Police Bhavan Kalaburagi

Police Bhavan Kalaburagi

Saturday, December 30, 2017

BIDAR DISTRICT DAILY CRIME UPDATE 30-12-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-12-2017

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 284/2017, PÀ®A. 143, 147, 148, 498(J), 323, 504, 506, 354, 324 eÉÆvÉ 149 L¦¹ :-
ಫಿರ್ಯಾದಿ ಅರ್ಚನಾ ಗಂಡ ಪವನ ವಾಘಮಾರೆ ವಯ: 30 ವರ್ಷ, ಸಾ: ಭೋಪಲಾ, ತಾ: & ಜಿ: ಲಾತೂರ, ಸದ್ಯ: ಬೋಳೆಗಾವ ರವರ ಮದುವೆ ದಿನಾಂಕ 26-05-2009 ರಂದು ಆರೋಪಿ ಪವನ ತಂದೆ ಬಾಬುರಾವ ವಾಘಮಾರೆ ಇವನೊಂದಿಗೆ ಆಗಿದ್ದು, ಮದುವೆ ಕಾಲಕ್ಕೆ ಫಿರ್ಯಾದಿಯ ತಂದೆ ತಾಯಿ ವರನಿಗೆ 1,50,000/- ರೂ. ವರದಕ್ಷೀಣೆ ಮತ್ತು 2 ತೋಲೆ ಬಂಗಾರ ಹಾಗೂ ಮದುವೆಯ ಉಡುಗೋರೆ ಮನೆ ಬಳಕೆ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯಾದ ನಂತರ ಫಿರ್ಯಾದಿಗೆ ಎರಡು ಮಕ್ಕಳು ಆಗುವವರೆಗೆ ಗಂಡ ಮತ್ತು ಗಂಡನ ಮನೆಯವರು ಸರಿಯಾಗಿ ಇಟ್ಟುಕೊಂಡು ನಂತರ ಗಂಡ ಪವನ ಇವನು ನನಗೆ ಮೋಟಾರ ಸೈಕಲ ಖರಿದಿ ಮಾಡಲು ನಿನ್ನ ತವರು ಮನೆಯಿಂದ 50,000/- ರೂಪಾಯಿ ತೆಗೆದುಕೊಂಡು ಬಾ ಅಂತಾ ಹೋಡೆ ಬಡೆ ಮಾಡುವದು, ಮಾನಸಿಕ ಹಾಗೂ ದೈಹೀಕವಾಗಿ ಕಿರುಕುಳ ಕೋಡುವಾಗ ಸದರಿ ವಿಷಯ ಫಿರ್ಯಾದಿಯು ತನ್ನ ತಂದೆ ತಾಯಿಗೆ ತಿಳಿಸಿದಾಗ ತಂದೆ ತಾಯಿಯವರು ಗಂಡನ ಮನೆಗೆ ಬಂದು ಗಂಡನಿಗೆ ಬುದ್ದಿ ಹೇಳಿದ್ದು, ಆದರೂ ಕೂಡ ಕಿರುಕುಳ ಕೊಡಲು ಪ್ರಾರಂಭಿಸಿದಾಗ ಇಂದಿಲ್ಲ ನಾಳೆ ಸರಿ ಹೋಗಬಹುದು ಅಂತಾ ತಿಳಿದು ಸುಮ್ಮನಿದ್ದು, ಅವರು ಕಿರುಕುಳ ಕೊಡುವ ವಿಷಯ ತನ್ನ ತಂದೆ ತಾಯಿಗೆ ಕರೆ ಮಾಡಿ ತಿಳಿಸಿದಾಗ ತಂದೆ ತಾಯಿ ಗಂಡನ ಮನೆಗೆ ಬಂದಾಗ ಫಿರ್ಯಾದಿಯ ಗಂಡ ಫಿರ್ಯಾದಿಗೆ ಮತ್ತು ಫಿರ್ಯಾದಿಯ ತಂದೆ ತಾಯಿಗೆ ಮನೆಯ ಹೋರಗೆ ಹಾಕಿದಾಗ ಫಿರ್ಯಾದಿಯು ತನ್ನ ತವರು ಮನೆಗೆ ಬಂದು ವಾಸವಾಗಿದ್ದು, ಫಿರ್ಯಾದಿಯು ತನ್ನ ಹಾಗೂ ತನ್ನ ಮಕ್ಕಳ ಜಿವನಾಂಶಕ್ಕಾಗಿ ಹಣ ಕೇಳಿದಾಗ ಹಣ ಕೋಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುವದರಿಂದ ಫಿರ್ಯಾದಿಯು ಗಂಡನ ಹಾಗೂ ಗಂಡನ ಮನೆಯವರ ವಿರುದ್ದ ಭಾಲ್ಕಿ ನ್ಯಾಯಾಲಯದಲ್ಲಿ ಜೀವನಾಂಶದ ಸಲುವಾಗಿ ದೂರು ಸಲ್ಲಿಸಿರುವದರಿಂದ ಫಿರ್ಯಾದಿ ಹಾಗೂ ಫಿರ್ಯಾದಿಯ ಮಕ್ಕಳ ಜೀವನಾಂಶಕ್ಕೆ ಹಣ ಕೊಡಬೆಕೆಂದು ನ್ಯಾಯಾಲಯದಿಂದ ಆದೇಶ ಆಗಿರುವದರಿಂದ ಗಂಡ 18,500/- ರೂ. ನ್ಯಾಯಾಲಯದಲ್ಲಿ ಜಮಾ ಮಾಡಿರುವದರಿಂದ, ನ್ಯಾಯಾಲಯದಿಂದ ಚೆಕ್ಕ ಪಡೆದು ಲಾತೂರದಲ್ಲಿರುವ ಫಿರ್ಯಾದಿಯು ತನ್ನ ಬ್ಯಾಂಕ ಖಾತೆಗೆ ಜಮಾ ಮಾಡುವ ಕುರಿತು ತನ್ನ ತಂದೆ ತಾಯಿ ಜೋತೆ ಲಾತೂರಕ್ಕೆ ಹೋದಾಗ ಆರೋಪಿಪಿತರಾದ ಗಂಡ ಹಾಗೂ ಗಂಡನ ಮನೆಯವರಾದ ಉಮಾಬಾಯಿ ಗಂಡ ಬಾಬುರಾವ, ಸ್ವಾತಿ ಗಂಡ ಸಚೀನ, ಮನೀಶಾ ಗಂಡ ನಿತೀನ, ರಂಜನಾ ಶಿಂಧೆ, ಅರ್ಚನಾ ಗಂಡ ಪ್ರಮೋದ ಇವರೆಲ್ಲರೂ ಫಿರ್ಯಾದಿಗೆ ತು ಪವನ ಚಾ ಖೀಲಾಪ ಕೇಸ ಕಾಬರ ಘಾಟ್ಲಿಸ್ ಅಂತಾ ಅವಾಚ್ಯವಾಗಿ ಬೈದು ಫಿರ್ಯಾದಿಗೆ ಮತ್ತು ಫಿರ್ಯಾದಿಯ ಮಕ್ಕಳಿಗೆ ಖತಂ ಮಾಡಿ ಬೀಡು ಅಂತಾ ಗಂಡನಿಗೆ ಪ್ರಚೋದನೆ ನೀಡಿರುತ್ತಾರೆ, ಅಲ್ಲದೆ ದಿನಾಂಕ 07-06-2017 ರಂದು ಫಿರ್ಯಾದಿಯು ಭಾಲ್ಕಿ ನ್ಯಾಯಾಲಯಕ್ಕೆ ಬಂದಾಗ ಆರೋಪಿತರೆಲ್ಲರು ಭಾಲ್ಕಿ ನ್ಯಾಯಾಲಯಕ್ಕೆ ಬಂದು ಫಿರ್ಯಾದಿಗೆ ತು ಮಾಝ್ಯಾವರ ಕೇಸ ಕಾಬರ ಘಾಟ್ಲಿಸ್ ಅಂತಾ ಅಂದು ಝೀಂಜಾ ಮುಷ್ಟಿ ಮಾಡಿ ತು ಹೆ ಕೆಸ ವಾಪಸ ಕಾಡೂನ ಘೇಯಿನಾ ಗೇಲೆನ ತೂಲಾ ಆಣಿ ತೆ ಲೆಕ್ರಾವಾಲಾ ಖತಂ ಕರುನ ಟಾಕತೊ ಅಂತಾ ಜೀವದ ಬೇದರಿಕೆ ಹಾಕಿದ್ದು, ಸಚೀನ ತಂದೆ ಬಾಬುರಾವ, ನೀತೀನ ತಂದೆ ಬಾಬುರಾವ, ಅರುಣ ತಂದೆ ಬಾಬುರಾವ, ವಿಶಾಲ ತಂದೆ ವೈಜಿನಾಥ, ಅಜಯ @ ರಾಜು ತಂದೆ ವೈಜಿನಾಥ, ಪ್ರಮೋದ ತಂದೆ ಸಂದಿಪ, ಅವಿನಾಶ ತಂದೆ ಮಹಾದೇವ ರವರು ತುಲಾ ಕೀತಿ ವೇಳೆಸ ಸಾಂಗಿಟ್ಲ್ಯಾನ ತೂಲಾ ಸಮಜ ಮದಿ ಏತ ನಾಹಿಕಾ ಅಂತಾ ಅಂದು ಝೀಂಜಾ ಮುಷ್ಟಿ ಮಾಡಿ ಸೀರೆ ಎಳೆದು ಮಾನಭಂಗ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 29-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES.

 ಶಹಾಬಾದ ನಗರ ಠಾಣೆ : ದಿನಾಂಕ:28/12/2017 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯಾದಿ ಶ್ರೀಮತಿ ವಿಜಯಲಕ್ಷ್ಮಿ ಗಂಡ ಭೀಮರಾವ ಚೌಧರಿ ಸಾ: ಆಶ್ರಯ ಕಾಲೋನಿ ರಾಮಘಡ ಶಹಾಬಾದ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳಿಕೆ ನೀಡಿದ್ದು ಅದರ ಸಾರಂಶವೆನೆಂದರೆ. ಇಂದು ಮಧ್ಯಾಹ್ನ 2.40 ಪಿ.ಎಮ್.ಕ್ಕೆ ನಾನು ಕಟ್ಟಿಗೆ ತೆಗೆದುಕೊಂಡು ಮನೆಗೆ  ಬಂದಾಗ ಮನೆಯಲ್ಲಿ ನನ್ನ ಮಗಳು ಅಳುತ್ತಾ ಕುಳಿತಿದ್ದಳು. ಯಾಕೆ ಅಳುತ್ತಿದ್ದಿಯಾ ಅಂತಾ ಕೇಳಲು  ನನ್ನ ಮಗಳು ತಿಳಿಸಿದ್ದೆನೆಂದರೆ, ತಾನು ಇಂದು ಮಧ್ಯಹ್ನ  2.30 ಗಂಟೆ ಸುಮಾರಿಗೆ  ರೋಡಿಗೆ  ಬಂಡಿಯಿಂದ ಐಸಕ್ರೀಂ ತರಲು ಹೋಗಬೇಕಂತ ನಡೆದಾಗತನ್ನ ಹಿಂದಿನಿಂದ  ನಮ್ಮ ಬಾಜು ಮನೆಯ ಹೀರಾಲಾಲ ಮೀನಗಾರ ಇವನು ಹಿಂದಿನಿಂದ ಸೈಕಲ್ ಮೇಲೆ ಬಂದವನೆ  ಸೈಕಲ್ ನಿಲ್ಲಿಸಿ, ನನ್ನ ಬಾಯಿ ಮುಚ್ಚಿ ನನಗೆ  ಎತ್ತಿಕೊಂಡು ಅಲ್ಲೆ ನಮ್ಮ ಓಣಿಯ ಕಚ್ಚಾ ರಸ್ತೆಗೆ ಪಕ್ಕದಲ್ಲಿನ ತಗ್ಗಿನಲ್ಲಿ ಒಯ್ದು ನನಗೆ ನೆಲಕ್ಕೆ ಮಲಗಿಸಿತನ್ನ ಪ್ಯಾಂಟ ಬಿಚ್ಚಿ  ನನ್ನ ಲಂಗ ಮೇಲೆ ಎತ್ತಿ ನನ್ನ ತೊಡೆಯ ಭಾಗದಲ್ಲಿ ಕೈಯಿಂದ ತಿಕ್ಕುತ್ತಾ ನನ್ನ ಚಡ್ಡಿಯ ಮೇಲೆ ಕೈ ಆಡಿಸಿದಾಗ ನಾನು ಚಿರಾಲು ಪ್ರಯತ್ನಿಸಿದಾಗ ಅವನು ತನ್ನ ಕೈಯಿಂದ ಬಾಯಿ ಒತ್ತಿ ಹಿಡಿದು ನನ್ನ ಮೇಲೆ ಕುಳಿತನು  ಆಗ ನನಗೆ ತ್ರಾಸ್ ಆಗಿ ನಾನು ಜೋರಾಗಿ ಚೀರಿದಾಗಅದೇ ವೇಳೆಗೆ  ನಮ್ಮ ಓಣಿಯ 1) ಅರ್ಜುನ ತಂದೆ ಬಸಣ್ಣ ಸುಡಗಾಡಸಿದ್ದ2) ಬಸವರಾಜ ತಂದೆ ಸಿದ್ರಾಮ ಸುಡಗಾಡ ಸಿದ್ದ  ಇವರು ಸಪ್ಪಳ ಕೇಳಿ ಅಲ್ಲಿಗೆ ಓಡಿ  ಬಂದು ನೋಡಿ ಅವನಿಂದ ನನಗೆ ಬಿಡಿಸಿಕೊಂಡರು ಆಗ ಹೀರಾಲಾಲ ಇತನು ಅಲ್ಲಿಂದ ಓಡಿ ಹೋದನು ಅವರು ನನಗೆ ಮನೆಗೆ ತಂದು ಬಿಟ್ಟಿರುತ್ತಾರೆ  ಅಂತಾ ತಿಳಿಸಿದಳುನಂತರ ನಾನು ನನ್ನ ಗಂಡನಿಗೆ  ಮತ್ತು ನಮ್ಮ ಭಾವಂದಿರಾದ ವಿಠಲ ಮತ್ತು ರಮೇಶ  ಚೌದರಿ ರವರಿಗೆ ಕರೆದು ವಿಷಯ ತಿಳಿಸಿ ಠಾಣೆಗೆ  ಬಂದಿರುತ್ತೇವೆ.   ಕಾರಣ ನಮ್ಮ ಓಣಿಯ ಹೀರಾಲಾಲ ತಂದೆ ಲಕ್ಷ್ಮಣ ಭೋವಿ ಇತನು ನನ್ನ ಅಪ್ರಾಪ್ತ ಮಗಳಾದ ಕುಃಭಾಗ್ಯಶ್ರೀ ವಃ 11 ವರ್ಷ ಇವಳಿಗೆ ಅಕ್ರಮವಾಗಿ ತಡೆ ಹಿಡಿದು ಹಿಂದಿನಿಂದ ಬಂದು ಬಾಯಿ ಒತ್ತಿ ಹಿಡಿದು ಒಯ್ಯುದು ನನಗೆ ಮಗಳಿಗೆ ಸಂಭೋಗ ಮಾಡಲು ಪ್ರಯತ್ನಿಸಿರುತ್ತಾನೆ. ನಾವು ಪರಿಶಿಷ್ಟ ಜಾತಿಗೆ ಸೇರಿದ್ದವರೆಂದು   ಗೊತ್ತಿದ್ದರು ಸಹ ನನ್ನ ಮಗಳಾದ ಭಾಗ್ಯಶ್ರೀ ಮೇಲೆ ಲೈಂಗಿಕ ದೌರ್ಜನ್ಯ ಏಸಗಿರುತ್ತಾನೆ. ಇವನ ಮೇಲೆ ಸೂಕ್ತ  ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ನೀಡಿದ ಪಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 219/2017 ಕಲಂ 341 376 511 ಐಪಿಸಿ ಮತ್ತು ಕಲಂ 8 , 18 ಪೋಕ್ಸೋ ಕಾಯ್ದೆ 2012 ಹಾಗೂ ಕಲಂ 3 (1) (ಡಬ್ಲೂ ) (1) ಎಸ್.ಸಿ/ ಎಸ್ ಟಿ ಪಿ ಎ ಆಕ್ಟ 1989 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
C¥sÀd®¥ÀÆgÀ oÁuÉ : ದಿನಾಂಕ 28-12-2017 ರಂದು 5:20 ಪಿ ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಮುದ್ದೆ ಮಾಲು ಮತ್ತು ವರದಿ ಹಾಜರ ಪಡಿಸಿದ್ದು, ಸದರ ವರದಿ ಸಾರಾಂಶವೇನೆಂದರೆ ಇಂದು ದಿನಾಂಕ 28-12-2017 ರಂದು 4.00 ಪಿಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ, ಸುಧಾರಿತ ಗಸ್ತು ಸಂ 04 ಅಫಜಲಪೂರ ಪಟ್ಟಣದ ಬೀಟ್ ಸಿಬ್ಬಂದಿಯಾದ ರಾಜಶೇಖರ ಸಿಹೆಚ್ಸಿ  - 388 ರವರು ಮಾಹಿತಿ ತಿಳಿಸಿದ್ದೆನೆಂದರೆ ಅಫಜಲಪೂರ ಪಟ್ಟಣದ ಕೂಡಲ ಸಂಗಮ ಹೋಟೆಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ್ದು ನಾನು ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ|| ಇಬ್ಬರು ಅಫಜಲಪೂರ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ಸಿಬ್ಬಂದಿಯವರಾದ  ರಾಜಶೇಖರ  ಹೆಚ್ಸಿಲ 388   ಶಿವಪುತ್ರ ಸಿಪಿಸಿ-1139 ಕೂಡಿಕೊಂಡು ಪಂಚರೊಂದಿಗೆ 4.10 ಪಿಎಮ್ ಕ್ಕೆ ನಡೆದುಕೊಂಡು ಹೊರಟು.4:15 ಪಿ ಎಮ್ ಕ್ಕೆ ಅಫಜಲಪೂರ ಕೂಡಲ ಸಂಗಮ ಹೋಟೆಲ ಹತ್ತಿರ ಸ್ವಲ್ಪ ದೂರು ನಿಂತುಕೊಂಡು ನೋಡಲು, ಕೂಡಲ ಸಂಗಮ ಹೋಟೆಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸತೀಶ ತಂದೆ ದೊಂಡು ಕುಲಕರ್ಣಿ ವ|| 42 ವರ್ಷ ಜಾ|| ಬ್ರಾಹ್ಮಣ ಉ|| ಹೋಟೆಲ ಕೆಲಸ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2,800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವುಸದರಿಯವುಗಳನ್ನು ಪಂಚರ ಸಮಕ್ಷಮ 4:15 ಪಿ.ಎಮ್ ದಿಂದ 5:15 ಪಿಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ನಂತರ ಸದರಿ ಆರೋಪಿತನೊಂದಿಗೆ ಮರಳಿ ಠಾಣೆಗೆ 5:20  ಪಿ.ಎಮ್ ಕ್ಕೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದರ ಮೇರೆಗೆ ಠಾಣೆ ಗುನ್ನೆ ನಂ 330/2017 ಕಲಂ 78 (3) ಕೆ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
PÀªÀįÁ¥ÀÆgÀ oÁuÉ : ದಿನಾಂಕ 29-12-2017 ರಂದು 1-45 ಪಿ.ಎಮ್ ಕ್ಕೆ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ವಿಚಾರಣೆ ಮಾಡಿಕೊಂಡು ನಮ್ಮ ಠಾಣೆಯ ವೆಂಕಟರೆಡ್ಡಿ ಹೆಚ್.ಸಿ-361 ಇವರು ಠಾಣೆಗೆ ಮರಳಿ ಅಂಬರಾಯ ತಂದೆ ಭೀಮಶ್ಯಾ ಸುಣ್ಣಗಾರ ವಯ 37 ವರ್ಷ ಜಾ: ಕುರುಬ ಉ: ಡ್ರೈವರ್ ಸಾ: ಡೊಂಗರಗಾಂವ ತಾ.ಜಿ ಕಲಬುರಗಿ ಇವರು ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ಪಿಯರ್ಾದನ್ನು ಹಾಜರಪಡಿಸಿದು ಅದರ ಸಾರಾಂಶವೆನೆಂದರೆ  ಮೊನ್ನೆ ದಿನಾಂಕ 26-12-2017 ರಂದು ಮುಂಜಾನೆ ವೇಳೆಯಲ್ಲಿ ನಮ್ಮೂರ ನಾಗಪ್ಪ ವಡ್ಡನಕೇರಿ ಇವರ 407 ಗೂಡ್ಸ್ ವಾಹನದ ಮೇಲೆ ಡ್ರೈವಿಂಗ್ ಕೆಲಸ ಕುರಿತು ವಾಹನವನ್ನು ನಡೆಸಿಕೊಂಡು ಕಮಲಾಪೂರಕ್ಕೆ ಹೋಗಿದ್ದು ನಂತರ ಅಂದು ರಾತ್ರಿ 11-00 ಗಂಟೆಯ ಸುಮಾರಿಗೆ ಡ್ರೈವಿಂಗ ಕೆಲಸ ಮುಗಿಸಿಕೊಂಡು ವಾಪಸ್ಸ ನಮ್ಮೂರಿಗೆ ಬಂದು ನಮ್ಮೂರ  ಗ್ರಾಮ ಪಂಚಾಯತ ಕಛೇರಿಯ ಮುಂದಗಡೆ ವಾಹನ ನಿಲ್ಲಿಸಿ ನನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಾತ್ರಿ 11-15 ಗಂಟೆಯ ಸುಮಾರಿಗೆ ನನ್ನ ಮನೆಯ ಮುಂದುಗಡೆ ರೋಡಿನ ಮೇಲೆ ನಿಂತಿಪ್ಪ ಕಲ್ಲಪ್ಪ ನಿಂಬೂರ ಇವರ ನಾಯಿ ನನಗೆ ನೋಡಿ ಬೋಗಳುತ್ತಿದ್ದಾಗ ಆಗ ನಾನು ನಾಯಿಗೆ ಹಡಿ ಅಂತಾ ಜೋರ ಧ್ವನಿಯಲ್ಲಿ ಅಂದಾಗ ನನ್ನ ಅವಾಜ ಕೇಳಿ ರಾಚಪ್ಪ ತಂದೆ ಕಾಶಪ್ಪ ಇವರ ಮನೆಯ ಮೇಲೆ ನಿಂತು ಬೊಗಳುತ್ತಿದ್ದ ಮತ್ತೊಂದು ನಾಯಿ ಅವರ ಮನೆಯ ಪತ್ರಾದ ಮೇಲೆ ಹಾರಿದ್ದು, ಅದೆ ವೇಳಗೆ ರಾಚಪ್ಪ ತಂದೆ ಕಾಶಪ್ಪ ಮತ್ತು ಅವನ ತಂದೆ ಕಾಶಪ್ಪ ತಂದೆ ರಾಚಪ್ಪ ಇವರು ನನಗೆ ಏ ಭೋಸಡಿ ಮಗನೆ ನೀನು ನಮ್ಮ ನಾಯಿಗೆ ಹೊಡಿತಿ ಅಂತಾ ಹೊಲಸಾಗಿ ಬೈಯುತ್ತಾ ಬಂದು ರಾಚಪ್ಪ ಇವನು ತನ್ನ ಕೈಯಿಂದ ನನ್ನ ಎಡಗಡೆ ಕಣ್ಣಿನ ಮೇಲೆ ಹೊಡೆದನು, ಆಗ ನಾನು ಅವರಿಗೆ ಸುಮ್ಮ ಸುಮ್ಮನೆ ನನಗೆ ಹೊಡೆದಿರಿ ನಾನು ನಿಮ್ಮ ಮೇಲೆ ಕೇಸು ಮಾಡುತ್ತೇನೆ ಅಂತಾ ಅಂದಾಗ ಕಾಶಪ್ಪ ಈತನು ನನಗೆ ಗಟ್ಟಿಯಾಗಿ ಹಿಡಿದು ನಿಲ್ಲಿಸಿದನು. ಆಗ ರಾಚಪ್ಪ ಈತನು ರೋಡಿನ ಮೇಲೆ ಬಿದ್ದು ಕಬ್ಬಿಣದ ರಾಡ ತೆಗೆದುಕೊಂಡು ನನ್ನ ಬಲಕಾಲ ಮುಂಗಾಲಿಗೆ ಹೊಡೆದು ರಕ್ತಗಾಯ ಮಾಡಿದೆನು. ಆಗ ನಾನು ಚಿರಾಡುತ್ತಿದ್ದು ನೋಡಿ ನನ್ನ ಹೆಂಡತಿ ಮಹಾದೇವಿ ಇವಳ ಜಗಳ ಬಿಡಿಸಲು ಬಂದಾಗ ಕಾಶಪ್ಪ ಈತನು ನನ್ನ ಹೆಂಡತಿಗೆ ರಂಡಿ ನಿ ಜಗಳ ಬಡಿಸಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದನು. ರಾಚಪ್ಪ ಈತನು ನನ್ನ ಹೆಂಡತಿಯ ಮುಖದ ಮೇಲೆ ಹಾಗೂ ಬಿನ್ನಿನ ಮೇಲೆ ಹೊಡೆದಯ ಅವಳ ಸಿರೆಯ ಸೆರಗು ಹಿಡಿದು ಏಳದಾಡಿ ಅವಮಾನ ಮಾಡಿದನು. ಆಗ ನಾವು ಚೀರಾಡುತ್ತಿದ್ದಾಗ ನಮಗೆ ಹೊಡೆಯುತ್ತಿದ್ದನ್ನು ನೋಡುತ್ತಿದ ನಮ್ಮೂರ ನಾಗರಾಜ ವಡ್ಡನಕೇರಿ ಮತ್ತು ಹೊನ್ನಪ್ಪ ನಂಜೇರಿ ಇವರು ಬಂದು ಜಗಳ ಬಿಡಿಸಿರುತ್ತಾರೆ. ಜಗಳದಲ್ಲಿ ನನ್ನ ಹೆಂಡತಿಯ ಕೊರಳದಲ್ಲಿಯ ಆರು ಮಾಸಿಯ ಬಮಗಾರದ ಗುಂಡುಗಳು ಬಿದ್ದಿದ್ದು ಹುಡುಕಾಡಿದರು ಸಹ ಸಿಕ್ಕಿರುವದಿಲ್ಲಾ, ನಂತರ ಅಂದು ರಾತ್ರಿ ಬಹಳ ಆಗಿದ್ದರಿಂದ ಮನೆಯಲ್ಲಿ ಉಳಿದುಕೊಂಡು ಮೊನ್ನೆ ಮುಂಜಾನೆ ವೇಳೆಯಲ್ಲಿ ನಾನು ನನ್ನ ಹೆಂಡತಿ ಮಹಾದೇವಿ ಇಬ್ಬರು ಖಾಸಗಿ ಬಸ್ಸಿನಲ್ಲಿ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ನನಗೆ ಮತ್ತು ನನ್ನ ಹೆಂಡತಿಗೆ ಹೊಡೆದ ವಿಷಯದಲ್ಲಿ ನನ್ನ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ನನ್ನ ಹೇಳಿಕೆಯನ್ನು ನೀಡಿದ್ದು. ಮಾನ್ಯರ ವಿನಾಕಾರಣ ನಮಗೆ ಮೇಲೆ ಹೇಳಿದ ಎರಡು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 147/2017 ಕಲಂ. 341.323.324.354.504.506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 UÁæ«ÄÃt oÁuÉ PÀ®§ÄgÀV : ದಿನಾಂಕ 29-12-2017  ರಂದು ರಾತ್ರಿ 12-00  ಗಂಟೆಗೆ ಫಿರ್ಯಾದಿ ದಾರರು  ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರ ಸಾರಾಂಶವೇನೆಂದರೆದಿನಾಂಕ 13-12-2017 ರಂದು ಸಾಯಂಕಾಲ 6-00 ಪಿಎಂಕ್ಕೆ  ತಮ್ಮ ಮನೆಯನ್ನು ಕೀಲಿ ಹಾಕಿಕೊಂಡು ಸ್ವಂತ ಊರಿಗೆ  ಹೋಗಿದ್ದು ಇರುತ್ತದೆ. ದಿನಾಂಕ 14-12-2017 ರಂದು ಬೆಳಿಗ್ಗೆ 7 ಗಂಟೆಯ ಮರಳಿ ಕಲಬುರಗಿ ಮನಗೆ ಬಂದು ನೋಡಲು   ಮನೆಯ ಮುಂದಿನ ಬಾಗಿಲ ಕೊಂಡಿ ಮುರಿದು ಬೆಡ್ ರೂಮಿನಲ್ಲಿರುವ ಟ್ರಜರಿ (ಅಲಮಾರಿ) ನೋಡಲಾಗಿ ಟ್ರಜರಿ ಬಾಗಿಲ ಮುರಿದು ಲಾಕರ ಬಾಗಿಲ ಮುರಿದು ಒಳಗಡೆ ಇದ್ದ ನಾಲ್ಕು ಅರ್ದಾ ಅರ್ದಾ ತೊಲೆಯ ಬಂಗಾರದ ಸುತ್ತುಂಗರಗಳು ಅ-ಕಿ- 56,000/- ಮತ್ತು ಒಳಗಡೆ ಹಣ ಎಷ್ಟು ಇಟ್ಟಿದ್ದೇನೆಂಬುವುದು ನೆನಪಿಗೆ ಬರಲಿಲ್ಲ.   ನಾನು ನನ್ನ ವೈಯಕ್ತಿಕ ಕೆಲಸಗಳಲ್ಲಿ ಬಿಡುವಿಲ್ಲದೇ ತೊಡಗಿಕೊಂಡಿದ್ದು ಇಂದು ತಡವಾಗಿ ನಮ್ಮ ಗೆಳೆಯನಾದ ಶ್ರೀ  ದತ್ತಾತ್ರೇಯ ತಂದೆ ಚಂದ್ರಶಾ ಗೌಡಗಾಂವ  ರವರೊಂದಿಗೆ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತ್ತಿದ್ದೇನೆ. ಟ್ರಜರಿಯಲ್ಲಿರುವ ಎಷ್ಟು ಹಣ ಕಳ್ಳತನಾಗಿರುತ್ತವೆ ಎಂಬುದು ತಿದುಕೊಂಡು ನಂತರ ಬಂದು ತಿಳಿಸುತ್ತೇನೆ.                ಕಾರಣ ದಿನಾಂಕ 13-12-2017 ರಂದು 6 ಪಿಎಂ ದಿಂದ ದಿನಾಂಕ 14-12-2017 ರ ಬೆಳಿಗ್ಗೆ 7 .ಎಂದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬಾಗಿಲ ಕೊಂಡಿ ಮುರಿದು ಮನೆಯಲ್ಲಿರುವ ಅಲಮಾರಿ ಬಾಗಿಲ ಮುರಿದು ಲಾಕರದಲ್ಲಿದ್ದ 1) ನಾಲ್ಕು ಅರ್ದಾ ಅರ್ದಾ ತೊಲೆಯ ಬಂಗಾರದ ಸುತ್ತುಂಗರಗಳು ಮತ್ತು ಹಣವನ್ನು  ಕಳ್ಳತನಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಿ ಕಳ್ಳರನ್ನು ಪತ್ತೆ ಹಚ್ಚಿ, ನಮ್ಮ ಹಣ ಮತ್ತು ಬಂಗಾರ ಪತ್ತೆ ಮಾಡಿಕೊಡಲು ಈ ದೂರು .