Police Bhavan Kalaburagi

Police Bhavan Kalaburagi

Saturday, June 27, 2020

BIDAR DISTRICT DAILY CRIME UPDATE 27-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-06-2020

ಬೇಮಳಖೇಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 26-06-2020 ರಂದು ಫಿರ್ಯಾದಿ ಅಜಯಕುಮಾರ ತಂದೆ ವೀರಣ್ಣ ಕೊಟಿ ಸಾ: ವೆಂಕಟೇಶ್ವರ ನಗರ ಕುಕಡಪಲ್ಲಿ ಹೈದ್ರಾಬಾದ ರವರ ತಂದೆಯಾದ ವೀರಣ್ಣಾ ತಂದೆ ಗುರಪ್ಪಾ ಕೋಟಿ ವಯ: 67 ವರ್ಷ, ಜಾತಿ: ಲಿಂಗಾಯತ, ಸಾ: ಆಲಗೋಲ, ತಾ: ಜಹೀರಾಬಾದ, ಜಿಲ್ಲಾ: ಸಂಗಾರೆಡ್ಡಿ ರವರು ತಮ್ಮ ಮನೆ ದೇವರಾದ ಶ್ರೀ ಚಾಂಗಲೇರಾ ವೀರಭದ್ರೇಶ್ವರ ದೇವರ ದರ್ಶನ ಮಾಡಿಕೊಂಡು ಬರುತ್ತೆನೆ ಚಾಂಗಲೇರಾ ಗ್ರಾಮಕ್ಕೆ ಬಂದು ಅವರಿಗಿದ್ದ ಕ್ಷಯ ರೋಗ (ಟಿ.ಬಿ ಕಾಯಿಲೆ) ಹೆಚ್ಚಾಗಿ ಚಾಂಗಲೇರಾ ಶ್ರೀ ವೀರಭದ್ರೇಶ್ವರ ದೇವಾಲದ ದಾಸೋಹದ ಕಟ್ಟಡದ ಎದುರಿಗೆ ರೋಡಿನ ಪಕ್ಕದಲ್ಲಿ ನೆಲದ ಮೇಲೆ ಆಕಸ್ಮಿಕವಾಗಿ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 302 ಐಪಿಸಿ :-
ಫಿರ್ಯಾದಿ ಸುಭಾಷ ತಂದೆ ಗುಂಡೇರಾವ ಪೊಲೀಸ್ ಪಾಟೀಲ್ ಸಾ: ಮರಖಲ್ ಗ್ರಾಮ, ತಾ: & ಜಿ: ಬೀದರ ರವರ ಗ್ರಾಮದ ಲಲೀತಾಬಾಯಿ ತಂದೆ ಶಂಕರೆಪ್ಪ ಬಿರಾದಾರ ರವರಿಗೆ 32 ವರ್ಷಗಳ ಹಿಂದೆ ತೆಲಂಗಾಣಾ ರಾಜ್ಯದ ಕುಶನೂರ ಗ್ರಾಮದ ತಮ್ಮ ಸೋದರ ಮಾವನ ಜೊತೆಯಲ್ಲಿ ಮದುವೆ ಮಾಡಿಕೊಟ್ಟಿದ್ದು, ಲಲೀತಾಬಾಯಿ 2 ವರ್ಷ ಮಾತ್ರ ತನ್ನ ಗಂಡನ ಹತ್ತಿರ ಉಳಿದು, 30 ವರ್ಷಗಳ ಹಿಂದೆ ತನ್ನ ಗಂಡನಿಗೆ ಬಿಟ್ಟು ಮರಖಲ ಗ್ರಾಮಕ್ಕೆ ಬಂದು ತನ್ನ ತಂದೆ-ತಾಯಿಯ ಮನೆಯಲ್ಲಿಯೇ ವಾಸವಾಗಿದ್ದು, ಲೀತಾಬಾಯಿ ಬಿರಾದಾರ ವರ ತಂದೆ ಮೃತಪಟ್ಟ ಬಳಿಕ ಲಲೀತಾಬಾಯಿ ಬಿರಾದಾರ ಮತ್ತು ಅವರ ಅಣ್ಣ ಕುಶಾಲರಾವ ಬಿರಾದಾರ ರವರ ಮಕ್ಕಳ ಮದ್ಯ ಆಸ್ತಿ ಹಂಚಿಕೆ ಕುರಿತು ತಕರಾರು ಆಗಿದ್ದು ರವರ ಮದ್ಯ ಕಳೆದ 5-6 ವರ್ಷಗಳಿಂದ ಆಸ್ತಿ ಹಂಚಿಕೆ ಕುರಿತು 2-3 ಸಾರಿ ತಕರಾರು ಮಾಡಿಕೊಂಡಿರುತ್ತಾರೆ, ಇದರ ಬಗ್ಗೆ ಊರಿನ ಹಿರಿಯರು ಇಬ್ಬರಿಗೂ ಬುದ್ದಿ ಹೇಳಿರುತ್ತಾರೆ, ಕಳೆದ 7 ವರ್ಷಗಳ ಹಿಂದೆ ಕುಶಾಲರಾವ ಬಿರಾದಾರರವರು ಮೃತಪಟ್ಟದ್ದು, ಕಳೆದ 4 ವರ್ಷUಳಿಂದ ಜಗದೇವಿ ಬಿರಾದಾರ ರವರು ಬೀದರದಲ್ಲಿ ಬಾಡಿಗೆ ಮನೆ ಡಿಕೊಂಡು ಅಲ್ಲಿಯೇ ವಾಸವಾಗಿದ್ದು, ಆವಾಗ ಆವಾಗ ಅವರು ಮರಖಲ ಗ್ರಾಮಕ್ಕೆ ಬಂದು ಹೋಗುತ್ತಿದ್ದರು, ಲಲೀತಾಬಾಯಿ ಬಿರಾದಾರ ರವರ ಸೋದರಳಿಯ ಸಚೀನ್ ಬಿರಾದಾರ ಇತನು ಸುಮಾರು ಸಲ ಮರಖಲ ಗ್ರಾಮಕ್ಕೆ ಬಂದಾಗಲೆಲ್ಲಾ ಆಸ್ತಿ ಹಂಚಿಕೆ ಕುರಿತು ತನ್ನ ಅತ್ತೆ ಲಲೀತಾಬಾಯಿ ಇವಳೊಂದಿಗೆ ತಕರಾರು ಮಾಡುತ್ತಲೆ ಬಂದಿರುತ್ತಾನೆ, ನಂತರ ದಿನಾಂಕ 09-01-2020 ರಂದು 2200 ಗಂಟೆಯಿಂದ ದಿನಾಂಕ 10-01-2020 ರಂದು 0900 ಗಂಟೆ ಮದ್ಯಾವಧಿಯಲ್ಲಿ ಲಲೀತಾಬಾಯಿ ಬಿರಾದಾರ ರವರು ಮರಖಲ ಗ್ರಾಮದ ತಮ್ಮ ಮನೆಯಲ್ಲಿ ಸಂಶಾಸ್ಪದ ರಿತಿಯಲ್ಲಿ ಮೃತಪಟ್ಟಿರುತ್ತಾರೆ, ನಂತರ ಫಿರ್ಯಾದಿಗೆ ಗೊತ್ತಾಗಿದ್ದೇನೆಂದರೆ ಲಲೀತಾಬಾಯಿ ಬಿರಾದಾರ ರವರಿಗೆ ಕೊಲೆ ಮಾಡಿದರೆ ಪುರ್ತಿ ಆಸ್ತಿ ತನಗೆ ಸೇರುತ್ತದೆ ಅಂತಾ ಅವಳ ಸೋದರಳಿಯ ಆರೋಪಿ ಸಚೀನ ತಂದೆ ಕುಶಾಲರಾವ ಬಿರಾದಾರ ಮರಖಲ ಗ್ರಾಮ ಈತನು ತನ್ನ ಅತ್ತೆ ಲಲೀತಾಬಾಯಿ ಬಿರಾದಾರ ರವರಿಗೆ ಕತ್ತು ಹಿಸುಕಿ ಕೊಲೆ ಮಾಡಿರುತ್ತಾನೆ ಅಂತಾ ತಿಳಿದು ಬಂದಿರುತ್ತದೆ, ಲಲೀತಾಬಾಯಿ ಬಿರಾದಾರ ರವರಿಗೆ ಅವಳ ಸೋದರಳಿಯ ಸಚೀನ್ ತಂದೆ ಕುಶಾಲರಾವ ಬಿರಾದಾರ ಈತನೇ ಕೊಲೆ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 26-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 101/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 25-06-2020 ರಂದು ವೆಂಕಟರೆಡ್ಡಿ ತಂದೆ ವೀರರೆಡ್ಡಿ ಪೋಗುಲ ವಯ: 45 ವರ್ಷ, ಜಾತಿ : ರೆಡಿ, ಸಾ: ಜಾಂಪಡ, ತಾ: & ಜಿ: ಬೀದರ ರವರು ತನ್ನ ಮೋಟಾರ ಸೈಕಲ ಮೇಲೆ ತನ್ನ ಮಗಳು ರುಕ್ಮೀಣಿ ಮತ್ತು ಮಗ ಹರಿಕಾಂತ ರೆಡ್ಡಿ ಮೂವರು ಬೀದರ ಕುಂಬಾರವಾಡಾ ಹತ್ತಿರ ಇರುವ ಕರ್ನಾಟಕ ಕಾಲೇಜ ಹತ್ತಿರ ಬಂದು ರುಕ್ಮೀಣಿಗೆ ಬಿಟ್ಟು ಅವಳಿಗೆ ಕಾಲೇಜನ ಲೈಬ್ರರಿಯಲ್ಲಿ ಪುಸ್ತಕ ಬದಲಾಯಿಸಿಕೊಂಡು ನೀನು ನಿನ್ನ ಗೆಳತಿಯಾದ ಗುಮ್ಮೆ ಕಾಲೋನಿಯ ದಿವ್ಯಾ ಇವಳ ಮನೆಗೆ ಹೋಗು ನಾನು ನಿಗೆ 1330 ಗಂಟೆಯ ಸುಮಾರಿಗೆ ಕರೆಯಲು ಬರುತ್ತೆನೆ ಅಂತ ಅವಳಿಗೆ ಹೇಳಿ ಮಗನಾದ ಹರಿಕಾಂತ ಇವನ 10 ನೇ ತರಗತಿ ಪರೀಕ್ಷೆ ಇದ್ದ ಕಾರಣ ಅವನಿಗೆ ಮಾತೊಶ್ರೀ ಶಾಲೆಗೆ ಬಿಟ್ಟು ನಂತರ ಆಮೇಲೆ ಬರುತ್ತೆನೆ ಅಂತ ತಿಳಿಸಿ ಅಲ್ಲಿಂದ ಹೋಗಿ ನಂತರ ಫಿರ್ಯಾದಿಯು 1330 ಗಂಟೆಗೆ ಕಾಲೇಜ ಹತ್ತಿರ ಬಂದು ಅಲ್ಲಿಂದ ದಿವ್ಯಾ ಇವಳ ಮನೆಗೆ ಹೋಗಿ ವಿಚಾರಿಸಲು ದಿವ್ಯಾ ತಿಳಿಸಿದ್ದೆನೆಂದರೆ ರುಕ್ಮೀಣಿ ನನ್ನ ಮನೆಗೆ ಬಂದಿರುವದಿಲ್ಲಾ ಅವಳು ಬರಬೇಕಾದರೆ ಯಾವಾಗಳು ನನಗೆ ಕರೆ ಮಾಡಿ ಬರುತ್ತಿದ್ದಳು ಅಂತ ತಿಳಿಸಿರುತ್ತಾಳೆ, ನಂತರ ಫಿರ್ಯಾದಿಯು ತನ್ನ ಮಗಳು ಕಾಣೆಯಾದ ಬಗ್ಗೆ ಎಲ್ಲಾ ಕಡೆ ಸಂಬಂಧಿಕರ ಹತ್ತಿರ ಹುಡುಕಲು ಯಾವುದೆ ರೀತಿಯ ಮಾಹಿತಿ ಸಿಕ್ಕಿರುವದಿಲ್ಲ, ಮಗಳ ಚಹರೆ ಪಟ್ಟಿ ಹೆಸರು 1) ಕುಮಾರಿ ರುಕ್ಮೀಣಿ ತಂದೆ ವೆಂಕಟರೆಡ್ಡಿ ವಯ: 18 ವರ್ಷ 02 ತಿಂಗಳು, ಜಾತಿ: ರೆಡ್ಡಿ, ಸಾ: ಜಾಂಪಾಡ, ಬೀದರ, 2) ಮೈಬಣ್ಣ: ಗೋಧಿ ಮೈ ಬಣ್ಣ, ಮೈಕಟ್ಟು: ಸಾಧಾರಣ, 3) ಟಾಪ: ಕೆಂಪು&ಕರಿ ಕಲರ ಅದರಲ್ಲಿ ಬಾಲ್ಸ ಟೇಪ ಚಿತ್ರವುಳ್ಳ ಟಾಪ ಮತ್ತು ಕೆಂಪು ಕಲರ ಪ್ಯಾಂಟ ಇರುತ್ತದೆ, 4) ಭಾಷೆ: ತೆಲಗು, ಕನ್ನಡ, ಹಿಂದಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 69/2020, ಕಲಂ. 379 ಐಪಿಸಿ :-
ದಿನಾಂಕ 20-06-2020 ರಂದು 1600 ಗಂಟೆಯಿಂದ 1730 ಗಂಟೆಯ ಮದ್ಯದ ಅವಧಿಯಲ್ಲಿ  ಬೀದರ ಸರಕಾರಿ ಆಸ್ಪತ್ರೆಯ ಮುಖ್ಯ ಬಾಗಿಲಿನ ಎದುರಿಗೆ ನಿಲ್ಲಿಸಿದ ಫಿರ್ಯಾದಿ ರಾಜಶೇಖರ ತಂದೆ ಬಸಪ್ಪ ಸಾ: ಕಂಗಟಿ, ತಾ: ಬೀದರ ರವರ ಅಣ್ಣನ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ-38/ಯು-6429, ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್..ಆರ್.073.ಹೆಚ್.ಹೆಚ್.ಹೆಚ್.98219, ಇಂಜಿನ್ ನಂ. ಹೆಚ್..10..ಜಿ.ಹೆಚ್.ಹೆಚ್.ಹೆಚ್.5859, ಮಾಡಲ್ 2017, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 30,000/- ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಮಶದ ಮೇರೆಗೆ ದಿನಾಂಕ 26-06-2020 ರಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 73/2020, ಕಲಂ. 15(), 32(3) ಕೆ. ಕಾಯ್ದೆ :-
ದಿನಾಂಕ 26-06-2020 ರಂದು ತಾಜಲಾಪೂರ ಗ್ರಾಮದಲ್ಲಿ ರವಿ ಪೆಂಟರ ಇವರು ತನ್ನ ಹತ್ತಿರ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ತಮ್ಮ ಮನೆಯ ಹತ್ತಿರ ರಸ್ತೆಯ ಬದಿಯಲ್ಲಿ ಜನರಿಗೆ ಮಧ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿರುತ್ತಾರೆ ಅಂತ ಸಿದ್ದಲಿಂಗ ಪಿ.ಎಸ್.ಬೀದರ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತಾಜಲಾಪೂರ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಲಕ್ಷ್ಮೀ ಮಂದಿರ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಮಧ್ಯಪಾನ ಮಾಡುತ್ತಿರುವುದನ್ನು ನೋಡಿ ದಾಳಿ ಮಾಡುವಾಗ ಅಲ್ಲಿ ಸೇರಿದ ಜನರು ಓಡಿ ಹೋಗಿದ್ದು, ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ಆರೋಪಿ ರವಿ ತಂದೆ ಭೀಮರಾವ ಪೆಂಟರ ವಯ: 65 ವರ್ಷ, ಜಾತಿ: ಉಪ್ಪಾರ, ಸಾ: ತಾಜಲಾಪೂರ ಗ್ರಾಮ ಇತನಿಗೆ ಹಿಡಿದು ಅವನ ವಶದಲ್ಲಿದ್ದ ಪ್ಲಾಸ್ಟಿಕ ಚೀಲದಲ್ಲಿ ಏನಿದೆ? ತೆಗೆದು ತೋರಿಸಲು ಕೇಳಿದಾಗ ಅವನು ತೆಗೆದು 2 ಕೊಡ್ಯಾಸ್ ಮಧ್ಯದ ಒಡೆದ 375 ಎಂ.ಎಲ್ ದ ಪ್ಲಾಸ್ಟಿಕ ಬಾಟಲಗಳು ಇದ್ದು ಅವುಗಳಲ್ಲಿ ಅರ್ಧದಷ್ಟು ಮಧ್ಯ ಇರುತ್ತದೆ ಮತ್ತು 2 ಗಾಜಿನ ಗ್ಲಾಸಗಳು ಸರಾಯಿ ಕುಡಿಯಲು ಇಟ್ಟಿದ್ದು ಸದರಿ ಗ್ಲಾಸಗಳು ಹಾಜರು ಪಡಿಸಿರುತ್ತಾನೆ, ಸದರಿ ಸ್ವತ್ತು ಜಪ್ತಿ ಮಾಡಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 46/2020, ಕಲಂ. 279, 338 ಐಪಿಸಿ :-
ದಿನಾಂಕ 26-06-2020 ರಂದು ಫಿರ್ಯಾದಿ ಅನಿಲಸ್ವಾಮಿ ತಂದೆ ಅಶೋಕಸ್ವಾಮಿ ಮಠಪತಿ ಸಾ: ಶಿವಾಜಿ ನಗರ ಕಲಬುರಗಿ ರವರಿ ತನ್ನ ಗೆಳೆಯನಾದ ಅಜಯಕುಮಾರ ತಂದೆ ಶಶಿಕಾಂತ ಭೀಮನಳ್ಳಿ ಸಾ: ಭವಾನಿ ನಗರ ಕಲಬುರಗಿ ಇತನ ಮೋಟಾರ್ ಸೈಕಲ್ ಸಂ. ಕೆಎ-32/ಇ.ಜೆ-0689 ನೇದರ ಮೇಲೆ ಕಲಬುರಗಿಯಿಂದ ಹುಮನಾಬಾದ ಮಾರ್ಗವಾಗಿ ಬಸವಕಲ್ಯಾಣಕ್ಕೆ ಹೋಗುತ್ತಿರುವಾಗ ಅಜಯಕುಮಾರ ಇವನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ರಾಷ್ಟ್ರೀಯ ಹೆದ್ದಾರಿ-65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮೋಳಕೇರಾ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹೋಗಿ ರೋಡಿನ ಡಿವೈಡರಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಎಡಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯ, ಬಲಗಾಲ ಪಾದಕ್ಕೆ ತರಚಿದ ಗಾಯಗಳು ಆಗಿರುತ್ತವೆ, ಅಜಯಕುಮಾರ ಇವನಿಗೆ ನೋಡಲಾಗಿ ಎಡಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯ ಮತ್ತು ತಲೆಗೆ ಹಾಗೂ ಗಟಾಯಿಗೆ ರಕ್ತಗಾಯಗಳು ಆಗಿರುತ್ತವೆ, ನಂತರ ಇಬ್ಬರು ಚಿಕಿತ್ಸೆ ಕುರಿತು 108 ಆಂಬುಲೆನ್ಸದಲ್ಲಿ ಕುಳಿತುಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 43/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 26-06-2020 ರಂದು ಗೌರ-ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿಗಳನ್ನು ಬರೆದುಕೊಳ್ಳುತ್ತಿದ್ದಾನೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೌರ ಗ್ರಾಮಕ್ಕೆ ಹೋಗಿ ಗ್ರಾಮದ ಹೊರಗೆ ಮರೆಯಾಗಿ ವಿಕ್ಷಿಸಿ ನೋಡಲು ಆರೋಪಿ ಬಸವರಾಜ ತಂದೆ ವೈಜಿನಾಥ ಶೇಟ್ಟೆಪ್ಪಾ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಗೌರ ಇತನು ಗೌರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತಿರುವದನ್ನು ನೋಡಿ ದಾಳಿ ನಡೆಸಿ ಹಿಡಿದು ವಿಚಾರಿಸಲು ನಾನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಒಂದು ರೂಪಾಯಿಗೆ 90/- ರೂಪಾಯಿಗಳು ಕೊಡುವದಾಗಿ ಭರವಸೆ ನೀಡಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣಿ ಮಟ್ಕಾ ನಂಬರಿನ ಚೀಟಿ ಬರೆದುಕೊಳ್ಳುತ್ತಿರುವದಾಗಿ ತಿಳಿಸಿದ್ದು, ನಂತರ ಅದಕ್ಕೆ ಸಂಬಂಧಪಟ್ಟ ಮಟಕಾ ನಂ. ಬರೆದ 3 ಚೀಟಿಗಳು, ಸಂಗ್ರಹ ಮಾಡಿದ ಒಟ್ಟು ಹಣ 4080/- ರೂಪಾಯಿಗಳು ಹಾಗು ಒಂದು  ಬಾಲ ಪೆನ್ನ ಹಾಜರ ಪಡಿಸಿದ ಮೇರೆಗೆ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 140/2020, ಕಲಂ. 317 ಐಪಿಸಿ :-
ದಿನಾಂ20-06-2020 ರಂದು 0600 ಗಂಟೆಗೆ ಫಿರ್ಯಾದಿ ಮಹಾನಂದಾ ಗಂಡ ಅಣ್ಣಾರಾವ ದೇಶಮುಖ ಸಾ: ತೀನದುಕಾನ ಗಲ್ಲಿ ಭಾಲ್ಕಿ ರವರು ವಾಕಿಂಗ (ವಾಯು ವಿಹಾರ) ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಖಂಡ್ರೆ ಗಲ್ಲಿಯಲ್ಲಿ ಮುಕ್ತಮ್ಮ ಖಂಡ್ರೆ ರವರ ಮನೆಯ ಹತ್ತಿರ ಮಗು ಅಳುತ್ತಿರುವ ಶಬ್ದ ಕೇಳಿ ತಕ್ಷಣ ನೋಡಲಾಗಿ ಒಂದು ನವಜಾತ ಹೆಣ್ಣು ಶಿಶುವನ್ನು ಯಾರೋ ಅಪರಿಚಿತ ಮಹಿಳೆ ಅನಾಥವಾಗಿ ತೊರೆದು ಬಿಟ್ಟು ಹೋಗಿರುತ್ತಾರೆ, ಸುತ್ತಲೂ ಹುಡುಕಾಡಲು ಯಾರೂ ಇಲ್ಲದರಿಂದ ಮಗು ಅಳುತ್ತಿರುವುದರಿಂದ ಕೂಡಲೆ ಫಿರ್ಯಾದಿಯು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿ, ನಂತರ ಭಾಲ್ಕಿಯ ದತ್ತು ಕೇಂದ್ರದ ಅಧ್ಯಕ್ಷ ಶ್ರೀ ಅನೀಲ ಹಾಲಕುಡೆರವರಿಗೆ ಕರೆ ಮಾಡಿ ತಿಳಿಸಿದ್ದರಿಂದ ಅವರು ಬಂದು ಆಸ್ಪತ್ರೆಯಲ್ಲಿ ವ್ಯವಸ್ಥೆ ಇಲ್ಲದ ಕಾರಣ ಅದೆ ದಿವಸ ಕರಡ್ಯಾಳ ದತ್ತು ಕೇಂದ್ರಕ್ಕೆ ತೆಗೆದುಕೊಂಡು ಹೋಗಿರುತ್ತಾರೆ, ಸದ್ಯ: ಮಗು ಸುರಕ್ಷತವಾಗಿ ಮತ್ತು ಕ್ಷೇಮವಾಗಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.