Police Bhavan Kalaburagi

Police Bhavan Kalaburagi

Sunday, December 2, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬದ್ದು ತಂದೆ ಪೀರು ಜಾಧವ ಸಾ|| ಯಾಳಗಿ ತಾಂಡಾ ತಾ|| ಸುರಪೂರ ರವರು ದಿನಾಂಕ 29-11-2018 ರಂದು ನಮ್ಮ ಸಂಬಂಧಿಕನಾದ ಬಸವರಾಜ ತಂದೆ ಖುಬಾಜಿ ರಾಠೋಡ ಸಾ|| ಬಸವನ ಬಾಗೇವಾಡಿ ರವರು ಯಂಕಂಚಿಯಲ್ಲಿ ದೇವರ ಕಾರ್ಯಾ ಮಾಡಿದ್ದರಿಂದ ನಾನು ಮತ್ತು ನಮ್ಮ ತಾಯಿ ರಮಾಬಾಯಿ ನನ್ನ ಹೆಂಡತಿ ಸುನೀತಾ, ನಮ್ಮ ಕಾಕಾ ಭೀಮು ತಂದೆ ಹೋಬು ಜಾಧವ ರವರು ಕೂಡಿ ನಮ್ಮ ಟಂಟಂ ನಲ್ಲಿ ಕುಳಿತು ಯಂಕಂಚಿಗೆ ದೇವರ ಕಾರ್ಯಕ್ಕೆ ಹೋಗಿದ್ದು ಇರುತ್ತದೆ.  ನಂತರ ಕಾರ್ಯಕ್ರಮ ಮುಗಿಸಿಕೊಂಡು ನಮ್ಮ ಟಂಟಂ ಮರಳಿ ನಮ್ಮೂರಿಗೆ ವಾಪಸ ಹೂಗುವಾಗ ಚಿಕ್ಕ ಅಲ್ಲಾಪೂರ ಕ್ರಾಸ್ ದಾಟಿ ಹೋಗುತ್ತಿದ್ದಾಗ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಒಮ್ಮೇಲೆ ನಮ್ಮ ಟಂಟಂ ಗೆ ಡಿಕ್ಕಿ ಹೊಡೆದನು, ಆಗ ನೋಡಲಾಗಿ ಟಂಟಂನಲ್ಲಿ ಬಲಗಡೆ ಕುಳಿತಿದ್ದ ನಮ್ಮ ತಾಯಿಯ ಬಲಗೈಯ ರಟ್ಟೆಯಲ್ಲಿ ಕಟ್ಟಾಗಿ ರೋಡಿನ ಮೇಲೆ ಬಿದ್ದಿತ್ತು,  ಮತ್ತು ಬಲ ತಲೆಗೆ ಭಾರಿ ರಕ್ತಗಾಯ ವಾಗಿರುತ್ತದೆ, ಅದರಂತೆ  ಬಲ ಕೀವಿ ಹಾಗು ಎರಡು ಮೊಳಕಾಲುಗಳಿಗೆ ತರಚೀದ ಗಾಯಗಲಾಗಿರುತ್ತವೆ, ನನಗೆ ಮತ್ತು ನನ್ನ ಹೆಂಡತಿಗೆ ಹಾಗು ನಮ್ಮ ಕಾಕಾನಿಗೆ ಯಾವುದೇ ಗಾಯಗಳಾಗಿರುವುದುಲ್ಲಾ, ನಂತರ ಲಾರಿ ನಂ ನೋಡಲಾಗಿ ಅದರ ನಂ ಎಮ್.ಹೆಚ್-09/.ಎಮ್-6262 ನೇದ್ದು ಇತ್ತು, ಅದರ ಚಾಲಕನು ಇಳಿದು ನಮ್ಮ ಹತ್ತಿರ ಬಂದಾಗ ಅವನ ಹೆಸರು ಕೇಳಲಾಗಿ ಹೇಳಿದ್ದೇನೆಂದರೆ, ರಾಮಬಾವು@ರಾಮಚಂದ್ರ ಕರಾಂಡೆ ಸಾ|| ಸಾತಾರಾ ಅಂತಾ ಹೇಳಿದನು, ನಂತರ ನಾವೆಲ್ಲರೂ ಕೂಡಿ  ನಮ್ಮ ತಾಯಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೋಂಡು ವಿಜಯಪೂರದ ಬಿ.ಎಲ್.ಡಿ. ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ, ದಿನಾಂಕ 01-12-2018 ರಂದು ರಸ್ತೆ ಅಪಘಾತದಲ್ಲಿ ಗಾಯಹೊಂದಿದ ರಮಾಬಾಯಿ ಗಂಡ ಪೀರು ಜಾಧವ ಸಾ|| ಯಾಳಗಿ ತಾಂಡಾ ರವರು ಆಸ್ಪತ್ರೆ ಉಪಚಾರ ಪಡೆಯುತ್ತಿದ್ದಾಗ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಚಂದ್ರಶೇಖರ ತಂದೆ ದೇವಿಂದ್ರಪ್ಪ ದೊರೆ ಸಾ|| ವಡಗೇರಾ ಗ್ರಾಮ ತಾ|| ಜೇವರ್ಗಿ ಇವರು ಸುಮಾರು 2 ವರ್ಷಗಳಿಂದ ನಮ್ಮೂರ ಹಣಮಂತ್ರಾಯ ತಂದೆ ಹಳ್ಳಿರಾಯ ಹವಾಲ್ದಾರ ರವರ ಯಡ್ರಾಮಿಯಲ್ಲಿರುವ ಅಡತಿಯಲ್ಲಿ ಲೆಕ್ಕಪತ್ರದ ಕೆಲಸ ಮಾಡಿಕೊಂಡಿರುತ್ತೇನೆ, ಹತ್ತಿ ಸೀಜನ ಸಮಯದಲ್ಲಿ ನಮ್ಮ ಮಾಲಿಕರು, ನಾಗರಳ್ಳಿ ಗ್ರಾಮದ ಬಸಂತ್ರಾಯ ತಂದೆ ದುಂಡಪ್ಪಗೌಡ ಅಂಗಡಿ ರವರ ಹೊಲದಲ್ಲಿರವ ಖುಲ್ಲಾ ಜಾಗದಲ್ಲಿ ರೋಡಿನ ಸಮೀಪ ರೈತರ ಹತ್ತಿ ಖರಿದಿಮಾಡಿಕೊಳ್ಳುತ್ತಾ ಬಂದಿರುತ್ತಾರೆ. ಬಸಂತ್ರಾಯ ಅಂಗಡಿ ರವರ ಹೊಲದ ಸರ್ವೆ ನಂ 25 ನೇದ್ದು ಇರುತ್ತದೆ. ಈ ಮುಂಚೆ 2-3 ಸಲ ಹದನೂರ ಗ್ರಾಮದ ರೆಡ್ಡಪ್ಪಗೌಡ ತಂದೆ ಭೀಮನಗೌಡ ಸಾಸನೂರ ಎಂಬುವನು ನಮ್ಮ ಅಡತಿಗೆ ಬಂದು ಹತ್ತಿ ಮಾರಾಟ ಮಾಡುವ ವಿಷಯದಲ್ಲಿ ನಮ್ಮೊಂದಿಗೆ ತಕರಾರುಗಳು ಮಾಡುತ್ತಾ ಬಂದಿರುತ್ತಾರೆ, ದಿನಾಂಕ 29-11-2018 ರಂದು ಸಾಯಂಕಾಲ 6;00 ಗಂಟೆ ಸುಮಾರಿಗೆ ನಾಗರಳ್ಳಿಯಲ್ಲಿ ನಾನು ಮತ್ತು ನಮ್ಮ ಮಾಲಿಕರ ತಮ್ಮ ಪ್ರಕಾಶ ಹವಾಲ್ದಾರ ರವರು ಕೂಡಿ ರೈತರ ಹತ್ತಿ ಖರಿದಿಮಾಡಿಕೊಳ್ಳುತ್ತಿದ್ದಾಗ 1] ರೆಡ್ಡಪ್ಪಗೌಡ ತಂದೆ ಭೀಮನಗೌಡ ಸಾಸನೂರ ಸಾ|| ಹದನೂರ ಗ್ರಾಮ ತಾ|| ಸುರಪೂರ ಹಾಗು 2] ಸಂಗನಗೌಡ ಬಿರಾದಾರ, 3] ಈರಣಗೌಡ ತಂದೆ ಚನ್ನಪ್ಪ ರಾಯಚೂರ ಸಾ|| ಇಬ್ಬರು ಮಾಡಬೋಳ ತಾ|| ಸಿಂದಗಿ ರವರು ತಮ್ಮ ಹತ್ತಿಯನ್ನು ನಮ್ಮ ಅಡತಿಗೆ ತಂದು ನಮಗೆ ಏ ಸೂಳಿ ಮಕ್ಕಳ್ಯಾ ನಮ್ಮ ಹತ್ತಿಯನ್ನು ನಾವು ಹೇಳಿದ ರೇಟಿಗೆ ಖರಿದಿಮಾಡಿಕೊಳ್ಳಬೇಕು, ಅಂತಾ ಅಂದರು ಆಗ ನಾನು ನಿಮ್ಮ ರೇಟಿಗೆ ನಾವು ಹತ್ತಿ ಖರಿದಿ ಮಾಡಿಕೊಳ್ಳುವುದಿಲ್ಲಾ ಅಂತಾ ಅಂದಾಗ ನನಗೆ ರೆಡ್ಡಪ್ಪಗೌಡ ಈತನು ಏ ಬೇಡ ಸೂಳಿಮಗನೆ ಈ ಅಡತ್ಯಾಗ ನಿಂದೇ ಬಹಳಾಗ್ಯಾದ ಮಗನಾ ಅಂತಾ ಅಂದು ಕೈಯಿಂದ ನನಗೆ ಕಪಾಳ ಮೇಲೆ ಹೊಡೆದನು, ಆಗ ಬಿಡಿಸಲು ಬಂದು ಪ್ರಕಾಶ ಹವಾಲ್ದಾರ ರವರಿಗೆ ಸಂಗನಗೌಡ ಮತ್ತು ಈರಣಗೌಡ ರವರು ತಡೆದು ನಿಲ್ಲಿಸಿ, ನೀನ್ಯಾರೋ ಸುಳಿ ಮಗನೆ ಅಂತಾ ಅಂದು ಕೈಯಿಂದ ಅವರ ಕಪಾಳ ಮೇಲೆ ಹೊಡೆದರು, ಆಗ ಅಲ್ಲೆ ಇದ್ದ ನಮ್ಮ ಮಾಲಿಕ ಹಣಮಂತ್ರಾಯ ಹವಾಲ್ದಾರ, ಹಾಗು ನಮ್ಮ ಅಡತಿಯಲ್ಲಿ ಕೆಲಸ ಮಾಡುತ್ತಿದ್ದ ತಿಪ್ಪಯ್ಯಾ ತಂದೆ ಶಂಕ್ರೆಯ್ಯಾ ಟಣಕೇದಾರ, ನಿಂಗಪ್ಪ ತಂದೆ ಲಕ್ಕಪ್ಪ ಚಲವಾದಿ, ಭೀಮರಾಯ ತಂದೆ ನಿಂಗಪ್ಪ ಹೊಸಗೇರಿ ರವರೆಲ್ಲರೂ ಕೂಡಿ ಬಿಡಿಸಿಕೊಂಡಿರುತ್ತಾರೆ, ಇಲ್ಲದಿದ್ದರೆ ನಮಗೆ ಇನ್ನು ಹೊಡೆ ಬಡೆ ಮಾಡುತ್ತಿದ್ದರು, ನಂತರ ಅವರು ಅಲ್ಲಿಂದ ಹೋಗುವಾಗ ನನಗೆ, ಏ ಬೇಡಜಾತಿಗೆ ಸೇರಿದವನೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನಗ ಖಲಾಸೆ ಮಾಡುತ್ತೇವೆ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಲ್ಲೇಶ ತಂದೆ ಚನ್ನಪ್ಪ ಗೋಪನಪಲ್ಲಿ ಸಾ:ಲಕ್ಷ್ಮೀ ಅಪಾರ್ಟಮೆಂಟ್‌ ಸಂಗಮೇಶ್ವರ ಕಾಲೋನಿ ಕಲಬುರಗಿರವರು ರವರು ರಸ್ತೆ ಬದಿಯಲ್ಲಿ ಟೀ ಬಂಡಿ ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದೇನೆ. ಹೀಗಿರುವಾಗ ರೌಡಿಶೀಟರ ವೆಂಕಟೇಶ ಯಾದವ ಹಾಗೂ ಅವನ ತಮ್ಮನಾದ ಉಮೇಶ ಯಾದವರಿಗೆ ಹೆದರಿ 2012 ರಿಂದ ದಿ:11/11/2018 ರವರೆಗೆ ಪ್ರತಿ ದಿನ 300/-ರೂ ಹಣ ಹಫ್ತಾ ಕೊಡುತ್ತಲೆ ಬಂದಿದ್ದೇನೆ ದಿ:11/11/2018 ರಿಂದ ನಾನು ಇನ್ನೂ ಮುಂದೆ ಹಫ್ತಾ ಕೊಡುವುದು ಆಗುವದಿಲ್ಲಾ ಎಂದಾಗ ನಿನ್ನ ಸಮಯ ಸರಿದು ಬಂದಿದೆ ಮಗನೇ ಈಗ ನೋಡು ಮಾಡುತ್ತೇನೆ ಎಂದು ಬೈಯುತ್ತ ಹೋಗಿ ತನ್ನ ತಮ್ಮ ಉಮೇಶ ಯಾದವ ಮತ್ತು 6-7 ಜನಗಳನ್ನು ಮನೆಗೆ ಕಳುಹಿಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾನೆ. ವೆಂಕಟೇಶ ಯಾದವನ ಮಾತಿನಂತೆ ಅವನ ತಮ್ಮ ಉಮೇಶ ಯಾದವ ಮತ್ತು ಇತರ 6-7 ಜನರು ದಿನಾಂಕ:30/11/18 ಮುಂಜಾನೆ 10.00 ಗಂಟೆ ಸುಮಾರಿಗೆ ಮಾರಕಾಸ್ತ್ರಗಳನ್ನು ತೆಗೆದುಕೊಂಡು ನಮ್ಮ ಮನೆಗೆ ನುಗ್ಗಿ ಮೊಲಿನಂತೆ ದಿನಾಲು 300/-ರೂ ಹಫ್ತಾ ಕೊಡಬೇಕು ಮತ್ತು ನಾನು ಕೊಡುವ ಹಾಲನ್ನೇ ಖದೀದಿಸಬೇಕು ಇಲ್ಲದಿದ್ದರೆ ಭೋಸಡಿ ಮಗನೆ ಕತ್ತರಿಸಿ ಹಾಕುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅವರು ಬಿಳಿ ಬಣ್ಣದ ಫಾರ್ಚುನರ ವಾಹನಗಳಲ್ಲಿ ಬಂದಿದ್ದರು ಮತ್ತು ಮನೆಯಲ್ಲಿದ್ದ ನಮ್ಮಣ್ಣ ದೇವಿಂದ್ರಪ್ಪ ಬಂದ ಜನರಿಗೆ ಹೊಡೆಬಡೆ ಮಾಡದಂತೆ ಮನವಿ ಮಾಡಿಕೊಂಡಿದ್ದರಿಂದ ಈ ಸೂಳೆ ಮಗನಿಗೆ ಸರಿಯಾಗಿ ಬುದ್ದಿ ಹೇಳು ಇಲ್ಲದಿದ್ದರೆ ಹಾದಿ ಹೆಣ ಆಗ್ತಾನ ನೋಡು ಎನ್ನುತ್ತ ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದಾರೆ ಇದ್ದಕ್ಕೆಲ್ಲಾ ಮುಖ್ಯ ಕಾರಣ ವೆಂಕಟೇಶ ಯಾದವ ಹಾಗೂ ಅವನ ತಮ್ಮನಾದ ಉಮೇಶ ಯಾದವ ಇರುತ್ತಾರೆ ಕಾರಣ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.