Police Bhavan Kalaburagi

Police Bhavan Kalaburagi

Friday, August 10, 2018

BIDAR DISTRICT DAILY CRIME UPDATE 10-08-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-08-2018

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 15/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಆನಂದ ತಂದೆ ಬಕ್ಕಪ್ಪಾ ವಾಲಿಕರ, ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಬೆಂಕಿಪಳ್ಳಿ, ಸದ್ಯ: ಚಿಟಗುಪ್ಪಾ ರವರ ತಂದೆಯಾದ ಬಕ್ಕಪ್ಪಾ ತಂದೆ ಪಾಂಡಪ್ಪಾ ವಾಲಿಕರ ವಯ: 65 ವರ್ಷ ರವರ ಹೆಸರಿಗೆ ಬೆಂಕಿಪಳ್ಳಿ ಹೊಲ ಸರ್ವೆ ನಂ. 11/4 ನೇದ್ದರಲ್ಲಿ 2 ಎಕ್ಕರೆ 10 ಗಂಟೆ  ಜಮೀನು ಇದ್ದು, ಸದರಿ ಜಮೀನು ಫಿರ್ಯಾದಿಯವರ ತಂದೆಯವರು ಸಾಗುವಳಿ ಮಾಡಿಕೊಂಡಿರುತ್ತಾರೆ, ಸದರಿ ಜಮೀನು ಸಾಗುವಳಿ ಮಾಡಲು ಅವರು ಎಸ್.ಬಿ.ಐ ಚಿಂಚೋಳಿ ಬ್ಯಾಂಕಿನಲ್ಲಿ 50000/- ರೂ. ಮತ್ತು ಐನಾಪೂರ ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ 20,000/- ರೂ. ಸಾಲ ಮಾಡಿರುತ್ತಾರೆ, ಸದರಿ ಜಮೀನಿನಲ್ಲಿ ಈ ವರ್ಷ ಹೊಲದಲ್ಲಿನ ಬೆಳೆಯು ಮಳೆ ಬಾರದ ಕಾರಣ ಬೆಳೆಗಳು ಒಣಗುತ್ತಿದ್ದು, ಬೇಳೆ ಬರದೆ ಇದ್ದರೆ ಸಾಲ ತಿರಿಸುವುದು ಹೇಗೆ ಅಂತಾ ಗೋಳು ಹಾಕುತ್ತಿದ್ದರು, ಹೀಗಿರುವಾಗ ದಿನಾಂಕ 08-08-2018 ರಂದು ಫಿರ್ಯಾದಿಯವರ ತಾಯಿಯವರು  ಫಿರ್ಯಾದಿಯ ಸೊದರಮಾವನ ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡಾಗ ಫಿರ್ಯಾದಿಯವರ ತಂದೆಯು ಬ್ಯಾಂಕಿನಲ್ಲಿ ಮಾಡಿದ ಸಾಲ ತಿರಿಸುವುದು ಹೇಗೆ ಎಂದು ಚಿಂತೆ ಮಾಡಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು  ದಿನಾಂಕ 08-08-2018 ರಂದು 2300 ಗಂಟೆಯಿಂದ ದಿನಾಂಕ 09-08-2018 ರಂದು  0730 ಗಂಟೆಯ ಅವಧಿಯಲ್ಲಿ ಮನೆಯ ತಗಡದ ಕೆಳಗಿನ ಇರುವ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡ ಮೃತಪಟ್ಟಿದ್ದು, ಅವರ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.