Police Bhavan Kalaburagi

Police Bhavan Kalaburagi

Tuesday, April 30, 2019

KALABURAGI DISTRICT REPORTED CRIMES

ಕ್ರಿಕೇಟ ಬೆಟ್ಟಿಂಗ ದಂಧೆಕೋರನ ಬಂಧನ :
ಚೌಕ ಠಾಣೆ : ದಿನಾಂಕ.29.04.2019 ರಂದು ನೇಹರು ಗಂಜ್ ಗಾಂಧಿನಗರ ಕಮಾನ ಮುಂದೆ ಒಬ್ಬ ಮನುಷ್ಯನು ಐಪಿಎಲ್‌ ಕ್ರಿಕೇಟ ಮ್ಯಾಚ ಸನ್ ರೈಸರ್ ಹೈದ್ರಾಬಾದ ಮತ್ತು ಪಂಜಾಬ ಕಿಂಗ್ಸ ಲೆವನ್ ಟೀಮ್‌ಗಳ ಮದ್ಯ ನಡೆದಿರುವ ಮ್ಯಾಚ್‌‌ನಲ್ಲಿ ಕ್ರಿಕೇಟ ಬೆಟ್ಟಿಂಗ್‌ ದಂದೆ ನಡೆಸುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಐ. ಚೌಕ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಾಂಧಿನಗರ ಕಮಾನ ಸ್ವಲ್ಪ ದೂರದಲ್ಲಿರುವಂತೆ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಹೋಗಿ ಸ್ವಲ್ಪ ಹತ್ತಿರದಲ್ಲಿ ನಿಂತು ನೋಡಲು ಒಬ್ಬ ಮನುಷ್ಯನು ಗಾಂಧಿನಗರ ಕಮಾನ ಹತ್ತಿರ ರಸ್ತೆಯ ಮೇಲೆ ನಿಂತು ಮೊಬೈಲ್‌ ಫೋನ್‌ ಮುಖಾಂತರ ಐಪಿಎಲ್‌ ಕ್ರಿಕೇಟ ಮ್ಯಾಚನಲ್ಲಿನ ನಡೆಯುತ್ತಿರುವ ಒಂದು ಬಾಲಿಗೆ 6 ಹೊಡೆದರೆ  3000/-, 4 ಹೊಡೆದರೆ 2000/-ರೂ ಅಂತ ಮಾತನಾಡುವದನ್ನು ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಬೆಟ್ಟಿಂಗ್‌ ದಂದೆಕೊರನಿಗೆ ಹಿಡಿದು ಅವನ ಹೆಸರು ವಿಚಾರಿಸಲಾಗಿ ಅಬ್ರಾರಖಾನ್ ತಂದೆ ಅಬ್ದುಲ ಜಬ್ಬಾರಖಾನ್, ಸಾ: ಖಮರ ಕಾಲೂನಿ ಕಲಬುರಗಿ ಅಂತಾ ತಿಳಿಸಿದ್ದು, ಇತನಿಗೆ ಹಿಡಿದು ಅಂಗ ಶೋದನೆ ಮಾಡಲು ಸದರಿಯವನ ಹತ್ತಿರ ಕೃತ್ಯಕ್ಕೆ ಬಳಿಸಿದ 1) ಸ್ಯಾಮಸಂಗ್ ಮೊಬೈಲ್‌ ಫೊನ್‌ ಅ:ಕಿ:2,000/- ರೂ. ಮತ್ತು ಬೆಟ್ಟಿಂಗ ಜೂಜಾಟಕ್ಕೆ ಬಳಸಿದ ನಗದು ಹಣ 50,000/- ರೂಪಾಯಿಗಳನ್ನು ಹಾಗೂ ಬೆಟ್ಟಿಂಗ ಪಡೆದುಕೊಂಡು ಯಾರಿಗೆ ಕೊಡುತ್ತಿ ಅಂತ ವಿಚಾರಿಸಲು ಖಾಜಾ ಬಂದೇನವಾಜ ದರ್ಗಾ ಹತ್ತಿರದ ಗುಡ್ಡು ಎಂಬುವನಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆ ಹಾಜರುಪಡಿಸಿದ್ದು ಇರುತ್ತದೆ. ಸದರಿ ಆರೋಪಿತನು ಕ್ರಿಕೇಟ ಬೆಟ್ಟಿಂಗ ದಂದೆ ಮಾಡಿದ್ದು.  ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 29/04/2019 ರಂದು  ನರೋಣಾ  ಗ್ರಾಮದಲ್ಲಿರುವ  ಬಸ್‌ ನಿಲ್ದಾಣದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನರೋಣಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ನರೋಣಾ  ಗ್ರಾಮದಲ್ಲಿರುವ  ಬಸ್‌ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಬಸ್ ನಿಲ್ದಾಣದ ಮುಂದಿನ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ದಾಳಿಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಸವರಾಜ ತಂದೆ ಮಾಳಪ್ಪಾ ಪೂಜಾರಿ, ಸಾ:ನರೋಣಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 730/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವಬೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ: 29/04/2019 ರಂದು ನರೋಣಾ  ಗ್ರಾಮದಲ್ಲಿರುವ  ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ನರೋಣಾ  ಗ್ರಾಮದಲ್ಲಿರುವ  ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವಸ್ಥಾನದ ಹತ್ತಿರ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅಣ್ಣಾರಾಯ ತಂದೆ ಅಂಬಾರಾಯ ಮಹಾಗಾಂವ, ಸಾ:ನರೋಣಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3)ನಗದು ಹಣ 820/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ: 29/04/2019 ರಂದು ನರೋಣಾ  ಗ್ರಾಮದಲ್ಲಿರುವ  ಸಿದ್ದಾರೂಢ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ  ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ನರೋಣಾ  ಗ್ರಾಮದಲ್ಲಿರುವ  ಸಿದ್ದಾರೂಢ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಿದ್ದಾರೂಢ ದೇವಸ್ಥಾನದ ಹತ್ತಿರ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಕ್ಷೇಮಲಿಂಗ ತಂದೆ ಸಾಯಬಣ್ಣಾ ವಗ್ಗೆ, ಸಾ ನರೋಣಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 1115/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶಿವಲೀಲಾ ಗಂಡ ಶ್ರಿಶೈಲ ಇಜೇರಿ ಸಾ; ಹರನಾಳ ಹಾಲಿವಸತಿ- ಕುಕನೂರ ಗ್ರಾಮ ರವರಿಗೆದಿನಾಂಕ 12-05-2014 ರಂದು ಹರನಾಳ ಗ್ರಾಮದ ಶ್ರೀಶೈಲ ತಂದೆ ಮಲ್ಲಿಕಾರ್ಜುನ ಇಜೇರಿ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ, ನಮ್ಮ ನಿಶ್ಚಿತಾರ್ಥವು ಕುಕನೂರ ಗ್ರಾಮದಲ್ಲಿ ನೆರವೇರಿದ್ದು, ಆ ಸಮಯದಲ್ಲಿ  ನಮ್ಮ ತಂದೆ ಮತ್ತು ನಮ್ಮ ಕಾಕಾ ಸಿದ್ರಾಮಪ್ಪ ತಂದೆ ಸಿದ್ದಪ್ಪ ಬಿರಾದಾರ, ಮಲ್ಲನಗೌಡ ತಂದೆ ಸಾಯಬಣ್ಣಗೌಡ ಪೊಲೀಸ ಪಾಟೀಲ, ಶಿವರಾಯಗೌಡ ತಂದೆ ಹಣಮಂತ್ರಾಯ ಸಾಹು, ಭೀಮಣ್ಣ ತಂದೆ ಗುರಪ್ಪ ರಬಗೊಂಡ, ಹಾಗು ಹರನಾಳ ಗ್ರಾಮದ ಬಸವರಾಜ ತಂದೆ ಭೀಮರಾಯ ಸಾಹು, ಕಲ್ಯಾಣರಾಯ ತಂದೆ ಶರಣಪ್ಪ ಸಾಹು, ಕೇಶವರಾಯ ತಂದೆ ಶಿವರಾಯ ಸಾಹು ಹಿಗೆಲ್ಲರ ಸಮಕ್ಷಮದಲ್ಲಿ ವರನ ಒತ್ತಾಯದ ಮೇರೆಗೆ ವರದಕ್ಷಣೆ ಮಾತನಾಡಿದ್ದು, ಮದುವೆ ಕಾಲಕ್ಕೆ 10 ತೊಲಿ ಬಂಬಗಾರ ಮತ್ತು ಒಂದು ಲಕ್ಷ ರೂಪಾಯಿ ನಗದು ಹಣ, ಕೈ ಗಡಿಯಾರ ಮತ್ತು 1,50,000/- ರೂ ಕಿಮ್ಮತ್ತಿನ ಗೃಹ ಬಳಕೆ ಸಾಮಾನುಗಳು ಕೊಡುವಂತೆ ಮಾತನಾಡಿದ್ದು ಇರುತ್ತದೆ, ಅದರಂತೆ ನಮ್ಮ ಮದುವೆಯು ವರನ ಮನೆಯ ಮುಂದೆ ಹರನಾಳ ಗ್ರಾಮದಲ್ಲಿ ನಡೆದಿದ್ದು ಇರುತ್ತದೆ, ಆ ಸಮಯದಲ್ಲಿ ಹಿರಿಯರ ಸಮಕ್ಷಮ 10 ತೊಲಿ ಬಂಗಾರದ 10 ಸುತ್ತುಂಗುರುಗಳು ಮತ್ತು 1 ಲಕ್ಷ ರೂಪಾಯಿ ನಗದು ಹಣ ಹಾಗು ಕೈ ಗಡಿಯಾರ ಮತ್ತು ಅಂದಾಜು 1,50,000/- ರೂ ಕಿಮ್ಮತ್ತಿನ ಸುರಗಿ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ 15-20 ದಿನ ಹರನಾಳ ಗ್ರಾಮದಲ್ಲೆ ಇದ್ದೇವು, ನನ್ನ ಗಂಡ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ನನ್ನ ಗಂಡ ನನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವು, ನಂತರ ನಾವಿಬ್ಬರು ಒಂದು ವರ್ಷ ಅನ್ನೊನ್ಯವಾಗಿದ್ದೇವು, ತದನಂತರ ನನ್ನ ಗಂಡ ನನಗೆ ಸರಿಯಾಗಿ ನೋಡಿಕೊಳ್ಳದೆ, ನಿನಗ ಮದುವೆ ಮಾಡಿಕೊಂಡಿದ್ದರಿಂದ ನನಗೆ ಸಾಲವಾಗಿದೆ ನಿಮ್ಮ ತವರು ಮನೆಯಿಂದ ಇನ್ನು 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಅನ್ನುತ್ತಾ ದಿನಾಲು ನನಗೆ ಕಿರುಕುಳ ಕೊಡುತ್ತಿದ್ದನು, ಈ ಬಗ್ಗೆ ನಾನು ನಮ್ಮ ತವರು ಮನೆಯವರಿಗೆ ಹೇಳುತ್ತಾ ಬಂದಿರುತ್ತೇನೆ, ನಂತರ ದಿನಾಂಕ 01-06-2016 ರಂದು ಸಾಯಂಕಾಲ ನನ್ನ ಗಂಡ ನನಗೆ ಬೆಂಗಳೂರಿನಿಂದ ಕರೆದುಕೊಂಡು ಹರನಾಳ ಗ್ರಾಮಕ್ಕೆ ಬಂದನು, ದಿನಾಂಕ 02-06-2016 ರಂದು ನಮ್ಮ ಅತ್ತೆ ಶಕುಂತಲಾ ಮತ್ತು ಮಾವ ಮಲ್ಲಿಕಾರ್ಜುನ ರವರು ನನ್ನ ಗಂಡನಿಗೆ ಈ ರಂಡಿಗಿ ಇಲ್ಲಿಗೆ ಯ್ಯಾಕೆ ತಂದಿದ್ದಿ, ಅಲ್ಲೇ ಏಲ್ಲಾದರು ಖಲಾಸ ಮಾಡಬೇಕಾಗಿತ್ತು, ಈ ರಂಡಿಯಿಂದ ನಿನ್ನ ಬಾಳು ಹಾಳಾಗಿದೆ ಅಂತಾ ಅಂದು ನನಗೆ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ, ನಂತರ ನಮ್ಮ ತಂದೆ ತಾಯಿಯವರು ಹರನಾಳ ಗ್ರಾಮಕ್ಕೆ ಬಂದು ನನ್ನ ಗಂಡನಿಗೆ ಮತ್ತು ಅತ್ತೆ ಮಾವನಿಗೆ ತಿಳವಳಿಕೆ ಹೇಳಿದರು ಕೇಳದೆ ನಿಮ್ಮ ಮಗಳು ನಮ್ಮ ಮನೆತನಕ್ಕೆ ಒಪ್ಪುವುದಿಲ್ಲಾ, ಮದುವೆ ಮಾಡಿ ನಮಗೆ ಸಾಲ ಆಗಿದೆ ಇನ್ನು 1 ಲಕ್ಷ ರೂಪಾಯಿ ವರದಕ್ಷಣೆ ಕೊಟ್ಟು ನಿಮ್ಮ ಮಗಳಿಗೆ ಇಲ್ಲೇ ಬಿಟ್ಟು ಹೋಗರಿ ಇಲ್ಲಾ ಅಂದರೆ ನಿಮ್ಮ ಮಗಳಿಗೆ ಕರೆದುಕೊಂಡು ಹೋಗರಿ ಅಂತಾ ಬೈದು ನನಗೆ ನಮ್ಮ ತಂದೆ ತಾಯಿಯೊಂದಿಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ, ನಂತರ ದಿನಾಂಕ 22-05-2017 ರಂದು ನಮ್ಮ ಅಣ್ಣ ಬಸವರಾಜನ ಮದುವೆ ಸಮಯದಲ್ಲಿ ನನ್ನ ಗಂಡ ಮುಂಚಿತವಾಗಿ 15 ದಿನ ನಮ್ಮ ಮನೆಗೆ ಬಂದು ನಮ್ಮ ಮನೆಯಲ್ಲೇ ಇದ್ದು, ನಮ್ಮ ತಂದೆ ತಾಯಿಗೆ ಮಾತನಾಡಿ ಕೆಲವು ದಿನ ಬಿಟ್ಟು ನನಗೆ ತನ್ನೊಂದಿಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿ ಹೋದನು, ನಂತರ ಮರಳಿ ನನಗೆ ಕರೆಯಲು ಬರಲಿಲ್ಲಾ, ನಂತರ ನಮ್ಮ ತಂದೆ ಮತ್ತು ನಮ್ಮ ಕಾಕಾ ಸಿದ್ರಾಮಪ್ಪ ತಂದೆ ಸಿದ್ದಪ್ಪ ಬಿರಾದಾರ, ಮಲ್ಲನಗೌಡ ತಂದೆ ಸಾಯಬಣ್ಣಗೌಡ ಪೊಲೀಸ ಪಾಟೀಲ, ಶಿವರಾಯಗೌಡ ತಂದೆ ಹಣಮಂತ್ರಾಯ ಸಾಹು, ಭೀಮಣ್ಣ ತಂದೆ ಗುರಪ್ಪ ರಬಗೊಂಡ ಹಿಗೆಲ್ಲರೂ ಕೂಡಿಕೋಂಡು ಹರನಾಳ ಗ್ರಾಮಕ್ಕೆ ಹೋಗಿ ನನ್ನ ಗಂಡ ಮತ್ತು ನಮ್ಮ ಅತ್ತೆ ಮಾವನಿಗೆ 1 ಲಕ್ಷ ರೂಪಾಯಿ ಕೊಡತಿವಿ, ಇನ್ನು ಮುಂದೆ ನಮ್ಮ ಮಗಳಿಗೆ ಸರಿಯಾಗಿ ನೋಡಿಕೊಳ್ಳಿ ಅಂತಾ ಹೇಳಿದಾಗ ಅವರು ಮೊದಲು 1 ಲಕ್ಷ ರೂಪಾಯಿ ಕೊಟ್ಟು ಮಾತನಾಡಿ ಸೂಳಿ ಮಕ್ಕಳ್ಯಾ ಇಲ್ಲಾ ಅಂದರ ಇಲ್ಲಿಂದ ಹೋಗರಿ ಅಂತಾ ಅಂದು ನಮಗೆ ಬೈದು ಮನೆಯಿಂದ ಹೊರಗೆ ಕಳುಹಿಸಿದರು, ನಿನ್ನೆ ದಿನಾಂಕ 28-04-2019 ರಂದು 5;00 ಪಿ.ಎಂ ಕ್ಕೆ ನಾನು ನಮ್ಮ ಅಣ್ಣ ಬಸವರಾಜ ರವರು ಕೂಡಿ ನನ್ನ ಗಂಡನ ಮನೆಗೆ ಹರನಾಳ ಗ್ರಾಮಕ್ಕೆ ಹೋಗಿದ್ದೇವು, ಮನೆಯಲ್ಲಿ ನಮ್ಮ ಅತ್ತೆ ಮತ್ತು ಮಾವನಿದ್ದು, ಅವರು ನನಗೆ ನಿನ್ನ ಗಂಡ ನಮ್ಮ ಮನೆಯಲ್ಲಿ ಇಲ್ಲಾ, ನಿನ್ನ ಗಂಡ ಇದ್ದಲ್ಲಿ ಹೋಗು ರಂಡಿ ಅಂತಾ ಅಂದು ನನಗೆ ಕೈಯಿಂದ ಹೊಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದರು, ಈ ಮೇಲ್ಕಂಡ ನನ್ನ ಗಂಡ ಮತ್ತು ಅತ್ತೆ ಶಕುಂತಲಾ ಹಾಗು ಮಾವ ಮಲ್ಲಿಕಾರ್ಜುನ ತಂದೆ ಚಂದ್ರಾಮಪ್ಪ ಇಜೇರಿ ರವರು ವರದಕ್ಷಣೆ ತರುವ ವರೆಗೆ ಮನೆಗೆ ಬರಬ್ಯಾಡ ಅಂತಾ ನನಗೆ ತಮ್ಮ ಮನೆಯಲ್ಲಿ ಕರೆದುಕೊಳ್ಳದೆ, ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ವರದಕ್ಷಣೆ ತರುವಂತೆ ಒತ್ತಾಯಿಸಿ ನನಗೆ ನಿರಂತರ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, April 29, 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 28-04-2019 ರಂದು ಕೂಡಿಗನೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ  ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೂಡಿಗನೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಕೆಎ-28 ಟಿಡಿ-0371 ಅದರ ಚೆಸ್ಸಿ ನಂ WSCM-40906082943 ಅಂತ ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು  ಜಪ್ತಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 28-04-2019 ರಂದು ಶಿವೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ  ಬಾತ್ಮಿ ಬಂದ ಮೇರೆಗೆ ಸಿಪಿಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶೀವೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಜಾನಡೀಯರ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಕೆಎ-32 ಟಿಬಿ-2896 ಅದರ ಚೆಸ್ಸಿ ನಂ IPY5050EAHA017642 ಅಂತ ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು  ಜಪ್ತಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸುಲಿಗೆ ಪ್ರಕರಣ :
ಆಳಂದ ಠಾಣೆ : ಶ್ರೀ  ಫಯಾಜ್ ತಂದೆ ಮಶಾಕ ಪಟೇಲ್ ಸಾ|| ಹಸನಾಪೂರ ತಾ|| ಜಿ|| ಕಲಬುರಗಿ ರವರು  ಕಲಬುರಗಿ ನಗರದ ಶ್ರೀ ಗಣೇಶ ಸೇಠ ರವರ ಲಾರಿ ನಂ ಕೆಎ 32 ಡಿ 1093 ನೇದ್ದರ ಮೇಲೆ ಲಾರಿ ಚಾಲಕ ಅಂತಾ ಸುಮಾರು ಒಂದು ವರ್ಷದಿಂದ ಕೆಲಸ ಮಾಡುತ್ತಾ ಬಂದಿದ್ದು ನಿನ್ನೆ ದಿನಾಂಕ 27/04/2019 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಾನು ಚಲಾಯಿಸುವ ಲಾರಿ ನಂ ಕೆಎ 32 ಡಿ 1093  ನೇದ್ದರಲ್ಲಿ ವಾಡಿ ಸಿಮೆಂಟ್ ಕಾರ್ಖಾನೆಯಿಂದ ನನ್ನ ಲಾರಿಯಲ್ಲಿ ಸಿಮೆಂಟ್ ತುಂಬಿಕೊಂಡು ವಾಡಿಯಿಂದ ಉಸ್ಮಾನಾಬಾದ ಕಡೆಗೆ ಆಳಂದ ಮಾರ್ಗವಾಗ ಹೋಗುತ್ತಿದ್ದಾಗ ತೆಲುಕುಣಿ ಚಡೌಣ ಹತ್ತಿರ ದಿನಾಂಕ 28/04/2019 ರಂದು ಅಂದಾಜು 02-00 ಎಎಮ್ ಸುಮಾರಿಗೆ ರೋಡಿನ ಮೇಲೆ ಎರಡು ಜನ ಅಪರಿಚಿತರು ಅವರ ಒಂದು ಕಪ್ಪು ಬಣ್ಣದ ನಂಬರ ಇಲ್ಲದ ಪಲ್ಸರ್ ಮೋಟಾರ ಸೈಕಲನ್ನು ನನ್ನ ಲಾರಿಗೆ ಅಡ್ಡಗಟ್ಟಿ ನಿಲ್ಲಿಸಿದರಿಂದ ನಾನು ನನ್ನ ಲಾರಿಯನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿದಾಗ ಸದರಿ ಎರಡು ಅಪರಿಚಿತ ಜನರು ಓಡಿ ನನ್ನ ಹತ್ತಿರ ಬಂದು ಕ್ಯಾಬಿನ್ ಪಕ್ಕದಲ್ಲಿ ನಿಂತು ಕಪ್ಪು ಬಿಳಿ ಮಿಶ್ರಿತ್ ಟಿ ಶರ್ಟ ಧರಿಸಿದ ವ್ಯಕ್ತಿ ನನಗೆ '' ಏ ರಾಂಡಕೇ ಕಿದರ ಜಾರೆ ನಿಚೇ ಉತರೋ ಪೈಸೇ ದೋ ಅಂದು ಬೈದು ಟೊಂಕದಲ್ಲಿದ್ದ ಬೆಲ್ಟ ತೆಗೆದು ಹೊಡೆದಿದ್ದು ಆಗ ನೀಲಿ ಗೆರೆಗಳುಳ್ಳ ಫುಲ್ ಶರ್ಟ ಧರಿಸಿದ ಇನ್ನೊಬ್ಬನು ''ತುಮಾರೆ ಪಾಸ ಜಿತನಾ ಭಿ ಹೈ ಉತನಾ ಪೈಸಾ ದೋ'' ಅಂತಾ ಒಂದು ಹರಿತವಾದ ಚಾಕುವನ್ನು ತೋರಿಸಿ ನನ್ನ ಜೇಬಿನಲ್ಲಿಟ್ಟಿದ್ದ 2800/- ರೂಪಾಯಿಗಳನ್ನು ಮತ್ತು ನನ್ನ ಕಲರ್ ಜಿರಾಕ್ಸವುಳ್ಳ ಡಿಎಲ್ ಪ್ರತಿಯನ್ನು ಜಬರದಸ್ತಿಯಿಂದ ಕಸಿದುಕೊಂಡಿರುತ್ತಾರೆ, ನಂತರ ಸದರಿ ಅಪರಿಚಿತ ವ್ಯಕ್ತಿಗಳು ಹಣ ತೆಗೆದುಕೊಂಡು ಸದರಿ ಮೋಟಾರ್ ಸೈಕಲ ಮೇಲೆ ಕುಳಿತುಕೊಂಡು ಓಡಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-27/04/2019 ರಂದು ರಾತ್ರಿ 10-45 ಗಂಟೆಯಿಂದ 11-15 ಗಂಟೆಯ ಸುಮಾರಿಗೆ  ಹಣಮಂತ ತಂದೆ ಸಿದ್ದಪ್ಪ ಇತನು ಹುಮುನಾಬಾದ ರಿಂಗ ರೋಡದಿಂದ ಆಳಂದ ಚೆಕ್ ಪೋಸ್ಟ ರೋಡಿನಲ್ಲಿ ಬರುವ ಕಸ್ತೂರಿ ದರ್ಶನಿ ಹೋಟೆಲ್ ಏದುರಿನ ರೋಡಿನಲ್ಲಿ ನಡೆದುಕೊಂಡು ರೋಡ್ ದಾಟುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕ ಹುಮನಾಬಾದ ರಿಂಗರೋಡ ಕಡೆಯಿಂದ ತನ್ನ ವಾಹನವನ್ನು ಅತೀವೇಗವಾಗಿ & ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹಣಮಂತ ಈತನಿಗೆ ಡಿಕ್ಕಿಪಡಿಸಿ ಆತನ ತಲೆಯ ಮೇಲಿಂದ ಟೈರ್ ಹಾಯಿಸಿ ವಾಹನ ಸಮೇತ ಚಾಲಕ ಓಡಿ ಹೋಗಿದ್ದು ಹಣಮಂತ ಈತನ ತಲೆಗೆ ಭಾರಿ ರಕ್ತಗಾಯವಾಗಿ ತಲೆ ಒಡೆದು ಮೆದಳು ಹೊರಗೆ ಬಂದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಮಾಲಾಶ್ರೀ ಗಂಡ ಹಣಮಂತ ಜಟ್ಟೂರ ಸಾ : ಕೂಪನೂರ ತಾ : ಚಿಂಚೋಳಿ ಹಾ:ವ: ರಾಮನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ 02 : ದಿನಾಂಕ 28.04.2019 ರಂದು ಮಧ್ಯಾಹ್ನ 4.30 ಗಂಟೆ ಸುಮಾರಿಗೆ ರಾಮ ಮಂದಿರ ದಿಂದ ಸೇಡಂ ರಿಂಗ ರೋಡನಲ್ಲಿ ಬರುವ ರೇಲ್ವೆ ಓವರ್ ಬ್ರೀಜ್ ಹತ್ತಿರದ ಕಾರ್ನರ ಹತ್ತಿರ ರೋಡ ಮೇಲೆ ವಜೀರ ಮಿಯಾ ಈತನು ತನ್ನ ಮೋಟಾರ ಸೈಕಲ ನಂ ಕೆಎ32 ಇಪಿ 0799 ನೇದ್ದರ ಮೇಲೆ ಹಿಂದುಗಡೆ ಶ್ರೀ ಮಹ್ಮದ ಜಬಿರೊದ್ದಿನ ತಂದೆ ಖಾಜಾಮಿಯಾ ಸಾಃ ದಾರಾಗಿರ ಏರಿಯಾ ತಾಃ ಬಸವಕಲ್ಯಾಣ ಜಿಃ ಬೀದರ ರವರನ್ನು ಕೂಡಿಸಿಕೊಂಡು ನಿಧಾನವಾಗಿ ಮೋಟಾರ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಜೀಪ ನಂಬರ ಕೆಎ 32 ಎಂ 8420 ನೇದ್ದರ ಚಾಲಕನು ಅತಿವೇಗದಿಂದ & ಅಲಕ್ಷತನದಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದು ವಜೀರಮಿಯಾ ಈತನ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾಧಿಗೆ ಗಾಯಗೊಳಿಸಿ ವಜೀರಮಿಯಾ ಈತನ ತಲೆಗೆ ಭಾರಿಗಾಯಗೊಳಿಸಿ ಚಾಲಕ ವಾಹನ ಸಮೇತ ಓಡಿ ಹೋಗಿದ್ದು ವಜೀರ ಮಿಯಾ & ಫಿರ್ಯಾಧಿ ಇಬ್ಬರು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ  ಆಗಿದ್ದು ವಜೀರ ಮಿಯಾ ಈತನು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿ ಆಗದೆ ದಿನಾಂಕಃ 29.04.2019 ರಂದು ಬೆಳಿಗ್ಗೆ 4.00 ಗಂಟೆಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಸವಿತಾ ಗಂಡ ಸುರೇಶ ಕಲಶೇಟ್ಟಿ ಸಾ: ರಟಕಲ್ ಹಾವ: ಲಕ್ಷ್ಮಿ ಗುಡಿ ಹತ್ತಿರ ರಾಮ ನಗರ ಕಲಬುರಗಿ ರವರು ದಿನಾಂಕ: 28/04/19 ರಂದು ಕಸಗಿಯಲ್ಲಿ ನಮ್ಮ ಸಂಬಂದಿಕರ ಮಧುವೆ ಇದ್ದ ಕಾರಣ ನಾನು ಮತ್ತು ನಮ್ಮ ತಾಯಿ ಮದುವೆಗೆ ಹೋಗುವ ಕುರಿತು ತಯರಾಗಿ ಆಳಂದ ಚೆಕ್ ಪೋಸ್ಟ್ ಹತ್ತಿರ ಹೋಗಿ ಬೆಳಿಗ್ಗೆ 09-00 ಗಂಟೆಯಿಂದ ಬೆಳಿಗ್ಗೆ 09-30 ಗಂಟೆಯವರಿಗೆ ಬಸ್ ಬರುವಿಕೆಗಾಗಿ ಕಾಯಿದು ನಂತರ 09-30 ಕ್ಕೆ ಆ ಮಾರ್ಗದ ಒಂದು ಬಸ್ ಬಂದಿದ್ದು ಅದರಲ್ಲಿ ನಾನು ಮತ್ತು ನನ್ನ ತಾಯಿ ಏರಿ ಸೀಟಿನಲ್ಲಿ ಕೂಡುವಾಗ ನನ್ನ ತಾಯಿ ಬಂಗಾರದ ಆಭರಣಗಳು ಇರುತ್ತವೆ ಇಲ್ಲಾ ಎಂದು ಚೆಕ್ಕ ಮಾಡು ಅಂತಾ ಹೇಳಿದಾಗ ನಾನು ನನ್ನ ವ್ಯಾನಿಟಿ ಬ್ಯಾಗ್ ಚೈನ್ ತೆರೆದು ನೋಡಲು ಅದರಲ್ಲಿಟ್ಟಿದ್ದ ಬಂಗಾರದ ಡಬ್ಬಿ ಮತ್ತು ಬಂಗಾರದ ಸಾಮಾನುಗಳು ಕಾಣಿಸಲಿಲ್ಲ. ದಿನಾಂಕ: 28/04/19 ರಂದು ಬೆಳಿಗ್ಗೆ 09-00 ಗಂಟೆಯಿಂದ ಬೆಳಿಗ್ಗೆ 09-30 ಗಂಟೆಯವರಿಗೆ  ಆಳಂದ ಚೆಕ್ ಪೋಸ್ಟ ಹತ್ತಿರ ಬಸ್ಸಿಗೆ ಕಾಯುತ್ತ ನಿತಿಂರುವಾಗ ಯಾರೋ ಕಳ್ಳರು ನನ್ನ ವ್ಯಾನಿಟಿ ಬ್ಯಾಗಿನಿಂದ 1) ಬಂಗಾರದ ತಾಳಿ ಸರ ಅ.ಕಿ. 35000/- ಮತ್ತು 2) ಎರಡು ಅರ್ದ ಅರ್ದ ತೊಲೆಯ ಸುತ್ತುಂಗುರಗಳು ಅ.ಕಿ. 10000/- ನೆದ್ದವು ಕಳ್ಳತನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, April 28, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 27.04.2019 ರಂದು ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಯಂಕವ್ವನ ಮಾರ್ಕೇಟನಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಯಂಕವ್ವನ ಮಾರ್ಕೇಟನಲ್ಲಿ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು  ಶಿವಶರಣಪ್ಪ ತಂದೆ ಅರ್ಜುನ ಜಮಾದಾರ ಸಾ|| ತಂಬಾಕವಾಡಿ ತಾ|| ಆಳಂದ ಹಾ|||| ಐವಾನ ಶಾಹಿ ವಸತಿ ಗೃಹ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1200 ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ಶ್ರೀಮತಿ  ನೀಲಮ್ಮಾ ರವರು ದಿನಾಂಕ 27.04.2019 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಶಿವರುದ್ರ ಹಾಗೂ ನನ್ನ ಸೊಸೆಯಾದ ಮಂಗಲಾ ಮೂರು ಜನರು ಕಲಬುರಗಿ ಸಂಗಮೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾದ ನಮ್ಮ ಸಂಬಂದಿಕರನ್ನು ಮಾತನಾಡಿಸುವ ಸಲುವಾಗಿ ನಮ್ಮೂರಿನಿಂದ ಬಸ್ಸ ಮೂಲಕ ಕಲಬುರಗಿ ಕೇಂದ್ರ ಬಸ್ಸ ನಿಲ್ದಾಣಕ್ಕೆ ಬಂದು ಇಳಿದು ಬಸ್ಸ ನಿಲ್ದಾಣದ ಸಮೀಪ ಬರುವ ಸಂಗಮೇಶ್ವರ ಆಸ್ಪತ್ರೆ ಕಡೆಗೆ ನಡೆದುಕೊಂಡು ಹೋಗುವಾಗ ಸಂಗಮೇಶ್ವರ ಆಸ್ಪತ್ರೆಯ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-39/ಕೆ-1133 ನೇದ್ದರ ಸವಾರನು ಆರ.ಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶೆಂಕ್ರೆಪ್ಪ ತಂದೆ ಶಾಮರಾವ ಬೋಳೆಗಾಂವ ಸಾ|| ಪ್ಲಾಟ್ ನಂ 104, ಲಕ್ಷ್ಮೀ ನಿಲಯ, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ  ರವರು ದಿನಾಂಕ 26-04-2019 ರಂದು ತಮ್ಮ ದೈನಂದಿನ ಕೆಲಸ ಮುಗಿಸಿಕೊಂಡು ರಾತ್ರಿ 10-00 ಪಿಎಮ್ ಕ್ಕೆ ನನ್ನ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170  ನೆದ್ದು ನಮ್ಮ ಮನೆಯ ಕಂಪೌಂಡ ಒಳಗಡೆ ಲಾಕ್ ಮಾಡಿ ನಿಲ್ಲಿಸಿ, ಬೇಸಿಗೆ ಇದ್ದ ಕಾರಣ ಮನೆ ಛತ್ತಿನ ಮೇಲೆ ನಾನು ಮತ್ತು ನನ್ನ ಹೆಂಡತಿ ಮಲಗಿಕೊಂಡಿದ್ದು ಇರುತ್ತದೆ. ದಿನಾಂಕ 27-04-2019 ರಂದು 03-15 ಎ.ಎಮ್ ಸುಮಾರಿಗೆ ನಮ್ಮ ಮನೆಯ ಸುತ್ತ ಮುತ್ತ ಯಾರೋ ಚೀರಾಡುವುದು ಮತ್ತು ಕಳ್ಳರು ಬಂದಿದ್ದಾರೆಂದು ಗದ್ದಲ ಶಬ್ದ ಕೇಳಿ ನಾನು ಕೆಳಗೆ ಬಂದು ನೋಡಲು ನಮ್ಮ ಕಂಪೌಂಡದಲ್ಲಿದ್ದ ನನ್ನ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170     ನೆದ್ದು ಕಾಣಿಸಲಿಲ್ಲ ಯಾರೋ ಕಳ್ಳರು ಕಳ್ಳರನ ಮಾಡಿಕೊಂಡು ಹೋಗಿದ್ದು ಗೊತ್ತಾಯಿತು. ಮನೆಯ ಹೊರಗಡೆ ಬಂದು ವಿಚಾರ ಮಾಡಲು ನಮ್ಮ ಮನೆಯ ಹತ್ತಿರ ಇದ್ದ ಆನಂದ ಜೊಶಿ ಹಾಗೂ ನಮ್ಮ ಮನೆಯಲ್ಲಿ ಕಿರಾಯಿ ಇರುವ ಸುಧಾಕರ ಹಾಗೂ ರಾಘವೇಂದ್ರ ರವರ ಮನೆಗಳು ಕಳ್ಳತನವಾಗಿದ್ದು ಗೊತ್ತಾಯಿತು. ನನ್ನ ಕಳ್ಳತನವಾದ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170  ನೆದ್ದರ, ಅ.ಕಿ. 30,000/- ರೂ. ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ರಾಘವೇಂದ್ರ ತಂದೆ ಮಲ್ಲಿನಾಥ ಜಮಾದಾರ  ಸಾ|| ಪ್ಲಾಟ್ ನಂ 100, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ  ರವರು ದಿನಾಂಕ 25-04-2019 ರಂದು ನಾನು ನನ್ನ ಕಾರ್ಯಾಲಯದ ಕೆಲಸದ ನಿಮಿತ್ಯ ಬೆಂಗಳೂರಿಗೆ ಹೋಗುವ ಸಲುವಾಗಿ ತಯ್ಯಾರಾಗಿದ್ದು, ಮನೆಯಲ್ಲಿ ಹೆಣ್ಣು ಮಕ್ಕಳು ಆಗುವ ಕಾರಣ ನನ್ನ ಹೆಂಡತಿ ಹಾಗೂ ತಾಯಿಯವರು ಕೂಡಿ ಬೀಗರ ಮನೆಯಲ್ಲಿ ಬಿಟ್ಟು ನಾನು ಬೆಂಗಳೂರಿಗೆ 08-00 ಪಿಎಮ್ ಕ್ಕೆ ಹೋಗಿದ್ದು  ದಿನಾಂಕ 27-04-2019 ರಂದು ಬೆಳಿಗ್ಗೆ 09-00 ಗಂಟೆಗೆ ಬೆಂಗಳೂರಿನಿಂದ ಕಲಬುರಗಿಗೆ ಬಂದು ಮನೆಗೆ ಹೋಗಿ ನೋಡಲು ನಮ್ಮ ಮನೆಯ ಮುಖ್ಯ ದ್ವಾರಕ್ಕೆ ಹಾಕಿದ ಬಾಗಿಲ ಕೊಂಡಿ ಮುರಿದು ಬಿದ್ದುದ್ದು ನೋಡಿ ಗಾಬರಿಯಾಗಿ ಬಾಜು ಮನೆಯವರಾದ ವಿಜಯಕುಮಾರ ಪಾಟೀಲ ರವರಿಗೆ ಕರೆದುಕೊಂಡು ಮನೆಯ ಒಳಗೆ ಹೊಗಿ ನೋಡಲು ನಮ್ಮ ಬೆಡ್ ರೂಮಿನಲ್ಲಿದ್ದ ಟ್ರಜರಿ ಬಾಗಿ ಮುರಿದು ಒಳಗಡೆಯಿದ್ದ ಲಾಕರ್ ಮುರಿದು ಎಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದು  ಟ್ರಜರಿಯಲ್ಲಿಟ್ಟ   ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಆಭರಣಗಳು ನಗದು ಹಣ ಹೀಗೆ ಒಟ್ಟು 1,13,000/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ ಸುಧಾಕರ ತಂದೆ ನಾಗೇಂದ್ರಪ್ಪ ಹಾಗರಗಿ ಸಾ|| ಪ್ಲಾಟ್ ನಂ 104, ಲಕ್ಷ್ಮೀ ನಿಲಯ, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ ರವರು  ದಿನಾಂಕ 26-04-2019 ರಂದು ನಮ್ಮ ಅಣ್ಣ ಮಲ್ಲಿಕಾರ್ಜುನ ಇವರ ಮನೆಯಲ್ಲಿ ಜವಳ ಕಾರ್ಯಕ್ರಮ ಇದ್ದ ಕಾರಣ ನಾನು ಮತ್ತು ನನ್ನ ಹೆಂಡತಿ ಕೂಡಿ ಬೆಳಿಗ್ಗೆ ನಮ್ಮ ಅಣ್ಣನ ಮನೆಗೆ ದತ್ತನಗರಕ್ಕೆ ಹೋಗಿದ್ದು ಇರುತ್ತದೆ. ರಾತ್ರಿ ಅಲ್ಲಿಯೇ ಉಳಿದಿರುತ್ತೇವೆ. ದಿನಾಂಕ 27-4-2019 ರಂದು 04-00 ಎ.ಎಮ್ ಕ್ಕೆ ನಮ್ಮ ಮನೆಯ ಮಾಲಿಕರಾದ ಶೆಂಕ್ರೆಪ್ಪ ತಂದೆ ಶಾಮರಾವ ಬೋಳೆಗಾಂವ ರವರು ಫೋನ್ ಮಾಡಿ ನಿಮ್ಮ ಮನೆಯ ಕೀಲಿ ಮುರಿದು ಯಾರೋ ಮನೆ ಕಳ್ಳತನ ಮಾಡಿದಂತೆ ಕಂಡು ಬರುತ್ತಿದೆ ಬೇಗ ಬನ್ನಿರಿ ಅಂತಾ ತಿಳಿಸಿದ ಮರೆಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ನಮ್ಮಣ್ಣ ಮಲ್ಲಿಕಾರ್ಜುನ ಕೂಡಿ ಬಂದು ವಿಚಾರಿಸಲು ನಮ್ಮ ಮನೆ ಮಾಲಿಕರು ತಿಳಿಸಿದ್ದೇನೆಂದರೆ, ದಿನಾಂಕ 26-04-2019 ರಂದು ರಾತ್ರಿ 10-00 ಗಂಟೆಯವರೆಗೂ ನಾವು ಎಚ್ಚರ ಇದ್ದು, ನಿಮ್ಮ ಮನೆ ಕೀಲಿ ಹಾಕಿದ್ದು ಇರುತ್ತದೆ. ದಿನಾಂಕ 27-04-2019 ರಂದು 03-15 ಎ.ಎಮ್ ಸುಮಾರಿಗೆ ನಮ್ಮ ಮನೆಯ ಸುತ್ತ ಮುತ್ತ ಯಾರೋ ಚೀರಾಡುವುದು ಮತ್ತು ಕಳ್ಳರು ಬಂದಿದ್ದಾರೆಂದು ಗದ್ದಲ ಶಬ್ದ ಕೇಳಿ ನಾನು ಕೆಳಗೆ ಬಂದು ನೋಡಲು ನಮ್ಮ ಕಂಪೌಂಡದಲ್ಲಿದ್ದ ನನ್ನ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ಕಳ್ಳತನವಾಗಿದ್ದು ಮತ್ತೆ ನಿಮ್ಮ ಮನೆಕಡೆ ನೋಡಲು ನಿಮ್ಮ ಮನೆಯ ಕೀಲಿ ಮುರಿದಿದ್ದು ಕಂಡು ಬಂದಿತು ಅಂತಾ ತಿಳಿಸಿದ್ದು ಇರುತ್ತದೆ. ನಾವು ಎಲ್ಲರೂ ಕೂಡಿ ಮನೆಯ ಒಳಗಡೆ ಹೋಗಿ ನೋಡಲು ನಮ್ಮ ಅಡುಗೆ ಮನೆಯಲ್ಲಿಟ್ಟ ಟ್ರಜರಿ ಲಾಕ್ ಮುರಿದು, ಅದರಲ್ಲಿಟ್ಟ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 1,71,000/- ಕಿಮ್ಮತ್ತಿನವುಗಳನ್ನು              ದಿನಾಂಕ 26-04-2019 ರಂದು ರಾತ್ರಿ  10-00 ಪಿ.ಎಮ್ ದಿಂದ ದಿನಾಂಕ 27-04-2019 ರಂದು 03-15 ಎ.ಎಮ್ ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಟ್ರಜರಿ ಲಾಕರ್ ಒಡೆದು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮೌನೇಶ ತಂದೆ ಶಿವಣ್ಣ ವಿಶ್ವಕರ್ಮ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ ರವರು  ದಿನಾಂಕ:26/04/2019 ರಂದು  ಕೋಕಿಲಾ ಪರಮೇಶ್ವರಿ ಗುಡಿಯ ಹತ್ತಿರ ನಿಂತಿದ್ದಾಗ ನಮ್ಮ ಓಣಿಯಲ್ಲಿಯ ರಾಘು & ವಿಶಾಲ ಇವರುಗಳು ಐವೇಟರ್‌ ಎಕ್ಟೀವಾ ಮೇಲೆ ಬಂದವರೆ ಅವರಲ್ಲಿ ರಾಘು ಇತನು ನನ್ನ ಹತ್ತಿರ ಬಂದು ಮಗನೆ ನನಗೆ ಗುರಾಯಿಸಿ ನೋಡುವದು ಉಗಳುವುದು ಮಾಡುತ್ತಿಯಾ ಅಂದವನೆ ತನ್ನ ಕೈಯಲ್ಲಿದ್ದ ರಾಡಿನಿಂದ ಹೊಡೆಯಲು ಬಂದಾಗ ತಲೆ ಹೊರಳಿಸಿದ್ದು ಆಗ ನನ್ನ ತಲೆಯ ಹಿಂಬದಿಗೆ ರಾಡಿನ ಏಟು ಬಿದ್ದು ಒಳಪೆಟ್ಟಾಯಿತು. ನನ್ನ ಹಿಡಿದುಕೊಂಡು ರಾಘು ಇತನು ಗಾಡಿಯ ಮೇಲೆ ಒತ್ತಾಯ ಮಾಡಿ ಕೂಡಿಸಿ ತಾನು ನನಗೆ ಹಿಡಿದುಕೊಂಡು ನನ್ನ ಹಿಂದೆ ಕುಳಿತನು ವಿಶಾಲನು ಗಾಡಿ ನಡೆಸುತ್ತಾ ಸುಲ್ತಾನಪುರ ರಸ್ತೆಯ ಇಟ್ಟಂಗಿ ಭಟ್ಟಿಯ ಹತ್ತಿರ ನನ್ನನ್ನು ಇಳಿಸಿ ರಾಘು ಇತನು ರಾಡಿನಿಂದ ನನ್ನ ಬೆನ್ನ ಮೇಲೆ ಮೈ ಕೈಗೆ ಹೊಡೆಯ ಹತ್ತಿದ್ದು ನನಗೆ ಸುಮ್ಮನೆ ಯಾಕೆ  ಹೊಡೆಯುತ್ತಿರಿ ಬಿಡು ಅಂದರೆ ಇಲ್ಲಾ ನಿನ್ನ ಸೊಕ್ಕು ಬಹಳ ಇದೆ ನಮ್ಮ ತಂಟೆಗೆ ಬರದಂತೆ ಬುದ್ದಿ ಕಲಿಸುತ್ತೇವೆ ಅಂತಾ ಬೈಯುತ್ತಾ ರಾಡನಿಂದ ಮತ್ತೆ ಮತ್ತೆ ಹೊಡೆದನು. ವಿಶಾಲ ಇತನು ಮೈ ಕೈಗೆ ಗುದ್ದಿದನು ನಾನು ಚಿರಾಡುತ್ತಿರುವದನ್ನು ಕೇಳಿ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುವವರು ಬಂದರು ಆಗ ಇವರಿಬ್ಬರೂ ನನಗೆ ಹೊಡೆಯುವದನ್ನು ಬಿಟ್ಟು ಗಾಡಿಯ ಮೇಲೆ ಹೋದರು. ಹೋಗುವಾಗ ಈ ಸಲ ಉಳಿದಿದಿ ಇನ್ನೊಮ್ಮೆ ನಮಗೆ ನೋಡಿದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಬೈಯುತ್ತಿದ್ದರು. ನಂತರ ನಮ್ಮ ಅಣ್ಣ ದೇವರಾಜನಿಗೆ ಪೋನ ಮಾಡಿದಾಗ ನಮ್ಮ ಅಣ್ಣ ಬಂದು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.