವೇಷ ಮಾಡಿಕೊಂಡಿದ್ದು ಇರುತ್ತದೆ.
            ದಿನಾಂಕ 16/05/2017 ರಂದು ಹೊಲದಲ್ಲಿನ ಹುಲ್ಲು ತಗೆಯಲು ನನ್ನ ಹೆಂಡತಿಯಾದ ಶಿವಲಿಲಾ  ನಾನು ಹಾಗು ನಮ್ಮ ಗ್ರಾಮದ ಕಲಾವತಿ, ಚನ್ನಬಸವ್ವ ಸವಳಿ ಹಾಗು ಮಲ್ಲಮ್ಮಾ ಮಠಪತಿ ರವರನ್ನು ಕೂಲಿಕೆಲಸಕ್ಕಾಗಿ  ಕರೆದುಕೊಂಡು ಹೊಲಕ್ಕೆ ಹೋದಾಗ ಹೊಲದಲ್ಲಿ ಮಲಕಾಜಪ್ಪ ರವರು ಸಹ ಉಳಿದ ತಮ್ಮ ಎರಡು ಏಕರೆ ಹೊಲದಲ್ಲಿ ಕೂಲಿ ಕೆಲಸಕ್ಕೆ ನಮ್ಮ ಗ್ರಾಮದ ಶಾಮಬಾಯಿ ರುದ್ದೆವಾಡಿ, ಸಿದ್ದಮ್ಮ ತೋಟನಾಕ, ಗುಂಡಮ್ಮಾ ತೋಟನಾಕ ರವರಿಗೆ ಕರೆದುಕೊಂಡು ಬಂದಿದ್ದು. ನಾವು ಬೆಳಿಗ್ಗೆ 10.00  ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಕಬ್ಬಿನ ಬೆಳೆಯಲ್ಲಿ ಕಸ ತಗೆಯುತಿದ್ದಾಗ ಮಲಕಾಜಪ್ಪ ರವರು ನಾನು ಪಾಲಿಗೆ ಮಾಡಿದ ಹೊಲಕ್ಕೆ ಬಂದು ನಾವು ತುಂಬಿ ಇಟ್ಟಿದ ನೀರಿನ ಕೊಡದಿಂದ ನೀರು ಕುಡಿದು ಬಹಳ ಸಮಯ ಅಲ್ಲಿಯೇ ಕುಳಿತುಕೊಂಡಿದ್ದು.  ನಂತರ ಹೊಲದಲ್ಲಿ ಕೆಲಸ ಮಾಡುತಿದ್ದ ನನ್ನ ಹೆಂಡತಿ ಹಾಗು  ಕಲಾವತಿ, ಚನ್ನಬಸವ್ವ, ಮಲ್ಲಮ್ಮ ಇವರು ಬಂದು ನಾವು ತುಂಬಿ ಇಟ್ಟಿದ್ದ ಕೊಡದಿಂದ ನೀರು ಕುಡಿದ ಸ್ವಲ್ಪ ಸಮಯದಲ್ಲೆ ಹೊಟ್ಟೆ ನೋಯಿತ್ತಿದೆ ಅಂತ ಚಿರಾಡುತ್ತಾ ನಾಲ್ಕು ಜನರೊ ನೆಲಕ್ಕೆ ಬಿದ್ದು ಒದ್ದಾಡುತಿದ್ದರು ಆಗ ನಾನು ಗಾಬರಿಯಾಗಿ ಹಾಗು ಅಲ್ಲೆ ಕೆಲಸ ಮಾಡುತಿದ್ದ  ಶಾಮಬಾಯಿ, ಸಿದ್ದಮ್ಮ, ಗುಂಡಮ್ಮ ಇವರು ಬಂದಿದ್ದು ಎಲ್ಲರೊ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಕ್ರಿಮಿನಾಷಕ ಔಷದಿಯ ವಾಸನೆ ಬರುತಿದ್ದು, ತುಂಬಿಟ್ಟ ಕೊಡದಲ್ಲಿ ನೋಡಲಾಗಿ ಕ್ರಿಮಿನಾಷಕ ಔಷಧಿಯ ವಾಸನೆ ಬರುತಿತ್ತು. ನಂತರ ಅಲ್ಲಿಯವರೆ ಅಲ್ಲೆ ಇದ್ದ ಮಲಕಾಜಪ್ಪ ತನ್ನ ಮನೆಯ ಕಡೆಗೆ ಹೋಗಿದ್ದು ನಾನು ಮತ್ತು ನಮ್ಮ ಗ್ರಾಮದ ಅಮೋಘಿ ವಸ್ಥಾಳ, ಈರಣ್ಣ ಬಿರಾದಾರ ರವರಿಗೆ ಪೋನ ಮಾಡಿ ವಿಷಯ ತಿಳಿಸಿ ಖಾಸಗಿ ವಾಹನ ತಗೆದುಕೊಂಡು ನಾಲ್ಕು ಜನರಿಗೆ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಅಲಿಂದ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರ್ಪಡೆ ಮಾಡಿದ್ದು .
        ಮಲಕಾಜಪ್ಪ ತಂದೆ ಪರಮೇಶ್ವರ ಮೇತ್ರೆ ಇವರು ತನ್ನ ಮಗ ನನಗೆ ಪಾಲಿಹೆ ಹಚ್ಚಿದ್ದ ಹೊಲದ ಬಾಕಿ ಹಣ ಮಲಕಾಜಪ್ಪನಿಗೆ ಕೊಡದ ಕಾರಣ ಸದರಿಯವನು ನನ್ನ ಮೇಲೆ ದ್ವೇಷ ಕಟ್ಟಿಕೊಂಡು ನನಗೆ ನನ್ನ ಹೆಂಡತಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಲದಲ್ಲಿ ನಾವು ಕೂಡಿಯುವ ನೀರಿನ ಕೊಡದಲ್ಲಿ ಕ್ರಮೀನಾಷಕ ಔಷದಿ ಬೇರೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಸದರಿಯವನ ಮೇಲೆ   ಕಾನೂನಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕಣ:
ಫರಹತಾಬಾದ ಪೊಲೀಸ್ ಠಾಣೆ :
ದಿನಾಂಕ 20/05/2017 ರಂದು  ಶ್ರೀಮತಿ ತಾರಮ್ಮಾ ಗಂಡ ಭೀಮನಗೌಡ ಮಾಲಿ ಪಾಟೀಲ ಸಾ: ರಬನಳ್ಳಿ ತಾ:ಶಹಾಪೂರ  ಇವರು ಠಾಣೆಗೆ ಹಾಜರಾಗಿ ದಿನಾಂಕ 19/05/2017 ರಂದು  ಕೆ.ಎಸ್.ಆರ್.ಟಿ.ಸಿ ಬಸ್ಸ ನಂ ಕೆ-38 ಎಫ್ 830 ನ್ಭೆದ್ದರ ಚಾಲಕ ಸಾ: ಬೀದರ ದಿಪೋ ಚಾಲಕ ಸುಭಾಶ ಖಾಶೆಂಪೂರ ಈತನು ತಾನು ಚಲಾಯಿಸುತ್ತಿದ್ದ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಫರಹತಾಬಾದ ಗ್ರಾಮದ ಹತ್ತೀರ ಎನ್.ಹೆಚ್ 218 ರೋಡಿನ ಮೇಲೆ ನಿಯಂತ್ರಣ ಕಳೆದುಕೊಂಡು  ಎದುರಿಗೆ ಹೋಗುತ್ತೀರುವ ಒಂದು ಲಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸಿನ ಒಳಗಿದ್ದ ಒಳಗಿದ್ದ ಫಿರ್ಯಾದಿ ಶ್ರೀಮತಿ ತಾರಮ್ಮಾ ಮತ್ತು ಇತರ ಪ್ರಯಾಣಿಕರಿಗೆ ಭಾರಿ ಮತ್ತು ಚಿಕ್ಕಪುಟ್ಟ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಸದರಿ ಬಸ್ ಚಾಲಕನ ವಿರುದ್ದ ಕ್ರಮ ಕಯಕೊಳ್ಳುವಂಥೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 20-05-2017 ರಂದು ಶ್ರೀ ವಿಜಯಕುಮಾರ ತಂದೆ ನಾಗಪ್ಪ ಲಾಳಸಂಗಿ ಸಾ|| ಅಫಜಲಪೂರ ರವರು ಠಾಣೆಗೆ ಹಾಜರಾಗಿ ದಿನಾಂಕ 16-05-2017 ರಂದು ತನ್ನ ಮಾರುತಿ ಸಿಫ್ಟ ಕಾರ್ ನಂ ಕೆಎ32-ಎನ್ 5318 ನೇದ್ದನ್ನು ಪ್ರತಿ ದಿನದಂತೆ ತನ್ನ ಮನೆಯ ಮುಂದಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು,. ತಾನು ಹಾಗು ನನ್ನ ಹೆಂಡತಿಯಾದ ಚಂದ್ರಕಲಾ ಇಬ್ಬರು ತಮ್ಮ  ಮನೆಯ ಬಾಗಿಲಲ್ಲಿ ನಿಂತುಕೊಂಡಿದ್ದಾಗ ಅದೇ ಸಮಯಕ್ಕೆ ಲಾರಿ ನಂ ಕೆಎ32-ಎ 3590 ನೇದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗವಾಗಿ ನಿಸ್ಕಾಳಜಿತನದಿಂದ ಚಲಾಯಿಸುತ್ತಾ ರಿವರ್ಸ್ ಆಗಿ ಬರುತಿರುವಾಗ  ನಾನು ನನ್ನ ಹೆಂಡತಿ ಹಾಗು ಸ್ವಲ್ಪ ದೂರ ನಿಂತಿದ್ದ ಮಲ್ಲಯ್ಯ ಮಠ, ಚಿದಾನಂದ ಮಠ, ಬಾಳುಗೌಡ ಪಾಟೀಲ, ವಿಶ್ವನಾಥ ಕರಜಗಿ ಎಲ್ಲರೊ ಸದರಿ ಚಾಲಕನಿಗೆ ಚಿರುತ್ತಾ ಹಿಂದೆ ಕಾರು ಇದೆ ನಿಧಾನವಾಗಿ ಚಲಾಯಿಸು ಅಂತ ಹೇಳಿದರು ಕೇಳದೆ ಹಾಗೆ ರಿವರ್ಸ ಗೇರನಲ್ಲಿ ಹಿಂದಕ್ಕೆ ಬಂದು ನಮ್ಮ ಕಾರಿನ ಹಿಂದಿನ ಭಾಗಕ್ಕೆ ಜೋರಾಗಿ ಅಪಘಾತಪಡಿಸಿದ್ದರಿಂದ ನಮ್ಮ ಕಾರು ಮುಂದಕ್ಕೆ ಹೋಗಿ ಗೋಡೆಗೆ ಡಿಕ್ಕಿಯಾಗಿ ಮುಂದಿನ ಭಾಗ ಹಾಗು ಹಿಂದಿನ ಸಂಪೂರ್ಣ ಜಕಂ ಆಗಿದ್ದು. ನಂತರ ಲಾರಿ ಚಾಲಕ ಲಾರಿಯನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು. ನಂತರ ಲಾರಿ ಚಾಲಕನ ಹೆಸರು ವಿಚಾರಿಸಿದಾಗ ಮಹ್ಮದ್ ಹಜರತ್ ಸಾಬ ಸಾ||ಬಸವಕಲ್ಯಾಣ ಎಂದು ತಿಳಿದು ಬಂದಿರುತ್ತದೆ.
             ಕಾರಣ ಮೇಲೆ ಲಾರಿ ನಂ ಕೆಎ32-ಎ 3590 ನೇದ್ದರ ಚಾಲಕ ಲಾರಿಯನ್ನು ಅತಿವೇಗವಾಗಿ ಹಾಗು ನಿಸ್ಕಾಳಜಿತನದಿಂದ ರಿವರ್ಸ ಗೇರನಲ್ಲಿ ಚಲಾಯಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ನಮ್ಮ ಮಾರುತಿ ಸಿಫ್ಟ ಕಾರ್ ನಂ ಕೆಎ32-ಎನ್ 5318 ನೇದ್ದಕ್ಕೆ ಅಪಘಾತಪಡಿಸಿ ಕಾರಿನ ಹಿಂದಿನ ಭಾಗ ಸಂಪೂರ್ಣವಾಗಿ ಹಾಗು ಮುಂದಿನ ಭಾಗ ಜಖಂ ಮಾಡಿದ್ದು ಸದರಿಯವನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:ದಿನಾಂಕ: 20/05/2017 ರಂದು ಮುಂಜಾನೆ ಶ್ರೀ ವಸೀಮ ತಂದೆ ಅಬ್ದುಲ ರಹಿಮಾನಸಾಬ ಮಲ್ಲೆವಾಲೆ ಸಾ: ಹೊನಗುಂಟಾ ಇಇವರು ಫಿರ್ಯಾದಿ ಸಲ್ಲಿಸಿದ್ದೇನೆನೆಂದರೆ ದಿನಾಂಕ: 19/05/2017 ರಂದು ತಮ್ಮ ಗ್ರಾಮದ ಯೂನುಸ ತಂದೆ ಮಹ್ಮದ ಖಾಜಾ ಹುಸೇನ ನೋಂದೆ ಆತನ ಮೋಟಾರ ಸೈಕಲ ನಂ ಕ.ಎ.ಎ. 32 ಇ ಎನ್ 7935 ನೇದ್ದು ತೆಗೆದುಕೊಂಡು ತಮ್ಮ ಸಂಬಂಧಿಕರ ಮದುವೆಯ ಏಂಗೇಜಮೆಂಟ ಕಾರ್ಯಕ್ರಮಕ್ಕೆ ಕಲಬುರಗಿಗೆ ಹೋಗಿ ಅಲ್ಲಿಂದ ರಾತ್ರಿ ಮರಳಿ ಹೊನಗುಂಟಾಕ್ಕೆ ಬರುತ್ತಿರುವಾಗ ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಯೂನುಸನು ಮೋಟಾರ ಸೈಕಲ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಮರತೂರ ಕ್ರಾಸ ದಾಟಿ ದೇವನ ತೆಗನೂರ ಗ್ರಾಮದ ಹತ್ತಿರ ಇರುವ ರೋಡಿನ ಸೇತುವೆಯ ಕಲ್ಲಿಗೆ ಅಫಘಾತ ಮಾಡಿಸಿದ್ದರಿಂದ ನಗೆ ತಲೆಹಿಂಬಾಗಕ್ಕೆ ಪೆಟ್ಟಾಗಿತನ್ನ  ಎಡಗೈ ಮುರಿದಂತಾಗಿದ್ದು ಮತ್ತು ಯೂನುಸನಿಗೆ ಸಹ ತಲೆಗೆ ಭಾರಿ ನಮಗೆ ಉಪಚಾರ ಕುರಿತು 108 ಅಂಬುಲೇನ್ಸನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯ ಮದ್ಯದಲ್ಲಿ ಯೂನುಸನು ಮೃತ ಪಟ್ಟಿರುತ್ತಾನೆ.. ಕಾರಣ ಮೋಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಸೇತುವೆಯ ಕಲ್ಲಿಗೆ ಅಫಘಾತ ಸದರಿ ಯೂನುಸ ಇತನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ 20/05/2017 ರಂದು  ಶ್ರೀಮತಿ ಜಾಹಿದಾ ಗಂಡ ಮೆಹೆಬೂಬ್ ಅಂದೋಲ ಸಾ: ರಾವೂರು ಇವರು ಠಾಣೆಗೆ ಹಾಜರಾಗಿ ದಿನಾಂಕ 18/05/2017 ರಂದು ತನ್ನ ಗಂಡ ಮೆಹೆಬೂಬ್ ಈತನು ನಂದೂರ ಗ್ರಾಮದ  ಸಂಬಂದಿಕರ ದೇವರ ಕಾರ್ಯಕ್ರಮಕ್ಕೆ ಮೋಟಾರ ಸೈಕಲ್ ನಂಬರ್ ಕೆ ಎ 34 ಎಸ್ 0543 ನೇದ್ದನ್ನು ತೆಗೆದುಕೊಂಡು ನಂದೂರಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ರಾವೂರಕ್ಕೆ ಮೊಟಾರ ಸೈಕಲ್ ಮೇಲೆ ಬರುತ್ತಿರುವಾಗ ಭಂಕೂರು ಕ್ರಾಸ್ ಹತ್ತಿರ ಶಹಾಬಾದ ಕಡೆಯಿಂದ ಬರುತ್ತಿದ್ದ ಗೂಡ್ಸ ವಾಹನದ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ತನ್ನ ಗಂಡ ನಡೆಸಸುತ್ತಿದ್ದ ಮೊಟಾರು ಸೈಕಲ್ ಅಪಘಾತಪಡಿಸಿದ್ದರಿಂಧ ತನ್ನ ಗಂಡನಿಗೆ ತೆಲೆಗೆ ಮತ್ತು ಕಾಲಿಗೆ ಭಾರಿ ಗಾಯವಾಗಿದ್ದು ಸದರಿ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು. ತನ್ನ ಗಂಡನಿಗೆ ಅಪಘಾತಪಡಿಸಿದ ಗೂಡ್ಸ ಚಾಲಕನವಿರುದ್ದ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.