Police Bhavan Kalaburagi

Police Bhavan Kalaburagi

Sunday, October 28, 2018

BIDAR DISTRICT DAILY CRIME UPDATE 28-10-2018

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-10-2018

ಧನ್ನೂರಾ ಪೊಲೀಸ್ ಠಾಣೆ ಪೊಲೀಸ್ ಠಾಣೆ ಅಪರಾಧಸಂ. 22/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಘಾಳೆಪ್ಪಾ ತಂದೆ ಮಲ್ಲಶೆಟ್ಟಿ ಕಮಠಾಣೆ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಸಿದ್ದೇಶ್ವರವಾಡಿ ರವರಿಗೆ ಸಿದ್ದೇಶ್ವರವಾಡಿ ಗ್ರಾಮದಲ್ಲಿ ಹೊಲ ಸರ್ವೆ ನಂ. 121 ಹಾಗು ಜೋಳಧಾಬಕಾ ಶಿವಾರದಲ್ಲಿ ಫಿರ್ಯಾದಿಯ ಹೆಂಡತಿ ಮಲ್ಲಮ್ಮಾ ರವರ ಹೆಸರಿಗೆ ಹೊಲ ಸರ್ವೆ ನಂ. 25/3 ಎರಡು ಸರ್ವೆನಲ್ಲಿ ಒಟ್ಟು 6.22 ಗುಂಟೆ ಜಮೀನು ಇರುತ್ತದೆ, ಸದರಿ ಜಮೀನಿನಗಳ ಮೇಲೆ ಒಕ್ಕಲುತನ ಕೆಲಸಕ್ಕೆಂದು ಫಿರ್ಯಾದಿಯು ತನ್ನ ಹಾಗೂ ಹೆಂಡತಿ ಹೆಸರಿಗೆ ಸುಮಾರು 5,30,000/- ರೂಪಾಯಿ ಸಾಲ ಮಾಡಿದ್ದು ಇರುತ್ತದೆ, ಹೀಗಿರುವಲ್ಲಿ ದಿನಾಂಕ 27-10-2018 ರಂದು ಫಿರ್ಯಾದಿಯು ಹೊಲದಲ್ಲಿರುವ ತಮ್ಮ ದನಗಳಿಗೆ ಮೇವು ಹಾಕಿ ಮನೆಗೆ ಬಂದು ಹೆಂಡತಿಗೆ ನೀರು ಕೊಡು ಅಂತ ಕರೆದರು ಶಬ್ದ ಮಾಡಲಿಲ್ಲಾ ನಂತರ ಫಿರ್ಯಾದಿಯು ಪಡಶಾಲೆಯಿಂದ ಎದುರುಗಡೆ ತೆರೆದಿರುವ ರೂಮಿಗೆ ಹೊಗಿ ನೊಡಲು ಹೆಂಡತಿ ಮಲ್ಲಮ್ಮಾ ಇವಳು ಹಗ್ಗದಿಂದ ಮನೆಯ ಛತ್ತಿನ ಕಬ್ಬಿಣಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾಳೆ, ಫಿರ್ಯಾದಿಯ ಹೆಂಡತಿ ಮಲ್ಲಮ್ಮಾ ಇವರು ತಮ್ಮ ಮೇಲೆ ಇದ್ದ 5,30,000/- ರೂಪಾಯಿ ಸಾಲ ತಿರಿಸಲಾರದೆ ಮನನೊಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಸದರಿ ಘಟನೆಯ ಮೇಲೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 185/2018, ಕಲಂ. ಹುಡುಗಿ ಕಾಣೆ :-
ದಿನಾಂಕ 26-10-2018 ರಂದು ಫಿರ್ಯಾದಿ ಸುಧಾಕರ ತಂದೆ ಕೇಶವ ಬಂದಗೆ ವಯ: 42 ವರ್ಷ, ಜಾತಿ: ಎಸ್.ಸಿ. ಹೊಲಿಯಾ, ಸಾ: ಡೊಣಗಾಪೂರ ರವರು ಹೆಂಡತಿ ಸುನೀತಾ ಇವರು ಕರೆ ಮಾಡಿ ತಿಳಿಸಿದ್ದೇನೆಂದರೆ ನಾನು ಸುಸಯ್ಯಾ ಸಂಘದಲ್ಲಿ ಹಣ ತುಂಬಲು ಡೊಣಗಾಪೂರ ಊರಲ್ಲಿ ಹೊಗುವಾಗ ಮನೆಯಲ್ಲಿ ಮಗಳು ಸುಧಾರಣಿ ಇವಳು ಇದ್ದಳು ನಂತರ ನಾನು ಸಂಘದಲ್ಲಿ ಹಣ ತುಂಬಿ ಮರಳಿ ಮನೆಗೆ ಬಂದು ನೋಡಲು ಮನೆಯಲ್ಲಿ ಸುಧಾರಾಣಿ ಇವಳು ಇರಲಿಲ್ಲಾ, ನಂತರ ನಾನು ಊರಲ್ಲಿ ನಮ್ಮ ಸಂಬಂಧಿಕರ ಮನೆಗಳಿಗೆ ಹಾಗೂ ಅಕಡೆ ಇಕಡೆ ಹೋಗಿ ನೋಡಲು ಸುಧಾರಾಣಿ ಇವಳು ಕಾಣುತಿಲ್ಲಾ ನೀವು ಬನ್ನಿ ಅಂತ ತಿಳಿಸಿದ್ದರಿಂದ ಫಿರ್ಯಾದಿ ಹಾಗೂ ತಮ್ಮ ದಿವಾಕರ ಇಬ್ಬರು ಕೂಡಿ ಮೋಟಾರ ಸೈಕಲ್ ಮೇಲೆ ಕಳಸದಾಳದಿಂದ ತಮ್ಮ ಮನೆಗೆ ಬಂದು ಹೆಂಡತಿ  ಸುನೀತಾ ಜೊತೆ ಮಾತನಾಡಿ ನಂತರ ಇಬ್ಬರು ಸುಧಾರಾಣಿ ಇವಳಿಗೆ ಹುಡಕಾಡುತ್ತಾ ಊರಲ್ಲಿ ಹಾಗೂ ಸುತ್ತಮುತ್ತ ಗ್ರಾಮಗಳಿಗೆ ಹೋಗಿ ತಮ್ಮ ಸಂಬಂಧಿಕರ ಮನೆಗೆ ಹೋಗಿ ನೋಡಲು ಸುದಾರಾಣಿ ಇವಳ ಬಗ್ಗೆ ವಿಚಾರಿಸಲು ಯಾವುದೆ ಮಾಹಿತಿ ಸಿಗಲಿಲ್ಲಾ, ಸುಧಾರಾಣಿ ಇವಳು ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 27-10-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 241/2018, ಕಲಂ. 273, 284, ಐಪಿಸಿ ಮತ್ತು 32, 34 ಕೆ.ಇ ಕಾಯ್ದೆ :-
ದಿನಾಂಕ 27-10-2018 ರಂದು ನೇಳಗಿ ಗ್ರಾಮದ ಚರ್ಚ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಕಲಬರಕೆ ಮಾಡಿದ ಭಟ್ಟಿ ಸರಾಯಿ ತನ್ನ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಸಿ.ಹೆಚ್.ಸಿ-944 ಶಶೀಕಾಂತ ರವರಿಗೆ ಬಾತ್ಮಿ ಬಂದ ಮೇರೆಗೆ ಸಿ.ಹೆಚ್.ಸಿ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರ ಜೊತೆಯಲ್ಲಿ ನೇಳಗಿ ಗ್ರಾಮಕ್ಕೆ ಹೊಗಿ ಚರ್ಚದಿಂದ ಸ್ವಲ್ಪ ಅಂತರದಲ್ಲಿ ಮರೆಯಾಗಿ ನಿಂತು ನೊಡಲು ಬಾತ್ಮಿಯಂತೆ ಇಬ್ಬರು ವ್ಯಕ್ತಿಗಳು ಭಟ್ಟಿ ಸರಾಯಿ ತನ್ನ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿ ಇಬ್ಬರಿಗೆ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಣೆ ಮಾಡಲು 1)  ದಾವೀದ ತಂದೆ ಶಾಮಣ್ಣಾ ಕುಂಚೆ ವಯ: 31 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನೇಳಗಿ ಮತ್ತು 2) ಅಭೀಶೆಕ ತಂದೆ ದಾವೀದ ಕುಂಚೆ ವಯ: 13 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನೇಳಗೆ ಅಂತ ತಿಳಿಸಿರುತ್ತಾರೆ, ನಂತರ ಸದರಿಯವರಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಾಟ ಮಾಡಲು ಸರ್ಕಾರದಿಂದ ಯಾವುದಾದರು ಪರವಾನಿಗೆ ಪಡೆದಿರುವ ಬಗ್ಗೆ ವಿಚಾರಣೆ ಮಾಡಲು ನಾವು ಯಾವುದೆ ರೀತಿಯ ಪರವಾನಿಗೆ ಪಡೆದಿರುವುದಿಲ್ಲ, ನಾವು ತಾಂಡದ ಯಾವನೊಬ್ಬ ವ್ಯಕ್ತಿಯಿಂದ ಭಟ್ಟಿ ಸರಾಯಿ ಖರಿದಿಸಿಕೊಂಡು ತಂದು ಕಲಬರಕೆ ಮಾಡಿ ಒಂದು ಗ್ಲಾಸ ಸರಾಯಿ 10 ರೂಪಾಯಿಯಂತೆ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದೆವೆ ಮತ್ತು ವೈನಗಳಿಂದ ಕುಡಿಯಲು ಅಂತ ಸರಾಯಿ ತಂದು ಅವುಗಳನ್ನು ಸಹ ಮಾರಾಟ ಮಾಡುತ್ತಿದ್ದೆವೆ ಅಂತ ತಿಳಿಸಿರುತ್ತಾರೆ, ಖರಿದಿ ಮಾಡಿದ ಭಟ್ಟಿ ಸರಾಯಿ ಆ ವ್ಯಕ್ತಿ ಯಾರು ಎಂಬುದು ನಮಗೆ ಗೊತ್ತಿರುವುದಿಲ್ಲ ಅಂತ ತಿಳಿಸಿರುತ್ತಾರೆ, ನಂತರ ಪಂಚರ ಸಮಕ್ಷಮ ಅವರ ವಶದಲ್ಲಿದ್ದ ಸರಾಯಿ ಪರೀಶಿಲಿಸಿ ನೊಡಲು ಅದು 1) 2 ಲೀಟರನ ಒಂದು ಬಾಟಲದಲ್ಲಿ ತುಂಬಿದ ತಿಳಿ ಕೆಂಪು ಮಿಶ್ರಿತ ಬಣ್ಣ ಭಟ್ಟಿ ಸರಾಯಿ ಅ.ಕಿ 100/- ರೂ., 2) ಯು.ಎಸ್. ವಿಸ್ಕಿ 90 ಎಮ್.ಎಲ್. ನ 10 ಬಾಟಲಗಳು ಅ.ಕಿ ಒಟ್ಟು 300/- ರೂ. ಇರುತ್ತದೆ, ದಾವಿದ ಈತನ ಅಂಗ ಜಡ್ತಿ ಮಾಡಲು ಆತನ ಹತ್ತಿರದಿಂದ 3) ನಗದು ಹಣ 370/- ರೂಪಾಯಿ ಸಿಕ್ಕಿರುತ್ತದೆ ಮತ್ತು ಸ್ಥಳದಲ್ಲಿ 4) ಎರಡು ಪ್ಲಾಸ್ಟಿಕ ಗ್ಲಾಸಗಳು ಸಹ ಸಿಕ್ಕಿರುತ್ತವೆ, ನಂತರ ಸದರಿ ಭಟ್ಟಿ ಸರಾಯಿ ಬಾಟಲನ್ನು ಮತ್ತು ಯು.ಎಸ್. ವಿಸ್ಕಿ 90 ಎಮ್.ಎಲ್. ನ 10 ಬಾಟಲಗಳು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 129/2018, ಕಲಂ. 279, 337, 338 ಐಪಿಸಿ :-
ದಿನಾಂಕ 27-10-2018 ರಂದು ಫಿರ್ಯಾದಿ ಶಂಕರರೆಡ್ಡಿ ತಂದೆ ನಾಗರೆಡ್ಡಿ ಚಂಗೋಲೆ ಸಾ: ನಾಗಾಇದಲೈ, ತಾ: ಚಿಂಚೋಳಿ, ಜಿಲ್ಲಾ: ಕಲಬುರಗಿ ರವರ ಸಂಬಂಧಿ ಭರತರೆಡ್ಡಿ ತಂದೆ ಪಾಪರೆಡ್ಡಿ ಏನಪೊಸೆ ಸಾ: ಟೀಚರ್ ಕಾಲೋನಿ ಹುಮನಾಬಾದ ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಸಂ. ಕೆಎ-02/ಹೆಚ್ಎಲ್-9505 ನೇದರ ಮೇಲೆ ಫಿರ್ಯಾದಿಯು ಬೆಳೆಗೆ ಹೊಡೆಯುವ ಔಷಧಿ ಮತ್ತು ಗಟಾರ್ (ಮಶೀನ್) ತೆಗೆದುಕೊಂಡು ಮೋಟಾರ್ ಸೈಕಲ್ ಹಿಂದೆ ಕುಳಿತು ಇಬ್ಬರೂ ಕೂಡಿಕೊಂಡು ಟೀಚರ್ ಕಾಲೋನಿಯಿಂದ ಹಣಕುಣಿ ಶಿವಾರಕ್ಕೆ ಹೋಗುತ್ತಿದ್ದಾಗ ಭರತರೆಡ್ಡಿ ಇವನು ತನ್ನ ಮೋಟಾರ್ ಸೈಕಲ್ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಹಣಕುಣಿ - ಹುಮನಾಬಾದ ರೋಡ ಹಣಮಂತರೆಡ್ಡಿ ತಂದೆ ಬಸರೆಡ್ಡಿ ಮುಡಬಿ ಸಾ: ವಾಂಜರಿ ರವರ ಹೊಲದ ಹತ್ತಿರ ಹೋದಾಗ ಎದುರಿನಿಂದ ಅಂದರೆ ಹಣಕುಣಿ ಗ್ರಾಮದ ಕಡೆಯಿಂದ ಮದರಸಾಬ ತಂದೆ ಅಮೀರಸಾಬ ಸಾ: ಹಣಕುಣಿ ಇವನು ತನ್ನ ಮೋಟಾರ್ ಸೈಕಲ್ ಸಂ. ಕೆಎ-39/ಎಲ್-9747 ನೇದರ ಮೇಲೆ ಶ್ರೀರಂಗನಾಥ ತಂದೆ ಸುರೇಂದ್ರನಾಥ ಸಾ: ಹಣಕುಣಿ ಇವನಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲ್ ನಿಧಾನವಾಗಿ ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಆತನ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಫಿರ್ಯಾದಿಗೆ ಹಣೆಯ ಎಡಗಡೆ ಸಾದಾ ರಕ್ತಗಾಯವಾಗಿರುತ್ತದೆ ಹಾಗೂ ಭರತರೆಡ್ಡಿ ಇವನಿಗೆ ತಲೆಗೆ ತೀವೃ ಗುಪ್ತಗಾಯವಾಗಿ ವಾಂತಿ ಮಾಡಿಕೊಂಡಿರುತ್ತಾರೆ, ಮದರಸಾಬ ಇವನಿಗೆ ನೋಡಲಾಗಿ ತಲೆಯ ಹಿಂದೆ ತೀವೃ ಗುಪ್ತಗಾಯವಾಗಿ ಎಡಕೀವಿಯಿಂದ ರಕ್ತಸ್ರಾವ ಆಗಿರುತ್ತದೆ, ಶ್ರೀರಂಗನಾಥ ಇವನಿಗೆ ನೋಡಲಾಗಿ ಗಟಾಯಿಗೆ ಸಾದಾ ರಕ್ತಗಾಯ ಆಗಿರುತ್ತದೆ, ನಂತರ ಅದೇ ಸಮಯಕ್ಕೆ ಹಣಕುಣಿ ಗ್ರಾಮದ ಕಡೆಯಿಂದ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ ವೀರೇಂದ್ರನಾಥ ತಂದೆ ರಾಜಣ್ಣಾ ಹುಡಗಿಕರ್ ಸಾ: ಹಣಕುಣಿ ರವರು ದಾರಿ ಹೋಕರ ಸಹಾಯದಿಂದ ಎಲ್ಲರಿಗೂ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಎರಡು ಮೋಟಾರ್ ಸೈಕಲಗಳು ಡ್ಯಾಮೇಜ್ ಆಗಿದ್ದು ಘಟನಾ ಸ್ಥಳದಲ್ಲೇ ಬಿದ್ದಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 129/2018, PÀ®A. 279. 338 L¦¹ eÉÆvÉ 185 LJA« PÁAiÉÄÝ :-
ದಿನಾಂಕ 27-10-2018 ರಂದು ಫಿರ್ಯಾದಿ ಬಿ.ಮಲ್ಲೇಶ ತಂದೆ ಪೊಷಯ್ಯಾ, ವಯ: 37 ವರ್ಷ, ಜಾತಿ: ಎಸ್.ಸಿ ಮಾದಿಗ, ಉ: ಟಿ.ಎಸ್.ಆರ್.ಟಿ.ಸಿ ಚಾಲಕ, ಸಾ: ನೇದನೂರು, ಕಂದಕೂರ ಮಂಡಲ್, ಜಿ: ರಂಗಾರೆಡ್ಡಿ ರವರು ಬಸ್ಸ ನಂ. ಎಪಿ-28/ಝಡ್-3458 ನೇದನ್ನು ಹೈದ್ರಾಬಾದದಿಂದ ಬಿಟ್ಟು ಮಹಾರಾಷ್ಟ್ರದ ಉದಗೀರಕ್ಕೆ ಬೀದರ ನಗರದ ಮುಖಾಂತರ ಪ್ರಯಾಣಿಕರನ್ನು ಕೂಡಿಕೊಂಡು ಬಸ್ಸ ಚಲಾಯಿಸಿಕೊಂಡು ಬರುತ್ತಿದ್ದು, ಬಸ್ಸಿನ ನಿರ್ವಾಹಕ ಜೆ. ರಾಜಶೇಖರ ತಂದೆ  ಶ್ರೀಶೈಲಂ, ವಯ: 38 ವರ್ಷ, ಜಾತಿ: ಸ್ವಾಮಿ, ಸಾ: ನಸ್ಕಲ್, ಮಂಡಲ ಪರಗಿ, ಜಿಲ್ಲಾ ವಿಕಾರಾಬಾದ ರವರು ಇದ್ದು, ಫಿರ್ಯಾದಿಯು ಜಹಿರಾಬಾದ ಮೂಲಕ ಬೀದರ ಶಹಾಪೂರ ರೈಲ್ವೆ ಗೇಟ ಹತ್ತಿರ ಬಂದಾಗ ಮೋಟಾರ ಸೈಕಲ ನಂ. ಕೆಎ-38/ಎಸ್-5701 ನೇದರ ಸವಾರನು ತನ್ನ ಮೋಟಾರ ಸೈಕಲನ್ನು ವಡ್ಡಿ ಕ್ರಾಸ್ ಕಡೆಯಿಂದ  ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ನಂತರ ಫಿರ್ಯಾದಿ ಹಾಗೂ ನಿರ್ವಾಹಕ ಬಸ್ಸನ್ನು ನಿಲ್ಲಿಸಿ ಅವನ ಹತ್ತಿರ ಹೋಗಿ ನೋಡಲು ಬಸ್ಸಿನ ಹಿಂದಿನ ಭಾಗ ಸ್ವಲ್ಪ ಡ್ಯಾಮೇಜ ಆಗಿರುತ್ತದೆ, ಸದರಿ ಮೊಟಾರ ಸೈಕಲ ಮುಂದಿನ ಭಾಗ ಡ್ಯಾಮೇಜ ಆಗಿರುತ್ತದೆ, ಮೊಟಾರ ಸೈಕಲ ಸಮೇತ ಬಿದ್ದಿದ ವ್ಯಕ್ತಿಯನ್ನು ನೋಡಲು ಅವನ ಬಲಭಾಗ ಹಣೆಯ ಮೇಲೆ ಭಾರಿ ರಕ್ತಗಾಯ ಮತ್ತು ತಲೆಯ ಹಿಂಭಾಗ ಭಾರಿ ರಕ್ತಗಾಯವಾಗಿರುತ್ತದೆ, ಅವನ ಬಾಯಿಯಿಂದ ಸರಾಯಿ ಕುಡಿದ ವಾಸನೆ ಬರುತ್ತಿತ್ತು, ಅವನ ಹೆಸರು ವಿಚಾರಿಸಲು ಶ್ರೀಮಂತ ತಂದೆ ರಾಮಣ್ಣಾ ಔರಾದಕರ, ವಯ: 26 ವರ್ಷ, ಜಾತಿ ಕ್ರಿಶ್ಚನ, ಸಾ: ಮಂದಕನಳ್ಳಿ, ತಾ: ಬೀದರ ಅಂತ ತಿಳಿಸಿದನು, ನಂತರ ಫಿರ್ಯಾದಿಯು 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಬೀದರ ಜಿಲ್ಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

OgÁzÀ(©) ¥Éưøï oÁuÉ C¥ÀgÁzsÀ ¸ÀA. 136/2018, PÀ®A. 279, 337, 338 L¦¹ eÉÆvÉ 187 LJA« PÁAiÉÄÝ 2012 :-
¢£ÁAPÀ 27-10-2018 gÀAzÀÄ ¦üAiÀiÁ𢠣ÀgÀ¹AUÀ vÀAzÉ C¤Ã®PÀĪÀiÁgÀ PÀÄ®PÀtÂð ªÀAiÀÄ: 25 ªÀµÀð, ¸Á: ªÀĪÀÄzÁ¥ÀÆgÀ gÀªÀgÀÄ vÀªÀÄä PÉ®¸À ªÀÄÄV¹PÉÆAqÀÄ C°èAiÉÄà PÉ®¸À ªÀiÁqÀÄwÛzÀÝ vÀªÀÄÆägÀ ¸ÀAvÉÆõÀ vÀAzÉ UÀÄAqÀ¥Áà ªÉÄAUÁ E§âgÀÆ £ÀªÀÄä ªÀiÁ°PÀgÀ £ÀA§j®èzÀ »ÃgÉÆà ºÉZïJ¥sï r®PÀì ªÉÆmÁgÀ ¸ÉÊPÀ¯ï ZÉ¹ì £ÀA. JªÀiï.©.J¯ï.ºÉZï.J.11.J.n.f.9.©.00998 £ÉÃzÀgÀ ªÉÄÃ¯É OgÁzÀ¢AzÀ ªÀĪÀÄzÁ¥ÀÆgÀ UÁæªÀÄPÉÌ ºÉÆÃUÀÄwÛzÁÝUÀ vÀªÀÄÆägÀ PÀȵÁÚ gÉrØ gÀªÀgÀ ºÉÆ®zÀ ºÀwÛgÀ EzÁÝUÀ JzÀÄj¤AzÀ mÁæöåPÀÖgÀ £ÀA. PÉJ-38/n-2301 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß mÁæöåPÀÖgÀ£ÀÄß ¤µÁ̽fvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽw ºÉÆÃUÀÄwÛzÀÝ ªÁºÀ£ÀPÉÌ rQÌ ºÉÆqÉzÀÄ vÀ£Àß mÁæöåPÀÖgÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, ¸ÀzÀj C¥ÀWÁvÀ¢AzÀ ªÉÆÃmÁgÀ ¸ÉÊPÀ¯ï ZÀ¯Á¬Ä¸ÀÄwÛzÀÝ ¦üAiÀiÁð¢UÉ §®UÁ® ¥ÁzÀPÉÌ ¨sÁj ºÀjzÀ gÀPÀÛUÁAiÀÄ, §®UÁ® ªÉƼÀPÁ°UÉ vÀgÀazÀ UÁAiÀÄ ªÀÄvÀÄÛ JqÀºÀuÉUÉ gÀPÀÛUÁAiÀĪÁVgÀÄvÀÛzÉ, ªÉÆmÁgÀ ¸ÉÊPÀ¯ï ªÉÄÃ¯É »AzÉ PÀĽvÀ ¸ÀAvÉÆõÀ EvÀ¤UÉ §®UÀqÉ ºÀuÉUÉ gÀPÀÛUÁAiÀÄ, ªÀÄÆVUÉ ºÀjzÀ gÀPÀÛUÁAiÀÄ, JgÀqÀÆ PÀtÂÚ£À ªÀÄzsÀå gÀPÀÛUÁAiÀÄ, UÀmÉÊUÉ ªÉÄîÄÛnUÉ JqÀUÉÊ ªÀÄÄAUÉÊUÉ JqÀUÁ® ªÉƼÀPÁ°UÉ vÀgÀazÀ UÁAiÀĪÁVgÀÄvÀÛzÉ, £ÀAvÀgÀ UÁAiÀÄUÉÆAqÀªÀjUÉ ¸ÀzÀj mÁæöåPÀÖgÀ£À°è »AzÉ PÀĽvÀ E§âgÀÆ OgÁzÀ ¸ÀgÀPÁj D¸ÀàvÉæUÉ vÀAzÀÄ aQvÉì PÀÄjvÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.