Police Bhavan Kalaburagi

Police Bhavan Kalaburagi

Sunday, July 22, 2018

BIDAR DISTRICT DAILY CRIME UPDATE 22-07-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-07-2018

§UÀzÀ® ¥ÉưøÀ oÁuÉ C¥ÀgÁzsÀ ¸ÀA. 75/2018, PÀ®A. 324, 504, 354 L¦¹ :-
ಫಿರ್ಯಾದಿ ಯಂಕಪ್ಪಾ ಗಂಡ ರಾಜಪ್ಪಾ ವಡ್ಡರ ವಯ: 45 ವರ್ಷ, ಜಾತಿ: ವಡ್ಡರ, ಸಾ: ನೇಲವಾಡ ಗ್ರಾಮ, ತಾ: & ಜಿ: ಬೀದರ ರವರ ವಡ್ಡರ ಸಮಾಜದ ಮನೆಗಳು ನೇಲವಾಡ ಗ್ರಾಮದ ಹೊಬಡಾವಣೆಯಲ್ಲಿ ಮೇನ ರೋಡಿಗೆ ಹತ್ತಿಯೆ ಇರುತ್ತವೆ, ಮನೆಗಳ ಎದುರಿಗೆ ರೋಡ ದಾಟಿ ಖುಲ್ಲಾ ಜಾಇರುತ್ತದೆ, ದಿನಾಂಕ 21-07-2018 ರಂದು 0800 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಚಿಕ್ಕ ಮೊಮ್ಮಗನಾದ ಐನಸ್ ವಯ 02 ವರ್ಷ, ಇವಳಿಗೆ ಬಹಿರ್ದೆಸೆಗೆ ಕೂಡಿಸಲು ಮ್ಮ ಮನೆಗಳ ಎದುರಿಗೆ ಇದ್ದ ಬಾವುಗಿ-ಸಂಗೋಳಗಿ ಮೇನ ರೋಡ ದಾಟಿ ರೋಡಿನ ಬದಿಯಲ್ಲಿದ್ದ ಖುಲ್ಲಾ ಜಾಗೆಯಲ್ಲಿ ಕೂಡಿಸಿದ್ದು, ಫಿರ್ಯಾದಿಯು ಸಹ ನ್ನ ಮೊಮ್ಮಗನ ಬಳಿಯಲ್ಲಿ ನಿಂತಿರುವಾಗ ಅಲ್ಲಿಯೆ ಸ್ವಲ್ಪ ದೂರದಲ್ಲಿದ್ದ ಒಂದು ಕಾನ ಗ್ಯಾನ್ ಗಿಡದ ಕೆಳಗೆ ಒಬ್ಬ ವ್ಯಕ್ತಿ ಕುಳಿತ್ತಿದ್ದನು, ಆಗ ಫಿರ್ಯಾದಿಯು ಇಲ್ಲಿಯಾರು ಕುಳಿತಿದ್ದಿರಿ ಅಂತ ಕೇಳಿದಾಗ ಆಗ ಅಲ್ಲಿ ಕುಳಿತ್ತಿದ್ದ ಸತಿಶ ತಂದೆ ಬಸಪ್ಪಾ ಬಾವಿದೊಡ್ಡಿ ವಯ: 55 ವರ್ಷ, ಜಾತಿ: ಎಸ್.ಸಿ ಮಾದಿಗ ಸಾ: ನೇಲವಾಡ ಇತನು ತನ್ನ ಕೈಯಲ್ಲಿ ಒಂದು ಕೊಡ್ಲಿ ಹಿಡಿದು ಕೊಂಡು ನಾನು ಇಲ್ಲಿ ಕುಳಿತರೆ ನಿನಗೆ ಏನು ಆಗುತ್ತಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಫಿರ್ಯಾಧಿಯ ಹತ್ತಿರ ಬಂದು ವಿನಾಃ ಕಾರಣ ಫಿರ್ಯಾದಿಯ ತಲೆ ಗೂದಲು ಹಿಡಿದು ಜಿಂಜಾಮುಷ್ಠಿ ಮಾಡಿ ಮಾನಭಂಗ ಮಾಡಿ ತನ್ನ ಕೈಯಲ್ಲಿದ್ದ ಕೊಡಲಿಯಿಂದ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಡಿಸಿದನು, ಆಗ ಫಿರ್ಯಾದಿಯು ಚಿರಾಡಿದಾಗ ಅಲ್ಲಿಯೇ ಹತ್ತಿರದ ಮನೆಯಿಂದ ಫಿರ್ಯಾದಿಯ ನಾದಣಿಯಾದ 1) ಸಂಗೀತಾ ಗಂಡ ಮಾಣಿಕ ವಡ್ಡರ ವಯ: 30 ವರ್ಷ, ಮತ್ತು ಮತ್ತೊಬ್ಬ ನಾಂದಣಿಯಾದ 2) ಸುಶೀಲಮ್ಮಾ ಗಂಡ ಸಂಜು ವಯ: 25 ವರ್ಷ, ಇಬ್ಬರು ಓಡಿ ಬಂದು ಜಗಳ ಬಿಡಿಸಿಕೊಂಡರು, ನಂತರ ಬೇರೊಂದು ಖಾಸಗಿ ವಾಹನದಿಂದ ಫಿರ್ಯಾದಿಯ ಸಮಾಜದವರು ಫಿರ್ಯಾದಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಯವರ ದೂರನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-07-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಶ್ವನಾಥ ತಂದೆ ಸೋಮಶೇಖರ ಅತ್ತಾರ  ಸಾ|| ಭಗವತಿ ನಗರ ಕಲಬುರಗಿ ರವರು  ದಿನಾಂಕ 14-07-2018 ರಂದು 06-00 ಪಿ.ಎಂದಿಂದ 15-07-201809-00 ಎ.ಎಂ ಅವಧಿಯಲ್ಲಿ ಯಾರೋ ಕಳ್ಳರು ಕಲಬುರಗಿಯ ಭಗವತಿ ನಗರದಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ನಗದು ಹಣ 1,20,000/-ರೂ ಹಾಗೂ 300 ಗ್ರಾಂ ಬಂಗಾರದ ಆಭರಣಗಳು ಅ.ಕಿ 7,60,000/-ರೂ ಹೀಗೆ ಒಟ್ಟು 8,80,000/-ರೂ ನೇದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ನೀಲಮ್ಮಾ ಗಂಡ ಸೂರ್ಯಾಕಾಂತ ಅಡಕಿ ಸಾ : ಚಿಂಚೋಳಿ ಗ್ರಾಮ ತಾ/ಅಫಜಲಪೂರ ಜಿ- ಕಲಬುರಗಿ ಹಾವ- ರಾಮನಗರ ಕಲಬುರಗಿ ರವರ ಮಗಳು ಭಾಗ್ಯಶ್ರೀ ಇವಳಿಗೆ ನಮ್ಮ ಎದರು ಮನೆಯ ಸುಧಾಕರ ತಂದೆ ಶ್ರೀಶೈಲ್ ಜಮದಾರ ಎಂಬುವ ಹುಡುಗನು ಆಗಾಗ ನಮ್ಮ ಹುಡುಗಿಗೆ ಚುಡಾಯಿಸುವದು, ಸಲುಗೆಯಿಂದ ಮಾತಾಡುತಿದ್ದಾಗ ನಮ್ಮ ಮಗಳು ಸುಧಾರಕರ ಚುಡಾಯಿಸುವ ಬಗ್ಗೆ ತಿಳಿಸಿದಾಗ ನಾನು ಮತ್ತು ನನ್ನ ಗಂಡ ಸೂರ್ಯಾಕಾಂತ ಹಾಗೂ ನಮ್ಮ ಭಾವ ನಾಗೇಂದ್ರ ಚಿಂಚೋಳಿ ಕೂಡಿಕೊಂಡು ಸುಧಾಕರನಿಗೆ ಮತ್ತು ಆತನ ತಂದೆ ಶ್ರೀಶೈಲನಿಗೆ ತಿಳುವಳಿಕೆ ಹೇಳಿದ್ದಾಗ ಕೆಲವು ದಿವಸಗಳ ವರೆಗೆ ಚನ್ನಾಗಿದ್ದರು. ಆದಾಗ್ಯೂ ಕೂಡಾ ಸದರಿ ಹುಡಗನು ನಮ್ಮ ಹುಡುಗಿಯನ್ನು ನೋಡುವದು ಬಿಡುತಿರಲಿಲ್ಲಾ , ಕೆಲವು ದಿವಸಗಳ ನಂತರ ಸುಧಾಕರನು ಪುನಾ ನನ್ನ ಮಗಳು ಭಾಗ್ಯಶ್ರೀ ಇವಳೊಂದಿಗೆ ಸಲುಗೆಯಿಂದ ವರ್ತಿಸುವದು ನಾನು ಮನೆಯಿಂದ ಹೊರಗಡೆ ಹೋದಾಗ ನಮ್ಮ ಮನೆಯ ಎದರುಗಡೆ ನಿಂತು ನಮ್ಮ ಮಗಳಿಗೆ ಭೇಟಿ ಮಾಡುವದು  ಇಲ್ಲದೊಂದು ಆಮಿಸೆಯೊಡ್ಡುತಿದ್ದ ದಿನಾಂಕ. 6-7-2018 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳೆಲ್ಲರೂ ಊಟಾ ಮಾಡಿ ಮಲಗಿ ಕೊಂಡಿದ್ದೇವು ನನ್ನಗೆ ಜ್ವರ ಬಂದಿದ್ದ ಕಾರಣ ಔಷಧ ತೆಗೆದುಕೊಂಡು ಮಲಗಿಕೊಂಡಿದೇನು. ಮದ್ಯ ರಾತ್ರಿ ಅಂದರೆ ದಿನಾಂಕ.7-7-2018 ರಂದು 00-30 ಗಂಟೆಯ ಸುಮಾರಿಗೆ ನಾನು  ಎದ್ದು  ಮೂತ್ರ ವಿಸರ್ಜನೆಗೆ ಹೋಗಿ ನೀರು ಕುಡಿದು ಮಲಗುವಾಗ ನನ್ನ 5 ಜನ ಮಕ್ಕಳು ಮಲಗಿಕೊಂಡಿದ್ದರು. ದಿನಾಂಕ.7-7-2018 ರಂದು ಬೆಳಗ್ಗೆ  5-30 ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ನನ್ನ ಹಿರಿಯ ಮಗಳು ಭಾಗ್ಯಶ್ರೀ. ವಯ/ 17 ವರ್ಷ ಇವಳು ಕಾಣಲಿಲ್ಲಾ  ನಂತರ ಮನೆಯ ತುಂಬೆಲ್ಲಾ ಮತ್ತು ಹಿಂದುಗಡೆ ಹೋಗಿ ಹುಡುಕಾಡಲಾಗಿ ಸಿಗಲಿಲ್ಲಾ. ನಂತರ ಕಾಲೂನಿಯಲ್ಲಿ  ಎಲ್ಲಾ ಕಡೆಗೂ ಹುಡುಕಾಡಿದರೂ ಸಿಗಲಿಲ್ಲಾ  ಕಲಬುರಗಿಯ ಎಲ್ಲ ಕಡೆಗೂ  ಮತ್ತು ನಮ್ಮ ಸಮ್ಮಂದಿಕರು ಇರುವ  ಊರುಗಳಿಗೆ ಫೋನ ಮಾಡಿ ವಿಚಾರಿಸಿದರೂ ಕೂಡಾ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲಾ. ನಂತರ ನಮ್ಮ ಮನೆಯ ಎದುರಿನ ಹುಡುಗ ಸುಧಾಕರ ಜಮದಾರ ಇತನು ಕೂಡಾ ರಾತ್ರಿಯಿಂದ ಮನೆಯಲ್ಲಿರುವದಿಲ್ಲಾ ಅಂತಾ ಆತನ ತಂದೆ ಹೇಳಿದರು ಕೇಳಿದೆರೆ ಎಲ್ಲಿ ಹೋಗಿರುತ್ತಾನೆ ನಮಗೆನು ಗೊತ್ತು ಅಂತ ನಮ್ಮೊಂದಿಗೆ ವ್ಯಂಗ್ಯವಾಗಿ ಮಾತಾಡಿರುತ್ತಾರೆ. ಆದುದರಿಂದ ಈ ಮೇಲೆ ನಮೂದ ಮಾಡಿದ್ದ ಸುಧಾಕರ ತಂದೆ ಶ್ರೀಶೈಲ್ ಜಮದಾರ ಇತನು ನನ್ನ ಅಪ್ರಾಪ್ತ ಮಗಳು ಭಾಗ್ಯಶ್ರೀ. ಇವಳಿಗೆ ಮದುವೆ ಮಾಡಕೊಳ್ಳುತ್ತೇನೆ ಅಂತಾ ಇಲ್ಲ ಸಲ್ಲದ ಆಮಿಸ್ಯಯೊಡ್ಡಿ ಪುಸಲಾಯಿಸಿ ಜಬದಸ್ತಿಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.