Police Bhavan Kalaburagi

Police Bhavan Kalaburagi

Saturday, May 29, 2021

BIDAR DISTRICT DAILY CRIME UPDATE 29-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-05-2021

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 22/2021, ಕಲಂ. 498(), 323, 504, 506 ಜೊತೆ 34 IP ಮತ್ತು 3 & 4 ಡಿ.ಪಿ ಕಾಯ್ದೆ :-

ದಿನಾಂಕ 28-05-2021 ರಂದು ಫಿರ್ಯಾದಿ ಮಮಿತಾ ಗಂಡ ಗೌತಮಶೀಲ ಅಗಸಿ ವಯ: 21 ವರ್ಷ, ಜಾತಿ: ದಲಿತ, ಸಾ: ಚಾಂಗಲೇರಾ ರವರಿಗೆ ಕಳೆದ 3 ವರ್ಷವಳ ಹಿಂದೆ ಗ್ರಾಮದ ಗೌತಮಶೀಲ ಇತನೊಂದಿಗೆ ಮ್ಮ ಸಾಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಲ್ಲಿ ತಂದೆ ತಾಯಿಯವರು ಗಂಡನ ಮನೆಯವರಿಗೆ 25 ಗ್ರಾಂ ಬಂಗಾರ ಮತ್ತು ನಗದು ಹಣ 50,000/- ರೂಪಾಯಿ ವರದಕ್ಷಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಗಂಡ ಹೆಂಡತಿ 5-6 ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದು ನಂತರ ಆರೋಪಿತರಾದ ಗಂಡ, ಅತ್ತೆ ಮತ್ತು ನಾದುನಿ ಮೂವರು ಫಿರ್ಯಾದಿಯ ಮೇಲೆ ಸಂಶಯ ಮಾಡಿ ನೀನು ಯಾರನ್ನು ನೋಡುತ್ತಿದ್ದಿ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಆಗಾಗ ಬೈಯುತ್ತಿದ್ದರು ಮತ್ತು ತಂದೆ ತಾಯಿವರಿಂದ ಇನ್ನೂ ವರದಕ್ಷಣೆ ತಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನಿಡುತ್ತಿದ್ದರು ಅದರಂತೆ ಫಿರ್ಯಾದಿಯು ತಂದೆ ತಾಯಿಯವರಿಂದ ಒಂದು ಸಾರಿ 50,000/- ರೂ. ಮತ್ತೊಮ್ಮೆ 40,000/- ರೂ ಮತ್ತು ಇನ್ನೊಮ್ಮೆ 30,000/- ರೂ ತಗೆದುಕೊಂಡು ಬಂದು ತನ್ನ ಗಂಡ ಮತ್ತು ಅತ್ತೆಗೆ ಕೊಟ್ಟಿದ್ದು ಇರುತ್ತದೆ ಮತ್ತು ಫಿರ್ಯಾದಿಗೆ ಒಬ್ಬ ಗಂಡು ಮಗ ಹುಟ್ಟಿದ್ದು ಇರುತ್ತದೆ, ಈಗ ಸದ್ಯ 6 ತಿಂಗಳ ಗರ್ಭಿಣಿಯಾಗಿದ್ದು, ಹೀಗಿರುವಾಗ ದಿನಾಂಕ 26-05-2021 ರಂದು ಗಂಡ ಗೌತಮಶೀಲ ಇತನು ಹೋರಗಡೆಯಿಂದ ಮನೆಗೆ ಬಂದಾಗ ಫಿರ್ಯಾದಿಯು ಆತನಿಗೆ ಇಲ್ಲಿಯವರೆಗೆ ನೀನು ಎಲ್ಲಿಗೆ ಹೋಗಿರುವೆ ಅಂತಾ ಕೇಳಿದಾಗ ಗಂಡ ಅದನ್ನು ಕೇಳುವವಳು ನೀನು ಯಾರು ಅಂತಾ ಬೈದು ಕೈಯಿಂದ ಬಾಯಿ ಮೇಲೆ ಹೋಡೆದಿರುತ್ತಾನೆ ಮತ್ತು ಅತ್ತೆ ಘಾಳೇಮ್ಮಾ ಇವಳು ಕೈ ಹಿಡಿದು ನೀನು ಅವನಿಗೆ ಏನು ಕೇಳುವೆ ಅವನು ಕೆಲಸ ಮಾಡಿ ಮನೆಗೆ ಬರುತ್ತಾನೆ ನಿಮು ಸೂಮ್ಮನೆ ಇರು ಅಂತಾ ಕೈ ಹಿಡಿದು ಎಳೆದಾಡಿರುತ್ತಾಳೆ ಮತ್ತು ನಾದನಿ ಜೈಶ್ರೀ ಇವಳು ಈಕೆಗೆ ಮನೆಯಲ್ಲಿ ಇಟ್ಟುಕೊಳ್ಳ ಬಾರದು ಅಂತಾ ಅವಾಚ್ಯವಾಗಿ ಬೈದಿರುತ್ತಾಳೆ ಮತ್ತು ಮೂವರು ಸೇರಿ ನೀನು ನಮ್ಮ ಮನೆ ಬಿಟ್ಟು ನಿನ್ನ ತವರು ಮನೆಗೆ ಹೋಗಿ 30,000/- ರೂ ಹಣ ತಗೆದುಕೊಡು ಬಾ ಇಲ್ಲದಿದ್ದರೆ ನಿನಗೆ ಸೀಮೆಎಣ್ಣೆ ಹಾಕಿ ಸುಟ್ಟು ಹಾಕುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ, ನಂತರ ಸದರಿ ಜಗಳದ ಗುಲ್ಲು ಕೇಳಿ ತಾಯಿ ತುಳಸೆಮ್ಮಾ ಮತ್ತು ಅಜ್ಜಿ ಸುಭದ್ರಮ್ಮಾ ಇವರು ಬಂದು ಜಗಳ ಬಿಡಿಸಿ ಫಿರ್ಯಾದಿಗೆ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 25/2021,ಕಲಂ. 379 ಐಪಿಸಿ :-

ದಿನಾಂಕ 27-05-2021 ರಂದು ಫಿರ್ಯಾದಿ ಅನಸರ ತಂದೆ ಮೈನೋದ್ದಿನ ಗೋರ್ಟೆ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ವಾಂಜರಖೇಡ ತನ್ನ ಹಿರೋ ಸ್ಪ್ಲೆಂಡರ್ ಪ್ಲಸ ಮೋಟಾರ್ ಸೈಕಲ್ ನಂ. ಕೆಎ-39/ಆರ-9771 ನೆದರ ಮೇಲೆ ಶಹಾಜಾನಿ ಔರಾದದ ನ್ನ ಅಂಗಡಿಗೆ ಹೋಗಿ ಮರಳಿ 2130 ಗಂಟೆಗೆ ಮನೆಗೆ ಬಂದು ಸದರಿ ವಾಹನವನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ಮಲಗಿ ನಂತರ ದಿನಾಂಕ 28-05-2021 ರಂದು 500 ಗಂಟೆಗೆ ಎದ್ದು ವಾಯು ವಿಹಾರಕ್ಕೆ ಹೋಗಲೆಂದು ಮನೆಯ ಹೊರಗೆ ಬಂದಾಗ ರಾತ್ರಿ ಮ್ಮ ಮನೆಯ ಮುಂದೆ ನಿಲ್ಲಿಸಿದ ಸದರಿ ವಾಹನ ಇರಲಿಲ್ಲ, ಸದರಿ ವಾಹನವನ್ನು ದಿನಾಂಕ 27-05-2021 2130 ಗಂಟೆಯಿಂದ ದಿನಾಂಕ 28-05-2021 ರಂದು 0500 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 59/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 28-05-2021 ರಂದು ವಳಸಂಗ ಗ್ರಾಮದ ಶಿವಾರದಲ್ಲಿ ಬಸವರಾಜ ಬಿರಾದಾರ ರವರ ಹೊಲದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂದು ಮಹೇಂದ್ರಕುಮಾರ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ವಳಸಂಗ ಗ್ರಾಮದ ಬಸವರಾಜ ಬಿರಾದಾರ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ವಿನೋದ ತಂದೆ ಜನಾರ್ಧನ ಬಿರಾದಾರ ವಯ: 43 ವರ್ಷ, ಜಾತಿ: ಮರಾಠಾ, 2) ಮಂಜುನಾಥ ತಂದೆ ವಿಶ್ವನಾಥ ವಾಲದೊಡ್ಡೆ ವಯ: 30 ವರ್ಷ, ಜಾತಿ: ಲಿಂಗಾಯತ, 3)  ರಾಜಕುಮಾರ ತಂದೆ ನರಸಿಂಗ ಗಾಯಕವಾಡ ವಯ: 30 ವರ್ಷ, ಜಾತಿ: ಎಸ.ಸಿ ಹೊಲಿಯಾ, 4) ವಸಂತ ತಂದೆ ಮಾರುತಿರಾವ ಬಿರಾದಾರ ವಯ: 43 ವರ್ಷ, ಜಾತಿ: ಮರಾಠಾ, 5) ಅಜಂ ತಂದೆ ರಸೂಲಸಾಬ ಪಟೇಲ ವಯ: 31 ವರ್ಷ, ಜಾತಿ: ಮುಸ್ಲಿಂ, 6) ಸುದಾಕರ ತಂದೆ ಪಾಂಡುರಂಗ ದೊಂಡಗೆ ವಯ: 45 ವರ್ಷ, ಜಾತಿ: ಮರಾಠಾ, 7) ವಿಶಂಬರ ತಂದೆ ಶ್ರೀಹರಿ ಬಂದ್ರೆ ವಯ: 35 ವರ್ಷ, ಜಾತಿ: ಮರಾಠಾ ಹಾಗೂ 8) ಸಲೌದ್ದಿನ ತಂದೆ ಅಜೀಜ ಪಟೇಲ್ ವಯ: 34 ವರ್ಷ, ಜಾತಿ: ಮುಸ್ಲಿಂ, ಎಲ್ಲರೂ ಸಾ: ವಳಸಂಗ, ತಾ: ಭಾಲ್ಕಿ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ  ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು, ಅವರಿಂದ 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 9650/- ರೂ. ಜಪ್ತಿ ಮಾಡಿಕೊಂಡ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

BIDAR DISTRICT DAILY CRIME UPDATE 28-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-05-2021

 

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 31/2021, ಕಲಂ. 20(ಬಿ) 2(ಎ) ಎನ್.ಡಿ.ಪಿ.ಎಸ್ ಕಾಯ್ದೆ :-

ದಿನಾಂಕ 27-05-2021 ರಂದು ಇಂದಿರಾಬಾಯಿ ಪಾಟೀಲ ಪಿ.ಎಸ್.ಐ ಬಗದಲ್ ಪೊಲೀಸ್ ಠಾಣೆ ರರಿಗೆ ಬಂದ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು, ಪತ್ರಾಂಕಿತ ಅಧಿಕಾರಿ ಮತ್ತು ತೂಕ ಮಾಡುವವರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯರೊಡನೆ ಬಗದಲ ಮೀನಕೇರಾ ಕ್ರಾಸ್ ಹತ್ತಿರ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಹೊರಟ ಆಟೋ ನಂ. ಕೆಎ-38/ಎ-0245 ನೇದನ್ನು  ನಿಲ್ಲಿಸಿದ್ದಾಗ ಅದರಲ್ಲಿಂದ ಓಡಿ ಹೊಗುತ್ತಿರುವ ಇಬ್ಬರು ಹೆಣ್ಣ ಮಕ್ಕಳನ್ನು ಮಹಿಳಾ ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಫಿಜಾ ಗಂಡ ಜಾಫರ ಇರಾನಿ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಸಹ್ಯಾದ್ರಿ ಬಿಲ್ಡಿಂಗ ಪಾಟೀಲ ನಗರ ಭಾಷ್ಕರ ಶಾಲೆ ಹತ್ತಿರ ಅಂಬಾವಾಲಿ ಪಶ್ಚಿಮ ಕಲ್ಯಾಣ ಥಾಣೆ ಮೋಹನ ಮಹಾರಾಷ್ಟ್ರ, 2) ಕುಲಸುಮಾ ತಂದೆ ಮಜುಲಮ ಅಫಜಲಖಾನ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಗಲ್ಲಿ ನಂ. 05 ಇಂದಿರಾ ನಗರ ಅಂಬಾವಾಲೆ ಸ್ಟೇಷನ ಹತ್ತಿರ ಪಾಟೀಲ ನಗರ ಅತಾಲಿ ಅಂಬೇವಾಲಿ ಥಾಣೆ ಮಹಾರಾಷ್ಟ್ರ ಅಂತ ತಿಳಿಸಿದ್ದು, ನಂತರ ಅವರಿಗೆ ಏಕೆ? ಓಡಿ ಹೋಗುತ್ತಿದ್ದಿರಿ ಅಂತ ಕೇಳಲಾಗಿ ನಾವು ನಮ್ಮ ಬ್ಯಾಗಗಳಲ್ಲಿ ಗಾಂಜಾ ಇರುವುದರಿಂದ ನಾವು ಓಡಿ ಹೋಗಿರುತ್ತೇವೆ ಅಂತ ತಿಳಿಸಿದ ಮೇರೆಗೆ ಆಟೋ ಚಾಲಕನಿಗೆ ವಿಚಾರಿಸಲು ಆತನ ತನ್ನ ಹೆಸರು 3) ಎಂಡಿ ಇಸ್ಮಾಯಿಲ ತಂದೆ  ಎಂಡಿ ಗಫರ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಕುತ್ತಾಬಾದ, ಬೀದರ ಹಾಗೂ ಅವನ ಪಕ್ಕದಲ್ಲಿ ಕುಳಿತ 4) ಎಂಡಿ ಸಮೀರ ತಂದೆ ಎಂಡಿ ಬಾಬ, ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಕುತ್ತಾಬಾದ, ಬೀದರ ಅಂತ ತಿಳಿಸಿ ನಂತರ ನಾವು ಇಬ್ಬರು ಹೆಣ್ಣು ಮಕ್ಕಳನ್ನು ಬಾಡಿಗೆ ಮೇಲೆ ಮನ್ನಾಏಖೇಳಿ ವರಗೆ ಬಾಡಿಗೆ ಮೇಲೆ ಬಿಡಲು ಬಂದಿರುತ್ತೇವೆ ಇಷ್ಟು ಬಿಟ್ಟು ನಮಗೆ ಮತ್ತೇನು ಗೊತ್ತಿರುವುದಿಲ್ಲ ಅಂತ ತಿಳಿಸಿರುತ್ತಾರೆ, ತದನಂತರ ಫಿಜಾ ಮತ್ತು ಕುಲಸುಮ ರವರ ಬ್ಯಾಗಳಿಂದ 10 ಪ್ಯಾಕೇಟ ಗಾಂಜಾವನ್ನು ಮತ್ತು 2000/- ರೂ. ನಗದು ಹಣ ಮತ್ತು ಇಬ್ಬರು ಆಪಾದಿತರನ್ನು ಗಾಂಜಾ ಸಾಗಿಸಲು ಬಳಸಿದ್ದ ಆಟೋ ನಂ. ಕೆಎ-38/ಎ0-245 ಅ.ಕಿ 50,000/- ರೂ. ನೇದನ್ನು ವಶಪಡಿಸಿಕೊಂಡು, ಸಿಬ್ಬಂದಿಯವರ ಸಹಾಯದಿಂದ ತೂಕ ಮಾಡಿ ನೋಡಲು 20 ಕೆಜಿ ಗಾಂಜಾ ಅ.ಕಿ 2,00,000/- ರೂಪಾಯಿ ಬೆಲೆ ಬಾಳುವುದು ಹೀಗೆ ಹೀಗೆ ಒಟ್ಟು 2,52,000/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 47/2021, ಕಲಂ. 279, 338 ಐಪಿಸಿ :-

ದಿನಾಂಕ 26-05-2021 ರಂದು ಫಿರ್ಯಾದಿ ಮೌಲಾಲಿ ತಂದೆ ಅಲಿಬಾಗ್ ಕಮಾನ ದರವಾಜಾ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ನೌಕಾಡ ಗಲ್ಲಿ ಆಳಂದ, ಜಿ: ಕಲಬುರಗಿ ರವರು ಲಾರಿ ನಂ. ಎಂ.ಹೆಚ್-12/ಎಲ್.ಟಿ-1773 ನೇದರಲ್ಲಿ ಸೇಂಡದಿಂದ ಸಿಮೇಂಟ ಲೋಡ ಮಾಡಿಕೊಂಡು ಬಸವಕಲ್ಯಾಣದಲ್ಲಿ ಕೆಲಸವಿದ್ದ ಕಾರಣ ಬಸವಕಲ್ಯಾಣಕ್ಕೆ ಬಂದು  ಕೆಲಸ ಮುಗಿಸಿಕೊಂಡು ದಿನಾಂಕ 27-05-2021 ರಂದು ಮುಂಬೈಗೆ ಸಿಮೇಂಟ ಲೋಡ್ ತೆಗೆದುಕೊಂಡು ರಾ.ಹೇ ನಂ. 65 ಮುಖಾಂತರ ಮುಂಬೈ ಕಡೆಗೆ ಹೋಗುವಾಗ, ಹಳ್ಳಿ ಗ್ರಾಮದ ಸಮೀಪ ನ್ನ ಲಾರಿಯ ಹಿಂದಿನ ಒಂದು ಟೈರ್ ಪಂಚರ್ ಆದ ಕಾರಣ ಲಾರಿಯನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ಮುನ್ಸೂಚನೆ ಕುರಿತು ಇಂಡಿಕೇಟರ ಹಾಕಿ ಲಾರಿಯಿಂದ ಕೆಳಗೆ ಇಳಿದು ನಿಂತಿರುವಾಗ  ಬಂಗ್ಲಾ ಕಡೆಯಿಂದ ಐಚರ್ ವಾಹನ ಸಂ. ಜಿ.ಜೆ-03/ಬಿ.ಡಬ್ಲು-5944 ನೇದರ ಚಾಲಕನಾದ ಆರೋಪಿ ಅಜಯ ತಂದೆ ರೇವಾಭಾಯಿ ವಯ: 28 ವರ್ಷ, ಸಾ: ರಾಜಕೋಟ ಗುಜರಾತ ಇತನು ತನ್ನ ವಾಹನವನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಲಾರಿಗೆ ಹಿಂಭಾಗ ಡಿಕ್ಕಿ ಮಾಡಿದನು, ಸದರಿ ಅಪಘಾತದಿಂದ ಆರೋಪಿಯು ತನ್ನ ವಾಹನದಲ್ಲೆ ಸಿಕ್ಕಿ ಹಾಕಿಕೊಂಡಿದ್ದು, ನಂತರ ಜನರ ಸಹಾಯದಿಂದ ಆರೋಪಿಗೆ ಹೊರಗೆ ತೆಗೆದು ನೋಡಲು ಆತನ ಬಲಗಣ್ಣಿನ ಮೇಲೆ ರಕ್ತಗಾಯ, ಮೂಗಿನ ಹತ್ತಿರ ರಕ್ತಗಾಯ, ಎಡಗಾಲು ತೊಡೆಗೆ ಭಾರಿ ಗಾಯವಾಗಿದ್ದರಿಂದ ಆತನಿಗೆ ಅಂಬುಲೇನ್ಸ್ ನಲ್ಲಿ ಹಾಕಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.