Police Bhavan Kalaburagi

Police Bhavan Kalaburagi

Tuesday, September 15, 2020

BIDAR DISTRICT DAILY CRIME UPDATE 15-09-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-09-2020

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 126/2020 ಕಲಂ 20 (ಬಿ) (2) ಎನ್‍.ಡಿ.ಪಿ.ಎಸ್. ಕಾಯ್ದೆ :-

  ದಿನಾಂಕ 14/09/2020 ರಂದು 0900 ಗಂಟೆಗೆ ಘೋಡವಾಡಿ ಗ್ರಾಮದಲ್ಲಿ ಕೆರೆಯ ಹತ್ತಿರ ಒಬ್ಬ ವ್ಯಕ್ತಿ ಆಕ್ರಮವಾಗಿ ಗಾಂಜಾ ಮಾರಾಟ ಮಾಡಲು ತನ್ನ ಹತ್ತಿ ಗಾಂಜಾ ಇಟ್ಟುಕೊಂಡಿರುತ್ತಾನೆ ಅಂತಾ ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಘೋಡವಾಗಿ ಗ್ರಾಮಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಾದ ಗೌಸ್ ತಂದೆ ನಿಜಾಮುದ್ದಿನ್ ಶೇಕ್ ವಯ: 34 ವರ್ಷ ಇತನ ವಶದಿಂದ 3.5 ಕೆ.ಜಿ. ಗಾಂಜಾ ಅಂ.ಕಿ. 35000/- ರೂ. ಮತ್ತು ನಗದು ಹಣ 4970/-, ಒಂದು ಎಲೆಕ್ಟ್ರಾನಿಕ್  ತಕ್ಕಡಿ ಜಪ್ತಿ ಮಾಡಿಕೊಂಡು ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 78(3) ಕೆಪಿ ಕಾಯ್ದೆ :-  

 

 ದಿ: 12/09/2020 ರಂದು 1430 ಗಂಟೆಗೆ ಎಎಸ್.ಐ. ರವರು ಠಾಣೆಯಲ್ಲಿದ್ದಾಗ ಸುಂದಾಳ ಗ್ರಾಮದ ಜೈ ಭಾವನಿ ಟೆಂಟ್ ಹೌಸ ಅಂಗಡಿಯ ಎದುರು ಗಡೆ  ಒಬ್ಬ ವ್ಯೆಕ್ತಿಯು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಸುಂದಾಳ ಗ್ರಾಮದ  ಜೈ ಭಾವನಿ ಟೆಂಟ್ ಹೌಸ ಅಂಗಡಿಯ ಎದುರುಗಡೆ   ನೊಡಲಾಗಿ ಒಬ್ಬ ವ್ಯಕ್ತಿಯ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ 1/-ರೂ ಗೆ 80/-ರೂ 10 ರೂ ಗೆ 800/-ರೂ ಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚೀತ ಪಡಿಸಿಕೊಂಡು  ದಾಳಿ ಮಾಡಿ ಹಣ ಪಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೇಸರು  ಚಂದ್ರಕಾಂತ ತಂದೆ ಈರಪ್ಪಾ ವಯ-20 ವರ್ಷ ಜಾತಿ-ನೇಕರ - ಟೆಂಟ ಹೌಸನಲ್ಲಿ ಕೆಲಸ ಸಾ- ಸುಂದಾಳ ಅಂತ ತಿಳಿಸಿದ್ದು ನಂತರ ಪಂಚರ ಸಮಕ್ಷಮದಲ್ಲಿ ಅವನ ಶೋಧನೆ ಮಾಡಲು ಅವನ ಹತ್ತಿರ 3100/- ರೂಪಾಯಿ ನಗದು ಹಣ ಮತ್ತು 01 ಮೋಬಾಯಿಲ್ ಫೋನ್  ಸಿಕ್ಕಿರುತ್ತದೆ. ಹಾಗೂ ಅಂಕಿ ಸಂಖ್ಯೆ ಬರೆದ 1 ಮಟಕಾ ಚೀಟಿ , ಒಂದು ಪೆನ್ನು ಇದ್ದವು ಸದರಿಯವನು ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಅಂಕಿ ಸಂಖ್ಯೆ ಮೇಲೆ ಹಣ ಪಡೆದುಕೊಂಡು ಅದೃಷ್ಟದ ಆಟದ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿರುತ್ತಾನೆ. ಹೀಗೆ ನಗದು ಹಣ 3100/- ರೂ, 01 ಮೋಬಾಯಿಲ್ ಫೋನ್, 1 ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪುರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 63/2020 ಕಲಂ 78(3)  ಕೆ.ಪಿ ಕಾಯ್ದೆ :-

ದಿನಾಂಕ 09/09/2020 ರಂದು 1045 ಗಂಟೆಗೆ ಪಿಎಸ್ಐ ಇವರು ಠಾಣೆಯಲ್ಲಿ ಕರ್ತವ್ಯದ  ಮೇಲೆ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ  ಸಂತಪೂರ ಗ್ರಾಮದಲ್ಲಿ ಭವಾನಿ ಮಾತಾ ಮಂದಿರದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮೀ ಬಂದ ಮೇರೆಗೆ  ಸಂತಪೂರ ಭವಾನಿ ಮಾತಾ ಮಂದಿರ ಹತ್ತಿರ ಹೊಗಿ  ನೋಡಲಾಗಿ ಭವಾನಿ ಮಂದಿರದ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಒಂದು 1 ರೂಪಾಯಿಗೆ 80 ರೂ ಕೋಡುತ್ತೆನೆ. ಅಂತ   ಕೂಗುವಾಗ ಅದನ್ನು ಖಚಿತ ಪಡಿಸಿಕೊಂಡು 1200 ಗಂಟೆಗೆ ಪಂಚರ ಸಮಕ್ಷಮ ದಾಳಿಮಾಡಿ ಹಿಡಿದು ಅವರಿಗೆ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು  1) ಬಸವರಾಜ ತಂದೆ ಕಂಟೆಪ್ಪಾ ಬಿರಾದಾರ ವಯ 61 ವರ್ಷ ಜಾತಿ ಲಿಂಗಾಯತ ಉ; ಬಟ್ಟೆ ಅಂಗಡಿಯಲ್ಲಿ ಕೆಲಸ ಸಾ; ಜೊನ್ನಿಕೇರಿ ಸದ್ಯ ಜೋಜನಾ 2) ಶೇಖರ ತಂದೆ ಕಲ್ಲಪ್ಪಾ ಭುರೆ ವಯ 35 ವರ್ಷ ಜಾತಿ ಲಿಂಗಾಯತ ಉ; ಕೂಲಿ ಕೆಲಸ ಸಾ; ಗುಡಪಳ್ಳಿ ಅಂತ ತಿಳಿಸಿದು ಇವರಿಗೆ ಅಂಗ ಝಡ್ತಿ ಮಾಡಿ ನೋಡಲು ಬಸವರಾಜ ಈತನ ಹತ್ತಿರ ನಗದು ಹಣ 460-/ ರೂ ಹಾಗು ಒಂದು ಬಾಲ ಪೇನು ಹಾಗು ಒಂದು ಮಟಕಾ ಚಿಟಿ ಸಿಕ್ಕಿದ್ದು ಶೇಖರ ಈತನ ಹತ್ತಿರ ನಗದು ಹಣ 500-/ ರೂ ಹಾಗು ಒಂದು ಬಾಲ ಪೇನು ಹಾಗು ಒಂದು ಮಟಕಾ ಚಿಟಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪುರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 64/2020 ಕಲಂ 78(3)  ಕೆ.ಪಿ ಕಾಯ್ದೆ :-

ದಿನಾಂಕ 09/09/2020 ರಂದು 1230 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ  ಸಂತಪೂರ ಗ್ರಾಮದಲ್ಲಿ ಬಸವೆಶ್ವರ ವೃತದ ಹತ್ತಿರ ಇರುವ ಪಿ.ಡ್ಲೂ.ಡಿ ಕಚೇರಿಯ ಮುಂದೆ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರ್ಬೂ ವ್ಯಕ್ತಿ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ   ಸಿಬ್ಬಂದಿಯೊಂದಿಗೆ ಬಸವೇಶ್ವರ ಚೌಕ ಹತ್ತಿರ ಹೋಗಿ ನೋಡಲಾಗಿ ಪಿ,ಡಬ್ಲೂ,ಡಿ ಕಛೇರಿಯ ಮುಂದೆ ಇಬ್ಬರೂ ವ್ಯಕ್ತಿಯು ಸಾರ್ವಜನಿಕರಿಗೆ ಒಂದು 1 ರೂಪಾಯಿಗೆ 80 ರೂ ಕೋಡುತ್ತೆನೆ. ಅಂತ ಕನ್ನಡ ಭಾಷೆಯಲ್ಲಿ ಕೂಗುವಾಗ ಅದನ್ನು ಖಚಿತ ಪಡಿಸಿಕೊಂಡು 1300 ಗಂಟೆಗೆ ಪಂಚರ ಸಮಕ್ಷಮ ದಾಳಿಮಾಡಿ ಹಿಡಿದು ಅವರಿಗೆ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು   1) ಸೂರ್ಯಕಂತ ತಂದೆ ವಿಶ್ವನಥ ಬಿರಾದಾರ ವ/ 50 ವರ್ಷ ಜಾಲಿಂಗಾಯತ ಉ/ ಒಕ್ಕಲುತನ ಸಾ/ ಸಂತಪೂರ ಅಂತ ತಿಳಿಸಿದು ಇವನಿಗೆ ಅಂಗ ಝಡ್ತಿ ಮಾಡಿ ನೋಡಲು ಅವನ ಹತ್ತಿರ ನಗದು ಹಣ  550-/ ರೂ ಹಾಗು ಒಂದು ಬಾಲ ಪೇನು ಹಾಗು ಒಂದು ಮಟಕಾ ಚಿಟಿ ಸಿಕ್ಕಿದ್ದು ಇನ್ನೋಬ ವ್ಯೆಕ್ತಿಗೆ ವಿಚಾರಿಸಿದ್ದು ಅವನು ತನ್ನ ಹೆಸರು 2) ರಾಜಕುಮಾರ ತಂದೆ ಚನ್ನಬಸಪ್ಪಾ ಸೂಲಗುಂಡೆ ವ. 43 ವರ್ಷ ಜಾ/ ಲಿಂಗಾಯತ ಉ/ ಕೂಲಿ  ಸಾ/ ಸಂತಪೂರ ಅಂತ ತಿಳಿಸಿದು ಇವನಿಗೆ ಅಂಗ ಝಡ್ತಿ ಮಾಡಿ ನೋಡಲು ಅವನ ಹತ್ತಿರ ನಗದು ಹಣ  500-/ ರೂ ಹಾಗು ಒಂದು ಬಾಲ ಪೇನು ಹಾಗು ಒಂದು ಮಟಕಾ ಚಿಟಿ ಸಿಕ್ಕಿದ್ದು ಅವಗಳು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 84/2020 ಕಲಂ 323, 324, 504, 506, 302, 149 ಐಪಿಸಿ  :-

 

ದಿನಾಂಕ 14/09/2020 ರಂದು 23:30 ಗಂಟೆಗೆ ಫಿರ್ಯಾದಿ ದತ್ತು ತಂದೆ ಬಾಬುರಾವ ಇಲ್ಲಾಳೆ ವಯ-70 ವರ್ಷ ಸಾ|| ಉಜಳಂಬ ಗ್ರಾಮ ಠಾಣೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ,  ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇರುತ್ತಾಳೆ.   ಮೂರು ಜನ ಗಂಡು ಮಕ್ಕಳು ಈಗಾಗಲೆ ಮೃತಪಟ್ಟಿದ್ದು ಇರುತ್ತದೆ.   ಇನ್ನೋಬ್ಬ ಮಗನಾದ ಭರತ ತಂದೆ ದತ್ತು ಇಲ್ಲಾಳೆ ವಯ-38 ವರ್ಷ ಇವನ ಮದುವೆಯು ಸುಮಾರು ವರ್ಷಗಳ ಗ್ರಾಮದ ಮುರಳಿಧರ ತಂದೆ ಸಂಭಾಜಿ ಚವರೆ ಇವರ ಮಗಳಾದ ಬಬಿತಾ ಇವಳ ಜೊತೆಯಾಗಿದ್ದು ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ.   ಭರತ ಇವನು ತನ್ನ ಹೆಂಡತಿ ಮಕ್ಕಳೊಂದಿಗೆ   ವಾಸವಾಗಿದ್ದು ಭರತ ಈತನು ತನ್ನ ಹೆಂಡತಿಯ ಜೊತೆ ಆಗಾಗ ತಕರಾರು ಮಾಡುತ್ತಿದ್ದನು. ಇತ್ತಿಚೆಗೆ ಸುಮಾರು 8 ದಿವಸಗಳಿಂದ  ಭರತ ಇವನು ತನ್ನ ಹೆಂಡತಿ ಬಬಿತಾ ಇವಳಿಗೆ  ಹೊಲದಲ್ಲಿ ಕೆಲಸವಿದೆ ಹೊಲಕ್ಕೆ ಹೋಗಿ ನಾವಿಬ್ಬರು ಕೆಲಸ ಮಾಡೋಣ ನಡಿ ಅಂತಾ ಹೇಳಿದಾಗ ಅವಳು ನಾನು ಹೊಲಕ್ಕೆ ಬರುವುದಿಲ್ಲ ಅಂತಾ ಹೇಳಿ ಗಂಡ ಹೆಂಡತಿ ಜಗಳ ಮಾಡಿಕೊಂಡಾಗ ಈ ವಿಷಯವನ್ನು ಬಬಿತಾ ಇವಳು ತನ್ನ ತವರು ಮನೆಯವರಿಗೆ ಹೇಳಿದಾಗ ಅವಳ ತಂದೆ ಮುರಳಿಧರ ತಂದೆ ಸಂಭಾಜಿ ಚವರೆ, ತಮ್ಮಂದಿರಾದ ಸಿದ್ದೇಶ್ವರ ತಂದೆ ಮುರಳಿ ಚವರೆ ಮತ್ತು ಮಹಾಧವ ತಂದೆ ಮುರಳಿ ಚವರೆ ಇವರು ನಮ್ಮ ಮನೆಗೆ ಬಂದು ನಮ್ಮ ಮಗ ಭರತನ ಜೊತೆ ಜಗಳ ಮಾಡಿ ನೀನು ನಮ್ಮ ಮಗಳ ಜೊತೆ ತಕರಾರು ಮಾಡಿದರೆ ನಿನಗೆ ಖತಂ ಮಾಡುತ್ತೇವೆ ಅಂತಾ ಹೇಳಿ ತಮ್ಮ ಮಗಳಿಗೆ ತಮ್ಮ ಜೊತೆ ತಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ದಿನಾಂಕ 14/09/2020 ರಂದು ಮಧ್ಯಾಹ್ನ 1:30 ಗಂಟೆ ಸುಮಾರಿಗೆ ಭರತ ಇವನು ತನ್ನ ಮಾವನ ಸೈಕಲ ರಿಪೆರಿ ಅಂಗಡಿಗೆ ಹೋಗಿ ನನ್ನ ಹೆಂಡತಿಗೆ ಏಕೆ ಕರೆದುಕೊಂಡು ಹೋಗಿದ್ದಿರಿ ಅಂತಾ ಬಾಯಿ ಮಾತಿನ ತಕರಾರು ಮಾಡಿಕೊಂಡಿದ್ದು ದಿನಾಂಕ 14/09/2020 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ಹೊಲದಲ್ಲಿ ಕೆಲಸ ಮಾಡಿಕೊಂಡು ಮನೆಯಲ್ಲಿದ್ದಾಗ   ಪಂಡರಿ ತಂದೆ ಹಣಮಂತ ಇಲ್ಲಾಳೆ ಇವನು ಫಿರ್ಯಾದಿಗೆ ತಿಳಿಸಿದ್ದೆನೆಂದರೆ, ಇಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ   ಶಿವಾಜಿ ಚೌಕ ಹತ್ತಿರ ನಿಮ್ಮ ಮಗ ಭರತ ಇವನು ನಿಂತಿರುವಾಗ ಅವನ ಮಾವನಾದ ಮುರಳಿಧರ ತಂದೆ ಸಂಭಾಜಿ ಚವರೆ, ಮಕ್ಕಳಾದ ಸಿದ್ದೇಶ್ವರ ತಂದೆ ಮುರಳಿಧರ ಚವರೆ, ಮತ್ತು ಮಹಾಧವ ತಂದೆ ಮುರಳಿಧರ ಚವರೆ, ಹಾಗು ಹಾಗು ಸಿದ್ದೇಶ್ವರ ಇವನ ಜೊತೆ ಬಂದಿದ್ದ ಉಮಗರ್ಾದ ಇಬ್ಬರು ಇವನು ಸ್ನೇಹಿತರು ಎಲ್ಲರೂ ಕೂಡಿಕೊಂಡು ಭರತ ಈತನ ಹತ್ತಿರ ಹೋಗಿ ಭರತ ಈತನಿಗೆ ನಮ್ಮ ಮಗಳ ಮತ್ತು ನಮ್ಮ ಜೊತೆ ತಕರಾರು ಮಾಡುತ್ತಿ ರಂಡಿ ಮಗನೇ ಎಂದು ಭರತನ ಜೊತೆ ಜಗಳ ತಗೆದು ಮುರಳಿಧರ ಇವನು ಮೋಟಾರ್ ಸೈಕಲ ಚೈನಿನಿಂದ, ಮತ್ತು ಸಿದ್ದೇಶ್ವರ ಇವನು ಕಲ್ಲಿನಿಂದ, ಉಮ್ಮಗರ್ಾದ ಇನ್ನೂ ಇಬ್ಬರು ಸಂಬಂಧಿಕರು ಬಡಿಗೆಯಿಂದ ಕೈಯಿಂದ ಎಲ್ಲರೂ ಕೂಡಿಕೊಂಡು ಭರತ ಈತನ ತಲೆಗೆ, ಮುಖದ ಮೇಲೆ ಮೈಯಲ್ಲಾ ಹೊಡೆಯುತ್ತಾ ಅವರ ಮನೆ ಕಡೆಗೆ ಒಯ್ದು ಅಲ್ಲಿಯು ಸಹ ಹೊಡೆದು ರಕ್ತ ಮತ್ತು ಗುಪ್ತಗಾಯಗೊಳಿಸಿದ್ದರಿಂದ  ಕೊಲೆ ಮಾಡಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಯು.ಡಿ.ಆರ್. ನಂ. 19/2020 ಕಲಂ 174 (ಸಿ) ಸಿಆರ್.ಪಿ.ಸಿ :-

ದಿನಾಂಕ 14/09/2020 ರಂದು 0800 ಗಂಟೆಗೆ ಶ್ರೀ ಗಫೂರಸಾಬ ತಂದೆ ಇಬ್ರಾಹಿಮಸಾಬ ಭಂಗೆ ವಯ 48 ವರ್ಷ ಉ|| ಸಮಾಜ ಸೇವಕ ಸಾ|| ಚಿಟ್ಟಾ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ   ಚಿಟ್ಟಾ ಅರಣ್ಯ ಪ್ರದೇಶದಲ್ಲಿ ಒಂದು ಮೃತ ದೇಹ ಬಿದ್ದಿದೆ ಅದು ವಾಸನೆ ಬರುತ್ತಿದ್ದೆ ಅಂತ ಗೋತ್ತಾದ ಕೂಡಲೇ ಫಿರ್ಯಾದಿಯು ಅರಣ್ಯ ಪ್ರದೇಶದಲ್ಲಿ ಹೋಗಿ ನೋಡಲು ಅಂದಾಜು 30-40 ವರ್ಷದ ಅಪರಿಚಿತ ಗಂಡು ವ್ಯಕ್ತಿಯ ಮೃತದೇಹ ಇದ್ದು ಅದು ಪೂರ್ತಿಯಾಗಿ ಕೊಳೆತು ಹೋಗಿರುತ್ತದೆ. ಕೇವಲ ಆಸ್ತಿ ಪಂಜರ ಇದ್ದು ಕೆಳಗೆ ಕಾಲುಗಳಿಗೆ ಒಂದು ಪ್ಯಾಂಟ ಇರುತ್ತದೆ ಮತ್ತು ಸ್ವಲ್ಪ ದೂರದಲ್ಲಿ ಒಂದು ಶರ್ಟ ಇರುತ್ತದೆ ಸದರಿ ವ್ಯಕ್ತಿ ಹೇಗೆ ಮೃತ ಪಟ್ಟಿರುತ್ತಾನೆ ಎಂಬುವದು ತಿಳಿದು ಬಂದಿಲ್ಲಾ ಈತನ ಸಾವಿನ ಬಗ್ಗೆ ಸಂಶಯ ಇರುತ್ತದೆ, ಸದರಿ ವ್ಯಕ್ತಿ 6-7 ದಿವಸಗಳ ಹಿಂದೆ ಮೃತ ಪಟ್ಟಿಂತೆ ಕಂಡು ಬರುತ್ತಿದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

 

KALABURAGI DISTRICT CRIME REPORTED

 ಮಹಿಳೆ ಮೇಲೆ ಹಲ್ಲೆ ಪ್ರಕರಣ :-

ಅಫಜಲಪೂರ ಪೊಲೀಸ ಠಾಣೆ 

            ದಿನಾಂಕ 14-09-2020 ರಂದು 9:00 ಎ.ಎಮ್ ಕ್ಕೆ ಫೀರ್ಯಾದಿದಾರಳಾದ ಶ್ರೀಮತಿ ಸುರೇಖಾ ಗಂಡ ಗುರುಬಸಪ್ಪ ಅಜಗೊಂಡ ಸಾ: ಮಣೂರ ಇವರು ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ ನಾವು ಸೊಲ್ಲಾರದಲ್ಲಿ ಇದ್ದಾಗ ನನ್ನ ಮೈದುನನೆ ನಮ್ಮ ಪಾಲಿಗೆ ಬಂದ ಆಸ್ತಿಯನ್ನು ಉಪಯೋಗಿಸುತ್ತಿದ್ದನು ಈಗ ನಾವು ಮಣೂರಕ್ಕೆ ಬಂದಿದ್ದರಿಂದ ನಮ್ಮ ಆಸ್ತಿಯನ್ನು ನಾವು ಪಡೆದುಕೊಂಡು ಸಾಗುವಳಿ ಮಾಡುತ್ತಿದ್ದರಿಂದ ನಮ್ಮ ಮೈದುನ ಸಿದ್ದರಾಮನು ನಮ್ಮ ಮೇಲೆ ಹಗೆತನ ಸಾಧಿಸಿ ತಕರಾರು ಮಾಡಿಕೊಂಡು ಇನ್ನು ನಮಗೆ ಹೆಚ್ಚಿನ ಆಸ್ತಿ ಕೊಡು ಅಂತಾ ಆಗಾಗ ಜಗಳ ಮಾಡುತ್ತಿರುತ್ತಾನೆ.  ಹೀಗಿದ್ದು ದಿನಾಂಕ 12-09-2020 ರಂದು ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಾದ ಪ್ರೀಯಾ ಮತ್ತು ಶ್ರದ್ದಾ ಮನೆಯ ಮುಂದೆ ಮಾತನಾಡುತ್ತಾ ನಿಂತಾಗ ನನ್ನ ಮೈದುನನಾದ ಸಿದ್ದಾರಾಮನ ಮಕ್ಕಳಾದ ರಾಹುಲ್ ಮತ್ತು ರೋಹಿತ್ ಮೂರು ಜನರು ಕೂಡಿಕೊಂಡು ಬಂದವರೆ ಅದರಲ್ಲಿ ನನ್ನ ಮೈದುನ ಬಂದು ನನಗೆ ಏ ರಂಡಿ ಎಲ್ಲಾ ನಿನ್ನಿಂದಲೇ ಆಗಿದೆ ನಮ್ಮ ಅಣ್ಣನ ತಲೆ ತುಂಬಿ ನಮ್ಮ ವಿರುದ್ದ ಜಗಳ ಮಾಡಸುತ್ತಿದ್ದಿಯಾ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಆಗ ನಾನು ಸುಮ್ಮನೆ ನನಗೆ ಯಾಕೆ ಬೈಯುತ್ತಿದ್ದಿ ಅಂತಾ ಕೇಳಿದಕ್ಕೆ ನನ್ನ ಮೈದುನನು ನನಗೆ ತನ್ನ ಕಾಲಿನಲ್ಲಿ ಇದ್ದ ಚಪ್ಪಲಿಯಿಂದ ನನ್ನ ಮುಖಕ್ಕೆ ಹೊಡೆದನು ಆಗ ನನ್ನ ಎರಡು ಹೆಣ್ಣು ಮಕ್ಕಳು ಬಿಡಿಸಲು ಬಂದಾಗ ರಾಹುಲ್ ಇತನು ನನ್ನ ಮಗಳಾದ ಪ್ರೀಯಾಳ ಮೈ ಮೇಲಿನ ಬಟ್ಟೆ ಹರಿದು ಕುತ್ತಿಗೆ ಹಿಡೆದು ನಿನ್ನ ಸಾಯಿಸೇ ಬಿಡುತ್ತೇನೆ ಅಂತಾ ಅಂದನು ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿದ್ದ ನನ್ನ ಗಂಡನು ಓಡಿ ಬಂದು ಜಗಳ ಬಿಡಿಸಲು ಬಂದಾಗ ರಾಹುಲ್ ನು  ನನ್ನ ಗಂಡನಿಗೆ ಬಲಗಡೆ ಕಪಾಳಕ್ಕೆ ಜೋರಾಗಿ ತನ್ನ ಕೈಯಿಂದ ಹೊಡೆದಿರುತ್ತಾನೆ. ಮತ್ತು ನನ್ನ ಮೈದುನನು ನನಗೆ ಸೀರೆ ಹಿಡೆದು ಎಳೆದಾಡಿ ನನ್ನ ಮೂಗಿನ ಮೇಲೆ ಹಾಗೂ ತುಟೆಯ ಮೇಲೆ ಹೊಡೆದು ರಕ್ತಗಾಯ ಗೊಳಿಸಿರುತ್ತಾನೆ. ನನಗೆ ಮತ್ತು ನನ್ನ ಗಂಡ ಹಾಗೂ ಮಕ್ಕಳಿಗೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿ ನನ್ನ ಮಾನಕ್ಕೆ ಕುಂದುಂಟು ಮಾಡಿದ ನನ್ನ ಮೈದುನ ಹಾಗೂ ಅವನ ಮಕ್ಕಳ ಮೇಲೆ ಸೂಕ್ತ ಕಾನೂನು ಕ್ರಮ ಜರಿಗಿಸಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಹಲ್ಲೆ ಪ್ರಕರಣ :-

ಅಫಜಲಪೂರ ಪೊಲೀಸ ಠಾಣೆ 

     ದಿನಾಂಕ: 14-09-2020 ರಂದು 5-30 ಪಿಎಮ್ ಕ್ಕೆ ಪಿರ್ಯಾದಿದಾರಳಾದ ಶ್ರೀಮತಿ ಪುತಳಾಬಾಯಿ ಗಂಡ ಅರ್ಜುನ ರಾಠೋಡ ಸಾ|| ಅಳ್ಳಗಿ ತಾಂಡಾ ಮಾಶಾಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿ ಸಾರಾಂಶವೆನೆಂದರೆ, ನನ್ನ ಮೈದುನನಾದ ಕಿಶನ ತಂದೆ ವಾಲು ರಾಠೋಡ ಇತನು ನನ್ನ ಗಂಡನೊಂದಿಗೆ ನನಗೆ  ಇನ್ನೂ ಹೊಲ ಬರುತ್ತದೆ ಅಂತಾ ಬಂದಾರಿಯ ಸಂಭಂಧ ನಮ್ಮೊಂದಿಗೆ ತಕರಾರು ಮಾಡಿತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ: 12-09-2020 ರಂದು ರಾತ್ರಿ 10-30 ಪಿಎಮ್ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ನಮ್ಮ ಮನೆಯ ಮುಂದಿನ ಖುಲ್ಲಾ ಜಾಗದಲ್ಲಿ ಹೋಗಿದ್ದಾಗ ನನ್ನ ಮೈದುನನು ಮತ್ತು ನೆಗೆಣಿಯಾದ ಅನೀತಾ ಇಬ್ಬರೂ ಕೂಡಿಕೊಂಡು ನನ್ನ ಹತ್ತಿರ ಬಂದು ಅದರಲ್ಲಿ ಅನೀತಾ ಇವಳು ಏ ರಂಡಿ ನೀನು ಯಾಕೆ ಇಲ್ಲಿ ಏಕಿ ಮಾಡುಕತ್ತಿ ಅಂತಾ ಬೈಯುತ್ತಿದ್ದಾಗ ಕಿಶನ ಇತನು ಈ ರಂಡಿದು ಬಾಳ ಆಗ್ಯಾದ ತಡಿ ಅಂತಾ ತನ್ನ ಹತ್ತಿರ ವಿದ್ದ ಚಾಕುವಿನಿಂದ ನನಗೆ ಚುಚ್ಚಲು ಬಂದಾಗ ಆ ಚಾಕು ನನ್ನ ಬಲಗೈಗೆ ಹತ್ತಿ ರಕ್ತಗಾಯವಾಗಿರುತ್ತದೆ. ಆಗ ನಾನು ಜೋರಾಗಿ ಚೀರಿದ್ದರಿಂದ  ನನ್ನ ಗಂಡ ಮತ್ತು ನನ್ನ ಮಗನಾದ ಗೊವಿಂದ ರವರು ಬಂದಾಗ ಮತ್ತು ನಮ್ಮ ಓಣಿಯಲ್ಲಿನ ಜನರು ಬಂದಾಗ ಬಿಟ್ಟು ಓಡಿ ಹೋಗಿರುತ್ತಾರೆ. ಆಗ ನನ್ನ ಗಂಡ ಮತ್ತು ನನ್ನ ಮಗ ಕೂಡಿಕೊಂಡು ನನಗೆ ಅಫಜಲಪೂರದ ದವಾಖಾನೆಗೆ ತಂದು ಸೇರಿಕೆ ಮಾಡಿ ಉಪಚಾರ ಕೋಡಿಸಿರುತ್ತಾರೆ ಈ ‍ಘಟನೆ ಬಗ್ಗೆ ನಾನು ನನ್ನ ಗಂಡ ಮತ್ತು ಮಗ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು ಕಾರಣ ನನ್ನ ಮೈದುನನಾದ ಕೀಶನ ಮತ್ತು ಆತನ ಹೆಂಡತಿಯಾದ ಅನೀತಾರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ

ರಸ್ತೆ ಅಪಘಾತ ಪ್ರಕರಣ ಮರಣಾಂತಿಕ:-

ಮಾಡಬೂಳ ಪೊಲೀಸ ಠಾಣೆ 

             ದಿನಾಂಕ:14/09/2020 ರಂದು 00-15 ಎ.ಎಮ್.ಕ್ಕೆ ಕಲಬುರಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹಾಜರಿದ್ದ ಮೃತಳ ಗಂಡನಾದ ಮೋನಪ್ಪ ತಂದೆ ಸಾಯಿಬಣ್ಣ ಜಮಾದಾರ ಇವರು ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಬೀದರ ಜಿಲ್ಲೆಯ ನಿಡವಂಚಿ ಗ್ರಾಮದವನಿದ್ದು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 13/09/2020 ರಂದು ಬೆಂಗಳೂರಿನಿಂದ ತನ್ನ ಹೆಂಡತಿಯ ತವರು ಮನೆಯಾದ ಕಣಸೂರ ಗ್ರಾಮಕ್ಕೆ ಬಂದು ಹೆಂಡತಿ ಮಕ್ಕಳೊಂದಿಗೆ ಮಾತನಾಡಿಸಿಕೊಂಡು ಸಾಯಂಕಾಲ ಬೆಂಗಳೂರಿಗೆ ಹೋಗುವ ಸಂಬಂದ 6-00 ಪಿ.ಎಂ ಕ್ಕೆ ಕಣಸೂರದಿಂದ ಕಲಬುರಗಿಯವರೆಗೆ ಕಳುಹಿಸಲು ತನ್ನ ಹೆಂಡತಿ ಮತ್ತು ನಮ್ಮ ಸಂಬಂಧಿ ವೈಜನಾಥ ಇವರು ಮೋಟರ ಸೈಕಲ ನಂಬರ ಕೆ.ಎ 05 ಕೆ.ವ್ಹಿ-7512 ನೇದ್ದರ ಮೇಲೆ ನಾನು ಮತ್ತು ನಮ್ಮ ಮಾವ ಶಿವಪ್ಪ ಇನ್ನೊಂದು ಮೋಟರ ಸೈಕಲ ಮೇಲೆ ಕಲಬುರಗಿಗೆ ಬರುತ್ತಿರುವಾಗ ವೈಜನಾಥ ಇತನ ಚಲಾಯಿಸುತ್ತಿದ್ದ ಮೋಟರ ಸೈಕಲ ಮುಂದೆ ಇದ್ದು ನಮ್ಮ ಮೋಟರ ಸೈಕಲ ಸ್ವಲ್ಪ ಅಂತರದಲ್ಲಿ ಹಿಂದೆ ಇದ್ದು ನಾವು ಕೋರವಾರ ದಾಟಿ ವಚ್ಚಾ ಗ್ರಾಮ ಇನ್ನು ಸ್ವಲ್ಪ ದೂರ ಇರುವಾಗ ವೈಜನಾಥನು ತನ್ನ ಮೋಟರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಓಡಿಸುತ್ತಿರುವಾಗ ಎದುರುಗಡೆಯಿಂದ ಒಂದು ವಾಹನ ಬರುತ್ತಿರುವುದು ಕಂಡು ವೈಜನಾಥನು ತನ್ನ ವಶದಲ್ಲಿದ್ದ ಮೋಟರ ಸೈಕಲ ಒಮ್ಮೇಲೆ ರೋಡಿನ ಎಡ ಬದಿಗೆ ತೆಗೆದುಕೊಂಡಾಗ ಮೋಟರ ಸೈಕಲ ಸ್ಕಿಡ ಆಗಿ ಮೋಟರ ಸೈಕಲ ಸಮೇತ ಬಿದ್ದರು ಆಗ ನಾವು ಗಾಬರಿಯಾಗಿ ಏನಾಯಿತು ಅಂತಾ ಹೋಗಿ ನೋಡಲಾಗಿ ನನ್ನ ಹೆಂಡತಿಯ ತಲೆಗೆ ಭಾರಿ ಗುಪ್ತ ಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಸೋರುತ್ತಿದ್ದು ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ನಾವು ಕೂಡಲೇ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಯುನೈಟೇಡ ಆಸ್ಪತ್ರೆಗೆ ತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಕಾರಣ ಮೋಟರ ಸೈಕಲ ನಂಬರ ಕೆ.ಎ 05 ಕೆ.ವ್ಹಿ-7512 ನೇದ್ದರ ಸವಾರ ವೈಜನಾಥ ತಂದೆ ಪ್ರಭು ಸಾ:ಕಣಸೂರ ಇತನ ಮೇಲೆ ಕಾನೂನಿನ ರೀತಿ ಕ್ರಮ ಜರುಗಿಸಬೇಕು ಅಂತಾ ವಗೈರೆಯಾಗಿ ನೀಡಿರುವ ದೂರಿನ ಸಾರಾಂಶದ ಮೇಲಿಂದ ಮಾಡಬೂಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.