Police Bhavan Kalaburagi

Police Bhavan Kalaburagi

Saturday, January 20, 2018

Yadgir District Reported Crimes Updated on 20-01-2018

                                         Yadgir District Reported Crimes
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 09/2018 ಕಲಂ 143,147,148,323,324,504,506 ಸಂಗಡ 149 ಐಪಿಸಿ ;- ಸುಮಾರು 15 ದಿವಸಗಳ ಹಿಂದೆ ಜರುಗಿದ ಮಹಿಬೂಬಸುಭಾನಿ ಜಾತ್ರೆ ಕಾಲಕ್ಕೆ ಊಟದ ವಿಷಯದಲ್ಲಿ ಫಿಯರ್ಾದಿ ಮತ್ತು ಆರೋಪಿತರಿಗೂ ಜಗಳವಾಗಿದ್ದು ಆ ಕಾಲಕ್ಕೆ ಗ್ರಾಮದಲ್ಲೇ ಹಿರಿಯರು ಜಗಳವನ್ನು ಬಗೆಹರಿಸಿದ್ದು ಇರುತ್ತದೆ. ಆವಾಗಿನಿಂದ ಆರೋಪಿತರು ಫಿಯರ್ಾದಿ ಮೇಲೆ ದ್ವೇಷ ಸಾಧಿಸುತ್ತಾ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ:18/01/2018 ರಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಫಿಯರ್ಾದಿಯು ತನ್ನ ಮನೆಯ ಮುಂದೆ ಕುಳಿತಾಗ ಆರೋಪಿತರಾದ ಮೈಲಾರಿ ತಂದೆ ಮಾರ್ಥಂಡಪ್ಪ ಮದ್ರಕಿ ಸಂಗಡ 5 ಜನರು ಎಲ್ಲರೂ ಸಾ:ಮುಡಬೂಳ ಇವರೆಲ್ಲರೂ ಕೂಡಿಕೊಂಡು ಬಂದವರೇ ಮೈಲಾರಿ ಈತನು ಭೋಸಡಿ ಮಗನೆ ನಿನ್ನ ಸೊಕ್ಕು ಬಹಳವಾಗಿದೆ, ಊರಲ್ಲಿ ಹಿರಿತನ ಬಹಳ ನಡೆಸಿದ್ದಿಯಾ ಅಂತಾ ಅಂದವನೇ ಅಲ್ಲೇ ಬಿದ್ದಿರುವ ಒಂದು ಕಾಡು ಕಟ್ಟಿಗೆಯನ್ನು ತೆಗೆದುಕೊಂಡವನೇ ಫಿಯರ್ಾದಿಯ ಬೆನ್ನಿಗೆ ಹೊಡೆದು ಕಂದು ಗಟ್ಟಿದ ಗಾಯ ಮಾಡಿದನು. ಇನ್ನುಳಿದವರು ನನ್ನ ಎದೆ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ದೂರು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 17/2018 ಕಲಂ: 302 ಐ.ಪಿ.ಸಿ;- ದಿನಾಂಕ 19/01/2018 ರಂದು 9.00 ಗಂಟೆಗೆ ಶ್ರೀ ಶಿವಪ್ಪ ತಂದೆ ಸಾಯಬಣ್ಣ ಟಣಕೆದಾರ್, ವಯ:40 ವರ್ಷ, ಜಾತಿ:ಬೇಡರು, ಉ||ಒಕ್ಕಲುತನ, ಸಾ||ಕಿರದಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ. ನನ್ನ ಚಿಕ್ಕಪನಾದ ಭೀಮಣ್ಣ ಟಣಕೆದಾರ ಇವರಿಗೆ 1)ತಿರುಪತಿ, 2)ಪಾರ್ವತಮ್ಮ, 3)ಪದ್ದಮ್ಮ, 4)ಸಾವಿತ್ರಮ್ಮ ಹೆಸರಿನ ನಾಲ್ಕುಜನ ಮಕ್ಕಳಿದ್ದು, ಪಾರ್ವತಮ್ಮಳಿಗೆ ಕಾಡಂಗೇರಿಗೆ ಮದುವೆಮಾಡಿಕೊಟ್ಟಿದ್ದು, ಪದ್ದಮ್ಮಳಿಗೆ ನಗನೂರಿಗೆ ಮದುವೆಮಾಡಿಕೊಟ್ಟಿರುತ್ತಾರೆ. ತಿರುಪತಿ ಈತನು ಸುಮಾರು 7 ವರ್ಷಗಳ ಹಿಂದೆ ಪರಸನಳ್ಳಿಯ ಶರಣಮ್ಮಳನ್ನು ಮದುವೆಯಾಗಿದ್ದು ಇರುತ್ತದೆ. ಸಾವಿತ್ರಮ್ಮ ಇವಳದು ಮದುವೆಯಾಗಿರುವುದಿಲ್ಲಾ, ಹರವಾಳ ಗ್ರಾಮದ ತನ್ನ ಚಿಕ್ಕಮ್ಮಳ ಮನೆಯಲ್ಲಿರುತ್ತಾಳೆ. ನನ್ನ ಚಿಕ್ಕಪ್ಪನಾದ ಭೀಮಣ್ಣ ಟಣಕೇದಾರ ಮತ್ತು ಚಿಕ್ಕಮ್ಮಳಾದ ಭೀಮಬಾಯಿ ಇಬ್ಬರು ಮೃತಪಟ್ಟಿರುತ್ತಾರೆ. ಅವರ ಮನೆಯಲ್ಲಿ ತಿರುಪತಿ ಮತ್ತು ಆತನ ಹೆಂಡತಿ ಶರಣಮ್ಮ ಹಾಗು ಅವರ ಮಗನಾದ ರಾಜಶೇಖರ ವಯ:6 ವರ್ಷ ಮತ್ತು ಮಗಳಾದ ಭೀಮಬಾಯಿ ವಯ:4 ವರ್ಷ ಇವರು ಇರುತ್ತಾರೆ. ನನ್ನ ತಮ್ಮನಾದ ತಿರುಪತಿಗೆ ಆಗಾಗ ಸರಾಯಿ ಕುಡಿಯುವ ಚಟ ಇತ್ತು. ತಿರುಪತಿ ಈತನ ಒಂದು ಎಕರೆ ಹೊಲವು ಆತನ ಮನೆಯ ಸಮೀಪ ಊರಿನ ಪಕ್ಕದಲ್ಲಿಯೇ ಇರುತ್ತದೆ. ತಿರುಪತಿಯ ಹೊಲದ ಪಕ್ಕದಲ್ಲಿ ನಮ್ಮೂರಿನ ಹಣಮಂತ್ರಾಯಗೌಡ ಇವರ ಹೊಲ ಇದ್ದು, ಅವರ ಹೊಲವನ್ನು ಚಂದ್ರಪ್ಪ ತಂದೆ ಬಾಲಪ್ಪ ಯಂಕಂಚಿ ಇವರು ಪಾಲಿಗೆ ಮಾಡುತ್ತಾರೆ. ಹೊಲಗಳಿಗೆ ಕೆನಾಲ್ ನೀರು ಬಿಡುವ ಸಂಬಂಧವಾಗಿ ಈ ಹಿಂದೆ ತಿರುಪತಿ ಮತ್ತು ಚಂದ್ರಪ್ಪ ರವರ ಮಧ್ಯೆ ಬಾಯಿಮಾತಿನ ತಕರಾರುಗಳಾಗಿರುತ್ತವೆ. ಹೀಗಿದ್ದು ನಿನ್ನೆ ದಿನಾಂಕ:18/01/2018 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ತಿರುಪತಿ ಮತ್ತು ಚಂದ್ರಪ್ಪ ರವರು ಹೊಲದಲ್ಲಿ ಜಗಳವಾಡುತ್ತಿದ್ದ ಬಗ್ಗೆ ನನಗೆ ತಿಳಿದುಬಂದಿದ್ದರಿಂದ ನಾನು ಮತ್ತು ನನ್ನ ತಮ್ಮನಾದ ದೇವಪ್ಪ ಇಬ್ಬರು ಕೂಡಿಕೊಂಡು ಹೋಗಿದ್ದು, ಹೊಲದಲ್ಲಿ ಚಂದ್ರಪ್ಪ ಮತ್ತು ಚಂದ್ರಪ್ಪನ ಮಗನಾದ ಬಾಲಪ್ಪ ಮತ್ತು ಅವರ ಅಣ್ಣನ ಮಗನಾದ ಈರಪ್ಪ ತಂದೆ ಭೀಮಣ್ಣ ಯಂಕಂಚಿ ಇವರು ತಿರುಪತಿಯೊಂದಿಗೆ ನೀರಿನ ವಿಷಯದಲ್ಲಿ ಬಾಯಿಮಾತಿನ ಜಗಳವಾಡುತ್ತಿದ್ದಾಗ ಅದೇ ವೇಳೆಗೆ ನಮ್ಮೂರಿನ ಹಣಮಂತ್ರಾಯಗೌಡ, ಶಿವನಗೌಡ ಇವರು ಸಹ ಬಂದಿದ್ದು, ಎಲ್ಲರು ಕೂಡಿಕೊಂಡು ತಿರುಪತಿ ಮತ್ತು ಚಂದ್ರಪ್ಪ, ಚಂದ್ರಪ್ಪನ ಮಕ್ಕಳಿಗೆ ತಿಳುವಳಿಕೆ ಹೇಳಿ ಕಳುಹಿಸಿದ್ದು, ನಾನು ನಮ್ಮ ತಮ್ಮನಾದ ತಿರುಪತಿ ಸಾರಾಯಿ ಕುಡಿದಿದ್ದರಿಂದ ಅವನಿಗೆ ಕರೆದುಕೊಂಡು ಅವರ ಮನೆಗೆ ಹೋಗಿ ಬಿಟ್ಟುಹೋಗಿದ್ದು, ಮನೆಯಲ್ಲಿ ತಿರುಪತಿಯ ಹೆಂಡತಿ ಶರಣಮ್ಮ, ಅವರ ಮಗನಾದ ರಾಜಶೇಖರ ಇದ್ದರು. ಆಗ ಸಮಯ ಸಾಯಂಕಾಲ 7:00 ಗಂಟೆ ಆಗಿರಬಹುದು. ನಂತರ ನಾನು ನಮ್ಮ ಮನೆಗೆ ಹೋಗಿರುತ್ತೇನೆ. ರಾತ್ರಿ 11:00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದಾಗ ನನ್ನ ತಮ್ಮ ತಿರುಪತಿಯ ಹೆಂಡತಿಯಾದ ಶರಣಮ್ಮಳು ನಮ್ಮ ಮನೆಗೆ ಬಂದು ನನಗೆ ಎಬ್ಬಿಸಿ ತಿಳಿಸಿದ್ದೇನೆಂದರೆ, ನನ್ನ ಗಂಡ ತಿರುಪತಿ ಈತನಿಗೆ ಹಣೆ ಎಡಗಡೆ ಗಾಯವಾಗಿದ್ದು, ತೊಡ್ಡು ಬಾವುಬಂದಿದ್ದು ಸತ್ತಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಶರಣಮ್ಮಳೊಂದಿಗೆ ಅವರ ಮನೆಗೆ ಹೋಗಿ ನನ್ನ ತಮ್ಮ ತಿರುಪತಿಗೆ ನೋಡಲಾಗಿ ಹಣೆ ಎಡಗಡೆ ಸಣ್ಣ ರಕ್ತಗಾಯವಾಗಿದ್ದು, ತೊಡ್ಡು ಬಾವುಬಂದಿದ್ದು ಮೃತಪಟ್ಟಿದ್ದನು. ಶರಣಮ್ಮಳಿಗೆ ವಿಚಾರಿಸಲಾಗಿ ನಾನು ರಾತ್ರಿ ಮಲಗಿಕೊಂಡಿದ್ದೆ, ಏನಾಗಿದೆಯೋ ನನಗೆ ಗೊತ್ತಿಲ್ಲಾ, ನನಗೆ ಎಚ್ಚರವಾಗಿ ನೋಡಿ ಗಾಭರಿಯಾಗಿ ನಿಮ್ಮ ಮನೆಗೆ ಬಂದಿರುತ್ತೇನೆ ಅಂತಾ ತಿಳಿಸಿದಳು. ಕಾರಣ ನನ್ನ ತಮ್ಮನಾದ ತಿರುಪತಿ ತಂದೆ ಭೀಮಣ್ಣ ಟಣಕೆದಾರ, ವಯ:28 ವರ್ಷ ಈತನಿಗೆ ಯಾರೋ ಯಾವುದೋ ಉದ್ದೇಶಕ್ಕಾಗಿ ಕೊಲೆಮಾಡಿರುತ್ತಾರೆ. ನಿನ್ನೆ ರಾತ್ರಿಯಾಗಿದ್ದರಿಂದ ಕೆಂಭಾವಿಗೆ ಬರಲು ವಾಹನಗಳು ಇರದಿದ್ದರಿಂದ ಹಾಗು ಈ ವಿಷಯವಾಗಿ ಮನೆಯಲ್ಲಿ ವಿಚಾರಿಸಿ ಬರಲು ತಡವಾಗಿರುತ್ತದೆ. ಕಾರಣ ತಾವು ನನ್ನ ತಮ್ಮ ತಿರುಪತಿಗೆ ಕೊಲೆಮಾಡಿದವರನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 17/2018 ಕಲಂ: 302 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 18/2018 ಕಲಂ: 457, 380 ಐ.ಪಿ.ಸಿ ;- ದಿ: 19/01/2018 ರಂದು 18.15 ಗಂಟೆಗೆ ಶ್ರೀ ನಾಗರಾಜ ತಂದೆ ಚಿಕ್ಕಯ್ಯ ಶೆಟ್ಟಿ ಜಾ|| ಶೆಟ್ಟಿ ವಯಾ|| 38 ಉ|| ಸಪ್ತಗಿರಿ ವೈನ್ಶಾಪ್ ಮ್ಯಾನೇಜರ್ ಕೆಂಭಾವಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೆನೆಂದರೆ, ನಾನು ಸುಮಾರು 3-4 ತಿಂಗಳಿನಿಂದ ಕೆಂಭಾವಿ ಪಟ್ಟಣದ ಸಪ್ತಗಿರಿ ವೈನ್ಶಾಪಿನ ಮ್ಯಾನೇಜರ ಅಂತ ಕೆಲಸ ಮಾಡಿಕೊಂಡು ಇರುತ್ತೇನೆ. ನಮ್ಮದು ಶೆಟರ್ಸ್ ಅಂಗಡಿ ಇದ್ದು ಬೆಳಿಗ್ಗೆ 10 ಗಂಟೆಗೆ ಅಂಗಡಿ ತೆರೆದು ರಾತ್ರಿ 10 ಗಂಟೆಗೆ ಬಂದ್ ಮಾಡುತ್ತೇವೆ. ನಮ್ಮ ಅಂಗಡಿಯಲ್ಲಿ ಅಣ್ಣಪ್ಪ ಮತ್ತು ಸೋಮು ಎಂಬ ಎರಡು ಹುಡುಗರು ಕೂಲಿ ಕೆಲಸಕ್ಕೆ ಇರುತ್ತಾರೆ. ಎಂದಿನಂತೆ ನಿನ್ನೆ ದಿನಾಂಕ: 18/01/2018 ರಂದು ರಾತ್ರಿ 10 ಗಂಟೆಗೆ ಅಂಗಡಿ ಬಂದ್ ಮಾಡಿ ಎಲ್ಲ ಹಣ ತೆಗೆದುಕೊಂಡು 4500/- ರೂಪಾಯಿ ಡ್ರಾದಲ್ಲಿ ಇಟ್ಟು ಶೆಟರ್ಸ್ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 19/01/2018 ರಂದು ಬೆಳಿಗ್ಗೆ 6 ಗಂಟೆಗೆ ಯಾರೋ ಫೋನ್ ಮಾಡಿ ನಮ್ಮ ವೈನ್ಶಾಪದ ಶೆಟರ್ಸ ಮುರಿದಿದೆ ಅಂತ ತಿಳಿಸಿದಾಗ ನಾನು ನಮ್ಮ ವೈನ್ಶಾಪಿಗೆ ಬಂದು ನೋಡಲು ನಮ್ಮ ವೈನ್ಶಾಪಿನ ಶೆಟರ್ಸ್ ಮುರಿದು ಅರ್ದ ಎತ್ತಿದ್ದು ಆಗ ನಾನು ಕೀಲಿ ತೆಗೆದು ಒಳಗೆ ಹೋಗಿ ನೋಡಲಾಗಿ ಡ್ರಾದಲ್ಲಿದ್ದ 4500/- ರೂ ಹಣ ಇರಲಿಲ್ಲ ಹಾಗೂ 5 ಬಿಯರ್ ಬಾಟಲಿಗಳು ಸಹ ಕಳವು ಆಗಿದ್ದು ಇರುತ್ತದೆ. ಅದರಂತೆ ನಮ್ಮ ಅಂಗಡಿಯ ಸ್ವಲ್ಪ ದೂರದಲ್ಲಿ ಬಸವ ಸೆಂಚುರಿ ಬಟ್ಟೆ ಅಂಗಡಿಯು ಸಹ ಕಳವು ಆಗಿದ್ದು ಸದರಿ ಅಂಗಡಿಯ ಶೆಟರ್ಸ್ ಸಹ ಮುರಿದು ಕಳವು ಆಗಿದ್ದು ಸದರ ಅಂಗಡಿಯ ಮಾಲಿಕರಾದ ಭೀಮಾಶಂಕರ ರೆಡ್ಡಿ ರವರಿಗೆ ವಿಚಾರಿಸಲು ಅವರ ಅಂಗಡಿಯ ಗಲ್ಲೆಯಲ್ಲಿದ್ದ 7500/- ರೂ ಹಣ ಕಳವು ಆದ ಬಗ್ಗೆ ತಿಳಿಸಿದರು. ಅದರಂತೆಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಪ್ರಕಾಶ ಆಲ್ದಾಳ ಇವರ ಅಡತಿ ಅಂಗಡಿಯ ಶೆಟರ್ಸ್ ಮುರಿದು ಅಂಗಡಿಯ ಗಲ್ಲಾದಲ್ಲಿದ್ದ 5000/- ರೂ ಹಣ ಕಳವು ಆಗಿರುತ್ತದೆ ಮತ್ತು ದೇವರಾಜ ಪೂಜಾರಿ ಇವರ ಲಕ್ಷ್ಮೀ ಟ್ರೇಡರ್ಸ್ ಅಂಗಡಿಯ ಶೆಟರ್ಸ್ ಸಹ ಮುರಿದು ಸದರ ಅಂಗಡಿ ಗಲ್ಲಾದಲ್ಲಿದ್ದ 6500/- ರೂ ಕಳ್ಳತನ ಆಗಿದ್ದು ಇರುತ್ತದೆ. ಹೀಗೆ ಒಟ್ಟು 4 ಅಂಗಡಿಗಳು ಸೇರಿ 23,500/- ರೂ. ನಗದು ಹಣ ಹಾಗೂ 5 ಬೀಯರ್ ಅ.ಕಿ 650/- ರೂ ಕಿಮ್ಮತ್ತಿನ ವಸ್ತು ಹಾಗೂ ನಗದು ಹಣ ಕಳ್ಳತನವಾಗಿದ್ದು ಇರುತ್ತದೆ. ದಿನಾಂಕ: 18/01/2018 ರ ರಾತ್ರಿ 10 ಗಂಟೆಯಿಂದ ದಿನಾಂಕ: 19/01/2018 ರ ಬೆಳಗಿನ 6 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿ ಸಮೇತ ಉಳಿದ ಇನ್ನೂ 3 ಅಂಗಡಿಗಳ ಶೆಟರ್ಸ್ ಮುರಿದು ನಗದು ಹಣ ಹಾಗೂ ಬೀಯರ್ ಬಾಟಲಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 18/2018 ಕಲಂ: 457, 380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
                                                                    
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 07/2018  ಕಲಂ 279, 337, 338 ಐಪಿಸಿ ;- ದಿನಾಂಕ 20/01/2018 ರಂದು ಬೆಳಿಗ್ಗೆ 7-45 ಎ.ಎಂ. ಸುಮಾರಿಗೆ ಫಿಯರ್ಾದಿಯವರು ಲಕ್ಷ್ಮೀನಗರದಿಂದ ನೀರು ತೆಗೆದುಕೊಂಡು ತಮ್ಮ ಮೋಟಾರು ಸೈಕಲ್ ನಂ.ಕೆಎ-36, ಇಬಿ- 2932 ನೆದ್ದರ ಮೇಲೆ ಮನೆಗೆ ಹೊರಟಾಗ ಮಾರ್ಗ ಮದ್ಯೆ ಕೋಟರ್ು ಎದುರುಗಡೆ ಎಸ್.ಬಿ.ಐ ಬ್ಯಾಂಕ್ ಹತ್ತಿರ ಮುಂದಿನ ಮುಖ್ಯ ರಸ್ತೆಯ ಮೇಲೆ ಆರೋಪಿತ ತನ್ನ ಮೋಟಾರು ಸೈಕಲ್ ನಂ.ಕೆಎ-33, ಎಚ್-6369 ನೆದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ಫಿಯರ್ಾದಿಯ ಮೋಟಾರು ಸೈಕಲ್ಗೆ ಡಿಕ್ಕಿ ಕೊಟ್ಟು ನಂತರ ರಸ್ತೆಯ ಡಿವೆಡರ್ ಜಾಲಿಗೆ ಡಿಕ್ಕಿಕೊಟ್ಟು ಅಪಗಾತ ಮಾಡಿದ್ದರಿಂದ ಫಿಯರ್ಾದಿಗೆ ಮತ್ತು ಆರೋಪಿತನ ಮೋಟಾರು ಸೈಕಲ್ ಮೇಲೆ ಕುಳಿತ ಹಿಂಬದಿ ಸವಾರನಿಗೆ ಸಾದಾ ಮತ್ತು ಭಾರೀ ರಕ್ತಗಾಯವಾದ ಬಗ್ಗೆ ಫಿಯರ್ಾದಿ ಇರುತ್ತದೆ.

ಬೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 10/2018 ಕಲಂ 323,354(ಬಿ),504,506 ಐಪಿಸಿ ಹಾಗು 8 ಪೋಕ್ಸೋ ಎಕ್ಟ್ ಹಾಗೂ 3(1)(ಆರ್)(ಎಸ್)(ಡಬ್ಲು);- ದಿನಾಂಕ:20/01/2018 ರಂದು 12 ಪಿಎಮ್ಕ್ಕೆ ಫಿಯರ್ಾದಿ ಮಾಳಮ್ಮ ತಂದೆ ರಮೇಶ ದೊಡಮನಿ ವ:17ವರ್ಷ ಜಾ:ಮಾದರ ಉ:ವಿದ್ಯಾಭ್ಯಾಸ ಸಾ:ಇಂಗಳಗಿ ತಾ:ಶಹಾಪೂರ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಫಿಯರ್ಾದಿ ಕೊಟ್ಟಿದ್ದೇನೆಂದರೆ ನಮ್ಮ ತಂದೆತಾಯಿಗೆ ಮೂರು ಜನ ಗಂಡು ಮಕ್ಕಳು ಹಾಗು ನಾನು ಒಬ್ಬಾಕೆ ಹೆಣ್ಣು ಮಗಳಿರುತ್ತೇನೆ. ನಮ್ಮ ತಂದೆ ತಾಯಿಯವರು ನನ್ನ ವಿದ್ಯಾಭ್ಯಾಸ ಕುರಿತು ನಮ್ಮ ಸಂಬಂಧಿಕರು ಇರುವ ಯಡ್ರಾಮಿಯಲ್ಲಿ ಬಿಟ್ಟಿದ್ದು ನಾನು ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿರುತ್ತೇನೆ. ಆಗಾಗ ಹಬ್ಬ ಹರಿದಿನಗಳಲ್ಲಿ ನಮ್ಮ ಊರಿಗೆ ಬಂದು ಹೋಗುತ್ತಿದ್ದೆ. ಹೀಗಿದ್ದು ಮೊನ್ನೆ ಸಂಕ್ರಾತಿ ಹಬ್ಬದ ಕುರಿತು ಊರಿಗೆ ಬಂದಿದ್ದೆ. ಹಬ್ಬ ಮುಗಿದಿದ್ದರಿಂದ ಇಂದು ಮರಳಿ ಯಡ್ರಾಮಿಗೆ ಹೋಗಬೇಕೆಂದು ಬೆಳಿಗ್ಗೆ ಎದ್ದು ತಯಾರಿ ಮಾಡಿಕೊಳ್ಳುತ್ತಿದ್ದಾಗ ಬಹಿದರ್ೆಸೆ ಬಂದಿದ್ದರಿಂದ ನಮ್ಮ ತಾಯಿಗೆ ಹೇಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಹಿದರ್ೆಸೆಗೆಂದು ಶಹಾಪೂರ ರೋಡಿಗೆ ಇರುವ ಬಸನಗೌಡರ  ಹೊಲಕ್ಕೆ ಹೋದೆ. ನಮ್ಮೂರ ಹೆಣ್ಣು ಮಕ್ಕಳು ಕೂಡಾ ಸಂಡಾಸಕ್ಕೆಂದು ಗೌಡರ ಹತ್ತಿ ಹೊಲಕ್ಕೆ ಹೋಗುತ್ತಾರೆ. ಆದರೆ ಹೊತ್ತು ಜಾಸ್ತಿ ಆಗಿದ್ದರಿಂದ  ಅಲ್ಲಿ ಯಾರೂ ಇರಲಿಲ್ಲಾ. ನಾನು ಹೊಲದ ಒಳಗೆ ಹತ್ತಿಯ ಹೊಲದಲ್ಲಿ ಹೋಗಿ ಬಹಿದರ್ೆಸೆಗೆ ಕೂತುಕೊಂಡಾಗ ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಒಮ್ಮೆಲೆ ರೋಡಿನ ಕಡೆಯಿಂದ ನಮ್ಮೂರ ಕುರುಬ ಜನಾಂಗದ ಸಂತೋಷ ತಂದೆ ಶೇಖರ ಕಂದಕೂರ ಈತನು ನನ್ನ ಹತ್ತಿರ ಓಡಿ ಬಂದವನೇ ನನ್ನ ಬಾಯಿಯನ್ನು ಒತ್ತಿಹಿಡಿದು ನನ್ನನ್ನು ಎತ್ತಿಕೊಂಡು ನಾನು ಕುಳಿತ ಜಾಗದಿಂದ ಹತ್ತಿಯ ಹೊಲದಲ್ಲಿ ಮುಂದಕ್ಕೆ ಒಯ್ದು ನೀನು ನನಗೆ ಇಷ್ಟ ಆಗಿದಿ ನೀನು ನನ್ನ ಸಂಗಡ ಮಲಗಿಕೊ ಚೀರಾಡಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತ ಅಂದು ನಿಂತಲ್ಲೇ ತನ್ನ ಪ್ಯಾಂಟನ್ನು ಬಿಚ್ಚಿಕೊಂಡು ನಿಂತಾಗ ನಾನು ಯಾಕೋ ನಿನಗೆ ನಿನ್ನ ಅಕ್ಕ ತಂಗಿಯರು ಇಲ್ಲವೇನು. ಅವರ ಹತ್ತಿರ ಹೋಗು ಅಂತ ಅಂದಾಗ ಎಲೇ ಮಾದಿಗ ಸೂಳಿ ನಾವು ಗೌಡ್ರು ಇದ್ದೀವಿ ಈಗ ನನ್ನ ಸಂಗಡ ಮಲಗಿಕೊಳ್ಳಲಿಲ್ಲ ಅಂದರ ನಿನಗ ಜೀವ ಸಹಿತ ಬಿಡುವುದಿಲ್ಲಾ ಅಂತ ನನಗೆ ಹಿಡಿದುಕೊಂಡು ನನ್ನ ಮೈ ಕೈ ಮುಟ್ಟಿ, ನನ್ನ ಬಲಗಡೆ ಗದ್ದಕ್ಕೆ ಆತ ಉಗುರಿನಿಂದ ಚೂರಿ ನನ್ನ ಲೆಗ್ಗಿನ್ ಹಿಡಿದು ಜಗ್ಗಿ ನನ್ನನ್ನು ಬೆತ್ತಲೆ ಮಾಡಲು ಬಂದಾಗ ಆಗ ನಾನು ಆತನಿಗೆ ದಬ್ಬಿಸಿಕೊಟ್ಟು ರೋಡಿನ ಕಡೆಗೆ ಓಡಿ ಬರುತ್ತಿದ್ದಂತೆ ನನ್ನ ತಾಯಿಯಾದ ಮರಲಿಂಗಮ್ಮ ಇವರು ಬಂದು ನೋಡಿದರು. ಆಗ ಅವನು ಜನರು ನೋಡುತ್ತಾರೆ ಅಂತ ಹತ್ತಿಯ ಹೊಲದೊಳಗೆ ಓಡಿಹೋದನು. ನಾನು ಮತ್ತು ನಮ್ಮ ತಾಯಿ ಕೂಡಿ ಮನೆಗೆ ಬಂದು ನಮ್ಮ ತಂದೆಯವರಾದ ರಮೇಶ, ಅಣ್ಣಂದಿರರಾದ ಸಂಜಯಕುಮಾರ ಮತ್ತು ಮಂಜುನಾಥ ಇವರಿಗೆ ವಿಷಯ ತಿಳಿಸಿ ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ನನಗೆ ಜಾತಿ ನಿಂದನೆ ಮಾಡಿ ಮಾನಭಂಗ ಮಾಡಿ ಜೀವದ ಬೆದರಿಕೆ ಹಾಕಿದ ಸಂತೋಷ ಕಂದಕೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಫಿಯರ್ಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ.
 

BIDAR DISTRICT DAILY CRIME UPDATE 20-01-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-01-2018

©ÃzÀgÀ £ÀUÀgÀ ¥ÉưøÀ oÁuÉ AiÀÄÄ.r.Dgï £ÀA. 01/2018, PÀ®A. 174 ¹.Dgï.¦.¹ :-
ಫಿರ್ಯಾದಿ ಶಾಂತಮ್ಮಾ ಗಂಡ ವಿಶ್ವನಾಥ ವಯ: 55 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ತಳಘಾಟ, ಬೀದರ ರವರ ಕಿರಿಯ ತಮ್ಮನಾದ ರಾಜಕುಮಾರ ತಂದೆ ಸಂಗ್ರಾಮ ವಯ: 45 ವರ್ಷ ಈತನು ಸರಾಯಿ ಕುಡಿಯುವ ಚಟ ಉಳ್ಳವನಿದ್ದು, ಇವನ ಚಟಕ್ಕೆ ಬೆಸರಗೊಂಡು ಅವನ ಹೆಂಡತಿ ರಮಾಬಾಯಿ ಇವಳು ತನ್ನ ತವರು ಮನೆ ಹಾರೂರಗೇರಿಯಲ್ಲಿ ವಾಸವಾಗಿದ್ದು, ಇವನಿಗೆ ಮಕ್ಕಳು ಇರುವುದಿಲ್ಲ, ಈಗ ಸುಮಾರು 2 ವರ್ಷಗಳಿಂದ ತನೊಬ್ಬನೆ ಟೇಲರ ಕೆಲಸ ಮಾಡಿಕೊಂಡು ತನ್ನ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 18-01-2018 ರಂದು 0800 ಗಂಟೆ ಸುಮಾರಿಗೆ ಯಾಕೋ ಫಿರ್ಯಾದಿಯ ತಮ್ಮ ಹೊರಗಡೆ ಕಾಣದ ಕಾರಣ ಮನೆಗೆ ಹೋಗಿ ನೋಡಲು ಮನೆಯ ಬಾಗಿಲು ಖುಲ್ಲಾ ಇಟ್ಟು ಮನೆಯಲ್ಲಿ ತಗಡದ ಕಬ್ಬಿಣದ ದಂಟೆಗೆ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟ ಅವಸ್ಥೆಯಲ್ಲಿ ಕಂಡಿದ್ದು, ತಮ್ಮ ರಾತ್ರಿ ವೇಳೆಯಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆ, ಇವನ ಸಾವಿನಲ್ಲಿ ಯಾರ ಮೇಲೆ ಯಾವುದೆ ದೂರು ಅಥವಾ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಮೇರೆಗೆ ದಿನಾಂಕ 19-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 08/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 18-01-2018 gÀAzÀÄ ¦üAiÀiÁð¢ UÉÆÃgÀPÀ vÀAzÉ ªÀiÁgÀÄw ªÉÆÃgÉ ªÀAiÀÄ: 24 ªÀµÀð, eÁw: ªÀÄgÁoÁ, G: eÉ.¹.© ZÁ®PÀ, ¸Á: CªÀÄzÁ¨ÁzÀ gÀªÀgÀÄ ªÀÄvÀÄÛ JªÀiï.r C¸ÀèA E§âgÀÆ PÀÆr ªÀ²ªÀÄ gÀªÀgÀ ªÉÆÃmÁgÀ ¸ÉÊPÀ® £ÀA. PÉJ-39/ºÉZï-3952 £ÉÃzÀgÀ ªÉÄÃ¯É GzÀVgÀPÉÌ ºÉÆÃUÀ®Ä ºÉÆgÀnzÀÄÝ, ¸ÀzÀj ªÉÆÃmÁgÀ ¸ÉÊPÀ® ¦üAiÀiÁð¢ ZÀ¯Á¬Ä¸ÀÄwÛzÀÄÝ, E§âgÀÄ ªÉÄúÀPÀgÀ ClÖgÀUÁ ªÀiÁUÀðªÁV GzÀVÃgÀ PÀqÉUÉ ºÉÆÃUÀĪÁUÀ ªÉÄúÀPÀgÀ ¸ÀgÀPÁj ¦.AiÀÄÄ. PÁ¯ÉÃd ªÀÄÄAzÉ gÉÆÃr£À ªÉÄÃ¯É ºÉÆÃUÀĪÁUÀ M§â C¥ÀjavÀ ªÉÆÃmÁgÀ ¸ÉÊPÀ¯ï ¸ÀªÁgÀ JzÀÄj¤AzÀ CAzÀgÉ ClÖgÀUÁ PÀqɬÄAzÀ vÀ£Àß ªÉÆÃmÁgÀ ¸ÉÊPÀ¯ï CwªÉÃUÀ¢AzÀ ªÀÄvÀÄÛ C®PÀëvÀ£À¢AzÀ £ÀqɬĹ ¦üAiÀiÁð¢AiÀĪÀgÀ ªÉÆÃmÁgÀ ¸ÉÊPÀ°UÉ rQÌ ªÀiÁr rQÌ ªÀiÁrzÀ C¥ÀjavÀ ªÉÆÃmÁgÀ ¸ÉÊPÀ® ZÁ®PÀ vÀ£Àß ªÉÆÃmÁgÀ ¸ÉÊPÀ® ¸ÀªÉÄÃvÀ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ vÀÄnAiÀÄ ªÉÄïÉ, §®UÉÊUÉ, §® ªÉƼÀPÉÊUÉ vÀgÀazÀ UÁAiÀÄ ªÀÄvÀÄÛ JªÀiï.r C¸ÀèA EªÀ¤UÉ §®UÁ® vÉÆqÉAiÀÄ ªÀÄƼÉUÉ ¨sÁj UÀÄ¥ÀÛUÁAiÀĪÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 6/2018, PÀ®A. 32, 34 PÉ.E PÁAiÉÄÝ :-  
ದಿನಾಂಕ 19-01-2018 ರಂದು ಸೊನಾಳ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತಾ ತಾನಾಜಿ ಎ.ಎಸ್.ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸೊನಾಳ ಗ್ರಾಮಕ್ಕೆ ಹೊಗಿ ಹನುಮಾನ ಮಂದಿರ ಬದಿಗೆ ಹೊಗಿ ನೋಡಲು ಆರೋಪಿ ಸಂತೋಷ ತಂದೆ ಅಂತಪ್ಪಾ, ಸಾ: ಸೊನಾಳ ಇತನು ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದು ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ 7 ಓಲ್ಡ್‌ ಟಾವರ್ನ ವಿಸ್ಕಿ 180 ಎಮ್‌.ಎಲ್‌ ನೇದವುಗಳು ಅ.ಕಿ 479/- ರೂಪಾಯಿ ಹಾಗು 18 ಯುಎಸ್‌ ವಿಷ್ಕಿ 90 ಎಮ್‌.ಎಲ್‌ ಪ್ಲಾಸ್ಟಿಕ್‌ ಬಾಟಲಗಳು ಅ.ಕಿ 506/- ರೂಪಾಯಿ, ಹೀಗೆ ಒಟ್ಟು 985/- ರೂ. ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ವರದಕ್ಷಣೆ ಹಣಕ್ಕೆ  ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ  ಮುತ್ತಮ್ಮ ಗಂಡ ಭೀಮರಾಯ ಆನೆಕ್ಕಿ ಸಾ: ಸೋಮನಾಥ ಹಳ್ಳಿ ರವರು ಮಗಳಾದ ಮಂಜುಳಾ ಇವಳಿಗೆ ಮೂರು ವರ್ಷಗಳ ಹಿಂದೆ ಭಂಕೂರ ಗ್ರಾಮದ ಸಾಯಿಬಣ್ಣ ತಂದೆ ಶರಣಪ್ಪ ಹೊಸಮನಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಲ್ಲಿ 50 ಸಾವಿರ ರೂಪಾಯಿ ಮತ್ತು 5 ತೊಲೆ ಬಂಗಾರ ಹಾಗೂ ಇತರೆ ಗೃಹ ಬಳಿಕೆ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು. ನಂತರ ದಿನಗಳಲ್ಲಿ ನನ್ನ ಮಗಳ ಗಂಡನ ಮನೆಯವರಾದ ಗಂಡ ಸಾಯಿಬಣ್ಣ 2) ಮಹಾದೇವಿ ಗಂಡ ಶರಣಪ್ಪ  3) ಶೀಲಮ್ಮ ಗಂಡ ಕುಪ್ಪಣ್ಣ ಹೊಸಮನಿ 4) ಮಲ್ಲಪ್ಪ ತಂದೆ ಶರಣಪ್ಪ ಹೊಸಮನಿ 5) ರೇವಸಿದ್ದಪ್ಪ ಅವರಾದಿ 6) ಚಂದಮ್ಮ ಗಂಡ ರೇವಣಸಿದ್ದಪ್ಪ ಅವರಾದಿ 7) ಕಾಶಿಬಾಯಿ ಗಂಡ ಶರಣಪ್ಪ ಹೊಸಮನಿ 8) ಮಹಾದೇವ ತಂದೆ ಬಸಣ್ಣ 9) ರಾಚಮ್ಮ ಗಂಡ ಮಹಾದೇವ ನಾಟಿಕರ 10) ಶ್ರೀದೇವಿ ಗಂಡ ಮಲ್ಲಪ್ಪ ಹೊಸಮನಿ 11) ಕುಪ್ಪಣ್ಣ ತಂದೆ ಶರಣಪ್ಪ ಹೊಸಮನಿ ರವರೆಲ್ಲಾರೂ ಸೇರಿ ನನ್ನ ಮಗಳಿಗೆ ಬೈಯುವುದು ಮತ್ತು ಮಾನಸಿಕವಾಗಿ , ದೈಹಿಕವಾಗಿ ಹಿಂಸೆ ನೀಡುತಿರುವುದು. ಮಾಡುತ್ತಿದ್ದು ನಾನು ನಮ್ಮ ಸಂಬಂಧಿಕರು ಈ ರೀತಿ ನನ್ನ ಮಗಳಿಗೆ ಕಿರಿಕಿರಿ ಮಾಡುವುದು ಸರಿ ಅಲ್ಲ ಅಂತಾ ತಿಳಿ ಹೇಳಿದ್ದು ಇರುತ್ತದೆ. ಅಲ್ಲದೆ ನನ್ನ ಮಗಳ ಕುಪ್ಪಾಸ ಕಾರ್ಯಕ್ರಮದಲ್ಲಿ ಒಂದು ತೊಲೆ ಬಂಗಾರ ಕೊಟ್ಟಿರುತ್ತೇನೆ. ಅದರೂ ಸಹ ನನ್ನ ಮಗಳಿಗೆ ವರದಕ್ಷಿಣೆ ಹಣ ತರಬೇಕು ಅಂತಾ ಕಿರುಕುಳ ಕೊಡುತ್ತಿದರಿಂದ ನನ್ನ ಮಗಳು ಮಂಜುಳಾ ಇವಳು ಒಂದು ವರ್ಷಗಳ ಕಾಲ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇನೆ. ಹೀಗಿದ್ದು ದಿನಾಂಕ: 17/01/2018 ರಂದು ನನ್ನ ಅಳಿಯ ಸಾಯಿಬಣ್ಣ ಸೋಮನಾಥ ಹಳ್ಳಿಗೆ ಬಂದು ನನ್ನ ಮಗಳಿಗೆ ಮಗಳು ಮಂಜುಳಯೊಂದಿಗೆ ಬೇರೆ ಮನೆಮಾಡಿಕೊಡು ಚನ್ನಾಗಿ ಸಂಸಾರ ಮಾಡಿಕೊಂಡಿರುತ್ತೇನೆ ಅಂತಾ ಹೇಳಿ ಕರೆದುಕೊಂಡು ಹೋಗಿದ್ದನು ದಿನಾಂಕ: 19/01/2018 ರಂದು ಮುಂಜಾನೆ 7-00 ನನ್ನ ಅಳಿಯ ಸಾಯಿಬಣ್ಣ ಪೋನ ಮಾಡಿ ನಾನು ಸಂಡಾಸಕ್ಕೆ ಹೋಗಿ ಬರುವಷ್ಟರಲ್ಲಿ ಮಂಜುಳಾ ಇವಳು ಊರಲು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದನು ಆಸ್ಪತ್ರೆ ಕರೆದುಕೊಂಡು ಹೋಗುತ್ತಿದೇವೆ  ಜಿ ಜಿ ಹೆಚ್ ಕಲಬುರಗಿಗೆ ಬರಲು ತಿಳಿಸಿದರಿಂದ ನಾನು ನನ್ನ ಮಗ ಚಂದ್ರಶೇಖರ , ನಮ್ಮ ಅಣ್ಣತಮ್ಮಕೀಯ ನಾಗಮ್ಮ ಆನೇಕ್ಕಿ , ಕಮಲಾಬಾಯಿ ಆನೆಕ್ಕಿ , ಗುರು ಆನೆಕ್ಕಿ , ಶಾಮರಾಜ ಆನೆಕ್ಕಿ ರವರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗಳು ಮೃತ ಪಟ್ಟಿದಳು . ನನ್ನ ಮಗಳಿಗೆ ಅಳಿಯ ಸಾಯಿಬಣ್ಣ ಮತ್ತು ಸಂಗಡ 10 ಜನರು ಸೇರಿ ವರದಕ್ಷಿಣೆ ಹಣ ತರಬೇಕು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ನೇಣು ಹಾಕಿ ಕೊಲೆ ಮಾಡಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಮಹ್ಮದ ಅಜೀಮ್ ತಂದೆ ಮಹ್ಮದ ಯೂಸೂಫ್ ಜಮಾದಾರ ಸಾ: ಸಡಕ ಕಿಣ್ಣಿ ತಾ:ಜಿ: ಕಲಬುರಗಿ ಹಾ:ವ: ಇಸ್ಲಾಂಬಾದ ಕಾಲನಿ ಕಲಬುರಗಿ ಇವರು ಹುಮನಾಬಾದ ರಿಂಗ ರೋಡನಲ್ಲಿ ನಿಂತ ತನಗೆ ಪರಿಚಯದ ಶ್ರೀಮತಿ ರಹೇಮತಬೀ ಲದಾಫ ಇವಳಿಗೆ ತನ್ನ ಮೋಟಾರ ಸೈಕಲ ನಂ ಕೆಎ 33 ಜೆ 1497 ನೇದ್ದರ ಹಿಂದೆ ಕೂಡಿಸಿಕೊಂಡು ಅವರಾದ ಗ್ರಾಮಕ್ಕೆ ಬಿಡಲು ಹೊರಟಾಗ ಸಂಜೆ 07-30 ಗಂಟೆ ಸುಮಾರಿಗೆ ಉಪಳಾಂವ ಸೀಮಾಂತರದಲ್ಲಿ ಇರುವ ಬಿರಾದಾರ ಪೆಟ್ರೋಲ ಪಂಪ ದಾಟಿ ಇರುವ ಒಂದು ಬ್ರೀಡ್ಜ ಹತ್ತಿರ ಬಂದಾಗ ಆಗ ಎದುರುನಿಂದ ಅಂದರೆ ಹುಮನಾಬಾದ ರೋಡ ಕಡೆಯಿಂದ ಒಂದು ನೀಲಿ ಬಣ್ಣದ ಕಾರು ಚಾಲಕನು ತನ್ನ ವಶದಲ್ಲಿದ್ದ ಕಾರನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ಫಿರ್ಯಾದಿ ಸೈಡಿಗೆ ಬಂದು ಅವನ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದನು. ಇದರಿಂದಾಗಿ ಫಿರ್ಯಾದಿ ಮತ್ತು ಹಿಂದೆ ಕುಳಿತ ರಹೇಮತಬೀ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದಿದ್ದದ್ದು, ಫಿರ್ಯಾದಿ ಮತ್ತು ರಹೇಮತಬೀ ಇವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ರಹೇಮತಬೀ ಇವಳಿಗೆ ತಲೆ ಭಾರಿ ಒಳಪೆಟ್ಟಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು. ಅವರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಯಲ್ಲಿ ಹಾಕಿಕೊಂಡು ರಾತ್ರಿ 08-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದಾಗ ವೈದ್ಯರು ರಹೇಮತಬೀ ಇವಳಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. . ಸದರಿ ಅಪಘಾತವು ಈ ಮೇಲೆ ಹೇಳಿದಂತೆ ಕಾರ  ಕೆಎ 32 ಎನ್ 2086 ಚಾಲಕನ ತಪ್ಪಿನಿಂದ ಅಪಘಾತ ಸಂಭವಿಸಿದ್ದರಿಂದ ಅವನ  ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 19/01/2018 ರಂದು ಸುಧಾರಿತ ಗಸ್ತು ಸಂ 23 ಕರಜಗಿ ಗ್ರಾಮದ ಬೀಟ್ ಸಿಬ್ಬಂದಿಯಾದ ಸಂತೋಷ ಸಿಪಿಸಿ-657 ರವರು ಕರಜಗಿ ಗ್ರಾಮದ ಖ್ವಾಜಾ ಸೈಫನ್ ಮುಲ್ಕ ದರ್ಗಾ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ್ದು  ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ ಗ್ರಾಮದ ಖ್ವಾಜಾ ಸೈಫನ್ ಮುಲ್ಕ ದರ್ಗಾ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ದರ್ಗಾ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ನಾಗಪ್ಪ ತಂದೆ ಶರಣಪ್ಪ ನಾದ ಸಾ||ಕರಜಗಿ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.