Police Bhavan Kalaburagi

Police Bhavan Kalaburagi

Friday, August 14, 2020

BIDAR DISTRICT DAILY CRIME UPDATE 14-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-08-2020

 

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 92/2020 ಕಲಂ 302 ಐಪಿಸಿ :-

ದಿನಾಂಕ 13/08/2020 ರಂದು 21;00 ಗಂಟೆಗೆ ಫಿರ್ಯಾದಿ ಶ್ರೀ ನಿಲೇಶ ತಂದೆ ಮಾದವರಾವ ಕುಲಕರ್ಣಿ ಸಾ: ಸಿ.ಎಮ.ಸಿ ಕಾಲೋನಿ ಮೈಲೂರ ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯು ಬೀದರ ಝೀರಾ ಕನವೆನಷನ್ ಹಾಲದಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿದ್ದು ಇವರ ಕನವೆನಷನ್ ಹಾಲಿನ ಹಿಂದುಗಡೆ ಕಂಪೌಂಡಗೆ ಹತ್ತಿ ಚಿಕ್ಕಪೇಟದಿಂದ ಗುರುದ್ವಾರಾ ಕಡೆಗೆ ಹಾಯ್ದು ಹೋಗುವ ರಸ್ತೆಯಿಂದ ಶಿವಮಂದಿರ ದಿಂದ ಕೆ.ಹೆಚ.ಬಿ ಕಾಲೋನಿ ಕಡೆಗೆ ಬರುವ ರೋಡ ಇರುತ್ತದೆ.   ಝಿರಾ ಕನವಿನಷನ್ ಹಾಲದಲ್ಲಿ ಬಾಬುಸಿಂಗ ಅಂತಾ ವಾಚಮೆನ ಇರುತ್ತಾರೆ.  ಹೀಗಿರುವಲ್ಲಿ   ದಿನಾಂಕ 13/08/2020 ರಂದು ಅಂದಾಜು ಸಾಯಂಕಾಲ 6;13 ಗಂಟೆ ಸುಮಾರಿಗೆ   ವಾಚಮೆನ ಆದ ಬಾಬುಸಿಂಗ ಇತನು   ಫೊನ ಮಾಡಿ ತಿಳಿಸಿದೆನೆಂದರೆ,   ಕನವೆನಷನ್ ಹಾಲ ಕಂಪೌಂಡ ಗೊಡೆಯ ಪಕ್ಕದಲ್ಲಿ ಗಣೇಶ ಮಂದಿರ ಹಾಗೂ ಶಿವಮಂದಿರ ರೋಡಿನ ಬದಿಯಲ್ಲಿ ಒಂದು ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿರುತ್ತದೆ ಅಂತಾ ತಿಳಿಸಿದ ಕೂಡಲೇ  ಸ್ಥಳಕ್ಕೆ ಬಂದು  ನೋಡಲು ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು ವಯ 40-45 ವಯಸ್ಸಿನ ವ್ಯಕ್ತಿಯನ್ನು ಯಾರೋ ಅಪರಿಚಿತರು  ು ದಿನಾಂಕ 13/08/2020 ರಂದು ಬೆಳಿಗ್ಗೆ 05;00 ಗಂಟೆಯಿಂದ ಸಾಯಂಕಾಲ 6;00 ಗಂಟೆಯ ಮದ್ಯ ಅವಧಿಯಲ್ಲಿ ಯಾವುದೋ ದುರುದ್ದೇಶದಿಂದ ಸದರಿ ವ್ಯಕ್ತಿಯ ಕುತ್ತಿಗೆಗೆ ಬೆಲ್ಟನಿಂದ ಸುತ್ತಿ ಕೊಲೆ ಮಾಡಿ ಬಿಸಾಡಿರುತ್ತಾರೆ. ಸದರಿ ಮೃತ ದೇಹವು ಬೋರಲಾಗಿ ಬಿದ್ದಿದ್ದು ಮೈಮೇಲೆ ಒಂದು ನೀಲಿ ಬಣ್ಣದ ಹೂವಿನ ಚಿತ್ರಗಳು ಇರುವ ಶರ್ಟ, ನಾಸಿ ಬಣ್ಣದ ಅಂಡರವೇರ ಫೀಕಾಕ ನೀಲಿ ಬಣ್ಣದ ಝೀನ್ಸ ಪ್ಯಾಂಟ ಇದ್ದು ಸೊಂಟದಿಂದ ತೊಡೆಯ ವರೆಗೆ ಕಳಚಿದ್ದು ಇರುತ್ತದೆ. ಕುತ್ತಿಗೆಯ ಮೇಲೆ ಬೆಲ್ಟದಿಂದ ಬಿಗಿದು ಕೊಲೆ ಮಾಡಿದ್ದು ಇರುತ್ತದೆ.  ಪ್ರಕರಣ ದಾಖಲಿಸಿ ತನಿಖೆ ಕೈಕೋಳ್ಳಲಾಗಿದೆ.

ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 62/2020 ಕಲಂ 379 ಐಪಿಸಿ :-       

ದಿನಾಂಕ 13-08-2020 ರಂದು 1215 ಗಂಟೆಗೆ ಫಿರ್ಯಾದಿ ಶ್ರೀ ವೆಂಕಟ ತಂದೆ ವೈಜಿನಾಥ ಜಾಧವ ವಯ: 50 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಅಟ್ಟರಗಾ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಂಶವೆನೆಂದರೆ.  ಫೀರ್ಯಾದಿಯು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಇವರ  ಬಳಿ ಎರಡು ಆಕಳು ಮತ್ತು ಅವುಗಳ  ಕರುಗಳು ಹಾಗೂ  ಒಂದು ಎಮ್ಮೆ ಸೇರಿ ಒಟ್ಟು 06 ದನಗಳು ಇರುತ್ತವೆ. ಸದರಿ ದನಗಳನ್ನು ಇವರ   ಶಿವಾರದಲ್ಲಿರುವ   ಹೊಲ ಸವರ್ೇ ನಂ 35 ರಲ್ಲಿ ದಿನಾಲು ಕಟ್ಟುತ್ತಿದ್ದು ದಿನಾಂಕ: 07/08/2020 ರಂದು   ದನಗಳನ್ನು ಹೊಲದಲ್ಲಿ ಮೇಯಿಸಿ ಸಾಯಂಕಾಲ ಹೊಲದಲ್ಲಿ ಇರುವ  ತಗಡದ ಶೆಡ್ಡಿನ ಮುಂದೆ  ಕಟ್ಟಿದ್ದು  ಹೊಲದಿಂದ ಊಟಕ್ಕೆಂದು ರಾತ್ರಿ 8:00 ಗಂಟೆಗೆ ಮನೆಗೆ ಬಂದಿದ್ದು ಇರುತ್ತದೆ.  ನಂತರ ಮರಳಿ ದಿನಾಂಕ: 08/08/2020 ರಂದು ನಸುಕಿನ ಜಾವ 0400  ಗಂಟೆಗೆ   ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿ ತಗಡದ ಶೆಡ್ಡಿನ ಮುಂದೆ ಖುಲ್ಲಾಜಾಗೆಯಲ್ಲಿ ಕಟ್ಟಿದ  ಎಮ್ಮೆ ಇದ್ದಿರಲಿಲ್ಲ.   ಅಂದಾಜು 10 ವರ್ಷದ್ದು, ಕರಿಬೂದು ಬಣ್ಣದು ಅಂದಾಜು ಕಿ: 40,000/- ರೂ ಇರುತ್ತದೆ.  ಸದರಿ ನನ್ನ ಎಮ್ಮೆಯ ಹಗ್ಗ ಕಟ್ಟಿದ ಜಾಗದಿಂದ ಹಗ್ಗ ಕತ್ತರಿಸಿ   ಎಮ್ಮೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಧನ್ನೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 114/2020 ಕಲಂ 457, 380 ಐಪಿಸಿ :-

ದಿನಾಂಕ 13/08/2020 ರಂದು  1700  ಗಂಟೆಗೆ ಫಿರ್ಯಾದಿ ಬಾಲಾಜಿ ತಂದೆ ಶ್ರೀಪತರಾವ ಕರಡ್ಯಾಳೆ ವಯಃ 52 ವರ್ಷ ಜಾತಿಃ ಮರಾಠಾ ಉಃ ಒಕ್ಕಲುತನ ಮುಃ ಅಮದಾಬಾದ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸದರ ಸಾರಾಂಶವೆನೆಂದರೆ   ಫಿರ್ಯಾದಿಯು ಅಮದಾಬಾದ ಗ್ರಾಮ ಶಿವಾರದ ಸರ್ವೆ ನಂ 9  ನೇದರಲ್ಲಿ ಹೊಲಕ್ಕೆ ಹೋಗಿ ಕೆಲಸ ಮಾಡಿಕೊಂಡು ಮನೆಗೆ ಬರುತ್ತಿದ್ದು ಪ್ರತಿ ದಿನದಂತೆ ದಿನಾಂಕ 24/07/2020 ರಂದು ಮುಂಜಾನೆ 9-00 ಗಂಟೆಯ   ಹೊಲಕ್ಕೆ ಹೋಗಿ ಸಾಯಂಕಾಲ 6-30 ಗಂಟೆಯ ವರೆಗೆ  ಹೊಲದಲ್ಲಿ ಕೆಲಸ ಮಾಡಿ ಕೆಲವೊಂದು ಸಾಮಾನುಗಳು   ಶೆಡ್ಡನಲ್ಲಿ ಇಟ್ಟು ಮರಳಿ ಮನೆಗೆ ಬಂದಿದ್ದು ಇರುತ್ತದೆ.    ಹೀಗಿರುವಲ್ಲಿ ದಿನಾಂಕ 25/07/2020 ರಂದು ಮುಂಜಾನೆ  1100 ಗಂಟೆಯ ಸುಮಾರಿಗೆ   ಹೊಲದ ಶೆಡ್ಡನಲ್ಲಿರುವ ಗಟಾರ (ಸ್ಪ್ರೇತರಲು ಹೋದಾಗ ಅಲ್ಲಿ ಶೇಡ್ಡಿನ  ಕೀಲಿ ಮುರಿದು ಯಾರೋ ಅಪರಿಚಿತ ಕಳ್ಳರು ಅದರಲ್ಲಿದ್ದ ಸಾಮಾನುಗಳು 1) 20 ಲೀಟರವುಳ್ಳ ಸಿಂಗಲ್ ಪಿಸ್ಟನ್ ಹೆಚ್.ಡಿ.ಪಿ ಸ್ಪೇರ್ ಅ.ಕಿ-19800/- 2)  ತ್ರಿಪಿಸ್ಟನ್ ಹೆಚ್.ಡಿ.ಪಿ, ಹೊಂಡಾ ಕಂಪನಿಯ (ತ್ರಿ.ಹೆಚ್.ಪಿ.ಕಿ-38,000/- 3) ಹೊಂಡಾ ಕಂಪನಿಯ ಫೋರ್ಟೇಬಲ್ ಪಂಪ್ ಅ.ಕಿ/ 22,000  4) ಡಿ..ಪಿ ಗೊಬ್ಬರ 50 ಕೆ.ಜಿವುಳ್ಳ ಪ್ರತಿ ಬ್ಯಾಗಗೆ 1300/- ರೂ.ಗಳು ಒಟ್ಟು 10 ಬ್ಯಾಗಗಳು ಅ.ಕಿ-13,000/- 5) .ಪಿ.ಎಲ್ ಕಂಪನಿಯ ಗೊಬ್ಬರ 50 ಕೆ.ಜಿವುಳ್ಳ 10 ಬ್ಯಾಗಗಳು ಇದರ ಪ್ರತಿ ಬ್ಯಾಗಿನ ಬೆಲೆ 900/- ಒಟ್ಟು 9000 ರೂ.ಗಳು 6) ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧ ಫೇಮ್ 1 ಲೀಟರ್ ಇದ್ದು ಅದರ ಅ.ಕಿ 16000 ರೂ.ಗಳು 7) ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧ ನೆಟಿಯೋ 2 ಕೆ.ಜಿ ಇದ್ದು ಪ್ರತಿ ಕೆ.ಜಿಗೆ 7000 ಇದ್ದು 2 ಕೆ.ಜಿ ಗೆ 14000/ರೂ.ಗಳು ಆಗುತ್ತದೆ. ಹೀಗೆ ಒಟ್ಟು 1,31,800 ರೂ.ಗಳು ಬೆಲೆವುಳ್ಳು ಸಾಮಾನುಗಳು ಯಾರೋ  ಅಪರಿಚಿತ ಕಳ್ಳರು  ಶೇಡ್ಡಿನ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 ಔರಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 61/2020 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 13-08-2020 ರಂದು 1130 ಗಂಟೆಗೆ ಎಎಸ್ಐ ರವರು  ಠಾಣೆಯಲ್ಲಿದ್ದಾಗ ಔರಾದ(ಬಿ) ಪಟ್ಟಣದ ಕಮೀಟಿ ಹಾಲ  ಹತ್ತಿರ ರೋಡಿನ ಮೇಲೆ ಒಬ್ಬ ವ್ಯೆಕ್ತಿ ಮಟಕಾ ಚೀಟಿ ಬರೆದುಕೊಡುತ್ತಾ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾನೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಕಮೀಟಿ ಹಾಲ ಹತ್ತಿರ ಹೋಗಿ   ನೋಡಲು ಒಬ್ಬ ವಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ 1/-ರೂ ಗೆ 80/-ರೂ 10 ರೂ ಗೆ 800/-ರೂ ಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಸದರಿ ಅದೃಷ್ಟ ಸಂಖ್ಯೆಗೆ ಹಣ ಪಡೆದುಕೊಳ್ಳುತ್ತಿದ್ದವನು ಸ್ಥಳದಿಂದ ಓಡಿ ಹೋಗುವ ಸಂಭವ ಕಂಡು ಬಂದಿರುವ   ದಾಳಿ ಮಾಡಿದಾಗ  ಅದೃಷ್ಟ ಸಂಖ್ಯೆಗೆ ಹಣ ಕೊಡುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಹಣ ಪಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಪರಿಶೀಲನೆ ಮಾಡಿ ನೋಡಲು ತನ್ನ ಹೆಸರು ಯುನುಸಮಿಯಾ ತಂದೆ ಇಸ್ಮಾಯಿಲಸಾಬ ಶೇಖ ವಯ:60ವರ್ಷ ಉ: ಹೊಟೆಲ ಕೆಲಸ ಸಾ; ಹನುಮಾನ ಮಂದಿರ ಹತ್ತಿರ ಔರಾದ ಅಂತ ತಿಳಿಸಿದ್ದು ಈತನ ಹತ್ತಿರ ನಗದು ಹಣ 1800/-ರೂ ,ಅಂಕಿ ಸಂಖ್ಯೆ ಬರೆದ 1 ಮಟಕಾ ಚೀಟಿ ,ಒಂದು ಪೆನ್ನು ಮತ್ತು ಸ್ಯಾಮಸಂಗ ಕಂಪನಿಯ ಮೋಬೈಲ ಇದ್ದವು ಸದರಿಯವನು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಅಂಕಿ ಸಂಖ್ಯೆ ಮೇಲೆ ಹಣ ಪಡೆದುಕೊಂಡು ಅದೃಷ್ಟದ ಆಟದ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿರುತ್ತಾನೆ. ಹೀಗೆ ನಗದು ಹಣ 1800/-ರೂ. 1 ಮಟಕಾ ಚೀಟಿ 1 ಪೆನ್ನು ಮತ್ತು ಸ್ಯಾಮಸಂಗ ಕಂಪನಿಯ ಮೋಬೈಲ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Thursday, August 13, 2020

BIDAR DISTRICT DAILY CRIME UPDATE 13-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-08-2020

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ, ಯು.ಡಿ.ಆರ್ ಸಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸುಮನ ಗಂಡ ಪ್ರಕಾಶ ಕಾಂಬಳೆ ವಯ: 40 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ರಾಮತೀರ್ಥ(ಕೆ) ರವರ ಗಂಡನಾದ ಪ್ರಕಾಶ ಕಾಂಬಳೆ ತಂದೆ ವಿಶ್ವನಾಥ ಕಾಂಬಳೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ರಾಮತೀರ್ಥ(ಕೆ) ಇವರಿಗೆ ಸುಮಾರು 3-4 ವರ್ಷಗಳಿಂದ ಹೊಟ್ಟೆ ಬೇನೆ ಇದ್ದು ಹೊಟ್ಟೆ ಬೇನೆ ಕಡಿಮೆ ಆಗದೆ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-08-2020 ರಂದು 1300 ಗಂಟೆಯಿಂದ ದಿನಾಂಕ 12-08-2020 ರಂದು 0800 ಗಂಟೆಯ ಮಧ್ಯದ ಅವಧಿಯಲ್ಲಿ ರಾಮತೀರ್ಥ(ಕೆ) ಶಿವಾರದ ರಾಜೇಂದ್ರ ಬಿರಾದಾರ ಇವರ ಬಾವಿಯಲ್ಲಿ ಬಿದು್ದ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ದೂರು ಮತ್ತು ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 121/2020, ಕಲಂ. 364, 302 ಜೊತೆ 34 ಐಪಿಸಿ :-

ಆರೋಪಿತರಾದ ಆಕಾಶ ತಂದೆ ರಾಜಪ್ಪ ಹಾಗೂ ಅಶ್ವಿನ ತಂದೆ ರಾಜಪ್ಪ ಹಾಗೂ ಇತರ ಇಬ್ಬರೂ ಕೂಡಿ ಫಿರ್ಯಾದಿ ಅಂಜಮ್ಮಾ ಗಂಡ ಕಲ್ಯಾಣರಾವ ಸಾ: ಚಿಟ್ಟಾವಾಡಿ ರವರ ಮಗ ಮನೋಜ ಈತನು ಆಶಾರಾಣಿ ಇವಳಿಗೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡ ವಿಷಯದ ಬಗೆ ವೈಮನಸ್ಸಿನಿಂದ ದಿನಾಂಕ 11-08-2020 ರಂದು ಫಿರ್ಯಾದಿಯವರ ಮಗಳಾದ ಮಹೇಶ್ವರಿ ಇವಳಿಗೆ ಚಿಟ್ಟಾ ವಾಡಿಯಿಂದ ಒತ್ತಾಯದಿಂದ ಕರೆದುಕೊಂಡು ಹೋಗಿ ಕುತ್ತಿಗೆಗೆ ಅವಳ ಓಡಣಿಯಿಂದ ಬಿಗಿದು ಕೊಲೆ ಮಾಡಿ ಮರದ ಬುಡಕ್ಕೆ ಕಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 38/2020, ಕಲಂ. 279, 337, 338 ಐಪಿಸಿ :-

ದಿನಾಂಕ 12-08-2020 ರಂದು ಫಿರ್ಯಾದಿ ಮಾರುತಿ ತಂದೆ ಭೀಮಶಾ ಸತ್ವಾರ ವಯ: 35 ವರ್ಷ, ಜಾತಿ: ಕುರುಬ, ಸಾ: ಬೇಮಳಖೇಡಾ ರವರು ತಮ್ಮ ಗ್ರಾಮಕ್ಕೆ ಬರುವುದಕ್ಕಾಗಿ ಭಂಗೂರ ಗ್ರಾಮದಲ್ಲಿ ತಮ್ಮೂರಿನ ರೋಡಿನ ಮೇಲೆ ನಿಂತಿರುವಾಗ ಗ್ರಾಮದ ಮಹಾಂತಯ್ಯಾ ತಂದೆ ದೇಶಮುಖಯ್ಯಾ ಜಾಂಗಟಿ ವಯ: 46 ವರ್ಷ, ಜಾತಿ: ಜಂಗಮ, ಸಾ: ಬೇಮಳಖೇಡಾ ಇವರು ತನ್ನ ದ್ವಿಚಕ್ರ ವಾಹನ ನಂ. ಕೆಎ-39/ಆರ್-0637 ನೇದರ ಮೇಲೆ  ಗ್ರಾಮದ ಕಡೆಗೆ ಹೋಗುತ್ತಿರುವಾಗ ಫಿರ್ಯಾದಿಯು ಅವರಿಗೆ ತಡೆದು ನಿಲ್ಲಿಸಿ ಅವರ ದ್ವಿಚಕ್ರ ವಾಹನ ಹಿಂದೆ ಕುಳಿತುಕೊಂಡು ಗ್ರಾಮದ ಕಡೆಗೆ ಹೊಗುತ್ತಿರುವಾಗ ರವಿ ಮೈನಕ ರವರ ಹೊಲದ ಹತ್ತಿರ ಮಹಾಂತಯ್ಯಾ ಸ್ವಾಮಿ ಇವರು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವಾಹನ ಸ್ಕಿಡ್ ಆಗಿದ್ದರಿಂದ ಫಿರ್ಯಾದಿಯ ಬಲ ಹಣೆಯ ಮೇಲೆ, ಬಲ ಮೆಲುಕಿಗೆ, ಮೂಗಿನ ಮೇಲೆ ತರಚಿದ ರಕ್ತಗಾಯ ಮತ್ತು ಎರಡೂ ಕೈಗಳಿಗೆ ತರಚಿದ ರಕ್ತಗಾಯ ಮತ್ತು ಬಲ ಕಾಲಿನ ಮೊಳಕಾಲಿಗೆ ತರಚಿದ ರಕ್ತಗಾಯಗಳಾಗಿದ್ದು ಮತ್ತು ಮಹಾಂತಯ್ಯಾ ಇವರಿಗೆ ಬಲ ಹಣೆಯ ಮೇಲೆ ಮತ್ತು ಬಲಗಡೆ ತಲೆಯಲ್ಲಿ ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಮತ್ತು ಬಲಗಾಲಿಗೆ, ಬಲಗೈಗೆ ತರಚಿದ ರಕ್ತಗಾಯಗಳಾಗಿರುತ್ತವೆ ಮತ್ತು ಅದೇ ಸಮಯಕ್ಕೆ ಭಂಗೂರ ಕಡೆಯಿಂದ ಬರುತ್ತಿದ್ದ ಗ್ರಾಮದ ಸಂಜುರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಇಬ್ಬರು ಬಂದು ಫಿರ್ಯಾದಿ ಮತ್ತು ಮಹಾಂತಯ್ಯಾ ಸ್ವಾಮಿ ಇವರ ಮನೆಯವರಿಗೆ ವಿಷಯ ತಿಳಿಸಿದ ಮೇರೆಗೆ ಇಬ್ಬರ ಮನೆಯವರು ಬಂದು ಮಹಾಂತಯ್ಯಾ ಇವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಕಡೆಗೆ ತೆಗೆದುಕೊಂಡು ಹೋಗಿರುತ್ತಾರೆ ಮತ್ತು ಫಿರ್ಯಾದಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 113/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 12-08-2020 ರಂದು ನಿಟ್ಟೂರ ಗ್ರಾಮದ ಹನುಮಾನ ಮಂದಿರದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಒಂದು ರೂ. ಗೆ 80/- ರೂ ಕೊಡುತ್ತೆವೆಂದು ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ಮಟಕಾ ಜೂಜಾಟ ನಡೆಸುತ್ತಿದ್ದಾರೆಂದು ಚಿದಾನಂದ ಸೌದಿ ಪಿಎಸ್ಐ ಧನ್ನೂರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶಿವಾಜಿ ಚೌಕದಿಂದ ಹನುಮಾನ ಮಂದಿರದ ಹತ್ತಿರ ಅಗಸಿ ಕಡೆಗೆ ಹೊಗಿ ಮರೆಯಾಗಿ ನಿಂತು ನೊಡಲು ನಿಟ್ಟೂರ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿತರಾದ 1) ವೇಂಕಟರಾವ ತಂದೆ ಲಕ್ಷ್ಮಣರಾವ ಕಣಜೆಮನೆ ವಯ: 50 ವರ್ಷ, ಜಾತಿ: ಮರಾಠಾ ಮತ್ತು 2) ಈಶ್ವರ ತಂದೆ ವೇಂಕಟರಾವ ಕಣಜೆಮನೆ ವಯ: 28 ವರ್ಷ, ಜಾತಿ: ಮರಾಠಾ, ಇಬ್ಬರು ಸಾ: ನಿಟ್ಟೂರ ಇವರಿಬ್ಬರು ಒಂದು ರೂ. 80/- ರೂಪಾಯಿ ಕೊಡುತ್ತೆವೆಂದು ಕೂಗಿ ಕೂಗಿ ಜನರಿಗೆ ಆರ್ಕಷಣೆ ಮಾಡಿ ಜನರಿಗೆ ಕರೆಯುತ್ತಿರುವಾಗ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಇಬ್ಬರಿಗೂ ಹಿಡಿದುಕೊಂಡಾಗ ಅಲ್ಲಿದ್ದ ಜನರು ಓಡಿ ಹೊಗಿರುತ್ತಾರೆ, ನಂತರ ಪಂಚರ ಸಮಕ್ಷಮ ಆರೋಪಿತರೆ ಅಂಗ ಜಡ್ತಿ ಮಾಡಲು ಅವರಿಂದ ನಗದು ಹಣ 760/- ರೂಪಾಯಿ, ಒಂದು ಮೊಬೈಲ ಫೊನ್, ಎರಡು ಬಾಲ್ ಪೆನ್ನ ಮತ್ತು ಮಟಕಾ ನಂಬರ ಬರೆದ 18 ಚೀಟಿಗಳು ಸಿಕ್ಕಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 36/2020, ಕಲಂ. 454, 380 ಐಪಿಸಿ :-

ದಿನಾಂಕ 12-08-2020 ರಂದು ಫಿರ್ಯಾದಿ ನರಸಾರೆಡ್ಡಿ ತಂದೆ ಈರೆಡ್ಡಿ ಡೊಂಗಾಲೆ ವಯ: 45 ವರ್ಷ, ಜಾತಿ: ರೆಡ್ಡಿ, ಸಾ: ಉಜನಿ ಗ್ರಾಮ ರವರು ವಡಗಾಂವ ರಸ್ತೆಯಲ್ಲಿರುವ ತಮ್ಮ ಹೊಲದಲ್ಲಿ ಕುರಿ ಸಾಕಾಣಿಕೆ ಕುರಿತು ಶೆಡ್ ಹಾಕುವ ಸಲುವಾಗಿ ತನ್ನ ಹೆಂಡತಿ ಇಮಲಮ್ಮಾ ಹಾಗೂ ಮಗ ಅಕ್ಷಯಕುಮಾರ, ಮಗಳು ಪೂಜಾ, ಅಳಿಯ ಸಂಗಾರೆಡ್ಡಿ ಎಲ್ಲರು ಹೊಲಕ್ಕೆ ಹೊಗಿದ್ದು, ನಂತರ ಹೊಲದಲ್ಲಿ ಹಾಕುತ್ತಿರುವ ಶೆಡ್ ಕೆಲಸಕ್ಕಾಗಿ ನೀರು ತರುವ ಕುರಿತು ಬಕೇಟ ಬೇಕಾಗಿರುವುದರಿಂದ ಅಕ್ಷಯಕುಮಾರ ಇತನಿಗೆ ಮನೆಗೆ ಕಳುಹಿಸಿದಾಗ ಮಗ ಮನೆಗೆ ಹೋಗಿ ನಂತರ ಆತನು ಭಯಭೀತನಾಗಿ ಓಡುತ್ತಾ ಮರಳಿ ಹೊಲಕ್ಕೆ ಬಂದು ತಿಳಿಸಿದ್ದೆನೆಂದರೆ ನಾನು ಮನೆಯ ಕೀಲಿ ತೆಗೆದು ಒಳಗೆ ಹೋದಾಗ ನಮ್ಮ ಮನೆಯಿಂದ ನಮ್ಮ ಬಾಜು ಮನೆಯ ಭಾಗ್ಯವಂತಿ ಗಂಡ ಸಂಜುಕುಮಾರ ಇಕೆಯು ಮನೆಯಿಂದ ಹೊರಗೆ ಬಂದು ನನಗೆ ನೂಕಿ ಹಾಕಿ ತನ್ನ ಸೀರೆಯ ಸೇರಗಿನಲ್ಲಿ ಗಂಟು ಕಟ್ಟಿಕೊಂಡು ಓಡಿ ಹೋಗಿರುತ್ತಾಳೆ ನಾನು ಮನೆಯಲ್ಲಿ ಹೋಗಿ ನೋಡಲು ನಮ್ಮ ಮನೆಯಲ್ಲಿರುವ ಅಲಮಾರಿಯ ಕೀಲಿ ತೆಗೆದ್ದಿದ್ದು ಅದರಲ್ಲಿರುವ ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು  ಅಲಮಾರಿಯ ಲಾಕರ್ ತೆರೆದ್ದಿದ್ದು ಇರುತ್ತದೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ಹೆಂಡತಿ, ಮಗಳು, ಅಳಿಯ ಎಲ್ಲರು ಬಂದು ಮನೆಯಲ್ಲಿ ನೋಡಲಾಗಿ ಮನೆಯಲ್ಲಿರುವ ಅಲಮಾರಿಯ ಡೋರ ತೆಗೆದಿದ್ದು ಅದರಲ್ಲಿರುವ ಸಾಮಾನುಗಳು ಕೆಳಗೆ ಬಿದ್ದಿದ್ದು ಅಲಮಾರಿಯಲ್ಲಿ 5,00,000/- ರೂ. ನಗದು ಹಣ ಮತ್ತು ಪೂಜಾ ಈಕೆಯ ಮದುವೆಯಲ್ಲಿ ಖರೀದಿ ಮಾಡಿರುವ 1) 25 ಗ್ರಾಂ  ಬಂಗಾರದ ಒಂದು ನೆಕ್ಲೆಸ್ ಅ.ಕಿ 75,000/- ರೂ., 2) 35 ಗ್ರಾಂ ಬಂಗಾರದ ಒಂದು ನಾನ್ ಅ.ಕಿ 1,05,000/- ರ., 3) 15 ಗ್ರಾಂ ಬಂಗಾರದ ಒಂದು ಗುಂಡ ಸರ ಅ.ಕಿ 45,000/- ರೂ., 4) ಒಂದು ಜೊತೆ ಕೀವಿಯಲ್ಲಿನ 5 ಗ್ರಾಂ ಹೂ ಅ.ಕಿ 15,000/- ರೂ. ಹಾಗೂ 5) ಒಂದು ಜೊತೆ ಕೀವಿಯಲ್ಲಿನ ಅರ್ದ ತೋಲೆ 5 ಗ್ರಾಂ ಝೂಮಕಾ ಅ.ಕಿ 15,000/- ಹಾಗೂ ಐಯಾರಿಯಲ್ಲಿ ಬಂದಿರುವ ಬೆಳ್ಳಿಯ ಕುಂಕುಮ ಡಬ್ಬಿಗಳು 40 ಗ್ರಾಂ ಅ.ಕಿ 2000/- ರೂಪಾಯಿ ಬೆಲೆಯುಳ್ಳದ್ದು ಹೀಗೆ ಎಲ್ಲಾ ಸೇರಿ ಒಟ್ಟು 7,57,000/- ರೂಪಾಯಿ ಬೇಲೆಯುಳ್ಳದ್ದು ಭಾಗ್ಯವಂತಿ ಗಂಡ ಸಂಜುಕುಮಾರ ಇವಳು ಮನೆಯ ಮೇಲಿಂದ ಒಳಗೆ ಹೋಗಿ ಕಳವು ಮಾಡಿಕೊಂಡು ಹೋಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.