Police Bhavan Kalaburagi

Police Bhavan Kalaburagi

Sunday, May 31, 2020

BIDAR DISTRICT DAILY CRIME UPDATE 31-05-2020




ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 31-05-2020

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2020 ಕಲಂ 279, 337, 304 (ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ 30.05.2020 ರಂದು ಫಿರ್ಯಾದಿ ಶ್ರೀ ಕರಬಸಪ್ಪಾ  ತಂದೆ ಗೋಪಾಲರಾವ ಸಿಂಧೆ,   ವಯ 35 ವರ್ಷ,   ಉ: ಕೂಲಿಕೆಲಸ  ಸಾ: ನೌಬಾದ ಬೀದರ ಇವರು ಮತ್ತು ಗಣಪತಿ ತಂದೆ ಶಾಮಾನಾಯಕ ರಾಠೋಡ, ವಯ 49 ವರ್ಷ,   ಉ: ಕೂಲಿ ಕೆಲಸ ಸಾ: ಮೈನಳ್ಳಿ ತಾ: ನಾರಾಯಣಖೇಡ ಜಿ: ಸಂಗಾರೆಡ್ಡಿ ಸದ್ಯ ಹೌಸಿಂಗ್ ಬೊರ್ಡ ಕಾಲೋನಿ ಪ್ರತಾಪ ನಗರ ಬೀದರ ಇಬ್ಬರೂ ಕೂಡಿಕೊಂಡು   ಮೊಟಾರ ಸೈಕಲ ನಂ. ಕೆಎ-38-ಕೆ-3659 ನೇದ್ದರ ಮೇಲೆ ಕೂಲಿ ಕೆಲಸ ಕುರಿತು ನೌಬಾದದಿಂದ ಅಲಿಯಾಬಾಕ್ಕೆ ಹೋಗಿದ್ದು ಫಿರ್ಯಾದಿ ಮೋಟಾರ ಸೈಕಲ ಚಲಾಯಿಸುತ್ತಿದ್ದು, ಗಣಪತಿ ಹಿಂದೆ ಕುಳಿತಿದ್ದನು. ಮುಂಜಾನೆ ಸುಮಾರು 06:30 ಗಂಟೆಗೆ ನೌಬಾದ ಕೆ.ಎಸ್.ಆರ.ಪಿ ಗ್ರೌಂಡ ಅಂಬೇಡ್ಕರ ವೃತ್ತದ ಹತ್ತಿರ ಬಂದಾಗ ಎದುರುನಿಂದ ಅಂದರೆ ಅಲಿಯಾಬಾದ ಕಡೆಯಿಂದ ನೌಬಾದ ಕಡೆಗೆ ಒಂದು ಟ್ಯಾಂಕರ ನಂ. ಎಮ್.ಎಚ್.6ಬಿಇ5835 ನೇದ್ದರ  ಚಾಲಕ ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರುನಿಂದ ಡಿಕ್ಕಿ ಮಾಡಿ ಟ್ಯಾಂಕರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಪರಿಣಾಮ ಬ್ಬರು ಮೊಟಾರ ಸೈಕಲ ಸಮೇತ ಕೆಳಗೆ ಬಿದ್ದಾಗ  ಫಿರ್ಯಾದಿಗೆ ಬಲಕಾಲ ತೊಡೆಯ ಮೇಲೆ, ತಲೆಯಲ್ಲಿ, ಬಲಕೈ ರಟ್ಟಯ ಹತ್ತಿರ, ಬಲಕಣ್ಣಿನ ಮೇಲೆ ಗುಪ್ತಗಾಯ, ಎಡ ಮೊಳಕಾಲ ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ. ಮೊಟಾರ ಸೈಕಲ ಹಿಂದೆ ಕುಳಿತ ಗಣಪತಿ ರಾಠೋಡ ಈತನ ತಲೆಯ ಹಿಂಬಾಗ ಭಾರಿ ರಕ್ತಗುಪ್ತ ಗಾಯವಾಗಿ  ಬಲಕಣ್ಣಿನ ಮೇಲೆ, ಎಡಕಾಲೊನ ಹೆಬ್ಬೆರಳ ಹತ್ತಿರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 24/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 30-05-2020 ರಂದು 1015 ಗಂಟೆಗೆ  ಮರಖಲ ಗ್ರಾಮದ ಚರ್ಚಿನ ಕಂಪೌಂಡ್ ಗೋಡೆಯ ಮಗ್ಗಲಲ್ಲಿ ಒಬ್ಬ ಮಹಿಳೆ ತನ್ನ ಹತ್ತಿರ ಸರಾಯಿ ಬಾಟಲಗಳು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದಾಳೆ ಅಂತಾ ಖಚೀತ ಬಾತ್ಮಿ ಮೇರೆಗೆ ನಾನು, ಪಿ.ಎಸ್.ಐ ರವರು ಸಿಬ್ಬಂಧಿಯೊಂದಿಗೆ ಹೋಗಿ ದಾಳಿ ಮಾಡಿ. ಸರಾಯಿ ಮಾರಾಟ ಮಾಡುತ್ತಿದ್ದ ಪೋಚಮ್ಮ ಗಂಡ ಈಶ್ವರ್ ಕಲಾಲ ವಯ|| 70 ವರ್ಷ ಉ|| ಕೂಲಿ ಕೆಲಸ ಜ್ಯಾ|| ಕಲಾಲ ಸಾ|| ಮರಖಲ ಗ್ರಾಮ ಇವಳಿಗೆ ದಸ್ತಗಿರಿ ಮಾಡಿ, ಅವಳ ಹತ್ತಿರದಿಂದ 90 ಎಮ್.ಎಲ್. ನ ಒಟ್ಟು 60 ಓರಿಜಿನಲ್ ಚಾಯ್ಸ್ ಡೀಲಕ್ಸ್ ವಿಸ್ಕೀಯ ಸರಾಯಿ ತುಂಬಿದ ಪಾಕೇಟಗಳು. ಇವುಗಳ ಅಂದಾಜು ಕಿಮ್ಮತ್ತು 2160/-ರೂ. ನೇದ್ದನ್ನು ಜಪ್ತಿ ಮಾಡಿಕೊಂಡು  ಆರೋಪಿತಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಠಾಣೆ  ಅಪರಾಧ ಸಂಖ್ಯೆ 35/2020 ಕಲಂ  279, 337, 338, 304 [ಎ] ಐಪಿಸಿ :-

ದಿನಾಂಕ 30/05/2020 ರಂದು ಬೆಳ್ಳಿಗೆ 0400 ಗಂಟೆಗೆ ಫಿರ್ಯಾದಿ ಶ್ರೀ ಸಂಗಮೇಶ ತಂದೆ ಸಂಜುಕುಮಾರ ಹಂಚೆ ವಯ 24 ವರ್ಷ, ಜಾತಿ: ಲಿಂಗಾಯತ, ಸಾ: ಮುಚ್ಚಳಂಬ ರವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರನ್ನು ನೀಡಿದ್ದು ಅದರ ಸಾರಾಂಶವೆನೆಂದರೆ,  ಫಿರ್ಯಾದಿಯು ಪೂನಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ ಇವರ ತಮ್ಮ ಸಚಿನ್  ಸಹ ಪೂನಾದಲ್ಲಿ ಕಾರ ಡ್ರೈವರ ಕೆಲಸ ಮಾಡಿಕೊಂಡಿರುತ್ತಾನೆ. ಒಂದು ವರ್ಷದ ಹಿಂದೆ ಪೂನಾದಲ್ಲಿ ಜೋರಿ ನಾರಾಯಣ ದೋಂಡಿಬಾ ಎಂಬುವವರ ಹತ್ತಿರ ಟಾಟಾ ಮಾಂಜಾ ಕಾರ ನಂ ಎಮ್ಎಚ್-12, ಕೆಎನ್- 4784 ಖರಿದಿ ಮಾಡಿರುತ್ತಾರೆ ಫೀರ್ಯಾದ ಮತ್ತು ಅವರ ತಮ್ಮ ಯುಗಾದಿ ಹಬ್ಬಕ್ಕೆ ಬಂದಿದ್ದು ಲಾಕಡೌನ ಪ್ರಯುಕ್ತ ಉರಲ್ಲಿಯೆ ಉಳಿದುಕೊಂಡಿರುತ್ತಾರೆ ಹೀಗಿರುವಾಗ ದಿನಾಂಕ 29/05/2020 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ   ಸಚ್ಚಿನ ಮತ್ತು ಮಾಣಿಕಪ್ರಭು ತಂದೆ ರಾಮಲಿಂಗ ಹೂಗಾರ ಇಬ್ಬರು ಬೇಲೂರಕ್ಕೆ ತಮ್ಮ ಗೆಳೆಯರ ಹತ್ತಿರ ಹೋಗಿ ಬರುತ್ತೆನೆಂದು   ಕಾರ ನಂ ಎಮ್ಎಚ್-12, ಕೆಎನ್- 4784 ನೇದನ್ನು ತೆಗೆದುಕೊಂಡು ಹೋದನು. ನಂತರ  ದಿನಾಂಕ 30/05/2020 ರಂದು ರಾತ್ರಿ ಅಂದಾಜು 1230 ಗಂಟೆಯ ಸುಮಾರಿಗೆ ಸಚಿನ್ ಜೊತೆಯಲ್ಲಿ ಹೋದ ಮಾಣಿಕಪ್ರಭು ಈತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ಸಚ್ಚಿನ ಇಬ್ಬರು ಕಾರಿನಲ್ಲಿ ಬರುವಾಗ ಕಾರ ಪಲ್ಟಿಯಾಗಿ ಸಚ್ಚಿನನಿಗೆ ಭಾರಿ ರಕ್ತಗಾಯಗಳು ಆಗಿರುತ್ತವೆ. ಆದರಿಂದ ಬೇಲೂರ ಕೂಡಲೆ ಬೇಲೂರ -ಮುಚ್ಚಳಂಬ ರಸ್ತೆಯ ಮೇಲೆ ಬೇಲೂರ ಗ್ರಾಮದ ಹತ್ತಿರ ಬೇಗನೆ ಬನ್ನಿ ಅಂತ ತಿಳಿಸಿದ  ಮೇರೆಗೆ ಘಟನಾ ಸ್ಥಳಕ್ಕೆ ಹೋಗಿ ನೋಡಲು   ಸಚ್ಚಿನ ಇವನಿಗೆ ತಲೆಗೆ ಹಾಗು ಶರಿರದ ಇತರೆ ಭಾಗಕ್ಕೆ ಭಾರಿ ಆಗಿರುತ್ತವೆ. ಮಾಣಿಕಪ್ರಭು ಈತನಿಗೂ ಸಹ ತಲೆಗೆ ಮತ್ತು ಎದೆಗೆ ಗುಪ್ತಗಾಯಗಳಾಗಿರುತ್ತವೆ. ನಂತರ ನಾನು 108 ಅಂಬುಲೇನ್ಸ ಮೂಲಕ   ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕ ಮಾಡಿದಾಗ ಸಚಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ರಾತ್ರಿ ಸುಮಾರು 02-15 ಗಂಟೆಗೆ ಮೃತಪಟ್ಟಿರುತ್ತಾನೆ. ನಾನು ಘಟನೆಯ ಬಗ್ಗೆ ಮಾಣಿಕ ಪ್ರಭು ಈತನಿಗೆ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ, ನಾನು ಮತ್ತು ಸಚ್ಚಿನ ಇಬ್ಬರು ಬೇಲೂರ ಗ್ರಾಮಕ್ಕೆ ಹೋಗಿ ಅವನ ಗೆಳೆಯರೊಂದಿಗೆ ಮಾತನಾಡಿ ಮತ್ತು ಅವರೊಂದಿಗೆ ಊಟ ಮಾಡಿ ಮರಳಿ ಮುಚ್ಚಳಂಬ ಗ್ರಾಮಕ್ಕೆ ಟಾಟಾ ಮಾಂಜಾ ಕಾರ ನಂ ಎಮ್ಎಚ್-12, ಕೆಎನ್- 4784 ನೇದರಲ್ಲಿ ಬೇಲೂರ ಮುಚ್ಚಳಂಬ ರಸ್ತೆಯ ಮುಖಾಂತರ ಬರುವಾಗ ದಿನಾಂಕ 30/05/2020 ರಂದು ರಾತ್ರಿ 1215 ಗಂಟೆಯ ಸುಮಾರಿಗೆ ಸಚ್ಚಿನ ಇವನು ತನ್ನ ಕಾರನ್ನು ಅತಿವೇಗ ಮತ್ತು  ನಿಷ್ಕಾಳಜಿತನದಿಂದ ರಸ್ತೆಯ ಮೇಲೆ ಚಲಾಯಿಸುತ್ತಿದ್ದು, ನಾನು ಅವನಿಗೆ ರಸ್ತೆ ಕಚ್ಚಾ ಇದೆ ಮತ್ತು ಅಂಕು-ಡೊಂಕು ಇದೆ ನಿಧಾನವಾಗಿ ಚಲಾಯಿಸು ಅಂತ ತಿಳಿಸಿದರೂ ಸಹ ಸಚ್ಚಿನ ಇವನು ಅದೇ ರೀತಿ ಅತಿವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿ ಬೇಲೂರ ಶಿವಾರದ ಅಶೋಕ ಚೆನ್ನಕೋಟೆ ಇವರ ಹೊಲದ ಹತ್ತಿರ ತನ್ನ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದ ಮೇಲಿರುವ ದೊಡ್ಡ ಬಂಡೆಗೆ ತೊರಚಿದರಿಂದ ಕಾರ ರಸ್ತೆಯ ಪಕ್ಕದ ತಂಗಿನಲ್ಲಿ ಪಲ್ಟಿಯಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 69/2020 ಕಲಂ 3,4,5 ವೆಶ್ಯಾ ವಾಟಿಕೆ ನಿಷೇಧ  ಕಾಯ್ದೆ  ಜೊತೆ  370 ಐಪಿಸಿ :-


ದಿನಾಂಕ 30.05.2020 ರಂದು 13-30 ಗಂಟೆಗೆ ಸಿಪಿಐ ರವರು ವೃತ್ತ ಕಛೇರಿಯಲ್ಲಿದ್ದಾಗ ಫೋನ್ ಮುಖಾಂತರ   ಖಚಿತ ಭಾತ್ಮಿ ಬಂದಿದ್ದೇನೆಂದರೆ, ಬಸವಕಲ್ಯಾಣ ನಗರದಲ್ಲಿರುವ ಜೈಭವಾನಿ ಭವಾನಿ ಲಾಡ್ಜ್ನಲ್ಲಿ ಗಣ ಗಳಿಸುವ ಗೋಸ್ಕರ ವೈಶ್ಯಾವಾಟಿಕೆ ನಡೆಸುತ್ತಿದ್ದಾರೆ ಅಂತ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಎರಡನೇ ಮಹಡಿಯಲ್ಲಿರುವ ಜೈಭವಾನಿ ಲಾಡ್ಜ್ನಲ್ಲಿ ಹೋಗಿ  ದಿನಾಂಕ 30.05.2020 ರಂದು ಮಧ್ಯಾಹ್ನ 14-30 ಗಂಟೆಗೆ ದಾಳಿ ಮಾಡಿದಾಗ ಲಾಡ್ಜ್ನ ಕೌಂಟರ್ ಮೇಲೆ ಕುಳಿತ ಒಬ್ಬ ವ್ಯಕ್ತಿ ಪೊಲೀಸರಿಂತ ತಪ್ಪಿಸಿಕೊಂಡು ಓಡಿ ಹೋದನು. ನಂತರ ಲಾಡ್ಜ್ನ ರೂಮ್ ನಂ 1 ರ ಬಾಗಿಲು ಬಡೆದು ತೆರೆಯಲು ಹೇಳಿದಾಗ ಸದರಿ ಕೋಣೆಯ ಬಾಗಿಲು ಒಬ್ಬ ಹೆಣ್ಣು ಮಗಳು ಬಾಗಿಲು ತೆಗೆದಾಗ ಕೋಣೆಯಲ್ಲಿ ಹೋಗಿ ನೋಡಲು ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ವಿಚಾರಿಸಿದಾಗ ಅವರು ಶ್ರೀನಿವಾಸ ತ್ರಿಮುಖೆ ಮತ್ತು ಅಂಬಾಜಿ ತ್ರಿಮುಖೆ ಇವರು ಕೆಲವು ವಾರಗಳ ಹಿಂದೆ ಬೀದರನಲ್ಲಿ ಒಬ್ಬ ವ್ಯಕ್ತಿಗೆ ಹಣಕೊಟ್ಟು ಕರೆದುಕೊಂಡು ಬಂದಿದ್ದು ಅವರು ಹೇಳಿದ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗಿದರೆ ಅದರಿಂದ ಬಂದ ಹಣದಲ್ಲಿ ಸ್ವಲ್ಪ ಹಣ ನಮಗೆ ಕೊಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದು ಅದರಂತೆ ಅವರು ಕರೆದುಕೊಂಡ ಬಂದ ವ್ಯಕ್ತಿಗಳೊಂದಿಗೆ ನಾವು ಲೈಂಗಿಕ ಸಂಭೋಗ ಮಾಡಿರುತ್ತೇವೆ. ಇದರಿಂದ ಅವರು ನಮಗೆ ಹಣ ಕೊಡುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ಮಹಿಳಾ ಪಿಎಸ್ಐ ಮತ್ತು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಅವರ ಅಂಗ ಜಡತಿ  ಮಾಡಿ ಒಟ್ಟು 500 ರೂಪಾಯಿ ಮತ್ತು ಇನ್ನೋಬ್ಬಳ ಪರ್ಸನಿಂದ   ಒಟ್ಟು  500/- ರೂಪಾಯಿ ಹಣ ದೊರೆತಿದ್ದು ಜಪ್ತಿ ಮಾಡಿಕೊಳ್ಳಲಾಯಿತು. ನಂತರ ಲಾಡ್ಜನ ರೂಮ್ ನಂ 11 ಇಬ್ಬರು ಮಹಿಳೆಯರು ಅವರನ್ನು ವಿಚಾರಿಸಲಾಗಿ ಅವರುಗಳು ತಿಳಿಸಿದ್ದೇನೆಂದರೆ ಶ್ರೀನಿವಾಸ ತ್ರಿಮುಖೆ ಮತ್ತು ಅಂಬಾಜಿ ತ್ರಿಮುಖೆ ಇವರು ಕೆಲವು ವಾರಗಳ ಹಿಂದೆ ಉಮರ್ಗಾದಲ್ಲಿ ಒಬ್ಬ ವ್ಯಕ್ತಿಗೆ ಹಣಕೊಟ್ಟು ಕರೆದುಕೊಂಡು ಬಂದಿದ್ದು ಅವರು ಹೇಳಿದ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗಿದರೆ ಅದರಿಂದ ಬಂದ ಹಣದಿಂದ ನಮಗೆ ಕೊಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದು ಅದರಂತೆ ಅವರು ಕರೆದುಕೊಂಡ ಬಂದ ವ್ಯಕ್ತಿಗಳೊಂದಿಗೆ ನಾವು ಲೈಂಗಿಕ ಸಂಭೋಗ ಮಾಡಿರುತ್ತೇವೆ. ಇದರಿಂದ ಅವರು ನಮಗೆ ಹಣ ಕೊಟ್ಟಿರುತ್ತಾರೆ  ಅಂತಾ ತಿಳಿಸಿದ ಮೇರೆಗೆ ಅವಳಿಂದ ನೋಟುಗಳು ಒಟ್ಟು 1000/- ರೂಪಾಯಿ ಮತ್ತು  ನ್ನೋಬ್ಬಳ ಪಪರ್ಸನಿಂದ   ಹೀಗೆ ಒಟ್ಟು  1000/- ರೂಪಾಯಿ ಜಪ್ತಿ ಮಾಡಿಕೊಳ್ಳಲಾಯಿತುನಂತರ ಕೋಣೆ ಸಂ 12 ರ ಬಾಗಿಲು ಬಡೆದು ತೆರೆಯಲು ಹೇಳಿದಾಗ ಅದರಲ್ಲಿನ ಒಬ್ಬ ವ್ಯಕ್ತಿ ಬಾಗಿಲು ತೆರೆದಿದ್ದು  ಆ ಕೋಣೆಯಲ್ಲಿ ಮೂವರು ವ್ಯಕ್ತಿಗಳಿದ್ದು ಅವರಿಗೆ ವಿಚಾರಿಸಲು ಅವರು ತಮ್ಮ ತಮ್ಮ ಹೆಸರು 1) ಅರುಣಕುಮಾರ ತಂದೆ ಸಿದ್ರಾಮಪ್ಪಾ ಮಸಗಲ್ಲೆ ವಯಸ್ಸು 41 ವರ್ಷ, ಜಾತಿಲಿಂಗಾಯತಸಾ|| ಕಾಂಟೇಕ್ಟರ್ 2) ರಮೇಶ ತಂದೆ ಬಾಬುರಾವ ಮಾಹಾಗಾಂವ ವಯಸ್ಸು 42 ವರ್ಷ, ಜಾತಿ-ಲಿಂಗಾಯತ ಸಾ|| ದುಬಲ್ ಗುಂಡಿ ಅಂತ ತಿಳಿಸಿ ಅವರು ಗಿರಾಕಿಗಳನ್ನು ಕರೆದುಕೊಂಡು ಬಂದು ಒಬ್ಬ ವ್ಯ್ಕತಿಗೆ ಒಂದು ದಿನಕ್ಕೆ ಒಂದು ಸಾವಿರ ರೂಪಾಯಿಯಂತೆ ಮಾತನಾಡಿ ಕರೆದುಕೊಂಡು ಬಂದು ಶ್ರೀನಿವಾಸ ಇವನ ಲಾಡ್ಜ್ನಲ್ಲಿ ಬಿಡುತ್ತೇವೆ ಅದರಿಂದ ಅವರು ನಮಗೆ ಕಮಿಶನ್ ಕೊಡುತ್ತಾರೆ ಅಂತ ತಿಳಿಸಿದರು. ಮತ್ತು ಇನ್ನೊಬ್ಬನಿಗೆ ವಿಚಾರಿಸಲು ಅವನು ತನ್ನ ಹೆಸರು 3) ಶ್ರೀನಿವಾಸ ತಂದೆ ಅಂಬಾಜಿ ತ್ರಿಮುಖೆ ವಯಸ್ಸು 39 ವರ್ಷ, ಜಾತಿ-ಡೋರ್, ಸಾ|| ಮಂಠಾಳಾ ಅಂತ ತಿಳಿಸಿ ತಾನು ಮತ್ತು ತನ್ನ ತಂದೆಯಾದ  ಅಂಬಾಜಿ ತಂದೆ ರಾಣೋಜಿ ತ್ರಿಮುಖೆ ಇಬ್ಬರು ಉಮರ್ಗಾ ಮತ್ತು ಬೀದರದಿಂದ ಒಬ್ಬ ವ್ಯಕ್ತಿಗೆ ಹಣ ಕೊಟ್ಟು ವೈಶ್ಯಾವಾಟಿಕೆ ಮಾಡಿ ಹಣ ಗಳಿಸಲು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ನಮ್ಮ ಲಾಡ್ಜ್ನಲ್ಲಿ ಇಟ್ಟಿದ್ದು ಅರುಣ ಮತ್ತು ರಮೇಶ ಇವರು ಕರೆದುಕೊಂಡ ಬಂದ ಗಿರಾಕಿಗಳಿಂದ ನಾನು ಹಣ ಪಡೆದುಕೊಂಡು ನಾವು ಕರೆದುಕೊಂಡ ಬಂದ ಹೆಣ್ಣು ಮಕ್ಕಳೊಂದಿಗೆ ಲೈಂಗಿಕ ಸಂಭೋಗ ಮಾಡಲು ಅನುವು ಮಾಡಿಕೊಟ್ಟಿರುತ್ತೇನೆ. ಗಿರಾಕಿಗಳಿಂದ ಪಡೆದುಕೊಂಡ ಹಣದಿಂದ ನಾನು ಮತ್ತು ನಮ್ಮ ಮ್ಯಾನೇಜರ್  ಅಭಿ ದೇಗಲೂರೆ ಸಾ|| ಬಸವಕಲ್ಯಾಣ ಅರ್ಧ ಪಾಲು ಹೆಣ್ಣು ಮಕ್ಕಳಿಗೆ ಕೊಟ್ಟಿರುತ್ತೇವೆ ಉಳಿದ ಹಣ ಕೌಂಟರ್ ಗಲ್ಲಾದಲ್ಲಿರುತ್ತವೆ ಅಂತ ತಿಳಿಸಿ ಗಲ್ಲಾದಲ್ಲಿ ಕೈಹಾಕಿ ಹಣ ತೆಗೆದು ಕೌಂಟರ್ ಮೇಲೆ ಹಾಜರು ಪಡಿಸಿದ್ದು ಸಿಪಿಐ ರವರು ಸದರಿ ಹಣ ಏಣಿಸಿ ನೋಡಲು 500 ಮುಖ ಬೆಲೆಯ ನಾಲ್ಕು ನೋಟುಗಳು ಹೀಗೆ ಒಟ್ಟು 2000/-ರೂಪಾಯಿ ನಗದು ಹಣ ಸಿಕ್ಕಿದ್ದು ಅವುಗಳನ್ನು ಪ್ರತ್ಯಕವಾಗಿ ಜಪ್ತಿ ಮಾಡಿಕೊಳ್ಳಲಾಯಿತು. ನಂತರ ಸದರಿ ಶ್ರೀನಿವಾಸ ಇವನಿಗೆ ಕೌಂಟರ್ ಮೇಲಿಂದ ಓಡಿ ಹೋದ ವ್ಯಕ್ತಿಯ ಹೆಸರು ವಿಚಾರಿಸಲು ಅವನ ಹೆಸರು  ಅಭಿ ದೆಗಲೂರೆ ಸಾ|| ಬಸವಕಲ್ಯಾಣ ಅಂತ ತಿಳಿಸಿದನು.  ಪ್ರಕರಣದ ಪುರಾವೆ ಕುರಿತು ಜಪ್ತಿ ಮಾಡಿದ 4000/- ರೂಪಾಯಿ ನಗದು ಹಣ ತಮಗೆ ಒಪ್ಪಿಸುತ್ತಿದ್ದು ಸದರಿ ವಶಕ್ಕೆ ತೆಗೆದುಕೊಂಡ ಆರೋಪಿತರಾದ 1) ಅರುಣಕುಮಾರ ತಂದೆ ಸಿದ್ರಾಮಪ್ಪಾ ಮಸಗಲ್ಲೆ ವಯಸ್ಸು 41 ವರ್ಷ,ಜಾತಿಲಿಂಗಾಯತ, ಸಾ|| ಮಂಠಾಳ   2) ಶ್ರೀನಿವಾಸ ತಂದೆ ಅಂಬಾಜಿ ತ್ರಿಮುಖೆ ವಯಸ್ಸು 29 ವರ್ಷ, ಜಾತಿ-ಡೋರ್ ಸಾ|| ಮಂಠಾಳ 3) ರಮೇಶ ತಂದೆ ಬಾಬುರಾವ ಮಾಹಾಗಾಂವ ವಯಸ್ಸು 42 ವರ್ಷ, ಜಾತಿ-ಲಿಂಗಾಯತ ಸಾ|| ದುಬಲ್ ಗುಂಡಿ ಮತ್ತು ಲಾಡ್ಜ್ ಮಾಲಿಕರಾದ 4) ಅಂಬಾಜಿ ತಂದೆ ರಾಣೋಜಿ ತ್ರಿಮುಖೆ ಸಾ|| ಮಂಠಾಳಾ  ತಲೆ ಮರೆಸಿಕೊಂಡ  5) ಅಭಿ ದೆಗಲೂರೆ ಸಾ|| ಬಸವಕಲ್ಯಾಣ ಸದರಿ ಈ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Saturday, May 30, 2020

BIDAR DISTRICT DAILY CRIME UPDATE 30-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-05-2020

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 74/2020 ಕಲಂ 457, 380 ಐಪಿಸಿ :-

ದಿನಾಂಕ 29/05/2020 ರಂದು 1430 ಗಂಟೆಗೆ ಫಿಯರ್ಾದಿ ಅಶೋಕ ತಂದೆ ಲಕ್ಷ್ಮಣ ಸಿಂಧೆ, ವಯ 55 ವರ್ಷ  ಉ. ಒಕ್ಕಲುತನ, ಸಾ. ಮೋಳಕೇರಾ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ  ಇವರಿಗೆ   1] ಲಕ್ಷ್ಮಣ, 2] ಶಿವಕುಮಾರ, 3] ಅಜಯ 4] ಅಕ್ಷಯ ಮತ್ತು 5] ಭಾಗ್ಯಶ್ರೀ ಅಂತಾ ಒಟ್ಟು 5 ಜನ ಮಕ್ಕಳಿರುತ್ತೇವೆ. ದಿನಾಂಕ 28/05/2020 ರಂದು ರಾತ್ರಿ 9.00 ಗಂಟೆಗೆ ಎಲ್ಲರು ಊಟ ಮಾಡಿಕೊಂಡು ಮನೆಗೆ ಕೀಲಿ ಹಾಕಿಕೊಂಡು ಮಲಗಿಕೊಳ್ಳಲು ಮನೆಯ ಮೇಲೆ ಹೋಗಿರುತ್ತಾರೆ.  ಇವರ ಪತ್ನಿ ಲಕ್ಷ್ಮಿ ಇವರು ಮುಂಜಾನೆ 5.00 ಗಂಟೆಗೆ ಎದ್ದು ಕೆಳಗೆ ಬಂದು ನೋಡಲು ನಮ್ಮ ಮನೆಗೆ ಹಾಕಿದ ಕೀಲಿಯ ಕೊಂಡಿ ಮುರಿದಿದ್ದರಿಂದ ಒಳಗೆ ಹೋಗಿ ನೋಡಲು   ಮನೆಯ ದೇವರ ಮನೆಯಲ್ಲಿ ಇಟ್ಟ ಅಲಮಾರಿ ಇರಲಿಲ್ಲ ನಂತರ ಇವರೆಲ್ಲರು ಕೂಡಿ ಹುಡಕಾಡಿ ನೋಡಲು ಅಂದಾಜು 400 ಮೀಟರ ದೂರು ಊರು ಹೋರಗಡೆ ಬಿಸಾಗಿದ್ದು ್ಮ ಅಲಮಾರಿ ಚೇಕ ಮಾಡಿ ನೋಡಲು ಅಲಮಾರಿಯಲ್ಲಿ ಇಟ್ಟ 1] ಒಂದು ಗ್ರಾಂ ಬಂಗಾರದ ಸಣ್ಣ ಮಗುವಿನ ಉಂಗರು ಅ.ಕಿ 4000/- ರೂಪಾಯಿ ಮತ್ತು 3 ಗ್ರಾಂ ಬಂಗಾರದ ಕಿವಿಯಲ್ಲಿ ಒಲೆ ಅ.ಕಿ 12,000/- ರೂಪಾಯಿ ನೇದ್ದವು ಇರಲಿಲ್ಲ ದಿನಾಂಕ 28/05/2020 ರಂದು ರಾತ್ರಿ 9.30 ಗಂಟೆಯಿಂದ ಮುಂಜಾನೆ 4.00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಕೀಲಿಯಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಇದ್ದ ಅಲಮಾರಿ ತೆಗೆದುಕೊಂಡು ಹೋಗಿ ಅದರಲ್ಲಿ ಇದ್ದ ಒಟ್ಟು 4 ಗ್ರಾಂ ಬಂಗಾರ ಅಂದಾಜು ಕಿಮ್ಮತ್ತು 16,000/- ರೂಪಾಯಿ ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/2020 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 29/05/2020 ರಂದು 1730 ಗಂಟೆಗೆ ಗಂಟೆಗೆ ಶ್ರೀಮತಿ ಜಗದೇವಿ ಗಂಡ ಬಸವರಾಜ ಶಟಗೊಂಡೆ ಸಾ|| ಅಲಿಯಂಬರ ಗ್ರಾಮ ರವರು ಖದ್ದಾಗಿ ಠಾಣೆಗೆ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನಂದರೆ ದಿನಾಂಕ 29/05/2020 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ಇವರ ಗಂಡ ಬಸವರಾಜ ರವರು ತಮ್ಮ ಮನೆ ಹಿಂದೆ ಇರುವ ನಮ್ಮ ಹೊಲ ಸರ್ವೆ ನಂ 314 ನೇದರ ಜಮೀನಿನಲ್ಲಿ ಕಸ ಆಯಲು ಹೊಲಕ್ಕೆ ಹೊಗಿರುತ್ತಾರೆ. ಸಾಯಂಕಾಲ 4 : 00 ಗಂಟೆಯ ಸುಮಾರಿಗೆ ಜೋರಾದ ಮಳೆ ಬಂದು ಗುಡುಗು ಸಿಡಿಲು ಆಗಿ ಘದರಿಸುತ್ತಿರುವಾಗ ಸಿಡಿಲಿನ ಜೋರಾದ ಶಬ್ದ ಕೇಳಿ ಗಾಬರಿಗೊಂಡ ಫಿರ್ಯಾದಿ ಮತ್ತು ಮಕ್ಕಳಾದ ವಿಕ್ರಮ ಮತ್ತು ಲಕ್ಷ್ಮಣ ಹಾಗು ಮೈದೂನ ಸೂನೀಲ್ ಶೆಟಗೊಂಡ ರವರು ಮನೆ ಹಿಂದುಗಡೆ ನಿಂತು ನೋಡಲು   ಹೊಲ ಸರ್ವೆ ನಂ 314 ನೇದರ ಜಮೀನಿನ ಕಟ್ಟೆಗೆ ಇರುವ ಹುಣಸೆಮರದ ಕೆಳಗೆ ಇವರ ಗಂಡ ಬಸವರಾಜ ರವರು ನೇಲದ ಮೇಲೆ ಬಿದ್ದಿದ್ದನ್ನು ಕಂಡು ತಕ್ಷಣ ಅವರ ಹತ್ತಿರ ಹೋಗಿ ನೋಡಲು ನನ್ನ ಗಂಡನ ಎದೆಯ ಮೇಲೆ ಮತ್ತು ಮುಗಿನ ಮೇಲೆ ಸಿಡಿಲು ಬಡಿದು ಸುಟ್ಟಗಾಯವಾಗಿ ಅವರು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ಸಂಖ್ಯೆ 08/2020 ಕಲಂ 174 ಸಿಆರ್.ಪಿ.ಸಿ :-

ದಿನಾಂಕ: 29-05-2020 ರಂದು 1815 ಗಂಟೆಗೆ ಫಿರ್ಯಾದಿ ಅಶೋಕ ತಂದೆ ನರಸಿಂಗ್ ಸಿಂಗಾಡೆ ವಯ: 51 ವರ್ಷ, ಸಾ: ಹಿಪ್ಪಳಗಾಂವ ರವರು ನೀಡಿದ ಹೇಳಿಕೆ ಸಾರಾಂಶವೆನೆಂದರೆ ಫಿರ್ಯಾದಿಗೆ ಮಗನಾದ ಮಾರುತಿ ವಯ: 24 ವರ್ಷ, ಇವನು ಮತ್ತು ಗ್ರಾಮದ ಶಿವಕುಮಾರ ಮಡಿವಾಳ ಕೂಡಿಕೊಂಡು ಕುಶನೂರ ಶಿವಾರದಲ್ಲಿರುವ ತಮ್ಮ ಹೋಲಕ್ಕೆ ಮಧ್ಯಾಹ್ನ ಹೋಗಿದ್ದು ಬಿಸಿಲು ತಾಪವಿದ್ದಿದ್ದರಿಂದ ಇವರುಗಳು ಹಿಪ್ಪಳಗಾಂವ ಶಿವಾರದಲ್ಲಿರುವ ಪಕ್ಕದ ವಸಂತರಾವ ದೇಸಾಯಿ ರವರ ಹೋಲದಲ್ಲಿದ್ದ ಮಾವಿನ ಮರದ ಕೇಳಗೆ ಹೋಗಿ ಮಲಗಿಕೊಂಡಿದ್ದು  ಸಾಯಂಕಾಲ ಅಂದಾಜು 1700 ಗಂಟೆ ಸುಮಾರಿಗೆ ಮಿಂಚು ಗುಡುಗಿನಿಂದ ಮಳೆ ಬಂದಿರುತ್ತದೆ ಫಿರ್ಯಾದಿ ಮತ್ತು ಶಿವಕುಮಾರ ಮಡಿವಾಳ ರವರು ಎದ್ದು ಮರದಿಂದ ಆಚೆಗೆ ಬಂದು ಮಕ್ಕಳಿಗೆ ನಡೆಯಿರಿ ಮನೆಗೆ ಹೋಗೋಣ ಅನ್ನುತ್ತಾ ಮುಂದೆ ಬಂದಾಗ 1730 ಗಂಟೆ ಸುಮಾರಿಗೆ ಫಿರ್ಯಾದಿ ಮಗನಾದ ಮಾರುತಿ ವಯ: 24 ವರ್ಷ, ಇವನ ಆಕಸ್ಮಿಕವಾಗಿ ಸಿಡಿಲು ಬಡಿದು ಎದೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  



Friday, May 29, 2020

BIDAR DISTRICT DAILY CRIME UPDATE 29-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-05-2020

ಹುಲಸೂರ ಠಾಣೆ ಅಪರಾಧ ಸಂಖ್ಯೆ 34/2020 ಕಲಂ. 15 [ಎ], 32 [3] ಕೆ.ಇ ಆಕ್ಟ್ :-

ದಿನಾಂಕ 28/5/2020 ರಂದು 1500 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿರುವಾಗ ಹುಲಸೂರ ಗ್ರಾಮದ ಸೆರಗಾರ ಓಣಿಯ ಅಗಸಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ವಿಸ್ಕಿ ಸರಾಯಿ ಸೇವನೆ ಮಾಡುವವರಿಗೆ ಚಿಲ್ಲರೆಯಾಗಿ ಮಾರಾಟ ಮಾಡಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ಹುಲಸೂರ ಗ್ರಾಮದ ಸೆರಗಾರ  ಹತ್ತಿರ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಅಧಿನದಲ್ಲಿ ವಿಸ್ಕಿ ಪಾಕೇಟಗಳು ಮತ್ತು ಪ್ಲಾಸ್ಟಿಕ್ ಗ್ಲಾಸ್ ಇಟ್ಟುಕೊಂಡು ನಿಂತಿದ್ದು ಕಂಡು ಅವನ ಮೇಲೆ  ದಾಳಿ ನಡೆಸಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಬಾಬುರಾವ ತಂದೆ ಗೋವಿಂದರಾವ ಟೊಂಪೆ ವಯ 65 ವರ್ಷ, ಜಾತಿ ಕಲಾಲ, ಉ: ಕೂಲಿ ಕೆಲಸ ಸಾ: ಹುಲಸೂರ  ಆತನ ವಶದಲ್ಲಿದ 90 ಎಮ್.ಎಲ್. ನ 12 ಓಸಿ ವಿಸ್ಕಿ ಟೆಟ್ರಾ ಪ್ಯಾಕವುಳ್ಳ ಪಾಕೇಟಗಳಿದ್ದು ಅದರಲ್ಲಿ ಒಂದು ಒಡೆದಿದ್ದು ಇರುತ್ತದೆ ಎಲ್ಲವುಗಳ ಅ.ಕಿ 420/- ನೇದ್ದನ್ನು ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Thursday, May 28, 2020

BIDAR DISTRICT DAILY CRIME UPDATE 28-05-2020

  
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-05-2020

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/2020 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ:27-05-2020 ರಂದು 1615 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ರತ್ನಮ್ಮಾ ಗಂಡ ದತ್ತಪ್ಪಾ ಗದ್ದೆ ವಯ: 70 ವರ್ಷ, ಜಾ: ಪದ್ಮಾಶಾಲಿ   ಉ; ಮನೆಕೆಲಸ ಸಾ|| ಅಷ್ಟುರ  ರವರು ತನ್ನ ಹೇಳಿಕೆ ಕೊಟ್ಟಿದ್ದು ಸಾರಾಂಶವೆನೆಂದರೆ  ಫೀರ್ಯಾದಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದು ಎಲ್ಲರ ಮದುವೆಯಾಗಿದ್ದು ಇವರ ಕಿರಿಯ ಮಗನ ಹೆಸರು ಪ್ರಭು ತಂದೆ ದತ್ತಪ್ಪಾ ಗದ್ದೆ ವಯ-50 ಇದ್ದು  ಕೂಲಿಕೆಲಸ ಮಾಡಿಕೊಂಡಿರುತ್ತಾನೆ. ಪ್ರಭು ಇತನ ಹೆಂಡತಿ ಹೆಸರು ಕಮಳಮ್ಮ ಅಂತ ಇದ್ದು ಅವನ ಮಗನ ಹೆಸರು ಅವಿನಾಸ ಅಂತ  ಇರುತ್ತದೆ. ಈಗ ಸುಮಾರು 15 ವರ್ಷದ ಹಿಂದೆ ಪ್ರಭು ಇತನ ಹೆಂಡತಿ ಕಮಳಮ್ಮ ಇವಳು ಪ್ರಭು ಇತನಿಗೆ ಬಿಟ್ಟು   ಅವಿನಾಶ ಇತನೊಂದಿಗೆ ತನ್ನ ತವರು ಮನೆ ವಿದ್ಯಾನಗರ ಬೀದರಕ್ಕೆ ಹೋಗಿ ಅಲ್ಲಿಯೆ ಇರುತ್ತಾಳೆ. ಇದರಿಂದ ಪ್ರಭು ಇತನು ಬೇಜಾರು ಮಾಡಿಕೊಂಡು ಸರಾಯಿ ಕುಡಿಯುವ ಚಟಕ್ಕೆ ಒಳಗಾಗಿರುತ್ತಾನೆ. ದಿನಾಂಕ 21/05/2020 ರಂದು ರಾತ್ರಿ ಊಟ ಮಾಡಿ ಮನೆಯ ಹೊರಗೆ ಮಲಗಿದ್ದು ಪ್ರಭು ಇತನು ಮನೆಯಲ್ಲಿ ಮಲಗಿರುತ್ತಾನೆ. ದಿನಾಂಕ 22/05/2020 ರಂದು ಮುಂಜಾನೆ 6.30 ಗಂಟೆಗೆ  ಎದ್ದು ಮನೆಯಲ್ಲಿ ಹೋದಾಗ ಪ್ರಭು ಇತನು ಮೈ ಸುಟ್ಟಿಕೊಂಡು ನರಳುತಾ ಮಲಗಿದ್ದು ಏನಾಗಿದೆ ಅಂತ ವಿಚಾರಿಸಲು ಪ್ರಭು ಇತನು ಹೇಳಿದೆನೆಂದರೆ ಇಂದು ನಸುಕಿನ 5 ಗಂಟೆಗೆ ನಾನು ಎದ್ದು  ಬಿಡಿ ಸೇದಲು ಬೆಂಕಿ ಕಡ್ಡಿ ಗಿರಿದಾಗ ಆಕಸ್ಮೀಕವಾಗಿ ಬೆಂಕಿ ಮೈಗೆ ಹತ್ತಿಕೊಂಡು ಎದೆಗೆ,  ಹೊಟ್ಟೆಗೆ,ಕೈ ಕಾಲುಗಳಿಗೆ ಸುಟ್ಟಗಾಯಗಳು ಆಗಿರುತ್ತದೆ  ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ದಿನಾಂಕ 27/06/2020 ರಂದು ಮದ್ಯಾನ 3.15  ಗಂಟೆಗೆ ನನ್ನ ಮಗ ಪ್ರಭು ಇತನು ಗುಣಮುಖನಾಗದೇ ತೀರಿಕೊಂಡಿರುತ್ತಾನೆ. ಸದರಿ ಘಟನೆ ಆಕಸ್ಮೀವಾಗಿದ್ದು. ಈ ಬಗ್ಗೆ   ಯಾರ ಮೇಲೆ ಯಾವುದೇ ದೂರು ಇರುವುದಿಲ್ಲಾ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 127/2020 ಕಲಂ 379 ಐಪಿಸಿ :-

ದಿನಾಂಕ 27/05/2020 ರಂದು 12:00 ಗಂಟೆಗೆ ದತ್ತುಕುಮಾರ ತಂದೆ ಕಾಶೆಪ್ಪಾ ಖಂಡ್ರೆ ವಯ: 55 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಸುಭಾಷ ಚೌಕ ಹತ್ತಿರ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಭಾಲ್ಕಿಯ ಹೋಲ ಸವರ್ೆ ನಂ 620 ರಲ್ಲಿ ತನ್ನ ಹೇಸರಿನಲ್ಲಿ 40 ಎಕ್ಕರೆ ಜಮೀನಿದ್ದು ಅದರಲ್ಲಿ ಒಂದು ಬಾವಿ ತೋಡಿ ಬಾವಿಗೆ ಎರಡು ಕರೇಂಟ ಮೋಟಾರ ಅಳವಿಡಿಸಿದ್ದು ಇದ್ದವು ಈ ವರ್ಷ ಸದರಿ ಹೋಲದಲ್ಲಿ ತರಕಾರಿ ಮತ್ತು ಕಬ್ಬಿನ ಬೇಳೆ ಇರುತ್ತದೆ ಪ್ರತಿ ದಿವಸ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ಕರೆಂಟ ಇರುವದರಿಂದ ಅದೆ ಸಮಯಲ್ಲಿ ಹೋಲಕ್ಕೆ ನೀರು ಉಣಿಸುತ್ತೆವೆ. ನ  2-3 ವರ್ಷಗಳಿಂದ ಕಲವಾಡಿಯ ಪಿಂಟು ತಂದೆ ದಗಡು ಪವಾರ ಇವನು ಒಕ್ಕಲುತನ ಕೇಲಸದ ಮೇಲೆ ನೌಕರಿ ಇರುತ್ತಾನೆ. ಅವನು ಪ್ರತಿ ದಿವಸ ಹಗಲು ಹೊತ್ತಿನಲ್ಲಿ ಹೋಲದಲ್ಲಿ ಕೇಲಸ ಮಾಡಿ ರಾತ್ರಿ ಮನೆಗೆ ಹೋಗುತ್ತಾನೆ ಅದರಂತೆ   ದಿನಾಂಕ 26/05/2020 ರಂದು ಸಹ ಹಗಲೇಲ್ಲಾ ಹೋಲದಲ್ಲಿ ಕೆಲಸ ಮಾಡಿ ಸಾಯಂಕಾಲ 5 ಗಂಟೆಗೆ ಮನೆಗೆ ಹೋಗಿದ್ದನು. ಹಿಗೀರಲು  ದಿನಾಂಕ 27/05/2020 ರಂದು ಮುಂಜಾನೆ 9 ಗಂಟೆಗೆ ಫೀರ್ಯಾದಿ ಮತ್ತು ನೌಕರಿ ಮನುಷ್ಯ ಪಿಂಟು ಇಬ್ಬರು ನೀರು ಬೀಡುವ ಕುರಿತು ಹೋಲಕ್ಕೆ ಹೋಗಿ ಮೋಟಾರ ಚಾಲು ಮಾಡಿದಾಗ ಮೋಟಾರ ಚಾಲು ಆಗದ ಕಾರಣ ಬಾವಿಯಲ್ಲಿ ನೋಡಲು ಎರಡು ಕರೆಂಟ ಮೋಟಾರಗಳಿಗೆ ಅಳವಡಿಸಿದ ಕೇಬಲ ವೈರ ಇರಲಿಲ್ಲ ಸುಮಾರು 400 ಫೀಟ ಕೇಬಲ ವೈರ ಅದರ ಅಂದಾಜು ಕಿಮ್ಮತ್ತು 7000 ರೂದಷ್ಟು ದಿನಾಂಕ 26/05/2020 ರಂದು ಸಾಯಂಕಾಲ 5 ಗಂಟೆಯಿಂದ  ಮುಂಜಾನೆ 9 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚೀತ ಕಳ್ಳರು ಕೇಬಲ ವೈರ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.