Police Bhavan Kalaburagi

Police Bhavan Kalaburagi

Monday, July 28, 2014

Gulbarga District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಶಂಕರ ಹನಗುಂದಿ ಸಾ: ಹರಿಕ್ರಷ್ಣ ನಗರ ಸಂತೋಷ ಕಾಲೋನಿ ಗುಲಬರ್ಗಾ ರವರು ದಿನಾಂಕ 25/07/2014 ರಂದು ರಾತ್ರಿ ವೇಳೆಯಲ್ಲಿ ತನ್ನ ದ್ಚಿಚಕ್ರ ವಾಹನವನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿದ್ದು ಮುಂಜಾನೆ ಎದ್ದು ನೋಡಲು ನನ್ನ ಬೈಕ್ ಇರಲಿಲ್ಲಾ. ಎಲ್ಲಾ ಕಡೆಗೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲಾ. ಕಾರಣ ನನ್ನ ಹೊಂಡಾ ಶೈನ್ ದ್ವಿಚಕ್ರ ವಾಹನ ನಂ. ಕೆ.ಎ-51 ಇಎ-6641 ಚೆಸ್ಸಿ ನಂ. ME4JC36DGB8144688 ಇಂಜನ ನಂ. JC36E2419368  ಇದರ ಕಿಮ್ಮತ್ತು  45,000/- ರೂ ನೇದ್ದನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ವಸಂತಾ ಗಂಡ ದೇವಿದಾಸ ಲಂಬುನವರ  ಸಾ: ಗುಬ್ಬಿ ಕಾಲೋನಿ ಸೇಡಂ ರೋಡ  ಗುಲಬರ್ಗಾ ರವರು ದಿನಾಂಕ: 28/07/2014 ರಂದು ಬೆಳಿಗ್ಗೆ 8=15 ಗಂಟೆಗೆ ಫಿರ್ಯಾದಿಯು ಆರ್.ಟಿ.ಓ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ: ಕೆಎ 32 6453 ನೆದ್ದರಲ್ಲಿ ಕುಳಿತು ಜಿ.ಜಿ.ಹೆಚ್. ಸರ್ಕಲ್ ಕಡೆಗೆ ಬರುತ್ತಿದ್ದಾಗ ಎಮ್.ಆರ್.ಎಮ್.ಸಿ. ಕಾಲೇಜ ಎದುರಿನ ರೋಡ ಮೇಲೆ ಅಟೋರೀಕ್ಷಾ ಚಾಲಕ ಅಟೋರೀಕ್ಷಾ ಎಡ ಬಲ ತಿರುಗಿಸಿ ಕಟ್ ಹೊಡೆದು ಒಮ್ಮೇಲೆ ಬ್ರೇಕ್ ಹಾಕಿ ಅಟೋರೀಕ್ಷಾ ಪಲ್ಟಿ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಚಾಲಕ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 28-07-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 28-07-2014

zsÀ£ÀÆßgÀ ¥Éưøï oÁuÉ UÀÄ£Éß £ÀA. 182/2014, PÀ®A 279, 337, 338, 304(J) L¦¹ :-
¢£ÁAPÀ 27-07-2014 gÀAzÀÄ ¦üAiÀiÁ𢠮°vÁ¨Á¬Ä UÀAqÀ «ÃgÀ¸ÀAUÀ¥Áà ªÀÄtUÉ ªÀAiÀÄ: 68 ªÀµÀð, eÁw: °AUÁAiÀÄvÀ, ¸Á: UÉÆÃgÀPÁ UÀ°è ªÉÄãÀ gÉÆÃqÀ ©ÃzÀgÀ EªÀgÀÄ ªÀÄvÀÄÛ ¦üAiÀiÁð¢AiÀÄ ¸ÀªÀw £ÁUÀªÀÄtÂ, ¦üAiÀiÁð¢AiÀÄ ¸ÉÆÃ¸É gÀwzÉë @ £ÀA¢£À UÀAqÀ ¹ªÁ£ÀAzÀ, ªÀÄvÀÄÛ ªÀÄUÀ «ÃgÀ±ÉÃnÖ vÀAzÉ «ÃgÀ¸ÀAUÀ¥Áà gÀªÀgÀ®ègÀÆ PÀÆr ªÀiÁgÀÄw ¸ÀÄdQ PÁgÀ £ÀA. PÉJ-38/JA-1848 £ÉÃzÀgÀ°è PÀĽvÀÄ ¸ÀªÀw ªÀÄUÀ¼ÁzÀ eÉʲæà EªÀ½UÉ ¥ÀAZÀ«Ä ºÀ§âzÀ §mÉÖ PÉÆÃqÀ®Ä ºÀ½SÉÃqÀ(©) UÁæªÀÄPÉÌ ºÉÆÃUÀÄwÛzÁÝUÀ ¸ÀzÀj PÁgÀ ¦üAiÀiÁð¢AiÀÄ ªÀÄUÀ «ÃgÀ±ÉÃnÖ EvÀ£ÀÄ ZÀ¯Á¬Ä¸ÀÄwÛzÀÄÝ, zÁjAiÀÄ°è ©ÃzÀgÀ ºÀĪÀÄ£Á¨ÁzÀ gÉÆÃqÀ ºÁ®ºÀ½î(PÉ) ¦.f ¸ÉAlgï ºÀwÛgÀ PÁgÀ ZÁ®PÀ «ÃgÀ±ÉÃnÖ EvÀ£ÀÄ vÀ£Àß PÁgÀ CwªÉÃUÀ ºÁUÀÆ ¤µÁ̼ÀfãÀvÀ¢AzÀ ZÀ¯Á¬Ä¹ gÉÆÃr£À JqÀ§¢UÉ MªÉÄä¯É ¥À°Ö ªÀiÁrgÀÄvÁÛ£É, ¸ÀzÀj ¥À°ÖAiÀÄ ¥ÀæAiÀÄÄPÀÛ ¦üAiÀiÁð¢AiÀÄ §®UÀqÉ ªÉƼÀPÁ® ªÉÄÃ¯É vÀgÀazÀ gÀPÀÛUÁAiÀÄ, JzÉAiÀÄ §®¨sÁUÀzÀ°è ¨É£Àß ªÉÄïÉ, §® ªÉÆüÀPÉÊ PɼÀUÉ UÀÄ¥ÀÛUÁAiÀÄ, gÀwÃzÉë EªÀ½UÉ ªÉÄʪÉÄÃ¯É C®è° ¥ÉmÁÖV UÀÄ¥ÀÛUÁAiÀĪÁVgÀÄvÀÛzÉ, «ÃgÀ±ÉÃnÖ EvÀ¤UÉ §®¨sÀÄdzÀ ªÉÄïÉ, JqÀgÉÆArUÉ UÀÄ¥ÀÛUÁAiÀĪÁVgÀÄvÀÛzÉ, £ÁUÀ«Ät EªÀ½UÉ ºÀuÉAiÀÄ ªÀÄzÀåzÀ°è ºÀjÃvÀªÁzÀ ¨sÁj gÀPÀÛUÁAiÀÄ, JqÀUÁ® ªÀÄƼÀPÁ® PÉüÀUÉ vÀgÀazÀ gÀPÀÛUÁAiÀĪÁVzÀÄÝ EgÀÄvÀÛzÉ, J®ègÀÆ 108 CA§Ä¯ÉãïìzÀ°è PÀĽvÀÄ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ ºÉÆÃUÀĪÁUÀ zÁj ªÀÄzsÀå  £ÁUÀ«ÄÃt £ÁUÀ«ÄÃt vÀAzÉ «ÃgÀ¸ÀAUÀ¥Áà ªÀÄtÂUÉ eÁw: °AUÁAiÀÄvÀ, ¸Á: UÉÆÃgÀPÁUÀ°è ªÉÄãÀ gÉÆÃqÀ ©ÃzÀgÀ EªÀ¼ÀÄ ¨sÁj UÁAiÀÄUÀ½AzÁV ªÀÄÈvÀ¥ÀnÖgÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಪದ್ಮಮ್ಮಾ ಗಂಡ ನರಸರಡ್ಡಿ ಸಾ: ತುಲ್ಮಾಮಡಿ ತಾ: ಸೇಡಂ ರವರು ದಿನಾಂಕ: 27-07-2014 ರಂದು ಮುಂಜಾನೆ 07-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ರಾಮಲಿಂಗಮ್ಮ ಇವರು ಕೂಡಿ ಆಡಕಿ ಗ್ರಾಮದಿಂದ ಹೊರಟು ಇಂದು ಮುಂಜಾನೆ 09-00 ಗಂಟೆಗೆ ತುಲ್ಮಾಮಡಿ ಗ್ರಾಮದಲ್ಲಿರುವ ನನ್ನ ಮನೆಗೆ ಹೊದೇವು. ನನ್ನ ತಾಯಿಯಾದ ರಾಮಲಿಂಗಮ್ಮ ಇವಳಿಗೆ, ಮನೆಯಲ್ಲಿ ಬಿಟ್ಟು, ನಾನು ಸಂಡಾಸಕ್ಕೆ ಹೊಗಿ ಮರಳಿ ಮುಂಜಾನೆ 09-30 ಗಂಟೆಗೆ ಮರಳಿ ಮನೆಗೆ ಬಂದು ನೋಡಲು, ನನ್ನ ಅಣ್ಣಾನಾದ 1] ನಾಗರೆಡ್ಡಿ ತಂದೆ ನರಸರೆಡ್ಡಿ ಮುನ್ನೂರ, ಹಾಗು ಇತನ ಮಕ್ಕಳಾದ 2] ಶ್ರೀನಿವಾಸ ರೆಡ್ಡಿ ತಂದೆ ನಾಗರೆಡ್ಡಿ ಮುನ್ನೂರ, 3] ದೇವಿಂದ್ರ ರೆಡ್ಡಿ ತಂದೆ ನಾಗರೆಡ್ಡಿ ಮುನ್ನೂರ ಇವರು ಕೂಡಿ, ನನ್ನ ಮನೆಯ ಒಳಗೆ ಬಂದು, ಮನೆಯಲ್ಲಿದ್ದ ನನ್ನ ತಾಯಿಯಾದ ರಾಮಲಿಂಗಮ್ಮ ಇವಳ ಸಂಗಡ ಜಗಳಾ ಮಾಡುತ್ತಾ ನಿನ್ನ ಮಗಳಾದ ಪದ್ಮಮ್ಮಾ ಇವಳ ಹೆಸರಿಗೆ ಮಾಡಿದ ಹೊಲವನ್ನು ನನ್ನ ಹೆಸರಿಗೆ ಮಾಡು ಅಂತಾ ನಾಗರೆಡ್ಡಿ ಇತನು ಅನ್ನುತ್ತಾ ಬೈಯುತ್ತಿದ್ದಾಗ, ನಮ್ಮ ತಾಯಿ ಅವರಿಗೆ ಇದಕ್ಕೆ ಒಪ್ಪವದಿಲ್ಲಾ ಅಂತಾ ಅಂದಾಗ ನಾಗರೆಡ್ಡಿಯು ನಾವು ಎಲ್ಲರೂ ಕೂಡಿ, ನಿನಗೆ ಖಲಾಸ ಮಾಡಿ, ನನ್ನ ಹೆಸರಿಗೆ ಹೊಲ ಮಾಡಿಕೊಳ್ಳುತ್ತೇವೆ. ಅನ್ನುತ್ತಾ. ದೇವಿಂದ್ರ ರೆಡ್ಡಿ ಮತ್ತು ನಾಗರೆಡ್ಡಿ ಇವರು, ನನ್ನ ತಾಯಿಗೆ ಕೈಗಳಿಂದ ತೆಲೆಗೆ ಕುತ್ತಿಗೆಗೆ ಮತ್ತು ಹೊಟ್ಟೆಗೆ ಹೊಡೆದರು, ಇವಳಿಗೆ ಏತ್ತಿತ್ತಿ ನೇಲದ ಮೇಲೆ ಹಾಕಿದರು, ಮತ್ತು ಇವರು ಇಬ್ಬರು ಕೂಡಿ ನನ್ನ ತಾಯಿಗೆ ಒತ್ತಿ ಹಿಡಿದಾಗ, ಶ್ರೀನಿವಾಸ ರೆಡ್ಡಿ ಇವನು, ತನ್ನ ಬಳಿ ಇದ್ದ ತೇಜಾಫ್ ಏಣ್ಣೆಯ ಬಾಟಲಿಯನ್ನು ತೆಗೆದುಕೊಂಡು, ಒತ್ತಾಯದಿಂದ ನನ್ನ ತಾಯಿಯ ಬಾಯಿಯಲ್ಲಿ, ತುರುಕಿದನು, ಈ ಬಾಟಲಿಯಲ್ಲಿದ್ದ ಏಣ್ಣೆಯು, ನನ್ನ ತಾಯಿಯ ಹೊಟ್ಟೆಯಲ್ಲಿ ಹೊದಾಗ, ಇವಳು, ಬೇಹೊಸ ಆಗಿ ಕುಸಿದು ಕೇಳಗೆ ಬಿದ್ದಳು, ಮತ್ತು 3 ಜನರು ಅಲ್ಲಿಂದ ಓಡಿ ಹೊದರು,ನಾನು ಇದರ ಬಗ್ಗೆ ಆಡಕಿಯಲ್ಲಿರುವ ನನ್ನ ಮಗಳಾದ ಶ್ರೀದೇವಿ ಇವಳಿಗೆ ತಿಳಿಸಿದಾಗ, ಆಗ ಇವಳು ಇನ್ನಿತರರು ಕೂಡಿ ಬಂದು, ಆಟೋದಲ್ಲಿ ನಮ್ಮ ಬಳಿಗೆ ಬಂದರು. ನಡೆದನ್ನು ನೋಡಿ, ಬೆಹೊಷ ಆಗಿ ಬಿದಿದ್ದ ನನ್ನ ತಾಯಿಯಾದ ರಾಮಲಿಂಗಮ್ಮ ಇವಳಿಗೆ ಆಟೋದಲ್ಲಿ ಹಾಕಿಕೊಂಡು, ಆಡಕಿ ಗ್ರಾಮದ ಬಳಿ ಬಂದಾಗ, ಅಲ್ಲಿ ಅಂಬುಲೇನಸ್ಸ ಗಾಡಿ ಬಂದಾಗ, ಇದರಲ್ಲಿ ಹಾಕಿಕೊಂಡು ಇಂದು ದಿನಾಂಕ: 27-07-2014 ರಂದು ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಸೇಡಂ ಸಮೀಪ ಬಂದಾಗ, ನನ್ನ ತಾಯಿಯಾದ ರಾಮಲಿಂಗಮ್ಮ ಇವಳು ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಟೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲ ಗಾಣಗಾಪೂರ ಠಾಣೆ : ದಿನಾಂಕ: 27-07-2014 ರಂದು ಚವಡಾಪೂರ ತಾಂಡಾದ ಸೇವಲಾಲ ಮಹಾರಾಜರ ಗುಡಿಯ  ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತಿದ್ದವರನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1] ವಿಜಯ ತಂದೆ ಹೀರು ಜಾಧವ  2] ಸಂದೀಪ ತಂದೆ ರಮೇಶ ರಾಠೋಡ  3] ರಾಜೇಶೇಖರ ತಂದೆ ತಿಪ್ಪಣ್ಣ ಜಾಧವ  4] ಮಾನಸಿಂಗ ತಂದೆ ನಾರಾಯಣರಾವ ರಾಠೋಡ 5] ಕಿಶನ ತಂದೆ ನಾರಾಯಣ ರಾಠೋಡ  ಸಾ|| ಎಲ್ಲರೂ ಚವಡಾಪೂರ ತಾಂಡ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  845=00 ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಮರಳಿ ಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:-26/07/2014 ರಂದು ರಾತ್ರಿ 07:30 ಗಂಟೆ ಸುಮಾರಿಗೆ ಮೃತ ಮಲ್ಲಿನಾಥ @ ಮಲ್ಲಿಕಾರ್ಜುನ ಇತನು ತನ್ನ ವಶದಲ್ಲಿದ್ದ ಹಿರೋ ಹೊಂಡಾ ಮೋಟಾರ ಸೈಕಲ್ ನಂ ಕೆಎ-32 ಡಬ್ಲೂ-2018 ನೇದ್ದನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿ ಕಪನೂರ ಹತ್ತಿರ ಇರುವ ಭಾರತ ಪೊರ್ಡ ಶೋರೂಮ ಎದುರಗಡೆ ಒಂದು ಪಾನಿಪುರಿ ಬಂಡಿಗೆ ಹಾಯಿಸಿ ಕೆಳೆಗೆ ಬಿದ್ದು ತಲೆಗೆ ಬಾರಿ ಗುಪ್ತಗಾಯವಾಗಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯ ಮದ್ಯದಲ್ಲಿ ರಾತ್ರಿ 11:30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರೂಪಾ ಗಂಡ ಮಲ್ಲಿನಾಥ @ ಮಲ್ಲಿಕಾರ್ಜುನ ಕುಂಬಾರ ಸಾ:ಸಾವಳಗಿ ಹಾ:ವ:ಕಪನೂರ ತಾ:ಜಿ:ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ: 27/07/2104 ರಂದು ಶ್ರಾವಣ ಮಾಸದ ಮೊದಲ ದಿನವಾಗಿದ್ದರಿಂದ ಶ್ರೀ ವಿಕಾಸ ತಂದೆ ರಾಮಜೀ ರಾಠೋಡ ಸಾ: ಪ್ಲಾಟ ನಂ. 17 ಅವಿಸ್ಕಾರ ಬಿಲ್ಡಿಂಗ್ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ಮತ್ತು ತಾಯಿ ರೂಪಾ ಅಕ್ಕ ಆರತಿ, ಹಾಗು ತನ್ನ ಪರಿಚಯದವನಾದ ಗೆಳೆಯ ಕಿಶೋರಕುಮಾರ ತಂದೆ ರೇವಣಸಿದ್ದಪ್ಪಾ ಹುಡಗಿ ಹೀಗೆ 04 ಜನ ಕೂಡಿ 2 ಮೋಟರ ಸೈಕಲಗಳ ಮೇಲೆ ಕುಳಿತುಕೊಂಡು ಮಧ್ಯಾಹ್ನ 01-00 ಗಂಟೆಗೆ ಮಹಾಗಾಂವಕ್ಕೆ ಬಂದು ಗ್ರಾಮದಲ್ಲಿ ನಾಗನಾಥ ದೇವರ ದರ್ಶನ ಪಡೆದುಕೊಂಡು ಮರಳಿ ಮಧ್ಯಾಹ್ನ 03-15 ಗಂಟೆಗೆ ಮಹಾಗಾಂವದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಕಿಶೋರಕುಮಾರ ಈತನ ಹೊಂಡಾ ಆಕ್ಟಿವ್ ಮೋ.ಸೈ ನಂ. ಕೆಎ:32, ಈಈ:5119 ನೇದ್ದು ಫಿರ್ಯಾದಿ ಚಾಲಾಯಿಸುತ್ತಿದ್ದು. ಹಿಂದೆ ಫಿರ್ಯಾದಿ ಅಕ್ಕ ಅರತಿ ಇವಳು ಕುಳಿತಿದ್ದಳು. ಇನ್ನೊಂದ ಮೊ.ಸೈಕಲ ಮೇಲೆ ಕಿಶೋರ ಈತನು ಚಲಾಯಿಸುತ್ತಿದ್ದು. ಹಿಂದೆ ಫಿರ್ಯಾದಿ ತಾಯಿ ರೂಪಾ ಕುಳಿತಿದ್ದಳು. ಮಧ್ಯಾಹ್ನ 03-30 ಗಂಟೆಗೆ ಕುರಿಕೋಟಾ ಸೇತುವೆ ದಾಟಿ ಸ್ವಲ್ಪ ಮುಂದೆ ಫಿರ್ಯಧಿದಾರನು. ರೋಡಿನ ಎಡಗಡೆಯಿಂದ ತನ್ನ ಮೋ.ಸೈಕಲನ್ನು ನಿದಾನವಾಗಿ, ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿದಾರನಿಗೆ ಎಡಗೈ ಮೊಳಕೈ ಹತ್ತಿರ, ಬಲಗೈ ಮೊಳಕೈ ಕೆಳಗೆ ತರಚಿದ ರಕ್ತಗಾಯ ಮತ್ತು ಬಲ ಪಕ್ಕಕ್ಕೆ, ಸೊಂಟಕ್ಕೆ ತರಚಿದ ಭಾರಿ ಗಾಯವಾಗಿದ್ದು. ಆರತಿ ಇವಳಿಗೆ ಮೂಗಿಗೆ ಎಡಗಲ್ಲಕ್ಕೆ ತರಚಿದ ರಕ್ತಗಾಯವಾಗಿದ್ದು. ಬಲಗಡೆ ಸೊಂಟಕ್ಕೆ ಭಾರಿಒಳಪೆಟ್ಟಾಗಿರುತ್ತದೆ. ನಂತರ ಈ ಅಪಘಾತವನ್ನು ನೋಡಿ, ಕೀಶೋರ ಹಾಗು ತಾಯಿ ರೂಪಾ ಇವರು ಅಪಘಾತ ಪಡಿಸಿದ ಕಾರ ನಂಬರ ನೋಡಲಾಗಿ, ಟಾಟಾ ಇಂಡಿಕಾ ಕಾರ ನಂ. ಕೆಎ:28, ಎಂ: 8087 ಅಂತಾ ಇದ್ದು. ಅಲ್ಲೇ ಇದ್ದ ಅದರ ಚಾಲಕನ ಹೆಸರು ವಿಚಾರಿಸಲಾಗಿ, ಆತನು ತನ್ನ ಹೆಸರು ಸೈಯ್ಯದ ಅಮ್ಜದ್ ಅಲಿ ತಂದೆ ಅಬ್ದುಲ್ ಖುದ್ದುಸ್ ಸಾ: ಮನೆ ನಂ. 4-529/ಎ-2 ಸಂತ್ರಾಸವಾಡಿ ಗುಲಬರ್ಗಾ ಅಂತಾ ತಿಳಿಸಿದನು. ನಂತರ ಕಾರ ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜೇಂದ್ರ ತಂದೆ ನಾರಾಯಣರಾವ ಕಠಾರೆ ಸಾ:ಗುಲಬರ್ಗಾ ಇವರು ದಿನಾಂಕ: 27/07/2014 ರಂದು ಬೆಳಿಗ್ಗೆ 10=40 ಗಂಟೆಯ ಸುಮಾರಿಗೆ ಮನೆಯಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಜೇವರ್ಗಿ ರೋಡ ಮುಖಾಂತರ ಮೋ/ಸೈಕಲ್ ನಂ: ಕೆಎ 32 ಕೆ 808 ನೆದ್ದನ್ನು ಚಲಾಯಿಸಿಕೊಂಡು ಹೋಗುವಾಗ ಯಾತ್ರಿಕ ನಿವಾಸ ಎದುರಿನ ರೋಡ ಮೇಲೆ ರಾಂಗ ಸೈಡಿನಿಂದ ಎದುರಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಅಟೋರೀಕ್ಷಾ ಚಾಲಕ ತನ್ನ ಅಟೋರೀಕ್ಷಾ ನಂ:ಕೆಎ 32 9968 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ಅಟೋ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ  ಠಾಣೆ : ಶ್ರೀ ಚಂದ್ರಶೇಖರ ತಂದೆ ದಯಾನಂದ ಪಾಟೀಲ ಸಾ: ಭವಾನಿ ಟೆಂಪಲ ಹತ್ತಿರ ಶಹಾಬಜಾರ ಗುಲಬರ್ಗಾ  ರವರ ಜೊತೆಗಿದ್ದ ಚಂದ್ರಶೇಖರ ಇವರನ್ನು ವಿಚಾರಿಸಲು ಅವರು ದಿನಾಂಕ 26-07-2014 ರಂದು ಅಗ್ನಿಶಾಮಕ ಠಾಣೆ ಸಮೀಪ ಹೊಡ್ಡೆನ ರೋಡ ಮೇಲೆ  ರಾತ್ರಿ 11-30 ಗಂಟೆ ಸುಮಾರಿಗೆ ಆರೋಪಿ ಸಾಗರ ಇತನು ಮೋ/ಸೈಕಲ ನಂಬರ ಕೆಎ-32 ಇಸಿ-1459 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಕಟ್ಟ ಹೊಡೆದು ಒಮ್ಮೆಲೆ ಬ್ರೇಕ ಹಾಕಿ ಮೋ/ಸೈಕಲ ಸ್ಕಿಡ ಮಾಡಿ ಮೋ/ಸೈಕಲ ಮೇಲಿಂದ ತನ್ನಿಂದ ತಾನೆ ಬಿದ್ದು ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ  ಬಂಡೆಮ್ಮ ಗಂಡ ಆನಂದರಾಯ ಮೇಲಿನಕೇರಿ ಸಾ: ದೇಗಾಂವ ಗ್ರಾಮ ಹಾವ: ಆಳಂದ ರವರು ಈಗ ಸುಮಾರು 20 ವರ್ಷಗಳ ಹಿಂದೆ ಇದೆ ಗ್ರಾಮದ ಆನಂದರಾಯ ತಂದೆ ರುಕ್ಕಪ್ಪ ಮೇಲಿನಕೇರಿ ಎಂಬುವವರೊಂದಿಗೆ ಪ್ರೀತಿಸಿ ಮದುವೆಯಾಗಿರುತ್ತೇನೆ. ಮದುವೆಯಾದ ಸುಮಾರು 7-8 ವರ್ಷಗಳವರೆಗೆ ನನ್ನ ಗಂಡನು ತನ್ನೊಂದಿಗೆ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಅದೇ ವೇಳೆಯಲ್ಲಿ ನನಗೆ ಒಂದು ಗಂಡು ಮತ್ತು ಹೆಣ್ಣುಮಗು ಹುಟ್ಟಿರುತ್ತದೆ. ನಂತರ ನನಗೆ ತಮ್ಮೊಂದಿಗೆ ಇಟ್ಟುಕೊಳ್ಳದೆ ಬೇರೆ ಮನೆ ಮಾಡಿಕೊಂಡು ಇರು ಅಂತಾ ನನ್ನೊಂದಿಗೆ ಜಗಳ ಮಾಡುತ್ತಾ ಇದ್ದುದ್ದರಿಂದ ನಾನು ಬೇರೆ ಮನೆ ಮಾಡಿಕೊಂಡು ದೇಗಾಂವ ಗ್ರಾಮದಲ್ಲಿಯೇ ಇದ್ದು ಈಗ 2007 ನೇ ಸಾಲಿನಿಂದ ಆಳಂದ ಪಟ್ಟಣದ ಭೀಮನಗರ ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಂತಾ ಕೆಲಸ ಮಾಡುತ್ತಿದ್ದರಿಂದ ನನ್ನ ಎರಡು ಮಕ್ಕಳಾದ ಅವಿನಾಶ್ ಮತ್ತು ಅಶ್ವಿನಿ ಇವರುಗಳೊಂದಿಗೆ ಆಳಂದದಲ್ಲಿ ಮನೆ ಮಾಡಿಕೊಂಡು ಇರುತ್ತಿದ್ದೆನೆ. ನನ್ನ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಹಾಗು ನನ್ನ ಜೀವನ ಸಾಗಿಸಲು ನನಗೆ ಕಷ್ಟವಾಗುತ್ತಿದ್ದರಿಂದ ಹಣದ ಅವಶ್ಯಕತೆ ಇರುವುದರಿಂದ ನನ್ನ ಗಂಡನಿಗೆ ತನ್ನ ಆಸ್ತಿಯಲ್ಲಿ ನನ್ನ ಪಾಲಿಗೆ ಬರಬೇಕಾದ ಪಾಲು ಕೊಡು ಅಥವಾ ನಮ್ಮನ್ನು ನೋಡಿಕೊ ಅಂತಾ ಆಗಾಗ ಕೇಳುತ್ತಿರುವಾಗ ಅದಕ್ಕೆ ಅವರು ಒಪ್ಪದೇ ನನಗೆ ವಿನಾಃಕಾರಣವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು. ದಿನಾಂಕ 18/07/2014 ರಂದು ನನ್ನ ಗಂಡನಾದ ಆನಂದರಾಯ ಇವರು ತಮ್ಮ ಹೊಲ ಸರ್ವೆ ನಂ. 36 ಹಿಸ್ಸಾ 10 (ಆ) ರಲ್ಲಿ ಕೆಲಸ ಮಾಡುತ್ತಿರುವಾಗ ನಾನು ಅಲ್ಲಿಗೆ ಹೋಗಿ ಅವರಿಗೆ ಈ ಮೇಲಿನಂತೆ ಆಸ್ತಿಯಲ್ಲಿ ಪಾಲು ಕೊಡು ಅಂತಾ ಕೇಳುತ್ತಿರುವಾಗ ನನಗೆ ಏ ರಂಡಿ ಬೋಸಡಿ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 229/2014 ಕಲಂ. 87 ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ 27-07-2014 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ ಮಾರಿಕ್ಯಾಂಪ್ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ. ಕಾರಟಿ ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 7 ಜನ ಆರೋಪಿತರನ್ನು ಹಿಡಿದುಕೊಂಡು ಸಿಕ್ಕಿ ಬಿದ್ದ ಆರೋಪಿತರಿಂದ ಇಸ್ಪೀಟು ಜೂಜಾಟದ ಸಾಮಗ್ರಿಗಳು ಹಾಗೂ ನಗದು ಹಣ ಒಟ್ಟು ರೂ-6,150=00 ಗಳನ್ನು ವಶ ಪಡಿಸಿಕೊಂಡು ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 68/2014 ಕಲಂ. 354, 420 ಐ.ಪಿ.ಸಿ:.
ದಿನಾಂಕ 27-07-2014 ರಂದು ಮಧ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರರಾದ  ಶ್ರೀ ರಾಜೇಶ ತಂದೆ ಸೋಮಪ್ಪ ಅಂಗಡಿ, ವಯಸ್ಸು 40 ವರ್ಷ, ಜಾ: ಲಿಂಗಾಯತ, ಉ: ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, (ಸ್ವಾಭಿಮಾನಿ ಬಣ), ವಾರ್ಡ್ ನಂ. 21, ಮುರಾಹರಿನಗರ, ಬೈಪಾಸ್ ರೋಡ್, ಅಂಬೇಡ್ಕರ್ ನಗರ ವೃತ್ತ, ಗಂಗಾವತಿ-583 227, ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ತಾವರಗೇರಾ ಗ್ರಾಮದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಕಳೆದ ಹಲವಾರು ತಿಂಗಳಿನಿಂದ ಗ್ರಾಮದ ಸಾರ್ವಜನಿಕರನ್ನು ಹಾಗೂ ಮುಗ್ದರನ್ನು ಮೂಡನಂಬಿಕೆಯಡಿಯಲ್ಲಿ ವಂಚಿಸಿ ಅವರಿಂದ ಹಣ ಲೂಟಿಮಾಡುವುದಲ್ಲದೇ ಮಾರಣಾಂತಿಕ ಕಾಯಲೆಗಳಾದ ಕ್ಯಾನ್ಸರ್ ಹಾಗೂ ಏಡ್ಸ್ ರೋಗಗಳನ್ನು ಗುಣಪಡಿಸುವುದಾಗಿ ಹೇಳಿ ಕತ್ತೆ ಲದ್ದಿ ಹಾಗೂ ನಾಯಿಯ ಲದ್ದಿಯನ್ನು ಒಣಗಿಸಿ ದಿವ್ಯ ಔಷಧಿ ಎಂದು ರೋಗಿಗಳಿಗೆ ನೀಡಿ ಸಾವಿರಾರು ರೂ ಗಳನ್ನು ಪಡೆಯುತ್ತಿದ್ದಾನೆ.ಅಲ್ಲದೇ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಹೊತ್ತು ಬರುವ ಮಹಿಳೆಯರಿಗೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಾಗಿ ನಂಬಿಸಿ ಪೂಜೆಯ ಹೆಸರಿನಲ್ಲಿ ಅವರನ್ನು ತನ್ನ ಕಾಮ ತೃಷೆಗಾಗಿ ಬಳಸಿಕೊಳ್ಳುತ್ತಿದ್ದಾನೆ. ಇದನ್ನು ಮಹಿಳೆಯರು ಪ್ರಶ್ನಿಸಲು ಮುಂದಾದರೆ ನನ್ನ ಮೈಮೇಲೆ ದೇವಿ ಬರುತ್ತಾಳೆ. ಏನಾದರೂ ಮಾಡಿದರೇ ನಿನ್ನ ಪ್ರಾಣಕ್ಕೆ ಸಂಚಕಾರವಿದೆ ಎಂದು ಹೆದರಿಸುತ್ತಿದ್ದಾನೆ. ಇವರ ಈ ಕೃತ್ಯದಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ನೂರಾರು ಅಮಾಯಕ ಹೆಣ್ಣು ಮಕ್ಕಳು ಜೀವನವು ಹಾಳಾಗಿದೆ ಮತ್ತು ಹಾಳಾಗುತ್ತಿದೆ. ಕಾರಣ ತಾವು ಕೂಡಲೇ ವಂಚಕ ಹಾಗೂ ಕಾಮುಕ ಯಂಕಣ್ಣನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೆವೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 142/2014 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ. 27-072014 ರಂದು 12-00 ಪಿ.ಎಂ.ಕ್ಕೆ ಫಿರ್ಯಾದಿದಾರರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮೋಟಾರ ಸೈಕಲ್ ನಂ. ಕೆ.ಎ.37/ಕ್ಯೂ.6127 ನೇದ್ದನ್ನು ಸಂಜಯಕುಮಾರ ಸಾ. ಗಿಣಿಗೇರಾ ಇವರು ಮೋ. ಸೈ. ಹಿಂದೆ ಮಹೇಶಕುಮಾರ ಸಾ. ಗಿಣಿಗೇರಾ ಇವರನ್ನು ಹಿಂದೆ ಕೂಡಿಸಿಕೊಂಡು ಗಂಗಾವತಿಯಿಂದ ಗಿಣಿಗೇರಾಕ್ಕೆ ಹೋಗುತ್ತಿರುವಾಗ ಗಂಗಾವತಿ ಹುಲಗಿ ರಸ್ತೆಯ ಮೇಲೆ ಹೊಸಬಂಡಿಹರ್ಲಾಪುರ ಮತ್ತು ಹಳೆ ಬಂಡಿಹರ್ಲಾಪುರ ಮದ್ಯದಲ್ಲಿ ಬಾಸ್ಕರರಾವ್ ಇವರ ಜಮೀನ ಹತ್ತಿರ ಮೋಟಾರ ಸೈಕಲ್‌ನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಅಡ್ಡಾದಿಡ್ಡ  ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಒಮ್ಮೇಲೆ ಸ್ಕಿಡ ಮಾಡಿಕೊಂಡು ಮೋಟಾರ ಸೈಕಲ್ ಸಮೇತ ಬಿದ್ದು ಅಪಘಾತ ಮಾಡಿಕೊಂಡಿದ್ದು, ಮೋಟಾರ ಸೈಕಲ್ ಸವಾರ ಸಂಜಯಕುಮಾರ ಮತ್ತು ಹಿಂದೆ ಕುಳಿತ ಮಹೇಶಕುಮಾರ ಇವರಿಗೆ ಸಾದಾ ಮತ್ತು ಬಾರಿ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 171/2014 ಕಲಂ. 143, 147, 323, 397, 307, 504, 506 ಸಹಿತ 149  ಐ.ಪಿ.ಸಿ:.
ಇಂದು ದಿನಾಂಕ 27-07-2014 ರಂದು ರಾತ್ರಿ 10-30 ಗಂಟೆಗೆ ಶ್ರೀ ಮುಕ್ಕಣ್ಣ ತಂದೆ ಬಸಪ್ಪ ಕತ್ತಿ ವಯ 29 ವರ್ಷ ಜಿಲ್ಲಾ ವರದಿಗಾರರು ಪಬ್ಲಿಕ್ ಟಿ.ವಿ. ಕೊಪ್ಪಳ ಸಾ: ಹಿರೇಜಂತಕಲ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನ ಪೂಜಾರಿ ಯಂಕಣ್ಣ ಎಂಬುವವರು ಹಲವಾರು ದಿನಗಳಿಂದ ಗ್ರಾಮದ ಹಾಗೂ ಅಕ್ಕ-ಪಕ್ಕದ ಗ್ರಾಮ ದಸಾರ್ವಜನಿಕರನ್ನು ಹಾಗೂ ಮುಗ್ದರನ್ನು,  ಮಹಿಳೆಯರನ್ನು ಮೂಡನಂಬಿಕೆಯಿಂದ ನಂಬಿಸಿ ಅವರಿಗೆ ವಂಚಿಸಿ  ಮಾರಕ ಕಾಯಿಲೆಗಳಾದ ಏಡ್ಸ್, ಕ್ಯಾನ್ಸರ್ ಇನ್ನು ಮುಂತಾದ ರೋಗಗಳನ್ನು ಗುಣಪಡಿಸುವುದಾಗಿ ಹೇಳಿ ಅವರಿಗೆ ಹಂದಿ, ಕತ್ತೆ, ನಾಯಿ ಲದ್ದಿಯನ್ನು ಒಣಗಿಸಿ ಅದನ್ನು ಮಾರಕ ರೊಗಕ್ಕೆ ತುತ್ತಾದವರಿಗೆ ಔಷಧಿ ಎಂದು ನಂಬಿಸಿ ನೀಡುತ್ತಾ ಸಾವಿರಾರು ರೂಪಾಯಿಗಳನ್ನು ಪಡೆಯುತ್ತಿದ್ದು ಮತ್ತು ದೇವಸ್ಥಾನಕ್ಕೆ ಬರುವ ಮಹಿಳೆಯರು, ಯುವತಿಯರಿಗೆ ಅವರ ಸಮಸ್ಯೆಗಳನ್ನು ಪೂಜೆ ಮುಖಾಂತರ ಗುಣಪಡಿಸುವುದಾಗಿ ಮತ್ತು ಪರಿಹಾರ ಒದಗಿಸುವುದಾಗಿ ನಂಬಿಸಿ ಅವರಿಗೆ ಮೋಸದಿಂದ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಲೈಂಗಿಕ ದೌರ್ಜನ್ಯ ನೀಡುತ್ತಿರುವ ಬಗ್ಗೆ  ಪಬ್ಲಿಕ್ ಟಿ.ವಿ. ಯಲ್ಲಿ ವರದಿ ಮಾಡಿದ್ದು, ಸದರಿ ವರದಿಗೆ ಸಂಬಂಧಿಸಿದಂತೆ ಗ್ರಾಮದಲ್ಲಿಯ ಬೆಳವಣಿಗೆ ಕುರಿತು ಇಂದು ದಿನಾಂಕ 27-07-2014 ರಂದು ಸಂಜೆ 4-00 ಗಂಟೆ ಸುಮಾರಿಗೆ ತಾವರಗೇರಾ ಗ್ರಾಮದಲ್ಲಿ ಚಿತ್ರಿಕರಿಸುತ್ತಿರುವಾಗ ಬನಶಂಕರಿ ದೇವಸ್ಥಾನದ ಯಂಕಣ್ಣ ಪೂಜಾರಿಯ ಬೆಂಬಲಿಗರು, ದೇವಸ್ಥಾನದ ಸಮಸಿತಿಯ ಸದಸ್ಯರು ಹಾಗೂ ಇನ್ನಿತರರು ಅಕ್ರಮಕೂಟ ರಚಿಸಿಕೊಂಡು ಬಂದು ತಮ್ಮ ಮೇಲೆ ಹಲ್ಲೆ ಮಾಡಿ ತಮ್ಮ ಹತ್ತಿರ ಇದ್ದ ಕ್ಯಾಮ, ಮೈಕ್, ಮೈಕ್, ಕೇಬಲ್, ಕ್ಯಾಮರ ಬ್ಯಾಟಿ, ಮೊಬೈಲ್, ಪರ್ಸನಲ್ಲಿದ್ದ ಹಣ ರೂ. 3,200-00 ಹಾಗೂ 10 ಗ್ರಾಂನ ಬಂಗಾರದ ಸರವನ್ನು ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ಏ ಸೂಳೆ ಮಕ್ಕಳೆ ನೀನು ನಮ್ಮ ಪೂಜಾರಿಯ ಬಗ್ಗೆ ಏನು ಸುದ್ದಿ  ಪ್ರಸಾರ ಮಾಡುತ್ತೀರಲೇ  ನಿಮ್ಮನ್ನು ಮತ್ತು ನಿಮ್ಮಲ್ಲಿರುವ ವಸ್ತುಗಳ ಸಮೇತ ಇಲ್ಲಿಯೇ ಜೀವಂತವಾಗಿ ಸುಟ್ಟು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಕೈಯಿಂದ ಮತ್ತು ಕಾಲಿನಿಂದ ಹೊಡಿ-ಬಡಿ ಮಾಡಿರುತ್ತಾರೆ ಅವರಿಂದ ಜೀವ ಭಯದಿಂದ ತಪ್ಪಿಸಿಕೊಂಡು ಬಂದಿರುತ್ತೇವೆ.  ಸದರಿ  ಯಂಕಣ್ಣ ಸ್ವಾಮಿ ಹಾಗೂ ಆತನ ಸಂಬಂಧಿಕರು, ಬೆಂಗಲಿಗರು, ಬನಶಂಕರಿ ದೇವಸ್ಥಾನದ ಸಮಿತಿಯವರು ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ  ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 69/2014 ಕಲಂ. 143, 147, 148, 354, 504, 506(2) ಸಹಿತ 149  ಐ.ಪಿ.ಸಿ:.
ಇಂದು ದಿನಾಂಕ 27-07-2014 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶಂಕರ ತಂದೆ ನ್ಯಾಮಯ್ಯ ಇಲ್ಲೂರು, ವಯಸ್ಸು 40 ವರ್ಷ, ಜಾ: ವೈಶ್ಯ, ಉ: ಕಿರಾಣಿ ವ್ಯಾಪಾರ, ಸಾ: ತಾವರಗೇರಾ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ತಾವರಗೇರಾದ 1) ಮಂಜುನಾಥ ತಂದೆ ಶ್ಯಾಮಣ್ಣ ಕಲಾಲ 2) ಶ್ಯಾಮೀದ್ ಸಾಬ ತಂದೆ ಗುಡುಸಾಬ ಮೆಣೇದಾಳ ಹಾಗೂ 3) ಬಸವರಾಜ ತಂದೆ ಮರಿಯಪ್ಪ ಬುನ್ನಟ್ಟಿ ಸಾ:ಸಿದ್ದಾಪುರ ಇವರುಗಳ ನೀಡಿದ ಸುಳ್ಳು ಸುದ್ಧಿಯನ್ನು ಯಾವುದೇ ಸತ್ಯಾಸತ್ಯತೆ ತನಿಖೆ ಮಾಡದೇ ಪಬ್ಲಿಕ್ ಟಿ.ವಿ.ಯಲ್ಲಿ ನಿರೂಪಕಿಯಾದ 4) ರಾಧಾ ಹಿರೇಗೌಡರ ಇವರು ತಾವರಗೇರಾ ಗ್ರಾಮದ ನಾಗರಿಕರೆಲ್ಲ ಪುರುಷತ್ವ ಇಲ್ಲದವರು ಎಂದು ಸಂಭೊದಿಸಿದ್ದಲ್ಲದೇ ಟಚಿಂಗ್ ಸ್ವಾಮಿ ಹತ್ತಿರ ನಿಮ್ಮ ಹೆಣ್ಣು ಮಕ್ಕಳನ್ನು ಕಳಿಸುತ್ತಿರಲ್ಲಾ ನಿಮ್ಮಲ್ಲಿ ಯಾರಿಗೂ ಪುರುಷತ್ವ ಇಲ್ಲವೇ ಎಂಬ ಹೇಳಿಕೆಯನ್ನು ಸಮಸ್ತ ಕನ್ನಡಿಗರು ನೋಡುವಂತಹ ದೃಶ್ಯ ಮಾಧ್ಯಮ ಪಬ್ಲಿಕ್ ಟಿ.ವಿ.ಯಲ್ಲಿ ಹೇಳಿಕೆ ನೀಡಿ ಗ್ರಾಮದವರ ಧಾರ್ಮಿಕ ಭಾವನೆಗಳನ್ನು ನಿಂದಿಸಿರುತ್ತಾರೆ (5) ಮುಕ್ಕಣ್ಣ ಕತ್ತಿ ಜಿಲ್ಲಾ ವರದಿಗಾರರು, ಪಬ್ಲಿಕ್ ಟಿ.ವಿ. ಇವರು ತಮ್ಮ ಓಮ್ನಿ ವಾಹನ ಸಂ. ಕೆ.ಎ.37/ಎಂ-1668 ನೇದ್ದರಲ್ಲಿ ತಮ್ಮೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಪ್ಪಳದ ಜಿಲ್ಲಾಧ್ಯಕ್ಷರಾದ (6) ರಾಜೇಶ ಅಂಗಡಿ ಹಾಗೂ (7) ಮಂಜುನಾಥ ಜಂಗರ್ (8) ಹೊನ್ನಪ್ಪ ನಾಯ್ಕ (9) ನಾಗರಾಜ ಗೂಗಿಬಂಡಿ ಹಾಗೂ ಇನ್ನಿತರ ಸಂಘಟನೆಗಳೊಂದಿಗೆ ಸೇರಿ ತಾವರಗೇರಾ ಠಾಣೆಗೆ ಆಗಮಿಸಿ ಯಂಕಣ್ಣ ಇವರ ಮೇಲೆ ‘’ಟಚಿಂಗ್ ಸ್ವಾಮಿ’’ ಎಂಬ ಕಾರ್ಯಕ್ರಮದಲ್ಲಿ ತೋರಿಸಿ ಉದ್ದೆಪೂರ್ವಕವಾಗಿ ಪ್ರಕರಣದ ದಾಖಲಿಸಿರುತ್ತಾರೆ. ಅಲ್ಲದೇ ಶ್ರಿ ಬನಶಂಕರಿ ದೇವಸ್ಥಾನದ ಮುಂದೆ ಹೋಗಿ ಅಲ್ಲಿ ಧರಣಿ ಕುಳಿತು ರಾಜೇಶ ಅಂಗಡಿ ನಾಗರಾಜ ಗೂಗಿಬಂಡಿ ಮತ್ತು ಹೊನ್ನಪ್ಪ ನಾಯಕ ಇವರು ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನು ದೇವಸ್ಥಾನದ ಮೇಲೆ ಎಸೆದಿರುತ್ತಾರೆ ಗುಡಿಗೆ ಬಂದ ಹೆಣ್ಣುಮಕ್ಕಳಿಗೆ ಆವಾಚ್ಯವಾಗಿ ಬೈದು ಅವರ ಕೈಹಿಡಿದು ಎಳೆದಾಡಿ ಹೊರಗೆ ಹಾಕಿರುತ್ತಾರೆ. ಅಲ್ಲದೇ ತಮ್ಮ ಹಿಂದೆ ಪಬ್ಲಿಕ್ ಟಿ.ವಿ. ಇದೆ ಅಂತಾ ಅನ್ನುತ್ತಾ ಸಾರ್ವಜನಿಕರಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಮಂಜುನಾಥ ಜಂಗರ್ ಇವನು ತನ್ನ ಹತ್ತಿರವಿದ್ದ ಚಾಕುವನ್ನು ತೋರಿಸಿ ಹೆದರಿಸಿ ಸಾಯಿಸುತ್ತೆನೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
6) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 69/2014 ಕಲಂ 341, 354, 504 ಐ.ಪಿ.ಸಿ ಮತ್ತು 8 , 10 ಪೋಕ್ಸೋ ಕಾಯ್ದೆ-2012 ಮತ್ತು 3 (1) (11) ಎಸ್.ಸಿ.ಎಸ್.ಟಿ ಯ್ಯಾಕ್ಟ್ -1989.
ದಿನಾಂಕ-27-07-2014 ರಂದು ರಾತ್ರಿ 10-45 ಗಂಟೆಯ ಸುಮಾರಿಗೆ ಪಿರ್ಯಾದಿದಾರಳಾದ ವಯಾ-17 ವರ್ಷ ಇವರು ಠಾಣೆಯಲ್ಲಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಗಂಗಾವತಿಯ ಕಾಲೇಜಿನಲ್ಲಿ  ಪಿ.ಯು.ಸಿ ವಿಧ್ಯಾಭ್ಯಾಸ ಮಾಡುತ್ತಿದ್ದು ಪ್ರತಿ ದಿನ ಹೋಗುವಂತೆ ದಿನಾಂಕ-26-07-2014 ರಂದು ಕಾಲೇಜೀಗೆ ಹೋಗಿ ವಾಪಾಸ ಊರಿಗೆ ಬರುತ್ತಿರುವಾಗ್ಗೆ ಉಳೆನೂರ ಗ್ರಾಮದ ಸಣ್ಣೆಪ್ಪ ತಂದಿ ಅಯ್ಯಪ್ಪ ಕಾರಟಗಿ ಮತ್ತು ಕಕ್ಕರಗೊಳ ಗ್ರಾಮದ ಶಿವಪ್ಪ ತಂದಿ ವೀರುಪಣ್ಣ ಗಡಗಿ ಇವರು ಪಿರ್ಯಾದಿದಾರರ ಹಿಂದೆ ಬೆನ್ನೂ ಹತ್ತಿ ಬಂದು ಪಿರ್ಯಾದಿದಾರರು ಬಸ್ಸು ಹತ್ತುತ್ತಿರುವಾಗ್ಗೆ ಇಬ್ಬರು ಆಪಾದಿತರು ಬಂದು ಪಿರ್ಯಾದಿದಾರರ ಮೈ ಮುಟ್ಟಿ ಹಿಂದೆ ಸರಿಸಿ ತಾವು ಬಸ್ಸು ಹತ್ತಿದರು ನಂತರ ಬಸ್ಸಿನಲ್ಲಿ ಪಿರ್ಯಾದಿದಾರರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ ಅವರನ್ನು ಉದ್ದೇಶಿಸಿ ಬೇರೆಯವರ ಮೇಲಾಸಿ ಅಶ್ಲೀಲ ಶಬ್ದಗಳನ್ನು ಮಾತನಾಡಿ ನಂತರ ಸಿದ್ದಾಪೂರ ಗ್ರಾಮದಲ್ಲಿ ಪಿರ್ಯಾದಿದಾರರು ಬಸ್ಸನ್ನು ಇಳಿದು ತಮ್ಮ ಊರಿಗೆ ಹೋಗುವ ಖಾಸಗಿ ವಾಹನವನ್ನು ಹತ್ತಲು ಹೋಗುತ್ತಿರುವಾಗ್ಗೆ ಆಪಾದಿತರು ಇಬ್ಬರು ಬಂದು ಪಿರ್ಯಾದಿದಾರನ್ನು ಮಾನಭಂಗ ಮಾಡುವ ಉದ್ದೇಶದಿಂದ ತಡೆದು ನಿಲ್ಲಿಸಿ ಕೈ ಹಿಡಿದು ಎಳೆದಾಡಿ ಅಶ್ಲೀಲವಾಗಿ ಮಾತನಾಡಿದ್ದು ಮತ್ತು ಕಕ್ಕರಗೊಳ ಗ್ರಾಮದ ಶಿವಪ್ಪ ತಂದಿ ವೀರುಪಣ್ಣ ಗಡಗಿ ಇತನು ಪಿರ್ಯಾದಿದಾರರಿಗೆ ಜಾತಿ ನಿಂದನೆ ಮಾಡಿ ಬೈದಿರುತ್ತಾನೆ ನಂತರ ಅಲ್ಲಿ ಇದ್ದ ಪಿರ್ಯಾದಿದಾರರ ಸಂಬಂದಿಕಳು ಮತ್ತು ಇತರೆ ಜನರು ಸದರಿ ಆಪಾದಿತರನ್ನು ಬೈದು ಕಳುಹಿಸಿರುತ್ತಾರೆ ಈ ಬಗ್ಗೆ ಪಿರ್ಯಾದಿದಾರರು ತಮ್ಮ ತಾಯಿಗೆ ತಿಳಿಸಿ ಅವರ ತಾಯಿಯು ತಮ್ಮ ಸಂಬಂದಿಕರಿಗೆ ಮತ್ತು ಅವರ ಹಿರಿಯರಿಗೆ ತಿಳಿಸಿ ಇಂದು ಠಾಣೆಗೆ ಬಂದು ಪಿರ್ಯಾದಿ ನೀಡಿದ್ದು ಆಪಾದಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಬರೆದುಕೊಟ್ಟ ಪಿರ್ಯಾದಿಯನ್ನು ಪಡೆದುಕೊಂಡು ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.