Police Bhavan Kalaburagi

Police Bhavan Kalaburagi

Sunday, January 31, 2021

BIDAR DISTRICT DAILY CRIME UPDATE 31-01-2021

 

                                        ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-02-2021

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 08/2021 ಕಲಂ 279, 304(ಎ) ಐಪಿಸಿ ಜೋತೆ 187 ಐಎಮವಿ ಎಕ್ಟ :-

ದಿನಾಂಕ 30/01/2021 ರಂದು 1245 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ಮಾಹಿತಿ ಬಂದ ಮೇರೆಗೆ ಬೀದರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ   ಅಲ್ಲಿ ಹಾಜರಿದ್ದ ಸುಲೋಚನಾ ಗಂಡ ಅಂಕುಶ ರವರ ಹೆಳಿಕೆ ಪಡೆದುಕೊಂಡಿದರ ಸಾರಂಶವೇನೆಂದರೆ,  ದಿನಾಂಕ 29/01/21 ರಂದು ಇವರ ಗಂಡ ಅಂಕುಶ ವಯ: 30 ವರ್ಷ, ರವರು ಚಾಂಬೋಳ ಗ್ರಾಮದ ಹೊಲಕ್ಕೆ ಹೋಗಿ ರಾಶಿ ಮಾಡಿ ದಿ: 30/01/2021 ರಂದು 1100 ಗಂಟೆ ಸುಮಾರಿಗೆ ಆಟೋ ಸಂ. ಕೆಎ-38/8924 ನೇದರಲ್ಲಿ ಬೀದರಕ್ಕೆ ಬರುವಾಗ ಬೀದರ-ಚಾಂಬೋಳ ರಸ್ತೆಯ ಮೇಲೆ ಕೊಟರಕಿ ಕಂಕರ ಮಷೀನ ಹತ್ತಿರ ಆಟೋ ಚಾಲಕನು ತನ್ನ ಆಟೋ ಅತೀವೇಗ ಹಗು ನಿಷ್ಕಾಳಜಿತನದಿಂದ ಚಲಾಸಿ ಆಟೋ ಪಲ್ಟಿ ಮಾಡಿರುತ್ತಾನೆ ಇದರಿಂದಾಗಿ ಫಿರ್ಯಾದಿ ಗಂಡನ ಎಡಭುಜದ ಮೇಲೆ ಹಾಗು ಎಡ ಮತ್ತು ಬಲ ಬೆನ್ನಿನ ಮೇಲೆ ಹಾಗೂ ಎದೆಯ ಮೇಲೆ ಭಕ್ಕಳಿಯಲ್ಲಿ ಭಾರಿ ಗುಪ್ತಗಾಯವಾಗಿ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗದ ಮಧ್ಯೆ ಮೃತ ಪಟ್ಟಿದ್ದು ಇರುತ್ತದೆ.  ಅಂತಾ ಮೃತನ ಪತ್ನಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 02/2021 ಕಲಂ  78(3) ಕೆ.ಪಿ. ಎಕ್ಟ :-

ದಿನಾಂಕ 30-01-2021 ರಂದು ಮನ್ನಳ್ಳಿ ಗ್ರಾಮದ ವಗದಾಳೆ ಪೆಟ್ರೋಲ ಬಂಕ ಹತ್ತಿರ ಎದುರು ಇರುವ ಹೋಟಲನ ಪಕ್ಕ ಇರುವ ಖುಲ್ಲಾ ಜಾಗೆಯಲ್ಲಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮಟಕಾ ಎಂಬ ನಸಿಬಿನ  ಚೀಟಿ ನಡೆಸುತಿದ್ದಾನೆ 1 ರೂಪಾಯಿಗೆ 100 ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೆರೆಗೆ ಸಿಬ್ಬಂದಿಯೊಂದಿಗೆ  ಮನ್ನಳ್ಳಿ ಗ್ರಾಮದ ವಗದಾಳೆ ಪೆಟ್ರೋಲ ಬಂಕ ಹತ್ತಿರ ಎಲ್ಲರು ಕೆಳಗಡೆ ಇಳಿದು ಮರೆಯಾಗಿ ನಿಂತು ನೋಡಲು ಎದುರುಗಡೆ ಇರುವ ಹೋಟೇಲ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ 1 ರೂ:ಗೆ 100/- ಕೊಡುವುದಾಗಿ ಕೂಗುತ್ತಾ ಮಟಕಾ ಚಿಟಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗ ಖಚಿತ ಪಡಿಸಿಕೊಂಡು ದಾಳಿ ನಡೆಯಿಸಿ ಅವನನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಫಯಾಜ ತಂದೆ ಗುಡುಸಾಬ ಫಕೀರ  ವಯ-27 ವರ್ಷ ಜಾತಿ ಮುಸ್ಲಿಂ ಉ, ಗಿಲಾವ ಕೆಲಸ ಸಾ; ಮನ್ನಳ್ಳಿ ತಾ  ಬೀದರ ಅಂತಾ ತಿಳಿಸಿದ್ದು ಮತ್ತು ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಮಿಲಿಂದ ತಂದೆ ಕಾಶಪ್ಪಾ ಸಾ ಮ್ನನಳ್ಳಿ ರವರಿಗೆ ನೀಡುತ್ತೆನೆ ಅಂತಾ ತಿಳಿಸಿದ್ದು ನಂತರ ಅವನ ಬಳಿ ಇದ್ದ ಒಟ್ಟು ನಗದು ಹಣ ರೂ: 1720/-ಎರಡು ಮಟಕಾ ಚಿಟಿಗಳು ಒಂದು ಬಾಲಪೆನ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 03/2021 ಕಲಂ 78(3) ಕೆ.ಪಿ. ಎಕ್ಟ :-

ದಿನಾಂಕ 30-01-2021 ರಂದು  ಮನ್ನಳ್ಳಿ ಗ್ರಾಮದ ಅಂಬೇಡ್ಕರ ಪ್ರೌಢಶಾಲೆಯ ಹಿಂದುಗಡೆ ಇರುವ ಬಾಲಕರ ವಸತಿ ನಿಯದ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮಟಕಾ ಎಂಬ ನಸಿಬಿನ  ಚೀಟಿ ನಡೆಸುತಿದ್ದಾನೆ 1 ರೂಪಾಯಿಗೆ 100 ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೆರೆಗೆ ಸಿಬ್ಬಂದಿಯೊಂದಿಗೆ ಅಂಬೇಡ್ಕರ ಪ್ರೌಢಶಾಲೆಯ ಹಿಂದುಗಡೆ ಇರುವ ಬಾಲಕರ ವಸತಿ ನಿಯದ ಹತ್ತಿರ ಇಳಿದು ಮರೆಯಾಗಿ ನಿಂತು ನೋಡಲು ವಸತಿ ನಿಲಯದ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ 1 ರೂ:ಗೆ 100/- ಕೊಡುವುದಾಗಿ ಕೂಗುತ್ತಾ ಮಟಕಾ ಚಿಟಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗ ಖಚಿತ ಪಡಿಸಿಕೊಂಡು ದಾಳಿ ನಡೆಯಿಸಿ ಅವನನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ರಾಜಕುಮಾರ ತಂದೆ ಪ್ರಭು ಔಂಟಿಗಿನೋರ  ವಯ-30 ವರ್ಷ ಜಾತಿ ಕಬ್ಬಲಿಗ ಉ, ಕೂಲಿ ಕೆಲಸ ಸಾ; ಮನ್ನಳ್ಳಿ ತಾ  ಬೀದರ ಅಂತಾ ತಿಳಿಸಿದ್ದು ಮತ್ತು ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಮಿಲಿಂದ ತಂದೆ ಕಾಶಪ್ಪಾ ಸಾ ಮ್ನನಳ್ಳಿ ರವರಿಗೆ ನೀಡುತ್ತೆನೆ ಅಂತಾ ತಿಳಿಸಿದ್ದು ನಂತರ ಅವನ ಬಳಿ ಇದ್ದ ಒಟ್ಟು ನಗದು ಹಣ ರೂ: 3100/-ಎರಡು ಮಟಕಾ ಚಿಟಿಗಳು ಒಂದು ಬಾಲಪೆನ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 16/2021 ಕಲಂ 454, 457, 380 ಐಪಿಸಿ :-

ದಿನಾಂಕ 30/01/2021 ರಂದು 1100 ಗಂಟೆಗೆ ಫೀರ್ಯಾದಿ ಶ್ರೀ ಆಕಾಶ ತಂದೆ ಧನರಾಜ ಖಂಡೆ ವಯ-30 ಜಾ/ ಲಿಂಗಾಯತ ಉ/ ವ್ಯಾಪಾರ ಸಾ/ ಹೊಸ ಆದರ್ಶ ಕಾಲೋನಿ ಬೀದರ ನಿವಾಸಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಯು ಬೀದರ ಹೊಸ ಆದರ್ಶ ಕಾಲೋನಿ ಯಲ್ಲಿ  ಸೋಮನಾಥ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ದಿನಾಂಕ 08/01/2021 ರಂದು 1600 ಗಂಟೆಗೆ ತನ್ನ ಕುಟುಂಬ ಸದಸ್ಯ ರೊಂದಿಗೆ  ಮನೆಗೆ ಬೀಗ ಹಾಕಿ ಹೈದ್ರಾಬಾದಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೊಗಿದ್ದು ದಿನಾಂಕ 09/01/2021 ರಂದು ಮುಂಜಾನೆ 0900 ಗಂಟೆಗೆ ನಮ್ಮ ಮನೆಯ ಮಾಲಿಕರಾದ ಸೋಮನಾಥ ರವರ ಮಗ ದಿಲೀಪ ಇತನು ನನಗೆ ಫೋನ ಮಾಡಿ ತಿಳಿಸಿದ್ದು ಎನೆಂದರೆ  ನಿಮ್ಮ ಮನೆಯ ಕೀಲಿ ಮುರಿದಿದ್ದು ಕಳವು ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ಅಂದೆ 1300 ಗಂಟೆಗೆ ಬೀದರಕ್ಕೆ ಮರಳಿ  ಬಂದು ನೊಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು  ನಂತರ ಮನೆಯ ಓಳಗೆ ಹೊಗಿ ನೋಡಲಾಗಿ ಮಲಗುವ ಕೋಣೆಯಲ್ಲಿ ಸೆಲ್ಫದಲ್ಲಿ ಇಟ್ಟಿದ 1) ನಗದು ಹಣ 60000=00 ರೂ 2) ಬಂಗಾರದ ಎರಡು 10 ಗ್ರಾಂ ಉಂಗುರ ಅಂ.ಕಿ. 40000=00 ರೂ 3) ಬಂಗಾರದ 09 ಗ್ರಾಂ ಕಿವಿಯ ಓಲೆ ಅಂ,ಕಿ. 35000=00 ರೂ. 4) ಐವಾ ಕಂಪನಿಯ ಎಲ್.ಸಿ.ಡಿ. ಟಿ.ವಿ 52 ಇಂಚ ಅಂ,ಕಿ, 14000=00 ರೂ, ಹಿಗೆ ಒಟ್ಟು  149000=00 ರೂಪಾಯಿ  ಮೌಲ್ಯದ ಬಂಗಾರದ ಆಭರಣಗಳು, ನಗದು ಹಣ ಮತ್ತು ಟಿ.ವಿ ಕಳವು ಆಗಿರುತ್ತದೆ.  ದಿ: 08/01/2021 ರಂದು 1600 ಗಂಟೆಯಿಂದಾ ದಿನಾಂಕ 09/01/2021 ರಂದು 0900 ಗಂಟೆಯ ಅವಧಿಯಲ್ಲಿ ಕಳ್ಳರು ನಾನು ಬಾಡಿಗೆಯಿಂದಾ  ವಾಸವಿದ್ದ ಮನೆಯ ಬಾಗಿಲಿನ  ಕೀಲಿ  ಮುರಿದು ಒಳಗೆ ಪ್ರವೇಶಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Saturday, January 30, 2021

BIDAR DISTRICT DAILY CRIME UPDATE 30-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-01-2021

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಶರಣಮ್ಮ ಗಂಡ ಸುಭಾಸ ಮೈಲುರೆ ವಯ: 75 ವರ್ಷ, ಜಾತಿ: ಕುರುಬ, ಸಾ: ಮೈಲಾರ ಖಾನಾಪೂರ, ಸದ್ಯ: ಅಷ್ಟೂರ ರವರ ಮಗಳಾದ ಜಗದೇವಿ 45 ವರ್ಷ ಇಕೆಯ ಗಂಡ ಪ್ರಭು ರವರು ಈಗ ಸುಮಾರು 5 ವರ್ಷದ ಹಿಂದೆ ತೀರಿಕೊಂಡಿದ್ದು ಮತ್ತು ಜಗದೇವಿ ರವರಿಗೆ ಶಿವಕುಮಾರ ಅಂತ 20 ವರ್ಷದ ಮಗನಿದ್ದು  ಎರಡು ವರ್ಷದ ಹಿಂದೆ ಹೃದಯ ಘಾತದಿಂದ ಮೃತ್ತಪಟ್ಟಿದ್ದು ಇರುತ್ತದೆ, ಜಗದೇವಿ ಇವಳು ತನ್ನ ಮಗ ತೀರಿಕೊಂಡಿದ್ದರಿಂದ ನಾನು ಸಾಯುತ್ತೇನೆ ನನಗೆ ಗಂಡ ಇಲ್ಲಾ ಮತ್ತು ಮಗನಿಲ್ಲಾ ಇದ್ದು ಏನು ಪ್ರಯೋಜನ ಅಂತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಈ ಬಗ್ಗೆ ನನ್ನದು ಯಾರ ಮೇಲೆ ಯಾವುದೇ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕಯ ಸಾರಾಂಶದ ಮೇರೆಗೆ ದಿನಾಂಕ 29-01-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಜನಾಬಾಯಿ ಗಂಡ ಅಂಕುಶ ನನ್ನೂರೆ ವಯ: 40 ವರ್ಷ, ಜಾತಿ: ಮರಾಠಾ, ಸಾ: ಚಿಕ್ಕಲಚಂದಾ, ಸದ್ಯ: ಬಳತೆ ಹೊಲದಲ್ಲಿ ಭಾಲ್ಕಿ ರವರ ಗಂಡ ಸುಮಾರ ವರ್ಷಗಳಿಂದ ಸರಾಯಿ ಕುಡಿಯುವ ಚಟ್ಟವುಳ್ಳವನಾಗಿದ್ದು, ಹೀಗಿರುವಾಗ  ದಿನಾಂಕ 28-01-2021 ರಿಂದ 29-01-2021 ರಂದು 0300 ಅವಧಿಯಲ್ಲಿ ಫಿರ್ಯಾದಿಯು ಪಾಲದಿಂದ ಮಾಡಿದ ಬಳತೆ ರವರ ಹೊಲದಲ್ಲಿಇರುವ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ, ತನ್ನ ಗಂಡ ಅಂಕುಶನ ಸಾವಿನಲ್ಲಿ ನನಗೆ ಯಾರ ಮೇಲೆ ಯಾವದೆ ತರಹದ ದೂರು ಅಥವಾ ಸಂಶಯ ಇರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಸುಕೇಶ ತಂದೆ ರಾವಣ ಕಾಂಬಳೆ ವಯ: 32 ವರ್ಷ, ಜಾತಿ: ಎಸ್.ಸಿ, ಸಾ: ಖಾನಾಪುರ(ಕೆ), ತಾ: ಬಸವಕಲ್ಯಾಣ ರವರ ಹೆಂಡತಿ ಮಾಹಿ ಕಾಂಬಳೆ ರವರು ದಿನಾಂಕ 28-01-2021 ರಂದು 1830 ಗಂಟೆಯಿಂದ 1900 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ, ಕಾಣೆಯಾಗಿರುತ್ತಾಳೆ, ಅವಳ ಚಹರೆ ಪಟ್ಟಿ 1) ಉದ್ದ ಮುಖ, 2) ನೇರ ಮೂಗು, 3) ಗೋಧಿ ಮೈಬಣ್ಣ, 4) ದಪ್ಪನೆ ಮೈಕಟ್ಟು 5) 5 ಅಡಿ ಎತ್ತರ ಇರುತ್ತಾಳೆ, 6) ಅವಳ ಮೈ ಮೇಲೆ ಒಂದು ಬಿಳಿ ಬಣ್ಣದ ಟಾಪ ಮತ್ತು ಹಳದಿ ಬಣ್ಣದ ಲೆಗ್ಗಿನ್ಸ ಇರುತ್ತದೆ, 7) ಅವಳು ಮರಾಠಿ, ಹಿಂದಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 12/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 29-01-2020 ರಂದು ಫಿರ್ಯಾದಿ ಸದ್ದಾಮ ತಂದೆ ಶೇಖ್ ಇಸಾಕ ಸಾ: ಧರ್ಮಪೇಟಗಲ್ಲಿ ಮಂಠಾಳ, ತಾ: ಬಸವಕಲ್ಯಾಣ ರವರು ಬಸವಕಲ್ಯಾಣ ನಗರದ ತ್ರೀಪೂರಾಂತ ಓಣಿಯಲ್ಲಿದ್ದ ಮ್ಮ ಸಂಬಂಧಿಕರಿಗೆ ಅಕ್ಕಿ ಕೊಡಲು ನ್ನ ಹಿರೋ ಡಿಲಕ್ಸ ದ್ವಿ-ಚಕ್ರ ವಾಹನ ಸಂ. ಕೆಎ-56/ಜೆ-1080 ನೇದರ ಮೇಲೆ ನ್ನ ಹಿಂದೆ ಸಮದ ತಂದೆ ಉಸ್ಮಾನಸಾಬ ಖಿಂಡಿವಾಲೆ ವಯ: 55 ವರ್ಷ, ಸಾ: ಧರ್ಮಪೇಟಗಲ್ಲಿ ಮಂಠಾಳ ರವರಿಗೆ ಕೂಡಿಸಿಕೊಂಡು ಬಸವಕಲ್ಯಾಣ- ಖಾನಾಪೂರ ಮಾರ್ಗವಾಗಿ ಬರುವಾಗ ಖಾನಾಪೂರ ಶಿವಾರದಲ್ಲಿ ಎದುರಿನಿಂದ ಒಂದು ಅಪ್ಪಿ ಆಟೋ ರಿಕ್ಷಾ ನಂ. ಕೆಎ-39/5106 ನೇದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನೀಲಕಂಠ ಕ್ರಾಸ್ ಹತ್ತಿರ ಫಿರ್ಯಾದಿಯವರ ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಬಲಗಾಲಿನ ಮೊಳಕಾಲು ಹತ್ತಿರ ತರಚಿದ ರಕ್ತಗಾಯ ಮತ್ತು ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಸಮದ ಇತನಿಗೆ ತಲೆಗೆ ರಕ್ತಗಾಯ ಮತ್ತು ಬಲಗಾಲಿನ ಮೊಳಕಾಲು ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಬಸವಕಲ್ಯಾಣ ಕಡೆಗೆ ಹೊಗುವ ಒಂದು ಆಟೋ ರಿಕ್ಷಾಕ್ಕೆ ಕೈ ಮಾಡಿ ಅದರಲ್ಲಿ ಗಾಯಗೊಂಡ ಇಬ್ಬರು ಆಟೋದಲ್ಲಿ ಕುಳಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ನಂತರ ಸಮದ ಇತನು  ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಕುರಿತು ಉಮರ್ಗಾಕ್ಕೆ ಹೋಗಿರುತ್ತಾನೆ,  ಆರೋಪಿಯು ತನ್ನ ಆಟೋ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Friday, January 29, 2021

BIDAR DISTRICT DAILY CRIME UPDATE 29-01-2021

 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-01-2020

ಹಳ್ಳಿಖೇಡ (ಬಿ)  ಪೊಲೀಸ್ ಠಾಣೆ ಅಪರಾಧ ಸಂಖ್ಯೆ 10/2021 ಕಲಂ 420 ಐಪಿಸಿ :-

ದಿನಾಂಕ : 28/01/2021 ರಂದು ಸಾಯಂಕಾಲ 1815 ಗಂಟೆಗೆ ಫಿರ್ಯಾದ ಶ್ರೀಮತಿ ಬೀಬಿ ಫಾತಿಮಾ ಗಂಡ ಅಲಿಮೋದ್ದಿನ್ ಪಟೇಲ್ ನಾನು ಬೀಬಿ ಫಾತಿಮಾ ಗಂಡ ಅಲಿಮೋದ್ದಿನ್ ಪಟೇಲ್ ಬಿರಾದಾರ ಸಾ: ವಡ್ಡನಕೇರಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ,  ಇವರ ಮಗನಾದ ಗೌಸ ಪಟೇಲ್ ವಯ: 18 ವರ್ಷ ಇವನು ಹುಟ್ಟಿದಾಗಿನಿಂದ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥನಿರುತ್ತಾನೆ. ಹೀಗಾಗಿ ಆವಾಗಾವಾಗ  ಮನೆಯಿಂದ ನಮಗೆ ಹೇಳದೆ ಕೇಳದೆ ಹೋಗಿ ನಂತರ ಒಂದೆರಡು ದಿವಸದಲ್ಲಿ ಮತ್ತೆ ಮನೆಗೆ ವಾಪಸ ಬರುತ್ತಿದ್ದನು.  ಇವರ ಗಂಡ ದಿನಾಂಕ: 24/01/2021 ರಂದು ಸುರಪೂರ ಮುಂಬೈ ರೂಟ್ ಬಸ್ ಮೇಲೆ ಕರ್ತವ್ಯಕ್ಕೆ ಹೋಗಿರುತ್ತಾರೆ.   ಮನೆಯಲ್ಲಿ ಫಿರ್ಯಾದಿ ಮತ್ತು ಇವರ ಮೂರು ಜನ ಮಕ್ಕಳಿದ್ದು ಹೀಗಿರುವಾಗ ದಿನಾಂಕ: 25/01/2021 ರಂದು ಮುಂಜಾನೆ 1000 ಗಂಟೆ ಸುಮಾರಿಗೆ ನನ್ನ ಮಗ ಗೌಸ್ ಪಟೇಲ್ ಅವನು   ಮನೆಯಿಂದ   ಹೇಳದೆ ಕೇಳದೆ ಹೋರಗಡೆ ಹೋಗಿದ್ದು, ನಂತರ ಮಧ್ಯಾಹ್ನ 1:00 ಗಂಟೆಯಾದರು ಮನೆಗೆ ಬರದ ಕಾರಣ ನಾನು ನನ್ನ ಮಗ ಎಲ್ಲಿಗೆ ಹೋಗಿರುತ್ತಾನೆ ಅಂತ  ಮನೆಯ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ನಂತರ ಮನ್ನಾಏಖ್ಖೆಳಿಯಿಂದ ಹುಮನಾಬಾದಕ್ಕೆ ಹೋಗುವ ಒಂದು ಕ್ರೂಸರ್ ನಿಂತಿದ್ದು, ಕ್ರೂಸರನಲ್ಲಿ ಅಳುತ್ತಾ ಕುಳಿತಾಗ ಒಬ್ಬ ಅಪರಿಚಿತ ಹೆಣ್ಣು ಮಗಳು ಕ್ರೂಸರ ವಾಹನದಲ್ಲಿ ಜೊತೆಯಲ್ಲಿ ಅಂದಾಜು 12 ವರ್ಷದ ಒಂದು ಹುಡುಗಿಯನ್ನು ಕರೆದುಕೊಂಡು ಬಂದು ಇವರ ಎದುರಿಗೆ ಸೀಟಿನ್ ಮೇಲೆ ಕುಳಿತಿದ್ದು, ಕ್ರೂಸರ್ ಮನ್ನಾಏಖ್ಖೆಳಿಯಿಂದ ಬಿಟ್ಟ ನಂತರ ಸ್ವಲ್ಪ ಮುಂದೆ ಬಂದ ಮೇಲೆ ಆ ಹೆಣ್ಣು ಮಗಳು ಫಿರ್ಯಾದಿಗೆ ''ಕೈಕೆ ವಾಸ್ತೆ ರೋರಿ ಅಮ್ಮಾ'' ಅಂತ ವಿಚಾರಿಸಲು ಫಿರ್ಯಾದಿಯು ಹಮಾರೆ ಬಚ್ಚೆ ಆಜ ಸುಭೆ ಹಮಾರೆ ಘರಸೆ ಗಯಾ ಅಭಿತಕ್ ನಹೀ ಆಯಾ ಧೂಂಡೆ ತೋಬಿ ನಹಿ ಮಿಲಾಹ ಕಾಹಾ ಗಯಾ ಕೀ ಕ್ಯಾ ನಹೀ ಕಿ ನಹೀ ಮಾಲೂಮ ಔರ ಮೇರಾ ಬಚ್ಚಾ ಧಿಮಾಕ್ಸೆ ಬೀ ಥೋಡಾ ಕಮ್ ಜೋರ ಹೈ ಅಂತ ಅಂದಾಗ ಅವಳು ಮೈ ದರ್ಗಾಕು ಜಾರಿ ಹು ದರ್ಗಾಕಿ ಕಸಾಮ ಖುರಾ ಕಿ ಕಸಾಮ ಮೇರಿ ಭೇಟಿಕಿ ಕಸಾಮ ಮೈ ಝೂಟ್ ನಹೀ ಬೋಲರಿ ತುಮಾರೆ ಬಚ್ಚೆಕೋ ಧವಾ ದೆತಿಹು ಸಬ್ ಕಮ್ ಹೋತೆ ಔರ್ ತುಮಾರೆ ಬಚ್ಚೆ ಶ್ಯಾಮ ತಲಕ್ ಘರಕೋ ಆತಾ ಅಂತ ಅಂದಳು. ಆಗ ಫಿರ್ಯಾದಿಯು ಅವಳಿಗೆ ಏಂಹಿಚ್ ಜೋಕುಚ್ ಧವಾ ದೆದೋ ತುಮಾರಿ ಜೋ ಕುಚ್ ಹೈ ಓ ಹಧಿಯಾ ದೆದೆತು ಅಂತ ಅಂದಾಗ ಅವಳು ಯಾಹ ನಹೀ ತುಮಾರೆ ಘರಮೇ ಆಕೆ ದಿಯಾತೋ ಕಮ್ ಹೋತಾ ಧೆಕೆ ಧೇನಾ ಪಡತಾ ಅಂತ ಅಂದಾಗ ಫಿರ್ಯಾದಿಯು ಅವಳ ಮೇಲೆ ಭರವಸೆ ಮಾಡಿ ಅವಳನ್ನು ಮನೆಗೆ ಕರೆದುಕೊಂಡು  ಸಾಯಂಕಾಲ 4:00 ಗಂಟೆ ಸುಮಾರಿಗೆ ಬಂದಾಗ ಮನೆಗೆ ಬಂದ 10 ನಿಮಿಷದಲ್ಲಿ ಇವರ ಮಗ ಗೌಸ್ ಪಟೇಲ್ ಅವನು ಮನೆಗೆ ಬಂದಿರುತ್ತಾನೆ. ಹೀಗಾಗಿ ಫಿರ್ಯಾದಿಗೆ ಸಹ ಆ ಹೆಣ್ಣು ಮಗಳ ಮೇಲೆ ನಂಬಿಕೆ ಬಂದಿರುತ್ತದೆ. ಆ ದಿವಸ ಅವಳು ಮಗನಿಗೆ ಕೈಮೈ ಮುಟ್ಟಿ ನೋಡಿ ಮಂತರಿಸಿರುತ್ತಾಳೆ. ಆಮೇಲೆ ಹೊತ್ತು ಹೋಗಿದ್ದರಿಂದ ಅವಳು ನಾನು ಈ ದಿವಸ ರಾತ್ರಿ ಇಲ್ಲೆ ಉಳಿದುಕೊಂಡು ನಾಳೆ ಮುಂಜಾನೆ ಮಂತ್ರ ಓದಿ ನಿನ್ನ ಮಗನಿಗೆ ಗುಣ ಪಡಿಸಿ ಹೋಗುತ್ತೇನೆ ಅಂತ ಹೇಳಿದ್ದರಿಂದ ಅವಳ ಮಾತಿಗೆ ನಂಬಿ ತಮ್ಮ ಮನೆಯಲ್ಲಿಯೆ ಇಟ್ಟುಕೊಂಡಿರುತ್ತೇನೆ. ನಂತರ ದಿನಾಂಕ: 26/01/2021 ರಂದು ಮುಂಜಾನೆ 8:30 ಗಂಟೆ ಸುಮಾರಿಗೆ ಆ ಹೆಣ್ಣು ಮಗಳು ಈಗ ನಿಮ್ಮ ಮನೆಯಲ್ಲಿ ಒಂದು ಮಾಂತ್ರಿಕ ಪೂಜೆ ಮಾಡುತ್ತೇನೆ ಆ ಪೂಜಾ ಮಾಡಿದರೆ ನಿಮ್ಮ ಮಗ ಪೂತರ್ಿಯಾಗಿ ಗುಣಮುಖ ಆಗುತ್ತಾನೆ. ಅದಕ್ಕೆ ಬಂಗಾರ ಮತ್ತು ಬೆಳ್ಳಿಯ ಆಭಾರಣಗಳು ಹಾಗೂ ಒಂದು ನಾರಿಯಲ್ ಮತ್ತು ನಿಂಬೂ ಹಾಗೂ ಬಂಗಡಿ ಬೇಕಾಗುತ್ತವೆ ಅಂತ ತಿಳಿಸಿದ ಮೇರೆಗೆ ಫೀರ್ಯಾದಿಯು ತನ್ನ ಹತ್ತಿರ ಇದ್ದ 3 ತೊಲೆಯ ಬಂಗಾರದ ಆಭರಣಗಳು ಮತ್ತು 30 ತೊಲೆಯ ಬೆಳ್ಳಿ ಆಭರಣಗಳು ಒಂದು ನಾರಿಯಲ್ ಮತ್ತು ನಿಂಬೂ ಹಾಗೂ ಬಂಗಡಿಗಳು ಒಂದು ತಾಟಿನಲ್ಲಿ ಹಾಕಿಕೊಟ್ಟಾಗ ಆ ಹೆಣ್ಣು ಮಗಳು ನನಗೆ ಪೂಜೆಕ್ಕೆ ಇಷ್ಟೆ ಬಂಗಾರ ಮತ್ತು ಬೆಳ್ಳಿ ಸಾಕಾಗುವುದಿಲ್ಲಾ ಇನ್ನು ಹೆಚ್ಚಿಗೆ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಬೇಕಾಗುತ್ತವೆ ನಿಮ್ಮ ಅಕ್ಕಪಕ್ಕದ ಮನೆಯವರಿಂದ ತೆಗೆದುಕೊಂಡು ಬರುವಂತೆ ಮತ್ತು ಪೂಜಾ ಆದ ನಂತರ ಅವರಿಗೆ ವಾಪಸ್ ಕೊಡುವಂತೆ ತಿಳಿಸಿದ್ದು, ಅದರಂತೆ ಫಿರ್ಯಾದಿಯು 1] ಶಾಕೀರಾ ಗಂಡ ಹುಸೇನ್ ಪಟೇಲ್ ರವರ ಹತ್ತಿರ 11 ಗ್ರಾಂ ಬಂಗಾರದ ಆಭರಣ(ಕೋರಳಿನ ಗಲ್ಸೇರಿ) ಮತ್ತು 30 ತೊಲಿ ಬೆಳ್ಳಿಯ ಕಾಲಿನ 2 ಚೈನಗಳು 2] ಶೇಮಿಮ ಬೇಗಂ ಗಂಡ ಚಾಂದ ಪಟೇಲ್ ರವರ ಹತ್ತಿರ 15 ಗ್ರಾಂ ಬಂಗಾರದ ಗುಂಡಿನ ಸರ ಹಾಗೂ 30 ತೊಲಿ ಬೆಳ್ಳಿಯ ಕಾಲಿನ 2 ಚೈನಗಳು 3] ಸುವರ್ಣ ಗಂಡ ಮಲ್ಲಿಕಾಜರ್ುನ ಮೇತ್ರೆ ರವರ ಹತ್ತಿರ 25 ತೊಲಿ ಬೆಳ್ಳಿಯ ಕಾಲಿನ 2 ಚೈನಗಳು 4] ಕನಿಸಾ ಬೇಗಂ ಗಂಡ ಪಪ್ಪು ಖುರೇಷಿ ರವರ ಹತ್ತಿರ 20 ಗ್ರಾಂ ಬಂಗಾರದ ನೇಕ್ಲಿಸ್ 5] ರೈಸಾ ಬೇಗಂ ಗಂಡ ನಯಿಮೋದ್ದಿನ್ ಖುರೇಷಿ ರವರ ಹತ್ತಿರ 30 ಗ್ರಾಂ ಬಂಗಾರದ 2 ನೇಕ್ಲಿಸ್ 6] ಶಹಾಜನ್ ಬೇಗಂ ಗಂಡ ಮೋಸಿನ್ ಶೇರಿಕರ ರವರ ಹತ್ತಿರ 11 ಗ್ರಾಂ ಬಂಗಾರದ ಆಭರಣ(ಕೋರಳಿನ ಗಲ್ಸೇರಿ) ಹಾಗೂ 30 ತೊಲಿ ಬೆಳ್ಳಿಯ ಕಾಲಿನ 2 ಚೈನಗಳು 7] ಸಾಲಿಯಾ ಬೇಗಂ ಗಂಡ ಅಮೀರ ಪಟೇಲ್ ಬಿರಾದಾರ ರವರ ಹತ್ತಿರ 10 ಗ್ರಾಂ ಬಂಗಾರದ ಆಭರಣ (ಕೋರಳಿನ ಗಲ್ಸೇರಿ), 10 ಗ್ರಾಂ ಬಂಗಾರದ ಗುಂಡಿನ ಸರ ಹಾಗೂ 30 ತೊಲಿಯ ಬೆಳ್ಳಿಯ ಕಾಲಿನ 2 ಚೈನಗಳು 8] ಮಾಲಾನ ಬೀ ಗಂಡ ಸಲಿಂ ಪಟೇಲ್ ಬಿರಾದಾರ ರವರ ಹತ್ತಿರ 6 ಗ್ರಾಂ ಬಂಗಾರದ ಕಿವಿಯ 2 ರಿಂಗಗಳು ಹಾಗೂ ನಮ್ಮ ಮನೆಯಲ್ಲಿನ 2 ತೊಲಿ 8 ಗ್ರಾಂ. ದ ಬಂಗಾರದ ಆಭರಣಗಳು(ಒಂದು ಕೊರಳಿನ ಸೇವನ್ ಪೀಸ್-7 ಗ್ರಾಂ, ಒಂದು ಕೋರಳಿನ ಗಲ್ಸೇರಿ 15 ಗ್ರಾಂ ಮತ್ತು 6 ಗ್ರಾಂ. ನ ಕಿವಿಯ 2 ರಿಂಗಗಳು) ಹಾಗೂ 30 ತೊಲಿಯ ಬೆಳ್ಳಿಯ ಕಾಲಿನ 2 ಚೈನಗಳು ಹೀಗೆ ಒಟ್ಟು 14 ತೊಲಿ 1 ಗ್ರಾಂ ಬಂಗಾರದ ಆಭರಣಗಳು ಮತ್ತು 1 ಕೆಜಿ 750 ಗ್ರಾಂ ಬೆಳ್ಳಿಯ ಆಭರಣಗಳು ಪೂಜೆಗೆಂದು ತಂದು ಕೊಟ್ಟಿದ್ದು, ಆಗ ಬೆಳ್ಳಿಯ ಆಭರಗಳು ಮತ್ತು ಬಂಗಾರದ ಆಭರಣಗಳು ಹಾಗೂ ನಾರಿಯಲ್ ಮತ್ತು ನಿಂಬೂ ಹಾಗೂ ಬಂಗಡಿಗಳು ಎಲ್ಲಾ ಬಟ್ಟೆಯಲ್ಲಿ ಸಪರೇಟ್ ಆಗಿ ಕಟ್ಟಿ ತಾಟಿನಲ್ಲಿ ಇಟ್ಟಿರುತ್ತೇನೆ. ಆಗ ಅವಳು ಏನೋ ಮಂತ್ರ ಹಾಕಿದಂತೆ ಮಾಡಿ ಅದರ ಮೇಲೆ ಕುಂಕುಮ್ ಅರಸಿನ್ ಹಾಕಿ ಮಂತರಿಸಿ ಅದರ ಮೇಲೆ ಒಂದು ಹೊಸ ಸೀರೆ ಮುಚ್ಚಿರುತ್ತಾಳೆ. ನಂತರ ಫಿರ್ಯಾದಿಗೆ ಇದು ಇಲ್ಲೆ ನಿಮ್ಮ ಮನೆಯಲ್ಲಿಯೆ ಇರಲಿ ನಿನು ನನ್ನ ಜೊತೆ ದರ್ಗಾಕೆ ಬರಬೇಕು ಅಲ್ಲಿ ನಾನು ನಿನಗೆ ಜಡಿ ಬೂಟಿ ದವಾ ಕೊಡುತ್ತೇನೆ ಅದು ತೆಗೆದುಕೊಂಡು ಬಂದ ನಂತರ ನೀನು ತಾಟಿನಲ್ಲಿ ಮಂತರಿಸಿ ಇಟ್ಟಿದ್ದ ಬೆಳ್ಳಿ ಬಂಗಾರದ ಒಡವೆಗಳನ್ನು ಯಾರಿಂದ ತೆಗೆದುಕೊಂಡು ಬಂದಿದ್ದಿ ಅವರಿಗೆ ವಾಪಸ ಕೊಡು ಅಂತ ಹೇಳಿ ಫಿರ್ಯಾದಿಗೆ ಜೊತೆಯಲ್ಲಿ ಜಹೀರಾಬಾದಕ್ಕೆ ಮುಂಜಾನೆ 9:30 ಗಂಟೆಗೆ ವಡ್ಡನಕೇರಾ ಗ್ರಾಮದಿಂದ ಕರೆದುಕೊಂಡು ಹೋಗಿರುತ್ತಾಳೆ. ಜಹೀರಾಬಾದನಲ್ಲಿರುವ ಒಂದು ದರ್ಗಾಕ್ಕೆ ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಕರೆದುಕೊಂಡು ಹೋಗಿ ನನಗೆ ದರ್ಗಾದಲ್ಲಿ ಖುರಾಣ ಓದುತ್ತಾ ಕೂಡು ಅಂತ ಹೇಳಿ ತಾನು ಜಡಿ ಬೂಟಿ ಧವಾ ತೆಗೆದುಕೊಂಡು ಬರುತ್ತೇನೆ ಅಂತ ಹೇಳಿ ಹೋದವಳು ನಂತರ ಸಮಯವಾದರು ವಾಪಸ ಬಂದಿರುವುದಿಲ್ಲಾ. ಆಗ ನಾನು ಅವಳು ವಾಪಸ್ ಬರದ ಕಾರಣ ದಾರಿ ನೋಡಿ ನಂತರ ನಾನು ಜಹೀರಾಬಾದದಿಂದ ನಮ್ಮೂರಿಗೆ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಬಂದು ನಮ್ಮ ಮನೆಯಲ್ಲಿ ತಾಟಿನಲ್ಲಿ ಮಂತರಿಸಿ ಇಟ್ಟಿದ್ದ ಆಭರಣಗಳನ್ನು ತಾಟಿನ ಮೇಲಿನ ಬಟ್ಟೆಗಳನ್ನು ತೆಗೆದು ನೋಡಲು ಅದರಲ್ಲಿ ಇಟ್ಟಿದ್ದ ಬೆಳ್ಳಿಯ ಮತ್ತು ಬಂಗಾರದ ಆಭರಣಗಳ ಗಂಟು ಇದ್ದಿರುವುದಿಲ್ಲಾ. ಅದರಲ್ಲಿ ಬರಿ ನಾರಿಯಲ್ ಬಂಗಡಿ ಹಾಗೂ ನಿಂಬೂಗಳು ಇದ್ದವು. ನಮ್ಮ ಮನೆಗೆ ಬಂದ ಅಪರಿಚಿತ ಹೆಣ್ಣು ಮಗಳು ಅಂದಾಜು 40-45 ವಯಸ್ಸಿನವಳು ಇರುತ್ತಾಳೆ. ಅವಳ ಹೆಸರು ವಿಳಾಸ ನಾನು ತಿಳಿದುಕೊಂಡಿರುವುದಿಲ್ಲಾ. ನನ್ನ ಮಗನನ್ನು ಗುಣ ಪಡಿಸುವುದಾಗಿ ಹೇಳಿ ಮಾಂತ್ರಿಕ ಪೂಜೆ ಮಾಡಲು ಬೆಳ್ಳಿಯ ಮತ್ತು ಬಂಗಾರದ ಆಭರಣಗಳು ಇಡುವಂತೆ ನನಗೆ ಹೇಳಿ ನಂಬಿಸಿ ನಾನು ಅವಳ ಮೇಲೆ ನಂಬಿಕೆ ಇಟ್ಟು ಪೂಜೆಗೆಂದು ಒಟ್ಟು 14 ತೊಲಿ 1 ಗ್ರಾಂ ಬಂಗಾರದ ಆಭರಣಗಳು ಒಟ್ಟು ಅ.ಕಿ-7,05,000/- ಹಾಗೂ 1 ಕಿಲೋ 750 ಗ್ರಾಂ ಬೆಳ್ಳಿಯ ಆಭರಣಗಳ ಒಟ್ಟು ಅ.ಕಿ-1,05,000/- ರೂಪಾಯಿ ಬೆಲೆ ಬಾಳುವುದು ಹೀಗೆ ಒಟ್ಟು 8,10,000/- ರೂಪಾಯಿ ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಇಟ್ಟಿದ್ದು, ಅವುಗಳನ್ನು ಗೊತ್ತಾಗದಂತೆ ತಾಟಿನಿಂದ ತೆಗೆದುಕೊಂಡು ಹೋಗಿ ಮೋಸ ಮಾಡಿದ ಅಪರಿಚಿತ ಹೆಣ್ಣು ಮಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಫಿರ್ಯಾದು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.