Police Bhavan Kalaburagi

Police Bhavan Kalaburagi

Monday, April 30, 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ 28-04-2018 ರಂದು  ಶ್ರೀ ಎನ್, ಚೊಕ್ಕಾರೆಡ್ಡಿ ಭೂ , ವಿಜ್ಞನಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲಬುರಗಿ  ರವರು ಕಲಬುರಗಿ ನಗರದ ಎಮ್.ಎಸ್.ಕೆ.ಮೀಲ್ ವ್ಯಾಪ್ತಿಯ ಮಹ್ಮದ ಚೌಕ ಹತ್ತಿರ ಟಿಪ್ಪರ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಮಾಹಿತಿ ಇದ್ದು. ಮಾಹಿತಿಯಂತೆ ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ದ ಕ್ರಮ ಕೈಕೊಳ್ಳುವ ಕುರಿತು ಇಂದು ಬೆಳ್ಳಿಗೆ 10:45 ಗಂಟೆಗೆ ತಮ್ಮ ಠಾಣೆಗೆ ಹಾಜರಾಗಿ ತಮ್ಮ ಸಹಾಯದೊಂದಿಗೆ ಪಂಚರನ್ನು ಕರೆದುಕೊಂಡು ಮಹ್ಮದ ಚೌಕ ಹತ್ತಿರ ಹೋಗಿ ವಾಹಗಳನ್ನು ಪರಿಶಿಲನೆ ಮಾಡುತ್ತಿದ್ದಾಗ ಬೆಳ್ಳಿಗ್ಗೆ 11:15 ಗಂಟೆಗೆ ಸುರಮಾರಿಗೆ ಒಂದು ಟಿಪ್ಪರ ಲಾರಿ ಬರುತ್ತಿದ್ದು ನಾನು ಮತ್ತು ಪಿ.ಎಸ್.ಐ. ಸಾಹೇಬರು ಸಿಬ್ಬಂದಿಯವರು ರಸ್ತೆಯ ಮೇಲೆ ಸದರಿ ಟಿಪ್ಪರ ಚಾಲಕನಿಗೆ ಟಿಪ್ಪರ ನಿಲ್ಲಿಸುವಂತೆ ಸೂಚಿಸಿದ್ದು ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ರಸ್ತೆ ಬದಿಗೆ ತೆಗೆದುಕೊಂಡು ಟಿಪ್ಪರ ನಿಲ್ಲಿಸಿ ಒಮ್ಮಲೆ ಅಲ್ಲಿಂದ ಓಡಿ ಹೋಗಿದ್ದು ಟಿಪ್ಪರ ಹತ್ತಿರ ಹೋಗಿ ನೋಡಲು ಸದರಿ ಟಿಪ್ಪರ ನಂ ಓಆರ್ 19 ಬಿ 1110 ಅಂತ ಇದ್ದು, ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಅದರಲ್ಲಿ ಅಂದಾಜು 6 ಬ್ರಾಸ ಮರಳು ಇದ್ದು ಸದರಿ ಟಿಪ್ಪರ ಕ್ಯಾಬಿನ ಒಳಗೆ ಹೋಗಿ ಕ್ಯಾಬಿನ ಪರಿಸಿಲಿಸಿ ನೋಡಲು ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಯಾವುದೆ ಮರಳು ಸಾಗಾಣಿಕೆ ಪರವಾನಿಗೆ ಲಭ್ಯವಾಗಿರುವುದಿಲ್ಲ. ಸದರಿ ಟಿಪ್ಪರ ಚಾಲಕ ಮತ್ತು ಟಿಪ್ಪರ ಮಾಲೀಕ ಕೂಡಿಕೊಂಡು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಪಿ.ಎಸ್.ಐ. ಸಾಹೇಬರ ಸಹಾಯದೊಂದಿಗೆ ಸದರಿ ಟಿಪ್ಪರ ನಂ ಓಆರ್ 19 ಬಿ 1110 ನೇದ್ದು ಅ:ಕಿ: 3 ಲಕ್ಷ ರೂ ಟಿಪ್ಪರದಲಿದ್ದ ಅಂದಾಜ 6 ಬ್ರಾಸ ಮರಳು ಅ:ಕಿ: 12,000/- ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 27.04.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾ ನಗರ ನಾಗರ ಕಟ್ಟಾ ಗುಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ಮೂರು ಜನ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾ ನಗರ ನಾಗರ ಕಟ್ಟಾ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಾವು ಜೀಪಿನಿಂದ ಇಳಿದು ಸ್ವಲ್ಪ ಮುಂದೆ ಹೋಗ ಮರೆಯಲ್ಲಿ ನಿಂತುಕೊಂಡು ನಾಗರ ಕಟ್ಟಾ ಗುಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ಮೂರು ಜನ ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಡುತ್ತಿದ್ದವರನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಶರಣಪ್ಪ @ ಬಾಂಬೆ ಶರಣ್ಯ ತಂದೆ ಗುಂಡಪ್ಪ ಕೂಡಿ ಸಾ: ಯಲ್ಲಮ್ಮ ಗುಡಿ ಹತ್ತಿರ ಗಂಗಾನಗರ ಕಲಬುರಗಿ 2. ಬಾಬುರಾವ ತಂದೆ ಚಂದ್ರಶ್ಯಾ ಡಿಗ್ಗಿ ಸಾ: ನಾಗರಕಟ್ಟಾ ಹತ್ತಿರ ಗಂಗಾನಗರ ಕಲಬುರಗಿ 3. ಸೈಯದ ಖಾದ್ರಿ ತಂದೆ ಸೈಯದ ಮಿನಲ್ಲಾ ಹುಸೇನಿ ಸಾ: ಅಬುಬಕರ ಮಜ್ಜಿದ ಹತ್ತಿರ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2710/- ರೂ 5 ಮಟಕಾ ಚೀಟಿಗಳು ಮತ್ತು 3 ಬಾಲ ಪೇನಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 23-04-2018 ರಂದು ಮುಂಜಾನೆ ನನ್ನ ಮಗ ದೇವಾ ಈತನು ನಮ್ಮೂರ ಆದಿತ್ಯ ಈತನಿಗೆ ತುಕರಾಮ  ಇವರ ಹೊಂಡಾ ಎಕ್ಟಿವ್ ಮೋ.ಸೈಕಲ್ ನಂ ಕೆಎ-20-ಎಕ್ಸ್-0128 ನೇದ್ದನ್ನು ನಡೆಸಿಕೊಂಡು ಜೀವಣಗಿ ಗೋಗಿ ರೋಡಿನ ಲಕ್ಷ್ಮಿ ಗುಡಿಯ  ಮುಂದುಗಡೆ ರೋಡಿನ ಮೇಲೆ ಹೋಗುವಾಗ ನಮ್ಮೂರಿನ ಕ್ರೋಜರ ಜೀಪ್ ನಂ ಕೆಎ-39-ಎಮ್-1438 ನೇದ್ದರ ಚಾಲಕನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ನನ್ನ ಮಗ ದೇವಾ ಈತನಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಓಡಿ ಹೋದ ಬಗ್ಗೆ ನನ್ನ ಹೇಳಿಕೆಯನ್ನು ನೀಡಿ ಕೇಸ ಮಾಡಿದ್ದು ಅಲ್ಲದೆ ಗಾಬರಿಯಲ್ಲಿ ನನ್ನ ಮಗ ದೇವಾನ ಇಂದು ದಿನಾಂಕ 29-4-2018 ರಂದು ಮುಂಜಾನೆ 11-00 ಗಂಟೆಗೆ ನನ್ನ ಮಗ ದೇವಾ ಈತನಿಗೆ ಅಪಘಾತವಾದ ವಿಷಯದಲ್ಲಿ ಮುಂದುವರೆದು ಹೇಳುವುದೇನೆಂದರೆ ಅಪಘಾತದಲ್ಲಿ ದೇವಾ 16 ವರ್ಷ ಈತನ ಬಲ ಮೆಲಕಿಗೆ ಭಾರಿ ರಕ್ತಗಾಯ ಹಾಗೂ ಅಲಲ್ಲಿ ರಕ್ತ ಗುಪ್ತಗಾಯಗಳು ಹೊಂದಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದಾಗ ದೇವಾನಿಗೆ ಉಪಚಾರ ಕೊಡಿಸುವ ಖರ್ಚು  ಜಾಸ್ತಿ ಬರುತ್ತಿದ್ದು ನನಗೆ ಹಣದ ತೊಂದರೆ ಇದ್ದುರಿಂದ ದಿನಾಂಕ 27-04-2018 ರಂದು ಸಾಯಂಕಾಲದ ವೇಳೆಯಲ್ಲಿ ನನ್ನ ಮಗ ದೇವಾ ಈತನಿಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇನೆ.  ಇಂದು ದಿನಾಂಕ 29-4-2018 ರಂದು ಮುಂಜಾನೆ 10-15 ಗಂಟೆಗೆ ನನ್ನ ಮಗ ದೇವಾ ವಯ 16 ವರ್ಷ ಈತನ ಉಪಚಾರದಲ್ಲಿ ಉಪಚಾರ ಫಲಕಾರಿ ಆಗದೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಶಾರದಾಬಾಯಿ ಗಂಡ ಸುರೇಶ ಮರಗುತ್ತಿ ಸಾ: ಜೀವಣಗಿ ಗ್ರಾಮ ತಾ.ಜಿ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, April 27, 2018

KALABURAGI DISTRICT REPORTED CRIMES


ಪತ್ರಿಕಾ ಪ್ರಕಟಣೆ :
ಮಾನ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆ ಬೆಂಗಳೂರು ರವರ ಕಛೇರಿ ಆಧೇಶ ಸಂಖ್ಯೆ ಹೆಚ್.ಡಿ -32/ಎಸ್.ಎಸ್.ಟಿ/201807ದಿನಾಂಕ 07-04-2018 ರ ಆಧೇಶದ ಅನ್ವಯ  ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2018 ರ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಮತಕ್ಷೆತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರು ದೂರುಗಳು ಇದ್ದಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08472 – 254425 ನೇದ್ದಕ್ಕೆ ದೂರುಗಳನ್ನು ಸಲ್ಲಿಸಬಹುದಾಗಿದೆ.  
                                                                                                        ಸಹಿ/
                                                                                                ಪೊಲೀಸ ಅಧೀಕ್ಷಕರು
                                                                                                       ಕಲಬುರಗಿ
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ:25/04/2018 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಗೌಡಗಾಂವ ಗ್ರಾಮದಲ್ಲಿ ನಮ್ಮ ಮನೆಯಲ್ಲಿದ್ದಾಗ ಗುಂಜಬಬಲಾದ ಗ್ರಾಮದಿಂದ ನನ್ನ ತಮ್ಮನಾದ ಬಸವರಾಜ ತಂದೆ ಮಾರುತಿ ಖೇತ್ರಿ ಇವರು ಫೋನಮಾಡಿ ಸಚಿನನು ನಮ್ಮ ಟ್ರ್ಯಾಕ್ಟರ್ ನಂ ಕೆಎ32-ಟಿ9834 ನೇದ್ದರ ಮೇಲೆ ಪಂಚರ ಜೋಡಿಸಿಕೊಂಡು ಬರಲು ದೇಗಾಂವ ದಿಂದ ಮುನ್ನಳ್ಳಿ ಗ್ರಾಮಕ್ಕೆ ಹೋಗಿ ಪಂಚರ ಜೋಡಿಸಿಕೊಂಡು ವಾಪಸ್ಸು ದೇಗಾಂವ ಗ್ರಾಮಕ್ಕೆ ಬರುತ್ತಿರುವಾಗ ಟ್ರ್ಯಾಕ್ಟರನ್ನು ಅದರ ಚಾಲಕನಾದ ಸುರೇಶ ತಂದೆ ನಾಗೀಂದ್ರ ಖೇತ್ರಿ ಸಾ||ಬಿಲಗುಂದಾ ಈತನು ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿದ್ದರಿಂದ ಟ್ರ್ಯಾಕ್ಟರ್ ಮಡಗಡ ಮೇಲೆ ಕುಳಿತಿದ್ದು ಸಚಿನನು ತೆಳಗೆ ಬಿದ್ದು ಅಲ್ಲದೇ ಅವನ ಮೇಲೆ ಟ್ರ್ಯಾಕ್ಟರನ ದೊಡ್ಡ ಟಯರ್ ಹಾದು ಹೋಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ತಿಳಿಸಿದ ಮೇರೆಗೆ ನಾನು ಈ ವಿಷಯವನ್ನು ನಮ್ಮ ಮೈದನು ಹಣಮಂತ ಅತ್ತೆ ಶಿವಕಾಂತಮ್ಮ ರವರುಗಳಿಗೆ ತಿಳಿಸಿ ಅವರು ಮತ್ತು ನಮ್ಮ ಓಣಿಯ ಇನ್ನು ಕೆಲವು ಜನರು ಕೂಡಿಕೊಂಡು ಒಂದು ಕ್ರುಜರ ಜೀಪಿನಲ್ಲಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಸಚಿನನ ಎಡಗಡೆ ಕಪಾಳಿಗೆ ಹೊಟ್ಟೆಗೆ ಕಂದು ಗಟ್ಟಿದ ಗಾಯಗಳಾಗಿ ಮೃತಪಟ್ಪಿರುತ್ತಾನೆ ಟ್ರ್ಯಾಕ್ಟರ್ ನಂ ಕೆಎ32-ಟಿ9834 (ಇಂಜಿನ ಮಾತ್ರ) ನೇದ್ದರ ಚಾಲಕನಾದ ಸುರೇಶ ಖೇತ್ರಿ ಸಾ||ಬಿಲಗುಂದಾ ಈತನು ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಾಲಾಯಿಸಿಕೊಂಡು ಮುನ್ನಳ್ಳಿ ಗ್ರಾಮದ ಕಡೆಯಿಂದ ದೇಗಾಂವ ಗ್ರಾಮದ ಕಡೆಗೆ ಬರುವಾಗ ಟ್ರ್ಯಾಕ್ಟರನ ಮಡಗಡ ಮೇಲೆ ಕುಳಿತಿದ್ದ ನನ್ನ ಮಗ ಸಚಿನ ಈತನು ಟ್ರ್ಯಾಕ್ಟರನಿಂದ ಕೆಳಗೆ ಬಿದ್ದು ಅಲ್ಲದೇ ಅವನ ಮೇಲಿಂದ ಟ್ರ್ಯಾಕ್ಟರ್ ಹಾದು ಹೊಗಿದ್ದರಿಂದ ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಸಿದ್ದಮ್ಮ ಗಂಡ ದಿ:ಅರ್ಜುನ ಖೇತ್ರಿ ಸಾ||ಗೌಡಗಾಂವ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಿದ್ಯಾಸಾಗರ ತಂದೆ ಶಾಂತಲಿಂಗಪ್ಪ ವಾಡಿ ಸಾ: ಪಟ್ಟಣ ಗ್ರಾಮ ತಾ:ಜಿ: ಕಲಬುರಗಿ ಒಕ್ಕಲುತನ ಕೆಲಸ  ಮಾಡಿಕೊಂಡು ಉಪಜೀವಿಸುತ್ತೇನೆ. ನಾನು ಹೋದ ವರ್ಷ ಯುಗಾದಿಗೆ  ನಮ್ಮ 30 ಎಕರೆ ಜಮೀನು ನಮ್ಮೂರಿನ ಸಂಜುಕುಮಾರ ತಂದೆ ಸೂರ್ಯಕಾಂತ @ ಸುರೇಶ ವಾಗ್ದರಿ  ಇತನಿಗೆ ಅರ್ಧ ಪಾಲಿನಿಂದ ಹಚ್ಚಿದ್ದು, ಈ ವರ್ಷ 2018 ನೇ ಸಾಲಿನ ಯುಗಾದಿ ಅವನಿಗೆ ಪಾಲಿನಿಂದ ಬಿಡಿಸಿ ನಾನೇ ಸಾಗುವಳಿ ಮಾಡುತ್ತಿದ್ದು. ಅದಕ್ಕೆ ಸಂಜುಕುಮಾರ ಮತ್ತು ಅವನ ತಂದೆ ಸೂರ್ಯಕಾಂತ @ ಸುರೇಶ ತಂದೆ ಭೀಮಶ್ಯಾ ವಾಗ್ದರಿ, ಮತ್ತು ಸಂಜಕುಮಾರ ಹಾಗೂ ಹೆಂಡತಿ ಸಂಬಂಧಿಕರಾದ ರೇವಣಸಿದ್ಧಪ್ಪ ತಂದೆ ಶಿವರಾಯ ಮತ್ತಿಮೂಡ, ಶಿವಲಿಂಗಪ್ಪ ತಂದೆ ಬಾಬುರಾವ ಮತ್ತಿಮೂಡ ಇವರು ನನಗೆ  ಈ ವರ್ಷವೂ  ನಮಗೆ ಹೊಲ ಅರ್ಧ ಪಾಲಿನಿಂದ ಹಚ್ಚು ಅಂತಾ ಕೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದಕ್ಕೆ  ಅವರೆಲ್ಲರೂ ನನಗೆ ಹೇಗೆ ಅರ್ಧ ಪಾಲಿನಿಂದ ನಮಗೆ ಹಚ್ಚುವುದಿಲ್ಲಾ ಮತ್ತು ನೀನು  ಹೇಗೆ ಹೊಲ ಸಾಗುವಳಿ ಮಾಡುತ್ತೀ ನಿನಗೆ ನೋಡುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಈಗ ಒಂದು ತಿಂಗಳ ಹಿಂದೆ ಸಂಜುಕುಮಾರ ಇತನ ಹೆಂಡತಿ ಜಯಶ್ರೀ ಇವಳು ಹೊಲದ ಪಕ್ಕದಲ್ಲಿ ಇರುವ ಶಿವಯ್ಯ ಸ್ವಾಮಿ ಇವರ ಹೊಲ ಪಾಲನಿಂದ ಮಾಡುತ್ತಿದ್ದ ಹೊಲಕ್ಕೆ ಹೋದಾಗ ಅವಳಿಗೆ ನಮ್ಮೂರಿನ ಸಿದ್ಧು ತಂದೆ ಮಾರುತಿ ಮರಾಠಿ ಇತನು ಅವಳೊಂದಿಗೆ ಅಸಭವ್ಯವಾಗಿ ನಡೆದುಕೊಂಡಿರುತ್ತಾನೆಂದು ಅವನಿಗೆ ಸಂಜಕುಮಾರ ಮತ್ತು ಇತರರು ಕೂಡಿ ಹೊಡೆ ಬಡಿ ಮಾಡಿದ್ದು, ಸಿದ್ದು ಇತನು ಸಂಜುಕುಮಾರನಿಗೆ  ನಾನು  ಕೂಡಾ ಜಯಶ್ರೀ ಇವಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುತ್ತೇನೆ ಎಂದು ಹೇಳಿದ್ದರಿಂದ ಈ ಮೇಲಿನ ಎರಡು ವಿಷಯ ಸಂಬಂಧವಾಗಿ ನನ್ನೊಂದಿಗೆ ಆಗ್ಗಾಗೆ ತಕರಾರ ಮಾಡುತ್ತಾ ಹೊರಟಿದ್ದು ,ಈ ವಿಷಯ ಸಂಬಂಧವಾಗಿ ಅವರು  ನನ್ನೊಂದಿಗೆ ದ್ವೇಷ ಮನೋಭಾವ. ಬೆಳಿಸಿಕೊಂಡು ಬಂದಿದ್ದು ದಿನಾಂಕ 24/04/18 ರಂದು ಬೆಳಿಗ್ಗೆ ಮನೆಯಿಂದ ಹಾಲು ತೆಗೆದುಕೊಂಡು ನಮ್ಮೂರಿನ ಅಗಸಿ ಹತ್ತಿರ ಇರುವ ಹಾಲಿನ ಡೈರಿ ಎದುರುಗಡೆ ಹೋದಾಗ ಅಲ್ಲಿಗೆ ನಮ್ಮೂರಿನ  1)ಸಂಜಕುಮಾರ ತಂದೆ  ಸೂರ್ಯಕಾಂತ @ ಸುರೇಶ ವಾಗ್ದರಿ 2)ರೇವಣಸಿದ್ಧಪ್ಪ ತಂದೆ ಶಿವರಾಯ ಮತ್ತಿಮೂಡ 3) ಸೂರ್ಯಕಾಂತ @ ಸುರೇಶ ತಂದೆ ಭೀಮಶ್ಯಾ ವಾಗ್ದರಿ 4) ಶಿವಲಿಂಗಪ್ಪ ತಂದೆ ಬಾಬುರಾವ ಮುತ್ತಿಮೂಡ ಇವರೆಲ್ಲರೂ ನನ್ನ ಹತ್ತಿರ ಬಂದು ನನಗೆ ಭೋಸಡಿ ಮಗನೇ  ಈ ವರ್ಷ ನಿಮ್ಮ  ಹೊಲ ಪಾಲಿನಿಂದ ಕೊಡು ಅಂದರೆ ಕೊಟ್ಟಿರುವುದಿಲ್ಲಾ. ಅಲ್ಲದೇ ನನ್ನ ಹೆಂಡತಿ ಜಯಶ್ರೀ ಇವಳು ಹೊಲಕ್ಕೆ ಬಂದಾಗ ಅವಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತೀ ಮಗನೇ ಅಂತಾ ಬೈಯ್ಯುತ್ತಾ ರೇವಣಸಿದ್ಧಪ್ಪ ಮತ್ತು ಸೂರ್ಯಕಾಂತ @ ಸುರೇಶ ಇಬ್ಬರು ನನಗೆ  ಒತ್ತಿಯಾಗಿ ಹಿಡಿದಾಗ  ಸುರೇಶ ಇತನು ನನಗೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ನನ್ನ ಬಲಗೈ ಮಣಿಕಟ್ಟಿನ ಮೇಲೆ, ಮುಂಗೈಯ ಮೇಲೆ  ಮತ್ತು ಬಲಭುಜದ ಮೇಲೆ ಹೊಡೆದು ಭಾರಿ ಗುಪ್ತಗಾಯಗೊಳಿಸಿದನು. ಶಿವಲಿಂಗಪ್ಪ ಇತನು ಕೂಡಾ ನನಗೆ ಕೊಲೆ ಮಾಡುವ ಉದ್ದೇಶದಿಂದ ಸೈಕಲ ಚೈನನಿಂದ ನನ್ನ ಬಲಗಾಲ ಮೊಳಕಾಲ ಮೇಲೆ ಮತ್ತು ಎಡಗೈ ಅಂಗೈಯ ಮೇಲೆ ಮತ್ತು ಅಲ್ಲಿಲ್ಲಿ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, April 25, 2018

KALABURAGI DISTRICT REPORTED CRIMES

ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಲಿಂಗಪ್ಪಾ ಜೇವರಗಿ ಸಾ: ಅಂಕಲಗಿ ತಾ:ಜಿ:ಕಲಬುರಗಿ ರವರು ದಿನಾಂಕ: 23/04/2018 ರಂದು ರಾತ್ರಿ ನಾನು, ನನ್ನ ಹೆಂಡತಿ ಮತ್ತು ತಾಯಿ ಎಲ್ಲರೂ ಊಟ ಮಾಡಿ ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ತಾಯಿ ಸುಶೀಲಾಬಾಯಿ ಇವರು ನನಗೆ ಬಹಳಷ್ಟು ಶಕೆ ಆಗುತ್ತಿದೆ ಅಂತಾ ಹೇಳಿ ಮ್ಯಾಳಿಗೆ ಮೇಲೆ ಮಲಗಲು ಹೊಗಿದ್ದು. ನಾನು, ನನ್ನ ತಾಯಿ ಮಲಗುವ ಕೋಣೆಗೆ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ನಮ್ಮ ಬೆಡ್ ರೂಮಿಗೆ ಹೋಗಿ ಮಲಗಿಕೊಂಡಿರುತ್ತೇವೆ. ಇಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನನ್ನ ತಾಯಿ ಗಾಬರಿಯಿಂದ ನಮ್ಮ ರೂಮಿನ ಬಾಗಿಲು ಬಡಿದು ಕರೆದಾಗ ನಾನು ನನ್ನ ಹೆಂಡತಿ ಹೊರಗೆ ಬಂದಾಗ ನನ್ನ ತಾಯಿ ನಾನು ಮಲಗುವ ಕೊಣೆಯ ಬಾಗಿಲ ಕೊಂಡಿ ಮುರಿದು ತರೆದಿದ್ದು ಇರುತ್ತದೆ. ಮತ್ತು ಅಲ್ಮಾರದ ಬಾಗಿಲು ಕೂಡಾ ಮುರಿದಂತಾಗಿ ತೆರೆದಿರುತ್ತದೆ. ಅಂತಾ ತಿಳಿಸಿದಾಗ ನಾವು ಕೂಡಾ ಗಾಬರಿಗೊಂಡು ರೂಮಿನಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ, ಅಲಮಾರದಲ್ಲಿಟ್ಟಿರುವ 6,70,000-00 ಕಿಮತ್ತಿನ ಬಂಗಾರ ಮತ್ತು ಬೆಳಿಯ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು. ನಂತರ ನಮ್ಮ ಅಣ್ಣತಮ್ಮಕೀಯ ನೀಲಕಂಠ ಜೇವರಗಿ ಇವರ ಫತ್ರಾ ಶಡ್ಡ್ ಹಾಕಿರುವ ಮನೆಗೆ ಹೋಗಿ ನೋಡಲಾಗಿ ಅಲಮಾರದಲ್ಲಿಟ್ಟಿರುವ 1,28,000-00 ರೂ. ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳು ಹಾಗು ನಗದು ಹಣ ಕಳ್ಳತನವಾಗಿದ್ದು ಇರುತ್ತದೆ. ನಮ್ಮ ಮನೆಯ ಅಲ್ಮಾರದಲ್ಲಿಟ್ಟಿರುವ ಮತ್ತು ನಮ್ಮ ಅಣ್ಣತಮ್ಮಕಿಯ ನೀಲಕಂಠ ಇವರ ಮನೆಯ ಅಲ್ಮಾರದಲ್ಲಿಟ್ಟಿರುವ ಒಟ್ಟು ಅ:ಕಿ: 7,98,000-00 ರೂ ಕಿಮ್ಮತ್ತಿನ ಬಂಗಾರ, ಬೆಳ್ಳಿ ಮತ್ತು ನಗದು ಹಣವನ್ನು ನಿನ್ನೆ ದಿನಾಂಕ: 23/04/2018 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ: 24/04/2018 ರಂದು ಬೆಳಿಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 17/04/2018 ರಂದು 10 ಪಿಎಮ್ ಸುಮಾರಿಗೆ ಕಲಬುರಗಿಯಿಂದ ನಮ್ಮ ವಾಹನದಲ್ಲಿ  DIsel ತಗೆದುಕೊಂಡು ಅಫಜಲಪೂರ ತಾಲೂಕಿನ ಕರಜಗಿ, ಮಾಶಾಳ ಟವಾರಗಳಿಗೆ DIsel ತಲುಪಿಸಿ ಮರಳಿ ಕಲಬುರಗಿಗೆ ಬರುವಾಗ ಅಫಜಲಪೂರ ದಾಟಿದ ಬಳಿಕ ನಮ್ಮ ವಾಹನದ ಚಾಲಕನಾದ ಗೌರಿಶಂಕರ ಈತನು ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸುತಿದ್ದನು ನಾನು ನಿಧಾನವಾಗಿ ಚಲಾಯಿಸು ಅಂತ ಹೇಳಿದರು ಕೇಳದೆ ಹಾಗೆ ಚಲಾಯಿಸುತ್ತಾ ಮಲ್ಲಾಬಾದ ಗ್ರಾಮದ ಬಸ್ಟ್ಯಾಂಡ ಹತ್ತಿರ ರೋಡಿನ ಬಾಜು ಇದ್ದ ಕನಕದಾಸ ಚೌಕ ಕಟ್ಟೆಗೆ ಡಿಕ್ಕಿ ಪಡಿಸಿದ ರಬಸಕ್ಕೆ ನನಗೆ ಎಡಗೈ ಭುಜಕ್ಕೆ ಟೊಂಕಕ್ಕೆ , ಭಾರಿ ಗುಪ್ತ ಗಾಯಗಳಾಗಿದ್ದು ಬಲಗಣ್ಣಿನ ಕೆಳಗೆ ರಕ್ತಗಾಯವಾಗಿದ್ದು ನಮ್ಮ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ನಮ್ಮ ವಾಹನ ಡಿಕ್ಕಿ ಪಡಿಸಿದ  ಶಬ್ದಕ್ಕೆ ಅಲ್ಲೆ ಹೊಟೇಲಗಳಲ್ಲಿ ಮಲಗಿದ ಜನರು ಎದ್ದು ಬಂದಿದ್ದು ನಮ್ಮ ಚಾಲಕ ಗೌರಿಶಕರ 108 ವಾಹನಕ್ಕೆ ಕಾಲ್ ಮಾಡಿ ಕರೆಯಿಸಿ ನನಗೆ ಅದರಲ್ಲಿ ಹಾಕಿಕೊಂಡು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕರೆದುಕೋಂಡು ಬಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತಾರೆ ಕಾರಣ ಟಾಟಾ ಎಸಿ ನಂ ಕೆಎ-32 ಸಿ-3396 ನೆದ್ದರ ಚಾಲಕ ಗೌರಿಶಂಕರನು ತನ್ನ ವಶದಲಿದ್ದ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ  ಮಲ್ಲಾಬಾದ ಗ್ರಮಾದ ರೋಡಿನ ಬಾಜು ಇರುವ ಕನಕದಾಸ ಚೌಕ ಕಟ್ಟೆಗೆ ಜೋರಾಗಿ ಡಿಕ್ಕಿ ಪಡಿಸಿ ನನಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿದ್ದು ಸದರಿ ಚಾಲಕನ  ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, April 23, 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 22/04/2018 ರಂದು ಸಾಯಂಕಾಲ ನಾನು ಕೆಲಸ ಮಾಡುತ್ತಿದ್ದಾಗ ಆಗ ನಮ್ಮ ಬಾಜು ಖಾಜಾ ದಾಲಮೀಲದಲ್ಲಿ ಕೆಲಸ ಮಾಡುವ ಬಿಹಾರ ರಾಜ್ಯದ ಒಬ್ಬ ಮನುಷ್ಯನು ನಮ್ಮ ಹುಡುಗನಿಗೆ ಯಾರೋ ದಾಲಮೀಲದ ಹಿಂದೆ ಹೊಡೆಯುತ್ತಿದ್ದಾರೆ ಅಂತಾ ಒಂದೇ ಸವನೇ ಚೀರಾಡುತ್ತಿದ್ದಾಗ ಆಗ ನಾನು ಮತ್ತು ನಮ್ಮ ದಾಲಮಿಲ ಮಾಲಿಕ ರಿಜ್ವಾನ ಹಾಗು ಬಿಹಾರ ರಾಜ್ಯದ ಇನ್ನು 03 ಜನರು ಕೂಡಿಕೊಂಡು ನಮ್ಮ ದಾಲಮೀಲದ ಹಿಂದುಗಡೆ ಇರುವ ಅಸ್ಪಾನ ಮೋಟಾರ್ಸ್ ಇವರ ಹೋದಲ್ಲಿ ಮುಳ್ಳಿನ ಕಂಟಿಯಲ್ಲಿ ಒಬ್ಬ ಹುಡಗನು ಬೋರಲಾಗಿ ಬಿದ್ದಿದ್ದನು ಆಗ 03 ಜನರು ಬಿಹಾರ ರಾಜ್ಯದ ಹುಡುಗರು ಅವನಿಗೆ ಸರಿಯಾಗಿ ಮಲಗಿಸಿ ನೋಡಲಾಗಿ ಅವನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ,  ಎಡಹಣೆಗೆ ತರಚಿದ ಗಾಯ, ಬಲಕಣ್ಣಿಗೆ ತರಚಿದ ಗಾಯ, ಎಡಗಣ್ಣಿನ ಕೆಳಗೆ ತರಚಿದ ಗಾಯ, ಎರಡು ಕಿವಿ ಮತ್ತು ಮೂಗಿನಿಂದ ರಸ್ತಸ್ರಾವ, ಎಡರಟ್ಟೆಗೆ ಮತ್ತು ಮೋಳಕೈಗೆ, ಹೆಬ್ಬೆರಳಿಗೆ ಮುಳ್ಳು ಚುಚಿದ ಗಾಯಗಳಾಗಿ ಎರಡು ಕಿವಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ನಂತರ ಅವನಿಗೆ ನಾನು ಮತ್ತು ಬಿಹಾರ ರಾಜ್ಯದ ಒಬ್ಬ ಹುಡುಗ ಇಬ್ಬರು ಕೂಡಿಕೊಂಡು ಸದರಿಯವನಿಗೆ ನನ್ನ ಮೋಟಾರ ಸೈಕಲ ಮೇಲೆ ನಡುವೆ ಕೂಡಿಸಿಕೊಂಡು ಕಪನೂರ ಗ್ರಾಮದ ಎ.ಎಸ್.ಎಮ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಸದರಿಯವನನ್ನು ಪರೀಕ್ಷಿಸಿದ ವೈದ್ಯರು ಈಗಾಗಲೆ ಮೃತಪಟ್ಟಿರುತ್ತನೆ ಅಂತಾ ತಿಳಿಸಿದ್ದು ನನ್ನ ಜೊತೆಗೆ ಮೋಟಾರ ಸೈಕಲ ಮೇಲೆ ಬಂದವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಭೋಜಮುಖಿಯಾ ತಂದೆ ಹೀರಾಲಾಲ ಮುಖಿಯಾ ಸಾ : ತಿರಬಿನಿ  ಸಾ:ತಿರಬಿನಿ ಅಂತಾ ತಿಳಿಸಿದ್ದು ಪ್ರಕಾಶ ತಂದೆ ಕೈಲಾಸ ಮುಖಿಯಾ ಮು:ಜೀತವಾರಪೂರ ತಾ:ಅರೇರಾ ಜಿ:ಮತಿಹಾರಿ ರಾಜ್ಯ: ಬಿಹಾರ ಹಾವ: ಮಹಮ್ಮದ ಜಾವೀದ ಇವರ ದಾಲಮೀಲದಲ್ಲಿ ಅಂತಾ ತಿಳಿಸಿರುತ್ತಾನೆ  ಮತ್ತು ನನ್ನೊಂದಿಗೆ ಸ್ಥಳಕ್ಕೆ ಬಂದ ಇಬ್ಬರ ಹೆಸರು ಸಿಪಾಯಿ ತಂದೆ ರಾಮರಂಗೇರಾವ ಹಾಗು ಹೀರಾಲಾಲ ತಂದೆ ರುವಾಲ ಪಣಿತ ಅಂತಾ ತಿಳಿಸಿದನು ಪ್ರಕಾಶ ಮುಖಿಯಾ ಇತನು ಸಾಯಂಕಾಲ 4 ಗಂಟೆಗೆ ದಾಲಮಿಲ್ದಿಂದ ಸಂಡಾಸಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ನಂತರ ಈ ಘಟನೆ ನಡೆದಿರುತ್ತದೆ   ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ಅಥವಾ ಯಾವುದೋ ದುರದ್ದೇಶದಿಂದ ಇಂದು ದಿನಾಂಕ:- 22/04/2018 ರಂದು ಸಾಯಂಕಾಲ 04:00 ಗಂಟೆಯಿಂದ 06:30 ಪಿ.ಎಂದ ಮದ್ಯದ ಅವಧಿಯಲ್ಲಿ ಮೃತ ಪ್ರಕಾಶ ಇತನು ಸಂಡಾಸಕ್ಕೆ ಹೋದಾಗ ಯಾವುದೋ ಭಾರವಾದ ವಸ್ತುವಿನಿಂದ ಅಥವಾ ಯಾವುದೋ ಹರಿತವಾದ ಆಯುದದಿಂದ ಆತನ ತಲೆಗೆ ಹಾಗು ಇತರೇ ಕಡೆಗೆ ಹೊಡೆದು ಬಾರಿ ಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ ಮಹಮ್ಮದ ಶಕೀಲ ತಂದೆ ಶಫೀ ಅಹೆಮ್ಮದ  ಸಾ : ಇಸ್ಲಾಮಾ ಬಾದ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ಶ್ರೀಮತಿ ಉಮಾಶ್ರೀ ಗಂಡ ಭಗವಂತ್ರಾಯ ಬಿರಾದಾರ ಸಾ||ಬಂಕಲಗಾ ತಾ||ಅಫಜಲಪೂರ ರವರ ಗಂಡನಾದ ಭಗವಂತ್ರಾಯ ತಂದೆ ಮಲ್ಲೇಶಿ ಬಿರಾದಾರ ಈತನು ದಿನಾಲು ಸರಾಯಿ ಸೇವನೆ ಮಾಡಿ ಮನೆಗೆ ಬರುತಿದ್ದನ್ನು ನಾನು ನಮ್ಮ ಅತ್ತೆಯಾದ ಶಿವಮ್ಮಾ ಮೈದುನನಾದ ಸಾಯಿಬಣ್ಣ ಸರಾಯಿ ಸೇವನೆ ಮಾಡಬೇಡ ಆರೋಗ್ಯ ಹಾಳಾಗುತ್ತೇ ಸಂಸಾರ ಕೆಡುತ್ತೇ ಎರಡು ಹೆಣ್ಣು ಮಕ್ಕಳಿವೆ ಅಂತ ತಿಳುವಳಿಕೆ ಹೇಳಿದರು ಕೇಳದೆ ನನಗೆ ಜೀವನ ಸಾಕಾಗಿದೆ ಅಂತ ಹೇಳಿ ದಿನಾಲು ಸರಾಯಿ ಸೇವನೆ ಮಾಡುತಿದ್ದನು ದಿನಾಂಕ 20/04/2018 ರಂದು 3.00 ಪಿಎಮ್ ಸುಮಾರಿಗೆ ನನ್ನ ಗಂಡನು ಸರಾಯಿ ಸೇವನೆ ಮಾಡಿ ಮನೆಗೆ ಬಂದು ನನಗೆ ಜೀವನ ಸಾಕಾಗಿದೆ ನಾನು ಇಂದು ಸಾಯುತ್ತೇನೆ ಅಂತ ಅನ್ನುತ್ತಾ ಹೊಲಕ್ಕೆ ಹೋಗುತ್ತೇನೆ ಅಂತ ಹೇಳಿ ಹೋದನು ನಾವು ಸರಾಯಿ ನಶೆಯಲ್ಲಿ ಹಾಗೇ ಹೇಳುತ್ತಾನೆ ಅಂತ ಸುಮ್ಮನಿದ್ದೇವು ನಂತರ 6.00 ಪಿಎಮ್ ಸುಮಾರಿಗೆ ನಮಗೆ ತಿಳಿದಿದ್ದೇನೆಂದರೆ ನನ್ನ ಗಂಡನಾದ ಭಗವಂತ್ರಾಯ ಈತನು ನಮ್ಮ ಹೊಲಕ್ಕೆ ಹೋಗುವ ದಾರಿಯಲ್ಲಿ ವಿಠ್ಠಲ ಜಾಮಗೊಂಡ ರವರ ಹೊಲದ ಹತ್ತಿರ ಕ್ರೀಮಿನಾಶಕ ವಿಷ ಸೇವನೆ ಮಾಡಿ ಒದ್ದಾಡುತಿದ್ದಾನೆ ಅಂತ ಗೊತ್ತಾಗಿ ನಾನು ನಮ್ಮ ಅತ್ತೆಯಾದ ಶಿವಮ್ಮಾ ಮೈದುನನಾದ ಸಾಯಿಬಣ್ಣ ಹಾಗು ನಮ್ಮ ಗ್ರಾಮದ ಸಿದ್ದರಾಮ ತಂದೆ ಯಶವಂತ್ರಾಯ ಬಿರಾದಾರ, ಮಲ್ಕಣ್ಣಗೌಡ ತಂದೆ ಹಣಮಂತ್ರಾಯ ಗೌಡ ಬಿರಾದಾರ ಎಲ್ಲರು ಕೂಡಿ ಒಂದು ಖಾಸಗಿ  ತಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ವಿಠ್ಠಲ ಜಾಮಗೊಂಡ ರವರ ಹೊಲದ ಹತ್ತಿರ ದಾರಿಯ ಮೇಲೆ ನನ್ನ ಗಂಡನು ಬಿದ್ದು ಒದ್ದಾಡುತಿದ್ದನು ನಾವು ನನ್ನ ಗಂಡನಿಗೆ ವಿಚಾರಿಸಿದಾಗ ಬೆಳೆಗೆ ಸಿಂಪಡಿಸುವ ಕ್ರೀಮಿನಾಷಕ ಔಷದಿ ಸರಾಯಿ ಕುಡಿದ ನಶೆಯಲ್ಲಿ 5.00 ಗಂಟೆ ಸುಮಾರಿಗೆ ಸೇವನೆ ಮಾಡಿರುತ್ತೇನೆ ಅಂತ ತಿಳಿಸಿದನು ನಾವು ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಕಲಬುರಗಿಯ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನ್ನ ಗಂಡನಿಗೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ 21/04/2018 ರಂದು ರಾತ್ರಿ 9.25 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, April 21, 2018

Yadgir District Reported Crimes Updated on 21-04-2018


                                        Yadgir District Reported Crimes
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ ;- 44/2018 ಕಲಂ: 323, 324, 504, 506 ಐ.ಪಿ.ಸಿ.;- ಪಿಯರ್ಾದಿಯು ದಿನಾಂಕ:19/04/2018ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಹಗರಟಗಿ ಗ್ರಾಮದ ತಿಪ್ಪಣ್ಣ ಮ್ಯಾಕಲದೊಡ್ಡಿ, ವಿರೇಶ ಸಜ್ಜನ ಕೂಡಿ ಮಾತನಾಡುತ್ತ ಹಗರಟಗಿ ಗ್ರಾಮದಲ್ಲಿನ ದೇವು ಬಂಡಿ ಸಾ|| ಹಗರಟಗಿ ಇವರ ಪಂಚರ ಅಂಗಡಿ ಹತ್ತಿರ ಇದ್ದಾಗ ತಿಪ್ಪಣ್ಣ ಮ್ಯಾಕಲದೊಡ್ಡಿ ಇವರು ತನ್ನ ಮೋಬೈಲ್ಗೆ ಕರೆನ್ಸಿ ಹಾಕು ಅಂತಾ ಅಡಿವೆಪ್ಪ ಸುಂಟಾಣ ಇವರಿಗೆ ಕೇಳಿದಾಗ ಪಿಯರ್ಾದಿಯು ಅವರಿಗೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಮಜಾಕಿಗೆ ಅಂದಾಗ ಅಲ್ಲಿಯೆ ಇದ್ದ ಆರೋಪಿತನು ಪಿಯರ್ಾದಿಗೆ ಯಾಕಲೆ ನಿಮ್ಮ ತಿಂಡಿ ಬಹಳ ಆಗಿದೆ ನಮ್ಮ ಮನುಷ್ಯನ ಗೂಡ ಜಗಳ ತೆಗೆಯುತ್ತಿರಿ ಭೊಸುಡಿ ಮಕ್ಕಳೆ ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಬೈದು ಜಗಳ ತೆಗೆದು ತಕ್ಕೆಕುಸ್ತಿಗೆ ಬಿದ್ದು ಕೈಯಿಂದ ಹೊಡೆದು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಪಿಯರ್ಾದಿಯ ಬಾಯಿಗೆ ಹೊಡೆದು ತೆರಚಿದ ರಕ್ತಗಾಯ ಪಡೆಸಿದ್ದು ಇರುತ್ತದೆ. ಈ ಜಗಳವನ್ನ ಅಲ್ಲಿಯೇ ಇದ್ದ ಹಗರಟಗಿ ಗ್ರಾಮದ ವಿರೇಶ ಸಜ್ಜನ, ಅಡಿವೆಪ್ಪ ಸುಂಟಾಣ ಇವರುಗಳು ಬಿಡಿಸಿದ್ದು ಹೊಡೆದವನ ವಿರುದ್ಧ ಕ್ರಮ ಜರುಗಿಸಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 45/2018 ಕಲಂ: 323, 324, 504, 506 ಐ.ಪಿ.ಸಿ.;- ಪಿಯರ್ಾದಿಯು ದಿನಾಂಕ:19/04/2018ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಹಗರಟಗಿ ಹಗರಟಗಿ ಗ್ರಾಮದ ಗುರಣ್ಣ ತಂದೆ ಬಸನಗೌಡ ಮೈಲೆಸೂರ, ತಿಪ್ಪಣ್ಣ ತಂದೆ ಸಂಗಣ್ಣ ಮ್ಯಾಕಲದೊಡ್ಡಿ, ವಿರೇಶ ತಂದೆ ಬಸಪ್ಪ ಸಜ್ಜನ ಕೂಡಿ ಮಾತನಾಡುತ್ತ ಹಗರಟದಲ್ಲಿನ ದೇವು ಬಂಡಿ ಸಾ||ಹಗರಟಗಿ ಇವರ ಪಂಚರ ಅಂಗಡಿ ಹತ್ತಿರ ಇದ್ದಾಗ ಪಿಯರ್ಾದಿಯು ಅಲ್ಲಿಯೇ ಇದ್ದನು ತಿಪ್ಪಣ್ಣ ಮ್ಯಾಕಲದೊಡ್ಡಿ ಇವರು ತನ್ನ ಮೋಬೈಲ್ಗೆ ಕರೆನ್ಸಿ ಹಾಕು ಅಂತಾ ಅಲ್ಲಿಯೇ ಇದ್ದ ಅಡಿವೆಪ್ಪ ಸುಂಟಾಣ ಇವರಿಗೆ ಕೇಳಿದಾಗ ಆರೋಪಿ ಗುರಣ್ಣ ತಂದೆ ಬಸನಗೌಡ ಮೈಲೆಸೂರ ಸಾ|| ಹಗರಟಗಿ ಈತನು ಮದ್ಯದಲ್ಲಿ ಬಂದು ಅವರಿಗೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಅಡಿವೆಪ್ಪನಿಗೆ ಹೇಳಿದಾಗ ಪಿಯರ್ಾದಿಯು ಗುರಣ್ಣ ಮೈಲೆಸೂರ ಈತನಿಗೆ ಅಡಿವೆಪ್ಪನು ಎಲ್ಲಿಗಾದರು ಹೋಗುತ್ತಾನ ನೀನು ಯಾಕೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಹೇಳುತ್ತಿ ಅಂತಾ ಕೇಳಿದಾಗ ಗುರಣ್ಣ ಮೈಲೆಸೂರ ಈತನು ಪಿಯರ್ಾದಿಗೆ ಲೇ ಸೂಳಿ ಮಗನೆ ಅದನ್ನೆಲ್ಲಾ ನೀನು ಏನು ಕೇಳುತ್ತಿ ಅಂತಾ ಅಲ್ಕಾ ಶಬ್ದಗಳಿಂದ ಬೈದು ತಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಮತ್ತು ಕಲ್ಲಿನಿಂದ ಮೈ-ಕೈಗೆ ಹೊಡೆ-ಬಡೆ ಮಾಡಿದ್ದು ಇರುತ್ತದೆ  ಇರುತ್ತದೆ ಅಂತಾ ಪಿಯರ್ಾದಿಯ ಲಿಖೀತ ದೂರಿನ ಸಾರಾಂಶ ಇರುತ್ತದೆ.  

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 114/2018 ಕಲಂ 341 323 324 307 504 506 34 ಐಪಿಸಿ;- ದಿ:18/04/2018 ರಂದು ರಾತ್ರಿ 9 ಗಂಟೆ ಸುಮಾರಿಗೆ ಫಿರ್ಯಾಧಿಯು ಆರೋಪಿಯ ಮನೆಯ ಮುಂದೆ ಹೊರಟಾಗ ಆರೋಪಿತರೆಲ್ಲರೂ ಸೇರಿ ಹಳೆಯ ವೈಷ್ಯಮ್ಯದಿಂದ ಹಾಗು ರಾಜಕೀಯದಲ್ಲಿ ದಿಮಾಕು ಮಾಡುತ್ತಾ ತಿರುಗಾಡುತ್ತಿ ನಮ್ಮ ಪಕ್ಷದಲ್ಲಿ ಬಾ ಎಂದರೆ ಬರುವುದಿಲ್ಲ ಅಂತಾ ಫಿರ್ಯಾಧಿಗೆ ತಡೆದು ನಿಲ್ಲಿಸಿ ಬಡಿಗೆಯಿಂದ ಬಲಗಾಲಿಗೆ ಹೊಡೆದು ಭಾರಿಗಾಯ ಪಡಿಸಿದ್ದು ಅಲ್ಲದೆ ಕಲ್ಲಿನಿಂದ ಕೈಗೆ ಮತ್ತು ಕಾಲಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಮತ್ತು ಫಿರ್ಯಾಧಿಯ ಮಮರ್ಾಂಗಕ್ಕೆ ಕೈಯಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿಸಲು ಪ್ರಯತ್ನಿಸಿದಾಗ ಫಿರ್ಯಾಧಿಯ ತಂದೆ ಹಾಗೂ ಇತರರು ಕೂಡಿಕೊಂಡು ಬಂದು ಜಗಳ ಬಿಡಿಸಲು ಪ್ರಯತ್ನಿಸಿದಾಗ ಫಿರ್ಯಾದಿಯ ತಂದೆಗೆ ಸಹ ಹೊಡೆ ಬಡೆ ಮಾಡಿದ್ದು ಸ್ವಲ್ಪ ಹೊತ್ತಿನ ನಂತರ ಫಿರ್ಯಾಧಿಯ ಮನೆಯ ಮುಂದೆ ಹೋಗಿ ಪುನ:ಹ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಫಿರ್ಯರ್ಾಧಿ ಮತ್ತು ಅವರ ತಂದೆಯು ಕೂಡಿಕೊಂಡು ವಿಜಯಪೂರ ಆಸ್ಪತ್ರೆಗೆ ಹೋಗಿ ಇಲಾಜ ಕುರಿತು ಸೇರಿಕೆಯಾಗಿದ್ದು ನಾವು ಸದರಿ ದೂರನ್ನು ಕೊಡಲು ತಡವಾಗಿರುತ್ತದೆ. ಆರೋಪಿತರ ವಿರುದ್ಧ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಫಿರ್ಯಾದಿಯ ಟೈಪ್ ಮಾಡಿದ ಅಜರ್ಿಯ  ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 263/2018 ಕಲಂ 379  ಐ.ಪಿ.ಸಿ;- ದಿನಾಂಕ 20/04/2018 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಶ್ರೀ ಮಹಾಂತಗೌಡ ತಂದೆ ಶರಣಗೌಡ  ಪೊಲೀಸ್ ಪಾಟೀಲ ವಯ 40 ವರ್ಷ ಜಾತಿ ಲಿಂಗಾಯತ ಉಃ ಖಾಸಗಿ ಕೆಲಸ ಸಾಃ ಕಲ್ಲಹಂಗರಗಾ ತಾಃ ಜೇವಗರ್ಿ ಹಾಲಿವಸತಿ ಬಾಪುಗೌಡ ನಗರ ಶಹಾಪೂರ ತಾಃ ಶಹಾಪೂರ ಜಿಃ ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ ಫಿರ್ಯಾದಿ ತಮ್ಮ ಪ್ಯಾಶನ ಮೋಟರ ಸೈಕಲ್ ನಂ  ಏಂ-28-ಇಅ-0164  ಅಂ.ಕಿ 40,000=00 ನೇದ್ದು ದಿನಾಂಕ 14/04/2018 ರಂದು ಮುಂಜಾನೆ 10-00 ಗಂಟೆಗೆ ಶಹಾಪೂರ ನಗರದ ವಿಜಯ ಗ್ಯಾಸ್ ಏಜೇನ್ಸಿ ಅಂಗಡಿಯ ಕಂಪೌಂಡ ಗೋಡೆಯ ಹತ್ತಿರ ನಿಲ್ಲಿಸಿ ಕೇಲಸಕ್ಕೆ ಹೋಗಿ ಮರಳಿ ಮದ್ಯಾಹ್ನ 13-30 ಗಂಟೆಗೆ ಊಟಕ್ಕೆ ಹೋಗುವ ಸಮಯದಲ್ಲಿ ತನ್ನ ಮೋಟರ ಸೈಕಲ್ ಹತ್ತಿರ ಬಂದಾಗ ಸದರಿ ಮೋಟರ ಸೈಕಲ್ ಇರಲಿಲ್ಲ ಎಲ್ಲಾಕಡೆ ಹುಡಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ತನ್ನ ಮೋಟರ ಸೈಕಲ್ ಬಗ್ಗೆ  ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತ  ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 263/2018 ಕಲಂ  379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 264/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 20/04/2018 ರಂದು ಮದ್ಯಾಹ್ನ 13-00 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗಾರಾಜ ಜಿ. ಪಿ.ಐ. ಸಾಹೇಬರು. ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಲಾರಿ, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 20-04-2018 ರಂದು ಬೇಳಿಗ್ಗೆ 10-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ದೇವದುರ್ಗ ಕ್ರಾಸ್ ಕಡೆಯಿಂದ ಒಂದು ಲಾರಿಯಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ಲೋಡಮಾಡಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ. 164, ಲಕ್ಕಪ್ಪ.ಪಿ.ಸಿ.198. ಜೀಪ ಚಾಲಕ ಅಮಗೊಂಡ ಎ.ಪಿ.ಸಿ.169 ರವರಿಗೆ ಮಾಹಿತಿ ವಿಷಯ ತಿಳಿಸಿ. ದಾಳಿ ಕುರಿತು ಹೋಗುವ ಸಂಬಂದ ಲಕ್ಕಪ್ಪ.ಪಿ.ಸಿ.198. ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರಿಗೆ ಕರೆದು ಕೊಂಡು ಬಂದು 10-10 ಗಂಟೆಗೆ ಹಾಜರ ಪಡಿಸಿದ್ದು ಸದರಿಯವರಿಗೆ ಮಾಹಿತಿ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೇ ಬರೆಯಿಸಿಕೊಡಲು ಕೆಳೀಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ದಾಳಿ ಕುರಿತು ಎಲ್ಲರು ಕೂಡಿ 10-20 ಗಂಟೆಗೆ ಠಾಣೆಯ ಜೀಪ್ ನಂ ಕೆ.ಎ-33-ಜಿ-0138 ನ್ನೇದ್ದರಲ್ಲಿ ಹೊರಟು ಶಹಾಪೂರ-ಸುರಪೂರ ಮುಖ್ಯರಸ್ತೆಯ ವಿಬೂತಿಹಳ್ಳಿ ಹತ್ತಿರದ ತಿಪನಳ್ಳಿ ಕ್ರಾಸ್ ಹತ್ತಿರ ರೋಡಿನ ಮೇಲೆ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಗಾಮಾಡುತ್ತ ಬೆಳಿಗ್ಗೆ 10-40 ಗಂಟೆಗೆ ನಿಂತಾಗ, ವಿಬೂತಿಹಳ್ಳಿ ಗ್ರಾಮದ ಕಡೆಯಿಂದ ಬೆಳಿಗ್ಗೆ 10-45 ಗಂಟೆಗೆ ಒಂದು ಮರಳು ತುಂಬಿದ ಲಾರಿ ರೋಡಿನ ಮೇಲೆ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಲಾರಿ ಚಾಲಕನಿಗೆ ವಾಹದ ಮತ್ತು ಲಾರಿಯಲ್ಲಿನ ಲೋಡಿನ ದಾಖಲಾತಿಗಳನ್ನು ತೆಗೆದು ಕೊಂಡು ಬರಲು ತಿಳಿಸಿದ್ದಾ ಸದರಿ ಚಾಲಕನು ನಮ್ಮ ಲಾರಿ ಮಾಲಿಕರು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದು ಶಹಾಪೂರಕ್ಕೆ ಮಾರಾಟ ಮಾಡಲು ತಿಳಿಸಿದ್ದರಿಂದ ನಾನು ಕಳ್ಳತನದಿಂದ ಮರಳು ತುಂಬಿಕೊಂಡು ಹೋರಟಿರುತ್ತೆನೆ ಅಂತ ಅನ್ನುತ್ತ ಲಾರಿ ಬಿಟ್ಟು ಓಡಿ ಹೋದನು ಆಗ ನಾವು ಸದರಿ ಚಾಲಕನಿಗೆ ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ಮರಳಿ ಲಾರಿ ಹತ್ತಿರ ಬಂದು ಸದರಿ ಲಾರಿಯನ್ನು ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಕೆಂಪು ಮತ್ತು ಬಿಳಿ ಬಣ್ಣದ ಟಾಟಾ ಕಂಪನಿಯ ಲಾರಿ ನಂಬರ ಕೆಎ-32ಎ-5127 ನ್ನೇದ್ದರ ಅ:ಕಿ: 300000=00 ರೂ ಸದರಿ ಲಾರಿಯಲ್ಲಿ ಅಂದಾಜು 5 ಬ್ರಾಸ್ ಮರಳು ಇದ್ದು ಅದರ ಅ:ಕಿ:7500=00 ರೂ ಇರುತ್ತದೆ. ಸದರಿ ಲಾರಿ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೋಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 11-00 ಎ.ಎಮ್. ದಿಂದ 12-00 ಪಿ.ಎಮ್. ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಲಾರಿಯನ್ನು ಬೇರೆಚಾಲಕನ ಸಹಾಯದಿಂದ ಠಾಣೆಗೆ ಮದ್ಯಾಹ್ನ 12-30 ಪಿ.ಎಮ್.ಕ್ಕೆ ಬಂದು. ವರದಿಯನ್ನು ತಯ್ಯಾರಿಸಿ ಒಂದು ಮರಳು ತುಂಬಿದ ಲಾರಿ, ಜಪ್ತಿ ಪಂಚನಾಮೆಯನ್ನು, ಹಾಜರಪಡಿಸಿ ಸದರಿ ಲಾರಿ ಮಾಲಿಕ ಮತ್ತು ಓಡಿ ಹೋದ ಲಾರಿ ಚಾಲಕ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು ಮದ್ಯಾಹ್ನ 13-00 ಪಿ.ಎಂ.ಕ್ಕೆ ಸ||ತ|| ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 264/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 118/2018 ಕಲಂ, 78(3) ಕೆ.ಪಿ.ಆ್ಯಕ್ಟ್;- ದಿನಾಂಕ: 20/04/2018 ರಂದು 07.15 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಜಗದೇವಪ್ಪ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ, ಮುದ್ದೇಮಾಲು ಸಮೇತ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು, ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 20/04/2018 ರಂದು 05.55 ಪಿ.ಎಮ್.ಕ್ಕೆ ಗೋಗಿ ಪೇಠ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿತನಾದ )ಪರಶುರಾಮ ತಂದೆ ಹರಿಶ್ಚಂದ್ರ ಹೊಸಮನಿ ಸಾ: ಸಿಂಗನಳ್ಳಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 720=00 ರೂ. ಹಾಗೂ ಒಂದು ಮಟಕಾ ಚೀಟಿ ಅ.ಕಿ: 00=00 ರೂ.ಗಳು ಮತ್ತು ಒಂದು ಬಾಲ್ ಪೆನ್ ಅ.ಕಿ: 00=00 ರೂ. ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ಮತ್ತು ಸದರಿ ಆರೋಪಿ ಮಟಕಾ ಬರೆದುಕೊಂಡು ಹೋಗಿ ಕೊಡುತ್ತಿದ್ದ ಅಶೋಪ ಗುತ್ತೇದಾರ ಸಾ: ಗೋಗಿ ಪೆಠ ಈತನ ವಿರುದ್ದ ಕಲಂ, 78() ಕೆ.ಪಿ.ಕಾಯ್ದೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಜರಿಗಿಸಿ ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 08.15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 118/2018 ಕಲಂ, 78(3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 84/2018 ಕಲಂ:324, 504, 506, 342, 354 ಸಂಗಡ 34 ಐಪಿಸಿ;-ದಿನಾಂಕ:19.04.2018 ರಂದು ರಾತ್ರಿ 11:45 ಗಂಟೆಗೆ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ರಾಜನಕೊಳೂರು ಇವರು ಫೋನ್ ಮಾಡಿ ಶಿಲ್ಪಾ ಗಂಡ ಚಂದ್ರಶೇಖರಗೌಡ ಮಾಗನೂರು ಇವರು ಗಾಯಹೊಂದಿ ಉಪಚಾರಕ್ಕಾಗಿ ತಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಹದ್ದಿಯ ಪ್ರಯುಕ್ತ ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ತಿಳೀಸಿದ್ದರಿಂದ ನಾನು ಸದರ ಎಮ್,.ಎಲ್.ಸಿ ವಿಚಾರಣೆಗಾಗಿ ಠಾಣೆಯಿಂದ 11:50 ಗಂಟೆಗೆ ಹೊರಟು ಇಂದು ದಿನಾಂಕ:20.04.2018 ರಂದು 00:05 ಗಂಟೆಗೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಶ್ರೀಮತಿ ಶಿಲ್ಪಾ ಗಂಡ ಚಂದ್ರಶೇಖರಗೌಡ ಮಾಗನೂರು ವಯ:30 ವರ್ಷ, ಜಾ:ಹಿಂದೂ ರೆಡ್ಡಿ ಉ:ಮನೆಗೆಲಸ, ಸಾ:ರಾಜನಕೊಳೂರು ರವರಿಗೆ ವಿಚಾರಿಸಿ ಸದರಿಯವರ ಹೇಳಿಕೆಯನ್ನು 00:15 ಗಂಟೆಯಿಂದ 01:15 ಗಂಟೆಯ ವರೆಗೆ ಆಸ್ಪತ್ರೆಯಲ್ಲಿ ಪಡೆದುಕೊಂಡು ಮರಳಿ ಸದರಿ ಫಿಯರ್ಾದಿಯ ಹೇಳೀಕೆಯೊಂದಿಗೆ 01:30 ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ, ನಾನು ನನ್ನ ಮನೆಯವರಾದ ಚಂದ್ರಶೇಖರಗೌಡ, ಮಕ್ಕಳಾದ ಸಂಪತ್ಕುಮಾರ, ಚಂದನಾ ಮತ್ತು ಸಂಜನಾ ರವರೊಂದಿಗೆ ಉಪಜೀವಿಸುತ್ತಿದ್ದು, ನನ್ನ ಮನೆಯವರು ಯಾದಗಿರಿ ಜಿಲ್ಲಾ ಬಿಜೆಪಿ ಪಕ್ಷದ ಅದ್ಯಕ್ಷರಾಗಿದ್ದು, ರಾಜಕೀಯದಲ್ಲಿ ಹಾಗು ಬಿಸಿನೆಸ್ಗಳಲ್ಲಿ ಸಕ್ರೀಯರಾಗಿದ್ದು ಇರುತ್ತದೆ. ಇಂದು ರಾತ್ರಿ 10:30 ಪಿ.ಎಮ್ ಸುಮಾರಿಗೆ ಊಟ ಮಾಡಿ ನಮ್ಮ ಮನೆಯ ಹೊರಗಡೆ ವಾಕಿಂಗ್ ಮಾಢುತ್ತಿರುವಾಗ ಮನೆಗೆ (ಕಂಪೌಂಡ್) ಹತ್ತಿಕೊಂಡು ಇರುವ ನಮ್ಮ ಎಸ್.ಜಿ.ಕೆ.ಕೆ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಹತ್ತಿರ ಇರುವ ಮೂವೆಬಲ್ ಗೇಟ್ ದಾಟಿ ಸಪ್ಪಳ ಸದ್ದು ಕೇಳಿಸಲು ನಾನು ಆ ಕಡೆಗೆ ಹೋಗಿ ಗೇಟ್ ಹತ್ತಿರ ಬಾಗಿಲು ದಾಟಿ ನೋಡಬೇಕೆನ್ನುವಷ್ಟರಲ್ಲಿ ನಮ್ಮ ಶಾಲೆಯ ಮುಖ್ಯ ರಸ್ತೆಯಿಂದ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಇಬ್ಬರು ಜೀನ್ಸ್ ಪ್ಯಾಂಟ್ ಹಾಗು ಖಾಕಿ/ಕಟ್ಟಿಗೆ ಕಲರ್ ತರಹದ ಟೀ-ಶರ್ಟ ದರಿಸಿದ ಸುಮಾರು 25-30 ವರ್ಷದೊಳಗಿನ ಯುವಕರು ಬಂದವರೇ ಒಮ್ಮಿಂದೊಮ್ಮೇಲೆ ನನಗೆ ಕೈಗಳನ್ನು ಹಿಡಿದು ನಾನು ಮೈಮೇಲೆ ದರಿಸಿದ ನೈಟಿಯ ಮೇಲ್ಗಡೆ ಹಾಕಿಕೊಂಡ ಟವೆಲ್ದಿಂದ ಬಾಯಿ ಕಟ್ಟಿಹಾಕಿ ನಮ್ಮ ಶಾಲೆಯ ಒಂದನೇ ತರಗತಿಯಲ್ಲಿ ನನಗೆ ಕರೆದೊಯ್ದು ಖುಚರ್ಿಯ ಮೇಲೆ ಕೂಡಿಸಿ ಕ್ಯಾಂಡಲ್/ಮೇನದಬತ್ತಿಯನ್ನು ಬೆಂಕಿ ಪಟ್ಟಣದಿಂದ ಹಚ್ಚಿ ನನ್ನ ಕೂದಲಿ ಧರಿಸಿದ ಹೇರ್ ಕ್ಲಿಪ್ನ್ನು ಕಿತ್ತುಕೊಂಡು ನನ್ನ ಎರಡೂ ಕೈಗಳಿಗೆ ಕಾಲುಗಳಿಗೆ ಮೇಣದ ಬತ್ತಿಗೆ ಕ್ಲಿಪ್ನ್ನು ಕಾಯಿಸಿ ಕಾಯಿಸಿ ಬರೆ ಹಾಕಿದರು. ಈ ಮದ್ಯದಲ್ಲಿ ನನಗೆ ಅವಾಚ್ಯ ಶಬ್ದಳಿಂದ ಬೈಯುತ್ತ ನಿನ್ನ ಮಕ್ಕಳು ಎಲ್ಲಿ ನಿನ್ನ ಗಂಡನಿಗೆ ರಾಜಕೀಯ ಮಾಡುವದನ್ನು ಬಿಡು ಅಂತಾ ಹೇಳು ಇಲ್ಲದಿದ್ದರೆ ನಿನ್ನ ಗಂಡ ಹಾಗು ಮಕ್ಕಳಿಗೆ ಜೀವ ಸಹಿತ ಬಿಡುವದಿಲ್ಲ ಹಾಗು ಖಲಾಸ್ ಮಾಡಿಯೇ ತೀರುತ್ತೇವೆ ಅಂತಾ ನನಗೆ ಜೀವದ ಬೆದರಿಕೆ ಹಾಕುತ್ತಿರುವಾಗ ನಾನು ಸುಟ್ಟ ಗಾಯಗಳಿಂದ ವಿಪರೀತ ನೋವಾಗಿ ಚೀರಾಡ ಹತ್ತಲು ನಮ್ಮ ವಸತಿಯಿಂದ ಅಯ್ಯಮ್ಮ ಪಾಟೀಲ್ ಹಾಗು ಮನೆಯಲ್ಲಿದ್ದ ನವೀನ್ ತಂದೆ ಭೀಮನಗೌಡ ದದ್ದಲ್ ಇವರುಗಳು ಓಡಿ ಬರುವ ಸದ್ದು ಕೇಳಿ ನಮ್ಮ ಶಾಲೆಯ ಕಟ್ಟಡದ ಹಿಂದಿನಿಂದ ಇಬ್ಬರು ವ್ಯಕ್ತಿಗಳು ನನಗೆ ಅಲ್ಲಯೇ ಬಿಟ್ಟು ಹೋಡಿ ಹೋದರು. ಸದರಿ ಇಬ್ಬರನ್ನೂ ಕೂಡಾ ನಾನು ಗುರುತಿಸಬಲ್ಲೆ. ಕಾರಣ ನನಗೆ ಈ ರೀತಿಯಾಗಿ ಕೂಡಿ ಹಾಕಿ ಬರೆ ಕಟ್ಟು ನನ್ನ ಗಂಡ ಮಕ್ಕಳಿಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ ಇಬ್ಬರ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಫೀಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:85/2018 ಕಲಂ:324, 504, 506, 342, 354 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.