Police Bhavan Kalaburagi

Police Bhavan Kalaburagi

Saturday, December 15, 2018

BIDAR DISTRICT DAILY CRIME UPDATE 15-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-12-2018

PÀªÀÄ®£ÀUÀgÀ ¥ÉưøÀ oÁuÉ C¥ÀgÁzsÀ ¸ÀA. 150/2018, PÀ®A. 279, 338, 304(J) L¦¹ :-
ದಿನಾಂಕ 13-12-2018 ರಂದು ಫಿರ್ಯಾದಿ ಶ್ರೀರಂಗ ತಂದೆ ಮಾರುತಿ ಪರಿಹಾರ ಸಾ: ಕೊಟಗ್ಯಾಳ ರವರು ತಮ್ಮೂರಿಗೆ ತನ್ನ ಮೊಟಾರ ಸೈಕಲ್ ಮೇಲೆ  ಹೊಗುತ್ತಿರುವಾಗ ಹಿಂದಿನಿಂದ ರಾಂಪೂರ ಕಡೆಯಿಂದ ಒಂದು ಬಿಳಿ ಬಣ್ಣದ ಆಟೋ ಜನರಿಗೆ ಕೂಡಿಸಿಕೊಂಡು ಅತೀವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಫಿರ್ಯಾದಿಗೆ ಸೈಡ ಹೊಡೆದು ಮುಂದೆ ಹೊದಾಗ ಮುಂದೆ ಕುಡ ಹನುಮಾನ ಮಂದಿರದ ಹತ್ತಿರ ರೋಡಿಗೆ ಎದುರಿನಿಂದ ಒಂದು ಟೆಂಪೊ ಕೂಡಾ ಅತೀವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿ ಓಡಿಸಿಕೊಂಡು ಬಂದು ಸದರಿ ಆಟೋ ಹಾಗು ಎದುರಿನಿಂದ ಬಂದ ಟೆಂಪೊ ಎರಡು ಮುಖಾಮುಖಿ ಡಿಕ್ಕಿ ಮಾಡಿಕೊಂಡು ಒಂದಕ್ಕೊಂದು ತೋರಚಿಕೊಂಡಿದ್ದು ಇರುತ್ತದೆ, ಫಿರ್ಯಾದಿಯು ಹಿಂದಿನಿಂದ ಹೋಗಿ ನೋಡಲು ಸದರಿ ಆಟೋ ನಂ. ಎಮ್.ಹೆಚ್-26/ಕೆ-2976 ಹಾಗು ಟೆಂಪೊ ನಂ. ಎಮ್.ಹೆಚ್-26/ಬಿ-3507 ಇರುತ್ತವೆ, ಆಟೋದಲ್ಲಿದ್ದ ಒಬ್ಬ ವ್ಯಕ್ತಿಗೆ ಭಾರಿ ಗಾಯಗಳಾಗಿದ್ದು ಅವನಿಗೆ ನೋಡಲು ಅವನು ತಮ್ಮೂರಿನ ಮಾರುತಿ ತಂದೆ ರಘುನಾಥ ದಾಮುವಾಲೆ ವಯ: 30 ವರ್ಷ, ಜಾತಿ: ಎಸ್ಸಿ ಚಾಂಬಾರ ರವರು ಇದ್ದು ಅವರಿಗೆ ಬಲಭುಜಕ್ಕೆ ಭಾರಿ ರಕ್ತಗಾಯ, ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯ, ಬಲಗಾಲ ಪಾದದ ಮೇಲೆ ಭಾರಿ ರಕ್ತಗಾಯ, ಎರಡು ಕುಂಡೆತಿಕಗಳಿಗೆ ಭಾರಿ ರಕ್ತಗಾಯವಾಗಿದ್ದು ಅವರಿಗೆ 108 ನಲ್ಲಿ ಚಿಕಿತ್ಸೆ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ, ನಂತರ ಸದರಿ ಆಟೋ ಚಾಲಕನ ಹೆಸರು ನರಸಿಂಗ ತಂದೆ ವಿಜಯಕುಮಾರ ಕಾಂಬಳೆ ಸಾ: ರಂಡ್ಯಾಳ, ಟೆಂಪೊ ಚಾಲಕನ ಹೆಸರು ಬಾಲಾಜಿ ತಂದೆ ಶಿವರಾಜ ಪವಾರ ಸಾ: ದೇವಣಿ ಅಂತಾ ಗೊತ್ತಾಗಿದ್ದು ಇರುತ್ತದೆ, ನಂತರ ಗಾಯಗೊಂಡ ಮಾರುತಿ ತಂದೆ ರಘುನಾಥ ದಾಮುವಾಲೆ ಇತನು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 310/2018, ಕಲಂ. 436 ಐಪಿಸಿ :-
ಫಿರ್ಯಾದಿ ರಾಮರತನ ತಂದೆ ವಿಠಲರಾವ ಗಣೂರೆ ಸಾ: ಕಲವಾಡಿ ರವರು ಬೂಲೇಟ ಮೋಟಾರ ಸೈಕಲ ನಂ. ಕೆಎ-39/ಆರ್-6161 ನೆದ್ದು ಖರಿದಿ ಮಾಡಿದ್ದು, ದಿನಾಂಕ 13-12-2018 ರಂದು ಮನೆಯಲ್ಲಿ ಫಿರ್ಯಾದಿಯ ತಮ್ಮ ಅಂಕುಶ ರವರ ಮದುವೆ ಕಾರ್ಯಕ್ರಮ ಇರುವದರಿಂದ ಮದುವೆ ಕಾರ್ಯಕ್ರಮ ಮುಗಿದ ನಂತರ ರಾತ್ರಿ ಎಲ್ಲರು ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 14-12-2018 ರಂದು ಮುಂಜಾನೆ ನಸುಕಿನ ಜಾವ 4 ಗಂಟೆಗೆ ಸುಮಾರಿಗೆ ಎಚ್ಚರಾಗಿ ಎದ್ದು ನೊಡಲು ಮೋಟಾರ ಸೈಕಲಿಗೆ ಬೆಂಕಿ ಹತ್ತಿದನ್ನು ನೊಡಿ ಅಲ್ಲೆ ಮಲಗಿಕೊಂಡಿದ್ದ ಸಂಬಂಧಿಕರಾದ ದಯಾನಂದ ತಂದೆ ಹಣಮಂತರಾವ ಪಾಟೀಲ, ಹಾಗೂ ಆಳು ಮನುಷ್ಯ ಚಂದ್ರಕಾಂತ ತಂದೆ ಬಾಲಾಜಿರಾವ ರವರಿಗೆ ಎಬ್ಬಿಸಿ ಮೋಟಾರ ಸೈಕಲಿಗೆ ಹತ್ತಿದ ಬೆಂಕಿಯನ್ನು ಆರಿಸಿದ್ದು ಇರುತ್ತದೆ, ಯಾರೋ ಅಪರಿಚೀತರು ದುರುದ್ವೇಶದಿಂದ ಮನೆಗೆ ಅಳವಡಿಸಿದ ಸಿಸಿ ಕ್ಯಾಮೇರಾದ ವೈರ ಕಡಿದು ಮನೆಯ ಮುಂದೆ ನಿಲ್ಲಿಸಿದ ಸದರಿ ಬೂಲೇಟ ಮೋಟಾರ ಸೈಕಲನ್ನು ಸುಟ್ಟು ಸುಮಾರು 1,75,000/- ಬೆಲೆ ಬಾಳುವುದನ್ನು ಹಾನಿ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಕ್ರಮವಾಗಿ ನಾಡ ಪಿಸ್ತೂಲ ಇಟ್ಟುಕೊಂಡವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-12-2018 ರಂದು ಆಳಂದ ಕಡೆಯಿಂದ ದುಧನಿ ಮಾರ್ಗವಾಗಿ ಒಬ್ಬ ವ್ಯೆಕ್ತಿ ಪಿಸ್ತೂಲು ಇಟ್ಟುಕೊಂಡು ಮೋಟರ ಸೈಕಲ ಮೇಲೆ ಅಫಜಲಪೂರ ಕಡೆಗೆ ಬರುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಮಂಜುನಾಥ ಹೂಗಾರ ಪಿ.ಎಸ್. ಅಫಜಲಪೂರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಫಜಲಪೂರದುಧನಿ ರಸ್ತೆಗೆ ಇರುವ ಹಳ್ಯಾಳ ಕ್ರಾಸ ನಿಂತುಕೊಂಡು ದುಧನಿ ಕಡೆಯಿಂದ ಬರುವಂತಹ ಮೋಟರ ಸೈಕಲಗಳ ಮೇಲೆ ನಿಗಾ ಇಟ್ಟು, ಮೋಟರ ಸೈಕಲಗಳನ್ನು ಚೆಕ್ ಮಾಡುತ್ತಿದ್ದೇವು, ದುಧನಿ ಕಡೆಯಿಂದ ಒಂದು ಮೋಟರ ಸೈಕಲ ಮೇಲೆ ಬರುತ್ತಿದ್ದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಮೋಟರ ಸೈಕಲನ್ನು ದುಧನಿ ಕಡೆಗೆ ತಿರುಗಿಸಿ ಮೋಟರ ಸೈಕಲನ್ನು ಅತಿವೇಗವಾಗಿ ಓಡಿಸಿಕೊಂಡು ಹೊರಟನು. ಆಗ ನಮಗೆ ಸದರಿಯವನ ಮೇಲೆ ಬಲವಾದ ಸಂಶಯ ಬಂದು ನಮ್ಮ ಇಲಾಖಾ ವಾಹನದಲ್ಲಿ ಪಂಚರೊಂದಿಗೆ ಬೆನ್ನಟ್ಟಿಕೊಂಡು ಹೋಗಿ ಮುಂದೆ ದುಧನಿ ರೋಡಿಗೆ ಇರುವ ಪ್ರಗತಿ ಡಾಬಾದ ಹತ್ತಿರ ಮೋಟರ ಸೈಕಲಕ್ಕೆ ನಮ್ಮ ಇಲಾಖಾ ವಾಹನವನ್ನು ಅಡ್ಡಲಾಗಿ ನಿಲ್ಲಿಸಿ ಸದರಿಯವನನ್ನು ಸುತ್ತುವರೆದು ಸದರಿ ವ್ಯೆಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಮಂತ ತಂದೆ ಸದಾಶಿವ ದಣ್ಣೂರೆ ಸಾ|| ನಿರಗುಡಿ ತಾ|| ಆಳಂದ ಅಂತ ತಿಳಿಸಿದನು. ನಂತರ ಸದರಿಯವನನ್ನು ಪಂಚರ ಸಮಕ್ಷಮ ಚೆಕ್ ಮಾಡಲಾಗಿ ಸದರಿಯವನ ಹತ್ತಿರ ಪ್ಯಾಂಟಿನ ಜೇಬಿನಲ್ಲಿ ಒಂದು ನಾಡ ಪಿಸ್ತೂಲು ದೊರೆಯಿತು. ಸದರಿಯವನಿಗೆ ಪಿಸ್ತೂಲ ಬಗ್ಗೆ ವಿಚಾರಿಸಲು, ಸದರಿ ಪಿಸ್ತೂಲನ್ನು ಮಾದನ ಹಿಪ್ಪರಗಾದ ಅಶೋಕ ಎಂಬುವವನ ಹತ್ತಿರ 20,000/- ರೂ ಖರಿದಿ ಮಾಡಿರುತ್ತೇನೆ. ಸದರಿ ಅಶೋಕನು ಈಗಾಗಲೆ ಮೃತಪಟ್ಟಿರುತ್ತಾನೆ. ನಾನು ಪಿಸ್ತೂಲನ್ನು ಕಡಿಮೆ ರೇಟಿಗೆ ಖರೀದಿ ಮಾಡಿ, ಹೆಚ್ಚಿನ ರೇಟಿಗೆ ಮಾರಾಟ ಮಾಡಲು ತಗೆದುಕೊಂಡಿರುತ್ತೇನೆ. ಇಂದು ಅಫಜಲಪೂರದಲ್ಲಿ ಯಾರಿಗಾದರೂ ಮಾರಾಟ ಮಾಡಬೇಕು ಎಂದು ಮೋಟರ ಸೈಕಲ ಮೇಲೆ ತಗೆದುಕೊಂಡು ಹೋಗುತ್ತಿದ್ದೇನೆ. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರನಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಮೋಟರ ಸೈಕಲ ಪರಿಶೀಲಿಸಿ ನೋಡಲಾಗಿ ಹಿರೋ ಹೆಚ್.ಎಫ್ ಡಿಲೆಕ್ಸ ಕಂಪನಿಯ ಕೆಂಪು ಬಣ್ಣದ್ದು ಇದ್ದು ನಂ ಕೆಎ-32 ಇಕೆ-6280 ಇರುತ್ತದೆ. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ||ಕಿ|| 30,000/- ರೂ ನ್ನು ಹಾಗೂ ಪಿಸ್ತೂಲು ಮಾರಾಟ ಮಾಡಲು ಬಳಸಿದ ಹಿರೋ ಹೆಚ್.ಎಫ್ ಡಿಲೆಕ್ಸ ಕಂಪನಿಯ ಕೆಂಪು ಬಣ್ಣದ್ದು ಇದ್ದು ನಂ ಕೆಎ-32 ಇಕೆ-6280 ಅಕಿ-25,000/- ರೂ ನೇದ್ದನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ: 14-12-2018 ರಂದು ಅಯ್ಯಣ ಮುತ್ಯಾನ ಜಾತ್ರೆಗೆ ಶ್ರೀ ದೇವರಾಜ ತಂದೆ ಬಸವರಾಜ ಪೂಜಾರಿ ಸಾ|| ಮದ್ದರಕಿ ತಾ|| ಶಹಾಪುರ ರವರು ನಮ್ಮ ತಮ್ಮ ಶಿವರಾಜ ಹಾಗು ನಮ್ಮೂರ ರಾಜೇಂದ್ರ ತಂದೆ ಸಿದ್ರಾಮಪ್ಪ ಬಿಳವಾರ, ಮಹೇಶ ತಂದೆ ಶರಣಯ್ಯಾ ಸ್ಥಾವರಮಠ, ರಮೇಶ ತಂದೆ ಮಲ್ಲಪ್ಪ ನೈಕೋಡಿ ಹಿಗೆಲ್ಲರೂ ಕೂಡಿ ಖಾಸಗಿ ವಾಹನದಲ್ಲಿ ಜಮಖಂಡಿಗೆ ಬಂದಿರುತ್ತೇವೆ, ನಂತರ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ನಾನು ನಮ್ಮ ತಮ್ಮ ಶಿವರಾಜ ಹಾಗೂ ನಮ್ಮೊಂದಿಗೆ ಇದ್ದ ರಾಜೇಂದ್ರ, ಮಹೇಶ, ರಮೇಶ ಎಲ್ಲರೂ ಕೂಡಿ ಜಮಖಂಡಿಯಿಂದ ನಡೆದುಕೊಂಡು ಕೊಣ್ಣೂರ ಕ್ರಾಸ ಕಡೆ ರಸ್ತೆಯ ಎಡಬದಿಯಿಂದ ಹೋಗುತ್ತಿದ್ದೆವು ನಮ್ಮ ತಮ್ಮ ಶಿವರಾಜ ಇವನು ನಮ್ಮಿಂದ ಸ್ವಲ್ಪ ಮುಂದೆ ಹೋಗುತ್ತಿದ್ದನು, ಆಗ ಎದುರುಗಡೆಯಿಂದ ಇಳಿಜಾರಿಗೆ ಮೂರು ಚಾಕಿನ ಟಂಟಂ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಚಲಾಸಿಕೊಂಡು ಬಂದು ನಮ್ಮ ತಮ್ಮ ಶಿವರಾಜನಿಗೆ ಎದುರುಗಡೆಯಿಂದ ಡಿಕ್ಕಿ ಪಡೆಸಿದಾಗ ನಮ್ಮ ತಮ್ಮನ ಎಡಗಲ್ಲಿಗೆ, ಎಡಮೆಲಕಿಗೆ ಮತ್ತು ತಲೆಗೆ ಭಾರಿ ಓಳಪೆಟ್ಟಾಗಿ ಅಲ್ಲಲ್ಲಿ ರಕ್ತ ಬಂದಿರುತ್ತದೆ, ಅದರಂತೆ ಎರಡು ಕಿವಿಗಳಿಂದ ಸಹ ರಕ್ತ ಸೋರುತ್ತಿತ್ತು, ನಂತರ ಅಪಘಾತ ಪಡಿಸಿದ ಟಂಟಂ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿಹೋಗಿರುತ್ತಾನೆ, ವಾಹನದ ನಂಬರ ನೋಡಿದ್ದು ಅದರ ನಂ ಕೆ.-32/ಡಿ-2583 ನೇದ್ದು ಇರುತ್ತದೆ. ನಂತರ ನಮ್ಮ ತಮ್ಮನಿಗೆ ಉಪಚಾರ ಕುರಿತು ನಾವು ತಂದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ಬರುವಾಗ ಯಡ್ರಾಮಿ ಕೆನಾಲ ಹತ್ತಿರ 4;00 ಪಿ.ಎಂ ಕ್ಕೆ ನಮ್ಮ ತಮ್ಮ ಮೃತ ಪಟ್ಟಿರುತ್ತಾರೆ, ನಂತರ ಅವನ ಶವವನ್ನು ಯಡ್ರಾಮಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಹಾಕಿರುತ್ತೇವೆ.  ಮೇಲ್ಕಂಡ ಟಂಟಂ ಗೂಡ್ಸ್ ವಾಹನ ಕೆ.-32/ಡಿ-2583 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನಿದಿಂದ ಚಲಾಯಿಸಿಕೊಂಡು ಬಂದು ನಮ್ಮ ತಮ್ಮ ಶಿವರಾಜನಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಓಡಿಹೋಗಿರುತ್ತಾನೆ, ಅಪಘಾತದಲ್ಲಿ ನಮ್ಮ ತಮ್ಮನಿಗೆ ಭಾರಿಗಾಯಗಳಾಗಿ ಮೃತ ಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.