Police Bhavan Kalaburagi

Police Bhavan Kalaburagi

Tuesday, November 27, 2018

BIDAR DISTRICT DAILY CRIME UPDATE 27-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-11-2018

ಮಾರ್ಕೇಟ್ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2018, ಕಲಂ. 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 26-11-2018 ರಂದು ಫಿರ್ಯಾದಿ ಪೀರಪ್ಪಾ ತಂದೆ ಝರೆಪ್ಪಾ ಬಸಣ್ಣೂರ ವಯ: 51 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಶಾಹಾಪೂರ ಗ್ರಾಮ, ತಾ: & ಜಿ: ಬೀದರ ರವರು ತಮ್ಮೂರ ಉಮೇಶ ತಂದೆ ನಿರಂಜಪ್ಪಾ ಇಬ್ಬರು ಕೂಡಿ ಬೀದರ ನಗರದ ಶಾಹಾಪೂರ ಗೇಟ ಕಡೆಗೆ ಬಂದಾಗ ಅಲ್ಲಿ ಗೋತ್ತಾಗಿದ್ದೆನಂದರೆ ಬೀದರ ಜಹಿರಾಬಾದ ರೋಡ ದೇವ ದೇವ ವನದ ಹತ್ತಿರ ಇರುವ ಒಂದು ಬ್ರಿಜ್ಜ ಕೆಳಗೆ ಅರಣ್ಯ ಪ್ರದೇಶದಲ್ಲಿ ಒಬ್ಬ ಗಂಡು ಅಪರಿಚಿತ ವ್ಯಕ್ತಿ ಮೃತಪಟ್ಟಿರುತ್ತಾನೆಂದು ಗೋತ್ತಾಗಿ ಇಬ್ಬರು ಕೂಡಿ ಸ್ಥಳಕ್ಕೆ ಬಂದು ನೋಡಲಾಗಿ ಒಬ್ಬ ಅಪರಿಚಿತ ವ್ಯಕ್ತಿ ವಯ ಅಂದಾಜು 35-40 ವರ್ಷ ವಯಸ್ಸಿನವನು ಮೃತಪಟ್ಟಿದ್ದು ಇರುತ್ತದೆ, ಮೃತ ಅಪರಿಚಿತ ಈಗ ಸುಮಾರು 6-7 ದಿವಸಗಳ ಹಿಂದೆ ಬೀದರ ದೇವ ದೇವ ವನದ ಹತ್ತಿರ ಇರುವ ಬ್ರಿಜ್ಜ ಹತ್ತಿರ ಕುಳಿತ್ತಿದ್ದ ಸ್ಥಳದಲ್ಲಿಯೇ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರಬಹುದು, ಆದರು ಕೂಡಾ ಸದರಿ ಮೃತ ವ್ಯಕ್ತಿಯ ಮರಣದ ಬಗ್ಗೆ ಸಂಶಯ ಇರುತ್ತದೆ, ಮೃತ ದೇಹವು ಸಂಪೂರ್ಣವಾಗಿ ಕೊಳೆತ್ತಿದ್ದು ಇರುತ್ತದೆ, ಮೃತ ದೇಹದ ಮೇಲೆ ಒಂದು ಕಪ್ಪು ಬಣ್ಣದ ಪ್ಯಾಂಟ್, ಒಂದು ಬಿಳಿ ಲೈನಿಂಗ ಉಳ್ಳ ಟಿ-ಶರ್ಟ ಹಾಗೂ ಒಂದು ತಿಳಿ ಕಂದು ಬಣ್ಣದ ಅಂಡರ ವಿಯರ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 138/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 26-11-2018 ರಂದು ಫಿರ್ಯಾದಿ ಲಾಲಮ್ಮಾ ಗಂಡ ಸಂಬಣ್ಣಾ ಮಗೆನವರವಯ: 50 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಮುಸ್ತರಿ, ತಾ: ಹುಮನಾಬಾದ ರವರು ತನ್ನ ಮಗನಾದ ಆನಂದ ತಂದೆ ಸಂಬಣ್ಣಾ ಮಗೆನವರ ಕೂಡಿಕೊಂಡು ಫಿರ್ಯಾದಿಗೆ ಆರಾಮ ಇಲ್ಲದೆ ಇರುವದರಿಂದ ಆಸ್ಪತ್ರೆಗೆ ತೋರಿಸಿಕೊಂಡು ಬರಲು ಮೊಟಾರ ಸೈಕಲ ನಂ. ಕೆಎ-39/ಕ್ಯೂ-7402 ನೇದ್ದರ ಮೇಲೆ ತಮ್ಮೂರಿನಿಂದ ಮನ್ನಾಎಖೇಳ್ಳಿ ಮುಖಾಂತರ ಬೀದರಕ್ಕೆ ಬರುತ್ತಿರುವಾಗ ಬೀದರ ಗಾಂಧಿಗಂಜ ರೈಲ್ಷೆ ಸ್ಟೇಷನ್ ಹೋಗುವ ದಾರಿ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಚಿದ್ರಿ ಕಡೆಯಿಂದ ಒಂದು ಟವೆರಾ ಜೀಪ ನಂ. ಕೆಎ-17/ಬಿ-2425 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸಿದಂತೆ ಮಾಡಿ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯ, ಎಡಗಣ್ಣಿನ ಕೆಳಗೆ ಗುಪ್ತಗಾಯವಾಗಿರುತ್ತದೆ, ಮಗನಾದ ಆನಂದ ಈತನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ, ನಂತರ ಮಗನಾದ ಆನಂದ ಈತನು ಅದೇ ಮೊಟಾರ ಸೈಕಲ ಮೇಲೆ ಫಿರ್ಯಾದಿಗೆ ಚಿಕಿತ್ಸೆ ಕುರಿತು ಅಪೆಕ್ಸ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 295/2018, ಕಲಂ. 457, 380 ಐಪಿಸಿ :-
ದಿನಾಂಕ 24-11-2018 ರಂದು 2030 ಗಂಟೆಗೆ ಚಂದ್ರಕಾಂತ ತಂದೆ ಸೂರ್ಯಕಾಂತ ಬಳತೆ ಸಾ: ಖಂಡ್ರೆ ಗಲ್ಲಿ ಹಳೆ ಭಾಲ್ಕಿ ರವರು ತನ್ನ ಘಡಿ ಅಂಗಡಿಗೆ ಕೀಲಿ ಹಾಕಿ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಅಂಗಡಿಯ ತಗಡ ಎತ್ತಿ ಮೇಲಿಂದ ಒಳಗೆ ಇಳಿದು ಅಂಗಡಿಯಲ್ಲಿನ ಎಲ್.ಜಿ ಕಂಪನಿಯ ಎರಡು ಕೈ ಗಡಿಯಾರ ಅ.ಕಿ 1000/- ರೂ ಮತ್ತು ನಗದು ಹಣ 10,000/- ರೂ., ಒಂದು ನೋಕಿಯಾ ಕಂಪನಿಯ ಮೊಬೈಲ ಅ.ಕಿ 700/- ರೂ. ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-11-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 296/2018, ಕಲಂ. 317 ಐಪಿಸಿ :-
ದಿನಾಂಕ 24-11-2018 ರಂದು ಹಿರೆಮಠ ಸಂಸ್ಥಾನ ವಿಧ್ಯಾಪಿಠ ಟ್ರಸ್ಟಿ (ರಿ) ಭಾಲ್ಕಿ ಮಠದ ಜ್ಞಾನ ಮಂದಿರದಲ್ಲಿ ಯಾರೋ ಅಪರಿಚಿತ ಮಹಿಳೆ ಅಂದಾಜು 2-3 ದಿವಸದ ಗಂಡು ನವಜಾತ ಶಿಶುವನ್ನು ಅನಾಥವಾಗಿ ತೋರೆದು ಬಿಟ್ಟು ಹೋಗಿರುವದರಿಂದ ಮಠದಲ್ಲಿ ಕಾರ್ಯ ನಿರ್ವಹಿಸುವ ಸಂಗಮ್ಮ ಎಂಬುವವರು ಧ್ಯಾನ ಮಂದಿರಕ್ಕೆ ಬೀಗ ಹಾಕಲು ಹೋಗಿರುವಾಗ ಮಗು ಅಳುತ್ತಿರುವ ಶಬ್ದ ಕೇಳಿ ತಕ್ಷಣ ದತ್ತು ಕೆಂದ್ರದ ಅಧ್ಯಕ್ಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ದತ್ತು ಕೆಂದ್ರದ ಅಧ್ಯಕ್ಷರಾದ ಅನೀಲಕುಮಾರ ಹಾಲಕೂಡೆ ರವರು ದೂರುದಾರರಿಗೆ ತಿಳಿಸಿದರಿಂದ ದೂರುದಾರರು ದತ್ತು ಕೆಂದ್ರದ ಅಂಬ್ಯೂಲೇನ್ಸ ತೆಗೆದುಕೊಂಡು ಮಠಕ್ಕೆ ಬಂದು ಮಗುವನ್ನು ತೆಗೆದುಕೊಂಡು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸಿ ಮಕ್ಕಳ ರಕ್ಷಣೆ ವ್ಯವಸ್ಥೆ ಇಲ್ಲದ ಕಾರಣ ಅದೆ ದಿವಸ ಬಿದರಕ್ಕೆ ಕಳಿಸಿದ್ದರಿಂದ ಮಗುವನ್ನು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ, ಸದ್ಯ ಮಗು ಸುರಕ್ಷಿತವಾಗಿ ಮತ್ತು ಕ್ಷೇಮವಾಗಿ ಇರುತ್ತದೆ ಅಂತ ಫಿರ್ಯಾದಿ ಸುಧಾರಾಣಿ ತಂದೆ ಮಲ್ಲಯ್ಯಾ ಮಠಪತಿ ವಯ: 24 ವರ್ಷ, ಜಾತಿ: ಸ್ವಾಮಿ, ಸಾ: ಹಿರೆಮಠ ಸಂಸ್ಥಾನ ವಿಧ್ಯಾಪೀಠ ಟ್ರಸ್ಟ(ರಿ) ದತ್ತು ಕೇಂದ್ರ ಕರಡಿಯಾಳ ರವರು ನೀಡಿದ ಸಾರಾಂಶದ ಮೇರೆಗೆ ದಿನಾಂಕ 26-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 24-11-2018 ರಂದು ನಮ್ಮೂರ ದಯಾನಂದ ತಂದೆ ಸಿದ್ರಾಮಯ್ಯಾ ಹಿರೇಮಠ ರವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ನಾನು ಮತ್ತು ನಮ್ಮೂರ ಕಾಶಿಮ ಕುಕ್ಕನೂರ ರವರು ಕೂಡಿ ಸಿಂದಗಿಯಿಂದ ಬರುವಾಗ ಅಲ್ಲಾಪೂರ ದಾಟಿ ನಿಮ್ಮ ಅಣ್ಣತಮ್ಮಕಿಯ ಅನೀಲ ತಂದೆ ಮರೆಪ್ಪ ದೇವರಮನಿ ಈತನು ತನ್ನ ಮೋಟರಸೈಕಲನ್ನು ನಮ್ಮ ವಾಹನಕ್ಕೆ ಸೈಡ ಹೊಡೆದು ಜೋರಾಗಿ ಹೋದನು, ನಮ್ಮ ಮುಂದೆ ಹೋಗುತ್ತಿದ್ದಂತೆ, ದಸದ್ತಗೀರಸಾಬ ಗಡಾಗಂಜ ರವರ ಹೊಲದ ಹತ್ತಿರ ಎದುರುಗಡೆ ರೋಡಿನ ಎಡಗಡೆ ಒಂದು ಟ್ರಾಲಿ ನಿಂತಿದ್ದು, ಅದಕ್ಕೆ ನೋಡದೇ ಅತೀವೇಗವಾಗಿ ಮತ್ತು ನಿಸ್ಕಾಳಜಿತನಿಂದ  ಮೋಟರ ಸೈಕಲನ್ನು ಚಲಾಯಿಸಿ ಟ್ರಾಲಿ ಹಿಂದೆ ಡಿಕ್ಕಿಹೊಡೆದನು, ನಂತರ ನಾವು ಹೋಗಿ ನೋಡಲಾಗಿ ಅನೀಲ ಈತನಿಗೆ ಹಣೆಗೆ, ಮತ್ತು ಬಾಯಿಗೆ ಭಾರಿ ರಕ್ತಗಾಯವಾಗಿದ್ದು, ಎಡರಟ್ಟೆಗೆ ಭಾರಿ ಒಳಪೆಟ್ಟಾಗಿ ಮುರದಿರುತ್ತದೆ ಹಾಗು ಎರಡು  ಮೊಳಕಾಲಿಗೆ ರಕ್ತಗಾಯವಾಗಿದ್ದು, ಸ್ಥಳದಲ್ಲೆ ಮೃತ ಪಟ್ಟಿದ್ದನು, ಮೋಟರ ಸೈಕಲ್ ಹಿಂದೆ ಕುಳಿತ ಸಲೀಮ ತಂದೆ ಕಮಲಸಾಬ ಅಸ್ಕಿ ಈತನಿಗೆ ತಲೆಗೆ  ರಕ್ತಗಾಯವಾಗಿದ್ದು, ಮೈ ಕೈಗೆ ಭಾರಿ ಒಳಪೆಟ್ಟಾಗಿರುತ್ತದೆ, ಬೇಗನೆ ಸ್ಥಳಕ್ಕೆ ಬರಲು ಹೇಳಿದ್ದರಿಂದ ನಾವು ಹಾಗು ಇತರರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ಅನೀಲ ಈತನು ಸ್ಥಳದಲ್ಲೆ ಮೃತ ಪಟ್ಟಿ ಬಿದ್ದಿದ್ದನು, ಸಲೀಮನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೊಗಿರುತ್ತಾರೆ, ನಂತರ ಟ್ರಾಯಲಿ ನೋಡಲಾಗಿ ಅದನ್ನು ಕಬ್ಬಿನ ಟ್ರಾಯಲಿ ಇದ್ದು, ಅದು ಮೊದಲು ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿತ್ತು ನಂತರ ಅದನ್ನು ಅದರ ಚಾಲಕ ಮತ್ತು ಮಾಲಿಕರು ಸೇರಿಕೊಂಡು ಟ್ರಾಯಲಿಯನ್ನು ಎತ್ತಿ ರೋಡಿನ ಮೇಲೆ ಯಾವುದೇ ಮುಂಜಾಗ್ರತ ಕ್ರಮಕೈಗೊಳ್ಳದೆ ಅಪಾಯಕಾರಿಯಾಗಿ ನಿಲ್ಲಿಸಿದ್ದರು, ಮೋಟರ ಸೈಕಲ್ ನೋಡಲಾಗಿ ಹೋಂಡಾ ಶೈನ ಮೋಟರ ಸೈಕಲ ನಂ ಕೆ.-28/.ಹೆಚ್-4535 ಅಂತಾ ಇದ್ದು ಸದರಿ ಮೋಟರ ಸೈಕಲ ಸಲೀಮ ಅಸ್ಕಿ ಈತನಿಗೆ ಸೇರಿದ್ದು ಇರುತ್ತದೆ. ಟ್ರಾಯಲಿ ಮಾಲಿಕ ಮತ್ತು ಚಾಲಕ ಸೇರಿಕೊಂಡು ತಮ್ಮ ಟ್ರಾಯಲಿಯನ್ನು ಅಪಾಯಕಾರಿಯಾಗಿ ರೋಡಿನ ಮೇಲೆ ನಿಲ್ಲಿಸಿದ್ದರಿಂದ ಮತ್ತು ಅನೀಲ ಈತನು ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತದಿಂದ ಚಲಾಯಿಸಿದ್ದರಿಂದ ರಸ್ತೆ ಅಪಘಾತ ಸಂಭವಿಸಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ವಿಶ್ವನಾಥ ಮುಗಳಿ ವಿಳಾಸ; ಮರಗುತ್ತಿ  ತಾ;ಜಿ;ಕಲಬುರಗಿ ರವರ ಗಂಡನಾಧ ವಿಶ್ವನಾಥ ಮುಗಳಿ ಇವರು ಒಕ್ಕಲುತನ ಮಾಡಿಕೊಂಡಿದ್ದು ನನ್ನ  ತವರೂರಾದ ಗುಂಡಗುರ್ತಿಯಲ್ಲಿ ನಮ್ಮ ಅಜ್ಜಿಯಾದ ನಾಗಮ್ಮ ಹಿಟ್ಟಿನ ಇವರಿಗೆ ಆರೋಗ್ಯ ಸರಿ ಇಲ್ಲದಕಾರಣ ಅವರನ್ನು ವಿಚಾರಿಸಿಕೊಂಡು ಬರಲು ಕಳೆದ ಹದಿನೈದು ದಿವಸಗಳಿಂದ ನಾನು ಗುಂಡಗುರ್ತಿ ಗ್ರಾಮದಲ್ಲಿ ಇರುತ್ತೇನೆ. ನನ್ನ ಅಜ್ಜಿ ನಾಗಮ್ಮ ಹಿಟ್ಟಿನ ಇವಳಿಗೆ ಹೆಚ್ಚಿನ ಉಪಚಾರ ಕುರಿತು  ಸೋಲಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗುವದಿತ್ತು ಅದಕ್ಕಾಗಿ ನನ್ನ ಗಂಡ ವಿಶ್ವನಾಥ ಮುಗಳಿ ಇವರಿಗೆ ಗುಂಡಗುರ್ತಿಗೆ ಬರಲು ತಿಳಿಸಿದ್ದೆ.  ದಿನಾಂಕ. 25-11-2018 ರಂದು ಸಮಯ ಸಂಜೆ. 7-00 ಗಂಟೆ ಸುಮಾರಿಗೆ ನನ್ನ ಗಂಡ ವಿಶ್ವನಾಥ ಇವರು ನನಗೆ ಫೋನ ಮಾಡಿ ಮರಗುತ್ತಿಯಿಂದ ನನ್ನ ಮಗ ಸಮರ್ಥಗೆ ಕರೆದುಕೊಂಡು ನಮ್ಮ ಮೋಟಾರ ಸೈಕಲ್ ಹೀರ ಸ್ಪ್ಲೆಂಡರ ನಂ.ಕೆ.ಎ.32.ಕ್ಯೂ.4459 ಇದರೆ ಮೇಲೆ ಗುಂಡಗುರ್ತಿಗೆ ಬರುತ್ತೇವೆ ಎಂದು ತಿಳಿಸಿದರು. ರಾತ್ರಿ 8-45 ಗಂಟೆ ಸುಮಾರಿಗೆ ಯಾರೋ ನನ್ನ ಗಂಡನ  ಮೋಬಾಯಿಲ್ ದಿಂದ ನನ್ನ ತಮ್ಮ ನಾಗರಾಜ  ಹಿಟ್ಟಿನ ಇವರಿಗೆ ಫೋನ ಮಾಡಿ ತಾವರಗೇರಾ ಕ್ರಾಸ ಹತ್ತಿರ ಹುಮನಾಬಾದ ರೋಡಿಗೆ ನನ್ನ ಗಂಡ ವಿಶ್ವನಾಥ ಮುಗಳಿ ಇವರ ಮೊಟಾರ ಸೈಕಲಕ್ಕೆ ಒಂದು ಟ್ರ್ಯಾಕ್ಟರ ಅಪಘಾತ ಪಡಿಸಿರುತ್ತದೆ . ವಿಶ್ವನಾಥ ಮತ್ತು ನನ್ನ ಮಗ ಸಮರ್ಥ ಇವರಿಗೆ ಗಾಯಗಳಾಗಿರುತ್ತವೆ. ಉಪಚಾರ ಕುರಿತು 108 ಅಂಬುಲೆನ್ಸನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋಗುತಿದ್ದೇವೆ ಸರಕಾರಿ ಆಸ್ಪತ್ರೆಗೆ ಬರಲು ತಿಳಿಸಿದರು . ಆಗ  ಗಾಬರಿಗೊಂಡು ನಾನು ಮತ್ತು ನನ್ನ ತಮ್ಮ ನಾಗರಾಜ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು  ಸ್ಟೇಚ್ಚರ ಮೇಲೆ ನೋಡಲಾಗಿ ನನ್ನ ಗಂಡನಿಗೆ ತಲೆಗೆ ಗುಪ್ತಪೆಟು, ಎದೆಗೆ ,ಹೊಟ್ಟೆಗೆ ಹಾಗೂ ಎರಡು ಪಕ್ಕೆಗಳಿಗೆ ಭಾರಿಗುಪ್ತ ಪೆಟ್ಟಾಗಿದ್ದು ಹಾಗೂ ಎಡಕಿವಿಯಿಂದ ರಕ್ತಸ್ರಾವವಾಗುತಿತ್ತು ಹಾಗೂ ಎಡಗಾಲು ಹಿಮ್ಮಡಿ ಪಾದದ ಹತ್ತಿರ ಭಾರಿ ಪೆಟ್ಟಾಗಿ ರಕ್ತ ಸ್ರಾವವಾಗುತಿತ್ತು  ನನ್ನ ಗಂಡ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಹಾಗೂ ನನ್ನ ಮಗ ಸಮರ್ಥನಿಗೆ ನೋಡಲು ಆತನಿಗೆ ಮೂಗಿಗೆ ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತ್ತದೆ ಹಾಗೂ ಎದೆಗೆ ಹಾಗೂ ಮಗ್ಗಲಿಗೆ ಗುಪ್ತಪೆಟ್ಟಾಗಿರುತ್ತದೆ. ನಂತರ ಅಷ್ಟರಲ್ಲಿ ನಮ್ಮ ಅತ್ತೆ ಜಯಮ್ಮಾ ಹಾಗೂ ಮಲ್ಲಣ್ಣಾ ಹಲಚೇರಿ ಇವರು ಕೂಡಾ ಸರಕಾರಿ ಆಸ್ಪತ್ರೆಗೆ ಬಂದಿದ್ದು ಆಗ ಎಲ್ಲರೂ ಕೂಡಿಕೊಂಡು ನನ್ನ ಗಂಡ ಮತ್ತು ನನ್ನ ಮಗ ಇವರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತವೆ. ಆಗ ಮಲ್ಲಣ್ಣ ಹಲಚೇರಿ ತಿಳಿಸಿದ್ದೇನೆಂದರೆ ನನ್ನ ಗಂಡ ವಿಶ್ವನಾಥ ಇವರು ಮೋಟಾರ ಸೈಕಲ ಮೇಲೆ ಬರುತ್ತಿರುವಾಗ ರಾತ್ರಿ 8-30 ಗಂಟೆ ಸುಮಾರಿಗೆ ಹುಮನಾಬಾದ ರೋಡಿನ ತಾವರಗೇರಾ ಕ್ರಾಸ ಹತ್ತಿರ ಇವರ ಎದರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಂದು ಟ್ಯಾಕ್ಟರ ನಂ.ಕೆ.ಎ.32. ಟಿ-777 ಇದರ ಚಾಲಕನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತ ಮಾಡಿ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ. ಅಂತಾ ಘಟನಾ ಸ್ಥಳದಲ್ಲಿ ಜನರು ಹೇಳಿದ್ದು ಗೊತ್ತಾಗಿರುತ್ತದೆ ಅಂತಾ ತಿಳಿಸಿರುತ್ತಾನೆ. ನನ್ನ ಗಂಡ ವಿಶ್ವನಾಥ ಇವರು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪರಮೇಶ್ವರ ತಂದೆ ಮೌನೇಶ ಸುತಾರ ಸಾ|| ಘತ್ತರಗಾ ಗ್ರಾಮ ತಾ|| ಅಫಜಲಪೂರ ಇವರು ದಿನಾಂಕ 24/11/2018 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಹಾಗೂ ತಮ್ಮ ತಂಗಿ ಎಲ್ಲರೂ ಕೂಡಿ ನಮ್ಮೂರಿಗೆ ಹೊಗಬೇಕೆಂದು ಸೊಲ್ಲಾಪೂರದಿಂದ ನೇರವಾಗಿ ಅಫಜಲಪೂರಕ್ಕೆ ಬಸ್ಸು ಇಲ್ಲದ ಕಾರಣ ಅಕ್ಕಲಕೋಟ ವರೆಗೆ ಬಸ್ಸಿನಲ್ಲಿ ಬಂದು, ಅಕ್ಕಲಕೋಟದಿಂದ ಅಫಜಲಪೂರಕ್ಕೆ ಹೋಗುತ್ತಿದ್ದ ಒಂದು ಅಶೋಕ ಲೈಲೆಂಡ್ ಮಿನಿ ಗೂಡ್ಸ ಹಾಲಿನ ವಾಹನ ನಂ ಎಮ್.ಹೆಚ್-13 ಸಿಯು-1154 ನೇದ್ದರಲ್ಲಿ ನಾನು ಮತ್ತು ನನ್ನ ತಾಯಿಯಾದ ವಿಜಯಲಕ್ಷ್ಮೀ, ನನ್ನ ತಂಗಿಯಾದ ಮಾಲಾಶ್ರೀ, ನನ್ನ ತಮ್ಮನಾದ ಸಿದ್ದಾರಾಮ  ಮತ್ತು ನಮ್ಮಂತೆ ದೇವಣಗಾಂವ ಗ್ರಾಮದ ಶಿವಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ ಅವನ ಹೆಂಡತಿಯಾದ ಶಾಂತಾಬಾಯಿ ಗಂಡ ಶಿವಪ್ಪ ಪೂಜಾರಿ ಎಲ್ಲರೂ ಕುಳಿತು ಅಫಜಲಪೂರಕ್ಕೆ ಹೊರಟಿರುತ್ತೇವೆ. ವಾಹನದಲ್ಲಿ ಮುಂದಿನ ಸಿಟಿನ ಡ್ರೈವರ ಪಕ್ಕದಲ್ಲಿ ನಾನು ಕುಳಿತಿರುತ್ತೇನೆ. ವಾಹನದಲ್ಲಿ ಹಿಂದೆ ಉಳಿದವರೆಲ್ಲರೂ ಕುಳಿತಿದ್ದು  ನಾವು ಸದರಿ ವಾಹನದಲ್ಲಿ ಕುಳಿತು ಹೋಗುತ್ತಿದ್ದಾಗ ಅಫಜಲಪೂರದುಧನಿ ರೋಡಿಗೆ ಇರುವ ಮಾದಾಬಾಳ ತಾಂಡಾ ಹತ್ತಿರ ಹೋಗುತ್ತಿದ್ದಾಗ ಸದರಿ ನಾವು ಕುಳಿತ ವಾಹನದ ಚಾಲಕ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಒಂದು ಟ್ಯಾಕ್ಟರಕ್ಕೆ ಡಿಕ್ಕಿ ಪಡಿಸಿದನು. ಸದರಿ ಡಿಕ್ಕಿಯಿಂದ ವಾಹನದಲ್ಲಿದ್ದ ನನಗೆ ಎಡ ಹೆಡಕಿಗೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿದ್ದವು. ನನ್ನ ತಾಯಿಯಾದ ವಿಜಯಲಕ್ಷ್ಮೀಗೆ ಸೊಂಟಕ್ಕೆ ಮತ್ತು ಎರಡು ಕಾಲುಗಳಿಗೆ ಭಾರಿ ಗುಪ್ತಗಾಯ ವಾಗಿರುತ್ತದೆ. ನನ್ನ ತಂಗಿಯಾದ ಮಾಲಾಶ್ರೀಗೆ ಎರಡು ಕಾಲುಗಳಿಗೆ ಭಾರಿ ಗುಪ್ತಗಾಯ ಆಗಿರುತ್ತದೆ. ನನ್ನ ತಮ್ಮ ಸಿದ್ದಾರಾಮನಿಗೆ ಬಲಗೈ ಮುಂಗೈಗೆ ಹಾಗೂ ಬಲಗಡೆ ಪಕ್ಕೆಲುಬಿನ ಮೇಲೆ ತರಚಿದ ರಕ್ತಗಾಯಗಳು ಆಗಿರುತ್ತವೆ. ಹಾಗೂ ದೇವಣಗಾಂವ ಗ್ರಾಮದ ಶಿವಪ್ಪ ಪೂಜಾರಿಗೆ ಎರಡು ಕಾಲುಗಳಿಗೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ. ಶಾಂತಾಬಾಯಿ ಪೂಜಾರಿ ಇವರಿಗೆ ಎದೆಗೆ ಹಾಗೂ ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ. ಘಟನೆ ನಂತರ ಸದರಿ ವಾಹನದ ಚಾಲಕ ಓಡಿ ಹೋಗಿದ್ದು ಅವನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಸದರಿ ನಾವು ಬರುತ್ತಿದ್ದ ವಾಹನದ ಚಾಲಕ ವಾಹನವನ್ನು ಟ್ಯಾಕ್ಟರಗೆ ಡಿಕ್ಕಿ ಪಡಿಸಿದ್ದು, ಸದರಿ ಟ್ಯಾಕ್ಟರಗೆ ಯಾವುದೆ ಡ್ಯಾಮೇಜ ಹಾಗೂ ಯಾರಿಗೂ ಏನು ಆಗದ ಕಾರಣ ಸದರಿ ಟ್ಯಾಕ್ಟರ ಚಾಲಕ ಘಟನೆ ನಂತರ ಟ್ಯಾಕ್ಟರನ್ನು ತಗೆದುಕೊಂಡು ಹೋಗಿರುತ್ತಾನೆ. ಘಟನೆ ನಂತರ ನಾವೆಲ್ಲರೂ ಅಫಜಲಪೂರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ನನ್ನ ತಾಯಿ ಮತ್ತು ನನ್ನ ತಂಗಿಗೆ ಹೆಚ್ಚಿನ ಗಾಯಗಳು ಆಗಿದ್ದರಿಂದ ಅವರನ್ನು ಕಲಬುರಗಿಯ ಕಾಮರೇಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.