Police Bhavan Kalaburagi

Police Bhavan Kalaburagi

Thursday, October 10, 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಧೂಳಪ್ಪಾ ಕಡಕೂಳ ಸಾಃ ಭೂಸನೂರ ಗ್ರಾಮ ರವರು ಮತ್ತು ತಮ್ಮಂದಿರಾದ ಶಿವಪ್ಪ, ಹಣಮಂತ ಮೂರು ಜನ ಸಜ್ಜೆ ರಾಶಿ ಇದ್ದುದ್ದರಿಂದ ಮುಂಜಾನೆ ಹೊಲಕ್ಕೆ ಹೋಗಿರುತ್ತೆವೆ ನಂತರ ನನ್ನ ತಾಯಿಯು ಕೂಡ ನಮ್ಮ ದನಗಳನ್ನು ಹೊಡೆದುಕೊಂಡು ಹೊಲಕ್ಕೆ ಬಂದಿರುತ್ತಾರೆ. ಹೊಲದಲ್ಲಿ ಮಳೆ ಬರುತ್ತಿದ್ದರಿಂದ ನನ್ನ ತಾಯಿಯು ದನಗಳನ್ನು ಹೊಡೆದುಕೊಂಡು ಮನೆಗೆ ಹೊಗುತ್ತೆನೆ ಅಂತ ನಮ್ಮ ಹೊಲದಿಂದ ಹೋಗಿರುತ್ತಾರೆ. ನಮ್ಮ ಹೊಲಗಳ ಹತ್ತಿರದಲ್ಲಿ ಇದ್ದ  ಸಂಗಮ್ಮ ಗಂಡ ಗುರುಶಾಂತಪ್ಪ ಅಮರೆ ಇವರ ಬಿಳು ಬಿದ್ದ ಹೊಲದಲ್ಲಿಂದ ಹೋಗುತ್ತಿರುವಾಗ 02.30 ಪಿ,ಎಮ್ ಸುಮಾರಿಗೆ ಮಳೆ ಜೋರಾಗಿ ಆಗಿದ್ದರಿಂದ ನನ್ನ ತಾಯಿಯು ಸಂಗಮ್ಮಾ ಇವರ ಹೊಲದಲ್ಲಿ ಇರುವ ಬೇವಿನ/ಬ್ಯಾಲದ (ಜೊಡಿ ಮರ) ಗಿಡದ ಕೆಳಗಡೆ ಕುಳಿರುತ್ತಾರೆ ನಾವು ನಮ್ಮ ಹೊಲದಲ್ಲಿ ಇರುತ್ತೆವೆ. ಗುಡುಗು ಸಿಡಿಲು ಸಮೇತ ಮಳೆ ಬರುತ್ತಿರುವಾಗ ಒಮ್ಮಿಂದೊಮ್ಮೆಲೆ ಸಿಡಿಲು ಬಿದ್ದಂತಾಗಿ ಹೆಚ್ಚಾಗಿ ಬೆಳಕು ಬಂದಿದ್ದರಿಂದ ನಾನು ನನ್ನ ತಾಯಿ ಕುಳಿತ ಕಡೆಗೆ ನೋಡಲಾಗಿ ನನ್ನ ತಾಯಿಯು ಬಿದ್ದಿದ್ದರು ಆಗ ನಾನು ನನ್ನ ತಮ್ಮಂದಿರು ಎಲ್ಲರು ಗಾಭರಿಯಿಂದ ಹೋಗಿ ನಮ್ಮ ತಾಯಿಯನ್ನು ನೋಡಲಾಗಿ ನಮ್ಮ ತಾಯಿಯ ಮೃತಪಟ್ಟಿದ್ದರು ನಾನು ಹಾಗು ನಮ್ಮ ತಮ್ಮಂದಿರು ಹಾಗು ಅಲ್ಲಿಯೆ ಸಮೀಪದಲ್ಲಿ ಇದ್ದ ಶಂಕರ ತಂದೆ ಶಿವಾಜಿ ಸಾಳುಂಕೆ ಎಲ್ಲರು ನನ್ನ ತಾಯಿಯನ್ನು ನೋಡಲಾಗಿ ನನ್ನ ತಾಯಿಯ ಬಲಗಡೆ ಕಿವಿಯ ಹತ್ತಿರ ಸುಟ್ಟಂತೆ ಆಗಿದ್ದು, ಕಿವಿಯು ಸ್ವಲ್ಪ ಹರಿದಿರುತ್ತದೆ. ಹಾಗು ಎರಡು ಕಿವಿಗಳಿಂದ ರಕ್ತ ಬಂದಿದ್ದು, ಹೊಟ್ಟೆಯ ಬಲಗಡೆ, ಬಲಗಾಲಿನ ತೊಡೆಯಿಂದ ಕಪಗಂಡದ ವರೆಗು ಅಲ್ಲಲ್ಲಿ ಸುಟ್ಟಂತೆ ಗಾಯಗಳಾಗಿದ್ದು ಇರುತ್ತವೆ. ಕಾರಣ ನನ್ನ ತಾಯಿಯು ದಿನಾಂಕಃ 09/10/2019 ರಂದು ದನಗಳು ಮೇಯಿಸುವಾಗ 02.30 ಪಿ,ಎಮ್ ಸುಮಾರಿಗೆ ಜೋರಾಗಿ ಮಳೆ ಬರುತ್ತಿರುವಾಗ ಆಶ್ರಯಕ್ಕಾಗಿ ಸಂಗಮ್ಮ ಅಮರೆ ಇವರ ಬಿಳು ಬಿದ್ದ ಹೊಲದಲ್ಲಿನ ಬೇವಿನ/ಬ್ಯಾಲದ (ಜೊಡಿ ಮರದ) ಗಿಡದ ಕೆಳಗಡೆ ಕುಳಿತಾಗ ಆಕಸ್ಮಿಕವಾಗಿ ಸಿಡಿಲು ಬಡಿದು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರೇವೂರ ಠಾಣೆ : ಶ್ರೀಶರಣಬಸಪ್ಪ ತಂದೆ ವಿಠ್ಠಲ ನಿಲೂರ ಸಾ||ರೇವೂರ (ಬಿ) ರವರು ತಮ್ಮ ಗ್ರಾಮದ ಗಂಡು ಮಕ್ಕಳು ನಮ್ಮೂರಿನ ಅಂಗನವಾಡಿ ಕೇಂದ್ರ ಕಡೆ ಬಹಿರ್ದೆಸೆಗೆ ಹೋಗುತ್ತಾರೆ ನಮ್ಮ ಗ್ರಾಮದ ಎಲ್ಲಾ ಜನಗಳಂತೆ ನಾನು ದಿನಾಂಕ 01/10/2019 ರಂದು 8.00 ಪಿಎಮ್ ಸುಮಾರಿಗೆ  ನನ್ನ ಮೋಬೈಲದಲ್ಲಿ Torch ಹಕಿಕೊಂಡು Torch ಬೆಳಕಿನಲ್ಲಿ ನಮ್ಮ ಗ್ರಾಮದ ಅಂಗನವಾಡಿ ಕೇಂದ್ರದ ಹತ್ತಿರ ಸಿಸಿ ರಸ್ತೆ ಮೇಲೆ ಬಹಿರ್ದೆಸೆಗೆ ಹೋಗುತಿದ್ದಾಗ ಅದೇ ಸಮಯಕ್ಕೆ ನಮ್ಮ ಗ್ರಾಮದ ಮಲಕಾಜಪ್ಪ ತಂದೆ ಗೌಡಪ್ಪ ಮಲ್ಲಿಕಾರ್ಜುನವರ, ಭೀಮಾಶಂಕರ  ತಂದೆ ವಿಠ್ಠಲ ನಾಸಿ, ಮಾಯಪ್ಪ ತಂದೆ ಸಿದ್ದಪ್ಪ ಪೂಜಾರಿ ಮೂರು ಜನರು ಅಂಗನವಾಡಿ ಹತ್ತಿರ ಸಿಸಿ ರಸ್ತೆಯ ಬಾಜು ಮಾತನಾಡುತ್ತಾ ನಿಂತಿದ್ದರು ಅದೇ ಸಮಯಕ್ಕೆ  ನಮ್ಮೂರಿನ ಪ್ರಭು ತಂದೆ ಯಲ್ಲಪ್ಪ ಹವದೆ ಈತನು ತನ್ನ ಕೈಯಲ್ಲಿ ಕಬ್ಬಿಣದ ರಾಡ ಹಿಡಿದುಕೊಂಡು ನನ್ನ ಎದುರಿಗೆ ಬಂದು ನನಗೆ ತಡೆದು ನಿಲ್ಲಿಸಿ ರಂಡಿ ಮಗನೆ ಶ್ಯಾಣ್ಯಾ ಕಡೆ ನಮ್ಮ ಸಮಾಜದ ಹೆಣ್ಣು ಮಕ್ಕಳು ಸಂಡಾಸಕ್ಕೆ ಹೋಗುತ್ತಾರೆ ನೀ ದಿನಾಲು ಕಡೆ ಬರುತ್ತಿ ನಿನಗೆ ಎಷ್ಟುಸಲ ಹೇಳಿದ್ರು ಉದ್ದೇಶಪೂರ್ವಕವಾಗಿ ಕಡೆ ಬರುತ್ತಿ ಬೋಸಡಿ ಮಗನೆ ಅಂತ ಅಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದಾಗ ಪ್ರಭು ಈತನು ಬೈಯುವದನ್ನು ಕೇಳಿ ಅಲ್ಲೆ ಮಾತನಾಡುತ್ತಾ ನಿಂತಿದ್ದ  ಮಲಕಾಜಪ್ಪ ಮಲ್ಲಿಕಾರ್ಜುನವರ, ಭೀಮಾಶಂಕರ  ನಾಸಿ, ಮಾಯಪ್ಪ ಪೂಜಾರಿ  ರವರು ನಮ್ಮ ಹತ್ತಿರ ಬಂದು ಪ್ರಭು ಈತನಿಗೆ ತಿಳುವಳಿಕೆ ಹೇಳುತಿದ್ದಾಗ ಅವರಿಗೆ ಕೇಳದೆ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿನ ರಾಡಿನಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದು ಸದರಿ ರಾಡ ನನ್ನ ಎದೆಗೆ ಬಡಿದು ಭಾರಿ ಗುಪ್ತಗಾಯವಾಗಿರುತ್ತದೆ ಮತ್ತೆ ಅದೆ ರಾಡಿನಿಂದ ನನಗೆ ಬಿಸಿ ಹೊಡೆದಾಗ ರಾಡ ನನ್ನ ಗುಪ್ತಾಂಗಕ್ಕೆ(ತೊರಡಿಗೆ) ಬಡಿದು ಗುಪ್ತ ಗಾಯವಾಗಿರುತ್ತದೆ. ಆಗ ಮಲಕಾಜಪ್ಪ ಮಲ್ಲಿಕಾರ್ಜುನವರ, ಭೀಮಾಶಂಕರ  ನಾಸಿ, ಮಾಯಪ್ಪ ಪೂಜಾರಿ ಮೂರು ಜನರು  ಪ್ರಭು ಈತನಿಗೆ ಹಿಡಿದು ನನಗೆ ಹೊಡೆಯುವದನ್ನು ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾನು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ
ನರೋಣಾ ಠಾಣೆ : ದಿನಾಂಕ:04/10/2019 ರಂದು ಎಂದಿನಂತೆ ರಾತ್ರಿ ಊಟಮಾಡಿ 9-30 ಗಂಟೆ ಸುಮಾರಿಗೆ ಮಲಗಿಕೊಂಡೇವು. ದಿನಾಂಕ:05/10/2019 ರಂದು ಮೂಂಜಾನೆ 09-00 ಗಂಟೆ ಸುಮಾರಿಗೆ ನಾನು ಮನೆಯಲ್ಲದ್ದಾಗ ಒಕ್ಕಲುತನ ಕೆಲಸಕ್ಕೆಂದು ಕೂಲಿ ಹಚ್ಚಿದ ಕೂಲಿ ಆಳುಗಳು ಮನೆಗೆ ಬಂದು ಕೂಲಿ ಹಣ ಕೇಳಿದಾಗ ನಾನು ನನ್ನ ಹೆಂಡತಿಗೆ ಅಲ್ಮಾರಿಯಲ್ಲಿದ್ದ ಹಣ ತಾ ಎಂದು ಹೇಳಲು, ನನ್ನ ಹೆಂಡತಿಯು ಅಲ್ಮಾರಿ ತೆರೆಯಲು ಹೋದಾಗ ಅಲ್ಮಾರಿಯ ಹ್ಯಾಂಡಲ್ ಮುರಿದಿದ್ದು ಗೊತ್ತಾಗಿ ನನಗೆ ನನ್ನ ಹೆಂಡತಿ ಯಾರೋ ಮುರಿದ್ದಾರೆಂದು ಗಾಭರಿಯಿಂದ ಹೇಳಲು, ಆಗ ನಾನು ಹೋಗಿ ನೋಡಲು ಯಾರೋ ಅಲ್ಮಾರಿ ಕೀಲಿ ಮುರಿದು ಅಲ್ಮಾರಿಯಲ್ಲಿದ್ದ ನಗದು 15000/- ರೂಗಳು ಇರಲಿಲ್ಲಾ ಮತ್ತು ಬಂಗಾರದ ಆಭರಣಗಳು ಕೂಡ ಇರಲಿಲ್ಲ ಯಾರೋ ಅಪರಿಚಿತ ಕಳ್ಳಲು ದಿನಾಂಕ:04/10/2019 ರಂದು ಮುಂಜಾನೆ 10-00 ಗಂಟೆಯಿಂದ ಸಾಯಾಂಕಾಲ 5-30 ಗಂಟೆಯ ಮಧ್ಯದ ಅವಧಿಯಲ್ಲಿ, ಮನೆಯಲ್ಲಿ ಯಾರು ಇಲ್ಲದ ಸಮುದಲ್ಲಿ ಬಾಗಿಲುಗಳ ಕೀಲಿ ತೆರೆದು, ಅಲ್ಮಾರಿಯ ಕೀಲಿ ಮುರಿದು ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬಂಗಾರದ ಆಭರಣಗಳು ನಗದು ಹಣ 15000/- ಹೀಗೆ ಒಟ್ಟು 1,55,600/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.