Police Bhavan Kalaburagi

Police Bhavan Kalaburagi

Tuesday, August 7, 2018

BIDAR DISTRICT DAILY CRIME UPDATE 07-08-2018



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-08-2018

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 127/18 ಕಲಂ 498(ಎ), 304(ಬಿ) 302 ಜೊತೆ 34 ಐಪಿಸಿ :-

ದಿನಾಂಕ 6-08-2018 ರಂದು  1630 ಗಂಟೆಗೆ ಫಿರ್ಯಾದಿ ಶ್ರೀಮತಿ ಪದ್ಮಾವತಿ ಗಂಡ ಗದಗಯ್ಯಾ ಸ್ವಾಮಿ ಸಾ// ಕೊರೆಕಲ್ ತಾ// ಔರಾದ ಜೀ// ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ  ತೋರಣಾ ಗ್ರಾಮದ ಶ್ರೀ ಮಾದಯ್ಯಾ ಸ್ವಾಮಿ ಅವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೆ ಅಂದರೇ ಮೇ 4, 2018 ರಂದು ಅವರ ಮಗನಾದ ನಾಗರಾಜ ಇವರಿಗೆ ಫಿರ್ಯಾದಿ ಮಗಳಾದ ಭಾಗ್ಯಶ್ರೀ ಯೊಂದಿಗೆ ಆಗಿರುತ್ತದೆ. ಮದುವೆ ಆದನಂತರ   ಅವಳನ್ನು ವಿನಾಕಾರಣ ತೊಂದರೆ ನೀಡುತ್ತಾ ಮೆಕ್ಯಾನಿಕ್ ಅಂಗಡಿ ಹಾಕಬೇಕಾಗಿದೆ ನಿನ್ನ ಮನೆಯಿಂದ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ತೊಂದರೆ ನೀಡುತ್ತಿರುತ್ತಾರೆ.  ನಾಗರಾಜು ತಂದೆ ಮಾದಯ್ಯಾ ಸ್ವಾಮಿ, ತಾಯಿ ಸಂಗಿತಾ, ಹಾಗೂ ಕಿರಿಯ ಮಗ ಕಂಟಯ್ಯಾ ಸ್ವಾಮಿ ಅವರ ಮಗಳು ಸುನಿತಾ ಸೇರಿಕೊಂಡು ಕಿರುಕುಳ ನೀಡಿ ರವಿವಾರ ದಿ: 05-08-2018 ರಂದು ಕತ್ತು ಹಿಸುಕಿ ನೇಣು ಹಾಕಿ ಕೊಲೆ ಮಾಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಖಟಕ ಚಿಂಚೋಳಿ ಪೊಲೀಸ ಠಾಣೆ  ಅಪರಾಧ ಸಂಖ್ಯೆ- 123/2018 ಕಲಂ- 323 324 307 341 394 504 506 ಜೋತೆ 34 .ಪಿ.ಸಿ :-

ಶ್ರೀ ಶಿವಕಾಂತ ತಂದೆ ಬಸವಂತಪ್ಪಾ ಹೋನ್ನಾಳ್ಳೆ ವಯ- 40 ವರ್ಷ ಜಾ-ಲಿಂಗಾಯತ - ಅಕ್ಕಿ ವ್ಯಾಪಾರ ಸಾ- ನೀಡೇಬಾನ  ರವರು ನೀಡಿದ ದೂರಿನ ಸಾರಾಂಶವೆನೆಂದರೆ  ದಿನಾಂಕ: 04/08/2018 ರಂದು ಬೇಳ್ಳಿಗೆ 0900 ಗಂಟೆಗೆ ಫಿರ್ಯಾದಿಯು ತನ್ನ ಕಾರ ನಂ- MH-03 Z- 2953  ನೇದ್ದರಲ್ಲಿ ಭಾಲ್ಕಿ ಬರುವಾಗ  ಮನೆಯ ಮುಂದೆ ತನ್ನ ಕಾರ ಹಿಂದಕ್ಕೆ ತೆಗೆದುಕೊಳ್ಳುವಾಗ ರೋಡಿನ ಮೇಲೆ ಗ್ರಾಮದ ಸಂಗಮೇಶ ಘಾಳೆ ಈತನು ತನ್ನ ಕಾರ ರೋಡಿನ ಮೇಲೆ ನಿಲ್ಲಿಸಿದ ಫಿರ್ಯಾದಿಯ ಕಾರ್ ಅವನ ಕಾರಿಗೆ ಸ್ವಲ್ಪ ಟಚ್ ಆಗಿರುತ್ತದೆ ವಿಷಯವಾಗಿ ಗ್ರಾಮದ ಶಿವರಾಜ ತಂದೆ ರಘುನಾಥ ಸೋನಮಾಳೆ ಮತ್ತು ನಮ್ಮಣ್ಣನ ಮಗ ಸಂಗಮೇಶ ಹೋನ್ನಳೆ ಇವರಿಬ್ಬರೂ ಕಾರಿಗೆ ಆದ ಲುಕ್ಸಾನ ಬಗ್ಗೆ ತುಂಬಿ ಕೂಡಲು ಹೇಳಿದ್ದರಿಂದ  ಅದಕ್ಕೆ ಫಿರ್ಯಾದಿಯು ಒಪ್ಪಿಕೊಂಡಿದ್ದು ದಿನಾಂಕ: 06/08/2018 ರಂದು ಮುಂಜಾನೆ 9 ಗಂಟೆಗೆ ಫಿರ್ಯಾದಿಯು  ಮೋಟರ ಸೈಕಲ್ ನಂ- KA-J-6970 ನೇ ಮೇಲೆ   ಲಖನ ತಂದೆ ರಾಜು ಮುದ್ದಾಳೆ  ವಿದ್ಯಾರ್ಥಿ ಇವನಿಗೆ ನನ್ನ ಮೋಟರ ಸೈಕಲ್ ಮೆಲೆ ಕೂಡಿಸಿಕೊಂಡು ಭಾಲ್ಕಿಗೆ ಬರುವಾಗ  ಅಷ್ಟುರೆ ರವರ ಹೋಲದ ಹತ್ತಿರ ರೋಡಿನ ಮುಖಾಂತರ ಭಾಲ್ಕಿಗೆ ಬರುವಾಗ  ಸಂಗಮೇಶ ತಂದ ಶಿವಕುಮಾರ ಘಾಳೆ ಇವನು ತನ್ನ ಕಾರ ರೋಡಿನ ಮೆಲೆ ನಿಲ್ಲಿಸಿ ಫಿರ್ಯಾದಿ ಬರುವುದನ್ನು ನೋಡಿ ಕಾರಿನಿಂದ ಕೇಳಗೆ ಇಳಿದು ಸಂಗಮೇಶ ಘಾಳೆ ಮತ್ತು ಅವರ ತಮ್ಮ  ಶ್ರೀಕಾಂತ  ತಂದೆ ಶಿವಕುಮಾರ ಘಾಳೆ ಇವರಿಬ್ಬರೂ ನನ್ನ ಹತ್ತಿರ ಬಂದು ನನ್ನ ಮೋಟರ ಸೈಕಲ್ ನಿಲ್ಲಿಸಿ ಅವ್ಯಾಚವಾಗಿ ಬೈದ್ದು ಕೋಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿ ಪಂಚ ಹೀಡಿದುಕೊಂಡು   ಮುಖದ ಮೆಲೆ ಎಡಗಡೆ ಗಲ್ಲದ ಮೇಲೆ ಎರಡು ಕಡೆಗೆ ಹೋಡೆದು ರಕ್ತಗಾಯಾ ಪಡಿಸಿರುತ್ತಾನೆ ಮತ್ತು ಶ್ರೀಕಾಂತ ಈತನು ತನ್ನ ಕೈಯಲ್ಲಿ  ಬಡಿಗೆ  ತೆಗೆದುಕೊಂಡು ಬೇನ್ನಿನ ಮೇಲೆ  ಎರಡು, ಎರಡು ತೋಡೆಗಳ ಮೇಲೆ, ಎಡಮೋಳಕಾಲ ಕೇಳಗೆ ಅಲಲ್ಲಿ ಹೋಡೆದು ಭಾರಿ ರಕ್ತಗಾಯಾ ಪಡಿಸಿರುತ್ತಾರೆ   ಮತ್ತು ಬಲಗೈಯಲ್ಲಿರುವ 5 ಗ್ರಾಂ ಬಂಗಾರದ ಉಂಗುರ  ಕಸಿದುಕೊಂಡಿರುತ್ತಾನೆ ಮತ್ತು ಸಂಗಮೇಶ ಈತನು ನನ್ನ ಪ್ಯಾಂಟಿನ ಜೇಬಿನಲ್ಲಿರುವ ರೂಪಾಯಿ 50000/-  ಕಸಿದುಕೊಂಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.