Police Bhavan Kalaburagi

Police Bhavan Kalaburagi

Monday, December 7, 2020

BIDAR DISTRICT DAILY CRIME UPDATE 07-12-2020

 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-12-2020

ಬೀದರ  ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 107/2020 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ: 06-12-2020 ರಂದು ಫಿರ್ಯಾದಿ ಶ್ರೀ  ಮಹ್ಮದ ಫಿರೋಜ  ತಂದೆ ಮಹ್ಮದ ಇಸಾಕ, ವಯ 33 ವರ್ಷ, ಜ್ಯಾತಿ ಮುಸ್ಲಿಂ, ಉ: ಕೂಲಿ ಕೆಲಸ  ಸಾ: ಅಬ್ದುಲ ಪೈಜ ದರ್ಗಾ ಹತ್ತಿರ  ಇವರ ತಂದೆ ಮಹ್ಮದ ಇಸಾಕ ರವರು ಶಹಾಪೂರ ಗೇಟ ಕಡೆಯಿಂದ ಮನೆಗೆ ಸೈಕಲ ಚಲಾಯಿಸಿಕೊಂಡು ಬರುತ್ತಿದ್ದರು. ಸಾಯಂಕಾಲ ಸುಮಾರು 6:45 ಗಂಟೆಗೆ ಶಹಾಪೂರ ರಿಂಗ್ ರೋಡ ಕ್ರಾಸ ಹತ್ತಿರ ಬಂದಾಗ, ಎದುರಿನಿಂದ ಅಂದರೆ ಬೀದರ ಕಡೆಯಿಂದ ಶಹಾಪೂರ ಗೇಟ ಕಡೆಗೆ ಒಂದು ಮೊಟಾರ ಸೈಕಲ ನಂ. ಕೆಎ38ವಿ8912 ನೇದ್ದರ ಸವಾರ ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಹಾಪೂರ ರಿಂಗ್ ರೋಡ ಕ್ರಾಸ ಹತ್ತಿರ ಡಿಕ್ಕಿ ಮಾಡಿ ಮೊಟಾರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಪರಿಣಾಮ ಮಹ್ಮದ ಇಸಾಕ ರವರಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದು ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಪರೀಕ್ಷಿಸಿ ಮೃತಪಟ್ಟಿರುವದಾಗಿ ತಿಳಿಸಿರುತ್ತಾರೆ ಅಂತ ತಿಳಿಸಿದರು. ಕಾರಣ ಮೊಟಾರ ಸೈಕಲ ನಂ. ಕೆಎ38ವಿ8912 ನೇದ್ದರ ಸವಾರನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಹಳ್ಳಿಖೇಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 148/2020 ಕಲಂ 3 & 7 ಈ.ಸಿ. ಕಾಯ್ದೆ :-

 

ದಿನಾಂಕ : 06/12/2020 ರಂದು ಮದ್ಯಾಹ್ನ 1230 ಗಂಟೆಗೆ ಫಿರ್ಯಾದಿ  ಶ್ರೀ ಮಿಲನಕುಮಾರ ತಂದೆ ಅಮೃತರಾವ ಗಾಯಕವಾಡ ವಯ-48 ವರ್ಷ ಜಾತಿ ಎಸ್.ಸಿ ಹೊಲಿಯಾ ಉ-ಆಹಾರ ಶಿರಸ್ತೆದಾರರು ಹುಮನಾಬಾದ ಸಾ-ಬಸವ ಕಲ್ಯಾಣ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಂಶವೆನೆಂದರೆ, ಹಳ್ಳಿಖೇಡ(ಬಿ) ಪಟ್ಟಣದಿಂದ ಒಂದು ಮಿನಿ ಐಚರ್ ವಾಹನ ನಂ: ಕೆಎ-39/ಎ-0007 ನೇದ್ದರಲ್ಲಿ ಅನಧಿಕೃತವಾಗಿ ಸಾರ್ವಜನಿಕ ವಿತರಾಣ ವ್ಯವಸ್ಥೆ ಅಡಿಯಲ್ಲಿ ವಿತರಿಸುವ ಅಕ್ಕಿಯನ್ನು ಸಾಗಿಸಲು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದುಕೊಂಡು ಮಿಲನಕುಮಾರ ಆಹಾರ ಶಿರಸ್ತೆದಾರ ತಹಶೀಲ ಕಛೇರಿ ಹುಮನಾಬಾದ ಮತ್ತು ಜೊತೆಯಲ್ಲಿ ಶ್ರೀಮತಿ ಬಿಂದುಕುಮಾರಿ ಆಹಾರ ನಿರೀಕ್ಷಕರು ಹುಮನಾಬಾದ ರವರನ್ನು ಕರೆದುಕೊಂಡು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಹಳ್ಳಿಖೇಡ(ಬಿ) ಪಟ್ಟಣದ ಶ್ರೀ ಸೀಮಿ ನಾಗನಾಥ ಕ್ರಾಸ್ ರೋಡಿನ ಹತ್ತಿರ  0945 ಗಂಟೆಗೆ ಮಿನಿ ಐಚರ್ ವಾಹನ ನಂ: ಕೆಎ-39/ಎ-0007 ನೇದ್ದರಲ್ಲಿ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗೆ ವಿತರಿಸುವ ಅಕ್ಕಿ ಸಾಗಿಸುವಾಗ ಪಂಚರ ಸಮಕ್ಷಮ ಶ್ರೀಮತಿ ಬಿಂದುಕುಮಾರಿ ಆಹಾರ ಶಿರಸ್ತೆದಾರರು ಹುಮನಾಬಾದ ಮತ್ತು ಇಬ್ಬರು ಪೊಲಿಸರಾದ ಸುನೀಲಕುಮಾರ ಸಿಪಿಸಿ-1389 ಹಾಗೂ ಶರಣಪ್ಪಾ ಸಿಪಿಸಿ-1909 ರವರ ಸಹಾಯದಿಂದ ದಾಳಿ ಮಾಡಿ ಸದರಿ ಚಾಲಕನನ್ನು ಹಿಡಿದುಕೊಂಡು ಪಂಚರ ಸಮಕ್ಷಮ ಪಂಚನಾಮೆ ಅಡಿಯಲ್ಲಿ ಸದರಿ ವಾಹನದಲ್ಲಿದ್ದ 96 ಚೀಲಗಳನ್ನು ತೆಗೆದು ನೋಡಲು ಅದರಲ್ಲಿ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗೆ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸುವ ಅಕ್ಕಿ ಇದ್ದು, ಒಂದು ಚೀಲದಲ್ಲಿ 50 ಕೆ.ಜಿ ಯಂತೆ ಒಟ್ಟು 96 ಚೀಲದಲ್ಲಿ 48 ಕ್ವಿಂಟಲ್ ಅಕ್ಕಿ ಇರುತ್ತವೆ. ಅದೇ ಸಮಯಕ್ಕೆ ಹಳ್ಳಿಖೇಡ(ಬಿ) ಪಟ್ಟಣದ ಕಡೆಯಿಂದ ಮತ್ತೊಂದು ಮಹೀಂದ್ರಾ ಪಿಕಪ್ ಗೂಡ್ಸ್ ವಾಹನ ಬಂದಿದ್ದು, ಅದನ್ನು ನಾವು ಪಂಚರ ಸಮಕ್ಷಮ ಕೈಮಾಡಿ ನಿಲ್ಲಿಸಲು ಸದರಿ ವಾಹನದ ಚಾಲಕ ವಾಹನವನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆ. ಸದರಿ ವಾಹನ ನೋಡಲು ಮಹೀಂದ್ರಾ ಬುಲೇರೋ ಗೂಡ್ಸ್ ಪಿಕಪ್ ವಾಹನವಿದ್ದು, ಇದರ ನಂಬರ ಕೆಎ-32/ಸಿ-7058 ಇರುತ್ತದೆ. ಸದರಿ ವಾಹನದಲ್ಲಿ ಹಿಂದುಗಡೆ ನೋಡಲು ಒಟ್ಟು 86 ಚೀಲಗಳಿದ್ದು, ಅವುಗಳನ್ನು ತೆಗೆದು ನೋಡಲು ಅದರಲ್ಲಿ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗೆ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸುವ ಅಕ್ಕಿ ಇದ್ದು, ಒಂದು ಚೀಲದಲ್ಲಿ 50 ಕೆ.ಜಿ ಯಂತೆ ಒಟ್ಟು 86 ಚೀಲದಲ್ಲಿ 43 ಕ್ವಿಂಟಲ್ ಅಕ್ಕಿ ಇರುತ್ತವೆ. ಒಂದು ಕ್ವೀಂಟಲ್ ಅಕ್ಕಿಯ ಅ.ಕಿ-3,000/- ರೂಪಾಯಿ ಹೀಗೆ ಎರಡು ವಾಹನಗಳಲ್ಲಿದ್ದ ಒಟ್ಟು 91 ಕ್ವೀಂಟಲ್ ಅಕ್ಕಿಯ ಅ.ಕಿ-2,73,000/- ರೂ. ಬೆಲೆ ಬಾಳುವುದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.