Police Bhavan Kalaburagi

Police Bhavan Kalaburagi

Saturday, September 19, 2020

KALABURAGI DISTRICT CRIME REPORTED

 ಮಟಕಾ ಜೂಜಾಟ ಪ್ರಕರಣ  

ಶಹಾಬಾದ ನಗರ ಪೊಲೀಸ ಠಾಣೆ 

   ದಿನಾಂಕಃ 18/09/2020  ರಂದು  6-30 ಪಿ ಎಮ್ ಕ್ಕೆ ಪಿ.ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಒಬ್ಬ ರೋಪಿ, ಮುದ್ದೇಮಾಲು ಮತ್ತು ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ  ದಿನಾಂಕಃ 18/09/2020 ರಂದು ಶಹಾಬಾದ ಪಟ್ಟಣದ ಬೆಂಡಿ ಬಜಾರ ತರಕಾರಿ ಮಾರ್ಕೆಟದ ಕೊಲಾರಕರ ಅಂಗಡಿಯ ಹತ್ತಿರ ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚ ಜನರನ್ನು ಠಾಣೆಗೆ ಬರಮಾಡಿಕೊಂಡು ಠಾಣೆಯಲ್ಲಿದ್ದ  ಸಿಬ್ಬಂದಿಯವರೊಂದಿಗೆ ಹೊರಟು ಶಹಾಬಾ ಪಟ್ಟಣದ ಬೆಂಡಿ ಬಜಾರ ತರಕಾರಿ ಮಾರ್ಕೆಟ ಕೊಲಾರಕರ ಅಂಗಡಿಯ ಹತ್ತಿರ ಹೋಗಿ ಅಂಗಡಿಯ ಮರೆಯಾಗಿ ನಿಂತು ನೋಡಲಾಗಿ ತರಕಾರಿ ಅಂಗಡಿಯ ಮುಂದೆ ಕಟ್ಟೆಯ ಮೇಲೆ ಒಬ್ಬ ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಮಹ್ಮದ ತೌಸೀಫ ತಂದೆ ಗುಲಾಮ ರಸೂಲ ಸಾಬ ವಯಾ: 32 ವರ್ಷ ಉ: ಹೊಟೇಲ ಕೆಲಸ ಸಾ: ಖುರ್ಷಿದ ಮೊಹಲ್ಲಾ ಶಹಾಬಾದ  ಅಂತಾ ತಿಳಿಸಿದನು  ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ  1080- 00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು  ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಅಪ್ರಾಪ್ತ ಹೆಣ್ಣು ಮಗಳ ಅಪಹರಣ

ರೇವೂರ ಪೊಲೀಸ ಠಾಣೆ 

          ದಿನಾಂಕ 18/09/2020 ರಂದು 5.00 ಪಿಎಮ್ ಕ್ಕೆ ಶ್ರೀ ಕಿಶನ ತಂದೆ ಹೋಬು ರಾಠೋಡ ಸಾ||ವಡ್ಡಳ್ಳಿ ತಾಂಡಾ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಂಶವೆನೆಂದರೆ, ದಿನಾಂಕ 17/09/2020 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ಹಾಗು ನನ್ನ ಹೆಂಡತಿಯಾದ ಅನಸುಬಾಯಿ ನಮ್ಮ ಮಗನಾದ ಸಾಗರ ಹಾಗು ನಮ್ಮ ತಾಂಡಾದ ರಮೇಶ ತಂದೆ ಶಂಕರ ಚವ್ಹಾಣ, ಸುಭಾಷ ತಂದೆ ರೂಪ್ಲೂ ಚವ್ಹಾಣ ಎಲ್ಲರು ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಿದ್ದಾಗ ನಮ್ಮ ಮಗಳಾದ ರೇಷ್ಮಾ ವ||16 ಈವಳು ಬಹಿರದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ತಂಬಿಗೆ ತೆಗೆದುಕೊಂಡು ನಮ್ಮ ಮನೆಯ ಬಾಜು ಖಾಜಾಸಾಬ ಜಮಾದಾರ ರವರ ಹೊಲದ ಕಡೆ ಹೋಗಿರುತ್ತಾಳೆ  ಅಷ್ಟರಲ್ಲಿ ರೇಷ್ಮಾ ಜೋರಾಗಿ ಚಿರಾಡುವದನ್ನು ಕೇಳಿ ನಾವು ಓಡಿ ಹೋಗುವಷ್ಟರಲ್ಲಿ ನಮ್ಮ ತಾಂಡಾದ ನಾಗು ತಂದೆ ಲಾಲು ಚವ್ಹಾಣ ಈತನು ಒಂದು ಕಾರಿನಲ್ಲಿ ನಮ್ಮ ಮಗಳಿಗೆ ಒತ್ತಾಯದಿಂದ ಕಾರಿನಲ್ಲಿ ಹಾಕಿಕೊಂಡು ತನ್ನ ಕಾರು ತಗೆದುಕೊಂಡು ಅಲ್ಲಿಂದ ಹೋಗಿರುತ್ತಾನೆ.  ಕಾರಣ ನಾಗು ತಂದೆ ಲಾಲು ಚವ್ಹಾಣ ಈತನು ಲಾಲು ತಂದೆ ದೇಸು ಚವ್ಹಾಣ, ನಿಲಾಬಾಯಿ ಗಂಡ ಲಾಲು ಚವ್ಹಾಣ, ಸುನಿಲ ತಂದೆ ಲಾಲು ಚವ್ಹಾಣ ಇವರ ದುಷ್ಪ್ರೇರಣೆಯಿಂದ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ರೇಷ್ಮಾ ವ||16 ವರ್ಷ ಇವಳಿಗೆ ಮದುವೆಯಾಗುವ ಉದ್ದೇಶದಿಂದ ಅಥವಾ ಇನ್ನಾವುದೋ ಉದ್ದೇಶದಿಂದ ನಾಗು ಈತನು ಕಾರಿನಲ್ಲಿ ಅಫಹರಿಸಿಕೊಂಡು ಹೋಗಿದ್ದು ಸದರಿಯವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಸಾರಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.