Police Bhavan Kalaburagi

Police Bhavan Kalaburagi

Tuesday, November 5, 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಖಾಸಿಂಬಿ .ಪಿ.ಸಿ 1197 ಯಡ್ರಾಮಿ ಪೊಲೀಸ ಠಾಣೆ ರವರು ದಿನಾಂಕ 04-11-2019 ರಂದು ಸ್ಥಳಿಯ ಯಡ್ರಾಮಿ ಪಟ್ಟಣದಲ್ಲಿ ಸಂತೆ ಇದ್ದ ಪ್ರಯುಕ್ತ ನನಗೆ ಮತ್ತು ನಮ್ಮ ಠಾಣೆಯ ವಿಶ್ವರಾದ್ಯ ಪಿಸಿ 1261, ಅಣ್ಣಪ್ಪ ಪಿಸಿ 124 ರವರಿಗೆ ಬಜಾರ ಪೆಟ್ರೋಲಿಂಗ ಕರ್ತವ್ಯಕ್ಕೆ ನೇಮಿಸಿದ್ದು ಇರುತ್ತದೆ, ಅದರಂತೆ ನಾವು ಮೂರು ಜನರು ಬಜಾರ ಪೆಟ್ರೋಲಿಂಗ ಕರ್ತವ್ಯಕ್ಕೆ ಹೋಗಿರುತ್ತೇವೆ, ನಂತರ 1;00 ಪಿ.ಎಂ ಸುಮಾರಿಗೆ ನಾವು ಸಿಂಡಿಕೇಟ ಬ್ಯಾಂಕ ಹತ್ತಿರ ಇದ್ದಾಗ ಯಡ್ರಾಮಿ ಪಟ್ಟಣದ ನಿಂಗಮ್ಮ ಗಂಡ ಗುರುಲಿಂಗಪ್ಪ ಮಾಲಿಪಾಟೀಲ ಎಂಬುವರು ತಮ್ಮ ಸೇಬು ಹಣ್ಣಿನ ತಳ್ಳುವ ಬಂಡಿಯನ್ನು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಅಡಚಣೆಯಾಗುವಂತೆ ರಸ್ತೆಯ ಮೇಲೆ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದರಿಂದ ರಸ್ತೆ ಜಾಮ ಆಗಿತ್ತು, ಆಗ ನಾವುಗಳು ಅವರ ಹತ್ತಿರ ಹೋಗಿ ನಿಮ್ಮಿಂದ ಸಾರ್ಜವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೇ, ನೀವು ನಿಮ್ಮ ಬಂಡಿಯನ್ನು ರಸ್ತೆಬಿಟ್ಟು ಬೇರೆ ಕಡೆ ನಿಲ್ಲಿಸಿ ವ್ಯಾಪಾರ ಮಾಡಿಕೊಳ್ಳಿ ಅಂತಾ ಹೇಳಿದಾಗ, ನಿಂಗಮ್ಮ ಇವರು ನಮಗೆ ಏರು ಧ್ವನಿಯಲ್ಲಿ, ನಾನು ಇಲ್ಲಿಂದ ನನ್ನ ಬಂಡಿ ತೆಗೆಯುವುದಿಲ್ಲಾ, ಬೇಕಾದರೆ ನೀವೇ ನನ್ನ ಬಂಡಿಯನ್ನು ತೆಗೆದುಕೊಂಡು ಹೋಗರಿ, ನಾನು ಮುಂದೆ ನಿಮಗ ನೋಡಿಕೊಳ್ಳುತ್ತೇನೆ ಅಂತಾ ಅಂದಳು, ಆಗ ನಾನು ಸರಿಯಾಗಿ ಮಾತನಾಡು, ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿಬೇಡ ನಿನ್ನಿಂದ ಸಾರ್ವಜನಿಕರಿಗೆ ಮತ್ತು ತಿರುಗಾಡುವ ವಾಹನಗಳಿಗೆ ತುಂಬಾ ತೊಂದರೆ ಆಗುತ್ತಿದೇ ಅಂತಾ ಹೇಳಿ ನಾನು ಬಂಡಿಯನ್ನು ತೆಗೆಯಲು ಹೋದಾಗ ನಿಂಗಮ್ಮ ಇವಳು ನನ್ನ ಕೈಹಿಡಿದು ತಡೆದು ನಿಲ್ಲಿಸಿ ಒಮ್ಮೇಲೆ ನೂಕಿಕೊಟ್ಟು, ಏ ರಂಡಿ ನೀ ಯಾರೇ ನನ್ನ ಬಂಡಿ ಹಿಡಿಲಾಕ ಅಂತಾ ಅಂದು ನನಗೆ ಅವಾಚ್ಯವಾಗಿ ನಿಂದಿಸುತ್ತಾ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ನನ್ನ ಸಂಗಡ ಇದ್ದ ನಮ್ಮ ಸಿಬ್ಬಂದಿಯವರಿಗೆ ನಿಂಗಮ್ಮ ಇವಳು ನನ್ನ ಗಂಡ ತಹಸೀಲ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆ, ಅವರನ್ನು ಹೇಳಿ ನಿಮ್ಮ ಮೇಲೆ ಕೇಸು ಮಾಡಿಸುತ್ತೇನೆ, ನಿವೂ ಪೊಲೀಸನವರ ವಿಷಯ ನನಗೆ ಚನ್ನಾಗಿ ಗೊತ್ತು ಅಂತಾ ಅವರಿಗು ಸಹ ಏರು ಧ್ವನಿಯಲ್ಲಿ ಮಾತನಾಡಿದಳು, ಆಗ ಅಲ್ಲೆ ಇನ್ನು ಕೆಲವು ವ್ಯಾಪರಸ್ತರಾದ 1] ಅಬ್ದುಲಸಾಬ ತಂದೆ ಅಮೀರಸಾಬ ಸೌದಾಗರ ಸಾ|| ಇಜೇರಿ, 2] ಇಮಾಮಬಿ ಗಂಡ ಇಸ್ಮಾಯಿಲ್ ಗಣಿಯಾರ ಸಾ|| ಯಡ್ರಾಮಿ, 3] ರಜಾಕ ತಂದೆ ದಾವಲಸಾಬ ಸಾ|| ಸಿಂದಗಿ, 4] ಈರಣ್ಣ ತಂದೆ ಮಹಾದೇವ ಗಜಕೋಶ ಸಾ|| ಇಜೇರಿ ಹಾಗು ಇತರರು ಕೂಡಿ ಬಿಡಿಸಿಕೊಂಡು ನಿಂಗಮ್ಮಳಿಗೆ ತಿಳವಳಿಕೆ ಹೇಳಿರುತ್ತಾರೆ, ಸದರಿ ನಿಂಗಮ್ಮ ಗಂಡ ಗುರುಲಿಂಗಪ್ಪ ಮಾಲಿಪಾಟೀಲ ಸಾ|| ಯಡ್ರಾಮಿ ಇವರು ಸೇಬು ಹಣ್ಣಿನ ತಳ್ಳುವ ಬಂಡಿಯನ್ನು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಅಡಚಣೆಯಾಗುವಂತೆ ರಸ್ತೆಯ ಮೇಲೆ ನಿಲ್ಲಿಸಿ ರಸ್ತೆ ಜಾಮ ಮಾಡಿ ವ್ಯಾಪಾರ ಮಾಡುತ್ತಿದ್ದರಿಂದ ನಾವು ಕೇಳಿದ್ದಕ್ಕೆ ನಮಗೆ ಏರು ಧ್ವನಿಯಲ್ಲಿ ಮಾತನಾಡಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ನಮಗೆ ಅವಾಚ್ಯವಾಗಿ ಬೈದಿರುತ್ತಾಳೆ, ಆದ್ದರಿಂದ ನಿಂಗಮ್ಮಳ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸುನೀತಾ ಗಂಡ ಮಹೇಶ ಸೊನಾರ ಸಾ||ಎಸ್,ಬಿ.ಐ.ಕಾಲೋನಿ ಕಲಬುರಗಿ ರವರ ಮಗಳಾದ ಮಮತಾ ಇವಳಿಗೆ 17 ವರ್ಷ ನನ್ನ ಮಗಳೂ ಪಿ.ಯು.ಸಿ ಪ್ರಥಮ ವರ್ಷದಲ್ಲಿ ಪೇಲ್ ಆಗಿದ್ದರಿಂದ ಕಾಲೇಜು ಬಿಡಿಸಿರುತ್ತೇವೆ.  ಈಗ ಒಂದು ತಿಂಗಳ ಹಿಂದೆ ನನ್ನ ಮಗಳು ಮಮತಾ ಇವಳು ನನಗೆ ಮತ್ತು ನನ್ನ ಗಂಡ ಮಹೇಶನಿಗೆ ತಿಳಿಸಿದ್ದೆನಂದರೆ ಪರ್ದಿನ ತಂದೆ ಗೌಸ ಇನಾಮದಾರ ಎಂಬಾತನು ನನಗೆ ನಾನು ನಿನ್ನ ಪ್ರೀತಿಸುತ್ತಿದ್ದು ನಿನ್ನ ಮದುವೆ ಮಾಡಿಕೊಳ್ಳುನತ್ತೇನೆ ಅಂತ ನನ್ನ ಹಿಂದೆ ಬಿದ್ದಿರುತ್ತಾನೆ ಅಂತ ತಿಳಿಸಿರುತ್ತಾಳೆ ಆಗ ನಾನು ನನ್ನ ಗಂಡ ಮತ್ತು ನನ್ನ ತಮ್ಮನಾದ ದೀಲಿಪ ಮೂರು ಜನರು ಕೂಡಿಕೊಂಡು ಪರ್ದಿನ ಈತನ ವಿಳಾಸ ತಿಳಿದುಕೊಂಡು ಸದರಿಯವನಿಗೆ ನನ್ನ ಮಗಳ ಹಿಂದೆ ಬಿಳಬೇಡ ಅವಳು ಇನ್ನು ಅಪ್ರಾಪತ್ತೆ ಇರುತ್ತಾಳೆ ನೀನು ಈ ರಿತಿ ಮಾಡುವದು ಸರಿ ಇರುವದಿಲ್ಲ ಅಂತ ತಿಳಿಸಿ ಹೇಳಿರುತ್ತೇವೆ.ಆದರು ಕೂಡ ಅವನು ನನ್ನ ಮಗಳ ಬೇನ್ನು ಬಿಟ್ಟಿರುವದಿಲ್ಲ ಆದ್ದರಿಂದ ನನ್ನ ಮಗಳು ಮಮತಾ ಈವಳಿಗೆ ನನ್ನ ತವರೂರಾದ ಬಳೂರಗಿ ಗ್ರಾಮದಲ್ಲಿ ಕರೆದುಕೊಂಡು ಹೋಗಿ ಬೇಡಬೇಕೆಂದು ನನ್ನ ಗಂಡನು ದಿನಾಂಕ:01-11-2019 ರಂದು ಮಮತಾಳಿಗೆ ಬಳೂರಗಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ನನ್ನ ಅಣ್ಣ ದಿಲೀಪನ ಮನೆಯಲ್ಲಿ ಬಿಟ್ಟು ಬಂದಿರುತ್ತಾನೆ. ದಿನಾಂಕ: 04-11-2019 ರಂದು ನನ್ನ ಅಣ್ಣ ದಿಲೀಪ ಈತನು ನನಗ ಪೊನ ಮಾಡಿ ತಿಳಿಸಿದ್ದೆನಂದರೆ ಪರ್ದಿನ ಇನಾಮದಾರ ಈತನು ಕಾರ ನಂಬರ ಕೆ,ಎ-32 ಎಮ್-7274 ನೇದ್ದರಲ್ಲಿ ತನ್ನ ಗೇಳಯರೊಂದಿಗೆ ನಮ್ಮ ಮನೆಗೆ ಬಂದು ಮಮತಾ ಇವಳಿಗೆ ನಾನು ಮದುವೆಯಾದರೆ ನಿನ್ನೆ ಮದುವೆಯಾಗುತ್ತೇನೆ ಬಾ ನನ್ನ ಜೋತೆ ಅಂತ ಹೇಳಿ ಒತ್ತಾಯ ಪೂರ್ವಕವಾಗಿ ನಾನು ಬಿಡಿಸಲು ಹೋದರು ಜಬರದಸ್ತಿಯಿಂದ ಮಮತಾಳನ್ನು ಅಪಹರಸಿಕೊಂಡು ಹೋಗಿರುತ್ತಾನೆ  ಸದರಿ ಪರ್ದಿನ ತಂದೆ ಗೌಸ ಇನಾಮದಾರ ಸಾ||ಪಿ,ಡಿ,ಐ.ಕಾಲೇಜು ಎದುರುಗಡೆ ಐವಾನ ಶಾಹಿ ಹತ್ತಿರ ಕಲಬುರಗಿ  ಈತನು ಅಫ್ರಾಪ್ತ ವಯಸ್ಸಿನ ನನ್ನ ಮಗಳಾದ ಮಮತಾ ಇವಳು ಅಪ್ರಾಪತ್ತ ವಯಸ್ಸಿನವಳು ಇರುತ್ತಾಳೆ ಎಂದು ತಿಳಿದೂ, ಮದುವೆಯಾಗುತ್ತೇನೆ ಅಂತ ಹೇಳಿ ಪುಸಲಾಯಿಸಿ ಇಬ್ಬರು ಮೂರು ಜನರೊಂದಿಗೆ ಕಾರ ನಂಬರ ಕೆ,ಎ-32 ಎಮ್-7274 ನೇದ್ದರಲ್ಲಿ ಅವಳನ್ನು ಅಫಹರಿಸಿಕೊಂಡು ಹೋಗಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.