Police Bhavan Kalaburagi

Police Bhavan Kalaburagi

Sunday, August 6, 2017

BIDAR DISTRICT DAILY CRIME UPDATE 06-08-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-08-2017

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 140/2017, ಕಲಂ. 447, 427, 504 ಜೊತೆ 34 ಐಪಿಸಿ :-
ಫಿರ್ಯಾದಿ ಗುಂಡಾರಡ್ಡಿ ತಂದೆ ಭೀಮರಡ್ಡಿ ನಾಗೇನಕೇರಾ ಸಾ: ಉಡಬಾಳ ಗ್ರಾಮ ರವರಿಗೆ ಉಡಬಾಳ ಗ್ರಾಮದ ಶಿವರಾದಲ್ಲಿ ಹೊಲ ಸರ್ವೆ ನಂ. 243 ನೇದರಲ್ಲಿ 6 ಎಕರೆ ಜಮೀನು ಇರುತ್ತದೆ, ಫಿರ್ಯಾದಿಯ ಹೊಲದ ಕಟ್ಟೆಗೆ ಹತ್ತಿ ತಮ್ಮೂರ ಶ್ರೀಮಂತ ತಂದೆ ಶಂಕರಾವ ಮೀಶೆನ್ದಾರ ರವರ ಹೊಲ ಇರುತ್ತದೆ, ಇಬ್ಬರ ಹೊಲದ ಮದ್ಯ ಇರುವ ಕಟ್ಟೆಯ ಮೇಲೆ ಹುಣಸೆ ಗಿಡ, ಮಾವಿನ ಗಿಡ, ಬಬಲಿ ಗಿಡ, ಅತ್ತಿ ಗಿಡ ಮತ್ತು ಸುಬಬುಲ್ ಗಿಡ ಇರುತ್ತವೆ, ಈ ಗಿಡಗಳು ಫಿರ್ಯಾದಿಯ ಹೊಲದ ಸರ್ವೆಯಲ್ಲಿ ಬರುತ್ತವೆ, ಆದರೆ ಶ್ರೀಮಂತ ರವರು ಈ ಮೊದಲು ಸದರಿ ಗಿಡಗಳು ನಮ್ಮ ಹೊಲದಲ್ಲಿ ಬರುತ್ತವೆ ಅಂತ ಕಡಿಯಲು ಬಂದಾಗ ಫಿರ್ಯಾದಿಯು ಅವರಿಗೆ ಸದರಿ ಗಿಡಗಳು ನನ್ನ ಸರ್ವೆದಲ್ಲಿ ಬರುತ್ತವೆ ನೀನು ಕಡಿಯಬೇಡ ಒಂದು ವೇಳೆ ನೀನು ಕಡಿಯುವುದಾದರೆ ನಿನ್ನ ಹೊಲ ಸರ್ವೆ ಮಾಡಿಸಿಕೊಂಡು ನಿನ್ನ ಹೊಲದಲ್ಲಿ ಬಂದರೆ ಕಡಿದುಕೊಳ್ಳು ಅಂತ ಅಂದಿದ್ದಕ್ಕೆ ಒಪ್ಪಿಕೊಂಡಿರುತ್ತಾನೆ, ಹೀಗಿರುವಾಗ ದಿನಾಂಕ 03-08-2017 ರಂದು ಫಿರ್ಯಾದಿಯು ತಮ್ಮ ಹೊಲಕ್ಕೆ ಹೋದಾಗ ಆರೋಪಿತರಾದ 1) ಶ್ರೀಮಂತ ತಂದೆ ಶಂಕರಾವ ಮಿಶೆನ್ದಾರ, 2) ಕಿಶನರಾವ ತಂದೆ ಶಂಕರಾವ ಮಿಶೆನ್ದಾರ, 3) ನಾಗೇಂದ್ರ ತಂದೆ ಶಂಕರಾವ ಮಿಶೆನ್ದಾರ, 4) ದಯಾನಂದ ತಂದೆ ಶಂಕರಾವ ಮಿಶೆನ್ದಾರ ಮತ್ತು 5) ರವಿ ತಂದೆ ಶಂಕರಾವ ಮಿಶೆನ್ದಾರ ಎಲ್ಲರೂ ಸಾ: ಉಡಬಾಳ ಇವರೆಲ್ಲರೂ ತಮ್ಮ ಹೊಲದಲ್ಲಿರುವ ಗೀಡಗಳನ್ನು ಕಡಿಸಿ ಒಂದು ಟ್ರ್ಯಾಕ್ಟರ್ ಟ್ರ್ಯಾಲಿ ನಂ. ಕೆಎ-39/ಟಿ-1798/1799 ನೇದರಲ್ಲಿ ತುಂಬಿರುತ್ತಾರೆ, ಫಿರ್ಯಾದಿಯು ಹೋಗಿ ನೊಡಿ ಫಿರ್ಯಾದಿಯ ಹೊಲದಲ್ಲಿದ್ದ ಶ್ರೀಮಂತ, ಕಿಶನರಾವ, ನಾಗೇಂದ್ರದಯಾನಂದ ಮತ್ತು ರವಿ ಮಿಶೆನ್ದಾರ ರವರಿಗೆ ನಮ್ಮ ಹೊಲದಲ್ಲಿದ್ದ ಗಿಡಗಳನ್ನು ಏಕೆ ಕಡಿದಿರುತ್ತಿರಿ ಅಂತ ಕೇಳಲು ಅವರೆಲ್ಲರು ಫಿರ್ಯಾದಿಗೆ ಈ ಗಿಡಗಳು ನಮ್ಮ ಹೊಲದಲ್ಲಿ ಬರುತ್ತವೆ ಅದಕ್ಕೆ ನಾವು ಕಡಿದಿರುತ್ತೇವೆ ನೀ ಯಾರು ಕೇಳುವವ ಅಂತ ಅವಾಚ್ಯವಾಗಿ ಬೈದಿರುತ್ತಾರೆ, ನಂತರ ಫಿರ್ಯಾದಿಯು ಇವರ ಜೋತೆ ತಕರಾರು ಮಾಡಿಕೊಳ್ಳುವುದು ಬೇಡ ಅಂತ ಅಂದು ಅಲ್ಲಿಂದ ಮನೆಗೆ ಹೋಗಿದ್ದು, ಅವರು ಟ್ರ್ಯಾಕ್ಟರನಲ್ಲಿ ತುಂಬಿದ ಕಟ್ಟಿಗೆಯನ್ನು ಅಲ್ಲಿಯೆ ಫಿರ್ಯಾದಿಯ ಹೊಲದಲ್ಲಿ ಖಾಲಿ ಮಾಡಿ ಹೋಗಿರುತ್ತಾರೆ, ಫಿರ್ಯಾದಿಯ ಹೊಲ ಸರ್ವೆ ನಂ. 243 ನೇದರಲ್ಲಿರುವ 2 ಹುಣಸಿನ ಗಿಡ ಅ.ಕಿ 14,000/- ರೂ., 2 ಮಾವಿನ ಗಿಡ ಅ.ಕಿ 15,000/- ರೂ., 1 ಬಬಲಿ ಗಡ ಅ.ಕಿ 4000/- ರೂ., 4 ಸುಬಬುಲ್ ಗಿಡಗಳು ಅ.ಕಿ 14,000/- ರೂ. ಮತ್ತು 1 ಅತ್ತಿ ಗಿಡ 3000/- ರೂ. ಹಿಗೆ ಒಟ್ಟು 50,000/- ರೂ. ಬೆಲೆ ಬಾಳುವ ಗಿಡಗಳನ್ನು ಸದರಿ ಆರೋಪಿತರು ಫಿರ್ಯಾದಿಯ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದಿರುವ ಅಂದಾಜು 50,000/- ರೂ. ಬೆಲೆ ಬಾಳುವ ಗಿಡಗಳು ಕಡಿದು ಹಾನಿ ಮಾಡಿರುತ್ತಾರೆ ಮತ್ತು ಕೇಳಲು ಹೋದರೆ ಅವಾಚ್ಯವಾಗಿ ಬೈದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 05-08-2017 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಗುನ್ನೆ ನಂ. 96/2017, ಕಲಂ. 379 ಐಪಿಸಿ :-
ಫಿರ್ಯಾದಿ ತುಕಾರಾಮ ತಂದೆ ವೀರಪ್ಪಾ ಮೇತ್ರೆ ವಯ: 64 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚಾಂಗಲೇರಾ ರವರಿಗೆ ಅಲಿಪೂರ ಶಿವಾರದಲ್ಲಿ ಹಿರಿಯರಿಂದ ಬಂದ ಆಸ್ತಿ ಹೊಲ ಸರ್ವೆ ನಂ. 16 ರಲ್ಲಿ 7 ಎಕರೆ 4 ಗುಂಟೆ ಜಮೀನು ಇದ್ದು, ಅದು ಫಿರ್ಯಾದಿಯ ಅಣ್ಣ ತಮ್ಮಂದಿರಾದ ನಾಗಪ್ಪಾ, ಈಶ್ವರ ಹಾಗೂ ಫಿರ್ಯಾದಿಯ ಹೆಸರಿನಲ್ಲಿ ಒಟ್ಟಿಗೆಯಾಗಿ ಇರುತ್ತದೆ, ಆ ಜಮೀನು ಮೂವರು ಪಾಲು ಮಾಡಿಕೊಂಡು ತಮ್ಮ ಪಾಲಿಗೆ ಬಂದ ಜಿಮೀನು ತಾವು ಸಾಗುವಳಿ ಮಾಡಿಕೊಂಡು ಉಪಜೀವಿಸುತ್ತಾರೆ, ಈಗ ಎರಡು ವರ್ಷಗಳ ಹಿಂದೆ ಹೊಲದ ಕಟ್ಟೆಗೆ ಇದ್ದ ಹೊಸ ಜಮೀನಿನಲ್ಲಿ ಒಂದು ಬೊರವೆಲ್ ಹೊಡೆಸಿ ಎರಡು ವರ್ಷಗಳಿಂದ ಶಾಮರಾವ ಎಂಬ ಲಮಾಣಿ ಸಾ: ದೇವಗಿರಿ ತಾಂಡಾದವರಿಗೆ ಬೆಳೆಯಲ್ಲಿ ಪಾಲಿನಿಂದ ಹಚ್ಚಿದ್ದು ಅವನು ಆ ಜಮೀನು ಉಳುಮೆ ಮಾಡುತ್ತಿದ್ದಾನೆ, ದಿನಾಂಕ 04, 05-08-2017 ರ ಮಧ್ಯರಾತ್ರಿಯಲ್ಲಿ ಯಾರೋ ಕಳ್ಳರು ಹೊಲದಲ್ಲಿ ಮೋಟಾರಗೆ ಅಳವಡಿಸಿದ ಸ್ಟಾಟರ ಅದರ ಹೆಸರು ಮೋಟಾರ ಸ್ಟಾಟರ್ ಪ್ಯಾರಾಗನ್   ಪಿ. -1 ನಂ. 330992 ಅ.ಕಿ 1200/- ರೂ. ಗಳು ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಪಾತೀಮಾ ಗಂಡ ಅಬ್ದುಲ್ ಪಟೇಲ ಮದ್ದರಕಿ ಸಾಃ ಮಾರಡಗಿ (ಎ.ಎಸ್.) ತಾಃ ಜೇವರಗಿ ರವರನ್ನು   ಸುಮಾರು 5 ವರ್ಷಗಳ ಹಿಂದೆ ಮಾರಡಗಿ (ಎಸ್.ಎ) ಗ್ರಾಮದ ಅಬ್ದುಲ್ ಪಟೇಲ ಇತನ್ನೊಂದಿಗೆ ನನ್ನ ಮದುವೆಯಾಗಿರುತ್ತದೆ. ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ಗಂಡನ ಮನೆಯಲ್ಲಿಯೇ ಇದ್ದು ಸಂಸಾರ ಮಾಡುತ್ತಾ ಬಂದಿರುತ್ತೆನೆ ನಮಗೆ ಲಾಲಬೀ ಎಂಬುವ ಒಂದು ಹೆಣ್ಣು ಮಗು ಇರುತ್ತದೆ. ಮದುವೆಯ ಕಾಲಕ್ಕೆ ನನ್ನ ತವರು ಮನೆಯರು ನನ್ನ ಗಂಡನಿಗೆ ಬೆಲೆ ಬಾಳುವ 1) ಮಂಚ, ಗಾದಿ, 2) ಏರಕೂಲರ್, 3) ಪ್ರೀಜ 4) ಅಲಮಾರಿ ( ಟಿಜೋರಿ) 5) ಎರಡು ಹಾಂಡೆಗಳು 6) ಎರಡು ನಳ ಪಾತ್ರೆಗಳು, 7) ಎರಡು ತಾಮ್ರದ ಕೊಡಗಳು, ಹಾಗೂ ಮನೆಯ ಬಳಕೆ ಇತರೆ ಸಾಮಾನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಸುಮಾರು 3 ವರ್ಷಗಳವರೆಗೆ ನನ್ನ ಗಂಡನು ನನಗೆ ಸರಿಯಾಗಿಯೇ ನೊಡಿಕೊಂಡಿರುತ್ತಾನೆನಂತರ ನನ್ನ ಗಂಡನು ಮದುವೆಯಲ್ಲಿ ನನಗೆ ವರದಕ್ಷೀಣೆ ಹಣ ಕೊಟ್ಟಿರುವುದಿಲ್ಲಾ ನೀನು ತವರು ಮನೆಯಿಂದ 5,00,000/- ( ಐದು ಲಕ್ಷ) ರೂಪಾಯಿ ವರದಕ್ಷೀಣೆ ಹಣ ತೆಗೆದುಕೊಂಡು ಬರುವಂತೆ  ದಿನಾಲು ಮನೆಯಲ್ಲಿ  ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆಅಲ್ಲದೆ ನನ್ನ ಮಾವ ಅಮೀರಪಟೇಲ  ಅತ್ತೆ ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರಮತ್ತು ಅವಳ ಗಂಡ ಜಾಪರ್ ಅಲಿ ಇವರೆಲ್ಲರೂ ಕೂಡಿ ನನಗೆ ವರದಕ್ಷಣೆ ಹಣ ತೆಗೆದುಕೊಂಡು ಬರುವಂತೆ ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾರೆಅವರು ಕೊಡುವ ತ್ರಾಸ್ ತಾಳಲಾರದೆ  ನಾನು ನನ್ನ ತವರು ಮನೆಯವರಿಗೆ ಹೇಳಿದಾಗ  ನನ್ನ ತಂದೆ ಮತ್ತು ತಾಯಿ ಹಾಗೂ  ನಮ್ಮೂರ ಪ್ರಮುಖರು ಕೂಡಿಕೊಂಡು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿ ನನ್ನ ಗಂಡನಿಗೆ 50 ಗ್ರಾಮ ಚಿನ್ನದ ಆಭರಣಗಳು, ಮತ್ತು 25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು) ನನ್ನ ತಂದೆ  ಕೊಟ್ಟಿರುತ್ತಾರೆಆದರೂ ಸಹ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರು ನನಗೆ ಬಹಳ ತ್ರಾಸ್ ಕೊಡುತ್ತಿದ್ದರುನಾನು ಮನೆಯ ಮರ್ಯಾದೆಗೆ ಅಂಜಿ ಮತ್ತು ನನ್ನ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಸುಮ್ಮನಿದ್ದೆನು, ಆದರೂ ಅವರು ನನಗೆ ಹಣ ತವರುಂತೆ ಬಹಳ ತ್ರಾಸ್ ಕೊಡುತ್ತಿದ್ದಾಗ ನಾನು ಈಗ 6 ತಿಂಗಳ ಹಿಂದೆ ನನ್ನ ಮಗಳೊಂದಿಗೆ ನನ್ನ ತವರು ಮನೆ ಯಲಗೊಡ ಗ್ರಾಮಕ್ಕೆ ಬಂದು ನನ್ನ ತಂದೆ ತಾಯಿಯವರ ಹತ್ತಿರ ಇದ್ದೆನು. ನನ್ನ ಗಂಡನು ಮತ್ತು ಅವರ ಮನೆಯವರು ನನಗೆ ಕರೆಯಲು ಬರಲಾರದಕ್ಕೆ ನಾನು ದಿ.  01-08-2017 ರಂದು ಮುಂಜಾನೆ ನನ್ನ ತಂದೆ ಹಾಗೂ ನನ್ನ ಅಣ್ಣನಾದ ಮೈಹಿಬೂಬ ಪಟೇಲ ಮತ್ತು ನಮ್ಮೂರ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರೊಂದಿಗೆ ನನ್ನ ಗಂಡನ ಮನೆಗೆ ಮುಂಜಾನೆ 11.00 ಗಂಟೆಯ ಸುಮಾರಿಗೆ ಹೋದಾಗ, ಅಲ್ಲಿ ನನ್ನ ಗಂಡನಾದ 1) ಅಬ್ದುಲ್ ಪಟೇಲ ತಂದೆ ಅಮೀರ ಪಟೇಲ ಮಾವ 2) ಅಮೀರಪಟೇಲ  ಅತ್ತೆಯಾದ 3) ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ 4) ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರಮತ್ತು ಅವಳ ಗಂಡ 5) ಜಾಪರ್ ಅಲಿ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವರಿಗೆ ನನಗೆ ಯಾಕೇ ಬೈಯುವುತ್ತಿದ್ದಿರಿ ಎಂದು ಕೇಳಿದಕ್ಕೆ ನನ್ನ ಗಂಡನು ನನಗೆ ಏ ರಂಡಿ ಇಷ್ಟು ದಿವಸ ತವರು ಮನೆಯಲ್ಲಿ ಇದ್ದು ಇವತ್ತು ಬಂದಿದಿ ನಿನಗೆ ಐದು ಲಕ್ಷ ವರದಕ್ಷಣಿ ಹಣ ತೆಗೆದುಕೊಂಡು ಬಾ ಎಂದು ಹೇಳಿದರೆ ತವರು ಮನೆಗೆ ಹೋಗಿದ್ದಿ ಬೊಸಡಿ ಎಂದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ, ಅತ್ತೆಯಾದ ಜೈನಾಬೀ ಇವಳು ಈ ರಂಡಿಗೆ ಹೊಡೆದು ಸಾಯಿಸಿ ಬಿಡು ನಿನಗೆ ಬೇರೆ ಮದುವೆ ಮಾಡಿಸುತ್ತೆನೆ ಎಂದು ಬೈಯ್ದು ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾಳೆ, ಮಾಬಣ್ಣಿ ಇವಳು ಈ ರಂಡಿ ವರದಕ್ಷಿಣೆ ಹಣ ತರುವವರೆಗೆ ಅವಳು ತವರು ಮನೆಯಲ್ಲಿಯೇ ಬಿಡು ಎಂದು ನನ್ನ ಗಂಡನಿಗೆ ಹೇಳುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಿರುತ್ತಾಳೆ, ಜಾಫರ ಅಲಿ ಇತನು ನನ್ನ ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಿ ಕಾಲಿನಿಂದ ಸೊಂಟದ ಮೇಲೆ ಒದ್ದಿರುತ್ತಾನೆನಾನು ಚೀರಾಡುತ್ತಿದ್ದಾಗ ನನ್ನ ಮಾವ ಅಮೀರ ಪಟೇಲ ಇತನು ಇವಳಿಗೆ ಮನೆಯಲ್ಲಿ ಹಾಕಿರಿ ಒಂದು ಗತಿ ಕಾಣಿಸೊಣ ಎಂದು ಹೇಳಿದಾಗ ನನ್ನ ತಂದೆ ಹಾಗೂ ನನ್ನ ಅಣ್ಣ ಮತ್ತು ನನ್ನ ಜೊತೆ ಬಂದ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರು ಬಂದು ನನಗೆ ಹೊಡೆಯುವುದು ಬಿಡಿಸಿಕೊಂಡಿರುತ್ತಾರೆ, ಮತ್ತು ಅವರೆಲ್ಲರೂ ವರದಕ್ಷಣೆ ಹಣ ತೆಗೆದುಕೊಂಡು ಬರದಿದ್ದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಕೀನಾ ಪಟೆಲ ಗಂಡ ದಾದಾ ಪಟೆಲ್ಸಾ:ಮನೆ ನಂ. 11-1041/120 ಎಮ್ಎಸ್ಕೆ ಮಿಲ್ಮದಿನಾ ಕಾಲೋನಿ ಕಲಬುರಗಿ ಇವರ ಹತ್ತಿರ ಸುಮಾರು ದಿನಗಳ ಹಿಂದೆ ಹಣದ ಅಡಚಣೆ ಇದ್ದಾಗ ತಮಗೆ ಪರಿಚಯದವರಾದ 1) ಉಸ್ಮಾನ ಡಾಂಗೆ 2) ಸಾದೀಕ್ಫರೀದ ಇವರು ತಲಾ 10,00,000/- ರೂಗಳು ಪಡೆದುಕೊಂಡಿದ್ದು, ಅದನ್ನು ಕೇಳಲು ಹೋದಾಗ ಅವರಿಬ್ಬರು ತಮಗೆ ಪರಿಚಯದವನಾದ ಚಿದಾನಂದ ತಂದೆ ದೌಲಪ್ಪಾ ಕೊಳ್ಳಿ ಇವರ ಹತ್ತಿರ ಕರೆದುಕೊಂಡು ಹೋಗಿ ನನಗೆ 15,42,000/-ರೂಗಳು ಕೊಡಿಸಿರುತ್ತಾರೆ. ನಂತರ ನನಗೆ, ನೀವು ನಿಮ್ಮ ಮನೆಯನ್ನು ಚಿದಾನಂದ ಇವರಿಗೆ ಮಾರ್ಟಗೆಜ ಮಾಡಿಸಿಕೊಡು ನಿಮ್ಮ 20,00,000/- ರೂಗಳು ನಮ್ಮ ಹತ್ತಿರ ಇರುತ್ತವೆಯಲ್ಲ ನಾವು ಬಿಡಿಸಿ ಕೊಡುತ್ತೆವೆ ಅಂತ ಹೇಳಿ ನನ್ನ ಮನೆ ನಂ. 11-1041/120 ಎಮ್ಎಸ್ಕೆ ಮಿಲ್ಮದಿನಾ ಕಾಲೋನಿ ಕಲಬುರಗಿ ನೇದ್ದನು ಮಾರ್ಟಗೇಜ ಮಾಡಿಕೊಟ್ಟಿದ್ದು ಇರುತ್ತದೆ. ಆದ್ದರಿಂದ ಕಲಬುರಗಿಯ ಸಬ್ರಜೀಸ್ಟರರ ಕಛೆರಿಯಲ್ಲಿ ಮಾರ್ಟಗೇಜ ಮಾಡಿಕೊಟ್ಟಿರುತ್ತನೆ. ಉಸ್ಮಾನ ಡಾಂಗೆ ಇವರು ನನಗೆ ನಿಮಗೆ ಕೊಡಬೇಕಾದ ಹಣವನ್ನು ಚಿದಾನಂದ ಇವರಿಗೆ ಕೊಟ್ಟು ನಿಮ್ಮ ಮನೆಯ ಸೆಲ್ಡೀಡ್ನ್ನು ಕ್ಯಾನ್ಸಲ್ಮಾಡಿಕೊಡುತ್ತೆವೆ ಅಂತ ಹೇಳಿರುತ್ತಾರೆ.ದಿನಾಂಕ:31/07/2017 ರಂದು ಸಾಯಂಕಾಲ 7:30 ಗಂಟೆಗೆ ನಾನು ಮನೆಯಲ್ಲಿದ್ದಾಗ ಚಿದಾನಂದ ಕೊಳ್ಳಿ , ಉಸ್ಮಾನ ಡಾಂಗೆ, ಸಾದೀಕ ಫರೀದ ಸುಂಬಡ, ಮಹಾರಾಜ ಜಮಾದಾರ, ಮಹ್ಮದ ಇಕ್ಬಾಲ್‌, ಮಾರುತಿ ತಂದೆ ಅಂಬಾಜಿ ಸಂಗಡ 15 ಜನರು ಕೂಡಿಕೊಂಡು ಬಂದು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿನ ಸಾಮಾನುಗಳನ್ನು ಬಿಸಾಕುತ್ತಿದ್ದಾಗ ನಾನು ಅವರಿಗೆ ಇದು ನೀವು ಮಾಡುವದು ಸರಿಯಲ್ಲ ಅಂತ ಹೇಳುತ್ತಿದಾಗ ಅವರೆಲ್ಲರೂ ನನಗೆ ಅವಾಚ್ಯವಾಗಿ ಬೈಯುತ್ತಾ ಅವರಲ್ಲಿ ಉಸ್ಮಾನ ಡಾಂಗೆ, ಚಿದಾನಂದ, ಮಹಾರಾಜ ಜಮಾದಾರ ಇವರು ನನ್ನ ಕೈಹಿಡಿದು ಕಪಾಳ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ನಂತರ ಅವರೆಲ್ಲರೂ ನನಗೆ ನೀನು ನಮಗೆ ಹಣ ಕೊಡದೆಯಿದ್ದರೆ ನಿನ್ನ ಮನೆಯನ್ನು ಕಬ್ಜಾ ಮಾಡಿತ್ತೆವೆ. ಇಲ್ಲವಾದರೆ ಇತ್ತಿಚೆಗೆ ಆದ ಮುದಾಸ್ಸಿರ ಇತನ ಕೊಲೆ ಆದ ಹಾಗೆ ನಿನಗೆ ಬಿಡುವದಿಲ್ಲ ಅಂತ ಜೀವದ ಭಯ ಹಾಕಿರುತ್ತಾರೆ. ಇಲ್ಲ ನಮ್ಮ ಹಣ ಕೊಡು ಅಂತ ಹೇಳಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :.
ಅಫಜಲಪೂರ ಠಾಣೆ : ದಿನಾಂಕ 28-07-2017 ರಂದು ರಾತ್ರಿ 12:30 ಗಂಟೆಗೆ ನಾನು ಶೌಚಕ್ಕೆಹೋದಾಗ ಮೋಹನ ತಂದೆ ನಾಗು ಜಾಧವ ಹಾಗೂ ವಿಜಯತಂದೆ ನಾಮದೇವ ರಾಠೋಡ ಇಬ್ಬರು ಕರಜಗಿ ತಾಂಡಾ ಇದ್ದು, ನನ್ನನ್ನು ಅನಾಮತ್ತಾಗಿ ಎತ್ತಿ ಟಾಟಾ ಇಂಡಿಕಾ ವಾಹನದಲ್ಲಿ ತೂರಿ ಹಾಕಿ ಅಫರಿಚಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ, ನನಗೆ ಕೈ ಹಿಡಿದು ಏಳೆದು ನಮ್ಮ  ಜೋತೆ ಸಹಕರಿಸು ಇಲ್ಲದಿದ್ದರೆ ನಿನಗೆ ಜೀವಸಹಿತ ಬಿಡುವುದಿಲ್ಲ ಎಂದು ಹಾಗೂ ವಿಷುಯ ಎಲ್ಲಿಯೂ ಯಾರಿಗೂ ಹೇಳಬೇಡ ಒಂದು ವೇಳೆ ಹೇಳೀದರೆ ನಿನ್ನನ್ನು ಹೊಡೆದು ಎಸೆದು ಹೋಗುವುದಾಗಿ ಬೇದರಿಸಿದ್ದಾರೆ. ನೀನು ನಿನ್ನ ತಂದೆ ತಾಯಿಗೆ ತಿಳಿಸಬೇಡ, ತಿಳಿಸಿದರೆ ನಿನ್ನ ಸ್ಥೀತಿ ಕೇಡುತ್ತದೆ ಎಂದು ಹಾಗೂ ಪೊಲೀಸರೇದರೂ ಕೂಡಾ ಏನು ಹೇಳಬೇಡ ಎಂದು. ಒಂದು ವೇಳೆ ಹೇಳೀದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೇದರಿಸಿರುತ್ತಾರೆ.  ಅಂತಾ  ಶ್ರೀಮತಿ ಗೀತಾ ಗಂಡ ಸುನೀಲ ರಾಠೋಡ ಸಾ|| ಕರಜಗಿ ತಾಂಡಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ