Police Bhavan Kalaburagi

Police Bhavan Kalaburagi

Monday, June 26, 2017

BIDAR DISTRICT DAILY CRIME UPDATE 26-06-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 26-06-2017

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 17/17 ಕಲಂ 174 ಸಿಆರ್.ಪಿ.ಸಿ.:-
ದಿನಾಂಕ: 24/06/2017 ರಂದು 2115 ಗಂಟೆಗೆ ಫಿರ್ಯಾದಿ ಶ್ರೀಮತಿ ಪಲ್ಲವಿ ಗಂಡ ದಿ. ಲೋಕೆಶ ಮಾನಕಾರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ  ಸಾರಾಂಶವೆನೆಂದರೆ ಫಿರ್ಯಾದಿ ಮದುವೆಯು 2015 ನೇ ವರ್ಷದಲ್ಲಿ ಕೊನಮೆಳಕುಂದಾ ಗ್ರಾಮದ  ಲೋಕೆಶ ಮಾನಕಾರ ಎಂಬುವವರ ಜೋತೆಯಲ್ಲಿ ಆಗಿರುತ್ತದೆ.  ಒಂದು ಗಂಡು ಮಗು ಆಗಿರುತ್ತದೆ  ಹಿಗಿರುವಲ್ಲಿ ಇವರಿಗೆ 15 ಎಕ್ಕರೆ ಹೊಲ ಇದ್ದು ಆ ಹೊಲದಲ್ಲಿ ಇವರ ಗಂಡ ಒಕ್ಕಲುತನ ಮಾಡಿಕೊಂಡಿರುತ್ತಾರೆ.  ಇವರ ಮಾವ   ಹೊಲದಲ್ಲಿ ಬೇಳೆ ಬೇಳೆಸಲು ಗೊಬ್ಬರ ಹಾಕಲು ವಿವಿಧ ಬ್ಯಾಂಕಗಳಿಂದ ಕೃಷಿ ಸಾಲ ತೆಗೆದುಕೊಂಡಿರುತ್ತಾರೆ. ಹೊದ ವರ್ಷ  ಹೊಲದಲ್ಲಿ ಸೊಯಾ, ಉದ್ದು, ಹೆಸರು, ಕಡಲೆ, ಹಾಗು ತೊಗರಿ ಹಾಕಿದ್ದು ಸರಿಯಾಗಿ ಬೇಳೆದಿರುವುದಿಲ್ಲ. ಆದ್ದರಿಂದ ಫಿರ್ಯಾದಿಯು ಸಾಲವು ಹೇಗೆ ಮರುಪಾವತಿ ಮಾಡಬೇಕೆಂಬ ಚಿಂತೆಯಲ್ಲೆ ಇರುತ್ತಿದ್ದರು 1) ಕೆಜಿಬಿ ಬ್ಯಾಂಕ ಸಿದ್ದೇಶ್ವರ ಒಂದು ಲಕ್ಷ, 2) ಪಿಕೆಪಿಎಸ್ ಬ್ಯಾಂಕ ಕೊನಮೆಳಕುಂದಾ ಒಂದು ಲಕ್ಷ ಐವತ್ತು ಸಾವಿರ, 3) ಓವರಸಿಸ ಬ್ಯಾಂಕ ಭಾಲ್ಕಿ ಒಂದು ಲಕ್ಷ ಐವತ್ತು ಸಾವಿರ ಹಾಗು ಖಾಸಗಿ ಜನರ ಹದಿನೈದು ಲಕ್ಷ (15 ಲಕ್ಷ) ಸಾಲ ಇರುತ್ತದೆ. ಹೀಗಿರುವಾಗ ದಿನಾಂಕ24/06/2017 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ  ಮನೆಯಲ್ಲಿ ಬೆಳೆಗೆ ಹೊಡೆಯಲು ತಂದಿದ್ದ ವಿಷ ಕೊಡಿದು ಫೀರ್ಯಾದಿ ಗಂಡ ಲೋಕೆಶ ವಯಛ 28 ವರ್ಷ, ರವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ  ಗುನ್ನೆ ನಂ. 161/17 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 25/06/17 ರಂದು 1630 ಗಂಟೆಗೆ ವಿಜಯಕುಮಾರ್ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ   ಹಾಲಹಳ್ಳಿ(ಕೆ) ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದಿದರ ಮೇರೆಗೆ ಸಿಬ್ಬಂದಿಯೊಂದಿಗೆ  ಹಾಲಹಳ್ಳಿ(ಕೆ) ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 6 ಜನ ಗುಂಪಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸಿಬೀನ ಅಂದರ ಬಾಹರ್ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವುದು ಮತ್ತು ಅವರಲ್ಲಿ ಒಬ್ಬರು ಅಂದರಕ್ಕೆ 50ರೂ ಅಂತಲು ಮತೊಬ್ಬರೂ ಬಾಹರಕ್ಕೆ 100/ರೂ ಅಂತಲು ಹೇಳುತ್ತಿದ್ದು  ಜೂಜಾಟ ಆಡುತ್ತಿರುವುದು ಖಚೀತ ಪಡಿಸಿಕೊಂಡು 1830 ಗಂಟೆಗೆ  ಜೂಜಾಟ ಆಡುತ್ತಿರುವವರ ಮೇಲೆ ದಾಳಿ ಮಾಡಿದ್ದು 4 ಜನ ಓಡಿ ಹೋಗಿದ್ದು ಉಳಿದ ಇಬ್ಬರಿಗೆ ಹಿಡಿದು ಅವರವರ ಹೆಸರು ವಿಳಾಸ ವಿಚಾರಿಸಲು ಕ್ರಮವಾಗಿ 1] ರಮೇಶ ತಂದೆ ಶಿವರಾಜ ಮೀನಕೆರಿ ವಯ: 35 ಜಾ:ಎಸ್.ಟಿ(ಗೊಂಡ) ಉ:ಶಿಕ್ಷಕ ಸಾ:ಹಾಲಹಳ್ಳಿ(ಕೆ) ಅಂತ ಹೇಳಿದನು ಆತನ ಅಂಗ ಜಡ್ತಿ ಮಾಡಲು ಈತನ ವಶದಲ್ಲಿ 4700/ ರೂ ನಗದು ಹಣ ದೋರೆತಿರುತ್ತದೆ. ಮತ್ತು 2) ದೂಳಪ್ಪಾ ತಂದೆ ಕಲ್ಲಪ್ಪಾ ಮೀನಕೆರೆ ವಯ:50 ಜಾ:ಎಸ್.ಟಿ(ಗೊಂಡ) ಉ:ರೈಲ್ವೆ ಇಲಾಖೆಯಲ್ಲಿ ಕ್ಲರ್ಕ ಕೆಲಸ ಸಾ:ಹಾಲಹಳ್ಳಿ(ಕೆ) ಎಂದು ತಿಳಿಸಿದ್ದು ಈತನ ಅಂಗ ಜಡ್ತಿ ಮಾಡಲು 17,300/-ರೂ ದೊರೆತವು. ಮತ್ತು ಎಲ್ಲರ ಮಧ್ಯೆದಲ್ಲಿ 2,500/ರೂ ನಗದು ಹಣ ದೊರೆತವು ಮತ್ತು ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳು ದೊರೆತವು. ಸದರಿ ಜೂಜಾಟ ಆಡುತಿದ್ದು ಓಡಿ ಹೊದವರ ಹೆಸರು ವಿಳಾಸಲಾಗಿ 3) ಮಲ್ಲಪ್ಪಾ ತಂದೆ ಸಂಗಪ್ಪಾ ಡೊಳ್ಳಿ ಜಾ:ಕುರುಬರು ಸಾ:ಹಾಲಹಳ್ಳಿ(ಕೆ), 4) ಸಂಜು ತಂದೆ ಸುಭಾಷ ಕಾಡವಾದೆ ಸಾ:ಹಾಲಹಳ್ಳಿ(ಕೆ), 5) ದಿಗಂಬರ ತಂದೆ ಮಲ್ಪಪ್ಪಾ ಮತ್ತು 6) ಅಜೀಜ ಜೀಪ ಚಾಲಕ ಎಂದು ತಿಳಿಸಿರುತ್ತಾರೆ. ಸದರಿ ಎಲ್ಲಾ ಒಟ್ಟು ಹಣ ಸೇರಿ 24,500/- ರೂಪಾಯಿಗಳಿದ್ದು ಹಾಗೂ   ಇಸ್ಪೀಟ ಎಲೆಗಳು  ಒಟ್ಟು 52 ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Yadgir District Reported Crimes


                                                    Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ 323,324,498(ಎ),354,504 ಐಪಿಸಿ;- ದಿನಾಂಕ: 25/06/2017 ರಂದು 2.30 ಗಂಟೆಗೆ ಫಿಯರ್ಾದಿಯು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ದೂರು ಅಜರ್ಿ ಸಾರಾಂಶವೇನೆಂದರೆ, ಸುಮಾರು 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ 2-3 ವರ್ಷಗಳ ವರೆಗೆ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದು, ಒಂದು ಹೆಣ್ಣು ಮಗು ಇರುತ್ತದೆ. ನಂತರ ಫಿಯರ್ಾದಿಯ ಗಂಡ ಫಿಯರ್ಾದಿಗೆ ದಿನಾಲು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರಿಂದ ಫಿಯರ್ಾದಿಯು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಅಜರ್ಿ ಹಾಕಿದಾಗ ಆರೋಪಿತನು ಇನ್ನು ಮುಂದೆ ಚನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿ ಕರೆದುಕೊಂಡು ಹೋಗದಿದ್ದು, ಸಧ್ಯ 8 ತಿಂಗಳ ಗಬರ್ಿಣಿ ಇದ್ದು, ದಿನಾಂಕ 23/06/2017 ರಂದು ಫಿಯರ್ಾದಿಗೆ ಹೊಟ್ಟೆ ನೋವು ಕಂಡು ಬಂದಿದ್ದರಿಂದ ಶಹಾಪುರ ಸುಶಿಲಾ ಆಸ್ಪತ್ರೆಗೆ ಸೇರಿಕೆಯಾಗಿ 2 ದಿವಸವಾದರೂ ಆರೋಪಿ ಫಿಯರ್ಾದಿಗೆ ಕರೆದುಕೊಂಡು ಹೋಗಲು ಬರದಿದ್ದಾಗ ಇಂದು ದಿನಾಂಕ: 25/06/2017 ರಂದು ಫಿಯರ್ಾದಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿ ಮನೆಗೆ ಹೋಗುವಾಗ ಫಿಯರ್ಾದಿಯ ತಂದೆ, ತಾಯಿ, ಅಕ್ಕ, ತಮ್ಮ ಇವರು ಫಿಯರ್ಾದಿಯ ಗಂಡನ ಮೆನಗೆ ಕರೆದುಕೊಂಡು ಹೋದಾಗ ಆರೋಪಿಯು ಎಲ್ಲರಿಗೆ ಅವಾಚ್ಯವಾಗಿ ಬೈದು ಫಿಯರ್ಾದಿಯ ಅಕ್ಕ ಇವಳ ಸೀರೆ ಇಡಿದು ಜಗ್ಗಾಡಿ ಬಿಡಿಸಲು ಬಂದ ಫಿಯರ್ಾದಿಯ ಹೊಟ್ಟೆಗೆ ಒದ್ದು, ಫಿಯರ್ಾದಿ ತಮ್ಮನಿಗೆ ಒಂದು ಕಬ್ಬಿಣದ ರಾಡಿನಿಂದ ಹೊಡೆದಿದ್ದು, ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-214/2017 ಕಲಂ 323,324,498(ಎ),354, 504 ಐಪಿಸಿ ಪ್ರಕಾರ ಗುನ್ನೆ ದಾಕಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 63/2017 ಕಲಂ 279,338,304(ಎ)ಐ.ಪಿ.ಸಿ ಮತ್ತು 187 ಐ.ಎಮ್.ವಿ ಕಾಯ್ದೆ;- ದಿನಾಂಕ: 25/06/2017 ರಂದು 10:30 ಎ.ಎಮ್.ಕ್ಕೆ ಶಖಾಪೂರ ತಾಂಡ ಕ್ರಾಸ್ ಹತ್ತಿರ ಮೃತ ಕು: ಧನರಾಜ ತಂದೆ ಟೋಪು ನಾಯಕ ಹಾಗೂ ರೋಹಿತಕುಮಾರ ಇವರು ಕೂಡಿ ತಮ್ಮ ಸೈಕಲ್ ಮೇಲೆ ತಾಂಡಾದಿಂದ ಭೀ.ಗುಡಿಗೆ ಬರುತ್ತಿರುವಾಗ ಜೇವಗರ್ಿ ಮುಖ್ಯ ರಸ್ತೆ ಕಡೆಯಿಂದ ಒಬ್ಬ ಟ್ರ್ಯಾಕ್ಟರ ಚಾಲಕ ಟ್ರ್ಯಾಕ್ಟರದಲ್ಲಿ ಕಲ್ಲುಗಳನ್ನು ತುಂಬಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡಿನ ಬಾಜು ಹೊರಟಿದ್ದ ಧನರಾಜ ಈತನ ಸೈಕಲಗೆ ಡಿಕ್ಕಿ ಹೊಡೆದಿದ್ದು ಅಪಘಾತ ಮಾಡಿ ವಾಹನ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರ ನಂಬರ ಇರುವುದಿಲ್ಲ. ಟ್ರಾಕ್ಟರ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ಅಪಘಾತದಲ್ಲಿ ಧನರಾಜನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟದ್ದು ಇರುತ್ತದೆ. ರೋಹಿತಕುಮಾರನಿಗೆ ಭಾರಿ ರಕ್ತಗಾಯವಾಗಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂಃ 279.338 ಐಪಿಸಿ;- ದಿನಾಂಕ 24/06/2017 ರಂದು ಸಾಯಂಕಾಲ 5 .00 ಪಿ.ಎಂ ಕ್ಕೆ ಲಿಂಗಸೂರು ಹರ್ಷವರ್ದನ ಆಸ್ಪತ್ರೆಯಿಂದ ಎಂ.ಎಲ್,ಸಿ ವಸೂಲಾಗದ ಮೇರೆಗೆ ನಾನು ರಾತ್ರಿ 8.00 ಪಿ,ಎಂ ಕ್ಕೆ ಆಸ್ಪತ್ರೆಗೆ ಬೇಟಿ ಮಾಡಿ ಉಪಚಾರ ಹೋಂದುತ್ತಿದ್ದ ಸದರಿ ಪಿರ್ಯಾದಿ ಹೇಳಿಕೆಯನ್ನು ಪಡೆಯಲಾಗಿ ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮತ್ತು ನಮ್ಮ ತಮ್ಮ ರಫೀಕ ಇಬ್ಬರೂ ಕೂಡಿ ನಮ್ಮ ಮೋಟರ ಸೈಕಲ ನಂ ಕೆಎ-04 ಹೆಚ್ ಕ್ಯೂ -0944 ನೇದ್ದರ ಮೇಲೆ  ದಿನಾಂಕ 23/06/2017 ರಂದು ಸಾಯಂಕಾಲ 6.30 ಪಿ,ಎಂ ಸುಮಾರಿಗೆ ಲಿಂಗಸೂರಿನಿಂದ ನಮ್ಮ ಊರಿಗೆ ಬರುವಾಗ ನಮ್ಮ ಮೋಟಾರ ಸೈಕಲ ಮೇಲೆ  ನಾನು ಮತ್ತು ನಮ್ಮ ತಮ್ಮ ಬರುತ್ತಿದ್ದು ಮೋಟಾರ ಸೈಕಲ ನಮ್ಮ ತಮ್ಮ ರಫಿಕ ಈತನು ನಡೆಯಿಸುತ್ತಿದ್ದನು. ಲಿಂಗಸೂರ- ಸುರಪೂರ ಮುಖ್ಯರಸ್ತೆಯ ಅರಳಳ್ಳಿ ಕ್ರಾಸ ಹತ್ತಿರ  ಬರುತ್ತಿದ್ದಾಗ ಎದುರಿನಿಂದ ಸುರಪೂರ ಕಡೆಯಿಂದ ಕಾರ ನಂ ಕೆಎ- 29 ಎಂ -6132 ನೇದ್ದರ ಚಾಲಕ ನರಸರಡ್ಡಿ ತಂದೆ ವೀರುಪಾಕ್ಷಪ್ಪ ಪಾಟೀಲ ಸಾ|| ಗದ್ರಟಗಿ ಈತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ  ಸೈಕಲಕ್ಕೆ ಡಿಕ್ಕಿ ಪಡಿಸಿದನು ಪರಿಣಾಮ  ನನಗೆ ಬಲಗಾಲ ಮೋಳಕಾಲ ಕೆಳಗೆ ಗುಪ್ತಗಾಯವಾಗಿ ಕಾಲು ಮರಿದಂತಾಗಿರುತ್ತದೆ. ನಮ್ಮ ತಮ್ಮನಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ, ಕಾರಣ ಮಾನ್ಯರವರು ನನಗೆ ಅಪಗಾತ ಪಡಿಸಿದ ಕಾರ ಚಾಲಕನ ಮೇಲೆ ಕ್ರಮ ಜರುಗಿಸಬೆಕು ಅಂತ ಹೇಳಿಕೆ ಕೊಟ್ಟಿದ್ದು ಸದರಿ ಹೇಳಿಕೆಯನ್ನು 8.00 ಪಿಎಂ ದಿಂದ 9.00 ಪಿಎಂ ದ ವರೆಗೆ  ಪಡೆದುಕೊಂಡು ಇಂದು ದಿನಾಂಕ 25/06/2017 ರಂದು 12.30 ಎ.ಎಂ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಪಿರ್ಯಾದಿ ಸಾರಾಂಶದ  ಮೇಲಿಂದ ಠಾಣಾ ಗುನ್ನೆ ನಂ 165/2017 ಕಲಂ 279,338 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂಃ 379 ಐಪಿಸಿ;- ದಿನಾಂಕಃ 22/06/2017 ರಂದು 02-00 ಎ.ಎಮ್ ಸುಮಾರಿಗೆ ಫಿಯರ್ಾದಿಯು ತನ್ನ ಮನೆಯ ಮುಂದೆ ನಿಲ್ಲಿಸಿದ ಹೊಂಡಾಶೈನ್ ಮೋಟರ ಸೈಕಲ ನಂ: ಕೆ.ಎ 33 ಆರ್ 0217 ಅ||ಕಿ|| 25,000/- ರೂ.ಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಫಿಯರ್ಾದಿಯು ಈ ಬಗ್ಗೆ ತನ್ನ ಮೋಟರ ಸೈಕಲ ಹುಡುಕಾಡಿ ಸಿಗಲಾರದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದರಿಂದ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 167/2017 ಕಲಂಃ 87 ಕೆ.ಪಿ ಆಕ್ಟ್;- ದಿನಾಂಕ: 25/06/2017 ರಂದು 5-15 ಪಿ.ಎಮ್ ಕ್ಕೆ ಶ್ರೀ ಶರಣಪ್ಪ ಪಿ.ಎಸ್.ಐ ಸಾಹೇಬರು 8ಜನ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು 2-45 ಪಿ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಟಿ.ಬೊಮ್ಮನಳ್ಳಿ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕಿಟ್ಟು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರು ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೀಟ ಜೂಜಾಟ ಆಡುತ್ತಿದ್ದ 8 ಜನ ಆರೋಪಿತರನ್ನು ಹಿಡಿದು, ಸದರಿಯವರಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 4500/-ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನಾ ನಂಬರ 167/2017 ಕಲಂ. 87 ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 96-2017 ಕಲಂ, 87 ಕೆ.ಪಿ.ಆ್ಯಕ್ಟ್;- ದಿನಾಂಕ: 25/06/2017 ರಂದು 6-45 ಪಿಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು 06 ಜನ ಆರೋಪಿತರ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 25/06/2017 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 3-45 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಬೂದನೂರ ಗ್ರಾಮದ ಆಸ್ಪತ್ರೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 4-45 ಪಿಎಮ್ ಕ್ಕೆ  ದಾಳಿ ಮಾಡಿ ದಾಳಿಯಲ್ಲಿ 06 ಜನ ಆರೋಪಿತರು ಮತ್ತು ಒಟ್ಟು 1530/- ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 5-00 ಪಿಎಮ್ ದಿಂದ 6-00 ಪಿಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 6-45 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು  ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-45 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 96/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 

Kalaburagi District Reported Crimes

ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ಭೀಮರೆಡ್ಡಿ ತಂದೆ ರಾಮರೆಡ್ಡಿ ಪಲ್ಲೆ ಸಾ|| ಸೋಮಪಲ್ಲಿ ಇವರ ಅಣ್ಣ ಮಲ್ಲರೆಡ್ಡಿ ತಂದೆ ರಾಮರೆಡ್ಡಿ ಇತನೊಂದಿಗೆ ನಮ್ಮೂರ ಶಾಮರೆಡ್ಡಿ ತಂದೆ ರಾಮರೆಡ್ಡಿ, ಮುಕುಂದರೆಡ್ಡಿ ತಂದೆ ನರಸಿಂಹರೆಡ್ಡಿ ಮತ್ತು ನರಸಿಂಹಲು ತಂದೆ ಮೋಗಲಯ್ಯ ಇವರುಗಳು ಹಳೇಯ ವೈಮನಸ್ಸು ಬೆಳೆಸಿಕೊಂಡಿದ್ದು ಅದೇ ವಿಷಯವಾಗಿ ಅವಾಗಾವಾಗ ಇವರುಗಳು ನಮ್ಮಣ್ಣನೊಂದಿಗೆ ಬಾಯಿಮಾತಿನ ಜಗಳತೆಗೆಯುತ್ತಿದ್ದರು, ಅಲ್ಲದೇ ನಮ್ಮ ಅಣ್ಣ ಮಲ್ಲಾರೆಡ್ಡಿ ಇತನು ನಮ್ಮೂರ ಭಿಮಪ್ಪಾ ತಂದೆ ನಾಗಪ್ಪಾ ಇತನ ಹೆಂಡತಿ ದೇವಕ್ಕಮ್ಮಾ ಇವಳೊಂದಿಗೆ ಅನೈತಿಕ ಸಂಬಂಧ ಹೋಂದಿದ್ದಾನೆ ಅಂತಾ ಭಿಮಪ್ಪಾ ಇತನು ಕೂಡ ಈಗ ಕೆಲವು ದಿವಸಗಳ ಹಿಂದೆ ನಮ್ಮ ಅಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆದು ಬೋಸುಡೀ ಮಗನ್ಯಾ ನೀನು ನನ್ನ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ನಿನಗೆ ಜೀವಂತ ಬಿಡುವದಿಲ್ಲಾ ಒಂದಲ್ಲಾ ಒಂದು ದಿನಾ ನಿನ್ನ ಹೊಡಿಸಿ ಖಲಾಸ ಮಾಡಿಸುತ್ತೇನೆ ಅಂತಾ ಬೈದಾಡುತ್ತಿದ್ದನು ಅದಕ್ಕೆ ನಮ್ಮ ಅಣ್ಣನು ನಾನು ನಿನ್ನ ಹೆಂಡತಿ ಜೋತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವದಿಲ್ಲಾ ನೀನು ಸುಮ್ಮನೇ ನನ್ನೊಂದಿಗೆ ಅನುಮಾನ ಪಡಬೇಡ ಅಂತಾ ಹೇಳುತ್ತಿದ್ದನು ಆದರೂಕೂಡ ಸದರಿ ಭಿಮಪ್ಪಾ ಇತನು ಇನ್ನೂಳಿದ 3 ಜನರೊಂದಿಗೆ ಸೇರಿಕೊಂಡು ನಮ್ಮಣ್ಣನನ್ನು ಕೊಲೆಮಾಡಲು ಹೊಂಚು ಹಾಕುತ್ತಿದ್ದರು.ದಿನಾಂಕ 24-06-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ನಮ್ಮೂರ ಹನುಮಾನ ಗುಡಿಯ ಹತ್ತೀರ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತುಕೊಂಡಿದ್ದಾಗ ನಮ್ಮೂರ ಜಗದೀಶ ಇವರ ಮನೆಯ ಮುಂದಿನ ರಸ್ತೇಯ ಮೇಲೆ ಭಿಮಪ್ಪಾ ತಂದೆ ನಾಗಪ್ಪಾ ಇತನು ನಮ್ಮ ಅಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆಯುತ್ತಿದ್ದಾನೆ ಅಂತಾ ವಿಷಯ ಗೊತ್ತಾಗಿ ನಾನು ಅಲ್ಲಿಗೆ ಹೊಗಿ ನೋಡಲಾಗಿ ಅಲ್ಲಿ ನಮ್ಮೂರ 1) ಭಿಮಪ್ಪಾ ತಂದೆ ನಾಗಪ್ಪಾ ನಾಟೇಕರ 2) ಶಾಮರೆಡ್ಡಿ ತಂದೆ ರಾಮರೆಡ್ಡಿ 3) ಮುಕುಂದರೆಡ್ಡಿ ತಂದೆ ನರಸಿಂಹರೆಡ್ಡಿ 4) ನರಸಿಂಹಲು ತಂದೆ ಮೋಗಲಯ್ಯ ಹೀಗೆಲ್ಲರೂ ಕೂಡಿಕೊಂಡು ನಮ್ಮಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆಯುತ್ತಾ ಭಿಮಪ್ಪಾ ತಂದೆ ನಾಗಪ್ಪಾ ಇತನು ನಮ್ಮಣ್ಣನಿಗೆ ಬೋಸುಡೀ ಮಗನ್ಯಾ ನನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ ನಿನಗೆ ಇವತ್ತು ಬಿಡುವದಿಲ್ಲಾ ಖಲಾಸ್ ಮಾಡಿಸುತ್ತೇನೆ ಅಂತಾ ಬೈಯುತ್ತಾ ಅಲ್ಲೇ ಇದ್ದ ಶಾಮರೆಡ್ಡಿ ಮತ್ತು ಮುಕುಂದರೆಡ್ಡಿ ಹಾಗು ನರಸಿಂಹಲು ಇವರಿಗೆ ಈ ಬೋಸುಡೀ ಮಗನಿಗೆ ಹೋಡೆದು ಕೊಲೆ ಮಾಡಿರಿ ಅಂತ ಹೇಳುತ್ತಿದ್ದಾಗ ಶಾಮರೆಡ್ಡಿ ಇತನು ಈ ಬೋಸುಡಿ ಮಗ ನಮ್ಮೊಂದಿಗೂ ಆವಾಗಾವಾಗ ಜಗಳತೆಗೆಯುತ್ತಾನೆ ಇವನಿಗೆ ಇವತ್ತು ಒಂದು ಗತಿ ಕಾಣಿಸಬೇಕು ಅಂತಾ ಅಲ್ಲೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನಮ್ಮಣ್ಣ ಮಲ್ಲಾರೆಡ್ಡಿ ಇತನ ತಲೆಯ ಮೇಲೆ ಹೋಡೆದು ಭಾರಿ ರಕ್ತಗಾಯಪಡಿಸಿದ್ದು ಅಲ್ಲದೇ ಭಿಮಪ್ಪಾ ತಂದೆ ನಾಗಪ್ಪಾ ಮತ್ತು ಮುಕುಂದರೆಡ್ಡಿ ಇವರುಗಳು ಈ ಬೋಸುಡೀ ಮಗನಿಗೆ ಇವತ್ತು ಜೀವಂತ ಬೀಡಬೇಡದು ಅಂತಾ ಕಟ್ಟಿಗೆಯಿಂದ ಮೈಕೈಗೆ ಹೋಡೆಬಡೆಮಾಡಿದ್ದು ನರಸಿಂಹಲು ತಂದೆ ಮೋಗಲಯ್ಯ ಇತನು ಕೈಯಿಂದ ಮೈಕೈಗೆ ಹೋಡೆಬಡೆಮಾಡುತ್ತಿದ್ದಾಗ ಅಲ್ಲೇ ಇದ್ದ ನಾನು ಮತ್ತು ನಮ್ಮೂರ ಬಸಪ್ಪಾ ತಂದೆ ಕಿಷ್ಟಪ್ಪಾ ಯಾದವ್, ದೇವಿಂದ್ರಪ್ಪಾ ಜೋಗಿ, ಮೋಗಲಪ್ಪಾ ತಂದೆ ಮಲ್ಲಪ್ಪಾ ನಾಟೇಕರ ಮತ್ತು ಹುಸೇನಪ್ಪಾ ತಂದೆ ಶ್ಯಾಮಪ್ಪಾ ಹರಿಜನ ಇತರರು ಸೇರಿ ನಮ್ಮ ಅಣ್ಣನಿಗೆ ಹೋಡೆಯುವದನ್ನು ಬಿಡಿಸಿಕೊಂಡಿದ್ದು ನಮ್ಮ ಅಣ್ಣನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಬೇವಾಸಾಗಿ ಬಿದ್ದಿದ್ದನ್ನು ನೋಡಿ ಅವನು ಸತ್ತು ಹೋಗಿದ್ದಾನೆ ಅಂತಾ ತಿಳಿದು ಅವರೆಲ್ಲರೂ ಅಲ್ಲಿಂದ ಹೋರಟು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಪಟವಾರಿ ಸಾ|| ಕೆರಳ್ಳಿ, ತಾ|| ಚಿಂಚೋಳಿ ರವರ ತಮ್ಮನಾದ ರಾಜಕುಮಾರ ತಂದೆ ಸಿದ್ದಣ್ಣ ಪಟವಾರಿ ಸಾ|| ಕೆರಳ್ಳಿ, ತಾ|| ಚಿಂಚೋಳಿ ರವರು ದಿನಾಂಕ 25-06-2017 ರಂದು ಮಧ್ಯಾಹ್ನ ಸೇಡಂಗೆ ಕೆಲಸಕ್ಕೆಂದು ಬಂದು ಸೇಡಂ ಚಿಂಚೋಳಿ ರೋಡಿನ ಮೇಲೆ ಸೇಡಂ ಬಸ್ಸ ಡಿಪೋ ಎದುರುಗಡೆ ಹೋಗುತ್ತಿರುವಾಗ ಬಸ್ಸ ನಂ ಕೆಎ 32 ಎಫ್ 1179 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ಸನ್ನು ಅತಿ ವೇಗ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನ್ನ ತಮ್ಮನಗೆ ಅಪಘಾತ ಮಾಡಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.