Police Bhavan Kalaburagi

Police Bhavan Kalaburagi

Friday, January 11, 2019

BIDAR DISTRICT DAILY CRIME UPDATE 11-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-01-2019

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 02/2019, PÀ®A. 363 L¦¹ :-
ದಿನಾಂಕ 09-12-2018 ರಂದು ರಾತ್ರಿ 1200 ಗಂಟೆಯ ಸುಮಾರಿಗೆ ಫಿರ್ಯಾದಿ ರೇಖಾ ಗಂಡ ದಿಲೀಪ್ ಪಾಟೀಲ್ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಬಸವಕಲ್ಯಾಣ, ಸದ್ಯ: ಹಿರೆಮಠ ಗಲ್ಲಿ ಭಾಲ್ಕಿ ರವರ ಮಗಳು ಕು:ಮಿಂಚು ಇವಳು ಮೂತ್ರ ವಿಸರ್ಜನೆಗೆ ಅಂತ ಫಿರ್ಯಾದಿಗೆ ಎಬ್ಬಿಸಿ ಮನೆಯಿಂದ ಹೋರಗೆ ಹೋದಳು ಅರ್ಧ ಗಂಟೆಯಾದರು ಮನೆಯ ಒಳಗೆ ಬರದೆ ಇದ್ದುದ್ದರಿಂದ ಫಿರ್ಯಾದಿಯು ಮನೆಯ ಹೋರಗೆ ಬಂದು ನೋಡಲು ಮಗಳು ಇರಲಿಲ್ಲ, ನಂತರ ಫಿರ್ಯಾದಿಯು ದಿನಾಂಕ 10-12-2018 ರಂದು ಬಸವಕಲ್ಯಾಣ ನಗರದ ತ್ರಿಪುರಾಂತ ಓಣಿಯಲ್ಲಿರುವ ತನ್ನಅತ್ತೆ, ಮಾವ, ಮತ್ತು ಮೈದುನ ಇವರಿಗೆ ಕರೆ ಮಾಡಿ ಮಗಳು ಬಸವಕಲ್ಯಾಣಕ್ಕೆ ಬಂದ ಬಗ್ಗೆ ವಿಚಾರಿಸಿದಾಗ ಅವರು ಬಂದಿರುವುದಿಲ್ಲ ಅಂತ ತಿಳಿಸಿರುತ್ತಾರೆ, ಫಿರ್ಯಾದಿಯು ಬಸವಕಲ್ಯಾಣ ನಗರದಲ್ಲಿ ಮತ್ತು ಭಾಲ್ಕಿಯಲ್ಲಿ ಹುಡುಕಾಡಲು ಮಗಳು ಸಿಕ್ಕಿರುವುದಿಲ್ಲ, ಕಾರಣ ದಿನಾಂಕ 09-12-2018 ರಂದು ರಾತ್ರಿ 12:00 ಗಂಟೆಯ ಸುಮಾರಿಗೆ ಭಾಲ್ಕಿಯಲ್ಲಿರುವ ಫಿರ್ಯಾದಿಯವರ ಮನೆಗೆ ಕೃಷ್ಣಾ ತಂದೆ ಚಂದ್ರಕಾಂತ ಕಾಂಬಳೆ ಸಾ: ಬಸವಕಲ್ಯಾಣ ಇವನು ದ್ವಿಚಕ್ರ ವಾಹನದ ಮೇಲೆ ಬಂದು ಫಿರ್ಯಾದಿಯ ಮಗಳಾದ ಕು:ಮಿಂಚು ತಂದೆ ದಿಲೀಪ್ ಪಾಟೀಲ್ ವಯ: 16 ವರ್ಷ ಇವಳಿಗೆ ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 10/01/19 ರಂದು ಜೋಗುರ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ  ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೋಗುರು ಗ್ರಾಮಕ್ಕೆ ಹೋಗಿ ಬಾತ್ಮ ಸ್ತಳದ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನಲ್ಲಿ ಮಟಕಾ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರಿ ವಿಳಾಸ ವಿಚಾರಿಸಲು ಶಿವಶರಣಪ್ಪ ತಂದೆ ಕರಿವೀರಪ್ಪಾ ಮಾಲಿಪಾಟೀಲ ಸಾ; ಜೋಗುರ  ಅಂತಾ ತಿಳಿಸಿದ್ದು ಸದರಿಯವನಿಂದ ಮಟಕಾ ಜೂಜಾಕ್ಕೆ ಬಳಸಿದ ನಗದು ಹಣ 520/-ರೂ,  ಒಂದು ಬಾಲ ಪೇನ್ನ್ ಅ.ಕಿಃ 00=0, ಎರಡು ಮಟಕಾ ಚೀಟಿಗಳು ಅ.ಕಿ 00=00 ಜಪ್ತಿ ಪಡಿಸಿ ಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ  ಅತ್ತರ ಪಾಶಾ ತಂದೆ ಸೈಯ್ಯದ ಗುಲಾಮ ಹುಸೇನ್ ಸಾ|| ಕಲಬುರಗಿ ರವರದು  ಕಮಲಾಪೂರದಲ್ಲಿನ ಸರ್ವೆ ನಂ: 393, 394 ಆಗಿದ್ದು ಇದರಲ್ಲಿ ನಮ್ಮ ಮನೆಗಳಿದ್ದು ಮತ್ತು ಸದರಿ ಹೊಲಗಳು ಸುಮಾರು 50 ವರ್ಷಗಳ ಮೇಲ್ಪಟ್ಟು ಕಬ್ಜೆದಾರರಿದ್ದು ಅದರ ಪಟ್ಟೆದಾರರು ನಮ್ಮ ತಂದೆಯವರಿದ್ದು , ಅವರ ನಿಧನದ ನಂತರ ನಾವೂ 06 ಜನ ಅಣ್ಣ-ತಮ್ಮಂದಿರ ಹೆಸರಿಗೆ ಪಟ್ಟಾ ಆಗಿರುತ್ತದೆ.  ದಿನಾಂಕ: 09/01/2019 ರಂದು ಸಾಯಂಕಾಲ 06:00 ಗಂಟೆಯ ಸುಮಾರಿಗೆ ಕಮಲಾಪೂರದಲ್ಲಿ ದಿನದಂತೆ ನಮ್ಮ ಹೊಲಕ್ಕೆ ನಮ್ಮ ಕಾರ್ ನಂ: ಎಮ್ ಹೆಚ್ 02 ಎ ವಾಯ್ 6359 ಇದರಲ್ಲಿ ಹೋಗಿ ನಮ್ಮ ಹೊಲದಲ್ಲಿ ನಿಲ್ಲಿಸಿ ನಾನು ನಮ್ಮ ತಮ್ಮಂದಿರಾದ 1) ತಾಹೇರ್ ಪಾಷಾ , 2) ಅಮೀರ ಖೂಸ್ರೂ 3) ಅಮೀರ ಪಾಷಾ ಮತ್ತು ನನ್ನ ಮಗ ತಾಲಿಬ ಖತೀಬ ತಂದೆ ಅಥರಪಾಶಾ ಎಲ್ಲರೂ ಹೊಲದಲ್ಲಿ ಹೋಗಿ ಒಂದು ಬೋರ್ಡ ನೋಡುತ್ತಾ ನಿಂತಾಗ ಒಮ್ಮೇಲೆ 15 ರಿಂದ 20 ಜನರು ತಮ್ಮ ಕೈಗಳಲ್ಲಿ , ರಾಡು ತಲ್ವಾರುಗಳು & ಬಡಿಗೆಗಳನ್ನು ಹಿಡಿದುಕೊಂಡು ನಮಗೆ ಬೈಯುತ್ತಾ ಅದರಲ್ಲಿದ್ದ 1) ಮೈನೋದ್ದಿನ್ ಗೂಳಿ ಎಂಬುವವನು ರಾಡಿನಿಂದ ನಮ್ಮ ತಮ್ಮ ಅಮೀರ ಖೂಸ್ರೂನ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದನು, 2) ಸತ್ತಾರ ಇವನು ತಲ್ವಾರದಿಂದ ಅಮೀರ ಖೂಸ್ರೂ ಇವನ ಕುತ್ತಿಗೆಗೆ ಖಲ್ಲಾಸ್ ಮಾಡುವ ಉದ್ದೇಶದಿಂದ ಹೊಡೆಯುವಾಗ ತಪ್ಪಿಸಿಕೊಂಡಿರುವುದರಿಂದ ಅವನ ಬೆನ್ನಿಗೆ ತಲ್ವಾರ ಹಿಂದಿನ ಭಾಗದಿಂದ ಗಾಯಗೊಂಡಿರುತ್ತಾನೆ. 3) ಲತೀಫ್ ಎಂಬುವವನು ಅಮೀರ ಖೂಸ್ರೋಗೆ , ನನಗೆ & ತಾಹೇರ ಪಾಷಾನಿಗೆ ಕೈಯಿಂದ ಮುಷ್ಠಿ ಮಾಡಿ ಮತ್ತು ಕಾಲಿನಿಂದ ಹೊಡೆದಿರುತ್ತಾನೆ, 4) ರಶೀದ ಎಂಬುವವನು ತಾಹೇರ ಪಾಷಾನಿಗೆ ರಾಡಿನಿಂದ & ಬಡಿಗೆಯಿಂದ ಮತ್ತು 5) ಸಲೀಮ & 6) ಖಾಜಿ ಎಂಬುವ ಇವರೀಬ್ಬರೂ  ತಾಹೇರ್ ಪಾಷಾನಿಗೆ ತಲೆಗೆ, ಎದೆಗೆ, ಕಾಲಿಗೆ & ಹೊಟ್ಟೆಗೆ ಹೊಡೆದಿರುತ್ತಾರೆ. 7) ಇಬ್ರಾಹೀಮ್ 8) ಮುನ್ನಾ ಸೌದಾಗರ್ 9) ಮಸ್ತಾನ ಟೀಚರ್ 10) ಮುಕ್ರಂ ಧಾಬಾ & ಇನ್ನು 8-10 ಜನರು ಸದರಿಯವರ ಜೊತೆಗೆ ಇದ್ದು ಇವರನ್ನು ಇವತ್ತು ಖಲ್ಲಾಸ್ ಮಾಡಿರಿ ಎಂದು ಮೇಲಿನವರಿಗೆ ಚೀರುತ್ತಾ ಹೇಳಿ ಅವರು ಕೂಡ ನಾವೂ ಕೆಳಗೆ ಬಿದ್ದಾಗ ಕಾಲಿನಿಂದ ಮತ್ತು ರಾಡಿನಿಂದ ಹೊಡೆದಿರುತ್ತಾರೆ. ಮತ್ತು 11) ಖದೀರ ಚೊಂಗೆ ಇವರು , ಇವರಿಗೆ ಖಲ್ಲಾಸ್ ಮಾಡಿರಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ ಎಂದು ಚಿರಾಡುತ್ತಿದ್ದರು , ಸದರಿ ಇದರಲ್ಲಿ ನನ್ನ ತಮ್ಮ ತಾಹೇರ್ ಪಾಶಾ ಇವರ ಮೊ.ನಂ: 9739748728 & ಕಿಶೆಯಲ್ಲಿನ 50,000/- ರೂ ಜಗಳದಲ್ಲಿ ಬಿದ್ದು ಕಳೆದು ಹೋಗಿರುತ್ತವೆ, ಅಷ್ಟರಲ್ಲಿಯೆ ಕಮಲಾಪೂರ ಗ್ರಾಮದವರಾದ 1) ಈರಣ್ಣ 2) ಡಾ|| ಫಾರುಖ ಬೇಗ ಮತ್ತು ಇತರರು ಜಗಳ ಬಿಡಿಸಲು ಬಂದಾಗ ನಾನು ನನ್ನ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪೊಲೀಸ್ ಠಾಣೆಗೆ ಹೋಗುವಷ್ಟರಲ್ಲಿ ಆ ಗುಂಪಿನ 5-6 ಜನರು ನಮ್ಮ ಕಾರ್ ತಡೆದು ನನಗೆ ಕುತ್ತಿಗೆಗೆ ಹಿಡಿದು ಎಳೆದಾಡಿ  ಕಾರು ಕಸಿದುಕೊಂಡಿರುತ್ತಾರೆ.  ನಾವು ಪೊಲೀಸ್ ಠಾಣೆಗೆ ಹೋದರು ಇವರೇಲ್ಲರೂ ಠಾಣೆಯಲ್ಲಿ ಬಂದು ನಮಗೆ ಖಲ್ಲಾಸ್ ಮಾಡುತ್ತೇವೆ , ಮತ್ತು ನೀವು ಇಲ್ಲಿಂದ ಹೇಗೆ ಹೋಗುತ್ತಿರಿ ಮಕ್ಕಳೆ ಎಂದು ಹೇಳಿ ಠಾಣೆಯಲ್ಲಿ ನಮಗೆ ಬೆದರಿಕೆ ಹಾಕಿ ಮುಂದೆ ಕೇಸ್ ಮಾಡಬಾರದೆಂದು ಅಂಜಿಸಿ ಬಿಳಿ ಹಾಳೆಯ ಮೇಲೆ ಸಹಿಯನ್ನು ಒತ್ತಾಯ ಪೂರ್ವಕವಾಗಿ ಪಡೆದಿರುತ್ತಾರೆ. ಆದುದರಿಂದ ದಯಾಳುಗಳಾದ ತಾವೂ ನಮ್ಮ ಪ್ರಾಣಗಳಿಗೆ ರಕ್ಷಣೆ ನೀಡಿ ಸದರಿಯವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.