Police Bhavan Kalaburagi

Police Bhavan Kalaburagi

Thursday, September 24, 2020

BIDAR DISTRICT DAILY CRIME UPDATE 24-09-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 24-09-2020

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 125/2020 ಕಲಂ 457, 380 ಐಪಿಸಿ :-

 ದಿನಾಂಕ:23/09/2020 ರಂದು ಬೆಳಿಗ್ಗೆ 08.30 ಗಂಟೆಗೆ ರಾಮಪೂರ ರಾಮಲಿಂಗೆಶ್ವರ ದೇವಸ್ಥಾನದ ಹುಂಡಿ ಕಳುವಾದ ಬಗ್ಗೆ ಬಂದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಶ್ವಾನದಳ ಹಾಗು ಬೆರಳಚ್ಚು ತಜ್ಞರನ್ನು ಕರೆಸಿ ಘಟನಾ ಸ್ಥಳವನ್ನು ಪರಿಶೀಲಿಸಿದ ನಂತರ, ಫಿರ್ಯಾದಿಯೊಂದಿಗೆ ಠಾಣೆಗೆ 1430 ಗಂಟೆಗೆ ಬಂದು ಫಿರ್ಯಾದಿ ಜಗದೀಶ ತಂದೆ ಸಂಗಣ್ಣಾ ಮೂಲಗೆ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ/ ರಾಮಪೂರ ರವರು ತಾ/ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ರಾಮಪೂರ ಗ್ರಾಮದ ರಾಮಲಿಂಗೆಶ್ವರ ದೇವಸ್ಥಾನದ ಟ್ರಸ್ಟ ಕಾರ್ಯದರ್ಶಿಯಾಗಿದ್ದು ದೇವಸ್ಥಾನದಲ್ಲಿ ಅರ್ಚಕರಾದ ಬಸಯ್ಯಾ ಪೂಜಾರಿ ಹಾಗು ನೌಕರನಾದ ಪ್ರಭು ಮಾನಕಾರ ರವರು ಪೂಜಾ ಕಾರ್ಯ ಮುಗಿಸಿ ಅಲ್ಲಿಯೇ ಮಲಗುತ್ತಾರೆ. ಹೀಗಿರುವಾಗ   ಬಸಯ್ಯಾ ಹಾಗು ಪ್ರಭು ರವರು  ದಿನಾಂಕ:22/09/2020 ರಂದು ಪ್ರತಿನಿತ್ಯದಂತೆ ರಾತ್ರಿ ಪೂಜಾ ಮುಗಿಸಿ 12.00 ಗಂಟೆವರೆಗೆ ಎಚ್ಚರವಿದ್ದು ಮಲಗಿದ್ದು, ದಿನಾಂಕ:23/09/2020 ರಂದು ರಾತ್ರಿ 00.30 ಎಮ್. ಗಂಟೆ ಅವಧಿಯಿಂದ ಬೆಳಿಗ್ಗೆ 05.00 ಎಮ.ಎಮ್. ಗಂಟೆ ಅವಧಿಯಲ್ಲಿ ದೇವಸ್ಥಾನದ ಆವರಣದಲ್ಲಿರುವ ಎರಡು ಹುಂಡಿಗಳು ಕಳುವಾಗಿದ್ದು, ಒಂದರ ಕೀಲಿ ಮುರಿದು ಅದರಲ್ಲಿನ ಹಣ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇನ್ನೊಂದು ಹುಂಡಿಯನ್ನು ದೇವಸ್ಥಾನದ ಹತ್ತಿರ ಪಟವಾದ ರಸ್ತೆ ಕಡೆಗೆ ತೆಗೆದುಕೊಂಡು ಹೋಗಿ ಅಲ್ಲಿ ಕೀಲಿ ಮುರಿದು ಅದರಲ್ಲಿರುವ ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆ. ಎರಡೂ ಹುಂಡಿಗಳಲ್ಲಿ ಅಂದಾಜು 8 ಸಾವಿರದಷ್ಟು ಚಿಲ್ಲರೆ ಹಣವಿರಬಹುದು. ಕಾರಣ ದೇವಸ್ಥಾನದ ಹುಂಡಿ ಒಡೆದು ಹಣ ಕಳವು ಮಾಡಿಕೊಂಡ ಹೋದ ಅಪರಿಚಿತ ಕಳ್ಳರ ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಲು  ವಿನಂತಿ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 131/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ 23/09/2020 ರಂದು 1130 ಗಂಟೆಗೆ  ಹುಮನಾಬಾದ ಎ.ಪಿ.ಎಂ.ಸಿ ಗೇಟ ಹತ್ತಿರ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರೋಡಿನ ಮೇಲೆ ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಅವರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ   ಹೋಗಿ ನೋಡಲು ಭಾತ್ಮಿ ನಿಜ ಇದ್ದು 1220 ಗಂಟೆಗೆ ಮಟಕಾ ಚೀಟಿ ಬರೆದುಕೊಡುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಶಕೀಲ ತಂದೆ ಲಿಯಾಕತ ಅಲಿ ಪಟೇಲ, ವಯ 34 ವರ್ಷ, ಜಾ. ಮುಸ್ಲಿಂ, ಉ. ಡ್ರೈವರ, ಸಾ. ವರವಟ್ಟಿ (ಬಿ) ಸದ್ಯ ಪಾಶಾ ಹೋಟೆಲ ಹಿಂದಗಡೆ ಕಲ್ಲುರ ರೋಡ ಹುಮನಾಬಾದ ಅಂತಾ ತಿಳಿಸಿದನು ಅವನಿಗೆ ಚೇಕ ಮಾಡಲು ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 1] ನಗದು ಹಣ 1300=00 ರೂಪಾಯಿಗಳು ಹಾಗು 2] ಒಂದು ಬಾಲ ಪೇನ್ನ 3] 8 ಮಟಕ್ಕಾ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 81/2020 ಕಲಂ 78(3) ಕೆ.ಪಿ.ಕಾಯ್ದೆ :-

ದಿನಾಂಕ: 23/09/2020 ರಂದು 16:30 ಗಂಟೆಗೆ ಪಿಎಸ್.ಐ. ರವರು ಠಾಣೆಯಲ್ಲಿದ್ದಾಗ  ಹಳ್ಳಿ ಗ್ರಾಮದ ಸಮುದಾಯ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು 1 ರೂ ಗೆ 80 ರೂಪಾಯಿ ಕೊಡುತ್ತೇನೆ ಅಂತಾ ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತಿದ್ದಾನೆ, ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹಳ್ಳಿ ಗ್ರಾಮದ   ಸಮುದಾಯ ಭವನದಿಂದ ಹತ್ತಿರ ಒಬ್ಬನು ಸಾರ್ವಜನಿಕ ಸ್ಥಳದಲ್ಲಿ 1 ರೂ ಗೆ 80 ರೂಪಾಯಿ ಕೊಡುತ್ತೇನೆ, ಅಂತಾ ಜೋರಾಗಿ ಕೂಗಿ ಕೂಗಿ ಕರೆದು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುವಾಗ ಖಚಿತಪಡಿಸಿಕೊಂಡು   ದಾಳಿ ಮಾಡಿ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ರಂಜೀತ ತಂದೆ ಅಂಬಾದಾಸ ಗಾಯಕವಾಡ ವಯ:42 ವರ್ಷ ಜಾತಿ:ಎಸ,ಸಿ ಹೊಲಿಯಾ :ಕೂಲಿಕೆಲಸ ಸಾ:ಹಳ್ಳಿ ಅಂತಾ ತಿಳಸಿದನು ಸದರಿಯವನ ಅಂಗ ಜಡ್ತ ಮಾಡಲು ಇತನ ಹತ್ತಿರ 1) ನಗದು ಹಣ 2480/-2) ನಾಲ್ಕು ಮಟಕಾ ನಂಬರ ಬರೆದ ಚೀಟಿಗಳು 3) ಒಂದು ಬಾಲ ಪೆನ್ನು ಸಿಕ್ಕಿರುತ್ತದೆ. ಪುನಃ ವಿಚಾರಣೆ ಮಾಡಲು ತಿಳಿಸಿದೇನೆಂದರೆ ತಾನು ಬರೆದ ಮಟಕಾ ಚೀಟಿಗಳು ಮತ್ತು ಹಣವನ್ನು ರಾಜೇಶ್ವರ ಗ್ರಾಮದ ದತ್ತು ತಂದೆ ಲಕ್ಷ್ಮಣ ಗಾಂಗ್ರೆ ರವರಿಗೆ ಒಯ್ದು ಕೊಡುತ್ತೇನೆ ಸದರಿಯವರು ನನಗೆ ಕಮೀಷನ ಕೊಡುತ್ತಾನೆ ಅಂತಾ ಹೇಳಿ ತಾನು ಮಟಕಾ ಚೀಟಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಒಪ್ಪಿಕೊಂಡಿದ್ದರಿಂದ ಸದರಿಯವನಿಗೆ ಮತ್ತು ಆತನ ಹತ್ತಿರ ಸಿಕ್ಕ ನಗದು ಹಣ ನಾಲ್ಕು ಮಟಕಾ ಚೀಟಿ ಮತ್ತು ಒಂದು ಬಾಲ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 78(3) ಕೆ.ಪಿ. ಕಾಯ್ದೆ :-

ದಿನಾಂಕ: 23-09-2020 ರಂದು 1215 ಗಂಟೆಯ ಸುಮಾರಿಗೆ ಠಾಣೆಯಲ್ಲಿದ್ದಾಗ ಪೊಲೀಸ್ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ  ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆಂದು ಖಚಿತ ಬಾತ್ಮಿ ಮೇರೆಗೆ ಹೋಗಿ ದಾಳಿ ಮಾಡಿ ಆರೋಪಿತರಾದ ಅಶೋಕ ತಂದೆ ಸೂರ್ಯಭಾನ ಉಪಾಧ್ಯಾಯ ನನ್ನು ದಸ್ತಗಿರಿ ಮಾಡಿ ಅವನ ಹತ್ತಿರ ಇದ್ದ ನಗದು ಹಣ 2150/-ರೂ. ಮಟಕಾ ಚೀಟಿ ಹಾಗೂ ಒಂದು ಬಾಲಪೆನ್ನು ಜಪ್ತಿ ಮಾಡಿಕೊಂಡು ಪ್ರರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 65/2020 ಕಲಂ 457, 380 ಐಪಿಸಿ :-

ದಿನಾಂಕ:23/09/2020 ರಂದು 1730 ಗಂಟೆಗೆ ಫಿರ್ಯಾದಿ ಶ್ರೀ ಮುಕುಂದರಾವ ತಂದೆ ಗೋವಿಂದರಾವ ಜೋಶಿ ಸಾ:ಠಾಣಾ ಕುಶನೂರ  ಗ್ರಾಮ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ,  ದಿನಾಂಕ: 12/09/2020 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಫಿರ್ಯಾದಿಯು ತನ್ನ ಮಗಳಾದ ವೈಶಾಲಿಯ ಮನೆಗೆ ಮಹಾರಾಷ್ಟ್ರ ರಾಜ್ಯದ ಅಹಮದಪೂರ ನಗರಕ್ಕೆ ಕುಟುಂಬ ಸಮೇತ ಮನೆಗೆ ಬೀಗ ಹಾಕಿ ಹೋಗಿರುತ್ತಾರೆ ದಿನಾಂಕ:23/09/2020 ರಂದು ಬೆಳಿಗ್ಗೆ 0740 ಗಂಟೆಗೆ  ಮನೆಯ ಕೆಲಸ ಮಹಿಳೆ ಸಂಗೀತಾ ಇವರು   ಫೋನ್ ಮಾಡಿ ನಿಮ್ಮ ಮನೆಯಲ್ಲಿ ಕಳ್ಳತನ ಆಗಿರುತ್ತದೆ ಅಂತ ತಿಳಿಸಿದರಿಂದ ಫೀರ್ಯಾದಿಯು ತನ್ನ ಪತ್ನಿ ರಾಧಾ ಹಾಗು ಮಗ ಮಹೇಶ ಮೂವರು ಕೂಡಿ ಕುಶನೂರದ ನಮ್ಮ ಮನೆಗೆ ಬಂದು ನೋಡಲು ಮನೆಯ ಬೀಗದ ಕೈ ಒಡೆದಿದ್ದು ದೇವರ ಕೋಣೆಯಲ್ಲಿಟ್ಟಿದ್ದ ಮೂರ್ತಿಗಳು ಹಾಗು ವಡವೆಗಳು ಕಳ್ಳತನ ಆಗಿರುತ್ತವೆ. ಈ ಕಳ್ಳತನವು ದಿನಾಂಕ:22/09/2020 ರಂದು ರಾತ್ರಿ 11 ಗಂಟೆಯಿಂದ ದಿನಾಂಕ:0500 ಗಂಟೆ ನಡುವಿನ ಅವಧಿಯಲ್ಲಿ ನಡೆದಿರುತ್ತದೆ.  ಮನೆಯಲ್ಲಿ ಕಳುವಾಗಿರುವ ವಸ್ತುಗಳು: 1] ನಮ್ಮ ಮನೆಯ ಮೂಲ ವಿಗ್ರಹ ವೆಂಕಟೇಶ್ವರ ಪಂಚ ಧಾತು ಮೂರ್ತಿ -1 (ಉದ್ದ:4 ರಿಂದ 4 ವರೆ ಇಂಚು) ಅ.ಕಿ. 2000/- 2] ಜಗದಂಬಾ ಮರ್ತಿ ಹಿತ್ತಾಳೆಯದ್ದು -3 (ಉದ್ದ: 4 ಇಂಚು) ಅ.ಕಿ. 3000/- 3] ಗೋಪಾಲ ಕೃಷ್ಣ ಮೂರ್ತಿ ತಾಮ್ರದ್ದು - 3 ಅ.ಕಿ. 3000/- 4] ಲಕ್ಷ್ಮಿನರಸಿಂಹ ಮೂರ್ತಿ ತಾಮ್ರದ್ದು -2 ಅ.ಕಿ. 2000/- 5] ಅನ್ನಪೂರ್ಣ ಮೂರ್ತಿ ತಾಮ್ರದ್ದು-2 ಅ.ಕಿ. 2000/- 6] ಮಾರುತಿ ಮೂರ್ತಿ ಹಿತ್ತಾಳಿಯದ್ದು -1, ತಾಮ್ರದ್ದು-1 ಅ.ಕಿ. 2000/- 7] ಗರುಡ ಮೂರ್ತಿ ತಾಮ್ರದ್ದು -1  ಅ.ಕಿ. 1000/- 8] ಗಣಪತಿ ಮೂರ್ತಿ ತಾಮ್ರದ್ದು -1 ಅ.ಕಿ. 1000/- 9] ಬಂಗಾರ 40 ಗ್ರಾಂ. ಅದರಲ್ಲಿ ಅಂದಾಜು 10 ಗ್ರಾಂ ನ 3 ಸರ ಮತ್ತು ಮೂತ್ತಿನ ಹಾರ 2 (10 ಗ್ರಾಂ)  ಅ.ಕಿ. 80,000/-10] ಬೆಳ್ಳಿ ಸಾಮಾನುಗಳು (ಪಾವ್ ಕೆ.ಜಿ)- ಬೆಳ್ಳಿಯ ದೇವರ ಛತ್ರಿಗಳು3, ಮಕರ1, ಪತಾಕೆ1 ಅ.ಕಿ. 10000/- ಹೀಗೆ ಒಟ್ಟು 1,06,000/- ರೂ. ಬೆಲೆಯುಳ್ಳದ್ದು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.