Police Bhavan Kalaburagi

Police Bhavan Kalaburagi

Monday, May 31, 2021

BIDAR DISTRICT DAILY CRIME UPDAT 31-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 31-05-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 06/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 29-05-2021 ರಂದು 2100 ಗಂಟೆಯಿಂದ 2230 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಪರ್ವೇಜಖಾನ ತಂದೆ ಅಲಿ ಮೊಹ್ಮದ ಖಾನ ವಯ: 33 ವರ್ಷ, ಜಾತಿ: ಮುಸ್ಲಿಂ, ಸಾ: ರಾಜಭವನ ಎಮ.ಎಸ..ಮಕ್ತಾ ಹೈದ್ರಾಬಾದ ರವರ ತಂಗಿಯಾದ ಶಿರಿನ ಖಾನಮ ಗಂಡ ಶೇಖ್ ಮಹೆಫೂಸ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಅಬ್ದುಲ ಫೈಜ ದರ್ಗಾ ಹತ್ತಿರ ಬೀದರ ಇಕೆಯು ಯಾವುದೋ ವಿಷಯದಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಸದಿಯವಳ ಮರಣದಲ್ಲಿ ನಮಗೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 48/2021, ಕಲಂ. 279, 304() ಐಪಿಸಿ ಜೊತೆ 187 .ಎಂ.ವಿ ಕಾಯ್ದೆ :-

ಫಿರ್ಯಾದಿ ವನೀತಾ ಗಂಡ ನ್ಯಾನು ಬಿರಾದಾರ ವಯ: 25 ವರ್ಷ, ಜಾತಿ: ಮರಾಠಾ, ಸಾ: ಲವಂಗಪುರಿ ಚಿತ್ತಕೋಟಾ ಗ್ರಾಮ, ತಾ: ಉಮರ್ಗಾ, ಜಿ: ಉಸ್ಮಾನಾಬಾದ ಮಹಾರಾಷ್ಟ್ರ ರವರಿಗೆ ಆರಾಮ ಇಲ್ಲದ ಕಾರಣ 4-5 ದಿವಸಗಳ ಹಿಂದೆ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆ ಗ್ರಾಮವಾದ ರಾಮತೀರ್ಥ(ಡಿ)ಗೆ ಬಂದಿದ್ದು, ಹೀಗಿರುವಾಗ ದಿನಾಂಕ 30-05-2021 ರಂದು ಫಿರ್ಯಾದಿಯು ತನ್ನ ತಾಯಿ, ತಂದೆ ಎಲ್ಲರೂ ಮನೆಯ ಅಂಗಳದಲ್ಲಿ ಕುಳಿತಿರುವಾಗ ಮಗ ಕೇತನು ಇತನು ಮನೆಯಿಂದ ಹೊರಗಡೆ ಮನೆಯ ಮುಂದೆ ಇದ್ದ ಬಟಗೇರಾ-ರಾಮತೀರ್ಥ(ಡಿ) ರಸ್ತೆಯ ಪಕ್ಕದಲ್ಲಿ ಬರ್ಹಿದೆಸೆಗೆಂದು ಹೋದಾಗ ರೋಡಿನ ಮೇಲೆ ಅಶೋಕ ಲಿಲ್ಯಾಂಡ ದೊಸ್ತ ವಾಹನ ಸಂ. ಕೆಎ-56/5634 ನೇದರ ಚಾಲಕನಾದ ಆರೋಪಿ ಮಹ್ಮದ ಮುಸ್ತಕೀಮ್ ತಂದೆ ಮುನೀರೋದ್ದಿನ ದಾವಲಾಖಾ ವಯ: 28 ವರ್ಷ, ಸಾ:  ಕೋಹಿನೂರ ಪಹಾಡ, ತಾ: ಬಸವಕಲ್ಯಾಣ ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮಗ ಕೇತನ ಇತನಿಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ಎಕಂಬಾ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಕೇತನ ಇತನು ಜೋರಾಗಿ ಚೀರಿ ನೇಲದ ಮೇಲೆ ಬಿದ್ದಾಗ ಮನೆಯ ಅಂಗಳದಲ್ಲಿ ಕುಳಿತ ಎಲ್ಲರೂ ಕೇತನ ಇತನ ಹತ್ತಿರ ಹೋಗಿ ನೋಡಲು ಕೇತನ ಇತನಿಗೆ ಎಡಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯ, ಮುಖ ಜಜ್ಜಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಕೇತನ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2021, ಕಲಂ. 279, 337, 304() ಐಪಿಸಿ ಜೋತೆ 187 .ಎಂ.ವಿ ಕಾಯ್ದೆ :-

ಫಿರ್ಯಾದಿ ಸಿದ್ರಾಮ ತಂದೆ ವಿಶ್ವ್ವನಾಥ ಮುತ್ತಂಗೆ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಹುಪಳಾ ಗ್ರಾಮ, ತಾ: ಭಾಲ್ಕಿ ರವರಿಗೆ ಈಗ ಸುಮಾರು ಒಂದು ತಿಂಗಳಿಂದ ಎಡಗಾಲಿಗೆ ಚಾಲಕ ಬಾಹು ಆಗಿದ್ದು, ಅಲ್ಲದೇ ಅದೇ ಗ್ರಾಮದ ಕಸ್ತೂರಿಬಾಯಿ ಗಂಡ ವೀರಶೆಟ್ಟಿ ಕೊಸಂಬೆ ಇವಳಿಗೂ ಕೂಡಾ ಕಾಲಿಗೆ ಚಾಲಕ ಬಾಹು ಇರುವುದರಿಂದ ದಿನಾಂಕ 30-05-2021 ರಂದು ಇಬ್ಬರು ಕೂಡಿ ಮೋಟರ ಸೈಕಲ ನಂ.ಕೆ.-39/ಕ್ಯೂ-2708 ನೇದರ ಮೇಲೆ ಕುಳಿತು ಹುಪಳಾ ಗ್ರಾಮದಿಂದ ವರವಟ್ಟಿ ಗ್ರಾಮಕ್ಕೆ ಹೋಗಿ ತೋರಿಸಿಕೊಂಡು ಮರಳಿ ಹುಪಳಾ ಗ್ರಾಮಕ್ಕೆ ಬರುತ್ತಿರುವಾಗ ಭಾಲ್ಕಿ ಹುಮನಾಬಾದ ರೋಡಿನ ಮೇಲೆ ಆದಿತ್ಯ ಕಾಲೇಜ ಹತ್ತಿರ ಬಂದಾಗ ಹಿಂದಿನಿಂದ ಒಂದು ಬಿಳಿ ಬಣ್ಣದ ಕಾರ ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿಯ ಬಲಗೈ ಮೋಳಕೈ ಕೆಳಗೆ ರಕ್ತಗಾಯ, ಬಲ ಭುಜಕ್ಕೆ ತರಚಿದ ಗಾಯ ಮತ್ತು ಉಂಗುರ ಬೆರಳಿಗೆ ರಕ್ತ ಗಾಯವಾಗಿರುತ್ತದೆ ಮತ್ತು ಕಸ್ತೂರಿಬಾಯಿ ಇವಳಿಗೆ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ, ಹಣೆಗೆ ರಕ್ತಗಾಯ, ಎಡಗೈ ಮೋಳಕೈ ಹತ್ತಿರ ತರಚಿದ ರಕ್ತಗಾಯ, ಬಲಗೈ ಕಿರು ಬೆರಳಿಗೆ ತರಚಿದ ಗಾಯಗಳು ಆಗಿರುವುದರಿಂದ ಕೂಡಲೆ ಫಿರ್ಯಾದಿಯು ಸದರಿ ವಿಷಯ ಅವರ ಮಗನಾದ ಭಿಮಣ್ಣಾ ರವರಿಗೆ ವಿಷಯ ತಿಳಿಸಿ 108 ಅಂಬುಲೇನ್ಸಗೆ ಕರೆ ಮಾಡಿದಾಗ ಅಂಬುಲೇನ್ಸ ಬಂದ ಮೇಲೆ ಕಸ್ತೂರಿಬಾಯಿ ಇವಳಿಗೆ ಅದರಲ್ಲಿ ಹಾಕಿಕೊಂಡು ಭಾಲ್ಕಿ ಸರಕಾರಿ ಆಸ್ಪತ್ರೆ ತಂದು ದಾಖಲು ಮಾಡಿದಾಗ ವೈದ್ಯರು ನೋಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡದ್ದರಿಂದ ಅವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಭಾಲ್ಕೆ ವೈದೆಹಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ತೋರಿಸಿದಾಗ ಅವರು ಎಕ್ಸರೆ ತೆಗೆದು ಪರಿಶೀಲಿಸಿ ಮನೆಗೆ ತೆಗೆದುಕೊಂಡು ಹೋಗಿ ಅಂತಾ ತಿಳಿಸಿದಾಗ ಕಸ್ತೂರಿಬಾಯಿಗೆ ಮನೆಗೆ ತರುವಾಗ ದಾರಿ ಮದ್ಯ ಅವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 62/2021, ಕಲಂ. 498(), 323, 504 ಜೊತೆ 34 ಐಪಿಸಿ :-

ಫಿರ್ಯಾದಿ ಬಸಮ್ಮಾ ಗಂಡ ಮಂಜುನಾಥ ವಿಭೂತಿ ಸಾ: ಸೀತಾಳಗೇರಾ, ಸದ್ಯ: ತವರು ಮನೆ ಖೇಣಿ ರಂಜೋಳ ಗ್ರಾಮ ರವರಿಗೆ ಈಗ ಸುಮಾರು 12 ವರ್ಷದ ಹಿಂದೆ ಸೀತಾಳಗೇರಾ ಗ್ರಾಮದ ಮಂಜುನಾಥ ವಿಭೂತಿ ಇವರ  ಜೊತೆ ಮದುವೆ ಮಾಡಿಕೊಟ್ಟಿದ್ದು, ಇಬ್ಬರು ಮಕ್ಕಳಿರುತ್ತಾರೆ, ಗಂಡ ಹಳ್ಳಿಖೇಡ(ಬಿ) ದಲ್ಲಿ ಮೋಟಾರ ಸೈಕಲ್ ಗ್ಯಾರೇಜ್ ಇಟ್ಟುಕೊಂಡು ಮೇಕ್ಯಾನಿಕ ಕೆಲಸ ಮಾಡಿಕೊಂಡಿರುತ್ತಾರೆ, ಗಂಡ ದಿನಾಲು ಅವರ ತಮ್ಮ ಅಮರ ಹಾಗೂ ಅವರ ಹೆಂಡತಿ ಸ್ನೇಹಾ ಇವರ ಮಾತು ಕೇಳಿ ತವರು ಮನೆಯಿಂದ ಹಣ ತೆಗೆದುಕೊಡು ಬಾ ಅಂತ ಫಿರ್ಯಾದಿಗೆ ಪಿಡಿಸಿ ಹೊಡೆಬಡೆ ಮಾಡುತ್ತಾ ಬಂದಿರುತ್ತಾನೆ ಮತ್ತು ಗಂಡನ ತಮ್ಮನಾದ ಅಮರ ಇವನು ಮದ್ಯ ಬಂದು ಅಣ್ಣನಂತೆ ಮಾತಾಡಿ ಫಿರ್ಯಾದಿಯ ಕುತ್ತಿಗೆ ಹಿಸಿಕಲು ಬರುತ್ತಾನೆ ಮತ್ತು ತಮ್ಮನ ಹೆಂಡತಿ ಸ್ನೇಹಾ ನೀನು ಇಲ್ಲಿ ಏಕೆ ಇದ್ದಿ ನಿನ್ನ ತವರು ಮನೆಗೆ ಹೋಗು ಅಂತ ಬೈಯುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 30-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 26/2021, ಕಲಂ. 379 ಐಪಿಸಿ :-       

ಫಿರ್ಯಾದಿ ಸುನೀಲ ತಂದೆ ಬಳಿರಾಮ ಹಡೋಳೆ ವಯ: 21 ವರ್ಷ, ಜಾತಿ: ಮರಾಠಾ, ಸಾ: ಮೇಹಕರ, ತಾ: ಭಾಲ್ಕಿ ರವರು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ ಮೋಟಾರ ಸೈಕಲ ನಂ. ಎಮ್.ಹೆಚ್-14/ಎಫ.ಎಲ್-3061, ಚಾಸಿಸ್ ನಂ. MBLHA10CGFHM13313, ಇಂಜಿನ ನಂ. HA10ERFHM75390, ಅ.ಕಿ 19,000/- ರೂ. ನೇದನ್ನು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ದಿನಾಂಕ 03-05-2021 ರಂದು 0015 ಗಂಟೆಯಿಂದ 0300 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 30-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Sunday, May 30, 2021

BIDAR DISTRICT DAILY CRIME UPDATE 30-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-05-2021

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 07/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಉಮೇಶ ತಂದೆ ವಿರಶೇಟ್ಟಿ ಜಾತಿ: ಲಿಂಗಾಯತ, ಸಾ: ಹುಣಜಿ(ಕೆ) ರವರ ತಂದೆಯಾದ ವಿರಶೇಟ್ಟಿ ರವರಿಗೆ ಗ್ರಾಮದ ಹೊಲ ಸರ್ವೆ ನಂ. 115/1 ನೇದರಲ್ಲಿ 34 ಗುಂಟೆ ಜಮೀನು ಅವರ ಹೆಸರಿನ ಮೇಲೆ ಇದ್ದು, ತಂದೆಯವರು ಸದರಿ ಹೊಲದಲ್ಲಿ ಒಕ್ಕಲುತನ ಹಾಗೂ ಬೇರೆಯವರ ಹೊಲವನ್ನು ಸಹ ಪಾಲದಿಂದ ಒಕ್ಕಲುತನ ಕೆಲಸವನ್ನು ಮಾಡಿಕೊಂಡಿರುತ್ತಾರೆ, ಒಕ್ಕಲುತನ ಕೆಲಸಕ್ಕಾಗಿ ತಂದೆಯವರು ಪಿ.ಕೆ.ಪಿ.ಎಸ ಜಾಂತಿಯಲ್ಲಿ ಅಂದಾಜು 15,000/- ರೂಪಾಯಿ ಸಾಲವನ್ನು ಪಡೆದುಕೊಂಡಿರುತ್ತಾರೆ ಹಾಗು ಗ್ರಾಮದಲ್ಲಿಯೂ ಸಹ ಅಂದಾಜು ಒಂದು ಲಕ್ಷ ರೂಪಾಯಿ ಕೈ ಸಾಲವನ್ನು ಪಡೆದುಕೊಂಡಿರುತ್ತಾರೆ, ಇಗ 2-3 ವರ್ಷಗಳಿಂದ ಸರಿಯಾಗಿ ಬೆಳೆ ಬೆಳೆಯದ ಕಾರಣ ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡ ಸಾಲವನ್ನು ಮರು ಪಾವತಿ ಮಾಡಲು ಆಗದೆ ಚಿಂತೆಯಲ್ಲಿ ಇರುತ್ತಿದ್ದರು, ಹೀಗಿರುವಾಗ ತಂದೆಯಾದ ವಿರಶೇಟ್ಟಿ ತಂದೆ ಕಾಶಪ್ಪಾ ವಯ: 40 ವರ್ಷ ರವರು ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡ ಸಾಲವನ್ನು ಮರು ಪಾವತಿ ಮಾಡಲು ಆಗದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 29-05-2021 ರಂದು 0230 ಗಂಟೆಯಿಂದ 0600 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಹೊಲದಲ್ಲಿರುವ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ತಂದೆ ಆತ್ಮ ಹತ್ಯೆ ಮಾಡಿಕೊಂಡ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Saturday, May 29, 2021

BIDAR DISTRICT DAILY CRIME UPDATE 29-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-05-2021

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 22/2021, ಕಲಂ. 498(), 323, 504, 506 ಜೊತೆ 34 IP ಮತ್ತು 3 & 4 ಡಿ.ಪಿ ಕಾಯ್ದೆ :-

ದಿನಾಂಕ 28-05-2021 ರಂದು ಫಿರ್ಯಾದಿ ಮಮಿತಾ ಗಂಡ ಗೌತಮಶೀಲ ಅಗಸಿ ವಯ: 21 ವರ್ಷ, ಜಾತಿ: ದಲಿತ, ಸಾ: ಚಾಂಗಲೇರಾ ರವರಿಗೆ ಕಳೆದ 3 ವರ್ಷವಳ ಹಿಂದೆ ಗ್ರಾಮದ ಗೌತಮಶೀಲ ಇತನೊಂದಿಗೆ ಮ್ಮ ಸಾಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಲ್ಲಿ ತಂದೆ ತಾಯಿಯವರು ಗಂಡನ ಮನೆಯವರಿಗೆ 25 ಗ್ರಾಂ ಬಂಗಾರ ಮತ್ತು ನಗದು ಹಣ 50,000/- ರೂಪಾಯಿ ವರದಕ್ಷಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಗಂಡ ಹೆಂಡತಿ 5-6 ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದು ನಂತರ ಆರೋಪಿತರಾದ ಗಂಡ, ಅತ್ತೆ ಮತ್ತು ನಾದುನಿ ಮೂವರು ಫಿರ್ಯಾದಿಯ ಮೇಲೆ ಸಂಶಯ ಮಾಡಿ ನೀನು ಯಾರನ್ನು ನೋಡುತ್ತಿದ್ದಿ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಆಗಾಗ ಬೈಯುತ್ತಿದ್ದರು ಮತ್ತು ತಂದೆ ತಾಯಿವರಿಂದ ಇನ್ನೂ ವರದಕ್ಷಣೆ ತಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನಿಡುತ್ತಿದ್ದರು ಅದರಂತೆ ಫಿರ್ಯಾದಿಯು ತಂದೆ ತಾಯಿಯವರಿಂದ ಒಂದು ಸಾರಿ 50,000/- ರೂ. ಮತ್ತೊಮ್ಮೆ 40,000/- ರೂ ಮತ್ತು ಇನ್ನೊಮ್ಮೆ 30,000/- ರೂ ತಗೆದುಕೊಂಡು ಬಂದು ತನ್ನ ಗಂಡ ಮತ್ತು ಅತ್ತೆಗೆ ಕೊಟ್ಟಿದ್ದು ಇರುತ್ತದೆ ಮತ್ತು ಫಿರ್ಯಾದಿಗೆ ಒಬ್ಬ ಗಂಡು ಮಗ ಹುಟ್ಟಿದ್ದು ಇರುತ್ತದೆ, ಈಗ ಸದ್ಯ 6 ತಿಂಗಳ ಗರ್ಭಿಣಿಯಾಗಿದ್ದು, ಹೀಗಿರುವಾಗ ದಿನಾಂಕ 26-05-2021 ರಂದು ಗಂಡ ಗೌತಮಶೀಲ ಇತನು ಹೋರಗಡೆಯಿಂದ ಮನೆಗೆ ಬಂದಾಗ ಫಿರ್ಯಾದಿಯು ಆತನಿಗೆ ಇಲ್ಲಿಯವರೆಗೆ ನೀನು ಎಲ್ಲಿಗೆ ಹೋಗಿರುವೆ ಅಂತಾ ಕೇಳಿದಾಗ ಗಂಡ ಅದನ್ನು ಕೇಳುವವಳು ನೀನು ಯಾರು ಅಂತಾ ಬೈದು ಕೈಯಿಂದ ಬಾಯಿ ಮೇಲೆ ಹೋಡೆದಿರುತ್ತಾನೆ ಮತ್ತು ಅತ್ತೆ ಘಾಳೇಮ್ಮಾ ಇವಳು ಕೈ ಹಿಡಿದು ನೀನು ಅವನಿಗೆ ಏನು ಕೇಳುವೆ ಅವನು ಕೆಲಸ ಮಾಡಿ ಮನೆಗೆ ಬರುತ್ತಾನೆ ನಿಮು ಸೂಮ್ಮನೆ ಇರು ಅಂತಾ ಕೈ ಹಿಡಿದು ಎಳೆದಾಡಿರುತ್ತಾಳೆ ಮತ್ತು ನಾದನಿ ಜೈಶ್ರೀ ಇವಳು ಈಕೆಗೆ ಮನೆಯಲ್ಲಿ ಇಟ್ಟುಕೊಳ್ಳ ಬಾರದು ಅಂತಾ ಅವಾಚ್ಯವಾಗಿ ಬೈದಿರುತ್ತಾಳೆ ಮತ್ತು ಮೂವರು ಸೇರಿ ನೀನು ನಮ್ಮ ಮನೆ ಬಿಟ್ಟು ನಿನ್ನ ತವರು ಮನೆಗೆ ಹೋಗಿ 30,000/- ರೂ ಹಣ ತಗೆದುಕೊಡು ಬಾ ಇಲ್ಲದಿದ್ದರೆ ನಿನಗೆ ಸೀಮೆಎಣ್ಣೆ ಹಾಕಿ ಸುಟ್ಟು ಹಾಕುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ, ನಂತರ ಸದರಿ ಜಗಳದ ಗುಲ್ಲು ಕೇಳಿ ತಾಯಿ ತುಳಸೆಮ್ಮಾ ಮತ್ತು ಅಜ್ಜಿ ಸುಭದ್ರಮ್ಮಾ ಇವರು ಬಂದು ಜಗಳ ಬಿಡಿಸಿ ಫಿರ್ಯಾದಿಗೆ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 25/2021,ಕಲಂ. 379 ಐಪಿಸಿ :-

ದಿನಾಂಕ 27-05-2021 ರಂದು ಫಿರ್ಯಾದಿ ಅನಸರ ತಂದೆ ಮೈನೋದ್ದಿನ ಗೋರ್ಟೆ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ವಾಂಜರಖೇಡ ತನ್ನ ಹಿರೋ ಸ್ಪ್ಲೆಂಡರ್ ಪ್ಲಸ ಮೋಟಾರ್ ಸೈಕಲ್ ನಂ. ಕೆಎ-39/ಆರ-9771 ನೆದರ ಮೇಲೆ ಶಹಾಜಾನಿ ಔರಾದದ ನ್ನ ಅಂಗಡಿಗೆ ಹೋಗಿ ಮರಳಿ 2130 ಗಂಟೆಗೆ ಮನೆಗೆ ಬಂದು ಸದರಿ ವಾಹನವನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ಮಲಗಿ ನಂತರ ದಿನಾಂಕ 28-05-2021 ರಂದು 500 ಗಂಟೆಗೆ ಎದ್ದು ವಾಯು ವಿಹಾರಕ್ಕೆ ಹೋಗಲೆಂದು ಮನೆಯ ಹೊರಗೆ ಬಂದಾಗ ರಾತ್ರಿ ಮ್ಮ ಮನೆಯ ಮುಂದೆ ನಿಲ್ಲಿಸಿದ ಸದರಿ ವಾಹನ ಇರಲಿಲ್ಲ, ಸದರಿ ವಾಹನವನ್ನು ದಿನಾಂಕ 27-05-2021 2130 ಗಂಟೆಯಿಂದ ದಿನಾಂಕ 28-05-2021 ರಂದು 0500 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 59/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 28-05-2021 ರಂದು ವಳಸಂಗ ಗ್ರಾಮದ ಶಿವಾರದಲ್ಲಿ ಬಸವರಾಜ ಬಿರಾದಾರ ರವರ ಹೊಲದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂದು ಮಹೇಂದ್ರಕುಮಾರ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ವಳಸಂಗ ಗ್ರಾಮದ ಬಸವರಾಜ ಬಿರಾದಾರ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ವಿನೋದ ತಂದೆ ಜನಾರ್ಧನ ಬಿರಾದಾರ ವಯ: 43 ವರ್ಷ, ಜಾತಿ: ಮರಾಠಾ, 2) ಮಂಜುನಾಥ ತಂದೆ ವಿಶ್ವನಾಥ ವಾಲದೊಡ್ಡೆ ವಯ: 30 ವರ್ಷ, ಜಾತಿ: ಲಿಂಗಾಯತ, 3)  ರಾಜಕುಮಾರ ತಂದೆ ನರಸಿಂಗ ಗಾಯಕವಾಡ ವಯ: 30 ವರ್ಷ, ಜಾತಿ: ಎಸ.ಸಿ ಹೊಲಿಯಾ, 4) ವಸಂತ ತಂದೆ ಮಾರುತಿರಾವ ಬಿರಾದಾರ ವಯ: 43 ವರ್ಷ, ಜಾತಿ: ಮರಾಠಾ, 5) ಅಜಂ ತಂದೆ ರಸೂಲಸಾಬ ಪಟೇಲ ವಯ: 31 ವರ್ಷ, ಜಾತಿ: ಮುಸ್ಲಿಂ, 6) ಸುದಾಕರ ತಂದೆ ಪಾಂಡುರಂಗ ದೊಂಡಗೆ ವಯ: 45 ವರ್ಷ, ಜಾತಿ: ಮರಾಠಾ, 7) ವಿಶಂಬರ ತಂದೆ ಶ್ರೀಹರಿ ಬಂದ್ರೆ ವಯ: 35 ವರ್ಷ, ಜಾತಿ: ಮರಾಠಾ ಹಾಗೂ 8) ಸಲೌದ್ದಿನ ತಂದೆ ಅಜೀಜ ಪಟೇಲ್ ವಯ: 34 ವರ್ಷ, ಜಾತಿ: ಮುಸ್ಲಿಂ, ಎಲ್ಲರೂ ಸಾ: ವಳಸಂಗ, ತಾ: ಭಾಲ್ಕಿ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ  ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು, ಅವರಿಂದ 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 9650/- ರೂ. ಜಪ್ತಿ ಮಾಡಿಕೊಂಡ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.