Police Bhavan Kalaburagi

Police Bhavan Kalaburagi

Tuesday, December 8, 2020

BIDAR DISTRICT DAILY CRIME UPDATE 08-12-2020

 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 08-12-2020

ಜನವಾಡಾ ಪೊಲೀಸ್ ಠಾಣೆ ಗುನ್ನೆ ನಂ 80/2020 ಕಲಂ 87 ಕೆ ಪಿ ಕಾಯ್ದೆ :-

ದಿನಾಂಕ 07/12/2020 ರಂದು 15:30 ಗಂಟೆಗೆ ಚಾಂಬೋಳ ಗ್ರಾಮದ ವೀರಭದೇಶ್ವರ ಪ್ರೌಢ ಶಾಲೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಅಂದರ ಬಾಹರ ಇಸ್ಪಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅಪಾದಿತರಾದ 1) ಮಹಾದೇವ ತಂದೆ ಸುಭಾಷ ಪಾಟೀಲ್ ಸಾ || ಕಂದಗೂಳ 2) ಅಜಯ ತಂದೆ ಭೀಮಣ್ಣಾ ಕೋಳಿ ಸಾ || ಚಾಂಬೋಳ 3) ದೌಲತ ತಂದೆ ಪಾಂಡುರಂಗ್ ಕೋಳೆಕರ ಸಾ|| ಚಾಂಬೋಳ 4) ಲಾಲಚಂದ ತಂದೆ ಶೀವಕುಮಾರ ಕೋಳಿ ಸಾ|| ಚಾಂಬೋಳ 5) ಸುರೇಶ ತಂದೆ ವೀರಶೆಟ್ಟಿ ಹೂಗಾರ ಸಾ|| ಚಾಂಬೋಳ 6) ಅನೀಲ ತಂದೆ ಅಂಬಪ್ಪಾ ವಗ್ಗೆ ಸಾ|| ಕಂದಗೂಳ 7) ಸಂತೋಷ ತಂದೆ ಗೋಪಾಳರಾವ ಮಾಲಿಪಾಟೀಲ್ ಸಾ|| ಕಂದಗೂಳ 8) ವಿನಾಯಕ ತಂದೆ ನರಸಿಂಗರಾವ ಕಾಳೆ ಸಾ|| ಚಾಂಬೋಳ ರವರ ಜೂಜಾಟದ ಮೇಲೆ 17:50 ಗಂಟೆಗೆ ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 29,150/- ರೂ ಹಾಗು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ ನಂ. 90/2020 ಕಲಂ 87 ಕೆ.ಪಿ. ಕಾಯ್ದೆ :-

 

 ದಿನಾಂಕ:06/12/2020 ರಂದು 22:00 ಗಂಟೆಗೆ ಪಿಎಸ್ಐ ರವರು  ಠಾಣೆಯಲ್ಲಿರುವಾಗ ಬಾಜೋಳಗಾ ಕ್ರಾಸ್ ಹತ್ತಿರ ಇರುವ ಲೊಕೇಶ ತಂದೆ ಅಶೋಕರಾವ ಭಾಲ್ಕೆ ಸಾ-ಮದಕಟ್ಟಿ ರವರ ಪೈನಾನ್ಸ್ ಅಂಗಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಪರೇಲ್ ಎಂಬ ಮೂರು ಎಲೆಯ ಇಸ್ಪೀಟ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಅವರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ಅಭಿಶೇಕ ತಂದೆ ಚಂದ್ರಕಾಂತ ಮೀರಜದಾರ ಸಾ-ಮದಕಟ್ಟಿ  2) ಪರಮೇಶ್ವರ ತಂದೆ ಶ್ರೀಧರ ಬಿರಾದಾರ ಸಾ-ಮಾವಿನಹಳ್ಳಿ 3) ಸಂಗಮೇಶ ತಂದೆ ವಿಶ್ವನಾಥ ಮೂಗನುರೆ ಸಾ-ಮದಕಟ್ಟಿ 4) ಸಂತೋಷ ತಂದೆ ಕಾಶಿನಾಥ ಹೂಗಾರ ಸಾ-ಮದಕಟ್ಟಿ 5) ಕ್ರೀಷ್ಣಾ ತಂದೆ ರಮೇಶ ಪಾಂಡೆ ಸಾ-ಜನವಾಡ 6) ಅಮೀರೊದ್ದಿನ ತಂದೆ ಪಾಷಾಮೀಯಾ ಮೌಜಲ ಸಾ-ಮದಕಟ್ಟಿ 7) ಅಶೋಕ ತಂದೆ ಮಾರುತಿ ಮಾಣೆ ಸಾ-ಮದಕಟ್ಟಿ 8) ಮಸ್ತಾನ ತಂದೆ ಮೈನೊದ್ದಿನ ಭಂಡಾರಿ ಸಾ-ಮದಕಟ್ಟಿ 9) ಆಶೀಶ ತಂದೆ ಪಾಂಡುರಂಗ ಮೀರಜದಾರ ಸಾ-ಮದಕಟ್ಟಿ 10) ಅಸ್ಲಂ ತಂದೆ ಗುಲಾಬ ಷಾ ಫಕೀರ ಸಾ-ಮಾವಿನಹಳ್ಳಿ ಅಂತ ತಿಳಿಸಿದ್ದು, ನಂತರ ಸದರಿ ಪಂಚರ ಸಮಕ್ಷಮ ಆಟದಲ್ಲಿದ್ದ ಒಟ್ಟು ಹಣ 35,300/- ರೂಪಾಯಿ ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 150/2020 ಕಲಂ 379 ಐಪಿಸಿ :-

ದಿನಾಂಕ 07/12/2020 ರಂದು 18:00 ಗಂಟೆಗೆ ಅರ್ಜಿದಾರರಾದ ಶ್ರೀ ರಮೇಶ ತಂದೆ ಗುರುನಾಥ ಪೊಲೀಸ್ ಪಾಟೀಲ್ ವಯ 52 ವರ್ಷ ಜಾತಿ ಲಿಂಗಾಯತ // ಲಾರಿ ಚಾಲಕ ಸಾ// ಕಲ್ಲೂರ ತಾ// ಹುಮನಾಬಾದ ರವರು ಠಾಣೆಗೆ ಹಾಜರಾಗಿ ನೀಡಿದರ ದೂರಿನ ಸಾರಾಂಶವೆನೆಂದರೆ ಇವರ ತಮ್ಮನಾದ ಮಲ್ಲಿಕಾರ್ಜುನ ತಂದೆ ಗುರುನಾಥ ಪೊಲೀಸ್ ಪಾಟೀಲ್ ರವರ ಹತ್ತಿರ ಒಂದು ಲಾರಿ ನಂ ಕೆಎ-39/5254 ಇರುತ್ತದೆ. ಅದರ ಚೆಸ್ಸಿ ನಂ UFR235419 ಮತ್ತು ಅದರ ಇಂಜಿನ್ ನಂ UFH411237 ಅದರ ಮಾಡಲ್ 2006 ಇರುತ್ತದೆ. ಅದರ .ಕಿ. 4 (ನಾಲ್ಕು) ಲಕ್ಷ ರೂಪಾಯಿ ಇರುತ್ತದೆ.  ಹೀಗಿರುವಲ್ಲಿ ದಿನಾಂಕ 27/11/2020 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಲಾರಿಯ ಬಾಡಿ ಕೆಲಸ ಮಾಡಿಸುವಗೋಸ್ಕರ ಸಸ್ತಾಪೂರ ಬಂಗ್ಲಾ ಹತ್ತಿರ ಇರುವ ಆಟೋ ನಗರದಲ್ಲಿ ಚಾಂದ ತಂದೆ ಮಹೇಬೂಬಸಾಬ ಬಾಡಿ ಬಿಲ್ಡರ್ ಈತನ ಗ್ಯಾರೇಜ್ ಅಂಗಡಿಯಲ್ಲಿ ಲಾರಿ ತಂದು ನಿಲ್ಲಿಸಿರುತ್ತೇನೆ ಮೆಕಾನಿಕ ಚಾಂದ ರವರ ನನಗೆ ತಿಳಿಸಿದ್ದೆನೆಂದರೆ ನಿಮ್ಮ ಲಾರಿ ನಮ್ಮ ಗ್ಯಾರೇಜದಲ್ಲಿ ಬಿಟ್ಟು ಲಾರಿಯ ಚಾವಿ ನನ್ನ ಕೈಯಲ್ಲಿ ಕೊಟ್ಟು ತಾನು ಲಾರಿಯ ಕೆಲಸ ಮಾಡಿಕೊಡುವದಾಗಿ ತಿಳಿಸಿರುತ್ತಾರೆ ನಂತರ ನನ್ನ ಲಾರಿ ಗ್ಯಾರೇಜದಲ್ಲಿ ಬಿಟ್ಟು ರಾತ್ರಿ 8 ಗಂಟೆಯ ಸುಮಾರಿಗೆ ಊರಿಗೆ ಹೋಗಿರುತ್ತಾರೆ.  ಹೀಗಿರುವಲ್ಲಿ ದಿನಾಂಕ 28/11/2020 ರಂದು ಮುಂಜಾನೆ 08:00 ಗಂಟೆಗೆ ಲಾರಿಯ ಕೆಲಸ ಮಾಡುವ ಚಾಂದ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ಲಾರಿ ಗ್ಯಾರೇಜ್ ಹತ್ತಿರ ಇರುವುದಿಲ್ಲಾ ಅಂತಾ ತಿಳಿಸಿದನು. ಹೋಗಿ ನೋಡಿದಾಗ ಲಾರಿ ಇರುವುದಿಲ್ಲ ದಿನಾಂಕ 27/11/2020 ರಂದು ರಾತ್ರಿ 8 ಗಂಟೆಯಿಂದ ದಿನಾಂಕ 28/11/2020 ರಂದು ಮುಂಜಾನೆ 08:00 ಗಂಟೆಯ ಮಧ್ಯೆದ ಅವಧಿಯಲ್ಲಿ ಲಾರಿ ನಂ ಕೆಎ-39/5254 ನೆದ್ದು ಚಾಂದ ಗ್ಯಾರೇಜನ ಹತ್ತಿರ ಖುಲ್ಲಾ ಜಾಗೆಯಲ್ಲಿ ನಿಲ್ಲಿಸಿದ ಲಾರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವುಮಾಡಿಕೊಂಡು ಹೋದ ನನ್ನ ಲಾರಿ ಎಲ್ಲಾ ಕಡೆ ಹುಡುಕಾಡಿ ನನ್ನ ತಮ್ಮನಿಗೆ ವಿಚಾರಿಸಿಕೊಂಡು ಠಾಣೆಗೆ ಬರಲು ತಡವಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.