Police Bhavan Kalaburagi

Police Bhavan Kalaburagi

Thursday, April 25, 2019

KALABURAGI DISTICT REPORTED CRIMES

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ  ಮಾನಮ್ಮ ಗಂಡ ಸದಾಶಿವ ಚಿಗರಾಳ ಸಾ|| ಹಂಗರಗಾ (ಕೆ) ರವರಿಗೆ 1] ಭೀಮರಾಯಗೌಡ, 2] ಶರಣಗೌಡ ಅಂತಾ ಮಕ್ಕಳಿದ್ದು  ನನ್ನ ಮಗ ಶರಣಗೌಡ ಇವನು ಯತಾರ್ಥನಾಗಿರುತ್ತಾನೆ, ನನ್ನ ಹಿರಿ ಮಗ ಭೀಮರಾಯನಿಗೆ ನಮ್ಮೂರ ಬಸವಂತ್ರಾಯ ನಡುವಿನಮನಿ ರವರ ಮಗಳಾದ ಪಾರ್ವತಿ ಇವಳೊಂದಿಗೆ ಮದುವೆಮಾಡಿರುತ್ತೇವೆ, ಸದ್ಯ ನನ್ನ ಮಗನಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ, ನಮ್ಮೂರ ಸಿಮಾಂತರದಲ್ಲಿ ನಮ್ಮ ಹಿರಿಯರ 11 ಎಕರೆ ಜಮೀನು ಇರುತ್ತದೆ, ನನ್ನ ಮಗ ಸದ್ಯ ನಮ್ಮೊಂದಿಗೆ ಬೇರೆಯಾಗಿ ನಮ್ಮೂರಲ್ಲೇ ಮನೆ ಕಟ್ಟಿಕೊಂಡು ಸಂಸಾರ ಮಾಡುತ್ತಿರುತ್ತಾನೆ, ಅವನ ಉಪಜೀವನ ಸಲುವಾಗಿ 3 ಎಕರೆ ಜಮೀನು ಕೊಟ್ಟಿರುತ್ತೇನೆ, ನನ್ನ ಸೊಸೆ ಪಾರ್ವತಿ ಇವಳು ಸುಮಾರು ಸಲ ನಮಗೆ ಇನ್ನು 3 ಎಕರೆ ಜಮೀನು ಬರುತ್ತದೆ ಅಂತಾ ನನ್ನೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾಳೆ, ಅದರಂತೆ ನನ್ನ ಮಗ ಭೀಮರಾಯನಿಗು ಸಹ ಆಸ್ತಿ ಸಲುವಾಗಿ ದಿನಾಲು ಕಿರುಕುಳ ಕೊಡುತ್ತಾ ಬಂದಿರುತ್ತಾಳೆ, ಈ ಬಗ್ಗೆ ನನ್ನ ಮಗ ಆಗಾಗಾ ನನ್ನ ಮುಂದೆ ಹೇಳುತ್ತಿದ್ದನು, ದಿನಾಂಕ; 12-04-2019 ರಂದು ಬೆಳಿಗ್ಗೆ 09;00 ಗಂಟೆಗೆ ನನ್ನ ಸೊಸೆ ಪಾರ್ವತಿ ಇವಳು ಮನೆಗೆ ಬಂದು ನನ್ನ ಗಂಡನಿಗೆ ಬರಬೇಕಾದ ಇನ್ನು 3 ಎಕರೆ ಜಮೀನು ನನಗೆ ಬಿಟ್ಟುಕೊಡು ಇಲ್ಲಾ ಅಂದರೆ ನಿನಗೆ ಮತ್ತು ನನ್ನ ಗಂಡನಿಗೆ ಖಲಾಸ ಮಾಡಿ ಆಸ್ತಿ ತೆಗೆದುಕೊಳ್ಳುತ್ತೇನೆ ಅಂತಾ ಹೇಳಿ ಹೋದಳು, ನಂತರ ರಾತ್ರಿ 8;30 ಗಂಟೆ ಸುಮಾರಿಗೆ ನನ್ನ ಮಗ ಭೀಮರಾಯನಿಗೆ ಅವಳ ಹೆಂಡತಿ ಮತ್ತು ಅವರ ಮನೆಯವರು ಹೊಡೆಯುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ನಾನು ನಮ್ಮ ಮಗನ ಮನೆಗೆ ಹೋಗಿ ನೋಡಿದಾಗ ಮನೆಯ ಮುಂದೆ ನನ್ನ ಸೊಸೆ ಪಾರ್ವತಿ ಮತ್ತು ಅವರ ತಾಯಿ ಮಹಾದೇವಿ ಗಂಡ ಬಸವಂತ್ರಾಯ ಹಾಗು ಅವರ ಅಣ್ಣ ಸುಬ್ಬಣ್ಣ ತಂದೆ ಬಸವಂತ್ರಾಯ ಹಿಗೆಲ್ಲರೂ ಕೂಡಿ ನನ್ನ ಮಗನಿಗೆ ಸುತ್ತುಗಟ್ಟಿ ತಡೆದು ಏ ರಂಡಿ ಮಗನೆ ನಿಮ್ಮ ತಾಯಿ ಕಡೆಯಿಂದ ಇನ್ನು 3 ಎಕರೆ ಆಸ್ತಿ ತೆಗೆದುಕೊಂಡು ಬಾ ಅಂತಾ ಅಂದು ಸುಬ್ಬಣ್ಣ ಇವನು ಬಡಿಗೆಯಿಂದ ನನ್ನ ಮಗನ ಬಲಗಾಲಿನ ಮೇಲೆ ಹೊಡೆದನು, ಆಗ ನನ್ನ ಮಗ ಕೆಳಗೆ ಬಿದ್ದಾಗ ಮತ್ತೆ ಅದೇ ಬಡಿಗೆಯಿಂದ ಎರಡು ಮೊಳಕೈಗಳಿಗೆ ಹೊಡೆದನು, ನಂತರ  ಪಾರ್ವತಿ ಇವಳು ಇವತ್ತ ನನ್ನ ಹಾಟ್ಯಾನ ಮಗನಿಗಿ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಿಲ್ಲಿದ್ದ ಕಬ್ಬಿಣದ ಊದಗೊಳದಿಂದ ನನ್ನ ಮಗನ ಎಡ ಮೆಲಕಿನ ಹತ್ತಿರ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದಳು, ಮಹಾದೇವಿ ಇವಳು ಇವನಿಗೆ ಹೊಡೆದು ಖಲಾಸ ಮಾಡಿದರೆ ಎಲ್ಲಾ ಆಸ್ತಿ ನಮಗೆ ಬರುತ್ತದೆ ಅಂತಾ ಅನ್ನುತ್ತಿದ್ದಾಗ ನಾನು ಮತ್ತು ನಮ್ಮೂರ  ರೆಹಮಾನ ತಂದೆ ಮಾಬುಸಾಬ ಚೌದರಿ, ರಾಜಶೇಖರ ತಂದೆ ಹಣಮಂತ್ರಾಯ ಪೂಜಾರಿ ರವರೆಲ್ಲರೂ ಕೂಡಿ ಬಿಡಿಸಿಕೊಂಡು ನನ್ನ ಮಗನಿಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇವೆ, ಅಂದು ರಾತ್ರಿಯಾಗಿದ್ದರಿಂದ ಮತ್ತು ಯಾವುದೇ ವಾಹನ ಸೌಕರ್ಯ ಇರದ ಕಾರಣ ಬೆಳಿಗ್ಗೆ ನಮ್ಮ ಅಳಿಯ ಕೃಷ್ಣಣ್ಣ ತಂದೆ ಯಂಕಪ್ಪ ಹುಜರಾತಿ ಸಾ|| ಐನಾಪೂರ ಇವರಿಗೆ ಕರೆಯಿಸಿ ನನ್ನ ಮಗನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತೇವೆ, ನನ್ನ ಮಗ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ನನ್ನ ಮಗನಿಗೆ ಆಸ್ತಿ ಸಲುವಾಗಿ ನನ್ನ ಸೋಸೆ ಪಾರ್ವತಿ ಮತ್ತು ಅವರ ತಾಯಿ ಮಹಾದೇವಿ, ಹಾಗು ಅವರ ತಮ್ಮ ಸುಬ್ಬಣ್ಣ ರವರು ನನ್ನ ಮಗನಿಗೆ ಕೊಲೆ ಮಾಡಿದರೆ ಎಲ್ಲಾ ಆಸ್ತಿ ಬರುತ್ತದೆ ಎಂಬ ದುರುದ್ದೇಶದಿಂದ ನನ್ನ ಮಗನಿಗೆ ಅವಾಚ್ಯವಾಗಿ ಬೈದು, ಬಡಿಗೆಯಿಂದ, ಊದಗೊಳಿನಿಂದ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನ ಪಟ್ಟಿರುತ್ತಾರೆ, ಅಂತಾ ಈ ಮುದಲು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ 24-04-2019 ರಂದು  ಭೀಮರಾಯಗೌಡ ತಂದೆ ಸದಾಶಿವ ಚಿಗರಾಳ ಸಾ|| ಹಂಗರಗಾ(ಕೆ) ಇವರು ಜಗಳದಲ್ಲಿ ಭಾರಿ ಗಾಯಹೊಂದು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಇಂದು 00;20 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 23-04-2019 ರಂದು ಶ್ರೀ ಹಬೀಬ ತಂದೆ ದಸ್ತಗಿರ ಪಟೇಲ ಸಾ: ಅಫಜಲಪೂರ ರವರ ಮಗ ಶಕೀಲ ಈತನು ಪ್ರತಿ ದಿನದಂತೆ ಇಂದು ದಿನಾಂಕ:23/04/2019 ರಂದು ಬೆಳಗಿನ ಜಾವ 04-00 ಜಾಗಿಂಗ ಮಾಡಲು ಮನೆಯಿಂದ ಹೋಗಿರುತ್ತಾನೆ.ನಂತರ 6-00 ,ಎಮ್.ಸುಮಾರಿಗೆ ನಮ್ಮ ಓಣಿಯ ಅಬ್ದುಲ ರಜಾಕ ತಂದೆ ಕರಿಂಸಾಬ ಆಳಂದಕರ ಈತನು ನನಗೆ ಪೊನ ಮಾಡಿ ತಿಳಿಸಿದ್ದೆನಂದರೆ ನಾನು ಮತ್ತು ಶಕೀಲ ಈಬ್ಬರು ಕೂಡಿ ಅಫಜಲಪೂರ-ಕಲಬುರ್ಗಿ ರೋಡಿಗೆ ಜಾಗಿಂಗ ಬಂದಿದ್ದು ಈಗ 5-45 ,ಎಮ್.ಸುಮಾರಿಗೆ ಖಂಡಪ್ಪ ಕಲಶೇಟ್ಟಿರವರ ಹೋಲ ದಾಟಿ ನಾವು ಬಂದಾಗ ನಮ್ಮ ಹಿಂದಿನಿಂದ ಅಫಜಲಪೂರ ಕಡೆಯಿಂದ ಎರಟೀಗಾ ವಾಹನ ನಂಬರ ಕೆ,-16 ಎನ್-2645 ನೇದ್ದರ ಚಾಲಕ ತನ್ನ ವಾಹನವನ್ನು  ಅತೀ ವೇಗವಾಗಿ ಮತ್ತು ನಿಷ್ಕಾಳಜೀತನದಿಂದ ವಾಹನ ಚಲಾಯಿಸಿ ಶಕೀಲನಿಗೆ ಗುದ್ದಿ ಅಪಘಾತಪಡಿಸಿ ವಾಹನ ನಿಲ್ಲಿಸಿ ನಮಗೆ ನೋಡಿ ನಂತರ ತನ್ನ ವಾಹನವನ್ನು ತಗೆದುಕೊಂಡು ಹೋಗಿರುತ್ತಾನೆ ಅಂತ ತಿಳಿಸಿದ ಮೇರಗೆ ನಾನು ಮತ್ತು ನನ್ನ ತಮ್ಮಂದಿರಾದ ಶಬ್ಬಿರ ಮತ್ತು ಯಾಶೀನ ಮೂರು ಜನ ಹೋಗಿ ನೋಡಲಾಗಿ ನನ್ನ ತಮ್ಮನಿಗೆ ತಲೆಗೆ ಭಾರ ರಕ್ತಗಾಯ ಮತ್ತು ಹೊಟ್ಟೆಗೆ,ಹಾಗು ಬೆನ್ನಿಗೆ ತರಚಿದಗಾಯ ಹಾಗೂ ಎಡಗೈಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಕಂಡು ಬಂದಿರುತ್ತದೆ. ನನ್ನ ತಮ್ಮ ಶಕೀಲ ಈತನಿಗೆ ಅಪಘಾತಪಡಿಸಿದ ಎರಟೀಗಾ ವಾಹನ ನಂಬರ ಕೆ,-16 ಎನ್-2645 ನೇದ್ದರ ಚಾಲಕ ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೆಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 23-04-2018 ರಂದು ಲೋಕಸಭಾ ಚುನಾವಣೆ ಇರುವದರಿಂದ ನಾನು ಮತ್ತು ನನ್ನ ಹೆಂಡತಿ ಶಿವಲೀಲಾ ಹಾಗೂ ನನ್ನ ಅತ್ತಿಗೆ ಮೂರು ಜನರು ಕಲಬುರಗಿಯಿಂದ ನಮ್ಮೂರು ಕಟ್ಟಿ ಸಂಗಾವಿಗೆ ಮತದಾನ ಮಾಡಲಿಕ್ಕೆ ಬೆಳಿಗ್ಗೆ ಹೋಗಿ ಸಾಯಂಕಾಲವರೆಗೆ ಕಟ್ಟಿ ಸಂಗಾವಿಯಲ್ಲಿ ಇದ್ದು ವಾಪಸ್ಸ ಕಲಬುರಿಗೆಗೆ ಬರುವ ಸಲುವಾಗಿ ನಾನು ಚಲಾಯಿಸುತ್ತೀರುವ ನನ್ನ ಆಟೋರಿಕ್ಷಾ ನಂಬರ ಕೆಎ-32/8107 ನೇದ್ದರಲ್ಲಿ ನನ್ನ ಹೆಂಡತಿ ಶಿವಲೀಲಾ ಹಾಗೂ ನನ್ನ ತಾಯಿ ಶಕುಂತಲಾ ರವರು ಆಟೋರಿಕ್ಷಾ ವಾಹನದಲ್ಲಿ ಕುಳಿತು ಕಲಬುರಗಿಗೆ ಕಡೆಗೆ ಬರುವಾಗ ದಾರಿ ಮದ್ಯ ಸರಡಗಿ ಖಣಿ ಸಮೀಪ ರೋಡ ಮೇಲೆ ಸಾಯಂಕಾಲ 5-30 ಗಂಟೆ ಸುಮಾರಿಗೆ ಎದುರಿನಿಂದ ಜೀಪ ನಂಬರ ಕೆಎ-23/ಎಮ್-9599 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಎಡಗಡೆಯಿಂದ ನಾನು ಆಟೋರಿಕ್ಷಾ ಚಲಾಯಿಸಿಕೊಂಡು ಹೋಗುತ್ತೀರುವಾಗ ನನ್ನ ಆಟೋರಿಕ್ಷಾ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಮತ್ತು ನನ್ನ ಹೆಂಡತಿಗೆ ಭಾರಿ ಗಾಯಗೊಳಿಸಿ ಫರಹತಾಬಾದ ಖಾಸಗಿ ಆಸ್ಪತ್ರೆವರೆಗೆ ಬಂದು ಅಲ್ಲಿಂದ ನಮಗೆ ಹೇಳದೆ ಕೇಳದೆ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 23.04.2019 ರಂದು ಲೋಕಸಭಾ ಚುನಾವಣೆ ಇರುವದರಿಂದ ನಾನು ನಮ್ಮ ಮಿಣಜಗಿ ಗ್ರಾಮಕ್ಕೆ ಹೋಗಿ ಮತದಾನ ಮಾಡಿ ಸಾಯಂಕಾಲ ಕಲಬುರಗಿಯಲ್ಲಿರುವ ನಮ್ಮ ಮನೆಗೆ ಬರುವ ಸಲುವಾಗಿ ನನ್ನ ಮೋಟಾರ ಸೈಕಲ ನಂಬರ ಕೆಎ-32/ಇಜಿ-3475 ನೇದ್ದನ್ನು ಚಲಾಯಿಸಿಕೊಂಡು ಬರುವಾಗ ಕಲಬುರಗಿ ರಾಮ ಮಂದಿರ ಹತ್ತೀರ ನನಗೆ ಪರಿಚಯದವರು ಬರಲು ತಿಳಿಸಿದ್ದರಿಂದ ನಾನು ರಾಮ ಮಂದಿರ ರಿಂಗ ರೋಡ ಹತ್ತೀರ ಹೋಗಿ ಕೆಲಸ ಮುಗಿಸಿಕೊಂಡು ನಾನು ಆರ.ಪಿ ಸರ್ಕಲ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಕರುಣೇಶ್ವರ ನಗರ ಕ್ರಾಸ ಹತ್ತೀರ ಇರುವ ಸಿಟಿ ಬಸ್ಸ ನಿಲ್ದಾಣದ ಎದುರಿನ ರೋಡ ಮೇಲೆ ಕೆಂಪು ಬಣ್ಣದ ಕಾರ ನಂಬರ ಎಮ್.ಹೆಚ್.-03/ಎ.ಎಮ್/8161 ನೇದ್ದರ ಚಾಲಕನು ರಾಂಗ ಸೈಡನಿಂದ ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 :ಶ್ರೀ  ಯಾಸೀನ ಬಾಬಾ ತಂದೆ ಜಾಫರ ಪಟೇಲ ಸಾ : ಕೌಲಗಾ (ಬಿ) ರವರು  ದಿನಾಂಕ 22.04.2019 ರಂದು ರಾತ್ರಿ ಸಮಯದಲ್ಲಿ ನಾನು ಮನೆಯಿಂದ ಸಂಡಾಸಕ್ಕೆ ಹೋಗಿ ವಾಪಸ್ಸ  ಊರ ಪಕ್ಕದಲ್ಲಿ ಇರುವ ಕೌವಲಗಾ (ಕೆ) ಮತ್ತು ಬಸನಾಳ ಗ್ರಾಮಕ್ಕೆ ಹೋಗಿ ಬರುವ ರೋಡ ಮೇಲೆ ನಾನು ಮತ್ತು ನನ್ನಂತೆ ಸಂಡಾಸಕ್ಕೆ ಬಂದಿದ್ದ ಸಂಜೀವಕುಮಾರ ಹಾಗೂ ಶಿವಕುಮಾರ ಮೂರು ಜನರು ನಡೆದುಕೊಂಡು ಮನೆಯ ಕಡೆಗೆ ಹೋಗುವಾಗ ರುಕುಮ ಪಟೇಲ ಚನ್ನೂರ ಇವರ ಮನೆಯ ಎದುರಿನ ರೋಡ ಮೇಲೆ ರಾತ್ರಿ ಅಂದಾಜು 10-00 ಗಂಟೆ ಸುಮಾರಿಗೆ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-37/ಇಎ-4302 ನೇದ್ದರ ಸವಾರ ಸಿದ್ರಾಮಪ್ಪಾ ಇತನು ಕೌವಲಗಾ (ಕೆ) ಗ್ರಾಮದಿಂದ ಬಸನಾಳ ಗ್ರಾಮದ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲಗೈ ಮುಂಗೈ ಹತ್ತೀರ ಭಾರಿ ಗುಪ್ತಪೆಟ್ಟು ಬಲಗಾಲು ಮೊಳಕಾಲ ಕೆಳೆಗೆ ರಕ್ತಗಾಯ ಹಾಗೂ ನಾಲಗಿಗೆ ರಕ್ತಗಾಯಗೊಳಿಸಿದ್ದು  ಮೋಟಾರ ಸೈಕಲ ನಂಬರ ಕೆಎ-32/ಇಎ-4302 ನೇದ್ದರ ಸವಾರ ಸಿದ್ರಾಮಪ್ಪಾ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಚೌಕ ಠಾಣೆ : ದಿನಾಂಕ 21.04.2019 ರಂದು ಬೆಳಿಗ್ಗೆ ಶ್ರೀಮತಿ ಸಂಗೀತಾ ಗಂಡ ಮಾಳಿಂಗರಾಯ ಮು: ಕುಸನೂರ ತಾ:ಜಿ: ಕಲಬುರಗಿ ರವರು ದಿನಾಂಕ 20.04.2019 ರಂದು ಮುಂಜಾನೆ 10.00 ಗಂಟೆಗೆ ಕಲಬುರಗಿಯಲ್ಲಿ ಹಳೇಯ ಪ್ರಕಾಶ ಚಿತ್ರಮಂದಿರದ ಹತ್ತಿರ ಇರುವ ಜನರಲ್ ಸ್ಟೋರನಲ್ಲಿ ಬೇಕಾದ ಸಾಮಾನುಗಳನ್ನು ಖರೀಧಿಸುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ನನಗೆ ಮೋಸದಿಂದ ನಾನು ರಾಜುಗೌಡ ಮು: ಮಲ್ಘಾಣ ಇವರ ಸಂಭಂಧಿ ಎಂದು ನಂಬಿಸಿ ನನ್ನನ್ನು ಹಾಗೂ ನನ್ನ ಮಕ್ಕಳನ್ನು ತನ್ನ ದ್ವೀಚಕ್ರ ವಾಹನದಲ್ಲಿ ಮಲ್ಘಾಣ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿ ನನಗೆ ಹಾಗೂ ನನ್ನ ಇಬ್ಬರು ಮಕ್ಕಳಿಗೆ ಹಾಗರಗಾ ಗ್ರಾಮದ ಸಿಮಮೆಯಲ್ಲಿ ಯಾರೂ ಇಲ್ಲದ ಪ್ರದೇಶದಲ್ಲಿ ನನಗೆ ಹಾಗೂ ನನ್ನ ಮಕ್ಕಳಿಗೆ ಹೆದರಿಸಿ ಮಾರಣಾಂತಿಕ ಹಲ್ಲೆ ನಡೆಸಿ ನನ್ನ ಬಳಿ ಇರುವ 12 ಗ್ರಾಂ ದ ಲಾಕೇಟು , 10 ಗ್ರಾಂದ ತಾಳಿ ಹಾಗೂ ಗುಂಡುಗಳನ್ನು ಹಾಗೂ ರೂ 3000/-( ರೂಪಾಯಿ ಮೂರು ಸಾವಿರ ಮಾತ್ರ) ಕಿತ್ತುಕೊಂಡು ಪರಾರಿಯಾಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ : ಪ್ರಕರಣದ ಸಂಕ್ಷಿಪ್ತ  ಸಾರಾಂಶ :  ಶ್ರೀಮತಿ ಇಂದಿರಾ ಗಂಡ ಭೀಮರೆಡ್ಡಿ ನಾಗರೆಡ್ಡಿ ಸಾ : ಇಂದಿರಾನಗರ ಸೇಡಂ ರವರ ಗಂಡನಾದ ಭೀಮರೆಡ್ಡಿ ಇತನು ಒಕ್ಕಲುತನ ಸಂಬಂಧವಾಗಿ ಬ್ಯಾಂಕಿನಲ್ಲಿ ಬೆಳೆ ಸಾಲ ಮತ್ತು ಇತರೆ ಸಾಲ ಮಾಡಿದ್ದು, ಇದರಿಂದ ಮಳೆ ಬೆಳೆ ಸರಿಯಾಗಿ ಆಗದೆ ನಷ್ಟವಾಗಿದ್ದರಿಂದ, ಸಾಲ ಹೇಗೆ ತೀರಿಸಬೇಕೆಂದು ಮಾನಸಿಕ ಮಾಡಿಕೊಂಡು ನಿನ್ನೆ ದಿನಾಂಕ: 23-04-2019 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಬೆಳಿಗ್ಗೆ 11:30 ಎ.ಎಮ್ ದಿಂದ 04:30 ಪಿ.ಎಮ್ ಮಧ್ಯದ ಅವಧಿಯಲ್ಲಿ ಮನೆಯಲ್ಲಿ ಫ್ಯಾನಿಗೆ ಸೀರೆಯಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕನಗರ ಠಾಣೆ : ಶ್ರೀ ಸಂಜಯ ತಂದೆ ರಮೇಶ ಪಟವಾರಿ ಸಾ|| ಮ.ನಂ. 28 ಬ್ಯಾಂಕ ಕಾಲೋನಿ  ಗೋದುತಾಯಿ ನಗರ ಕಲಬುರಗಿ ರವರು ದಿನಾಂಕ: 24.04.2019 ರಂದು ಮದ್ಯಾನ್ಹ 01:00 ಗಂಟೆಗೆ ನಾನು ನನ್ನ ಹೆಂಡತಿ ಹಾಗೂ ಮಕ್ಕಳು ಕೂಡಿಕೊಂಡು ನಮ್ಮ ಮನೆಗೆ ಬೀಗ ಹಾಕಿ ಕಲಬುರಗಿ ನಗರದ ಯಾತ್ರೀಕ ನಿವಾಸದಲ್ಲಿ ನಮ್ಮ ಸಂಬಂಧಿಕರ ಉಪನಯ ಕಾರ್ಯಕ್ರಮಕ್ಕೆ ಹೋಗಿರುತ್ತೇವೆ. ನಾವು ಉಪನಯನ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಮದ್ಯಾನ್ಹ 02:45 ಗಂಟೆಗೆ ಮರಳಿ ಮನೆಗೆ ಬಂದಾಗ ನನ್ನ ಹೆಂಡತಿ ಮನೆಯ ಬೀಗ ತೆಗೆಯಲು ಹೋದಾಗ ನಮ್ಮ ಮನೆಗೆ ಹಾಕಿದ್ದ ಬೀಗ ಮುರಿದು ಕೆಳಗೆ ಬಿದ್ದಿದ್ದು ಬಾಗಿಲು ಅರ್ಧ ಮುಚ್ಚಿದ್ದು ನೋಡಿ ನಾವಿಬ್ಬರು ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ನಮ್ಮ ಮನೆಯ ನಡುವಿನ ಕೋಣೆಯಲ್ಲಿ ನಾಲ್ಕು ಅಲ್ಮಾರಿಗಳನ್ನು ಇಟ್ಟಿದ್ದು ಅವುಗಳಲ್ಲಿ 2 ಅಲ್ಮಾರಿಗಳಲ್ಲಿ ಬಟ್ಟೆಬರೆಗಳನ್ನು ಮತ್ತು ಇನ್ನೇರಡು  ಅಲ್ಮಾರಗಳಲ್ಲಿ ಒಂದರಲ್ಲಿ ನನ್ನ ಹೆಂಡತಿಯ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಇನ್ನೊಂದರಲ್ಲಿ ನಮ್ಮ ತಾಯಿಯ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಇತರೆ ದಾಖಲಾತಿಗಳನ್ನು ಇಟ್ಟಿದ್ದು ಇರುತ್ತದೆ. ಒಳಗಡೆ ಬಂದಾಗ ಅಲ್ಮಾರಾದಲ್ಲಿ ಇಟ್ಟಿದ್ದ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇರುತ್ತವೆ.  ನನ್ನ ಹೆಂಡತಿಯ ಆಭರಣಗಳನ್ನು ಇಟ್ಟಿದ್ದ ಅಲ್ಮಾರವನ್ನು ನೋಡಲಾಗಿ ಅದರ ಬೀಗ ಮುರಿದಿದ್ದು, ಅದರಲ್ಲಿ ಇಟ್ಟಿದ್ದ ಒಟ್ಟು 317 ಗ್ರಾಂ ಬಂಗಾರದ ಆಭರಣಗಳು ಕಳ್ಳತನಮಾಡಿದ್ದು ಅದರ ಅ.ಕಿ 7,92,500/- ರೂ ಕಿಮ್ಮತ್ತಿನ  ಬಂಗಾರದ ಆಭರಣಗಳು ಕಳ್ಳತನಮಾಡಿದ್ದು ಬೆಳ್ಳಿಯ  ಆಭರಣಗಳು ಒಟ್ಟು 2 ಕೆ.ಜಿ. ಬೆಳ್ಳಿ ಅ.ಕಿ. 60,000/-  ಎಲ್ಲಾ ಸೇರಿ ಒಟ್ಟು  8,52,500/-  ನೇದ್ದವುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ¢£ÁAPÀ: 24/04/2019 ರಂದು ಮಧ್ಯಾಹ್ನ ಶ್ರೀ ಸಿದ್ದು ತಂದೆ ದೌಲತರಾವ ವಸ್ತಾರ ಸಾ : ಭವಾನಿ ನಗರ ಕಲಬುರಗಿ ರವರಿಗೆ ಗೋಪಾಲ, ಶಬ್ಬಿರ ಮತ್ತು ಜಬ್ಬಾರ ಕುಡಿಕೊಂಡು ನಮ್ಮ ಪಕ್ಷ ë ಗೆಲ್ಲುತ್ತದೆ ಅಂತಾ ಮಾತನಾಡುತ್ತಾ ಜಗಳವಾಗಿದ್ದು ಸಾಯಂಕಾಲ 7 ಗಂಟೆ ಸುಮಾರಿಗೆ ಆಪಾದಿತರು ಫಿರ್ಯಾದಿಗೆ ಹೊಡೆಬಡೆ ಮಾಡಿ ಜೀವದ ಭಯ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.