Police Bhavan Kalaburagi

Police Bhavan Kalaburagi

Tuesday, May 12, 2020

BIDAR DISTRICT DAILY CRIME UPDATE 12-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 12-05-2020

ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 05/2020 ಕಲಂ 66(ಸಿ), 66(ಡಿ) ಐ.ಟಿ. ಕಾಯ್ದೆ ಮತ್ತು  419, 420 ಐಪಿಸಿ :-

ದಿನಾಂಕ: 11-05-2020 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ಚನ್ನಬಸಪ್ಪಾ ತಂದೆ ಬಂಡೆಪ್ಪಾ ಚಿಟ್ಟಾ ಸಾ//ಲಾಡಗೇರಿ ಬೀದರ ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಅಜರ್ಿ ಸಲ್ಲಿಸಿದರ ಸಾರಾಂಶವೆನೆಂದರೆ  ಫೀರ್ಯಾದಿಯು ಆಕ್ಸಿಸ್ ಬ್ಯಾಂಕ ಗೋಕಾಕನಲ್ಲಿ ಒಂದು ಎಸ್.ಬಿ. ಖಾತೆ ಸಂಖ್ಯೆ 912010060388826 ನೇದ್ದನ್ನು ಹೊಂದಿದ್ದು, ಅದಕ್ಕೆ  ಮೋಬಾಯಿಲ್ ಸಂ. 8970300918 ಲಿಂಕ್ ಇದ್ದು ಸದರಿ ಬ್ಯಾಂಕ ಖಾತೆಗೆ ಗೂಗಲ್ ಪೇ ಲಿಂಕ್ ಇರುತ್ತದೆ. ಹೀಗಿರುವಾಗ ದಿನಾಂಕ 07-05-2020 ರಂದು ಫಿರ್ಯಾದಿಯು ತನ್ನ ಗೂಗಲ್ ಪೇ ದಿಂದ 278/- ರೂಪಾಯಿಯ ಪರಿಚಯಸ್ಥರ ಸನ್ ಡೈರೇಕ್ಟ ಡೀಶ ರೀಚಾರ್ಜ ಮಾಡಿರುತ್ತಾರೆ.  ಆದರೆ ಸದರಿ ರೀಚಾರ್ಜ ಆಗದೇ ಇರುವುದರಿಂದ, ದಿನಾಂಕ 10-05-2020 ರಂದು ಗೂಗಲ್ ಪೇ ನಲ್ಲಿ  ಆಠಿಣಣಜ ಡಿಜ ಮಾಡಿ ನಂತರ ಗೂಗಲ್ ಬ್ರೌಸರ್ ನಲ್ಲಿ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ ಸರ್ಚ ಮಾಡಿದಾಗ ಅದರಲ್ಲಿ ನನಗೆ ಒಂದು ಮೋಬಾಯಿಲ್ ಸಂಖ್ಯೆ 07739737291 ನೇದ್ದು ಸಿಕಿದ್ದು ಮದ್ಯಾಹ್ನ 01:10 ಗಂಟೆಗೆ ಅದಕ್ಕೆ ನಾನು ಕರೆ ಮಾಡಿ ರೂ. 278/- ಗೂಗಲ್ ಪೇ ದಿಂದ  ಸನ್ ಡೈರೇಕ್ಟ ಡೀಶ ರೀಚಾರ್ಜ ಮಾಡಿದ್ದು ಆದರೆ ಸದರಿ ರೀಚಾರ್ಜ ಆಗಿರುವುದಿಲ್ಲ ಅಂತಾ ಹೇಳಿದಾಗ ಅವರು ಫಿರ್ಯಾದಿಗೆ ನಿಮ್ಮ ಮೋಬಾಯಿಲ್ ಗೆ ಒಂದು ಮೇಸೆಜ್ ಕಳುಹಿಸುತ್ತೇವೆ ಅದನ್ನು ಮೋಬಾಯಿಲ್ ನಂಬರ 9004676782 ನೇದಕ್ಕೆ ಕಳುಹಿಸಿರಿ ನಿಮ್ಮ ರೂ. 278 ಹಣ ನಿಮ್ಮ ಖಾತೆಗೆ ಮರಳಿ ಹಾಕುತ್ತೇವೆ ಎಂದು ಹೇಳಿ ಫಿರ್ಯಾದಿ ಮೋಬೈಲ್ ಸಂಖ್ಯೆ 8670380695, 7866011810 ಮತ್ತು 863083157 ನೇದ್ದವುಗಳಿಂದ ಮೇಸೆಜ್ಗಳು ಬಂದಿದ್ದು ಅವುಗಳನ್ನು ಅವರು ಹೇಳಿದ ಮೋಬಾಯಿಲ್ ಸಂಖ್ಯೆ 9004676782 ನೇದಕ್ಕೆ ಫಾವರ್ಡ ಮಾಡಿದ್ದು ಆಗ, ಅವರು ಪುನಃ ಪುನಃ ಕರೆ ಮಾಡಿ ಸದರಿ ಮೇಸೇಜ್ ಬಂದಿರುವುದಿಲ್ಲ ಅಂತಾ ನನ್ನಿಂದ 05 ಸಲ ಮೇಸೆಜ್ ಫಾರ್ವಡ ಮಾಡಿಸಿಕೊಂಡಿರುತ್ತಾರೆ. ನಂತರ ಫಿರ್ಯಾದಿಯು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದು ಸ್ವಲ್ಪ ಸಮಯದ ನಂತರ ಫಿರ್ಯಾದಿ ಮೋಬಾಯಿಲ್ ಗೆ   ಬ್ಯಾಂಕ ಖಾತೆಯಿಂದ ರೂ. 48995.90, ರೂ. 48104.90, ರೂ. 48095.90, ರೂ. 48095.90 ಮತ್ತು ರೂ. 26005.90 ಹೀಗೆ ಐದು ಬಾರಿ ಒಟ್ಟು ರೂ. 2,19,298=50 ಹಣ ಕಡಿತವಾದ ಬಗ್ಗೆ ಮದ್ಯಾಹ್ನ 02;30 ಸುಮಾರಿಗೆ ಸಂದೇಶಗಳು ಬಂದಿರುತ್ತವೆ. ಕಾರಣ, ನಾನು ಸನ್ ಡೈರೆಕ್ಟ್ ಡಿಶ್ ರಿಚಾರ್ಜ ಮಾಡಲು ನನ್ನ ಗೂಗಲ್ಪೇ ದಿಂದ ರೂ. 278 ಪಾವತಿ ಮಾಡಿದ್ದು, ರಿಚಾರ್ಜ ಆಗದರಿಂದ ಗೂಗಲ್ನಲ್ಲಿ ಗೂಗಲ್ಪೇ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿ  ಅದಕ್ಕೆ ಕರೆ ಮಾಡಿದಾಗ ಸದರಿ ಸಂಖ್ಯೆಯಿಂದ ಯಾರೋ ಅಪರಿಚಿತ ವಂಚಕ ಗೂಗಲ್ ಪೇ ಕಸ್ಟಮರ್ಕೇರ ನಿಂದ ಮಾತನಾಡುತ್ತಿರುವುದಾಗಿ ಹೇಳಿ ನನಗೆ ಮೋಸದಿಂದ ಲಿಂಕ್ ಕಳುಹಿಸಿ ಅವುಗಳನ್ನು ಮೊಬಾಯಿಲ್ ಸಂಖ್ಯೆಗಳಿಗೆ ಪಾರ್ವಡರ್್ ಮಾಡಿಸಿಕೊಂಡು ನನ್ನ ಬ್ಯಾಂಕ ಖಾತೆಯಿಂದ ಒಟ್ಟು  ರೂ. 2,19,298=50 ವಂಚಿಸಿದ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಂಡು ನನ್ನ ಹಣ ಮರಳಿ ಕೊಡಿಸಲು ವಿನಂತಿ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.  

 ಬೇಮಳೇಡಾ ಠಾಣೆ ಅಪರಾಧ ಸಂಖ್ಯೆ 14/2020 ಕಲಂ 279, 337, 338, 304 (ಎ)   ಐಪಿಸಿ :-

ದಿನಾಂಕ 10-05-2020 ರಂದು 2100 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟ್ಟಿ ಮಾಡಿ ಎಮ್ ಎಲ್ ಸಿ ಪಡೆದುಕೊಂಡು ಗಾಯಾಳು ಶ್ರೀ  ಶಂಕರಯ್ಯಾ ತಂದೆ ಶರಣಯ್ಯಾ ಮುಸ್ತಾರಿ ವಯ 22 ವರ್ಷ ಜಾತಿ ಸ್ವಾಮಿ ಉ|| ಕೂಲಿ ಕೆಲಸ ಸಾ|| ಬೇಮಳಖೇಡಾ ಇವರ ಹೇಳಿಕೆ ಪಡೆದುಕೊಂಡಿದರ ಸಾರಾಂವೆನೆಂದರೆ ದಿನಾಂಕ 10-05-2020 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಅವರ ಚಿಕ್ಕಪ್ಪನ ಮಗನಾದ ವಿನಿತ ತಂದೆ ವೈಜಿನಾಥ ಜಾಂಗಟಿ ವಯ 18 ವರ್ಷ ಉ|| ವಿಧ್ಯಾರ್ಥಿ ಮತ್ತು ನಮ್ಮ ಅತ್ತೆಯ ಮಗನಾದ ಅಮರ ತಂದೆ ದಯಾನಂದ ಚಿಕಮಠ ವಯ 19 ವರ್ಷ ಉ|| ಖಾಸಗಿ ಕೆಲಸ ಚಳಕಾಪೂರ ರವರೆಲ್ಲರೂ ಕೂಡಿಕೊಂಡು ನಮ್ಮ ಹೊಸ ಮನೆಯ ಕಡೆಗೆ ಹೋಗಿದ್ದು ಅಲ್ಲಿ   ಹೊಸ ಮನೆಯ ಕಟ್ಟಡ ನೋಡಿಕೊಂಡು ಮರಳಿ   ಮನೆಯ ಕಡೆಗೆ ಮೂವರು ನಡೆದುಕೊಂಡು ಬರುವಾಗ ಸಾಯಂಕಾಲ 7:00 ಗಂಟೆಯ ಸುಮಾರಿಗೆ  ಬೇಮಳಖೇಡಾ ಪೊಲೀಸ ಠಾಣೆಯ ಹತ್ತೀರ ಇದ್ದಾಗ ನಮ್ಮ ಹಿಂದಿನಿಂದ ಅಂದರೆ ಉಡಮನಳ್ಳಿ ಗ್ರಾಮದ ಕಡೆಯಿಂದ ಒಂದು ದ್ವೀಚಕ್ರ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀದ್ದ   ಚಿಕ್ಕಪ್ಪಾನ ಮಗನಿಗೆ ಮತ್ತು ಫಿರ್ಯಾದಿಗೆ ಡಿಕ್ಕಿ ಮಾಡಿ ವಾಹನ ಸಮೇತ ರೋಡಿನ ಮೇಲೆ ಬಿದ್ದ ಪ್ರಯುಕ್ತ  ಎಡಗಾಲಿನ ಪಾದಕ್ಕೆ ಗುಪ್ತಗಾಯ, ಮತ್ತು ಬೆನ್ನಿನಲ್ಲಿ ತರಚಿದ ಗಾಯವಾಗಿದ್ದು ಮತ್ತು   ವಿನೀತ ಇತನಿಗೆ ಹೊಟ್ಟಯಲ್ಲಿ ಬೆನ್ನಿನಲ್ಲಿ ಮತ್ತು ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯಗಳಾಗಿದ್ದು   ಡಿಕ್ಕಿ ಮಾಡಿದ ದ್ವೀಚಕ್ರ ವಾಹನದ ನಂಬರ ನೊಡಲಾಗಿ ಅದರ ನಂಬರ ಕೆಎ-38-ಆರ್-8003 ನೇದ್ದು ಇದ್ದು ಅದರ ಚಾಲಕನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಬಾಬರ ತಂದೆ ಖಾಜಾಸಾಬ್ ವಯ 42 ವರ್ಷ ಸಾ|| ಅಮಲಾಪೂರ ಅಂತಾ ಹೇಳಿದ್ದು ಅವನಿಗೆ ಬಲಕಾಲಿನ ಹೆಬ್ಬರಳಿಗೆ ರಕ್ತಗಾಯವಾಗಿದ್ದು ಮತ್ತು ಅವನ ಹಿಂಬದಿಯ ಸವಾರನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ತುಕ್ಕಾರೆಡ್ಡಿ ತಂದೆ ಮಾಣಿಕರೆಡ್ಡಿ ವಯ 35 ವರ್ಷ ಸಾ|| ಅಮಲಾಪೂರ ಅಂತಾ ಗೋತ್ತಾಗಿದ್ದು ಅವನಿಗೆ ಬಲ ಮೋಲಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ನಂತರ ಫಿರ್ಯಾದಿಯು ಮಾವನಾದ ಭದ್ರಯ್ಯಾ ಸಾಮ್ವಿ ಇವರಿಗೆ ಪೋನ ಮಾಡಿ ವಿಷಯ ತಿಳಿಸಿದ ಮೇರೆಗೆ ಅವರು ಅಲ್ಲಿಗೆ ಬಂದು ನನಗೆ ಮತ್ತು ವಿನೀತ ಇತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸೆರಿಕ ಮಾಡಿದ್ದು ವೈದ್ಯರು ವಿನೀತ ಈತನಿಗೆ ನೋಡಿ ಮಾರ್ಗ ಮಧ್ಯ ಮೃತಪಟ್ಟಿರುತ್ತಾನೆ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 27/2020 ಕಲಂ 457, 380 ಐಪಿಸಿ :-

ದಿನಾಂಕ-11/05/2020 ರಂದು 16:00 ಗಂಟೆಗೆ ಫೀರ್ಯಾದಿ ಶ್ರೀ ಬಸವಸಾಗರ ತಂದೆ ರಾಜಶೇಖರ ಕಾರಬರಿ ಸಾ-ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನಿಡಿದರ ಸಾರಾಂಶವೆನೆಂದರೆ  ಫಿರ್ಯಾದಿಯು ಖಟಕ ಚಿಂಚೋಳಿ ಅಂಚೆ ಕಛೇರಿಯಲ್ಲಿ ಸುಮಾರು 2 ತಿಂಗಳಿಂದ ಪೋಸ್ಟ್ ಮಾಸ್ಟರ್ ಅಂತಾ ಕೇಲಸ ಮಾಡಿಕೊಂಡಿದ್ದು ಜೋತೆಯಲ್ಲಿ ಖಟಕ ಚಿಂಚೊಳಿ ಗ್ರಾಮದ ಗುರನಾಥ ತಂದೆ ಶರಣಪ್ಪಾ ಭುರಕ್ಕೆ  ರವರು ಸಾಹಾಯಕ ಪೋಸ್ಟ್ ಮಾಸ್ಟರ್ ಅಂತಾ ಕೇಲಸ ಮಾಡಿಕೊಂಡು ಇರುತ್ತಾರೆ   ಹೀಗಿರುವಾಗ ದಿನಾಂಕ: 08/05/2020 ರಂದು ಫೀರ್ಯಾದಿಯು ದಿನನಿತ್ಯದಂತೆ ಕೇಲಸಕ್ಕೆ ಬಂದು ಕಛೇರಿಯಲ್ಲಿ ದಿನದ ಎಲ್ಲಾ ಕೇಲಸ ಮುಗಿಸಿಕೊಂಡು ನಂತರ ಭಾಲ್ಕಿಯಲ್ಲಿ ನಮ್ಮ ಕಛೇರಿಯ ಕೇಲಸದ ನಿಮಿತ್ಯ  ಭಾಲ್ಕಿಗೆ  12:30 ಗಂಟೆಗೆ ಹೋಗಿರುತ್ತಾರೆ ಮತ್ತು   ಭಾಲ್ಕಿಗೆ ಹೋಗುವಾಗ ಎಲ್ಲಾ ದಾಖಲೆ ಪತ್ರಗಳು ಮತ್ತು ಇನ್ನಿತರೆ ವಸ್ತುಗಳು ಅಲ್ಮಾರದಲ್ಲಿ ಇಟ್ಟು ಹೋಗಿರುರುತ್ತಾರೆ ಫಿರ್ಯಾದಿಯು ಭಾಲ್ಕಿಯ ಕಛೇರಿಗೆ ಹೋಗುವಾಗ 12:30 ಗಂಟೆಗೆ ಕೇಲ ಗ್ರಾಹಕರು ತಮ್ಮ ಬ್ಯಾಲೇನ್ಸ್ ಚೆಕಿಂಗ ಕುರಿತು ಪೋಸ್ಟ್ ಆಫೀಸ್ ಗೆ ಬಂದಿರುತ್ತಾರೆ ಈ ವೇಳೆಯಲ್ಲಿ  ಅವಸರದಲ್ಲಿ ನಮ್ಮ ಪೋಸ್ಟ್ ಆಫೀಸ್ ಗೆ ಸಂಬಂಧಪಟ್ಟ ಐ.ಪಿ.ಪಿ.ಬಿ ಮೋಬೈಲ್ ಉಪಕರಣವನ್ನು ಕಛೇರಿಯಲ್ಲಿನ ಕಟ್ಟಿಗೆ ಯ ಟೇಬಲ್ ನ ಡ್ರಾದಲ್ಲಿ ಇಟ್ಟು ಹೋಗಿರುತ್ತಾರೆ  ನಂತರ ಗುರನಾಥ ತಂದೆ ಶರಣಪ್ಪಾ ಭುರಕ್ಕೆ ಸಾಹಾಯಕ ಪೋಸ್ಟ್ ಮಾಸ್ಟರ್ ರವರು ಕೂಡ ಸಾಯಂಕಾಲ 06:00 ಪಿ.ಎಮ್ ಗಂಟೆ ವರಗೆ ಕಛೇರಿಯಲ್ಲಿ ತಮ್ಮ ಕೇಲಸ ಮುಗಿಸಿಕೊಂಡು ಹೋಗುವಾಗ ಕಛೇರಿಗೆ ಕಿಲಿ ಹಾಕಿ ಹೋಗಿರುತ್ತಾರೆ  ದಿನಾಂಕ: 09/05/2020 ರಂದು ಮುಂಜಾನೆ 08:30 ಗಂಟೆಗೆ ಫಿರ್ಯಾದಿ ಮತ್ತು  ಕಛೇರಿಯ  ಸಾಹಾಯಕ ಪೋಸ್ಟ್ ಮಾಸ್ಟರ್ ಗುರನಾಥ ತಂದೆ ಶರಣಪ್ಪಾ ಭುರಕ್ಕೆ  ರವರು ಕೂಡಿಕೊಂಡು  ಕಛೆರಿಗೆ ಬಂದಾಗ ನಮ್ಮ ಕಛೇರಿಯ ಮುಂದೆ ಎಂದಿನಂತೆ ಗ್ರಾಹಕರು ನಿಂತಿದ್ದರು ಈ  ವೇಳೆಯಲ್ಲಿ ನಾವು ಕಛೆರಿಯ ಬಾಗಿಲ ಹತ್ತಿರ ಹೋಗಿ ಕೀಲಿ ನೋಡಲು ಬಾಗಿಲ ಕೀಲಿ ಮುರಿದ ಸ್ಥಿತಿಯಲ್ಲಿ ಇದ್ದು  ಕಛೆರಿಯ ಬಾಗಿಲು ತೆರೆದಿದ್ದು ಇರುತ್ತದೆ   ಕಛೇರಿಯ ಒಳಗೆ ಹೋಗಿ ಅಲ್ಲಿ ಚೇಕ ಮಾಡಿ ನೋಡಲು ಕಟ್ಟಿಗೆ ಯ ಟೇಬಲ್ ನ ಡ್ರಾದಲ್ಲಿ ಇಟ್ಟಿದ ಐ.ಪಿ.ಪಿ.ಬಿ ಮೋಬೈಲ್  ಅದರ ಒಇ ಓಔ-1:356277090914197, ಒಇ ಓಔ-2:356277091414197, ಖ/ಓ:ಇಐಗಉ731812005619 ಅ/ಕೀ 11999/- ರೂಪಾಯಿಯ ಉಪಕರಣವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


Monday, May 11, 2020

BIDAR DISTRICT DAILY CRIME UPDATE 11-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-05-2020

ಜನವಾಡಾ ಪೊಲೀಸ್ ಠಾಣೆ  ಯು.ಡಿ.ಆರ್. ನಂ. 06/2020 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 10/05/2020 ರಂದು ಗಂಟೆಗೆ 1730 ಗಂಟೆಗೆ ಶ್ರೀ ಎಮ್ ಡಿ ಯಾದುಲ್ಲಾ ತಂದೆ ಇಸ್ಮಾಯಿಲ್ ಸಾಬ ಕಾರೆಮಂಗೆ ಸಾ|| ಚಿಲ್ಲರ್ಗಿ ಗ್ರಾಮ ತಾ|| ಜಿ|| ಬೀದರ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 10/05/2020 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ಇವರ ಮಗ ಎಮ್ ಡಿ ಇರಫಾನ ಈತನು ತನ್ನ ಗೆಳೆಯರಾದ ಗ್ರಾಮದ ಇರಫಾನ್   ಮತ್ತು ಮುಜಾಮಲ್   ರವರೊಂದಿಗೆ ಚಿಲ್ಲರ್ಗಿ ಗ್ರಾಮದ ಶಿವಾರದಲ್ಲಿರುವ   ಬಾಬುಮೀಯಾ ಜಾಗಿರದಾರ ಹೊಲದ ಹತ್ತಿರ ಮಾಂಜ್ರಾ ನದಿಗೆ ಈಜಲು ಹೋಗಿರುತ್ತಾನೆ. ನಂತರ ಮದ್ಯಾಹ್ನ 3: 30 ಗಂಟೆಯ ಸುಮಾರಿಗೆ ಇರಫಾನ್ ಹೊಕರಾಣೆ ಈತನು   ಫೋನ್ ಮಾಡಿ ನಾನು ಮತ್ತು ನಿಮ್ಮ ಮಗ ಎಮ್ ಡಿ ಇರಫಾನ್ ಮಾಂಜ್ರಾ ನದಿಯ ನಿರಿನಲ್ಲಿ ಈಜುತ್ತಿರುವಾಗ ಇರಫಾನ್ ಈತನು ನಿರಿನಲ್ಲಿ ಮುಳುಗಿ ಮೇಲಕ್ಕೆ ಬಂದಿರುವುದಿಲ್ಲ. ಅಂತಾ ತಿಳಿಸಿದ ತಕ್ಷಣ   ಮಾಂಜ್ರಾ ನದಿಯಲ್ಲಿ ಹೋಗಿ ನೋಡಲು ಇರಫಾನ್ ಹೊಕರಾಣಿ, ಎಮ್ ಡಿ ಖಿಜಾರ ಮತ್ತು ಮುಜಾವಿಲ್ ರವರಿದ್ದು ನನ್ನ ತಮ್ಮ ಮತ್ತು ನಾನು ಸೇರಿ ನದಿಯ ನೀರಿನಲ್ಲಿ ಜೀಗಿದು ನಿರಿನಲ್ಲಿ ಹುಡುಕಾಡಿ ನನ್ನ ಮಗ ಎಮ್ ಡಿ ಇರಫಾನ್ ಈತನಿಗೆ ನದಿಯ ನಿರಿನಿಂದ ಮೇಲಕ್ಕೆ 4: 30 ಗಂಟೆಯ ಸುಮಾರಿಗೆ ತಂದು ನೋಡಲು ಎಮ್ ಡಿ ಇರಫಾನ್ ಈತನು ಮೃತಪಟ್ಟಿರುತ್ತಾನೆ. ಅಲ್ಲೆ ಇದ್ದ ಇರಫಾನ್ ಹೊಕರಾಣಿ ಈತನಿಗೆ ಈ ಘಟನೆ ಬಗ್ಗೆ ವಿಚಾರಿಸಲು ಆತನು ಇಂದು ಮದ್ಯಹ್ನ ನಾನು ಮತ್ತು ನಿಮ್ಮ ಮಗ ನಿರಿನಲ್ಲಿ ಮಾಂಜ್ರಾ ನದಿಯ ನಿರಿನಲ್ಲಿ ಈಜತ್ತಿರುವಾಗ ನಿಮ್ಮ ಮಗ ನಿರಿನಲ್ಲಿ ಮುಳುಗಿದಾಗ ಗಾಬರಿಗೊಂಡ ನಾವು ನದಿ ನಿರಿನಿಂದ ಮೇಲಕ್ಕೆ ಬಂದು ಸ್ವಲ್ಪ ಸಮದಯ ವರೆಗೆ ನೊಡಿದರು ನಿಮ್ಮ ಮಗ ನಿರಿನಿಂದ ಮೇಲಕ್ಕೆ ಬರದೆ ಇದ್ದಾಗ ಗಾಬರಿಗೊಂಡ ನಾವು ನಿಮಗೆ ಫೋನ್ ಮಾಡಿ ವಿಷಯ ತಿಳಿಸಿರುತ್ತೆವೆ ಅಂತಾ ತಿಳಿಸಿದನು.  ನನ್ನ ಮಗ ಎಮ್ ಡಿ ಇರಫಾನ್ ವಯ|| 18 ವರ್ಷ ಈತನು ಇಂದು ತನ್ನ ಗೆಳೆಯರೊಂದಿಗೆ ಮಾಂಜ್ರಾ ನದಿಯಲ್ಲಿ ಈಜಲು ಹೊಗಿ ಮದ್ಯಹ್ನ 3: 30 ಗಂಟೆಯಿಂದ 4: 45 ಗಂಟೆಯ ಮದ್ಯದ ಅವಧಿಯಲ್ಲಿ ನಿರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ. ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೋಲೀಸ್ ಠಾಣೆ ಯು.ಡಿ.ಆರ್. ನಂ. 4/2020 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ: 10-05-2020 ರಂದು 0815 ಗಂಟೆಗೆ ಬ್ಯಾಲಹಳ್ಳಿ ಗ್ರಾಮದಲ್ಲಿ ಫಿರ್ಯಾದಿ ಇಸ್ಮಾಯಿಲ ತಂದೆ ಹುಸೇನಸಾಬ ಜಹಿರಾಬಾದ ವಯ 50 ಜಾ. ಮುಸ್ಲಿಂ ಉ. ಕೂಲಿ ಕೆಲಸ ಸಾ. ಹಳ್ಳೀಖೇಡ (ಬಿ) ಸಧ್ಯ ಬ್ಯಾಲಹಳ್ಳಿ   ರವರ ಮಗ ಅಮೀರ ತಂದೆ ಇಸ್ಮಾಯಿಲ ಜಹಿರಾಬಾದ ವಯ : 13 ವರ್ಷ ಇತನು ಬೆಳ್ಳಿಗ್ಗೆ 0700 ಗಂಟೆಗೆ  ಮಲವಿಸರ್ಜನೆಗೆ ಹೋದಾಗ ಆಕಸ್ಮಿಕವಾಗಿ ಸಿಡಿಲು ಬಡಿದ್ದರಿಂದ ಎದೆಯ ಮೇಲೆ ಕಂದು ಗಟ್ಟಿದ (ಸುಟ್ಟಿದ್ದ ಗಾಯ) ಗಾಯವಾಗಿದ್ದರಿಂದ  ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯಾಧಿಕಾರಿಯವರು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ  ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇರೆಗೆ ಠಾಣೆ ಯುಡಿಆರ  ಪ್ರಕರಣ ದಾಖಲಿಸಿ ತನಿಕೆ ಕೈಗೊಳ್ಳಲಾಗಿದೆ.  

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 37/2020 ಕಲಂ 188, 273 ಐಪಿಸಿ 6 ಕೋಟ್ಪಾ ಕಾಯ್ದೆ :-

  ದಿನಾಂಕ: 10-05-2020  ರಂದು 1715 ಗಂಟೆಗೆ ಶ್ರೀ ಅಹ್ಮದಸಾಬ ಮುಲ್ಲಾ ಗ್ರಾಮಲೆಕ್ಕಾಧಿಕಾರಿ ಮಾಣಿಕೇಶ್ವರ ರವರು ಠಾಣೆಗೆ ಹಾಜರಾಗಿ ಒಂದು ಅರ್ಜಿಯೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಮತ್ತು ಆರೋಪಿತನಿಗೆ ಹಾಜರು ಪಡೆಸಿದ್ದು ಸ್ವೀಕರಿಸಿಕೊಂಡು ಪರಿಶೀಲಿಸಿ ನೋಡಲು ಸಾರಾಂಶವೆನೆಂದರೆ, ದಿನಾಂಕ: 10-05-2020 ರಂದು 1430 ಗಂಟೆಗೆ ಫರ್ಯಾದಿ ರವರು ಮಾಣಿಕೇಶ್ವರದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಬಾತ್ಮಿ ಬಂದಿದೇನೆಂದ್ದರೆ, ಮಾಣಿಕೇಶ್ವರ ಗ್ರಾಮದ ವಿಠಲ ರುಕ್ಮೀಣಿ ಮಂದಿರ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಾನ್ಯ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಿ ಪಾನಮಸಾಲಾ ಮತ್ತು ತಂಬಾಕು ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಸ್ವೀಕರಿಸಿಕೊಂಡು ಕೂಡಲೇ ಕಂದಾಯ ನಿರೀಕ್ಷಕರಾದ ಬಸವರಾಜ   ಹಾಗು ಖಾಸಿಂ ಗ್ರಾಮ ಸೇವಕ ಇಬ್ಬರೂನ್ನು ಕರೆಯಿಸಿ ವಿಷಯ ತಿಳಿಸಿ ಪಂಚರೊಂದಿಗೆ ಹೊದಾಗ ಸಾರ್ವಜನಿಕ ರೋಡಿನ ಮೇಲೆ ಪಾನಮಸಾಲಾ ಮತ್ತು ತಂಬಾಕು ಚೀಲಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನು. ಇದನ್ನು ಖಚಿತ ಪಡಿಸಿಕೊಂಡ ಮೇಲೆ ಫಿರ್ಯಾದಿ ಮತ್ತು ನಮ್ಮ ಸಿಬ್ಬಂದಿಯವರು ಪಂಚರ  ಸಮಕ್ಷಮ ಅವನ ಮೇಲೆ 1530 ಗಂಟೆಗೆ ದಾಳಿ ಮಾಡಿ ಸಚೀನ ತಂದೆ  ಜ್ಞಾನೋಬಾ ಮಾನೆ ವಯ: 24 ವರ್ಷ ಜಾ: ಮರಾಠಾ ಉ: ಕಿರಣಾ ಅಂಗಡಿ ಸಾ: ಮಾಣಿಕೇಶ್ವರ ಅಂತ ತಿಳಿಸಿದನು. ನಂತರ ಅವನ ಹತ್ತಿರ ಪ್ಲಾಸ್ಟಿಕ ಚೀಲಗಳು ಚೆಕ ಮಾಡಲುಅವನ ಬಳಿ ಒಟ್ಟು 06 ಪ್ಲಾಸ್ಟಿಕ ಚೀಲಗಳಿದ್ದು, ಅವುಗಳಲ್ಲಿ   ಮೂರು ಚೀಲಗಳಲ್ಲಿ ತೆರೆದಾಗ  ಪ್ರತಿಯೊಂದರಲ್ಲಿ ನಾಲ್ಕು ಸಣ್ಣ ಚೀಲಗಳಿದ್ದು ಪ್ರತಿಯೊಂದರಲ್ಲಿ ತಲಾ ಒಂದು ಚೀಲದಲ್ಲಿ ಗೀತಾಂಜಲಿ ಪಾನ ಮಸಾಲಾ 5000  ಹೆಸರಿನ  55 ಪ್ಲಾಸ್ಟಿಕ  ಪಾಕೆಟ ಇದ್ದು,  ಇವು ಒಂದು ಪಾಕೆಟ ನಲ್ಲಿ 30 ಗೀತಾಂಜಲಿ 5000 ಪಾನ ಮಸಾಲಾ ಪೌಚಗಳು ಇದ್ದುವು. ಇದರ ಒಂದು ಪೌಚನ ಅ; ಕಿ: 4/- ರೂ ಹಾಗು ಒಂದು ಪಾಕೆಟ  ಬೆಲೆ 120/- ರೂ ಇರುತ್ತದೆ. ಹೀಗೆ ಒಟ್ಟು ಮೂರು ಚೀಲದಲ್ಲಿನ 660  ಗೀತಾಂಜಲಿ ಪಾನ ಮಸಾಲಾ 5000 ಹೆಸರಿನ ಪಾಕೆಟಗಳು ಆಗುತ್ತವೆ. ಇವುಗಳ ಅ: ಕಿ: 79,200/- ರೂ ಆಗುತ್ತದೆ. ಹಾಗೂ ಇವುಗಳಲ್ಲದೆ ಇನ್ನು  ಮೂರು ಪ್ಲಾಸ್ಟಿಕ ಚೀಲದಲ್ಲಿ ಪ್ರತಿಯೊಂದರಲ್ಲಿ ನಾಲ್ಕು ಸಣ್ಣ ಪ್ಲಾಸ್ಟಿಕ ಚೀಲಗಳಿದ್ದು, ಅವುಗಳಲ್ಲಿ ತಲಾ ಒಂದರಲ್ಲಿ 55 ಜಿ-1 ತಂಬಾಕು 5000 ಹೆಸರಿನ 55 ಪ್ಲಾಸ್ಟಿಕ ಪಾಕೆಟಗಳು ಇದ್ದು, ಒಂದು ಪಾಕೆಟನಲ್ಲಿ  30    ಜಿ-1 ತಂಬಾಕು 5000 ಹೆಸರಿನ ಪೌಚಗಳಿದ್ದು ಅದರ ಪ್ರತಿಯೊಂದ ರ ಬೆಲೆ 1/- ರೂ ಇದ್ದು, ಒಂದು ಪಾಕೆಟನ ಬೆಲೆ 30/- ರೂ ಇದ್ದು ಒಟ್ಟು ಮೂರು ಚೀಲದಲ್ಲಿ ಸೇರಿ 660 ಪ್ಲಾಸ್ಟಿಕ ಜಿ-1 ತಂಬಾಕು 5000 ಹೆಸರಿನ ಪಾಕೆಟಗಳು ಇದ್ದು ಇವುಗಳ ಅ: ಕಿ: 19800/- ರೂ ಆಗುತ್ತದೆ. ಇವಗಳಲ್ಲಿ ಒಟ್ಟು ಆರುಚೀದಲ್ಲಿ ಮೂರು ಚೀಲದಲ್ಲಿ ಪ್ರತಿ ಮೂರು ಚೀಲದಲ್ಲಿ  ಗೀತಾಂಜಲಿ ಪಾನ ಮಸಾಲಾ 5000   ಹೆಸರಿನ ಪಾನಮಸಾಲಾ ಪಾಕೆಟಗಳಿದ್ದು, ಇವುಗಳ ಬಗ್ಗೆ   ಸಚೀನ ಈತನಿಗೆ ಇವುಗಳ ಖರೀದಿ ರಶೀದಿ ಮತ್ತು ಪರವಾನಿಗೆ ಕೇಳಲು ಅವನು ತನ್ನ ಹತ್ತಿರ ಯಾವುದೇ ಪರವಾನಿಗೆ ಮತ್ತು ರಶೀದಿ ಇರುವುದಿಲ್ಲ ಅಂತ ತಿಳಿಸಿರುತ್ತಾನೆ. ಇವನು ಆರೂಗ್ಯಕ್ಕೆ ಹಾನಿಕಾರವಾದ ತಂಬಾಕು ಮಾರುತ್ತಿದ್ದರಿಂದ ನಂತರ ನಾನು  ಸಚೀನ ಈತನನ್ನು ಸಹ ವಶಕ್ಕೆ ಪಡೆದುಕೊಂಡು ಮೂಲ ಜಪ್ತ ಪಂಚನಾಮೆ, ಈ ಬಗ್ಗೆ ಅರ್ಜಿ ಹಾಗೂ ಮುದ್ದೆಮಾಲು  ಹಾಗು ಆರೋಪಿ ಸಮೇತ ತಮ್ಮ ಮುಂದೆ ಹಾಜರು ಪಡೆಸಿದ್ದು ಮಾನ್ಯರು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


Saturday, May 9, 2020

BIDAR DISTRICT DAILY CRIME UPDATE 09-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 09-05-2020
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 18/2020 3 & 4 ಇ.ಸಿ. ಕಾಯ್ದೆ :-

ದಿನಾಂಕ 08/05/2020 ರಂದು 21:30 ಗಂಟೆಗೆ ಶ್ರೀ ಅರುಣಕುಮಾರ ಆಹಾರ ನೀರಿಕ್ಷಕರು ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಾಂಶವೆನೆಂದರೆ ದಿನಾಂಕ 08/05/2020 ರಂದು ಸಾಯಂಕಾಲ 1810 ಗಂಟೆ  ಸುಮಾರಿಗೆ ನಬಿಸಾಬ ಡಾಂಗೆ ರವರ ಕಾಂಪ್ಲೇಕ್ಸ್ ಎದುರುಗಡೆ ರೋಡಿನ ಪಕ್ಕದಲ್ಲಿ ವಾಹನ ನಿಂತಿದ್ದು ಅದನ್ನು ನೋಡಿ ಪರಿಶೀಲಿಸಿ ನೋಡಲಾಗಿ ವಾಹನ ಚಾಲಕನಿಗೆ ವಿಚಾರಿಸಿದ್ದು ಆತನ ಹೆಸರು ಎಂ.ಡಿ ಜಾವೀದ್ ತಂದೆ ಎಂ.ಡಿ ಮುಜೀಬ್ ವಯಃ 28 ವರ್ಷ ಜಾತಿಃ ಮುಸ್ಲಿಂ ಉಃ ಲಾರಿ ಚಾಲಕ ಮತ್ತು ವಾಹನದ ಮಾಲಿಕ ಸಾಃ ಮನ್ನಳ್ಳಿ ಅಂತ ತಿಳಿಸಿದನು. ವಾಹನದಲ್ಲಿ ಏನಿದೆ ಅಂತ ಕೇಳಲಾಗಿ ಅಕ್ಕಿ ಇರುವುದಾಗಿ ತಿಳಿಸಿದಾಗ ನಾವು ಅಕ್ಕಿಯನ್ನು ಪರಿಶೀಲಿಸಿ ನೋಡಲಾಗಿ ಪಡಿತರ ಅಕ್ಕಿ ಇರುವುದು ಧೃಡಿಪಟ್ಟಿದ್ದು ಸದರಿ ಲಾರಿ ಚಾಲಕನು ಅಕ್ರಮವಾಗಿ ಪಡಿತರ ಅಕ್ಕಿಯ ಚೀಲಗಳನ್ನು ತನ್ನ ಈಚರ್ ಲಾರಿ ನಂ ಕೆ.ಎ 38 5891 ನೇದ್ದರಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದು, ಸದರಿ ಲಾರಿ ಚಾಲಕನಿಗೆ ಅಕ್ಕಿ ಸಾಗಾಟದ ಬಗ್ಗೆ ಪರವಾನಿಗೆ ವಗೈರೆ ಇದೆಯೇ ಅಂತಾ ಕೇಳಿದಾಗ ಸದರಿಯವನು ಯಾವುದೇ ಪರವಾನಿಗೆ ವಗೈರೆ ಇರುವುದಿಲ್ಲಾ  ಅಂತಾ ತಿಳಿಸಿರುತ್ತಾನೆ. ನಂತರ ಅಕ್ಕಿ ತುಂಬಿರುವ ಲಾರಿಯನ್ನು ಪರಿಶೀಲಿಸಿ ನೋಡಲಾಗಿ ಅದರ ನಂ ಕೆ.ಎ 38 5891 ಇದ್ದು  ಲಾರಿಯಲ್ಲಿನ ಚೀಲಗಳನ್ನು ನೋಡಲಾಗಿ ಅಂದಾಜು 50 ಕೆ.ಜಿ ತೂಕದ 140 ಅಕ್ಕಿ ತುಂಬಿದ ಚೀಲಗಳು ಇವುಗಳನ್ನು ಆಹಾರ ನೀರಿಕ್ಷಕರಾದ ಶ್ರೀ ಅರುಣಕುಮಾರ ರವರು ನೋಡಿ ಇವು ಸಾರ್ವಜನಿಕರಿಗೆ ವಿತರಿಸುವ ಉಚಿತ ಪಡಿತರ ಆಹಾರದ ಅಕ್ಕಿ  ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತಾ ದೃಢಪಟ್ಟಿದ್ದು  ಅಕ್ಕಿಯ ಪ್ರತಿ ಚೀಲ 50 ಕೆ.ಜಿ ಉಳ್ಳದ್ದು ಒಟ್ಟು 140 ಪ್ಲಾಸ್ಟಿಕ್ ಮತ್ತು ಗೋಣಿ ಚೀಲಗಳು ಇರುತ್ತವೆ. ಒಟ್ಟು ತೂಕ 70 ಕ್ವಿಂಟಾಲ ಅಕ್ಕಿ ಇದ್ದು, ಇದರ ಅಂದಾಜು ಕಿಮ್ಮತ್ತು ಒಂದು ಕ್ವಿಂಟಾಲಗೆ ರೂ 2319 ರಂತೆ ಹೀಗೆ ಒಟ್ಟು ಅ.ಕಿ ರೂ 1,62,330/- ಹಾಗೂ ಐಚರ್ ಲಾರಿ ಅ.ಕಿ 7,00000/-ರೂ ಇರುತದೆ ಅಂತಾ ನೀಡಿದರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 08/05/2020 ರಂದು 1100 ಗಂಟೆಗೆ ಪಿಎಸ್ಐ ರವರು ಪೊಲೀಸ ಠಾಣೆಯಲ್ಲಿರುವಾಗ ಫೋನ್ ಮೂಲಕ ಮಾಹಿತಿ ಬಂದಿದ್ದೆನೆಂದರೆ, ಮಿರಕಲ್ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಲವು ಜನರು ಸೇರಿ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ 1) ಜಗನ್ನಾಥ ತಂದೆ ಕಾಳಪ್ಪಾ ಮೇತ್ರೆ ವಯ 40 ವರ್ಷ,  ಈತನ ಮುಂದೆ ನಗದು ಹಣ ರೂ. 600=00 ರೂ 2) ಅಶೋಕ ತಂದೆ ದೀಲಿಪರಾವ ಮೇತ್ರೆ ವಯ 33 ವರ್ಷ, ಇತನ ಮುಂದೆ ನಗದು ಹಣ ರೂ.700=00 ರೂ 3) ತುಕಾರಾಮ ತಂದೆ ಪ್ರಲ್ಹಾದ ಕೊಂಡಾಪೂರೆ ವಯ 37 ವರ್ಷ ಜಾತಿ  ಇತನ ಮುಂದೆ ನಗದು ಹಣ ರೂ.550=00 ರೂ  4] ಪರಮೇಶ್ವರ ತಂದೆ ವೆಂಕಟರಾವ ಮೇತ್ರೆ ವಯ 34 ಇತನ ಮುಂದೆ ನಗದು ಹಣ 910=00 ರೂ. 5] ರಾಜಕುಮಾರ ತಂದೆ ನರಸಪ್ಪಾ ಖಾನಾಪೂರೆ ವಯ 47 ವರ್ಷ,  ಇತನ ಮುಂದೆ ನಗದು ಹಣ 590=00ರೂ 6] ಬಾಲಾಜಿ ತಂದೆ ಧನಾಜಿ ಮೂಳೆ ವಯ 32 ವರ್ಷ  ಇತನ ಮುಂದೆ ನಗದು ಹಣ 650=00 ರೂ,  ಎಲ್ಲರ ಮಧ್ಯದಲ್ಲಿ ಜೂಜಾಟಕ್ಕೆ ಬಳಸಿದ ನಗದು ಹಣ 310-ರೂ. ಹೀಗೆ ಒಟ್ಟು: 4310=00 ರೂ. ಹಾಗು 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತ ಮಾಡಿ ಕೊಂಡು ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 26/2020 ಕಲಂ 363 ಐಪಿಸಿ :-
 ದಿನಾಂಕ 07/05/2020 ರಂದು ಪಿಎಸ್ಐ ರವರು ರಾತ್ರಿ 2200 ಗಂಟೆಯಿಂದ ವಿಶೇಷ ರಾತ್ರಿ ಗಸ್ತು ಚೇಕಿಂಗ ಮತ್ತು ರೋಡ ಪೇಟ್ರೊಲಿಂಗ ಕರ್ತವ್ಯ ಕುರಿತು ಸಿಬ್ಬಂದಿಯೊಂದಿಗೆ ಖಟಕ ಚಿಂಚೋಳಿ ಕ್ರಾಸ್, ಏಣಕೂರ, ನಾವದಗಿ, ಮಾವಿನಹಳ್ಳಿ. ಉಚ್ಛಾ, ಮೊರಂಬಿ ಕಡೆಗಳಿಗೆ ಹೊಗಿ ದಿನಾಂಕ-08/05/2020 ರಂದು ನಸುಕಿನ ಜಾವ 0430 ಗಂಟೆಗೆ ಬಾಜೋಳಗಾ ಕ್ರಾಸ್ ಹತ್ತಿರ ಬಂದು ನಿಂತಾಗ ಅಲ್ಲಿ ಬಾಜೋಳಗಾ ಕ್ರಾಸ್ ಬಸ್ ನಿಲ್ದಾಣದ ಹತ್ತಿರ ನಿಂತಿದ್ದ ಒಬ್ಬ ವ್ಯಕ್ತಿ  ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ತಕ್ಷಣ ಓಡಲು ಪ್ರಾರಂಬಿಸಿದಾಗ  ಸದರಿ ವ್ಯಕ್ತಿಗೆ ಹಿಡಿದು   ವಿಚಾರಣೆ ಮಾಡಿದಾಗ    ಅವನು ತನ್ನ ಹೇಸರು ಸಚೀನ ತಂದೆ ರಘುನಾಥ ಬಿರಾದಾರ ವಯ-30 ವರ್ಷ ಜಾ-ಮರಾಠಾ ಉ-ಕೂಲಿ ಕೆಲಸ ಸಾ-ಕೋರುರ ಅಂತಾ ತಿಳಿಸಿದ್ದು ಇರುತ್ತದೆ.  ಸದರಿ ವ್ಯಕ್ತಿಗೆ ವಿಚಾರಣೆ ಮಾಡಲು ಅವನು ತಿಳಿಸಿದ್ದೆನಂದರೆ ತಾನು ಬಾಜೋಳಗಾ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಹೊಗಿ ಬರುವ ಮೊಟಾರ ಸೈಕಲ್ ವಾಹನಗಳ ಸವಾರರನ್ನು ತಡೆದು ಅವರ ಕಣ್ಣಲ್ಲಿ ಖಾರದ ಪುಡಿ ಎರಚಿ ಅವರಿಗೆ ಚಾಕು ತೊರಿಸಿ, ಹೇದರಿಸಿ ಅವರಿಂದ ಹಣ ಕಿತ್ತುಕೊಳ್ಳುವ ಸಲುವಾಗಿ ನಿಂತಿರುತ್ತೆನೆ ಅಂತಾ ತಿಳಿಸಿರುತ್ತಾನೆ ನಂತರ ಸದರಿ ವ್ಯಕ್ತಿ ಬಾಜೋಳಗಾ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಹೊಗಿ ಬರುವ ಮೋಟಾರ ಸೈಕಲ್ ವಾಹಗಳ ಸವಾರರಿಗೆ ತಡೆದು ಸೂಲಿಗೆ ಮಾಡಲು ಹೊಂಚುಹಾಕಿ ಪ್ರಯತ್ನ ಮಾಡಲು ನಿಂತಿರುವುದನ್ನು ಸದರಿ ವ್ಯಕ್ತಿಯ ವಿಚಾರಣೆಯಿಂದ ಖಾತ್ರಿಯಾಗಿರುತ್ತದೆ ಸದರಿ ವ್ಯಕ್ತಿಯು ಸರಿಯಾಗಿ ನಡೆದುಕೊಂಡು ಬರದೆ ಕುಂಟುತ್ತಿದ್ದರಿಂದ ಅವನಿಗೆ ಏನಾಗಿರುತ್ತದೆ ಅಂತಾ ವಿಚಾರಣೆ ಮಾಡಿದಾಗ ನಾನು ಪೊಲೀಸ ಸಮವಸ್ತ್ರದಲ್ಲಿದ ತಮಗೆ ನೊಡಿ ಹೆದರಿ ಓಡುತ್ತಿರುವಾಗ ಒಂದು ಕಲ್ಲಿಗೆ ತೊಡಕಿ ಜಾರಿ ಬಿದ್ದಿರುತ್ತೆನೆ ಅದರಿಂದ ನನ್ನ ಎಡಗಾಲಿನ ಮೋಳಕಾಲ ಕೆಳಗೆ ಸಣ್ಣ ಪುಟ್ಟ ಗುಪ್ತಗಾಯ ಆಗಿರುತ್ತವೆ ಅಂತಾ ತಿಳಿಸಿರುತ್ತಾನೆ. ಅವನ ಅಂಗ ಝಡ್ತಿ ಮಾಡಿ  ಚೇಕ್ ಮಾಡಿ ನೊಡಲು ಸದರಿ ವ್ಯಕ್ತಿಯ ಪ್ಯಾಂಟಿನ ಎಡ ಜೇಬಿನಲ್ಲಿ ಒಂದು ಚಾಕು ಇದ್ದು ಮತ್ತು ಬಲ ಜೇಬಿನಲ್ಲಿ ಒಂದು ಪೇಪರದಲ್ಲಿ ಖಾರದ ಪುಡಿ ಇರುತ್ತವೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 59/2020 ಕಲಂ 32, 34 ಕೆಇ ಕಾಯ್ದೆ:’

ದಿನಾಂಕ: 08/05/2020 ನಾನು 1400 ಗಂಟೆಗೆ  ಪಿಎಸ್ಐ ರವರು  ಠಾಣೆಯಲ್ಲಿದ್ದಾಗ    ವಳಸಂಗ ಗ್ರಾಮದಲ್ಲಿ ಬಾಲಾಜಿ ದಾಮುವಾಲೆ ಈತನ ತಗಡದ ಶೆಡ್ಡಿನ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಸರಕಾರದಿಂದ ಯಾವುದೆ ಪರವಾನಿಗೆ ಹೊಂದದೆ ಸರಾಯಿ ಬಾಟಲಗಳು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ಒಂದು ತಗಡದ ಶೆಡ್ಡಿನ ಪಕ್ಕದಲ್ಲಿ ಮರೆಯಾಗಿ ನಿಂತು ನೊಡಲು  ಒಬ್ಬ ವ್ಯಕ್ತಿ  ತನ್ನ ಮುಂದೆ  ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಚೀಲದಲ್ಲಿ  ಸರಾಯಿ ಬಾಟಲಗಳು  ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು  ನಿಂತಿರುವದನ್ನು ನೋಡಿ ಖಚಿತಪಡಿಸಿಕೊಂಡು  ಆತನ ಮೇಲೆ  ದಾಳಿ ಮಾಡಿ    ಬಾಲಾಜಿ ತಂದೆ ಶ್ರೀಪತಿ ದಾಮುವಾಲೆ ವಯ 30 ವರ್ಷ ಜಾ; ಸಮಗಾರ  ; ಕೂಲಿ ಕೆಲಸ ಸಾ; ವಳಸಂಗ ತನ ಹತ್ತಿರ ಇದ್ದ  90  ಎಂ. ಎಲ್. ವುಳ್ಳ 90 ಯು.. ಎಸ್.  ವಿಸ್ಕಿ ಸರಾಯಿ ಬಾಟಲಗಳು ಇದ್ದು  ಅದರ ಪ್ರತಿಯೊಂದು ಬಾಟಲ ಕಿ; 30. 32 ಪೈಸೆ /- ಇದ್ದು ಹೀಗೆ 2728. 8 ಪೈಸೆ  ಬೇಲೆ ಬಾಳುವ ಸರಾಯಿ ಬಾಟಲಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.