Police Bhavan Kalaburagi

Police Bhavan Kalaburagi

Saturday, March 26, 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಕವಿತಾಬಾಯಿ ಗಂಡ ದತ್ತು ಜಮದಾರ  ಸಾ; ಕೆರಿಬೋಸಗಾ ಗ್ರಾಮ ತಾ;ಜಿ;ಕಲಬುರಗಿ ಇವರ ಗಂಡ ದತ್ತು ತಂದೆ ಅಂಬರಾಯ @ ಅಮೃತ ಜಮದಾರ ಇವರು ದಿನಾಂಕ.24-3-2016 ರಂದು ಮುಂಜಾನೆ ಉಪಳಾಂವದಲ್ಲಿರುವ ತನ್ನ ಅಕ್ಕಳಿಗೆ ಭೇಟಿಯಾಗಿ ಬರುವದಾಗಿ ನಮ್ಮ ಹೊಂಡಾ ಶೈನ ಮೋಟಾರ ಸೈಕಲ್ ನಂ.ಕೆ.ಎ.28 ಇಎ 4301 ನೆದ್ದರ ಮೇಲೆ ಅವರ ಸಂಗಡ ನಮ್ಮ ಗ್ರಾಮದ ಶಾರದಾಬಾಯಿ ಗಂಡ ಬಸವರಾಜ ಪೊಲೀಸ್ ಗೌಡರ ಇವರನ್ನು ಕರೆದುಕೊಂಡು ಮನೆಯಿಂದ ಹೋದರು  ಸಾಯಂಕಾಲ 3 ಪಿ.ಎಂ.ದ ಸುಮಾರಿಗೆ ಯಾರೋ ನಮ್ಮ ಮಗ ಆಕಾಶನ ಮೋಬಾಯಿಲಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ  ಹುಮನಾಬಾದ ರೋಡನ  ಉಪಳಾಂವ ಕ್ರಾಸ ಹತ್ತಿರ ನನ್ನ ಗಂಡನ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದಿದರಿಂದ ತಲೆಗೆ ,ಎದೆಗೆ ಹಾಗೂ ಶಾರದಾಬಾಯಿ ಪೊಲೀಸ ಗೌಡರ ಇವರಿಗೆ ಗಾಯಗಳಾಗಿದ್ದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವದಾಗಿ ತಿಳಿಸಿದರು ಆಗ ನಾನು ಮತ್ತು ನನ್ನ ಮಗ ಆಕಾಶ ಇಬ್ಬರು ಕೂಡಿಕೊಂಡು ಒಂದು ಮೋಟಾರ  ಸೈಕಲ್ ಮೇಲೆ  ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನೊಡಲಾಗಿ ನನ್ನ ಗಂಡ ದತ್ತು ಇವರಿಗೆ ವಿಚಾರಿಸಲು ತಿಳಿಸಿದ್ದು ಏನೆಂದರೆ  ಮದ್ಯಾನ 2-00 ಗಂಟೆಯ ಸುಮಾರಿಗೆ  ಉಪಾಳಂವ ದಿಂದ ಕಲಬುರಗಿ ಕಡೆಗೆ ಬರುತ್ತಿರುವಾಗ ಹುಮನಾಬಾದ ರೋಡನ ಉಪಳಾಂವ ಕ್ರಾಸ ಹತ್ತಿರ  ವೇಗವಾಗಿ ಬರುತ್ತಿರುವಾಗ ಒಮ್ಮಲೆ ಬ್ರೇಕ್ ಹಾಕಿದಾಗ ಮೋಟಾರ ಸೈಕಲ್ ಸ್ಕೀಡಾಗಿ ಕೆಳಗೆ ಬಿದ್ದಾಗ ಇದರಿಂದ  ತನೆಗೆ ತಲೆಗೆ ಮುಖಕ್ಕೆ, ಎದೆಗೆ ಭಾರಿ ಪೆಟ್ಟಾಗಿರುತ್ತದೆ , ಮತ್ತು ಶಾರದಬಾಯಿ ಗಂಡ ಬಸವರಾಜ ಪೊಲೀಸ್ ಗೌಡ ಇವಳಿಗೆ ಬಲಕಣ್ಣಿ ಪಕ್ಕದಲ್ಲಿ ಬಾರಿ ರಕ್ತಗಾಯವಾಗಿರುತ್ತವೆ ಅಂತಾ ತಿಳಿಸಿದನು,ನನ್ನ ಗಂಡನಿಗೆ ತಲೆಗೆ ಎದೆಗೆಭಾರಿಪೆಟ್ಟಾಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ .ಎ.ಎಸ್.ಎಂ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಗುಣ ಮುಖನಾಗದ ಕಾರಣ ದಿನಾಂಕ.   25-3-2016 ರಂದು ಪುನಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಉಪಚಾರ ದಲ್ಲಿ ಗುಣ ಮುಖನಾಗದೆ ದಿನಾಂಕ.26-3-2016 ರಂದು 00-15 ಎ.ಎಂ.ಕ್ಕೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರಭುಲಿಂಗ ತಂದೆ ಸದಾಶಿವ ಗಳವೇರಿ ಸಾ|| ಕರಜಗಿ ಗ್ರಾಮ ಇವರು ಮಾಹಾರಾಷ್ಟ್ರದ ಪೂನಾದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಅಜ್ಜ ಕರಜಗಿ ಸೀಮಾಂತರದಲ್ಲಿ ಬರುವ ಹೊಲ ಸರ್ವೆ ನಂಬರ 242/2 ರಲ್ಲಿ 31 ಎಕರೆ 30 ಗುಂಟೆ ಹಾಗೂ ಸರ್ವೆ ನಂಬರ 241/1 ರಲ್ಲಿ 35 ಎಕರೆ 21 ಗುಂಟೆ ಇರುವ ಜಮೀನುಗಳ ವಿಷಯವಾಗಿ ನಮಗೂ ಮತ್ತು ನಮ್ಮ ತಂದೆಯ ಸೋದರ ಅತ್ತೆಯ ಮಕ್ಕಳಾದ 1) ಹಣಮಂತ ತಂದೆ ಕಾಶಿರಾಮ ಉಪ್ಪಾರ 2) ಮಾಳಪ್ಪ ತಂದೆ ಕಾಶಿರಾಮ ಉಪ್ಪಾರ 3) ಸಿದ್ರಾಮ ತಂದೆ ಕಾಶಿರಾಮ ಉಪ್ಪಾರ ಸಾ|| ಎಲ್ಲರೂ ಕರಜಗಿ ಗ್ರಾಮ ಇವರುಗಳಿಗೂ ತಕರಾರು ಇದ್ದು, ಸದರಿ ವಿಷಯವಾಗಿ ಅಫಜಲಪೂರ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ನಡೆದಿರುತ್ತದೆ. ನಾಳೆ ದಿನಾಂಕ 27-03-2016 ರಂದು ಕರಜಗಿ ಗ್ರಾಮದ ಶ್ರೀ ಯಲ್ಲಾಲಿಂಗ ದೇವರ ಜಾತ್ರೆ ಇದ್ದರಿಂದ ನಿನ್ನೆ ದಿನಾಂಕ 25-03-2016 ರಂದು ಮದ್ಯಾಹ್ನ 12:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಆಯಿ ಮುತ್ಯಾನ ಊರಾದ ಸಾಲುಟಗಿ ಗ್ರಾಮದ ಮಲಕಪ್ಪ ತಂದೆ ಭಿಮಶಾ ಧನ್ನಿಂಗ್ರ ಇವರೊಂದಿಗೆ ಕರಜಗಿ ಗ್ರಾಮಕ್ಕೆ ಬಂದಿರುತ್ತೇನೆ. ಮದ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ಮತ್ತು ಸದರಿ ಮಲಕಪ್ಪ ಇಬ್ಬರು ಲಕ್ಷ್ಮೀ ಗುಡಿಗೆ ಕಾಯಿ ಒಡೆದುಕೊಂಡು ಬರಲು ಕರಜಗಿ ಗ್ರಾಮದ ಉಡಚಾಣ ರಸ್ತೆಗೆ ಇರುವ ಪೆಟ್ರೋಲ ಬಂಕ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ನಮ್ಮ ಜೋತೆಗೆ ಹೊಲದ ವಿಷಯವಾಗಿ ಜಗಳ ಮಾಡುತ್ತಿದ್ದ 1) ಹಣಮಂತ ತಂದೆ ಕಾಶಿರಾಮ ಉಪ್ಪಾರ 2) ಮಾಳಪ್ಪ ತಂದೆ ಕಾಶಿರಾಮ ಉಪ್ಪಾರ 3) ಸಿದ್ರಾಮ ತಂದೆ ಕಾಶಿರಾಮ ಉಪ್ಪಾರ ಇವರುಗಳು ನನ್ನ ಎದುರಿಗೆ ಬಂದು ಏನೋ ಬೋಸಡಿ ಮಗನೆ ಇಷ್ಟು ದಿನ ಊರ ಬಿಟ್ಟಿದಿ ಈಗ್ಯಾಕ ಬಂದಿ, ನಮ್ಮ ಜೋತೆನೆ ಕೋರ್ಟನಲ್ಲಿ ಕೇಸ್ ನಡೆಸ್ತಿ ಬೋಸಡಿ ಮಗನಾ ಅಂತಾ ಹೊಲಸ ಹೊಲಸು ಬೈಯುತ್ತಿದ್ದರು. ಆಗ ನಾನು ಯಾಕ ಬೈತಿರಿ ಕೋರ್ಟನಲ್ಲಿ ಕೇಸ್ ನಡೆದಾದ, ಕೋರ್ಟನಲ್ಲೆ ತಿರ್ಮಾನ ಆಗ್ಲಿ ಅಂತಾ ಹೇಳಿದೆನು, ಅದಕ್ಕೆ ಸದರಿಯವರು ಮಗನೆ ನಮಗೆ ತಿರುಗಿ ಮಾತಾಡ್ತಿ ಅಂತಾ ಮೂರು ಜನರು ಕೂಡಿ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆಯುತ್ತಿದ್ದರು, ಹಣಮಂತ ಈತನು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ತಲೆಯ ಬಲಭಾಗಕ್ಕೆ ಹೊಡೆದನು, ಇದರಿಂದ ನನ್ನ ತಲೆಗೆ ರಕ್ತಗಾಯವಾಯಿತು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಜೋತೆಗೆ ಇದ್ದ ಮಲಕಪ್ಪ ಧನ್ನಿಂಗ್ರ ಇವರು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ಸದರಿ ಮೂರು ಜನರು ಮಗನೆ ನೀನು ಊರಲ್ಲಿ ಬಾ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಕಟ್ಟಿಗೆ ಅಲ್ಲೆ ಬಿಸಾಕಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 24-03-16 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ನಮ್ಮ ಅಣ್ಣ ಪರಶುರಾಮನ ಹೆಂಡತಿ ಜಗದೇವಿಬಾಯಿ  ಇವರು ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಅವರ ಮೈ ಸುಟ್ಟಿದ್ದು, ನನ್ನ ಅಣ್ಣ ಪರಶುರಾಮ ಇವರು ನಮ್ಮ ಅತ್ತಿಗೆ ಉಪಚಾರ  ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು, ನಮ್ಮ ಅತ್ತಿಗೆ ಆರೈಕೆ ಕುರಿತು ನಮ್ಮ ಅತ್ತಿಗೆ ತಾಯಿ ಸೀನುಬಾಯಿ ಗಂಡ ಪ್ರಭು ರಾಠೋಡ ಇವರು ಸರಕಾರಿ ಆಸ್ಪತ್ರೆಯಲ್ಲಿ ಇರುತ್ತಾರೆ. ಹೀಗಿದ್ದು  ಇಂದು ದಿನಾಂಕ 25/03/16 ರಂದು ಸಂಜೆ 5-00 ಗಂಟೆ ಸುಮಾರಿಗೆ ನಾನು ಮತ್ತು ತಂದೆ, ಜೀವಲಾ, ತಾಯಿ ಶಾಂತಾಬಾಯಿ ಮೂವರು ಮನೆಯಲ್ಲಿ ಇದ್ದಾಗ ನಮ್ಮ ಅಣ್ಣ ಪರಶುರಾಮ ಇತನು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಹೊಂದುತ್ತಿರುವ ನಮ್ಮ ಅತ್ತಿಗೆ ಜಗದೇವಿ ಮತ್ತು ಅತ್ತಿಗೆ ತಾಯಿ ಸೀನುಬಾಯಿ ಇವರಿಗೆ ಊಟ ಕಟ್ಟಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಊಟ ಕೊಟ್ಟು ಬರುತ್ತೇನೆಂದು ಹೇಳಿ ಮನೆಯಿಂದ  ತನ್ನ  ಹೊಂಡಾ ಯೂನಿಕ್ರಾನ್  ಎಂಹೆಚ್-04 ಸಿಎಲ್ 3439 ನೇದ್ದರ ಮೇಲೆ ಒಬ್ಬನೇ ಕುಳಿತುಕೊಂಡು ಹೋದನು. ರಾತ್ರಿ 8-00 ಗಂಟೆ ಸುಮಾರಿಗೆ ಮನೆಯುಲ್ಲಿ ಇದ್ದಾಗ ನನಗೆ ಪರಿಚಯದ ಬೆಡಶೂರ ಗ್ರಾಮದ ದಶರಥ ತಂದೆ ಭೀಮರಾಯ ಒಡೆಯರ ಇವರು ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ನಿಮ್ಮ  ಅಣ್ಣ ಪರಶುರಾಮ ಇತನು ತನ್ನ  ಹೊಂಡಾ ಯೂನಿಕ್ರಾನ್  ಎಂಹೆಚ್-04 ಸಿಎಲ್ 3439 ಮೇಲೆ ಒಬ್ಬನೇ ಕುಳಿತುಕೊಂಡು ಆಲಗೂಡ ಕ್ರಾಸ ದಾಟಿ ಇರುವ ಒಂದು ಬ್ರೀಡ್ಜ  ಹತ್ತಿರ ಬಂದಾಗ ಕಲಬುರಗಿ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಚಾಲಕ ಅತಿವೇಗದಿಂದ ನಡೆಸುತ್ತಾ ಬಂದು ನಿನ್ನ ಅಣ್ಣ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಹಾಗೇ ಓಡಿಸಿಕೊಂಡು ಹೋಗಿದ್ದರಿಂದ, ಪರಶುರಾಮನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ  ಅವನ ಮೃತ ದೇಹ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಗ್ರಾಮೀಣ ಠಾಣೆ ಕಲಬುರಗಿ ಪೊಲೀಸರು ಸಾಗಿಸುತ್ತಿದ್ದಾರೆ ಅಂತಾ ಯಾರೋ ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿಸಿದ್ದು ನಾವು ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲು ನಮ್ಮ ಅಣ್ಣನು ಅಪಘಾತದಿದಂದ ಮೃತಪಟ್ಟಿರುತ್ತಾನೆ ಅಂತಾ ಶ್ರೀ ನಕಲು ತಂದೆ  ಜೀವಲಾ ಚವ್ಹಾಣ ಸಾ: ಅಣಕಲ ಖಿಂಡಿ ತಾಂಡಾ ತಾ: ಚಿತ್ತಾಪೂರ ಜಿಲ್ಲಾ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಜ್ಯೋತಿ ಗಂಡ ರೇವಣಸಿದ್ದಪ್ಪಾ ಕಲ್ಯಾಣಿ ವಿಳಾಸ ;ಪ್ಲಾಟ ನಂ. 213 ರೇವಣಸಿದ್ದಶ್ವರ ಕಾಲೂನಿ ಕಲಬುರಗಿ, ಇವರನ್ನು ರೇವಣಸಿದ್ದಪ್ಪಾ ತಂದೆ ಕರಬಸ್ಸಪ್ಪಾ ಕಲ್ಯಾಣಿ ಸಾ;ರೇವಣಸಿದ್ದೇಶ್ವರ ಕಾಲೂನಿ ಕಲಬುರಗಿ ಇತನೊಂದಿಗೆ ದಿನಾಂಕ.18-4-2009 ರಂದು ಗುರು ಹಿರಿಯರ ಸಮಕ್ಷಮಾದಲ್ಲಿ ಕಲಬುರಗಿಯ ವೀರೆಂದ್ರ ಪಾಟೀಲ್ ಕಲ್ಯಾಣ ಮಂಟಪದಲ್ಲಿ  ವರೋಪಚಾರ ಕುರಿತು 21 ತೊಲೆ ಬಂಗಾರ, ಹಿಡಿದಂತಹಾ ಬಟ್ಟೆ ,ಹಾಂಡೆಬಾಂಡೆ ಹಾಗೂ ಗೃಹ ಬಳಕೆಯ ಸಾವಾನುಗಳು ಹೀಗೆ ಒಟ್ಟು 9 ರಿಂದ 10 ಲಕ್ಷದವರೆಗೆ ಹಣ ಖರ್ಚು ಮಾಡಿ ನಮ್ಮ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡ ರೇವಣಸಿದ್ದಪ್ಪಾ ಇವರು ಎಂ.ಬಿ.ಬಿ.ಎಸ್. ಮುಗಿದ ನಂತರ ಹೆಚ್ಚಿನ ವಿದ್ಯಾಬ್ಯಾಕೆಂದು ಅಂದರೆ ಡಿ.ಎನ್.ಬಿ. ರೆಡಿಯಾಲೋಜಿ ಓದಲು ಒಂದು ವರ್ಷದ ಮಟ್ಟಿಗೆ ಬೆಂಗಳೂರಿಗೆ ಹೋಗಿದ್ದು ನಾನು ನನ್ನ ತವರು ಮನೆಯಲ್ಲಿ ಇದ್ದೇನು. ಹೆಚ್ಚಿನ ಓದು ಮುಗಿಸಿಕೊಂಡು ಕಲಬುರಗಿಗೆ ಬಂದು ನೆಲಸಿದರು ನಾನು ನಡೆಯಲು ಗಂಡನ ಮನೆಗೆ ಅಂದರೆ ಆರ್.ಎಸ್.ಕಾಲೂನಿಗೆ ಬಂದಿದ್ದು ಅಲ್ಲಿ 3-4 ದಿವಸ ಅಷ್ಟೆ ಚನ್ನಾಗಿ ನೋಡಿಕೊಂಡಿದ್ದು ನಮ್ಮ ಅತ್ತೆ ನಾಗಮ್ಮ ನನಗೆ ನೀನು ಮದುವೆಯಲ್ಲಿ ಹುಂಡ, ಬಂಗಾರ ತಂದಿಲ್ಲಾ , ನಿಮ್ಮ ತಾಯಿ ತಂದೆಯ ಇನ್ನೂ ಹಣ ಬಂಗಾರ ತೆಗೆದುಕೊಂಡು ಬಾ ನನ್ನ ಮಗ ಡಾಕ್ಟರ ಇದ್ದಾನೆ ಎಂದು ಹಿಯಾಳಿಸಿ ಬೈಯುವದು ಅಲ್ಲದೆ ಅಡಿಗೆ ಸರಿಯಾಗಿ ಮಾಡಲು ಬರುವದಿಲ್ಲಾ ಎಂದು ಮಾನಸಿಕವಾಗಿ ತೊಂದರೆ ಕೋಡುತ್ತಾ ಬಂದಿರುತ್ತಾರೆ. ಈ ವಿಷಯವನ್ನು ನನ್ನ ಗಂಡ ರೇವಣಸಿದ್ದಪ್ಪಾ ಇವರಿಗೆ ತಿಳಿಸಿದರು ಕೂಡಾ ಅವರು ಕೂಡಾ ನಮ್ಮ ಅತ್ತೆಯವರ ಮಾತುಕೇಳಿ ರಂಡಿ ನಾನು ಎಂ.ಡಿ.ಮಾಡಿ ಬಹಳ ಹಣ ಖರ್ಚ ಆಗಿದ್ದು ನಿಮ್ಮ ತಂದೆ ತಾಯಿಯವರಿಂದ 20 ಲಕ್ಷ ರೂಪಾಯಿ  ತೆಗೆದುಕೊಂಡು ಬಾ ಎಂದು ಅವಾಚ್ಯವಾಗಿ ಬೈಯುವದು , ಬೆಡ ರೂಮಿನಲ್ಲಿ ನನಗೆ ಕೈಯಿಂದ ಹೊಡೆಬಡಿ ಮಾಡಿ ದೈಹಿಕವಾಗಿ ಹಿಂಸೆ ಕೊಟ್ಟಿರುತ್ತಾರೆ.  ನನಗೆ ತೊಂದರೆ ಕೋಡುತ್ತಿದ್ದ ಬಗ್ಗೆ ನನ್ನ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ ನಮ್ಮ ತಂದೆ ಡಾ;ಚಂದ್ರಶೇಖರ ಪಾಟೀಲ್  ಮತ್ತು ನನ್ನ ತಾಯಿ ಸರೋಜಾ .ಸಿ.ಪಾಟೀಲ್ ಇವರುಗಳು ಮಹಾಗಾಂವ ಗ್ರಾಮದ ಹಿರಿಯರಾದ 1)ಶಿವಕುಮಾರ ತಡಕಲ್ ,2)ಶಿವಪ್ರಭು ಪಾಟೀಲ್. 3) ಶರಣಪ್ಪಾ ಹತ್ತಿ 4) ಸನೀಲ್ ಹತ್ತಿ , 5)ಶಿತಿಕಂಠ ತಡಕಲ್ 7)ಶಂಕರೆಪ್ಪಾ ಹತ್ತಿ 8) ಸುಭಾಶ ಪಾಟೀಲ್ ಕೆಸರಟಗಿ  ಇವರುಗಳೆಲ್ಲರೂ ನನ್ನ ಗಂಡ ಅತ್ತೆ ಯವರಿಗೆ ಸುಮಾರು ಬಾರಿ ಬುದ್ದಿಮಾತು ಹೇಳಿದ್ದು ಅಲ್ಲದೆ ಪಂಚಾಯತ ಮಾಡಿದರೂ ಕೂಡಾ  ನನಗೆ ತೊಂದರೆ ಕೊಡುವದು ಬಿಟ್ಟಿರುವದಿಲ್ಲಾ . ದಿನಾಂಕ  23-3-2013 ನೇ ಸಾಲಿನಲ್ಲಿ  ನನ್ನ ಗಂಡ ರೇವಣಸಿದ್ದಪ್ಪಾ ಬೀದರದಿಂದ ಕಲಬುರಗಿಗೆ ಬಂದು  ಕೆ.ಬಿ.ಎನ್. ಆಸ್ಪತ್ರೆಯಲ್ಲಿ ನೌಕರಿ ಮಾಡಿಕೊಂಡಿದ್ದು ನಾವು ಕಲಬುರಗಿಗೆ ಬಂದ ನಂತರ ನನ್ನ ಗಂಡ ರೇವಣಸಿದ್ದಪ್ಪಾ ಹಾಗೂ ನನ್ನ ಅತ್ತೆ ನಾಗಮ್ಮಾ ಹಾಗೂ ನಮ್ಮ ಭಾವ ಶಿವಶರಣಪ್ಪಾ ಕಲ್ಯಾಣಿ ಹಾಗೂ ನೆಗೆಣಿ ಸ್ವಾತಿ ಇವರೆಲ್ಲರೂ ಕೂಡಿಕೊಂಡು  ರಂಡಿ ನಿಮ್ಮ ತಂದೆ ತಾಯಿ ಆಸ್ತಿವಂತರಿರುತ್ತಾರೆ  ನಿನ್ನ ತವರು ಮನೆಯಿಂದ ಇನ್ನೂ 20 ಲಕ್ಷ ರೂಪಾಯಿ ಹಾಗೂ ನಿಮ್ಮ ತಂದೆ ತಾಯಿ ಕಟ್ಟಿಸಿದ ಹೊಸಮನೆಯನ್ನು ನನ್ನ ಹೆಸರಿಗೆ ಮಾಡಿಕೊಂಡು ಬಂದರೆ ನಮ್ಮ  ಮನೆಯಲ್ಲಿ ನಿನಗೆ ಜಾಗ ಇಲ್ಲದಿದ್ದರೆ ನಿನ್ನ ಮಗು ತೆಗೆದುಕೊಂಡು ನಿನ್ನ ತವರು ಮನೆಗೆ ಹೋಗು ಅಂತಾ ನಾಲ್ಕು ಜನರು ನನಗೆ ಹೊಡೆಬಡಿ ಮಾಡಿ ಮನೆಯಿಂದ ಹೊರೆಗೆ ಹಾಕಿದಾಗ ನಾನು ಕಿರಕುಳ ತಾಳಲಾರದೆ ನನ್ನ ತಂದೆ ತಾಯಿಯವರ ಮನೆಗೆ ಬಂದು ಉಳಿದುಕೊಂಡಿದ್ದು ದಿನಾಂಕ. 15-3-2016  ರಂದು ಮುಂಜಾನೆ 7-00 ಗಂಟೆಯ ಸುಮಾರಿಗೆ ನನ್ನ ತಂದೆ ಚಂದ್ರಶೇಖರ ಪಾಟೀಲ್ , ತಾಯಿ ಶ್ರೀಮತಿ ಸರೋಜಾ ಇಬ್ಬರು ಕೂಡಿಕೊಂಡು ನನಗೆ ನನ್ನ ಗಂಡ ರೇವಣಸಿದ್ದಪ್ಪಾ ಕಲ್ಯಾಣಿ ಇವರ ಹತ್ತಿರ ಕರೆದುಕೊಂಡು ವಿಚಾರ ಮಾಡೋಣ ನಡೆಯಿರಿ ಅಂತಾ ಹೋದಾಗ ರೇವಣಸಿದ್ದೇಶ್ವರ ಕಾಲೂನಿ  ರವಿ ಮಾಸ್ತರ ಇವರ ಮನೆಯ ಹತ್ತಿರ ಹೋಗುತ್ತಿರುವಾಗ ಅದೇ ವೇಳಗೆ ನನ್ನ ಗಂಡ ಎದರುಗಡೆ ಬಂದನು ಆಗ ನನ್ನ ತಂದೆ ತಾಯಿಯವರು ನಿಂತು ಮಾತಾಡಿಸಿ ನನ್ನ ಮಗಳನ್ನು ಕರೆದುಕೊಂಡು ಹೋಗಿ ಸರಿಯಾಗಿ ಜೀವನ ಮಾಡಿರಿ ಅಂತಾ ಕೇಳಿದಕ್ಕೆ ಆಗ ನನ್ನ ಗಂಡ ರೇವಣಸಿದ್ದಪ್ಪಾ ಕಲ್ಯಾಣಿ ಇವರು ನನಗೆ  ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ  ಏನೆ ರಂಡಿ  ನಿಮ್ಮ ತಾಯಿ ತಂದೆಯವರನ್ನು ಕರೆದುಕೊಂಡು ಬಂದು ನನಗೆ ಮರ್ಯಾದೆ ತೆಗೆಯುತ್ತಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಕೈಯಿಂದ ಕಪಾಳಕ್ಕೆ ಹೋಡೆದನು , ಅಷ್ಟರಲ್ಲಿ ಈ ವಿಷಯವನ್ನು ಕೇಳಿ ಅವನ ತಾಯಿ ನಾಗಮ್ಮ , ಅಣ್ಣ ಶಿವಶರಣಪ್ಪಾ , ಅತ್ತಿ ಸ್ವಾತಿ ಇವರು ಕೂಡಾ ಅಲ್ಲಿಗೆ ಬಂದು ರಂಡಿ ನಾವು ಹೇಳಿದಂತೆ 20 ಲಕ್ಷ ರೂಪಾಯಿ , ನಿಮ್ಮ ತಂದೆ ತಾಯಿ ಕಟ್ಟಿಸಿದ ಮನೆಗೆ ತೆಗೆದುಕೊಂಡ ಬಂದರೆ ನಿನಗೆ ಮನೆಯಲ್ಲಿ ಜಾಗ ಇದೆ ಇಲ್ಲದಿದ್ದರೆ ಮನೆಗೆ ಬಂದರೆ ನಿನಗೆ ಉಳಿಸುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋದರು ಆಗ ನನ್ನ ತಂದೆ ತಾಯಿ ಹಾಗೂ ರವಿ ಮಾಸ್ತರ ಇವರು ನನಗೆವಾಪಾಸ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.