Police Bhavan Kalaburagi

Police Bhavan Kalaburagi

Tuesday, September 26, 2017

BIDAR DISTRICT DAILY CRIME UPDATE 26-09-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-09-2017

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 25/2017, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶರಣಪ್ಪಾ ತಂದೆ ಮಹಾರುದ್ರಪ್ಪಾ ಮಲಗೆ ವಯ: 62 ವರ್ಷ, ಜಾತಿ: ಲಿಂಗಾಯತ, ಸಾ: ಸಿದ್ದೇಶ್ವರ ರವರು ಕಳೆದ 5 ವರ್ಷಗಳಿಂದ ತಮ್ಮೂರ ಶಶಿಧರ ಶೀತಾ ಇವರ 4 ಎಕ್ಕರೆ ಜಮೀನು ಮತ್ತು ಚಂದ್ರಕಾಂತ ರವರ 6 ಎಕ್ಕರೆ ಜಮೀನು ಫಿರ್ಯಾದಿ ಮತ್ತು ಫಿರ್ಯಾದಿಯವರ ಮಗ ಅನೀಲಕುಮಾರ ವಯ: 34 ವರ್ಷ ಕೂಡಿಕೊಂಡು ಕಡಿದು ವ್ಯವಸಾಯ ಮಾಡುತ್ತಿದ್ದು, ಕಳೆದ 2-3 ವರ್ಷಗಳಿಂದ ಮಳೆ, ಬೆಳೆಯಾಗದೆ ತುಂಬಾ ಸಾಲ ಮಾಡಿಕೊಂಡಿದ್ದು, ಬಿಜ, ಗೊಬ್ಬರ ಮತ್ತು ಕಡಿದು ಮಾಡಿದ ಹೀಗೆ ಒಟ್ಟು 3 ರಿಂದ 4 ಲಕ್ಷ ರೂಪಾಯಿ ಸಾಲ ಆಗಿರುತ್ತದೆ, ಸಾಲ ಹೇಗೆ ತಿರಿಸುವುದು ಅಂತಾ ಫಿರ್ಯಾದಿಯವರ ಮಗ ಕಳೆದ 5-6 ತಿಂಗಳಿಂದ ಖಿನ್ನತೆಯಿಂದ ಬಳಲುತ್ತಿದ್ದು, ಪ್ರಸ್ತುತ ವರ್ಷ ಉದ್ದು ಮತ್ತು ಹೆಸರು ಸಹ ಕೈ ಕೊಟ್ಟಿರುತ್ತದೆ, ಜೀವನ ಹೇಗೆ ಮಾಡಬೇಕೆಂದು ಮಗ ಬೆಸತ್ತಿದ್ದು, ಹೀಗಿರುವಲ್ಲಿ ಫಿರ್ಯಾದಿಯವರ ಮಗ ದಿನಾಂಕ 24-09-2017 ರಂದು ತಾವು ಕಡಿದು ಮಾಡಿದ ಶಶಿಧರ ಶೀತಾ ರವರ ಹೊಲದಲ್ಲಿ ಯಾವುದೋ ಕೀಟನಾಶಕ ಔಷಧಿ ಸೇವನೆ ಮಾಡಿದ್ದು, ಕೂಡಲೇ ಆತನಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ಮತ್ತು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು, ಪರೀಕ್ಷಿಸಿದ ವೈಧ್ಯರು ಫಿರ್ಯಾದಿಯವರ ಮಗ ಅನೀಲಕುಮಾರ ತಂದೆ  ಶರಣಪ್ಪಾ   ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಸಿದ್ದೇಶ್ವರ, ತಾ: ಭಾಲ್ಕಿ ಇತನು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ, ಮಗ ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 25-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 131/2017, PÀ®A. 279. 337, 338 L¦¹ :-
¢£ÁAPÀ 25-09-2017 gÀAzÀÄ ¦üAiÀiÁ𢠸ÀAUÀ¥Áà vÀAzÉ PÀ®è¥Áà ¥ÀAZÁ¼À eÉÆüÀzÁ§PÁ UÁæªÀÄ, vÁ: ¨sÁ°Ì gÀªÀgÀÄ vÀªÀÄÆägÀ ªÀĺÉñÀ vÀAzÉ ¥ÀæPÁ±À ªÉÄÊ®ÆgÉ E§âgÀÆ CªÀgÀ ¥À®ìgÀ ªÉÆmÁgÀ ¸ÉÊPÀ® £ÀA. PÉJ-38/PÀÆå-0497 £ÉzÀÝgÀ ªÉÄÃ¯É zÀ¸ÀgÁ ºÀ§âzÀ PÀÄjvÀÄ ªÀÄ£ÉUÉ §tÚ ºÀZÀÑ®Ä §tÚ vÀgÀ®Ä vÀªÀÄÆäj¤AzÀ ©ÃzÀgÀPÉÌ ºÉÆÃV ©ÃzÀgÀzÀ°è §tÚªÀ£ÀÄß Rjâ ªÀiÁrPÉÆAqÀÄ E§âgÀÄ ¸ÀzÀj ªÉÆÃmÁgÀ ¸ÉÊPÀ® ªÉÄÃ¯É ©ÃzÀgÀ¢AzÀ ªÀÄgÀ½ eÉÆüÀzÁ§PÁ UÁæªÀÄPÉÌ ¯Á®¨ÁUÀ ªÀiÁUÀðªÁV §gÀÄwÛgÀĪÁUÀ ªÀĺÉñÀ EvÀ£ÀÄ ªÉÆmÁgÀ ¸ÉÊPÀ®£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹ ©ÃzÀgÀ-¨sÁ°Ì gÉÆÃr£À CwªÁ¼À PÁæ¸À ºÀwÛgÀ §AzÁUÀ JzÀÄgÀUÀqÉ ¨sÁ°Ì PÀqɬÄAzÀ ¸ÀÄgÀhÄÆQ ¹PÀìgÀ ªÉÆÃmÁgÀ ¸ÉÊPÀ® £ÀA. PÉJ-38/AiÀÄÄ-1417 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ DvÀ£ÀÄ ªÀÄvÀÄÛ ªÀĺÉñÀ E§âgÀÄ JzÀÄgÀÄ §zÀgÁV rQÌAiÀiÁzÁUÀ ¦üAiÀiÁð¢AiÀÄ JqÀUÁ°£À ªÉÆüÀPÁ® qÀ©âAiÀÄ ºÀwÛgÀ ºÁUÀÆ ºÉ§âgÀ½UÉ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ ªÀÄvÀÄÛ ªÀĺÉñÀ EvÀ¤UÉ JqÀPÁ° ªÉÆüÀPÁ® qÀ©âAiÀÄ ºÀwÛgÀ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ ªÀÄvÀÄÛ JqÀPÉÊ ªÉÆüÀPÉÊ qÀ©âAiÀÄ ºÀwÛgÀ ªÀÄvÀÄÛ ¨sÀÄdPÉÌ ¨sÁj UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ ªÉÆÃmÁgÀ ¸ÉÊPÀ® £ÀA. PÉJ-38/AiÀÄÆ-1417 £ÉÃzÀgÀ ZÁ®PÀ¤UÉ DvÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À®Ä DvÀ£ÀÄ vÀ£Àß ºÉ¸ÀgÀÄ UÀuÉñÀ vÀAzÉ ªÀÄ°èPÁdÄð£À zɪÀ¹ð ¸Á: ªÀĺÁqÉÆÃtUÁAªÀ CAvÀ w½¹zÀÄÝ DvÀ¤UÉ JqÀUÁ® ªÉÆüÀPÁ® qÀ©âAiÀÄ ºÀwÛgÀ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁVzÀÄÝ ªÀÄvÀÄÛ JqÀUÀtÂÚ£À ªÉÄð£À ºÀÄ©â£À ºÀwÛgÀ gÀPÀÛUÁAiÀÄUÀ¼ÁVgÀÄvÀÛªÉ, ¸ÀzÀj WÀl£É »AzÉ vÀªÀÄä ªÉÆÃmÁgÀ ¸ÉÊPÀ® ªÉÄÃ¯É §gÀÄwÛzÀÝ vÀªÀÄÆägÀ EAzÀ¥Àà vÀAzÉ CªÀÄÈvÀ UÉÆçgÉ ªÀÄvÀÄÛ ªÀÄZÉÑAzÀæ vÀAzÉ ºÀtªÀÄAvÀ eÁzsÀªÀ gÀªÀgÀÄ ¸ÀzÀj WÀl£ÉAiÀÄ£ÀÄß PÀuÁÚgÉ £ÉÆÃr vÀªÀÄä ªÉÆÃmÁgÀ ¸ÉÊPÀ®£ÀÄß gÉÆÃr£À §¢UÉ ¤°è¹ EAzÀ¥Áà UÉÆçgÉgÀªÀgÀÄ 108 vÀÄvÀÄð ªÁºÀ£ÀPÉÌ PÀgÉ ªÀiÁr CzÀgÀ°è UÁAiÀÄUÉÆAqÀ ¦üAiÀiÁð¢UÉ, ªÀĺÉñÀ ªÉÄÊ®ÆgÉ ªÀÄvÀÄÛ UÀuÉñÀ gÀªÀgÉ®ègÀ£ÀÄß aQvÉì PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 166/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-09-2017 ರಂದು ಫಿರ್ಯಾದಿ ಗಣಪತಿ ತಂದೆ ಶೇಟ್ಟಿ ಚವ್ಹಾಣ ವಯ: 25 ವರ್ಷ, ಜಾತಿ: ಲಂಬಾಣಿ, ಸಾ: ಸಲಗರ ಬಸಂತಪೂರ ಪಾಲ್ತೆ ಥಾಂಡಾ ರವರು ಚಿಟಗುಪ್ಪಾಕ್ಕೆ ಬಂದು ಮರಳಿ ತಮ್ಮೂರಿಗೆ ತಮ್ಮ ಥಾಂಡಾದ ಕಿಶೋರ ರಾಠೋಡ ರವರ ಟಾಟಾ ಮ್ಯಾಜಿಕ ನಂ. ಕೆಎ-32/ಬಿ-6150 ನೇದರಲ್ಲಿ ಮುಸ್ತರಿ-ಮದರಗಿ ರೋಡ ಮೇಲೆ ಹೋಗುವಾಗ ಮುಸ್ತರಿ ಶಿವಾರದ ಹತ್ತನಕೇರೆ ಹನುಮಾನ ಮಂದಿರದ ಹತ್ತಿರ ರೋಡಿನ ಮೆಲೆ ಹಿಂದಿನಿಂದ ಬಂದ ಒಂದು ಕಮಾಂಡರ ಜೀಪ ನಂ. ಕೆಎ-32/ಎಮ್-1123 ನೇದರ ಚಾಲಕನಾದ ಆರೋಪಿ ತನ್ನ ಜೀಪನ್ನು ಜೋರಾಗಿ ಹಾಗೂ ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತು ಹೋಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡರೊಂಡಿಗೆ ಗುಪ್ತಗಾಯವಾಗಿದ್ದು ಹಾಗೂ ಸದರಿ ವಾಹನದಲ್ಲಿದ್ದ 1) ಗೌರದನ ತಂದೆ ಲಕ್ಷ್ಮಣ ಚವ್ಹಾಣ ವಯ: 20 ವರ್ಷ ರವರಿಗೆ ಬಲಗಡೆ ತೊಡೆಗೆ ಹರಿದ ಭಾರಿ ರಕ್ತಗಾಯ, ಎದೆಗೆ ಗುಪ್ತಗಾಯ, 2) ಬಲಭೀಮ ತಂದೆ ಗೇಮು ಚವ್ಹಾಣ ವಯ: 33 ವರ್ಷ, ರವರಿಗೆ ಬಲಗಡೆ ಎದೆಯ ಮೇಲಗಡೆ ತರಚಿದ ಗಾಯ, ಎಡಗಗೆ ಗಲ್ಲಕ್ಕೆ, ಹಣೆಗೆ ತರಚಿದ ಗಾಯ, ಎದೆಗೆ ಗುಪ್ತಗಾಯ, 3)  ಸುನೀಲ ತಂದೆ ಗುರುನಾಥ ಚೌವ್ಹಾಣ ವಯ: 18 ವರ್ಷ ರವರಿಗೆ ಎಡಗಡೆ ಮೇಲಕಿಗೆ ತರಚಿದ ಗಾಯ, ತಲೆಯ ಹಿಂದುಗಡೆ, ಎಡ ಮೊಳಕಾಲಿಗೆ ಗುಪ್ತಗಾಯ, 4) ವಿಜಯಕುಮಾರ ತಂದೆ ಜೀವಲಾ ಚೌವ್ಹಾಣ ರವರಿಗೆ ಬೆನ್ನಿಗೆ ತರಚಿದ ಗುಪ್ತಗಾಯವಾಗಿದ್ದು ಹಾಗೂ ಟಾಟಾ ಮ್ಯಾಜಿಕ ಚಾಲಕನಾದ 5) ಕಿಶೋರ ತಂದೆ ಡಾಕುಸಿಂಗ್ ರಾಠೋಡ ವಯ: 35 ವರ್ಷ ರವರಿಗೆ ಬಲಗಡೆ ಮೇಲಕಿಗೆ, ಬಲಗಡೆ ಹುಬ್ಬಿಗೆ, ಕಣ್ಣಿನ ಕೆಳಗೆ, ಬಲಗೈ ಭುಜಕ್ಕೆ, ಬಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯ, ಎದೆಯ ಎಡಭಾಗಕ್ಕೆ ಗುಪ್ತಗಾಯವಾಗಿದ್ದು, ಆರೋಪಿಯ ವಾಹನದಲ್ಲಿದ್ದ್ 6) ಹರಿರಾಮ ತಂದೆ ಭದ್ರಿರಾಮ ಚೌವ್ಹಾಣ ವಯ: 45 ವರ್ಷ ಸಾ: ಯಲಮಡಗಿ ಥಾಂಡಾ ಇತನ ತಲೆಯ ಮೇಲೆ ಭಾರಿ ರಕ್ತಗಾಯ, ಎಡಗಣ್ಣಿನ ಹುಬ್ಬಿಗೆ ರಕ್ತಗಾಯ, ಎಡಗಡೆ ಎದೆಗೆ, ಕುತ್ತಿಗೆಯ ಹಿಂದೆ ಗುಪ್ತಗಾಯ, 7) ಅಣದು ತಂದೆ ಪುರು ಚಿನ್ನಾರಾಠೋಡ ವಯ: 32 ವರ್ಷ, ಸಾ: ಯಲಮಡಗಿ ರವರಿಗೆ ಎಡ ಭುಜಕ್ಕೆ ಗುಪ್ತಗಾಯ, ಎಡ ಮೇಲಕಿಗೆ ರಕ್ತಗಾಯ, ಬಲಕೈ ಹೆಬ್ಬೆರಳಿಗೆ ತರಚಿದ ಗಾಯ, 8) ಶಾಂತಾಬಾಯಿ ಗಂಡ ಈಶ್ವರ ರಾಠೋಡ ವಯ: 40 ವರ್ಷ, ಸಾ: ಯಲಮಡಗಿ ಥಾಂಡಾ ರವರಿಗೆ ಹಣೆಗೆ ತರಚಿದ ಗಾಯ, ಬಲಗೈಗೆ ಗುಪ್ತಗಾಯ, 9) ಸುನೀಲ ತಂದೆ ಗೋವಿಂದ ಚಿನ್ನಾರಾಠೋಡ ವಯ: 20 ವರ್ಷ, ಸಾ: ಯಲಮಡಿಗಿ ಮುನ್ನು ನಾಯಕ ಥಾಂಡಾ ರವರಿಗೆ ಬಲಗಾಲ ಹಿಮ್ಮಡಿಗೆ, ಬಲಗಡೆ ಭುಜಕ್ಕೆ ತರಚಿದ ಗಾಯಗಳಾಗಿವೆ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

                                                                             
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶೇಖ ಜಾವೀದ ತಂದೆ ನೂರ ಅಹ್ಮೇದ ಸಾ: ಶಾಂತ ನಗರ ಭಂಕೂರ ಇವರ ತಂದೆ  ದಿನಾಂಕ: 24/09/2017 ರಂದು ಮುಂಜಾನೆ ತಮ್ಮ ಹೊಂಡಾ ಆಕ್ಟೀವ ಮೊಟಾರ ಸೈಕಲ ನಂಬರ ಕೆ.ಎ. 03 ಹೆಚ್.ವಿ 9969  ತೆಗೆದುಕೊಂಡು ವಾಡಿ ಕ್ರಾಸಗೆ ನಾಷ್ಟ ಮಾಡಲು ಹೋಗುತ್ತಿದ್ದಾಗ ವಾಡಿ ಕ್ರಾಸ ಹತ್ತಿರ ರೋಡಿನಲ್ಲಿ  ದಿನಾಂಕ: 24/09/25017 ರಂದು ಮುಂಜಾನೆ 10-00 ಗಂಟೆಗೆ ಭಂಕೂರ ಕ್ರಾಸ ಕಡೆಯಿಂದ ಟಂ ಟಂ ಅಟೋ ನಂಬರ ಕೆ.ಎ. 32 ಸಿ 1859 ನೇದ್ದರ ಚಾಲಕ ತನ್ನ ಟಂ ಟಂ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆ ನಡೆಯಿಸಿಕೊಂಡು ಹೋಗುತ್ತಿದ್ದ ಹೊಂಡಾ ಆಕ್ಟೀವಾ ಮೊಟಾರ ಸೈಕಲಕ್ಕೆ ಹಿಂದಿನಿ ಡಿಕ್ಕಿ ಪಡಿಸಿದರಿಂದ ನಮ್ಮ ತಂದೆ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ತಲೆಗೆ ಒಳ ಪೆಟ್ಟು ಮತ್ತು ಹಣೆಗೆ ಹಾಗೂ ಬಲಗಾಲಿಗೆ , ಎಡಗೈಗೆ ತರುಚಿದ ರಕ್ತಗಾಯಾವಾಗಿ ಬೇಹುಷಾ ಆಗಿ ಬಿದ್ದರಿಂದ ನಮ್ಮ ತಂದೆಗೆ ಉಪಚಾರ ಕುರಿತು ಸರಕಾರಿ  ಆಸ್ಪತ್ರೆ ಶಹಾಬಾದಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 25-09-2017 ರಂದು ಬೆಳಗಿನಜಾವ ನಮ್ಮ ತಂದೆ ನೂರ ಅಹ್ಮೇದ ಇವರು ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಭಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯಮಾಡಿಕೊಂಡ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಕಸ್ತೂರಬಾಯಿ ಗಂಡ ಬಸಂತ್ರಾಯ ಸಲದಳ್ಳಿ ಸಾ|| ಗಾಂದಿನಗರ ಮಳ್ಳಿ ತಾ|| ಜೇವರ್ಗಿ ರವರದು ನಮ್ಮೂರ ಸಿಮಾಂತರದಲ್ಲಿ ಸರ್ವೆ ನಂ 222 ನೇದ್ದರಲ್ಲಿ 5 ಎಕರೆ 16 ಗುಂಟೆ ಜಮೀನು ನನ್ನ ಹೆಸರಿಗೆ ಇರುತ್ತದೆ, ನನ್ನ ಹಿರಿ ಮಗ ಬಾಬುಗೌಡ ಈತನು ಮಾನಸಿಕ ಅಸ್ವಸ್ಥನಿದ್ದು, ನಮ್ಮ ಹೊಲವನ್ನು ನನ್ನ ಕಿರಿ ಮಗ ಶಂಕರಗೌಡ ಈತನು ನೋಡಿಕೊಳ್ಳುತ್ತಿರುತ್ತಾನೆ, ಹೊಲದ ಸಲುವಾಗಿ ನನ್ನ ಮಗ ಮಳ್ಳಿ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಸಾಲ ಪಡೆದುಕೊಂಡಿರುತ್ತಾನೆ, ಅದರಂತೆ ಖಾಸಗಿಯಾಗಿ ಸುಮಾರು 4 ಲಕ್ಷ ಸಾಲ ಮಾಡಿಕೊಂಡಿದ್ದು ಇರುತ್ತದೆ, ನನ್ನ ಮಗ ಆಗಾಗ ನಮಗೆ ಸಾಲ ಬಹಳ ಆಗಿದೆ ಅದನ್ನು ತೀರಿಸುವುದು ಹೇಗೆ, ಹೊಲದಲ್ಲಿ ಬೆಳೆನು ಸರಿಯಾಗಿ ಬೆಳೆಯುತ್ತಿಲ್ಲಾ, ಉರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಇರುವುದಕ್ಕಿಂತಾ ಸಾಯುವದೇ ಮೇಲು ಅಂತಾ ಹೇಳುತ್ತಾ ಚಿಂತೆ ಮಾಡುತ್ತಿದ್ದನು, ಆಗ ನಾವು ಅವನಿಗೆ ಸಮಾಧಾನ ಹೇಳುತ್ತೇದ್ದೇವು, ನಮ್ಮ ಮನೆ ಎರಡು ಅಂತಸ್ತಿನದು ಇರುತ್ತದೆ, ನನ್ನ ಮಗ ಮತ್ತು ಸೊಸೆ ಮೇಲಿರುವ ಕೋಣೆಲ್ಲಿ ಮಲಗುತ್ತಿದ್ದರು, ದಿನಾಂಕ 25-09-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಸೊಸೆ ಇಬ್ಬರು ಕೂಡಿ ಮೇಲೆ ಹೋಗಿ ನೋಡಿದಾಗ ನನ್ನ ಮಗ ಶಂಕರಗೌಡ ಈತನು ನೇಣು ಹಾಕಿ ಕೋಂಡಿದ್ದನು, ನಂತರ ನಾನು ಚಿರಾಡುತ್ತಿದ್ದಾಗ ನಮ್ಮ ಮನೆ ಹತ್ತಿರ ಇದ್ದ ಗುತ್ತಪ್ಪಗೌಡ ಸಾಸನೂ, ಅಪ್ಪಣ್ಣ ಹಾದಿಮನಿ ರವರು ಬಂದು ನನ್ನ ಮಗನಿಗೆ ಕೆಳಗೆ ಇಳಿಸಿ ನೋಡಿದಾಗ ನನ್ನ ಮಗ ಮೃತ ಪಟ್ಟಿದ್ದನು,          ನನ್ನ ಮಗ ಹೊಲದ ಸಲುವಾಗಿ ಮಳ್ಳಿ ಗ್ರಾಮದ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಮತ್ತು ಖಾಸಗಿಯಾದ ಸುಮಾರು 4,00,000/- ರೂ ಸಾಲ ಮಾಡಿಕೊಂಡಿದ್ದು, ಈ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ಇಂದು ದಿನಾಂಕ 25-09-2017 ರಂದು ಬೆಳಿಗ್ಗೆ 06;30 ಗಂಟೆಯಿಂದ 07;00 ಗಂಟೆ ಮದ್ಯದಲ್ಲಿ ನಮ್ಮ ಮನೆಯ ಮೇಲಿನ ಕೋಣೆಯಲ್ಲಿ ಪೈಪಿನ ಅಡ್ಡಿಗೆ ನೂಲಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 25/09/2017 ರಂದು ಭಂಕೂರ ಸೀಮಾಂತರದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನಂದ ದಾಬಾ ಹತ್ತಿರ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿ ನಂಬರ ಕೆ.ಎ. 34 9330 ಬರುತ್ತಿದ್ದು ಅದರ ಚಾಲಕ ಮತ್ತು ಅದರಲ್ಲಿದ್ದ ಇನ್ನೋಬ್ಬ ವ್ಯಕ್ತಿ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟಿಪ್ಪರ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸರಕಾರಕ್ಕೆ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಲ್ತಾಫ ಅನ್ವರ ಬೇಗ ತಂದೆ ಮಿರ್ಜಾ ರುಸ್ತುಮ ಬೇಗ ಸಾ : ಸಾದಿಕ ಕಾಲನಿ ಎಮ್.ಎಸ್.ಕೆ. ಮಿಲ್ಲ ರೋಡ ಕಲಬುರಗಿ ರವರು ಮತ್ತು ಆತನ ಚಾಲಕ  ಮಶಾಕ ಇಬ್ಬರು   ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ನಮ್ಮ ಅಂಗಡಿ ಎದುರು ಇರುವ ರಸ್ತೆ ಬದಿಯಲ್ಲಿ ಚಾಲಕ ಮಶಾಕ ಇತನು ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158  ನೇದ್ದು ಲಾಕ ಮಾಡಿದ ನಂತರ ವಾಹನದ ಕೀಲಿ ಅಂಗಡಿಯಲ್ಲಿ ಇಟ್ಟು ಇಬ್ಬರು ಮನೆಗೆ ಹೋದೇವು.  ಮರುದಿನ ದಿನಾಂಕ 24-09-2017 ರಂದು ಬೆಳಿಗ್ಗೆ 09-00 ಗಂಟೆಗೆ ಅಂಗಡಿಗೆ ನಾನು ಮತ್ತು ಮಶಾಕ ಇಬ್ಬರು ಬಂದು ನೋಡಲಾಗಿ ಅಂಗಡಿಯ ಎದುರು ಇರುವ ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಿ ಹೋದ ನಮ್ಮ ಬುಲೋರೋ ವಾಹನ ಕಾಣಿಸಲಿಲ್ಲಾ. ಯಾರೋ ಕಳ್ಳರು ನಮ್ಮ ಬುಲೋರೋ ಪಿಕ್ಕಪ್ಪ ಗೂಡ್ಸ್ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಕಳ್ಳತವಾದ ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158 ವಿವರ ರೀತಿ ಇದೆ.  Chassi No. MA1ZN2GGA91D28894   Engine No. GG91D49527  Make BOLERO CAMPER DX2WD, Model -2009, Colour White , ಬಣ್ಣದ್ದು ಇರುತ್ತದೆ. ವಾಹನ ಕಿಮ್ಮತ್ತು ಅ:ಕಿ:  1,40,000/-  ರೂ. ಆಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.