Police Bhavan Kalaburagi

Police Bhavan Kalaburagi

Thursday, June 15, 2017

BIDAR DISTRICT DAILY CRIME UPDATE 15-06-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-06-2017

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 94/2017, ಕಲಂ. 15(ಎ), 32(3) ಕೆ.ಇ ಕಾಯ್ದೆ :-
ದಿನಾಂಕ 14-06-2017 ರಂದು ಮುಸ್ತರಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತ ಮಾಹಾಂತೇಶ ಪಿ.ಎಸ್.ಐ. ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಸ್ತರಿ ಗ್ರಾಮಕ್ಕೆ ಹೋಗಿ ಮುಸ್ತರಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ತಿಪ್ಪಣ್ಣಾ ತಂದೆ ಗುಂಡಪ್ಪಾ ಹಳ್ಳಿಖೇಡೆ ವಯ: 50 ವರ್ಷ, ಜಾತಿ: ಕಬ್ಬಲಿಗೇರ, ಸಾ: ಮುಸ್ತರಿ ಇತನು ಒಂದು ಪ್ಲಾಸ್ಟಿಕ ಚೀಲದಲ್ಲಿ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿ 23 ಯು.ಎಸ್ ವಿಸ್ಕಿ 90 ಎಮ್.ಎಲ್ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಇದ್ದು ಅದರ ಅ.ಕಿ 644/- ರೂ.  ಇರುತ್ತದೆ, ಆಗ ಸದರಿ ಆರೋಪಿತನಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಬಾಟಲಗಳು ಖುಲ್ಲಾ ಮಾರಾಟ ಮಾಡಲು ಸರಕಾರದಿಂದ ಪಡೆದ ಲೈಸನ್ಸ ಇದೆಯಾ ಅಂತ ಕೇಳಿದಾಗ ಅವನು ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದನು, ಆಗ ಸದರಿ ಸರಾಯಿ ಬಾಟಲಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 107/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 02-06-2017 ರಂದು ಬೋಂಬಳಗಿ ಗ್ರಾಮದಲ್ಲಿ ಫಿರ್ಯಾದಿ ಮಲ್ಲಿಕಾರ್ಜುನ ತಂದೆ ನರಸಪ್ಪಾ ಜಟಗೋಂಡ ವಯ: 50 ವರ್ಷ, ಜಾತಿ: ಗೋಂಡಾ, ಸಾ: ಮನ್ನಾಎಖೇಳ್ಳಿ ರವರ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದ ಪ್ರಯುಕ್ತ ಫಿರ್ಯಾದಿಯು ತನ್ನ ಹೆಂಡತಿಯಾದ ಶಾಂತಾಬಾಯಿ ಇಬ್ಬರು ಕೂಡಿಕೊಂಡು ಹಿರೋ ಹೋಂಡಾ ಮೋಟರ ಸೈಕಲ್ ನಂ. ಕೆಎ-38/ಎಸ್-9021 ನೇದ್ದರ ಮೇಲೆ ನಿಡವಂಚಾ-ಮನ್ನಾಎಖೇಳ್ಳಿ ರೋಡಿನ ಮೇಲೆ ಭಾರತ ಗ್ಯಾಸ್ ಗೋದಾಮ ಎದುರುಗಡೆ ಬೋಂಬಳಗಿ ಕಡೆಯಿಂದ ಒಂದು ಕಾರ ನಂ. ಎಮ್.ಹೆಚ್-04/ಇ.ಎಕ್ಸ-7502 ನೇದ್ದರ ಚಾಲಕನಾದ ಆರೋಪಿ ಬೋಂಬಳಗಿ ಕಡೆಯಿಂದ ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಾಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟರ ಸೈಕಲಗೆ ಡಿಕ್ಕಿ ಹೋಡೆದ ಪ್ರಯುಕ್ತ ಫಿರ್ಯಾದಿಯ ಎಡಗಡೆಯ ಕಾಲಿನ ಎಲುಬು ಮುರಿದಿದ್ದು ಮತ್ತು ಬಲ ಮೋಳಕಾಲಿಗೆ ರಕ್ತ ಗಾಯವಾಗಿರುತ್ತದೆ, ಆರೋಪಿಯು ತನ್ನ ಕಾರನ್ನು ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಆಗ ಅಲಿಯೇ ಇದ್ದ ಗುರುನಾಥ ತಂದೆ ಹಣಮಂತಪ್ಪಾ ಉಪ್ಪಾರ ವಯ: 45 ವರ್ಷ, ಸಾ: ಮನ್ನಾಎಖೇಳ್ಳಿ ಮತ್ತು ದತ್ತು ತಂದೆ ಸಾಯಿಬಣ್ಣಾ ಬೋಗಿ ರೋಟ್ಟಿ ವಯ: 42 ವರ್ಷ, ಜಾತಿ: ಗೋಂಡ ಸಾ: ಮನ್ನಾಎಖೇಳ್ಳಿ ಇವರು ಚಿಕಿತ್ಸೆ ಕುರಿತು ಮನ್ನಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 64/2017, PÀ®A. ªÀÄ»¼É PÁuÉ :-
ಫಿರ್ಯಾದಿ ಸಂಜೀವಪ್ಪಾ ತಂದೆ ಶರಣಪ್ಪಾ ಗಡುಗರ ಸಾ: ಮುಡಬುಳ, ತಾ: ಶಹಾಪೂರ, ಜಿಲ್ಲಾ: ಯಾದಗೀರ ರವರ ಮಗಳಾದ ನಾಗಮ್ಮಾ ಇವಳಿಗೆ  ಸುಮಾರು 9 ವರ್ಷಗಳ ಹಿಂದೆ ಬಸವಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದ ಸುಭಾಷ ತಂದೆ ಮಾಣಿಕಪ್ಪಾ ರೆಪೂರ ರವರ ಜೋತೆ ಸಂಪ್ರಾದಾಯದ ಪ್ರಾಕಾರ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ಹಾಗೂ ನಾಗಮ್ಮಾ ಇವಳಿಗೆ 3 ಜನ ಮಕ್ಕಳಿರುತ್ತಾರೆ, ಒಂದು ಗಂಡು, 2 ಹೆಣ್ಣು ಮಕ್ಕಳಿರುತ್ತಾರೆ, ಮಗಳು ಗಂಡನ ಮನೆಯಲ್ಲಿ ಸುಖವಾಗಿ ಜೀವನ ನಡೆಸುತ್ತಿದ್ದಳು, ಅವಳ ಒಂದು ಹೆಣ್ಣು ಮಗಳಾದ ರಾಜೀಕಾ 8 ವರ್ಷ ಫಿರ್ಯಾದಿಯವರ ಮನೆಯಲ್ಲಿಯೇ ಇಟ್ಟುಕೊಂಡಿದ್ದು, ಹೀಗಿರುವಾಗ ದಿನಾಂಕ 16-05-2017 ರಂದು 2000 ಗಂಟೆಗೆ ಫಿರ್ಯಾದಿಯವರ ಅಳಿಯ ಮತ್ತು ಬೀಗ ಮಾಣಿಕಪ್ಪಾ, ಬೀಗತಿ ಶಾಂತಮ್ಮಾ ರವರೆಲ್ಲರೂ ಕೂಡಿ ಫಿರ್ಯಾದಿಯವರಿಗೆ ಕರೆ ಮಾಡಿ ತಿಳಿಸಿದೆನೆಂದರೆ ಮಗಳಾದ ನಾಗಮ್ಮಾ ಇವಳು 1900 ಗಂಟೆಗೆ ಬಹಿರದೆಸೆಗೆಂದು ಹೋದವಳು ತಿರುಗಿ ಮನೆಗೆ ಬರಲಿಲ್ಲಾ, ಹುಡುಕಾಡಿ ನೋಡಿದರು ಕಾಣಿಸಲಿಲ್ಲಾ, ಅವಳು ತವರು ಮನೆಗೆ ಹೊಗಬೇಕಾದರೆ ಮಕ್ಕಳ ಜೋತೆಯಾದರು ಹೊಗುತ್ತಾಳೆ, ಈಗ ಎರಡು ಮಕ್ಕಳಿಗೆ ಮನೆಯಲ್ಲಿಯೇ ಬಿಟ್ಟು ಹೊಗಿರುತ್ತಾಳೆ, ತವರು ಮನೆಗೆ ಹೊಗಿದರು ಹೊಗಿರಬಹುದೆಂದು ತಿಳಿದು ನಿಮಗೆ ಕರೆ ಮಾಡಿ ತಿಳಿಸಿದ್ದೆವೆದು ತಿಳಿಸಿದರು, ಸದರಿ ವಿಷಯ ಕೆಳುತ್ತಲೆ ಫಿರ್ಯಾದಿಯು ಗಾಬರಿಗಂಡು ಫಿರ್ಯಾದಿಯವರು ತನ್ನ ಕುಟುಂಬದವರೊಂದಿಗೆ ಕೂಡಿ ಒಂದು ಖಾಸಗಿ ವಾಹಾನ ಮಾಡಿಕೊಂಡು ಅದೇ ದಿವಸ ದಾಸರವಾಡಿ ಗ್ರಾಮಕ್ಕೆ ಬಂದು ಅಳಿಯ, ಬೀಗ, ಬೀಗತಿ ಮತ್ತು ಕೇಲವು ಗ್ರಾಮದ ಇತರರಿಗೆ ವಿಚಾರಣೆ ಮಾಡಲಾಗಿ ಅಳಿಯಂದಿರೂ ಕರೆ ಮೇಲೆ ತಿಳಿಸಿದಷ್ಟೆ ಎಲ್ಲರೂ ಫಿರ್ಯಾದಿಗೆ ತಿಳಿಸಿರುತ್ತಾರೆ, ಅವಾಗ ಫಿರ್ಯಾದಿಯವರು ತಮ್ಮ ಕುಟುಂಬದವರೊಂದಿಗೆ ಕೂಡಿ ಅಳಿಯ, ಬೀಗತಿ, ಬೀಗರಿಗೆ ಸಮಾಧಾನ ಹೇಳಿ ಎಲ್ಲರೂ ಕೂಡಿ ಒಟ್ಟಿನಲ್ಲಿ ಮೊದಲು ಮಗಳಿಗೆ ಹುಡುಕೊಣಾ ನಡೆಯಿರಿ ಒಂದು ವೇಳೆ ಮನೆಯಲ್ಲಿನ ಸಣ್ಣ ಪುಟ್ಟ ಮಾತುಗಳಿಗೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಮಗಳು ತವರು ಮನೆಗೆ ಬಂದರು ಬರಬಹುದು, ಅದು ನಾಳೆ ಗೊತ್ತಾಗುತ್ತದೆ ಇಲ್ಲಾ ಅಂದರೆ ಕೇಲವು ದಿವಸ ಸಂಬಂಧಿಕರ ಮನೆಗೆಗಳಿಗೆ ಮುದ್ದಾಂ ಆಗಿ ಭೇಟ್ಟಿಕೊಟ್ಟು ಹುಡುಕೊಣಾ ಅಂತ ಹೇಳಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.