Police Bhavan Kalaburagi

Police Bhavan Kalaburagi

Thursday, July 19, 2018

Yadgir District Reported Crimes Updated on 19-07-2018


                                      Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 255/2018 ಕಲಂ 379 ಐಪಿಸಿ ;- ದಿನಾಂಕ 18.07.2018 ರಂದು ಸಮಯ 00:50 ಗಂಟೆಗೆ ಆರೋಪಿತನು ತನ್ನ ಟ್ರ್ಯಾಕ್ರರ ನಂ: ಕೆಎ-33-ಟಿಎ-8934 ಮತ್ತು ಟ್ರ್ಯಾಲಿ ನಂ: ಕೆಎ-33-ಟಿ-1634 ನೇದ್ದರಲ್ಲಿ ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳೀ ಮಾಡಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಪಡಿಸಿಕೊಂಡು ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿ ಆರೊಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗು ಮೂಲ ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 255/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. 

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 256/2018 ಕಲಂ: 143, 147, 447, 323, 324, 354, 504, 506, ಸಂಗಡ 149 ಐಪಿಸಿ;-ದಿನಾಂಕ 18.07.2018 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ತನ್ನ ಗಂಡ ಹಾಗೂ ನೆಗೆಣ್ಣಿ ಇವರು ಇಬ್ಬರು ಕೂಲಿ ಆಳುಗಳನ್ನು ಕರೆದುಕೊಂಡು ಹೊಲ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ ಯಂಕಪ್ಪ ಈತನು ತನ್ನೊಂದಿಗೆ ಇತರೆ 8-10 ಜನರನ್ನು ಕರೆದುಕೊಂಡು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ-ಬಡಿಗೆ ಹಿಡಿದುಕೊಂಡು ಬಂದು ಫಿರ್ಯಾದಿಯ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಹಾಗೂ ಫಿರ್ಯಾದಿಗೆ ಮಾನಭಂಗ ಮಾಡಲು ಯತ್ನಿಸಿ ಆಕೆಯ ಸೀರೆಯನ್ನು ಹಿರಿದು ಹಾಕಿದ ಬಗ್ಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 256/2018 ಕಲಂ: 143, 147, 447, 323, 324, 354, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 257/2018 ಕಲಂ: 143, 147, 323, 354, 504, 506 ಸಂ. 149 ಐ.ಪಿ.ಸಿ ; ಮತ್ತು ಕಲಂ 3(1)(ಡಿ)()(ತಿ)()  ಖಅ ಂಓಆ ಖಖಿ ಕ.ಂ  ಂಅಖಿ 1989 ;- ದಿನಾಂಕ 18.07.2018 ರಂದು ಬೆಳಿಗ್ಗೆ ಪಿರ್ಯಾಧಿಯು ತನ್ನ ಸಂಗಡ ತನ್ನ ಅಣ್ಣತಮ್ಮಕಿ ಜೊತೆ ತನ್ನ ಸ್ವಂತ ಗ್ರಾಮದವಾದ ಶಿವಪೂರಕ್ಕೆ ಹೋಗಿ ತನ್ನ ಹೊಲಮನೆ ನೋಡಲಾಗಿ ಸದರಿ ಪಿರ್ಯಾಧಿಯ ಜಾಗದಲ್ಲಿ ಆರೋಪಿತರು ಮನೆ ಕಟ್ಟುತ್ತಿರುವದನ್ನು ಕಂಡು ಆರೋಪಿತರಿಗೆ ಈ  ಜಾಗ ನಮಗೆ ಸೇರಿದ್ದು ಕಾರಣ ನಮ್ಮ ಜಾಗದಲ್ಲಿ ಮನೆ ಕಟ್ಟುವದು ನಿಲ್ಲಿಸಿ ಅಂತಾ ಅಂದಾಗ ಆರೋಪಿತರ ಪೈಕಿ ಎ1 ಈತನು ಏ ಬ್ಯಾಡ ಸೂಳಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದ್ದು ಅಲ್ಲದೆ ಎ2 ಇವಳು ಪಿರ್ಯಾಧಿ ಮತ್ತು ಸಂಗಡ ಬಂದ ಗಂಗಮ್ಮಳ ಕೈಯಿಂದ ಜಗ್ಗಿದ್ದು ಮತ್ತು ಆರೋಪಿತರ ಅಣ್ಣತಮ್ಮಕೀಯವರು ಏಕ್ಕೊದ್ದೇಶದಿಂದ ಪಿರ್ಯಾದಿಗೆ ಅವಾಚ್ಯವಾಗಿ ಬೈದು  ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 166/2018 ಕಲಂ: 323, 498(ಎ), 504, 506 ಐಪಿಸಿ;-ಫಿರ್ಯಾದಿದಾರಳಿಗೆ ಸುಮಾರು 2 ವರ್ಷಗಳ ಹಿಂದೆ ಆರೋಪಿ ಸಾಬಣ್ಣ ತಂದೆ ನಾಗಪ್ಪ ಅಕ್ಕೇರ ಜೋತೆಗೆ ಮದುವೆಯಾಗಿದ್ದು, ಸುಮಾರು ಒಂದೂವರೆ ವರ್ಷದಿಂದ ಅವಳ ಗಂಡ ಸಾಬಣ್ಣ ಇತನು ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ, ನೀನು ನಮ್ಮ ಮನೆಯಲ್ಲಿ ಮತ್ತು ಹೊಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನೋಡುವದಕ್ಕೆ ಸರಿಯಾಗಿ ಇಲ್ಲಾ, ಅಂತಾ ರಂಡಿ, ಬೊಸಡಿ ಅಂತಾ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೊಳ ಕೊಡುತ್ತಿದ್ದುದರಿಂದ ಫಿರ್ಯಾಧಿ ತನ್ನ ತವರು ಮನೆಗೆ ಬಂದಿದ್ದು, ದಿನಾಂಕ 14/06/2018 ರಂದು ಸಾಯಂಕಾಲ 5-30 ಗಂಟೆಗೆ ಆರೋಪಿತನು ಫಿರ್ಯಾಧಿ ತವರು ಮನೆಗೆ ಬಂದು ಪಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ ಹೊಬಡೆ ಮಾಡಿದ ಬಗ್ಗೆ. ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 350/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 18/07/2018 ರಂದು ಬೆಳಿಗ್ಗೆ 4-30 ಎ.ಎಂ ಕ್ಕೆ  ಠಾಣೆಗೆ ಸಕರ್ಾರಿ ತಪರ್ೇ ಪಿಯರ್ಾದಿದಾರರಾದ ಶ್ರೀ ನಾಗಾರಾಜ ಜಿ. ಪಿ.ಐ. ಶಹಾಪೂರ ರವರು. ಬಂದು  ಒಂದು ಮರಳು ತುಂಬಿದ ಟಿಪ್ಪರ್, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಕೊಟ್ಟ ಸಾರಾಂಶ ವೆನೆಂದರೆ ಇಂದು ದಿನಾಂಕ 18-07-2018 ರಂದು ಬೆಳಿಗ್ಗೆ 1-30 ಎ.ಎಂ ಕ್ಕೆ  ಖಚಿತ ಮಾಹಿತಿ ಬಂದಿದ್ದೆನೆಂದರೆ ಗುಂಡಗುತರ್ಿ ಕಡೆಯಿಂದ ಕೆನಾಲ ರೋಡ ಮುಖಾಂತರ ಒಂದು ಟಿಪ್ಪರದಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1. ದೇವರಾಜ .ಪಿ.ಸಿ.282. 2. ಭಿಮನಗೌಡ ಪಿಸಿ-402 ಜೀಪ ಚಾಲಕ ಅಮಗೊಂಡ ಎ.ಪಿ.ಸಿ.169 ರವರಿಗೆ ವಿಷಯ ತಿಳಿಸಿ. ದಾಳಿ ಕುರಿತು ಹೋಗುವ ನಿಮಿತ್ಯ ದೇವರಾಜ .ಪಿ.ಸಿ.282. ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ದೇವರಾಜ ಪಿಸಿ ರವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ|| 26 ವರ್ಷ ಉ|| ಕೂಲಿಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ ತಾ|| ಶಹಾಪೂರ 2] ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ಇವರಿಗೆ 2-00 ಎ.ಎಂ ಕ್ಕೆ  ಕರೆದು ಕೊಂಡು ಬಂದರು ಸದರಿಯವರಿಗೆ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೆ ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ ಪಂಚರಾಗಲು ಅವರು ಒಪ್ಪಿಕೊಂಡರು. ನಂತರ ದಾಳಿ ಕುರಿತು ಎಲ್ಲರು ಕೂಡಿ 2-25 ಎ.ಎಂ ಕ್ಕೆ  ಠಾಣೆಯ ಜೀಪ್ ನಂ ಕೆಎ-33-ಜಿ-0138 ನೆದ್ದರಲ್ಲಿ ಹೊರಟು ಶಹಾಪೂರ-ಯಾದಗೀರ ಮುಖ್ಯ ರಸ್ತೆಯ ಶಹಾಪೂರ ನಗರದ ಪೈರ ಸ್ಟೇಶನ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 2-40 ಎ.ಎಂ ಕ್ಕೆ ನಿಂತೆವು. ನಿಂತಾಗ ಬೆಳಿಗ್ಗೆ ಡೋರನಳ್ಳಿ ಗ್ರಾಮದ ಕಡೆಯಿಂದ ಬೆಳಿಗ್ಗೆ 2-55 ಎ.ಎಂ ಕ್ಕೆ ಒಂದು ಮರಳು ತುಂಬಿದ ಟಿಪ್ಪರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ತೆಗೆದು ಕೊಂಡು ಬರಲು ಹೇಳಿದಾಗ ಟಿಪ್ಪರ ಚಾಲಕನು ಯಾವದೆ ಕಾಗದ ಪತ್ರ ಇರುವದಿಲ್ಲಾ ಅಂತ ಹೇಳಿ ಟಿಪ್ಪರದಿಂದ ಇಳಿದು ಕತ್ತಲಲ್ಲಿ ಓಡಿ ಹೊದನು. ನಂತರ ಹುಡಕಾಡಲಾಗಿ ಸಿಗಲಿಲ್ಲ. ಸದರಿ ಟಿಪ್ಪರನ್ನು ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಭಾರತ್ ಬೆಂಜ್ ಟಿಪ್ಪರ ಇದ್ದು ಅದರ ನಂಬರ ಕೆಎ-03 ಎಬಿ-1023 ಅಂತ ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 4 ಬ್ರಾಸ್ ಮರಳು ತುಂಬಿದ್ದು ಅದರ ಅ:ಕಿ: 6000=00 ರೂ ಆಗಬಹುದು ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ ನಂ ಕೆಎ-03 ಎಬಿ-1023 ನೇದ್ದರ ಅಂದಾಜು ಕಿಮ್ಮತ 3,00,000-00 ರೂ ಆಗಬಹುದು. ಸದರಿ ಟಿಪ್ಪರ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 3-10 ಎ.ಎಮ್. ದಿಂದ 4-10 ಎ.ಎಮ್ದ ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ಕೇಳಿದಾಗ ಇಲ್ಲ ಅಂತ ಹೇಳಿ ಟಿಪ್ಪರ ಬಿಟ್ಟು ಕತ್ತಲಲ್ಲಿ ಓಡಿ ಹೋಗಿದ್ದು ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ಆದ್ದರಿಂದ  ಬೆರೆ ಚಾಲಕನ ಸಹಾಯದಿಂದ ಮರಳು ತುಂಬಿದ ಟಿಪ್ಪರನ್ನು ಠಾಣೆಗೆ ತಂದು ನಿಲ್ಲಿಸಿ. ವರದಿಯನ್ನು ತಯ್ಯಾರಿಸಿ ಸದರಿ ಟಿಪ್ಪರ್ ಚಾಲಕ ಮತ್ತು ಟಿಪ್ಪರ ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ಬೆಳಿಗ್ಗೆ 4-30 ಎ.ಎಂ.ಕ್ಕೆ ಸರ್ಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 350/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 351/2018 ಕಲಂ 87 ಆ್ಯಕ್ಟ;- ದಿನಾಂಕ 18/07/2018 ರಂದು ಸಾಯಂಕಾಲ 5-30 ಪಿ.ಎಂ ಕ್ಕೆ ಸ. ತ. ಪಿಯಾದಿದಾರರಾದ  ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 3 ಜನ ಆರೋಪಿತರನ್ನು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 18/07/2018 ರಂದು ಮದ್ಯಾಹ್ನ 02-00 ಪಿ,ಎಮ್ ಸುಮಾರಿಗೆ ಹೊಸ ಬೀಟ್ ಪದ್ದತಿ  ದೋರನಳ್ಳಿ ಗ್ರಾಮದ ಬೀಟ್ ನಂ 3 ನ್ನೆದ್ದನ್ನು ಹಂಚಿಕೆಯಾದ ರಾಮಪ್ಪ ಹೆಚ್.ಸಿ.168 ರವರಿಗೆ ಠಾಣೆಯಲ್ಲಿದ್ದಾಗ ದೋರನಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕೂಡಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ್ದಿದ್ದು ನನಗೆ ತಿಳಿಸಿದ್ದರ ಮರೇಗೆ ನಮ್ಮ ಠಾಣೆಯ  ಸಿಬ್ಬಂಧಿಯವರಾದ ಬಾಬು ಹೆಚ್,ಸಿ-162, ರಾಮಪ್ಪ ಹೆಚ್,ಸಿ-168 ಶಿವಣ್ಣಗೌಡ ಪಿ.ಸಿ.141, ಗಜೇಂದ್ರ ಪಿಸಿ-313 ಗಣೇಶ ಪಿಸಿ-294, ಅಮಗೊಂಡ ಎ.ಪಿ.ಸಿ.169, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಎಂದು ತಿಳಿಸಿ ನಮ್ಮ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯವರಾದ ಶಿವನಗೌಡ ಸಿ.ಪಿ.ಸಿ 141 ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿದ ಮೇರೆಗೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ಇವರಿಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮರೇಗೆ ಒಪ್ಪಿಕೊಂಡಿದ್ದು ದಾಳಿ ಕುರಿತು ಠಾಣೆಯ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಠಾಣೆಯಿಂದ 02-30 ಪಿ,ಎಮ್ ಕ್ಕೆ  ಹೊರಟು ದೋರನಳ್ಳಿ ಗ್ರಾಮದ ಹನುಮಾನ ದೇವರ ಗುಡಿಯಿಂದ ಸ್ವಲ್ಪ ದೂರದಲ್ಲಿ 03-00 ಪಿ,ಎಮ್ ಕ್ಕೆ  ಹೋಗಿ  ಜೀಪಿನಿಂದ ಕೆಳಗಡೆ ಇಳಿದು ಹೋಗಿ ಸ್ವಲ್ಪ ದೂರದಲ್ಲಿ ಶಾಲೆಯ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 50 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 50-ರೂಪಾಯಿ ಅಂತ ಹೇಳಿ ಇಸ್ಪೇಟ್ ಏಲೆಗಳ ಸಹಾಯದಿಂದ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು  ಜೂಜಾಟ  ಆಡುತ್ತಿರುವದನ್ನು  ಖಚಿತಪಡಿಸಿಕೊಂಡು, ಮಧ್ಯಾಹ್ನ 03-25 ಪಿ,ಎಮ್ ಕ್ಕೆ  ನಾವೆಲ್ಲರೂ ಕೂಡಿ ಸದರಿಯವರ ಮೇಲೆ ದಾಳಿ ಮಾಡಲಾಗಿ ದಾಳಿಯಲ್ಲಿ 03 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ  ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ  ಹೇಳಿರುತ್ತಾರೆ. 1] ಸುರೇಶ ತಂ/ ಯಂಕಣ್ಣ ಬಮ್ಮನಳ್ಳಿ ವ||38 ಉ|| ಒಕ್ಕಲುತನ ಜಾ|| ಉಪ್ಪಾರ ಸಾ|| ದೊರನಳ್ಳಿ ಅಂತಾ ತಿಳಿಸಿದನು ಈತನ ಅಂಗಶೋಧನೆ ಮಾಡಲಾಗಿ 250-00 ರೂ ಸಿಕ್ಕವು 02) ರಾಚಪ್ಪ ತಂ/ ಅಣಚಪ್ಪ ಹರಸಂಗಿ ವ||40 ಉ|| ಒಕ್ಕಲುತನ ಜಾ|| ಉಪ್ಪಾರ ಸಾ|| ದೊರನಳ್ಳಿ ಈತನ ಅಂಗಶೋಧನೆ ಮಾಡಲಾಗಿ 200-00 ರೂ ಸಿಕ್ಕವು 03) ಸಂಗಣ್ಣ ತಂ/ ಸಂಗನಬಸಪ್ಪ ಹಳ್ಳದ ವ|| 40 ಉ|| ಒಕ್ಕಲುತನ ಜಾ|| ಲಿಂಗಾಯತ ಸಾ|| ದೊರನಳ್ಳಿ ಇವನ ಅಂಗಶೋಧನೆ ಮಾಡಲಾಗಿ 220-00 ರೂ ಸಿಕ್ಕವು ಕಣದಲ್ಲಿ 150-00 ರೂ ಹೀಗೆ ಒಟ್ಟು 820/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 03-25 ಪಿ,ಎಮ್ ದಿಂದ 04-25 ಪಿ,ಎಂ ದ ವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 03 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 05-00 ಪಿ,ಎಮ್ ಕ್ಕೆ ಬಂದು ವರದಿಯನ್ನು ತಯ್ಯಾರಿಸಿ ಸಾಯಂಕಾಲ 05-30 ಪಿ,ಎಮ್ ಕ್ಕೆ 03 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾದವಾಗಿದ್ದರಿಂದ ಠಾಣೆಯ ಎನ್.ಸಿ.ನಂ:13/2018 ಕಲಂ 87 ಕೆಪಿ ಯ್ಯಾಕ್ಟ ನೇದ್ದು ದಾಖಲಿಸಿಕೊಂಡು ನಂತರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಸುರೇಶ ಕದಂ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 6-30 ಪಿ.ಎಂ ಕ್ಕೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 351/2018 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 19-07-2018


                                                                                                                                                                                                                                                
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-07-2018

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 138/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 18-07-2018 ರಂದು ಫಿರ್ಯಾದಿ ರವಿಕಾಂತ ತಂದೆ ಯಾದವರಾವ ವಯ: 45 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಲಖಣಗಾವ, ತಾ: ಭಾಲ್ಕಿ ರವರ ಮಗಳಾದ ಶಾಹೂ ತಂದೆ ರವಿಕಾಂತ ವಯ: 10 ವರ್ಷ ಇಕೆಯು ತನ್ನ ಮನೆಯಿಂದ ಶಾಲೆಗೆ ಹೋಗುವಾಗ ದಾರಿಯಲ್ಲಿ ಸುಭಾಷ ಚೌಕ ಹತ್ತಿರ ಆರೋಪಿ ಮಕ್ಬುಲ ತಂದೆ ಇಬ್ರಾಹೀಮ ಸಾ: ಲಖನಗಾವ  ಇತನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಮಗಳಿಗೆ ತಲೆಯಲ್ಲಿ, ಮೋಳಕಾಲ ಹತ್ತಿರ ಭಾರಿ ರಕ್ತಗಾವಾಗಿದ್ದು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಶಾಹೂ ಇಕೆಯು ಮ್ರತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 92/2018, ಕಲಂ. 324, 504 ಐಪಿಸಿ ಮತ್ತು 3(1) (ಆರ್) (ಎಸ್) ಎಸ್.ಸಿ/ಎಸ್.ಟಿ 2014 ಮತ್ತು 3(10) ಎಸ್.ಸಿ/ಎಸ್.ಟಿ ಪಿಓಎ ಕಾಯ್ದೆ 1989 ಜೊತೆ 34 ಐಪಿಸಿ :-
ದಿನಾಂಕ 18-07-2018 ರಂದು ಫಿರ್ಯಾದಿ ಲಕ್ಷ್ಮಿಕಾಂತ ತಂದೆ ಗೋಪಾಲ ವಾಡೆ ವಯ: 22 ವರ್ಷ, ಜಾತಿ: ಪರಿಶಿಷ್ಟ ಜಾತಿ, ಸಾ: ಮಂಗಲಗಿ, ತಾ: ಹುಮನಾಬಾದ ರವರು ತಿಂಡಿ ತಿನ್ನಲು ಹರೀಶ ತಂದೆ ರಾಮಚಂದ್ರ ಸಾ: ಮಂಗಲಗಿ ಇವರ ಜೊತೆಯಲ್ಲಿ ಖೇಣಿ ರಂಜೋಳ ಕ್ರಾಸ ಹತ್ತಿರ ಇರುವ ಅವಂಟಗೇರ ಇವರ ಹೊಟೇಲದ ಎದುರುಗಡೆ ನಿಲ್ಲುವಷ್ಟರಲ್ಲಿ ಗ್ರಾಮದ ಸಂಜೀವ ತಂದೆ ಮಾಣಿಕರಡ್ಡಿ ಇವರು ಸಹ ಸದರಿ ಹೊಟೇಲದ ಎದುರುಗಡೆ ಬಂದು ನಿಂತಿದ್ದು, ಆ ಸಮಯಕ್ಕೆ ಹರೀಷ ಇತನು ಸಂಜೀವ ಇತನಿಗೆ ನಮಸ್ಕಾರ ಮಾಡಿದ್ದು ಆಗ ಸಂಜೀವ ಇತನು ಫಿರ್ಯಾದಿಗೆ ನಮಸ್ಕಾರ ಮಾಡಲು ಆಗುವುದಿಲ್ಲಾ ಅಂತಾ ಅವಾಚ್ಯವಾಗಿ ಬೈದಾಗ ಹರೀಶ ಇತನು ಈ ರೀತಿ ಬೈಯುವದು ಸರಿಯಿಲ್ಲಾ ಬೈಬೇಡಿರಿ ಅಂತಾ ಅಂದಾಗ ಸಂಜು ಇತನು ಹರೀಷ ಇತನಿಗೆ ನಿನೇನು ಮಹಾ ಅಂತಾ ಅವಾಚ್ಯವಾಗಿ ಬೈದನು, ಆಗ ಫಿರ್ಯಾದಿಯು ಸಂಜು ಇತನಿಗೆ ಹಿಗೆಕೆ ಬೈಯುತ್ತಿದ್ದಿ ಅಂತಾ ಕೇಳಲು ಹೊದಾಗ ನಿನೇನು ಕೇಳುತ್ತಿ ಅಂತಾ ಅವಾಚ್ಯವಾಗಿ ಬೈದು ಅಲ್ಲಿಂದ ಅವನು ಮಂಗಲಗಿ ಗ್ರಾಮಕ್ಕೆ ಹೊಗಿದ್ದು, ಫಿರ್ಯಾದಿಯು ಸಹ ಮಂಗಲಗಿ ಗ್ರಾಮಕ್ಕೆ ಬಂದಿದ್ದು ಇರುತ್ತದೆ, ನಂತರ ಫಿರ್ಯಾದಿಯು ಪುನ: ಖೇಣಿ ರಂಜೋಳ ಕ್ರಾಸ ಹತ್ತಿರ ಇರುವ ಅವಂಟಗೇರ ಇವರ ಹೊಟಲಕ್ಕೆ ಚಹಾ ಕುಡಿಯಲು ಹೊಟೇಲ ಎದರುಗಡೆ ನಿಂತಾಗ ಅಲ್ಲಿ ಸಂಜೀವ ಇತನು ಬಂದು ಲಚ್ಚಾ ನಾನು ನಿನಗೆ ನೋಡಿಕೊಳ್ಳುತ್ತೇನೆ ಅಂತಾ ಅಂದಾಗ ಎನು ನೊಡಿಕೊಳ್ಳುತ್ತಿರಿ ಅಂತಾ ಅಂದು ಕೇಳಿ ಫಿರ್ಯಾದಿಯು ಮಂಗಲಗಿ ಗ್ರಾಮಕ್ಕೆ ಹೊಗುತ್ತಿರುವಾಗ ಮಂಗಲಗಿ ಗ್ರಾಮದ ಅಂಬೆಡ್ಕರ ವೃತ್ತದ ಹತ್ತಿರ ಆರೋಪಿತರಾದ ಸಂಜೀವ ತಂದೆ ಮಾಣಿಕರಡ್ಡಿ ಮತ್ತು ಅವನ ಅಣ್ಣನಾದ ರುಕ್ಮಾರಡ್ಡಿ ಇಬ್ಬರು ಫಿರ್ಯಾದಿಗೆ ಅಕ್ರಮವಾಗಿ ತಡೆದು ಹೊಲ್ಯಾ ನನಗೆ ಎದುರು ಮಾತಾಡುತ್ತಿ ಅಂತಾ ಅಂದು ಸಂಜುರೆಡಿ ಇತನು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಬಾಯಿ ಮೇಲೆ ಹೊಡೆದು ಮೇಲಿನ ತುಟಿಗೆ ಗುಪ್ತಗಾಯ ಪಡಿಸಿದ್ದು ಮತ್ತು ಅಲ್ಲಿಯೇ ಬಿದ್ದ ಒಂದು ಕೊಡ್ಡಿಯ ಕಾವಿನಿಂದ ಸಂಜುರಡ್ಡಿ ಇತನು ತಲೆಯಲ್ಲಿ ಹೊಡೆದು ರಕ್ತಗಾಯ ಪಡಿಸದ್ದು ಅಲ್ಲದೆ ರುಕ್ಮಾರಡ್ಡಿ ಸಹ ಇತನು ಅದೆ ಕೊಡಲಿಯ ಕಾವಿನಿಂದ ಬಲಗೈ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ, ಸದರಿ ಜಗಳವನ್ನು ಗ್ರಾಮದ ಸಂತೋಷರಡ್ಡಿ, ಪ್ರಭುರಡ್ಡಿ, ಸಂಗಪ್ಪಾ ಪಾಟೀಲ ಇವರುಗಳು ನೋಡಿ ಜಗಳ ಬಿಡಿಸಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 177/2018, ಕಲಂ. 279, 338 ಐಪಿಸಿ :-
ದಿನಾಂಕ 18-07-2018 ರಂದು ಫಿರ್ಯಾದಿ ರವಿ ತಂದೆ ವೈಜಿನಾಥ ನಿಜಾಮಪೂರೆ ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿಂದಬಂದಗಿ, ತಾ: ಹುಮನಾಬಾದ ರವರು ತನ್ನ ಮೊಟಾರ ಸೈಕಲ ಮೇಲೆ ಬೀದರಿಂದ ಸಿಂದಬಂದಗಿ ಗ್ರಾಮಕ್ಕೆ ಹೊಗುತ್ತಿರುವಾಗ ಬೀದರ ಹುಮನಾಬಾದ ರಸ್ತೆಯ ಕಟ್ಟಿತುಗಾಂವ ಕ್ರಾಸ ಕೆನಾಲ ಹತ್ತಿರ ಬಂದಾಗ ತಮ್ಮೂರ ಜ್ಞಾನಿ ತಂದೆ ಬಾಬಣ್ಣಾ ಪ್ರಭಾ ಹಾಗು ಆತನ ಅಕ್ಕ ಲಕ್ಷ್ಮೀಬಾಯಿ ಗಂಡ ಶಿವರಾಜ ಬಾಜೆನೊರ ವಯ: 60 ವರ್ಷ, ಸಾ: ಸಿಂದಬಂದಗಿ ಇವರು ತಮ್ಮ ಮೊಟಾರ ಸೈಕಲ ನಂ. ಕೆಎ-35/ಯು-8790 ನೇದರ ಮೇಲೆ ಸಿಂದಬಂದಗಿ ಗ್ರಾಮದಿಂದ ಹುಮನಾಬಾದ ಸಿಂದಬಂದಗಿ ರೋಡ ಹಿಡಿದು ಸಂಗೋಳಗಿ ಗ್ರಾಮದ ಕಡೆಗೆ ಹೊಗುತ್ತಿದ್ದರು ಮೊಟಾರ ಸೈಕಲನ್ನು ಜ್ಞಾನಿ ತಂದೆ ಬಾಬಣ್ಣಾ ಸಾ: ಸಂಗೋಳಗಿ ಈತನು ಚಲಾಯಿಸುತ್ತಿದ್ದನು, ಜ್ಞಾನಿ ಈತನು ತನ್ನ ವಾಹನವನ್ನು ಅತೀ ಜೋರಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿದರಿಂದ ವಾಹನ ಸ್ಕೀಡಾಗಿ ಪಲ್ಟಿ ಆಗಿರುತ್ತದೆ, ಸದರಿ ಅಪಘಾತದಿಂದ ಲಕ್ಷ್ಮೀಬಾಯಿ ಇವಳ ಸೊಂಟದಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು  ಮೂಗಿನ ಮೇಲೆ ಗಾಯವಾಗಿ ರಕ್ತಸ್ರಾವ ಆಗಿರುತ್ತದೆ, ಎರಡು ಮೊಳಕೈ ಮೇಲೆ ತರಚಿದ ರಕ್ತಗಾಯ ಹಾಗು ಎರಡು ಮೊಳಕಾಲ ಮೇಲೆ ತರಚಿದ ರಕ್ತಗಾಯ ಆಗಿರುತ್ತದೆ, ಆಗ ಫಿರ್ಯಾದಿ ಮತ್ತು ತಮ್ಮೂರ ನಾಗೇಶ ತಂದೆ ಪಂಡಿತ ಎರಭಾಗ ಕೂಡಿಕೊಂಡು ಲಕ್ಷ್ಮೀಬಾಯಿ ಇವರಿಗೆ ಚಿಕಿತ್ಸೆ ಕುರಿತು ಹಳ್ಳಿಖೇಡ (ಬಿ) ಗ್ರಾಮದ ಸರಕಾರಿ ಆಸ್ಪತ್ರೆಗೆ ತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 128/2018, ಕಲಂ. ಮನುಷ್ಯ ಕಾಣೆ :-
ದಿನಾಂಕ 06-04-2018 ರಂದು 1500 ಗಂಟೆಯ ಸುಮಾರಿಗೆ ಫಿರ್ಯಾದಿ ಧರ್ಮಣ್ಣಾ ತಂದೆ ಶರಣಪ್ಪಾ ಮುಸ್ತರಿ ವಯ: 55 ವರ್ಷ, ಜಾತಿ: ಕುರುಬ, ಸಾ: ಹಣಕುಣಿ ಗ್ರಾಮ ರವರ ಮಗನಾದ ರಾಜಕುಮಾರ ವಯ: 35 ವರ್ಷ ಇತನು ಮನೆಯಲ್ಲಿ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಸಾಯಂಕಾಲವಾದರು ಮನೆಗೆ ಬರದೆ ಇರುವುದರಿಂದ ಫಿರ್ಯಾದಿಯು ತಮ್ಮ ಮಕ್ಕಳೊಂದಿಗೆ ಮಗನ ಬಗ್ಗೆ ಊರಲ್ಲಿ ಎಲ್ಲಾ ಕಡೆ ಹುಡುಕಿದರು ಸಿಕಿರುವುದಿಲ್ಲಾ, ನಂತರಮ್ಮ ಸಂಬಂಧಿಕರ ಊರುಗಳಾದ ಪೂನಾ, ಮುಂಬೈ, ಸಿಂಧನಕೇರಾ, ಹುಡಗಿ, ಕಲ್ಲೂರ, ವಳಖಿಂಡಿ ಕಡೆಗಳಲ್ಲಿ ಹುಡುಕಿದರು ಮಗನು ಸಿಕಿರುವುದಿಲ್ಲಾ, ಆತನು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬರದೆ ಕಾಣೆಯಾಗಿರುತ್ತಾನೆ, ಕಾಣೆಯಾದ ಮಗನ ಚಹರೆ ಪಟ್ಟಿ ವಿವರ :- ಹೆಸರು: ರಾಜಕುಮಾರ ತಂದೆ ಧರ್ಮಣ್ಣಾ ಮುಸ್ತರಿ, ವಯ: 35 ವರ್ಷ, ಜಾತಿ: ಕುರುಬ, ವಿಳಾಸ: ಹಣಕುಣಿ ಗ್ರಾಮ, ತಾ: ಹುಮನಾಬಾದ, ಚಹರೆ ಪಟ್ಟಿ: ಸಾಧರಣ ಮೈಕಟ್ಟು, ಕಪ್ಪು ಬಣ್ಣ , ಬಲಗಲ್ಲದ ಮೇಲೆ ಕಪ್ಪು ಮಂಚೆ,  5.6 ಅಡಿ ಎತ್ತರ, ಧರಿಸಿರುವ ಬಟ್ಟೆಗಳು: ಬಿಳ್ಳಿ ಬಣ್ಣದ ಹಾಫ್ ಶರ್ಟಕಪ್ಪು ಬಣ್ಣದ ಪ್ಯಾಂಟ್, ಮಾತನಾಡುವ ಭಾಷೆ: ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-07-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 18-07-2018 ರಂದು ಅಣ್ಣನ ಮಗನಾದ ಸಂತೋಷ ತಂದೆ ಮಲ್ಲಣ್ಣ ಬಿರಾದಾರ ಇಬ್ಬರು ನಮ್ಮ ಹೊಲದಿಂದ ಮನೆಗೆ ಬರುವಾಗ ರಮೇಶ ತಂದೆ ಈರಣ್ಣ ಹುಣಸಗಿ ರವರ ಹೊಲದಲ್ಲಿನ ದಾರಿಯಿಂದ ಮನೆಗೆ ಬರುವಾಗ 1) ರಮೇಶ ರಂದೆ ಈರಣ್ಣ ಹುಣಸಗಿ 2) ಭಗವಂತರಾಯ ತಂದೆ ಈರಣ್ಣ ಹುಣಸಲಗಿ 3) ಶರಣಬಸು ತಂದೆ ನಾಗಪ್ಪ ಹುಣಸಗಿ 4) ಈರಣ್ಣ ತಂದೆ ನಾಗಪ್ಪ ಹುಣಸಗಿ ನಾಲ್ಕು ಜನರು ನಮಗೆ ತಡೆದು ನಿಲ್ಲಿಸಿ ರಂಡಿ ಮಕ್ಕಳ್ಯಾ ನಮ್ಮ ಮನೆಯ ಮುಂದೆ ನೀವು ಉದ್ದೇಶ ಪೂರ್ವಕವಾಗಿಯೇ ಸಿಸಿ ರಸ್ತೆ ಮಾಡಿಲ್ಲಾ ನಿಮ್ಮ ಸೊಕ್ಕ ಬಾಳ ಅದಾ ಅಂತ ಬೈಯುತಿದ್ದಾಗ ಅಲ್ಲಿಂದ ಹೋಗುತಿದ್ದ ನಮ್ಮ ಗ್ರಾಮದ ದೀಲಿಪ ತಂದೆ ಜಟ್ಟೆಪ್ಪ ಸಿಂಗೆ, ಶಾವರಸಿದ್ದ ತಂದೆ ಕುನಪ್ಪ ಜಮಾದಾರ ಇಬ್ಬರು ನಮ್ಮ ಹತ್ತಿರ ಬಂದು ಸದರಿಯವರಿಗೆ ತಿಳುವಳಿಕೆ ಹೇಳುತಿದ್ದಾಗ ಕೇಳದೆ ರಮೇಶ ಈತನು ತನ್ನ ಕೈಯಲಿದ್ದ ಕುಡಿಗೊಲದಿಂದ ರಂಡಿಮಗಂದು ಸೊಕ್ಕ ಬಾಳ ಅದಾ ಅಂತ ಅಂದು ಜೋರಾಗಿ  ನನ್ನ ತಲೆಯ ಮದ್ಯ ಭಾಗಕ್ಕೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ನಾನು ಕೆಳಗೆ ಬಿದ್ದಾಗ ಸಂತೋಷನಿಗೆ ಭಗವಂತರಾಯ ಈತನು ಕೈಯಿಂದ ಹೊಟ್ಟೆಗೆ ಎದೆಗೆ ಮುಷ್ಠಿ ಮಾಡಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ನಂತರ ನಾಲ್ಕು ಜನರು ಕೂಡಿ ತಮ್ಮ ಕಾಲಿನಿಂದ ನನಗೆ ಹಾಗು ಸಂತೋಷನಿಗೆ ಮನಬಂದಂತೆ ಒದೆಯುತಿದ್ದಾಗ ದೀಲಿಪ ಹಾಗು ಶವರಸಿದ್ದ ಇಬ್ಬರು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ಸದರಿಯವರು ಅಲ್ಲಿಂದ ಹೋಗುವಾಗ ರಂಡಿ ಮಕ್ಕಳೆ ನಿಮಗೆ ಖಲಾಸ ಮಾಡ್ತಿವಿ ಅಂತ ಅಂದು ತಮ್ಮ ಕೈಯಲಿದ್ದ ಕೂಡಿಗೋಲ ಅಲ್ಲೆ ತಮ್ಮ ಹೊಲದಲ್ಲಿ ಬಿಸಾಡಿ ಹೋಗಿರುತ್ತಾರೆ ನಂತರ ನಾವು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸೊಲಾಪೂರದ ಮೊನಾರ್ಕ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ  ಅಂತಾ ಶ್ರೀ  ಮಹಾದೇವ ತಂದೆ ಸಿದ್ದಣ್ಣ ಬಿರದಾರ ಸಾ||ಕೂಡಿಗಾನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 03-05-2018 ರಂದು 01;00 .ಎಂ ದಿಂದ 01;30 .ಎಂ ಮದ್ಯದಲ್ಲಿ ಶ್ರೀಮತಿ ರೇಣುಕಾ ಗಂಡ ಚಂದ್ರಾಮ ಕುಂಚಾಳ ಸಾ|| ಅಖಂಡಳ್ಳಿ ರವರ ಮಗಳು ನಾಗಮ್ಮ ಇವಳಿಗೆ ಸೈದಾಪೂರ ಗ್ರಾಮದ ಅಮೀನಪಟೇಲ ಎಂಬುವನು ಯಾವದೋ ದುರುದ್ದೇಶದಿಂದ ಫಿರ್ಯಾದಿ ಮನೆಯಿಂದ ಅಪಹರಿಸಿಕೊಂಡು ಹೋಗಿರಬಹುದು ಅವಳನ್ನು ಪತ್ತೆ ಹಚ್ಚಿ ಆರೋಪಿತನ ವಿರುದ್ದ ಕ್ರಮ  ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ 16/07/2018 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ತಮ್ಮನಾದ ಬೀರಪ್ಪಾ ಈತನು ಲಾಡ ಚಿಂಚೋಳಿ ತಾಂಡಾದ ಉಮೇಶ ಎಂಬ ವ್ಯಕ್ತಿಯೊಂದಿಗೆ ಸುಭಾಸ ಗುತ್ತೆದಾರ ಸಾಹೇಬರ ಹೊಲಕ್ಕೆ ಮೊಟರ ಸೈಕಲ ಮೇಲೆ ಹೊಗುವಾಗ ಲಾಡ ಚಿಂಚೋಳಿ ತಾಂಡಾದ ಕ್ರಾಸ್ ಹತ್ತಿರ ಇರುವ ರಸ್ತೆ ದಿಬ್ಬಿನ ಹತ್ತಿರ ಉಮೇಶ ಈತನು ಮೊಟರ ಸೈಕಲನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬ್ರೆಕ್ ಹೊಡೆದಿದ್ದರಿಂದ ಮೊಟರ ಸೈಕಲ ಸಮೇತವಾಗಿ ಮೊಟರ ಸೈಕಲ ಚಲಾಯಿಸುತ್ತಿದ್ದ ಉಮೇಶ ಹಾಗು ನನ್ನ ತಮ್ಮ ಬೀರಪ್ಪಾ ಇಬ್ಬರು ಕೇಳಗೆ ಬಿದ್ದಿದ್ದರಿಂದ ನನ್ನ ತಮ್ಮನಿಗೆ ಭಾರಿಗಾಯವಾಗಿರುತ್ತವೆ ಅಂತಾ ನಮ್ಮ ಪರಿಚಯದವರಾದ ಮಾಳಪ್ಪಾ ರವರು ತಿಳಿಸಿದ ಮೇರೆಗೆ ನಾನು ಮತ್ತು ಮಾಳಪ್ಪ ಇಬ್ಬರು ಕೂಡಿ ಅಲ್ಲಿಗೆ ಹೋಗಿ ನೋಡಲಾಗಿ ಮೊಟರ ಸೈಕಲ ನಂ ಕೆಎ-05, ಇಪಿ-777 ನೆದ್ದು ರಸ್ತೆಯಲ್ಲಿ ಬಿದ್ದಿದ್ದು ನನ್ನ ತಮ್ಮನಿಗೆ ತಲೆಗೆ ಭಾರಿಗಾಯವಾಗಿ  ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಉಮೇಶನಿಗೂ ಕೂಡಾ ಮೂಗಿಗೆ ಭಾರಿಗಾಯವಾಗಿ ಅಸ್ವಸ್ಥನಾಗಿದ್ದನು. ಅಷ್ಟರಲ್ಲಿಯೇ ಉಮೇಶನ ತಮ್ಮನಾದ ವಿಲಾಸ ಜೂಲು ಚವ್ಹಾಣ ಇವರು ಅಂಬುಲೆನ್ಸ ಕರೆಸಿದ್ದು ಅದರಲ್ಲಿ ನಾನು ಮತ್ತು ವಿಲಾಸ ಇಬ್ಬರು ಕೂಡಿ ನನ್ನ ತಮ್ಮ ಬೀರಪ್ಪಾ ಮತ್ತು ಉಮೇಶ ಇಬ್ಬರಿಗು ಹಾಕಿಕೊಂಡು ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನನ್ನ ತಮ್ಮನು ಪ್ರಜ್ಞೆ ಸ್ಥಿತಿಗೆ ಬಂದಿಲ್ಲಾ ಈ ಘಟನೆ ಇಂದು ಮುಂಜಾನೆ 9-30 ಗಂಟೆಯ ಸುಮಾರಿಗೆ ಜರುಗಿಸಿದ್ದು ಸದರಿ ಉಮೇಶ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೆಕು ಅಂತಾ ಶ್ರೀ ಹಣಮಂತ ತಂದೆ ಸಿದ್ದಪ್ಪಾ ಮುನ್ನೊಳ್ಳಿ ಸಾ: ಲಾಡಚಿಂಚೋಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.