Police Bhavan Kalaburagi

Police Bhavan Kalaburagi

Tuesday, July 11, 2017

Yadgir District Reported Crimes


                                     Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 134/2017 u/s 110(E)(G) ಸಿ.ಆರ್.ಪಿ.ಸಿ ;- ದಿನಾಂಕ: 10/07/2017 ರಂದು ನಾನು ಮಹಾಂತೇಶ ಸಜ್ಜನ ಪಿ.ಎಸ್. (ಕಾ.ಸು) ಯಾದಗಿರಿ ನಗರ ಠಾಣೆ ಸರ್ಕಾರಿ ತರ್ಪೆ ಇದ್ದು  ಇಂದು ದಿನಾಂಕ 10/07/2017 ರಂದು 7 ಪಿಎಂಕ್ಕೆ  ಠಾಣೆಯಲ್ಲಿದ್ದಾಗ ಪಿ.ಡಬ್ಲೂಡಿ ಕ್ವಾರ್ಟಸ್ ಹತ್ತಿರ ನ್ಯಾಯಾಧಿಶರ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಡತಡೆವುಂಟು ಮಾಡಿ ಕುಡಿಯಲು ಹಣ ಕೊಡಿರಿ ಇಲ್ಲದ್ದಿದ್ದರೆ ಒಬ್ಬ್ಒಬ್ಬರನ್ನು ಒಂದು ಕೈ ನೋಡಿಕೊಳ್ಳುತ್ತೆನೆ ಅಂತಾ ಸಾರ್ವಜನಿಕರಿಗೆ ತೊಂದರೆ ವುಂಟು ಮಾಡುತ್ತಿದ್ದಾನೆ ಅಮತಾ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರು  ಕೂಡಿಕೊಂಡು ಹೋಗಿ ನೋಡಲಾಗಿ ಮೇಲಿನಂತೆ ಒಬ್ಬನು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದು  ಸದರಿಯವನಿಗೆ ಕೂಡಲೇ ಸಿಬ್ಬಂದಿಯವರ ಸಹಾಯದಿಂದ 7-30 ಪಿಎಂಕ್ಕೆ ಹಿಡಿದು ವಿಚಾರಿಸಲು ಸದರಿಯವನ ಹೆಸರು ವಿಜಯಕುಮಾರ ತಂ. ಬಾಬುಸಿಂಗ  ರಾಠೋಡ ವಃ 36 ಜಾಃ ಲಂಬಾಣಿ ಉಃ ಲೇಬರ ಕೆಲಸ ಸಾಃ ಪಿ.ಡಬ್ಲೂ.ಡಿ ಕ್ವಾರ್ಟಸ್ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನಿಗೆ ಹೀಗೆ ಬಿಟ್ಟಲ್ಲಿ ಮುಂದೆ ಯಾವುದಾದರೊಂದು ಘೋರ ಕೃತ್ಯ ವೆಸಗಿ ಸಾರ್ವಜನಿಕರಿಗೆ ಶಾಂತಿಭಂಗವನ್ನುಂಟು ಮಾಡಿ ಕಾನೂನು ಸುವ್ಯವಸ್ಥೆಗೆ ತೊಡಕುಂಟು ಮಾಡುವ ಸಂಬವ ಕಂಡುಬಂದಿದ್ದರಿಂದ ಸಿಬ್ಬಂದಿಯವರ ಸಹಾಯದಿಂದ ಸದರಿಯವನಿಗೆ ದಸ್ತಗಿರಿ ಮಾಡಿಕೊಂಡು ಠಾಣೆಗೆ 8 ಪಿಎಂಕ್ಕೆ ತಂದು ಮುಂಜಾಗೃತ ಕ್ರಮವಾಗಿ ಇಂದು   ಠಾಣೆ ಗುನ್ನೆ ನಂ:134/2017 ಕಲಂ. 110 ()(ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.   
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ: 379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957;- ದಿನಾಂಕ: 10/07/2017 ರಂದು 09 ಎ.ಎಮ್.ಕ್ಕೆ ಮಾನ್ಯ ರಾಜಶೇಖರ ಎ.ಎಸ್.ಐ ಸಾಹೇಬರು ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಅಕ್ರಮ ಮರಳು ತುಂಬಿದ ಟ್ರ್ಯಾಕ್ಟರ್ ಇಂಜನ ನಂ ಕೆಎ-33 ಟಿಎ-6035 ಹಾಗು ಟ್ರಾಲಿ ನಂ ಕೆಎ-33 ಟಿಎ-6036  ಹಾಗು ಆರೋಪಿ ಹಣಮಂತ ತಂದೆ ಕರೆಪ್ಪ ಕವತೆ ಸಾ|\ ಜಾಲಿಬೆಂಚಿ ತಾ|| ಸುರಪೂರ ಈತನಿಗೆ ಹಾಜರಪಡಿಸಿ ಸೂಕ್ತ ಕ್ರಮ ಜರುಗಿಸುವಂತೆ ತಮ್ಮ ವರಧಿಯೊಂದಿಗೆ ಆದೇಶಿಸಿದ್ದು, ಸದರಿ ವರಧಿ  ಸಾರಾಂಶವೇನೆಂದರೆ, ಇಂದು ದಿನಾಂಕ: 10/07/2017 ರಂದು 9 ಎ.ಎಮ್ಕ್ಕೆ ಪೆಟ್ರೋಲಿಂಗ ಕುರಿತು ಶಿವುಕುಮಾರ ಸಿಪಿಸಿ 131 ರವರೊಂದಿಗೆ ಠಾಣಾ ವ್ಯಾಪ್ತಿಯ ಹೆಗ್ಗಣದೊಡ್ಡಿ ಕ್ರಾಸ ಹತ್ತಿರ ಇದ್ದಾಗ ಜಾಲಿಬೆಂಚಿ ಕಡೆಯಿಂದ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬಂದಿದ್ದು ಆಗ ನಾನು ಹಾಗು ಸಿಬ್ಬಂದಿ ಶಿವುಕುಮಾರ ಸಿಪಿಸಿ 131 ಇಬ್ಬರೂ ಕೂಡಿ  ಟ್ರ್ಯಾಕ್ಟರ್ ನಿಲ್ಲಿಸಿ ಮರಳಿನ ಬಗ್ಗೆ ವಿಚಾರಿಸಲಾಗಿ ಅದರ ಚಾಲಕನು ತನ್ನ ಹತ್ತಿರ ಯಾವದೇ ದಾಖಲಾತಿಗಳು ಇರುವದಿಲ್ಲ ಹಾಗು ಸದರಿ ಮರಳಿಗೆ ಸಕರ್ಾರಕ್ಕೆ ಯಾವದೇ ರಾಜಧನ ಕಟ್ಟಿರುವದಿಲ್ಲ ಅಂತ ತಿಳಿಸಿದಾಗ ನಾನು ಟ್ರ್ಯಾಕ್ಟರ್ ನಂಬರ ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ್ ಇಂಜನ ನಂ ಕೆಎ-33 ಟಿಎ-6035 ಹಾಗು ಟ್ರಾಲಿ ನಂ ಕೆಎ-33 ಟಿಎ-6036 ಅಂತ ಇದ್ದು ಅದರಲ್ಲಿ ಮರಳು ತುಂಬಿದ್ದು ಅದರ ಚಾಲಕನಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಹಣಮಂತ ತಂದೆ ಕರೆಪ್ಪ ಕವತೆ ವ|| 19 ಜಾ|| ಕುರಬರ ಉ|| ಚಾಲಕ ಸಾ|| ಜಾಲಿಬೆಂಚಿ ಅಂತ ತಿಳಿಸಿದ್ದು ಸದರಿ ಮರಳನ್ನು ಜಾಲಿಬೆಂಚಿ ಹಳ್ಳದಿಂದ ತಮ್ಮ ಮಾಲಿಕರಾದ ಆನಂದಪ್ಪ ನಾಯ್ಕೋಡಿ ಸಾ|| ಜಾಲಿಬೆಂಚಿ ರವರು ತುಂಬಿಸಿ ಕಳುಹಿಸಿಕೊಟ್ಟಿದ್ದು ಇರುತ್ತದೆ ಅಂತ ತಿಳಿಸಿದ್ದು  ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 1600/- ರೂ ಕಿಮ್ಮತ್ತಿನ ಮರಳು ಇತ್ತು.  ಟ್ರ್ಯಾಕ್ಟರನ್ನು 10-30 ಎಎಮ್ ಕ್ಕೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಈ ವರಧಿಯೊಂದಿಗೆ ಒಪ್ಪಿಸಿದ್ದು ಇರುತ್ತದೆ.
       ಆದ್ದರಿಂದ ಸಕರ್ಾರಕ್ಕೆ ರಾಜಧನ [ರಾಯಲ್ಟಿ] ತುಂಬದೆ ಟ್ರ್ಯಾಕ್ಟರದಲ್ಲಿ ಮರಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ ಚಾಲಕ ಹಾಗು ಅದರ ಮಾಲಿಕನ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತ ಕೊಟ್ಟ ವರಧಿ ಆದಾರದ ಮೇಲಿಂದ ಠಾಣಾ ಗುನ್ನೆ ನಂ 128/2017 ಕಲಂ: 379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 239/2017.ಕಲಂಃ 110(ಇ) (ಜಿ) ಸಿ.ಆರ್.ಪಿ.ಸಿ.;- ದಿನಾಂಕ: 10/07/2017 ರಂದು 15-00 ಪಿ.ಎಮ್ ಕ್ಕೆ ಶ್ರೀ ಗೋಕುಲ್ ಹುಸೇನ್.ಪಿ.ಸಿ.172 ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು  ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ. ಇಂದು ದಿನಾಂಕ 10/07/2017 ರಂದು ನಾನು ಬೀಟ ಮಾಹಿತಿ ಸಂಗ್ರಹಿಸಲು ಕನ್ಯಾಕೊಳ್ಳೂರ ಗ್ರಾಮಕ್ಕೆ ಹೋಗಿದ್ದು ಗ್ರಾಮದಲ್ಲಿ ಗಸ್ತು ತಿರುಗ್ಯಾಡಿ ನಾಗರಿಕ ಸಮೀತಿ ಸದಸ್ಯರಿಂದ ಬೀಟ್ ಮಾಹಿತಿ ಸಂಗ್ರಹಿಸುತ್ತಿದ್ದಾಗ ಮದ್ಯಾಹ್ನ 14-00 ಪಿ.ಎಂ. ಸುಮಾರಿಗೆ ಕನ್ಯಾಕೊಳ್ಳೂರ ಗ್ರಾಮದ ಚೇನ್ನಮ್ಮಾಯಿ ಗುಡಿಯ ಮುಂಬಾಗದಲ್ಲಿರುವ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಒಬ್ಬ ವ್ಯಕ್ತಿಯು ಜೋರಾಗಿ ಒದರಾಡುತ್ತಾ ಚೀರಾಡುತ್ತಾ ತನ್ನ ದೇಹದಾಡ್ರ್ಯತೆ ಪ್ರದಶರ್ಿಸುತ್ತಾ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದಾಡುತ್ತಾ ಮಕ್ಕಳೆ ಯಾರಾದರೂ ನನ್ನ ತಂಟೆಗೆ ಬಂದರೆ ನಿಮಗೆ ಸುಮ್ಮನೆ ಬಿಡುವದಿಲ್ಲಾ, ಒಂದು ಕೈ  ನೋಡೆ ಬಿಡುತ್ತೇನೆ ಅಂತಾ ಅನ್ನುತ್ತ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುತ್ತಿರುವದನ್ನು ಕಂಡು ಅವನ ಹತ್ತಿರ ಹೋಗಿ ಆತನನ್ನು ಹಿಡಿದು ಹೆಸರು, ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಸಿದ್ದಪ್ಪ ತಂದೆ ಮಲ್ಲಪ್ಪ ಚೆಟ್ನಳ್ಳಿ ವ|| 40 ಜಾ|| ಕುರುಬುರ ಉ|| ಕೂಲಿ ಕೆಲಸ ಸಾ|| ಕನ್ಯಾಕೊಳ್ಳೂರ ತಾ|| ಶಹಾಪೂರ ಅಂತಾ ತಿಳಿಸಿದನು. ಈತನನ್ನು ಹಾಗೆಯೇ ಬಿಟ್ಟಲ್ಲಿ ತನ್ನ ರೌಡಿ ಪ್ರವೃತ್ತಿ ಮುಂದುವರೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಅಥವಾ ಪ್ರಾಣ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ ಸದರಿಯವನಿಗೆ ಹಿಡಿದುಕೊಂಡು 14-30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ವರದಿ ತಯಾರಿಸಿ 15-000 ಪಿ.ಎಮ್ಕ್ಕೆ ಒಪ್ಪಿಸಿದ್ದು, ಸದರಿಯವನ ವಿರುದ್ಧ ಸೂಕ್ತ ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ವರದಿ ಸಾರಾಂಶದ ಮೇಲಿಂದ ಗುನ್ನೆ 239/2017 ಕಲಂ. 110(ಇ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

No comments: