Police Bhavan Kalaburagi

Police Bhavan Kalaburagi

Saturday, September 24, 2016

BIDAR DISTRICT DAILY CRIME UPDATE 24-09-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-09-2016

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 16/2016, ಕಲಂ 174 ಸಿ.ಆರ್.ಪಿ.ಸಿ :-
ಫಿರ್ಯಾದಿ ರವಿ ತಂದೆ ತುಕರಾಮ ಲಂಬುನೋರ ವಯ: 32 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಸಿಂಧನಕೇರಾ ರವರ ಹಿರಿಯ ಮಗನಾದ ರುಬೀನ್ ವಯ: 8 ವರ್ಷ ಇತನು ತಮ್ಮೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆ, ಹೀಗಿರುವಾಗ ದಿನಾಂಕ 23-299-2016 ರಂದು ರುಬೀನ್ ಇತನು ದಿನನಿತ್ಯದಂತೆ ಇತನು ಶಾಲೆಗೆ ಹೋಗಿ ಮರಳಿ 1630 ಗಂಟೆಯ ಸುಮಾರಿಗೆ ಮನೆಗೆ ಬಂದು ನಂತರ ಊರಿನಲ್ಲಿಯೇ ಇರುವ ಫಿರ್ಯಾದಿಯ ಅಕ್ಕಳಾದ ಕಲಾವತಿ ಗಂಡ ಕರಬಸಪ್ಪಾ ಲಂಬುನೋರ ಇವಳ ಜೋತೆ ಅವಳ ಮನೆಗೆ ಹೋಗಿ ಅವನು ಮರಳಿ ಮನೆಗೆ ಬಂದಿರುವುದಿಲ್ಲ, ಆಗ ಫಿರ್ಯಾದಿಯು ಕಲಾವತಿ ಇವಳ ಮನೆಗೆ ಹೋಗಿ ವಿಚಾರಿಸಲು  ಅವರು ತಿಳಿಸಿದ್ದೆನೆಂದರೆ ರುಬೀನ್ ಇತನು ಅಂದಾಜು 1745 ಗಂಟೆಯ ಸುಮಾರಿಗೆ ನಾನು ಮನೆಗೆ ಹೋಗುತ್ತೇನೆ ಅಂತ ತಿಳಿಸಿ ಸಾಯಿ ಕಿರಿಯ ಪ್ರಾಥಮಿಕ ಶಾಲೆ ಹತ್ತಿರದಿಂದ ಹಾದುಹೋಗುವ ಕಾಲು ದಾರಿ ಮುಖಾಂತರ ಹೋಗಿರುತ್ತಾನೆ ಅಂತ ತಿಳಿಸಿದರು, ಆಗ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ನೀಲಮ್ಮಾ, ಅಕ್ಕಳಾದ ಕಲಾವತಿ ಹಾಗೂ ಗ್ರಾಮದವರಾದ ರಾಜು ತಂದೆ ವಿಶ್ವನಾಥ ಎಲ್ಲರೂ ಕೂಡಿ ಹುಡಕಾಡಲು ಕಾಲು ದಾರಿಯ ಪಕ್ಕದಲ್ಲಿ ತಮ್ಮೂರ ಜಾಫರಸಾಬ ತಂದೆ ಕರಿಮಸಾಬ ರವರ ಮನೆಯ ಹತ್ತಿರ ಸುತ್ತಲು ನೀರು ತುಂಬಿದ್ದರಿಂದ ಸದರಿರವರ ಮನೆ ಕಟ್ಟಲು ಕಾಲಂ ಹಾಕಲು ಅಂದಾಜು 05 ಅಡಿಯಲ್ಲಿ ತೇಗೆದಿದ್ದ ತಗ್ಗಿನಲ್ಲಿ ಮಳೆ ಹೆಚ್ಚಾಗಿ ನೀರು ತುಂಬಿದ್ದರಿಂದ ಕಾಲು ದಾರಿ ಕಾಣದೇ ಕಾಲು ಜಾರಿ ತಗ್ಗಿನ ನೀರಿನಲ್ಲಿ ಬೀದ್ದು ರುಬೀನ್ ಇತನು ಮೃತಪಟ್ಟಿದ್ದು ಇರುತ್ತದೆ, ಸದರಿ ಮೃತ ದೇಹ ಬ್ಯಾಟರಿಯ ಬೆಳಕಿನಲ್ಲಿ 1900 ಗಂಟೆಯ ಸುಮಾರಿಗೆ ನೋಡಿದ್ದು, ಸದರಿ ಘಟನೆ 1745 ಗಂಟೆಯಿಂದ 1845 ಗಂಟೆಯ ಅವಧಿಯಲ್ಲಿ ಜರಗಿರಬಹುದು, ಸದರಿ ಘಟನೆ ಅತಿವೃಷ್ಟಿ ಮಳೆಯಾಗಿದ್ದರಿಂದ ಎಲ್ಲಾ ಕಡೆಯು ಸಂಪೂರ್ಣವಾಗಿ ನೀರು ತುಂಬಿಕೊಂಡಿದ್ದು ಕಾಲು ದಾರಿ ಕಾಣದೇ ಆಕಸ್ಮಿಕವಾಗಿ ಜರಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 149/2016, ಕಲಂ 279, 338, 427 ಐಪಿಸಿ :-

ಗಾಯಳು ಫಿರ್ಯಾದಿ ಪ್ರಶಾಂತ ತಂದೆ ಮಾಣಿಕ ನಾಗನಾಯ್ಕ್ ವಯ: 29 ವರ್ಷ, ಜಾತಿ: ಮಾದಿಗ, ಸಾ: ಹಣಕುಣಿ ರವರು ತಮ್ಮೂರಿನ ಸೊಮಣ್ಣಾ ತಂದೆ ತುಕ್ಕಾರೆಡ್ಡಿ ರಾಚರಡ್ಡಿ ರವರು ನಡೆಸುತ್ತಿದ್ದ ಟಾರಸ್ ಲಾರಿ ನಂ. ಕೆಎ-32/ಬಿ-5105 ನೇದರ ಮೇಲೆ ಒಂದು ತಿಂಗಳಿಂದ ಕ್ಲೀನರ್ ಅಂತಾ ಕೆಲಸ ಮಾಡಿಕೊಂಡಿದ್ದು, ಸದರಿ ಲಾರಿ ಹೈದ್ರಾಬಾದ-ಮುಂಬೈ ಕಡೆಗೆ ನಡೆಸುತ್ತಾರೆ, ಹೀಗಿರುವಾಗ ದಿನಾಂಕ 22-09-2016 ರಂದು ಹೈದ್ರಾಬಾದ ಕೊತುರದಲ್ಲಿ ಟಾರಸ್ ಲಾರಿ ನಂ-ಕೆಎ-32/ಬಿ-5105 ನೇದರಲ್ಲಿ ಕೊಯಿಲ್ ಬಂಡಲಗಳು ತುಂಬಿಕೊಂಡು ರಾತ್ರಿ ಹಣಕುಣಿ ಗ್ರಾಮಕ್ಕೆ ಬಂದು ಉಳಿದುಕೊಮಡು ನಂತರ ದಿನಾಂಕ 23-0-2016 ರಂದು ಸದರಿ ಟಾರಸ ಲಾರಿ ನೇದನ್ನು ತಮ್ಮೂರ ಸೊಮಣ್ಣಾ ತಂದೆ ತುಕ್ಕಾರೆಡ್ಡಿ ರಾಚರಡ್ಡಿ ವಯ: 38 ವರ್ಷ ರವರು ಸದರಿ ಲಾರಿ ಚಲಾಯಿಸುತ್ತಾ ಹುಮನಾಬಾದ ಮಾರ್ಗವಾಗಿ ಮುಂಬೈಗೆ ಹೊಗುವಾಗ ಹಣಕುಣಿ-ಹುಮನಾಬಾದ ರೋಡಿನ ಮೇಲೆ ಆರೋಪಿ ಸೊಮಣ್ಣಾ ತಂದೆ ತುಕ್ಕಾರೆಡ್ಡಿ ರಾಚರಡ್ಡಿ ವಯ: 38 ವರ್ಷ, ಸಾ: ಹಣಕುಣಿ, ತಾ: ಹುಮನಾಬಾದ ರವರು ಸದರಿ ಲಾರಿಯನ್ನು ಅತಿ ವೇಗ ಮತ್ತು ಅಜಾರುಕತೆಯಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಚಂದ್ರಕಾಂತ ತಂದೆ ಸಿದ್ರಾಮಪ್ಪಾ ಶೇರಿಕಾರ ರವರ ಹೊಲದ ಹತ್ತಿರ ಇರುವ ರೋಡಿನ ಎಡ ಬದಿಯ ಕರೆಂಟ ಕಂಬಕ್ಕೆ ಡಿಕ್ಕಿ ಮಾಡಿ ಹಾನಿ ಪಡಿದ್ದು ಇರುತ್ತದೆ ಮತ್ತು ಕಂಬ ಲಾರಿಯಲ್ಲಿ ಸಿಕಿಕೊಂಡು ದಸ್ತಗೀರ ಹಳ್ಳದ ಬ್ರಿಡ್ಜಿನಲ್ಲಿ ಪಲ್ಟಿ ಮಾಡಿರುತ್ತಾನೆ, ಅದರಿಂದ ಫಿರ್ಯಾದಿಯ ಬಲಗಾಲ ಮೋಳಕಾಲ ಕೇಳಗೆ ಭಾರಿ ಗುಪ್ತಗಾಯವಾಗಿ ಮುರಿದಂತೆ ಮೇಲ ನೋಟಕ್ಕೆ ಕಂಡಿರುತ್ತದೆ, ಎಡಗಾಲ ಪಾದದ ಮೇಲೆ ರಕ್ತಗಾಯ, ಎಡಗಡೆ ಕಿವಿಗೆ ರಕ್ತಗಾಯ ಹಾಗೂ ಬಲ ರೊಂಡಿಗೆ ಗುಪ್ತಗಾಯವಾಗಿರುತ್ತದೆ, ಸದರಿ ಆರೋಪಿಯು ಲಾರಿಯಲ್ಲಿ ಸಿಲುಕಿದಾಗ ಊರಿನ ಗೊವಿಂದರೆಡ್ಡಿ ತಂದೆ ಪ್ರಭುರೆಡ್ಡಿ ಸಂಕಟಿ ಮತ್ತು ರಾಜಪ್ಪಾ ತಂದೆ ಮಾಣಿಕ ನಾಗನಾಯ್ಕ್ ಇಬ್ಬರೂ ಬಂದು ನೋಡಿ ತೆಗೆದು ಅವನಿಗೆ ಎಡ ತೊಡೆಗೆ ಗುಪ್ತಗಾಯ, ಎಡ ಮೋಳಕೈ ಹತ್ತಿರ ತರಚಿದ ಗಾಯವಾಗಿರುತ್ತದೆ, ನಂತರ ಫಿರ್ಯಾದಿಗೆ ಚಿಕಿತ್ಸೆ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಹುಮನಾಬಾದಕ್ಕೆ ತಂದು ದಾಖಲಿಸಿರುತ್ತಾರೆ, ಸದರಿ ಘಟನೆ ರಸ್ತೆ ಅಪಘಾತದಿಂದ ಜರಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿಂಗಮ್ಮ ಗಂ ಜಗದೇವಪ್ಪ ಹಚ್ಚಡ ಸಾ: ಕುಮ್ಮನಸಿರಸಗಿ ರವರ ಮಗಳಾದ ವಿಧ್ಯಾಶ್ರೀ ವ: 20 ವರ್ಷ ಇವಳಿಗೆ ಈಗ 11 ತಿಂಗಳುಗಳ ಹಿಂದೆ ಕುಕನೂರ ಗ್ರಾಮದ ಹುಲೆಪ್ಪ ತಂ ಗೊಲ್ಲಾಳಪ್ಪ ರಾಯಗೋಳ ರವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟಿದ್ದು ಹುಲೆಪ್ಪನಿಗೆ 6 ಜನ ಅಣ್ಣತಮ್ಮಂದಿರಿದ್ದು, ಅವರಲ್ಲಿ ನಿಂಗಪ್ಪ ಎಂಬುವನು ತಿರಿಕೊಂಡಿರುತ್ತಾರೆ. ಅರಳಗುಂಡಗಿ ಸಿಮೆಯಲ್ಲಿ ಹುಲೆಪ್ಪನ ಪಿರ್ತಾರ್ಜಿತ ಆಸ್ತಿ ಇದ್ದು, ಅವರಿಗೆ ತಲಾ 7 ಎಕರೆ ಜಮೀನು ಬಂದಿರುತ್ತದೆ ನನ್ನ ಅಳಿಯ ಸ್ವಲ್ಪ ಎತಾರ್ಥನಿದ್ದು, ಅವನ ಹೆಸರಿಗೆ ಇದ್ದ ಆಸ್ತಿಯನ್ನು ಅವರ ತಮ್ಮಂದಿರರಾದ ಬೀಮಣ್ಣ ತಂದೆ ಗೊಲ್ಲಾಳಪ್ಪ, ಮಂಜೂನಾಥ ತಂ ಗೊಲ್ಲಾಳಪ್ಪ , ದೇವಿಂದ್ರ ತಂದೆ ಗೊಲ್ಲಾಳಪ್ಪ ಹಾಗೂ ಹುಲೆಪ್ಪನ ಅಕ್ಕ ಉಮಾಶ್ರೀ ತಂದೆ ಗೊಲ್ಲಾಳಪ್ಪ ರವರು ಹೇಗಾದರೂ ಮಾಡಿ ಆಸ್ತಿ ಹೊಡೆಯಬೇಕಂತ ಆಗಾಗ ಮನೆಯಲ್ಲಿ ಮಾತಾಡುತ್ತಿದ್ದನ್ನು ನನ್ನ ಮಗಳು ವಿಧ್ಯಾಶ್ರೀ ನನ್ನ ಮುಂದೆ ಹೇಳುತ್ತಿದ್ದಳು ಈ ವಿಷಯದ ಬಗ್ಗೆ ನನ್ನ ಮಗಳು ಅವರಿಗೆ ಎದುರು ಮಾತಾಡಿದಕ್ಕೆ ಕಿರುಕುಳ ಕೊಡುತ್ತಾ ಬಂದಿದ್ದು, ನನ್ನ ಮಗಳೂ ಆಗಾಗ ಹೆಳುತ್ತಿದ್ದಳು. ನನ್ನ ಮಗಳು ತಿಳಿದವಳಿದ್ದು, ಹುಲೆಪ್ಪನ ಹೆಸರಿಗಿದ್ದ ಹೊಲವನ್ನು ತನ್ನ ಹೆಸರಿಗೆ ಮಾಡಿಕೊಡಲು ಆಗುವದಿಲ್ಲ ಅದಕ್ಕೆ ನನ್ನ ಮಗಳಿಗೆ ಚಿತ್ರ ಹಿಂಸೆ ಕೊಟ್ಟರೆ ನಮ್ಮ ಮಾತು ಕೇಳುತ್ತಾಳೆ ಅಂತಾ ತಿಳಿದು ಅವಳಿಗೆ ದಿನಾಲು ಕಿರುಕುಳ ಕೊಡುತ್ತಿದ್ದರು. ದಿನಾಂಕ: 22-09-2016 ರಂದು 4 ಪಿ.ಎಂ ಸುಮಾರಿಗೆ ನಮ್ಮ ಸಂಬಂದಿಕನಾದ ಶರಣಪ್ಪ ಉಮ್ಮರಗಿ ರವರು ನನಗೆ ಪೋನ ಮಾಡಿ ನಿಮ್ಮ ಮಗಳು ವಿಧ್ಯಾಶ್ರೀ ತಮ್ಮ ಹೊಲದ ಬಾವಿಯಲ್ಲಿ ಬಿದ್ದು, ಮೃತಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಸಂಬಂದಿಕರಾದ ರಮೇಶ ಉಮಗರಗಿ , ಶಂಕಲಿಂಗ ಮೊರಟಗಿ, ಸಿದ್ದಲಿಂಗಪ್ಪ ಕೋಟೆ ರವರೆಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ನನ್ನ ಮಗಳ ಶವ ಬಾವಿ ನಿರಿನಿಂದ ಶರಣಪ್ಪ ಉಮ್ಮರಗಿ ಮತ್ತು ರಮೇಶ ಮುದಾದಮ್ಮ ರವರ ಹೊರಗೆ ತೆಗೆದು ತಂಡೆಯ ಮೇಲೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ರವರು ದಿನಾಂಕ:22/09/2016 ರಂದು ಬೇಳಿಗ್ಗೆ 10:00 ಗಂಟೆ ಸುಮಾರಿಗೆ ಎಂದಿನಂತೆ ಮನೆಯಿಂದ ಕುರಿಗಳನ್ನು ತಗೆದುಕೊಂಡು ಕೇಶವ ಕೊರಳ್ಳಿ ಸಾಹುಕಾರರವರ ಹೊಲದ ಕಡೆಗೆ ಮೇಯಿಸಲು ಹೋಗಿದ್ದು ಸದರಿ ಹೊಲವನ್ನು ನಮ್ಮ ಗ್ರಾಮದ ಗುಲಾಬಸಾಬ ಮುಲ್ಲಾರವರು ಹೊಲ ಮಾಡಿದ್ದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಅವರ ಹೊಲದ ಬಂದಾರಿ ಹತ್ತಿರ ಕುರಿ ಮೇಯಿಸುತ್ತಿರುವಾಗ ಗುಲಾಬಸಾಬ ಮುಲ್ಲಾರವರ ಮಗನಾದ ಫಕ್ರೋದ್ದಿನ್ ಮುಲ್ಲಾ ಇತನು ನನ್ನ ಹತ್ತಿರ ಬಂದು ನನಗೆ ಮಾತನಾಡಿಸುತ್ತಾ ಒಮ್ಮಲೇ ನನ್ನ ಎರಡು ಕೈಗಳು ಹಿಡಿದು ನೆಲಕ್ಕೆ ನೂಕಿಸಿಕೊಟ್ಟಾಗ ನಾನು ಯಾಕೇ ನನ್ನ ಕೈಹಿಡಿದು ನೆಲಕ್ಕೆ ಕೆಡವಿದಿ ಎಂದು ಚೀರಾಡುತ್ತಿರುವಾಗ ಬಾಯಿಗೆ ಬಟ್ಟೆ ಒತ್ತಿ ಕುತ್ತಿಗೆ ಹಿಡಿದು ಚೀರಾಡಿದರೆ ಜೀವ ಖಲಾಸ ಮಾಡುತ್ತೇನೆ ಅಂತಾ ನನಗೆ ಜಬರದಸ್ತಿಯಿಂದ ಒಂದು ಬಾರಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ನಾನು ಕೆಡಸಿರುವ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಖಲಾಸ ಮಾಡುತ್ತೇನೆ ಅಂದು ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ನಾನು ಬೇಹೋಷಾಗಿ ಬಿದ್ದಾಗ ಪಕ್ಕದ ಹೊಲದ ನಾಗಣ್ಣಾ ಪುಜಾರಿ ಆತನ ಹೆಂಡತಿ ಮಲ್ಲಮ್ಮ ಪುಜಾರಿ ಹಾಗು ರವಿ ಕಲಶೇಟ್ಟಿ ರವರು ಬಂದು ನನಗೆ ಎಬ್ಬಿಸಿ ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.