Police Bhavan Kalaburagi

Police Bhavan Kalaburagi

Thursday, April 5, 2018

Yadgir District Reported Crimes Updated on 05-04-2018


                                         Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 66/2018  ಕಲಂ 87 ಕೆ.ಪಿ ಎಕ್ಟ;- ದಿನಾಂಕ 04-04-2018 ರಂದು 6-20 ಪಿ.ಎಮ್ ಕ್ಕೆ ಪಿ.ಎಸ್.ಐ (ಕಾಸು)ಯಾದಗಿರಿ ಗ್ರಾಮೀಣ ಠಾಣೆರವರು 6 ಜನ ಆರೋಪಿತರು ಮುದ್ದೆಮಾಲು ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಬೇಳಗೆರಾ ಗ್ರಾಮದಲ್ಲಿ ರಾಮಗಿರಿ ಮಠದ ಹತ್ತಿರ ಯಾರೋ ಕೆಲವರು ಅಂದರ ಬಾಹರ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಮಾಹಿತಿ ಪಡೆದುಕೊಂಡು ಸಿಬ್ಬಂದಿಯವರಾದ ಶ್ರೀಬಾಬುರಾವ ಎ.ಎಸ್.ಐ ಪಿಸಿ 114, ಪಿಸಿ 237 ಮತ್ತು ಪಿಸಿ 301 ರವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ 3-15 ಪಿ.ಎಮ್ ಕ್ಕೆ ಹೊರಟು ಬೇಳಗೆರಾ ಗ್ರಾಮ ತಲುಪಿ ಗ್ರಾಮದ ರಾಮಗಿರಿ ಮಠದ ಹತ್ತಿರ  6 ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆ 6 ಜನರಿಗೆ ಹಿಡಿದುಕೊಂಡು ಅವರಿಂದ ಜೂಜಾಟಕ್ಕೆ ಉಪಯೋಗಿಸಿದ 6100/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿಪಡಿಸಿಕೊಂಡಿದ್ದು ಸದರಿ ಪಂಚನಾಮೆಯನ್ನು ಇಂದು ದಿನಾಂಕ 04-04-2018 ರಂದು 4-45 ಪಿ.ಎಮ್ ದಿಂದ 5-45 ಪಿ.ಎಮ್ ದವರೆಗೆ ಮಾಡಿ ಮುಗಿಸಿದ್ದು ಇರುತ್ತದೆ ಅಂತಾ ಜಪ್ತಿಪಂಚನಾಮೆಯ ಸಾರಾಂಶವಿದ್ದು ಮೂಲ ಜಪ್ತಿಪಂಚನಾಮೆಯನ್ನು ಈ ಕುಡಾ ಲಗತ್ತಿಡಲಾಗಿದೆ. ಸದರ ಜಪ್ತಿಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 66/2018 ಕಲಂ 87 ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 122/2018 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957;- ದಿನಾಂಕ:04-04-2018 ರಂದು 2-30 ಪಿ.ಎಂ ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಫತ್ರುಮಿಯ್ಯಾ ಎ.ಎಸ್.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರ ವಾಹನದೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:04-04-2018 ರಂದು ರಾತ್ರಿ 11 ಎ.ಎಂ ಸುಮಾರಿಗೆ ಸುರಪುರದ ಗಾಂದಿ ಚೌಕ ಹತ್ತಿರ ನಾನು ಠಾಣೆಯ ಸಿಬ್ಬಂಧಿಯಾದ ಶ್ರೀ ಮಂಜುನಾಥ ಹೆಚ್ಸಿ-176 ಇಬ್ಬರು ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ ಹೇಮನೂರಿನಿಂದ ಯಾರೋ ತಮ್ಮ ಟ್ಯಾಕ್ಟರದಲ್ಲಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ ಶಖಾಪೂರ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯಾದ ಶ್ರೀ ಮಂಜುನಾಥ ಹೆಚ್ಸಿ-176 ರವರಿಗೆ ಇಬ್ಬರು ಸರಕಾರಿ ಪಂಚರನ್ನು ಕರೆದುಕೊಂಡು ಬರಲು ನೇಮಕ ಮಾಡಿಕಳಿಸಿದ್ದು ಸದರಿ ಮಂಜುನಾಥ ಹೆಚ್ಸಿ-176 ರವರು ಇಬ್ಬರು ಸರಕಾರಿ ಪಂಚರಾದ 1) ಶ್ರೀ ಸಂತೋಷಕುಮಾರ ತಂದೆ ಸೋಮಪ್ಪ ರಾಠೋಡ ವಯಾ:22 ವರ್ಷ ಉ: ಗ್ರಾಮಲೆಕ್ಕಿಗರು ಜಾತಿ:ಲಂಬಾಣಿ ಸಾ:ಲಿಂಗಸುರ ತಾ:ಲಿಂಗಸುರ ಜಿಲ್ಲಾ: ರಾಯಚೂರ ಹಾವ: ಸುರಪುರ 2) ಕುಮಾರಿ ಸಾವಿತ್ರಿ ತಂದೆ ಮಂಜಪ್ಪ ಮಗ್ಗದ ವಯಾ:21 ವರ್ಷ ಉ:ಗ್ರಾಮಲೆಕ್ಕಿಗರು ಜಾತಿ:ಕುರಬ ಸಾ:ಬೊರನಳ್ಳಿ ತಾ:ಕೂಡ್ಲಗಿ ಜಿ:ಬಳ್ಳಾರಿ ಹಾವ:ಸುರುಪುರ ಇವರನ್ನು 11-30 ಎ.ಎಂ.ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿ ಪಂಚರಿಗೆ  ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಹಾಗೂ ಠಾಣೆಯ ಸಿಬ್ಬಂದಿಯಾದ  ಶ್ರೀ ಮಂಜುನಾಥ ಹೆಚ್ಸಿ-176, ನಾಲ್ವರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ 11-45 ಎ.ಎಂ.ಕ್ಕೆ ಗಾಂದಿಚೌಕದಿಂದ ಹೊರಟು 12-30 ಪಿ.ಎಂ.ಕ್ಕೆ ಶಖಾಪೂರ ಹತ್ತಿರ ಹೋದಾಗ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ  ಮರಳು ತುಂಬಿಕೊಂಡು ಬರುವದನ್ನು ಕಂಡು ಅದನ್ನು ತಡೆದು ನಿಲ್ಲಿಸಲು ಕೈ ಮಾಡಿದಾಗ  ಟ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ತನ್ನ ಟ್ಯಾಕ್ಟರನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ಟ್ಯಾಕ್ಟರ ಇಳಿದು ಓಡಿಹೋಗಿದ್ದು, ಸದರಿ ಟ್ಯಾಕ್ಟರನ್ನು ಪರೀಶಿಲಿಸಿ ನೋಡಲು ಒಂದು ಸ್ವರಾಜ ಕಂಪನಿಯ ನೀಲಿ ಬಣ್ಣದ ಟ್ಯಾಕ್ಟರಿದ್ದು ನಂಬರ ಇರುವದಿಲ್ಲ ಅದರ ಇಂಜಿನ ನಂಬರ 39.1357/ಖಙಕ16911  ಚೆಸ್ಸಿ ನಂಬರ ಘಚಖಿಂ28432119324 ನೇದ್ದು ಇರುತ್ತದೆ. ಟ್ರಾಲಿ ಚೆಸ್ಸಿ ನಂಬರ 13/2014 ನೇದ್ದು ಇರುತ್ತದೆ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಓಡಿ ಹೋದ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ. ಸದರಿ ಟ್ಯಾಕ್ಟರ ಚಾಲಕ ಹಾಗೂ ಮಾಲೀಕನು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ದಿನಾಂಕ:04-04-2018 ರಂದು 12-45 ಪಿ.ಎಂ. ದಿಂದ  ದಿನಾಂಕ:04-04-2018 ರ 01-45 ಪಿ.ಎಂ. ದವರೆಗೆ ಸ್ಥಳದಲ್ಲಿಯೆ ಬರೆದುಕೊಂಡಿದ್ದು ಇರುತ್ತದೆ. ಸದರಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ನಮ್ಮ ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು ಟ್ಯಾಕ್ಟರ ಚಾಲಕ ಹಾಗೂ ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಅಂತಾ ವರದಿ ನಿಡಿದ್ದರ ಮೇಲಿಂದ ಠಾಣೆ  ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 167/2018 ಕಲಂ 78[3] ಕೆ.ಪಿ ಆಕ್ಟ;- ದಿನಾಂಕ 04/04/2018 ರಂದು ಮದ್ಯಾಹ್ನ 14-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು  ಶಹಾಪೂರ ಪೊಲೀಸ್ ಠಾಣೆ, ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 04/04/2018 ರಂದು ಮದ್ಯಾಹ್ನ 12-10 ಗಂಟೆಗೆ ಠಾಣೆಯಲ್ಲಿದ್ದಾಗ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 46 ನೇದ್ದರಲ್ಲಿಯ ಹಳಿ ಸಗರ ಏರಿಯಾದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಭೀಟ್ ಸಿಬ್ಬಂದಿ ಮಾಹಿತಿ ತಿಳಿಸಿದ ಮೇರೆಗೆ ಫಿರ್ಯಾದಿಯವರು, ಮತ್ತು ಪಂಚರು ಹಾಗೂ ಠಾಣೆಯ ಸಿಬ್ಬಂಧಿಯವರು, ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜೆ-138 ನೇದ್ದರಲ್ಲಿ ಹಳಿ ಸಗರ ಗ್ರಾಮದ ಹನುಮಾನ ಗುಡಿಯ ಹತ್ತಿರ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆತನ ಅಂಗಶೋಧನೆ ಮಾಡಿದಾಗ ನಗದು ಹಣ 730=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಂಚನಾಮೆ ಮದ್ಯಾಹ್ನ 13-00 ಗಂಟೆಯಿಂದ 14-00 ಗಂಟೆಯ ಅವಧಿಯಲ್ಲಿ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ 14-30 ಗಂಟೆಗೆ ವರದಿ ಸಲ್ಲಿಸಿದು,್ದ ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮದ್ಯಾಹ್ನ 15-00 ಗಂಟೆಗೆ  ಠಾಣೆ ಗುನ್ನೆ ನಂಬರ 167/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 121/2018 ಕಲಂ 32 & 34 ಕೆ.ಇ ಆಕ್ಟ್;- ದಿನಾಂಕ: 04.04.2018 ರಂದು ಸಾಯಂಕಾಲ 4.20 ಪಿ.ಎಂ ಕ್ಕೆ ಪಿ.ಎಸ್.ಐ ರವರು ವರದಿ ಸಲ್ಲಿಸಿದ್ದು ಸಾರಾಂಶವೆನೆಂದರೆ ಇಂದು ಮದ್ಯಾಹ್ನ 1.45 ಪಿ.ಎಂ ಸುಮಾರಿಗೆ ಧರ್ಮಪೂರ ಗ್ರಾಮದ ಬಸ್ ನಿಲ್ದಾಣದ ರೋಡಿನ ಪಕ್ಕದಲ್ಲಿ ಒಂದು ಹೊಟೇಲನ ಮುಂದೆ ಆರೋಪಿ ಸಾಯಪ್ಪ ಈತನು ಅನಧಿಕೃತವಾಗಿ ತನ್ನ ಸ್ವಾಧೀನದಲ್ಲಿಟ್ಟುಕೊಂಡು ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತ ನಮಗೆ ಖಚಿತ ಮೇರೆಗೆ ಸಿಬ್ಬಂದಿ ಮತ್ತು ಪಂಚರ ಸಮಕ್ಷಮದಲ್ಲಿ 2.30 ಪಿ.ಎಂಕ್ಕೆ ದಾಳಿ ಮಾಡಿ ಆರೋಪಿತನಿಂದ ಜಪ್ತಿ ಪಡಿಸಿದ ಮಧ್ಯದ ಬಾಕ್ಸಗಳನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ  ಆಫಿಸರ್ ಚಾಯ್ಸಿ ಮಧ್ಯದ ಬಾಟಲಿಗಳು 180 ಎಂಎಲ್ ನ  7 ಬಾಟಲಿಗಳಿದ್ದು, ಒಂದು ಬಾಟಲಿಯ ಕಿಮ್ಮತ್ತು 82.85/- ರೂ ಆಗುತ್ತಿದ್ದ ಒಟ್ಟು 7 ಘಿ 82.85  ಒಟ್ಟು 579.95 ರೂ ಇರುತ್ತದೆ. ಅದೇ ರೀತಿ ಎಂ.ಸಿ ವಿಸ್ಕಿ 180 ಎಂ.ಎಲ್ ನ 4 ಬಾಟಲಿಗಳು ಒಂದ ಬಾಟಲಿ ಇಮ್ಮತ್ತು 148.29/-ರೂ ಆಗುತ್ತಿದ್ದು ಒಟ್ಟು 4 ಘಿ 148.29 ಒಟ್ಟು 593.16/-ರೂ ಇದ್ದು, ಅದೇ ರೀತಿ ಇಂಪೇರಿಯಲ್ ಬ್ಲೂ 180 ಎಂ.ಎಲ್ ನ 2 ಬಾಟಲಿಗಳು ಒಂದಕ್ಕೆ 148.26/ರೂ ಆಗುತ್ತಿದ್ದು ಒಟ್ಟು 2 ಘಿ 148.26 ಒಟ್ಟು 296.52 ಇದ್ದು, ಅದೇ ರೀತಿ ಓರಿಜನಲ್ ಚಾಯಿಸ್ 90 ಎಂ.ಎಲ್ ನ 18 ಪೌಚಗಳು ಒಂದಕ್ಕೆ 28.13/- ರೂ ಆಗುತ್ತಿದ್ದು ಒಟ್ಟು 18 ಘಿ 28.13 ಒಟ್ಟು 506.34 ಇದ್ದು, ಜಪ್ತಿ ಮಾಡಿಕೊಂಡ ಮುದ್ದೆ ಮಾಲಿನಲ್ಲಿ ಒಂದೊಂದು ಬಾಟಲಿಗಳನ್ನು  ಎಫ್.ಎಸ್.ಎಲ್ ಗೆ ಕಳುಹಿಸಲು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ನಂತರ ಉಳಿದ ಮುದ್ದೆ ಮಾಲು ತನಿಖೆ ಕುರಿತು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು, ಮೂಲ ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 4.20 ಪಿ.ಎಂ ಕ್ಕೆ ಠಾಣೆಗೆ ಬಂದು ಸ.ತ.ಪಿರ್ಯಾಧಿ ಅಂತಾ ವರದಿ ಸಲ್ಲಿಸಿದ ಬಗ್ಗೆ ಅಪರಾಧ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 122/2018 ಕಲಂ: 32, 34 ಕೆ.ಇ ಆಕ್ಟ್;- ದಿನಾಂಕ 04.04.2018 ರಂದು ಮಧ್ಯಾಹ್ನ 3-00 ಗಂಟೆಗೆ ಗೋಪಳಾಪೂರ ಗ್ರಾಮದಲ್ಲಿ ಆರೋಪಿ ಬಸಪ್ಪ ಈತನು ತನ್ನ ಹೊಟಲೆ ಮುಂದೆ ಖುಲ್ಲಾ ಸ್ಥಳದಲ್ಲಿ ಅಕ್ರಮವಾಗಿ ವಿವಿಧ ನಮೂನೆಯ ಮದ್ಯದ ಬಾಟಲಿಗಳನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನ ವಶದಲ್ಲಿದ್ದ ವಿವಿಧ ನಮೂನೆಯ ಮದ್ಯದ ಬಾಟಲಿ ಹಾಗೂ ಪೌಚ್ಗಳನ್ನು ಹೀಗೆ ಒಟ್ಟು 3029=44 ರೂ ಬೆಳೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ಧ ವರದಿ ಸಲ್ಲಿಸಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 122/2018 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ 379 ಐಪಿಸಿ;- ದಿನಾಂಕ 04.04.2018 ರಂದು ರಾತ್ರಿ 9-50 ಗಂಟೆಗೆ ಟ್ರ್ಯಾಕ್ಟರ ಇಂಜಿನ ನಂ-ಟಿ.ಎಸ್.-06-ಇ.ಆರ್-9812 ಮತ್ತು ಟ್ರ್ಯಾಲಿಗೆ ನಂಬರ್ ಇಲ್ಲದಿರುವುದು ನೇದ್ದರ ಚಾಲಕ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಸದರಿ ಟ್ರ್ಯಾಕ್ಟರ ಚಾಲಕ ಓಡಿ ಹೋಗಿದ್ದು ಆತನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 123/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 100/2018 ಕಲಂ, 143,147,447,427,504,506 ಸಂ.149ಐ.ಪಿ.ಸಿ  ;- ದಿನಾಂಕ: 04/04/2018 ರಂದು 03.30 ಪಿಎಮ್ ಕ್ಕೆ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ನೀಡಿದ್ದ ಅಜರ್ಿಯ ಸಾರಂಶ ಏನಂದರೆ, ಮಹಲ್ ರೋಜಾ ಸೀಮಾಂತರದಲ್ಲಿ ಊರಿಗೆ ಹೊಂದಿಕೊಂಡು ನನ್ನದು ಹೊಲ ಸವರ್ೇ ನಂ. 2-ಪಿ/5 ರ ಕ್ಷೇತ್ರ 0-10 ಗುಂಟೆ, ಜಮೀನು ಇದ್ದು, ಸದರಿ ಜಮೀನಿನಲ್ಲಿ ಸುಮಾರು 2 ವರ್ಷ ದಿಂದ ಆರೋಪಿತರೆಲ್ಲರು ಕೂಡಿ ನನ್ನ ಹೊಲ ಸವರ್ೇ ನಂ. 2-ಪಿ/5 ರ ಕ್ಷೇತ್ರ 0-10 ಗುಂಟೆ, ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಅನಧಿಕೃತವಾಗಿ ನನಗೆ ಹಾನಿ ಮಾಡುವ ಉದ್ದೇಶದಿಂದ ಸದರಿ ಜಮೀನಿನಲ್ಲಿ ಕಣಕಿ, ಹೋಟ್ಟು ಹಾಕಿರುತ್ತಾರೆ. ನನಗೆ ಉಳುಮೆ ಮಾಡಲು ಬಿಡದೆ ನನಗೆ 2 ವರ್ಷ ದಿಂದ ತೊಂದೆರೆ ಕೊಡುತ್ತಿದ್ದಾರೆ. ನನಗೆ ಜಮೀನು ಬಿಟ್ಟುಕೊಡಿ ಅಂತಾ ನಾನು ದಿನಾಂಕ:29/03/2018 ರಂದು 12.30 ಪಿಎಂ ಸುಮಾರಿಗೆ ನಮ್ಮ ಹೊಲದ ಹತ್ತಿರ ಇರುವ ಕನಕದಾಸ್ ಕಟ್ಟಿ ಹತ್ತಿರ ಕೇಳಲು ಹೋದಾಗ ಮೇಲಿನ ಎಲ್ಲರು ಬೈಯ್ದು ಸೂಳೆ ಮಗನೆ ಇದು ನಮ್ಮ ಜಮೀನು ಇಲ್ಲಿ ಯಾಕೆ ಬಂದಿದ್ದಿಯಾ ಅಂತಾ ಅವಾಚ್ಯವಾಗಿ ಬೈಯ್ದರು, ಆಗ ಮಾಳಪ್ಪ ಈತನು ಸೂಳೆ ಮಗನೆ ಇನ್ನೊಮ್ಮೆ ಈ ಕಡೆ ನನ್ನ ಜಾಗ ಅಂತಾ ಬಂದರೆ ನಿನಗೆ ಖಡದು ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದಾರೆ ಅಂತಾ ಪಿಯದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2018 ಕಲಂ, 143,147,447,427,504,506 ಸಂ.149 ಐ.ಪಿ.ಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 168/2018.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ ;- ದಿನಾಂಕ 04/04/2018 ರಂದು ಸಾಯಂಕಾಲ 19-00 ಗಂಟೆಗೆ ಶ್ರೀ ನಾಗರಾಜ.ಜಿ, ಪಿ.ಐ, ಸಾಹೇಬರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ:04/004/2018 ರಂದು ಮದ್ಯಾಹ್ನ 15-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಬಾತ್ಮಿ ಬಂದಿದ್ದೆನೆಂದರೆ ಚಟ್ನಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಅಂಗಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಯಾವುದೆ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ್ದಿದ್ದು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸೋಂದಪ್ಪ ಎ,ಎಸ್,ಐ, ಧರ್ಮಣ್ಣ ಹೆಚ್,ಸಿ, 50, ಲಕ್ಕಪ್ಪ ಸಿ.ಪಿ.ಸಿ. 198. ಜೀಪಚಾಲಕ ಅಂಮಗೊಂಡ ಎ.ಪಿ.ಸಿ. 169 ರವರಿಗೆ ಬಾತ್ಮೀ ವಿಷಯವನ್ನು ತಿಳಿಸಿ ದಾಳಿಕುರಿತು ಹೋಗಬೆಕೆಂದು ತಿಳಿಸಿ ಲಕ್ಕಪ್ಪ ಪಿ,ಸಿ,198, ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ದೇವಿಂದ್ರಪ್ಪ ತಂದೆ ಹಣಮಂತ ಮುಂಡರಿಗಿ ವ|| 40 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಚಟ್ನಳ್ಳಿ  2] ಶ್ರೀ ವಿಜಯಕುಮಾರ ತಂದೆ ಬಸವರಾಜ ಆಶಪ್ಪನೋರ ವ|| 35 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಚಟ್ನಳ್ಳಿ ಇವರಿಗೆ 15-10 ಗಂಟೆಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳೀಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚನಾಮೆ ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ. ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿ,ವೈ,ಎಸ್,ಪಿ, ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ  ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿಜನರು, ಎಲ್ಲರು ಕೂಡಿ ಠಾಣೆಯ ಜೀಪ್ ನಂ ಕೆಎ-33-ಜಿ-0138 ನೇದ್ದರಲ್ಲಿ ಕುಳಿತುಕೊಂಡು 15-20 ಗಂಟೆಗೆ ಠಾಣೆಯಿಂದ ಹೋರಟೆವು. ಸದರಿ ಜೀಪನ್ನು ಅಮಗೊಂಡ ಎ.ಪಿ.ಸಿ.169 ರವರು ಚಲಾಯಿಸುತ್ತಿದ್ದರು. ನೇರವಾಗಿ 16-10 ಗಂಟೆಗೆ ಚಟ್ನಳ್ಳಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಹೊಗಿ ಜೀಪ ನಿಲ್ಲಿಸಿ. ಜೀಪಿನಿಂದ ಎಲ್ಲರು ಇಳಿದು ಕಿರಾಣಿ ಅಂಗಡಿಯ ಹತ್ತಿರ  ನಡೆದು ಕೊಂಡು ಹೋಗಿ ಮನೆಗಳ ಗೋಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ, ಅಲ್ಲಿ ಒಬ್ಬ ವೆಕ್ತಿಯು ತನ್ನ ಅಂಗಡಿ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 16-20 ಪಿ.ಎಂ.ಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿದಾಗ ಸದರಿ ಮದ್ಯಕುಡಿಯಲು ಅನುಕುಲಮಾಡಿಕೊಡುತ್ತಿದ್ದ ವ್ಯೆಕ್ತಿ ಸಿಕ್ಕಿದ್ದು ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಬಾಟಲ್ಗಳನ್ನು ಬಿಟ್ಟು ಓಡಿ ಹೋದರು. ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಈತನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸಾಬಣ್ಣ ತಂದೆ ತಿಮ್ಮಯ್ಯ ಓರುಂಚಿ ವ|| 26 ಜಾ|| ಬೇಡರ ಉ|| ಕಿರಾಣಿ ವ್ಯಾಪಾರ ಸಾ|| ಚಟ್ನಳ್ಳಿ ತಾ|| ಶಹಾಪೂರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಚಟ್ನಳ್ಳಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ  ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಪರಿಸಿಲಿಸಿ ನೋಡಲಾಗಿ ಚಿಲದಲ್ಲಿ 650 ಎಂ,ಎಲ್,ನ 9 ಕಿಂಗ್ಫೀಷರ್ ಸ್ರಾಂಗ್ ಪ್ರಿಮೀಯಮ್ ಬಿಯರ ಬಾಟಲ್ಗಳು ಇದ್ದು ಒಂದು ಬಾಟಲ್ನ ಕಿಮ್ಮತ್ತು 125/- ರೂ ಅಂತಾ ಇದ್ದು, ಒಟ್ಟು ಮದ್ಯದ ಬಾಟಲ್ಗಳ ಕಿಮ್ಮತ್ತು 1125/- ರೂ ಗಳಾಗುತ್ತಿದ್ದು ಮತ್ತು 04  ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಅದರಲ್ಲಿ 2 ಪ್ಲಾಸ್ಟಿಕ್ ಗ್ಲಾಸ್ ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ:00=00 ರೂ ಇದ್ದು ಮತ್ತು ಮದ್ಯ ಕುಡಿಯಲು ಉಪಯೋಗಿಸಿದ 650 ಎಂ,ಎಲ್,ನ 2 ಕಿಂಗ್ಫೀಷರ್ ಸ್ರಾಂಗ್ ಪ್ರಿಮೀಯಮ್ ಖಾಲಿ ಬಿಯರ ಬಾಟಲ್ ಇದ್ದವು. ಅ:ಕಿ:00=00 ರೂ ಹಾಗೂ 9 ಮದ್ಯದ ಬಾಟಲ್ ಗಳಲ್ಲಿ ಒಂದು 650 ಎಂ,ಎಲ್,ನ ಕಿಂಗ್ಫೀಷರ್ ಸ್ರಾಂಗ್ ಪ್ರಿಮೀಯಮ್ ಬಿಯರ ಮದ್ಯದ ಬಾಟಲನ್ನು ಪಂಚರ ಸಮಕ್ಷಮದಲ್ಲಿ ಎಪ್.ಎಸ್.ಎಲ್ ಪರೀಕ್ಷೆ  ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಇನ್ನುಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 16-30 ಗಂಟೆಯಿಂದ 17-30 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಆರೋಪಿಯನ್ನು ಮತ್ತು ಮುದ್ದೆಮಾಲುಗಳನ್ನು ತಾಬೆಗೆ ತೆಗೆದುಕೊಂಡೆನು. ಮರಳಿ ಠಾಣೆಗೆ ಸಾಯಂಕಾಲ 18-30 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಂದು ಆರೋಪಿ, ಮುದ್ದೆಮಾಲಗಳು, ಹಾಗೂ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿ 19-00 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 168/2018 ಕಲಂ 15(ಎ) 32(3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.