Police Bhavan Kalaburagi

Police Bhavan Kalaburagi

Friday, May 1, 2020

BIDAR DISTRICT DAILY CRIME UPDATE 01-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-05-2020
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 59/2020 ಕಲಂ 353, 332 ಜೊತೆ 34 ಐಪಿಸಿ :-

ದಿನಾಂಕ: 30/04/2020 ರಂದು 1300 ಗಂಟೆಗೆ ಫಿರ್ಯಾದಿ ಶ್ರೀಮತಿ ಗೀತಾ ಗಂಡ ಸುನೀಲ್ ಬುಯೆ ವಯಸ್ಸು:32 ವರ್ಷ ಉ:ಆಶಾ ಕಾರ್ಯಕರ್ತರು ಸಾ:ಹೋಸಪೇಟಗಲ್ಲಿ ಬಸವಕಲ್ಯಾಣ ರವರು ಠಾಣೆಯಲ್ಲಿ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನಂದರೆ ಫಿಯರ್ಾದಿ ರವರು ಪ್ರಾಥಮಿಕ ಆರೋಗ್ಯ ಕೇಂದ್ರ ಬಸವಕಲ್ಯಾಣದಲ್ಲಿ ಆಶಾ ಕಾರ್ಯಕತರ್ೆ ಯಾಗಿ ವಾರ್ಡ ಸಂಖ್ಯೆ:14 ಕೈಕಾಡಿಗಲ್ಲಿಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದು  ದಿನಾಂಕ:29/04/2020 ರಂದು   ಕಾರ್ಯಕ್ಷೇತ್ರದಲ್ಲಿ  ಕೋವಿಡ್-19ಸಮೀಕ್ಷೆಯ ಕರ್ತವ್ಯ ನಿರ್ವಹಿಸಿ ಸಹಪಾಠಿ ಶ್ರೀಮತಿ ಸುನೀತಾ ಗಂಡ ವಿಶಾಲ ಆವಸ್ತಿ ರವರ ಜೋತೆಗೆ ನಡೆದು ಕೊಂಡು ಮನೆಗೆ ಹೋಗುತ್ತಿರುವಾಗ ಹೋಳಕುಂದೆ ಕ್ರಾಸ ಬಸವೇಶ್ವರ ದೇವಸ್ಥಾನದ ಕಾಮನ ಹತ್ತಿರ ಸಮಯ: 1520 ಗಂಟೆಗೆ 2 ಜನ ದ್ವಿ ಚಕ್ರವಾಹನದ ಮೇಲೆ ಬಂದು ಹಲ್ಲೆ ಮೇಲೆ ಮಾಡಿ ಪರಾರಿಯಾಗಿರುತ್ತಾರೆ. ದೂರದಿಂದ ದ್ವಿಚಕ್ರವಾಹನ ನೋಡಲು ಆದರ ಸಂಖ್ಯೆ:4141 ಇರುತ್ತದೆ ಮತ್ತು ದಾದಾ ಎಂದು ದ್ವಿ ಚಕ್ರವಾಹನದ ಮೇಲೆ ಹೆಸರು ಕಾಣಿಸಿದ್ದು  ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು ಇರುತ್ತದೆ. ಮುಖ ಗುರುತಿಸಲು ಕಷ್ಟವಾಯಿತು. ಸದರಿ ಅಪರಿಚಿತ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಎಂಬ ದೂರಿನ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 30/04/2020 ರಂದು 1200 ಗಂಟೆಗೆ ಠಾಣೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ  ಜೋನೆಕೇರಿ ಗ್ರಾಮದ ಪತ್ರಿ ಸ್ವಾಮಿ ಮಠದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಕುಳಿತು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ  1245 ಗಂಟೆಗೆ ಪತ್ರಿ ಸ್ವಾಮಿ ಕಲ್ಯಾಣ ಮಠದ ಹತ್ತಿರ ದೂರದಲ್ಲಿ ಜೀಪ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಕೇಲವು ಜನರು ಗೋಲಾಗಿ ಕುಳಿತು ಇಸ್ಪಟ ಎಲೆಗಳಿಂದ ಅಂದರ ಬಾಹಾರ ನಸಿಬಿನ ಜೂಜಾಟ ಆಡುತ್ತಿದ್ದಾಗ ಖಚಿತ ಪಡಿಸಿಕೊಂಡು ಅವರ ಮೇಲೆ  ದಾಳಿ ಮಾಡಿ ಆರೋಪಿತರಾದ 1) ಅರುಣಕುಮಾರ ತಂದೆ ರಾಜಕುಮಾರ ದಾಬಕೆ ವ/ 22 ವರ್ಷ ಜಾ/ ಲಿಂಗಾಯತ ಉ/ ಕೂಲಿ ಸಾ/ ಜೋನೆಕೇರಿ ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 400/- ರೂ ಹಣ ಸಿಕ್ಕಿದ್ದು 2) ಪ್ರಭುರಾವ ತಂದೆ ಶಿವರಾಯ ಪಾಟೀಲ್ ವ/ 60 ಷರ್ವ ಜಾ/ ಲಿಂಗಾಯತ ಉ/ ಒಕ್ಕಲುತನ ಸಾ. ಜೋನೇಕೇರಿ   ಈತನ ಅಂಗ ಝಡ್ತಿ ಮಾಡಿದ್ದು ಅವನ ಹತ್ತಿರ 300 /- ರೂ ಹಣ ಸಿಕ್ಕಿದ್ದು. ಮಧ್ಯದಲ್ಲಿದ್ದ ಹಣ 1400/- ಹೀಗೆ ಒಟ್ಟು 2100/- ಹಣ ರೂ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡ ತನಿಕೆ ಕೈಗೋಳ್ಳಲಾಗಿದೆ.

 ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2020 ಕಲಂ   273, 284, ಐಪಿಸಿ ಮತ್ತು ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-
 ದಿನಾಂಕ: 30/04/2020 ರಂದು 0630 ಗಂಟೆಗೆ ಪಿಎಸ್ಐ ರವರು  ಭಾಲ್ಕಿಯಲ್ಲಿ ಇದ್ದಾಗ ಸೇವಾನಗರ ತಾಂಡದ ಶೇಶರಾವ ಇವರ ಮನೆಯ ಹಿಂದೆ ಖುಲ್ಲಾ ಸ್ಥಳದಲ್ಲಿ ಝಮಕಾಬಾಯಿ ಸಿ. ಪವಾರ ಸಾ: ಸೇವಾನಗರ ತಾಂಡ ಇವರು ಅನಧಿಕೃತವಾಗಿ ಕಲಬರಿಕೆ ಮಾಡಿದ ಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತವಾದ ಬಾತ್ಮಿ  ಬಂದ ಮೇರೆಗೆ ಸಿಬ್ಬಂದಿಯೊಂದಿಗೆ 0745 ಗಂಟೆಗೆ ಸೇವಾನಗರ ತಾಂಡಾದಿಂದ ಸ್ವಲ್ಪ ಅಂತರದಲ್ಲಿ     ಶೇಶರಾವ ಇವರ ಮನೆಯ ಹಿಂದೆ ಝಮಕಾಬಾಯಿ ಸಿ. ಪವಾರ ಸಾ: ಸೇವಾನಗರ ತಾಂಡ ಇವರು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾನದಲ್ಲಿ ಭಟ್ಟಿ ಸಾರಾಯಿ ತುಂಬಿ ತಮ್ಮ ವಶದಲ್ಲಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿರುವುದನ್ನು ನಾವು ಖಚಿತ ಪಡಿಸಿಕೊಂಡು   ದಾಳಿ ಮಾಡಿ   ಸಾರಾಯಿಯ ಅಂದಾಜು ಬೆಲೆ 300/- ರೂಪಾಯಿ ಇರುತ್ತದೆ  ಹಾಗು ಉಳಿದ 5 ಲೀಟರ ಭಟ್ಟಿ ಸಾರಾಯಿ ಕ್ಯಾನ್ ಸಮೆತವಾಗಿ ಮತ್ತು ಸ್ಥಳದಲ್ಲಿ ಸಾರಾಯಿ ಮಾರಾಟ ಮಾಡಲು ಬಳಸುವ ಎರಡು ಪ್ಲಾಸ್ಟಿಕ ಗ್ಲಾಸಗಳನ್ನು ಪ್ರಕರಣದಲ್ಲಿ ಪುರಾವೆ ಕುರಿತು ಜಪ್ತಿ ಮಾಡಿಕೋಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
 ಭಾಲ್ಕಿ ಗ್ರಾಮೀಣ ಠಾಣೆ ಠಾಣೆ ಅಪರಾಧ ಸಂಖ್ಯೆ 56/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ 273, 284 ಐಪಿಸಿ :-.
ದಿನಾಂಕ: 30/04/2020  ರಂದು ನಾನು 1600 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ    ಭಾತಂಬ್ರಾ ಗ್ರಾಮದಲ್ಲಿ ಸರಕಾರಿ ಶಾಲೆಯ ಹತ್ತಿರ   ಒಬ್ಬ ವ್ಯಕ್ತಿ  ಒಂದು ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಇಟ್ಟುಕೊಂಡು ಮಾರಾಟ ಮಾಡುತಿದ್ದಾನೆ ಅಂತ ಖಚೀತ ಬಾತ್ಮಿ ಮೇರೆಗೆ  ಸಿಬ್ಬಂದಿಯೊಂದಿಗೆ  ಭಾತಂಬ್ರಾ ಭವಾನಿ ಮಂದಿರ ಹತ್ತಿರ  1630  ಗಂಟೆಗೆ ಸರಕಾರಿ ಶಾಲೆಯ ಹತ್ತಿರ ಹೋಗಿ  ಮರೆಯಾಗಿ ನಿಂತು ನೊಡಲು ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು 20 ಲೀಟರ ನಿರೀನ  ಪ್ಲಾಸ್ಟಿಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಕುಳಿತಿದನ್ನು  ನೊಡಿ ಆತನ ಮೇಲೆ 1645  ಗಂಟೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ   ಅನೀಲಕುಮಾರ ತಂದೆ ಬಾಬುರಾವ ಮಡಿವಾಳ ವಯ 42 ವರ್ಷ ಜಾ; ಮಡಿವಾಳ  ; ಡ್ರೈವರ ಸಾ; ಭಾತಂಬ್ರಾ ಅಂತ ಇತನ್ನನ್ನು ಹಿಡಿದು ಆತನ ಹತ್ತಿರ ಇದ್ದ ಕ್ಯಾನ ನೊಡಲು 20 ಲೀಟರ ನೀರಿನ ಪ್ಲಾಸ್ಟೀಕ  ಕ್ಯಾನ  ಇದ್ದು ಅದನ್ನು ನೊಡಲು ಅದರಲ್ಲಿ ಸರಾಯಿ ವಾಸನೆ ಬರುತಿದನ್ನು ಕಂಡು ಸದರಿಯವನಿಗೆ ಪ್ಲಾಸ್ಟೀಕ ಕ್ಯಾನದಲ್ಲಿ ಎನು ಇದೆ ಅಂತ ವಿಚಾರಿಸಿದಾಗ ಇದರಲ್ಲಿ ಕಲಬರಕೆ ಸರಾಯಿ (ಕಳ್ಳಭಟ್ಟಿ ಸರಾಯಿ ) ಇರುತ್ತದೆ ಅಂತ ತಿಳಿಸಿದನು. ಈ ಸರಾಯಿ ಎಲ್ಲಿಂದ ತಂದಿದಿಯಾ ಅಂತ ವಿಚಾರಿಸಿದಾಗ ಕಾಳ ಸಂತೆಯಲ್ಲಿ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ತೆಗೆದುಕೊಂಡು ಬಂದು  ಒಂದು ಗ್ಲಾಸ್ ಸರಾಯಿ  10 ರೂಪಾಯಿಗೆ ಮಾರಾಟ ಮಾಡುತ್ತೇನೆ ಅಂತ ತಿಳಿಸಿದನು.   . ಸದರಿ ಪ್ಲಾಸ್ಟೀಕ ಕ್ಯಾನದಲ್ಲಿದ್ದ ಕಳ್ಳಭಟ್ಟಿ ಸರಾಯಿ ಪರಿಶೀಲಿಸಿ ನೋಡಲು  ಕ್ಯಾನದಲ್ಲಿ ಅಂದಾಜು 20  ಲೀಟರದಷ್ಟು  ಕಳ್ಳಭಟ್ಟಿ ಸರಾಯಿ ಇದ್ದು ಪ್ರತಿಯೊಂದು ಲೀಟರಿನ ಸರಾಯಿ ಅ;ಕಿ; 100/- ರೂ ಹೀಗೆ ಒಟ್ಟು 20 ಲೀಟರ ಸರಾಯಿ ಅ;ಕಿ, 2000/- ರೂ ಬೇಲೆ ಬಾಳುವದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.