Police Bhavan Kalaburagi

Police Bhavan Kalaburagi

Saturday, November 7, 2020

BIDAR DISTRICT DAILY CRIME UPDATE 07-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-11-2020

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 99/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 06-11-2020 ರಂದು ರಜೊಳಗಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸರಜೋಳಗಾ ಗ್ರಾಮಕ್ಕೆ ಹೋಗಿ ಗ್ರಾಮದ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ. 1) ಮಿಲಿಂದ ತಂದೆ ಶರಣಪ್ಪಾ ಲಾಕೆ ವಯ: 36 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಸರಜೋಳಗಾ ಗ್ರಾಮ ಇತನು ಜೂಜಾಟದ ನಂಬರ ಬರೆಯಿಸಿ 01 ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಮಿಲಿಂದ ಇತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಮಿಲಿಂದ ಇತನಿಗೆ ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಹಣವನ್ನು ಆರೋಪಿ ನಂ. 2) ಸೋಮಣ್ಣಾ ತಂದೆ ದೇವಿಂದ್ರ ಕಲೋಜಿ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಕೋಹಿನೂರ ಇತನಿಗೆ ಕೋಡುತ್ತೇನೆ ಅವನು ನನಗೆ ಕಮಿಷನ್ ಹಣ ನೀಡುತ್ತಾನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 940/- ರೂಪಾಯಿ., 2) ಒಂದು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 73/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 06-11-2020 ರಂದು ಮುಡಬಿ ಗ್ರಾಮದ ವೆಂಕಟ ಧಾಬಾ ಕಡೆಗೆ ಹೋಗುವ ದಾರಿಯ ಕಲಬುರಗಿ ರೋಡಿಗೆ ಹತ್ತಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತ ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಧಾಬಾದಿಂದ ಸ್ವಲ್ಪ ದೂರದಲ್ಲಿ ರೋಡಿನ ಬದಿಗಿರುವ ಗಿಡದ ಮರೆಯಾಗಿ ನಿಂತು ನೋಡಲು ಕಲಬುರಗಿ ರೋಡಿಗೆ ಹತ್ತಿಕೊಂಡಿರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ. 1) ಪ್ರಶಾಂತ ತಂದೆ ಭೋಜಪ್ಪಾ ಬಿರಾದರ ವಯ: 33 ವರ್ಷ, ಜಾತಿ: ಲಿಂಗಾಯತ, ಸಾ: ಚಿಕನಾಗಾಂವ ಇತನು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ 01 ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿದ್ದು ಇನ್ನೊಬ್ಬ ಆರೋಪಿ ನಂ. 2) ವಿನೋದ ತಂದೆ ತಿಪ್ಪಣ್ಣ ಸುತಾರ ಸಾ: ಮುಡಬಿ ಇತನು ಕೆಳಗೆ ಕುಳಿತುಕೊಂಡು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದುಕೊಳ್ಳುತ್ತಿರುವದನ್ನು ಕಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ ವಿನೋದ ಇತನು ಹಾಗೂ ಮಟಕಾ ಆಡಲು ಬಂದ ಜನ ಅವರು ಹೊಲದಲ್ಲಿ ಓಡಿ ಹೋಗಿರುತ್ತಾರೆ, ನಂತರ ಆರೋಪಿ ಪ್ರಶಾಂತ ಇತನಿಗೆ ಹಿಡಿದು ಕೇಳಿದಾಗ ನಾನು ಮತ್ತು ವಿನೋದ ಇಬ್ಬರು ಕೂಡಿಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವದು ಮಾಡಿ ಇದರಿಂದ ಬಂದ ಹಣವನ್ನು ಇಬ್ಬರು ಕೂಡಿಕೊಂಡು ಹಂಚಿಕೊಳ್ಳುತ್ತೇವೆ ಅಂತಾ ತಿಳಿಸಿದನು, ನಂತರ ಪಂಚರ ಸಮಕ್ಷಮ ಪ್ರಶಾಂತ ಇತನ ಅಂಗ ಜಡ್ತಿ ಮಾಡಲು ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 2970/- ರೂಪಾಯಿ ನಗದು ಹಣ ಮತ್ತು ಒಂದು ಬಾಲ್ ಪೆನ್ನು ಹಾಗೂ ಎರಡು ಚೀಟಿಗಳು ಅದರ ಮೇಲೆ ಮಟಕಾ ನಂಬರ ಬರೆದದ್ದು ಕಂಡು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 154/2020, ಕಲಂ. 279, 338 ಐಪಿಸಿ :-

ದಿನಾಂಕ 06-11-2020 ರಂದು ಫಿರ್ಯಾದಿ ಬಸವರಾಜ ತಂದೆ ವೈಜಿನಾಥ ಸದಲಾಪೂರೆ, ವಯ: 35 ವರ್ಷ, ಜಾತಿ: ಕಬ್ಬಲಿಗ, ಸಾ: ಹಳ್ಳಿಖೇಡ (ಕೆ) ವಾಡಿ ರವರ ಚಿಕ್ಕಪ್ಪನಾದ ಪ್ರಕಾಶ ತಂದೆ ಘಾಳೆಪ್ಪಾ ಸದಲಾಪೂರೆ ವಯ: 42 ವರ್ಷ ರವರು ಕೂಲಿ ಕೆಲಸದಿಂದ ಮರಳಿ ಮ್ಮೂರಿಗೆ ಬರಲು  ಕಂಕರ ಮಶೀನ ಕಡೆಯಿಂದ ಮುಸ್ತಾಪೂರ ಕಡೆಗೆ ನಡೆದುಕೊಂಡು ಬರುವಾಗ ರಾ.ಹೆ ನಂ. 50 ಕಲಬುರ್ಗಿ-ಹುಮನಾಬಾದ ರೋಡಿನ ಮೇಲೆ  ಸುಭಾಷ ಅಷ್ಠೂರಕರ್ ರವರ ಹೊಲದ ಹತ್ತಿರ ಎದುರಿನಿಂದ  ಬಂದ ಮೋಟಾರ ಸೈಕಲ್ ನಂ. ಕೆಎ-32/ಇ.ಡಿ-4446 ನೇದರ ಚಾಲಕನಾದ ಆರೋಪಿ ನಾಗೇಶ ತಂದೆ ಪ್ರಹ್ಲಾದ ಅಜಮನಿ ವಯ: 23 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚಿಕ್ಕಮಣೂರ, ತಾ: ಇಂಡಿ, ಜಿ: ಬಿಜಾಪೂರ, ಸದ್ಯ: ಗುಬ್ಬಿ ಕಾಲೋನಿ ಕಲಬುರ್ಗಿ ಇತನು ತನ್ನ ಮೋಟಾರ   ಸೈಕಲನ್ನು ಅತೀವೇಗ ಹಾಗು ನಿಷ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ಚಿಕ್ಕಪ್ಪ ಪ್ರಕಾಶ ರವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು ಅವನು ಸಹ ಬಿದ್ದಿರುತ್ತಾನೆ, ಸದರಿ ಅಪಘಾತದಿಂದ ಚಿಕ್ಕಪ್ಪರವರಿಗೆ ಎಡಗಡೆ ತಲೆಗೆ ಭಾರಿ ರಕ್ತಗಾಯ ಹಾಗೂ  ಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಬಂದಿದ್ದು ಮತ್ತು ಕೈ ಹಾಗು ಮೊಳಕಾಲಿಗೆ ತರಚಿದ ಗಾಯವಾಗಿರುತ್ತವೆ, ಅಪಘಾತ ಪಡಿಸಿದ ನಾಗೇಶನಿಗೆ ಬಲ ಮೊಳಕಾಲಿಗೆ ಹಾಗು ಎಡ ಮುಂಗೈಗೆ, ಕಣ್ಣಿನ ಹುಬ್ಬಿನ ಮೇಲೆ ತರಚಿದ ಗಾಯಗಳಾಗಿರುತ್ತವೆ, ಮೋಟಾರ ಸೈಕಾಲ ಹಿಂಬದಿಯ ಸವಾರನಾದ ಪ್ರಸಾದ ತಂದೆ ಶರಣಪ್ಪಾ ಬೊಜ್ಜಾ ರವರಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು ಅವನು ಮೋಟಾರ ಸೈಕಲ್ ತೆಗೆದುಕೊಂಡು ಹೋಗಿರುತ್ತಾನೆ, ಅಪಘಾತವನ್ನು ನೋಡಿದ ಮ್ಮೂರ ಪರಶುರಾಮ ತಂದೆ ಭಿಮಣ್ಣಾ ಸದಲಾಪೂರೆ ರವರು ಚಿಕ್ಕಪ್ಪ ಪ್ರಕಾಶ ರವರಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Friday, November 6, 2020

BIDAR DISTRICT DAILY CRIME UPDATE 06-11-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 06-11-2020


ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 166/2020 ಕಲಂ 317 ಐಪಿಸಿ :-

ದಿನಾಂಕ: 05/11/2020 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಶ್ರೀನಿವಾಸ, ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲ ಮಂದಿರ ಮೈಲೂರ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆನೆಂದರೆ ದಿನಾಂಕ 18/03/2020 ರಂದು ರಾತ್ರಿ 11.30 ಗಂಟೆ ಸುಮಾರಿಗೆ ವಿದ್ಯಾನಗರ ಬೀದರದಲ್ಲಿ ಸುಮಾರ 6 ವರ್ಷದ ಬಾಲಕನ್ನು ಇರುವ ಬಗ್ಗೆ ದೂರವಾಣಿ ಮುಖಾಂತರ ಬಂದ ಕರೆಯನ್ವಯ ಸ್ಥಳಕ್ಕೆ ಹೋಗಿ ಮಗುವನ್ನು ರಕ್ಷಿಸಿ, ಬಾಲಕನನ್ನು ಮುಂದಿನ ಪಾಲನೆ ಮತ್ತು ಪೋಷಣೆಗಾಗಿ ಮಕ್ಕಳ ಸಹಾಯವಾಗಿ 1098ಕ್ಕೆ ಕರೆ ಮಾಡಿ ಬಾಲಕನನ್ನು ಮಕ್ಕಳ ಸಹಾಯವಾಣಿ ಬೀದರ ರವರ ವಶಕೆ ನೀಡಲಾಗಿದೆ. ನಂತರ ಮಗುವಿಗೆ  ಪಾಲನೆ ಪೋಷಣೆ ಕುರಿತು ಬಾಲಕರ ಬಾಲಮಂದಿರಕ್ಕೆ ಒಪ್ಪಿಸಿರುತ್ತಾರೆ. ಮಗು ಹಿಂದಿ ಭಾಷೆ ಮಾತಾಡುತ್ತಿದ್ದು, ಮಗುವಿಗೆ ವಿಚಾರಿಸಿದ್ದಾಗ ತನ್ನ ಹೆಸರು ಮೋಹನ ತಂದೆ ರಾಜೇಶ ಅಂತ ತಿಳಿಸುತ್ತಿದ್ದು, ಮಗುವಿಗೆ ತನ್ನ ವಿಳಾಸದ ಬಗ್ಗೆ ಯಾವುದೇ ಅರಿವು ಇಲ್ಲದಂತೆ ಕಂಡು ಬಂದಿರುತ್ತದೆ. ನಂತರ ಮಗುವಿನ ತಂದೆ-ತಾಯಿ ಪತ್ತೆ ಕುರಿತು ಪ್ರಯತ್ನ ಮಾಡಿದ್ದು ಪತ್ತೆಯಾಗಿರುವುದಿಲ್ಲ. ಕು. ಮೋಹನ ಈತನಿಗೆ ಅವನ ಪಾಲನೆ ಪೋಷಣೆ ತೊರೆಯುವ ಉದ್ದೇಶದಿಂದ ಅವನ ತಂದೆ ರಾಜೇಶ ಹಾಗೂ ಅವನ ತಾಯಿ ಇವರು ಬಿಟ್ಟು ಹೋಗಿದಂತೆ ಕಂಡು ಬಂದಿರುತ್ತದೆ. ಮಗು ಪತ್ತೆಯಾಗಿದ್ದಾಗಿನಿಂದ ಇಲ್ಲಿಯ ವರೆಗೆ ಮಗುವಿನ ತಂದೆ ತಾಯಿಯವರ ಪತ್ತೆ ಕುರಿತು ಪ್ರಯತ್ನಿಸಿ ಪತ್ತೆಯಾಗದೇ ಇದ್ದ ಕಾರಣ ಈಗ ದೂರು ನೀಡುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರೂಗಿಸಿ ಎಫ.ಐ.ಆರ್ ದಾಖಲಿಸಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Thursday, November 5, 2020

BIDAR DISTRICT DAILY CRIME UPDATE 05--11-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 05-11-2020

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 153/2020 ಕಲಂ ಮನುಷ್ಯಕಾಣೆ :-

 ದಿನಾಂಕ: 04/11/2020 ರಂದು 1500 ಗಂಟೆಗೆ ಫಿರ್ಯಾದಿ ರೇಷ್ಮಾ ಗಂಡ ಗುಂಡಪ್ಪಾ ಬಾವಿಕಟ್ಟಿ ವಯ: 27 ಸಾ/ ರಾಂಪೂರ ತಾ/ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಗೆ ಅಪ್ಪು ವರ್ಷ : 02 ವರ್ಷ, & ಆರ್ಯನ ವಯ: 04 ತಿಂಗಳು ಎಂಬ ಎರಡು ಗಂಡು ಮಕ್ಕಳಿರುತ್ತವೆ. ಫೀರ್ಯಾದಿಯ ಪತಿಯು ಪ್ಲಾಸ್ಟರ ಕೆಲಸ ಮಾಡಿಕೊಂಡಿರುತ್ತಾರೆ.  ಇವರ ಪತಿಗೆ ಸುಮಾರು 2 ವರ್ಷಗಳಿಂದ ಆಗಾಗ ಆರಾಮ ಇಲ್ಲದ ಕಾರಣ   ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು ಕೋರಗುತ್ತಿದ್ದರು. ಹೀಗಿರುವಾಗ ದಿನಾಂಕ:01/11/2020 ರಂದು ರಾತ್ರಿ  ಇವರ ಪತಿಯು ಕೆಲಸದಿಂದ ಬಂದ ನಂತರ ಇಬ್ಬರೂ ಊಟ ಮಾಡಿ ರಾತ್ರಿ 2200 ಗಂಟೆ ಸುಮಾರಿಗೆ ಮಲಗಿದ್ದು, ಬೆಳಿಗ್ಗೆ 02-03 ಗಂಟೆ ಸುಮಾರಿಗೆ ಇವರ ಚಿಕ್ಕ ಮಗು ಎದ್ದು ಅಳುತ್ತಿದ್ದು ನಾನು ಸಮಾಧಾನ ಪಡಸಿ ಮಲಗಿರುತ್ತೇನೆ. ಬೆಳಿಗ್ಗೆ 05.00 ಗಂಟೆಗೆ ಫಿರ್ಯಾದಿಯು ಎದ್ದು ನೋಡಲು ಇವರ ಪತಿಯು ಹಾಸಿಗೆಯಿಂದ ಎದ್ದು ಹೋಗಿದ್ದು ನೈಸರ್ಗಿಕ ಕ್ರಿಯೆಗೆ ಹೋಗಿರಬೇಕೆಂದು ತಿಳಿದು ಬೆಳಗಾದ ನಂತರ ನಮ್ಮ ಅತ್ತೆ ಕಮಳಾಬಾಗೆ ವಿಚಾರಿಸಲು ಅವರೂ ಸಹ ನೋಡಿಲ್ಲವೆಂದು ತಿಳಿಸಿದರು. ಮಧ್ಯಾನವಾಗಿ ಸಾಯಂಕಾಲವಾದರೂ  ಇವರ ಪತಿಯು ಮನಗೆ ಮರಳಿ ಬರದಿದ್ದಾಗ ನನ್ನ ಗಂಡನಿಗೆ ನಮ್ಮ ಭಾವಂದಿರಾದ ಚಂದ್ರಕಾಂತ ಹಾಗು ಸುರೇಶ ರವರು ನನ್ನ ಗಂಡನಿಗೆ ರಾಮಪೂರ ಹಾಗು ನನ್ನ ಗಂಡ ಕೆಲಸ ಮಾಡುವ ವಳಕಿಂಡಿಗೆಗೆ, ನಾದನಿಯ ಊರಾದ ಹಸರಗುಂಡಗಿಯಲ್ಲಿ ಹುಡಿಕಾಡಿದರೂ ಸಿಕ್ಕಿರುವುದಿಲ್ಲ. ಇವರ ಪತಿ ಗುಂಡಪ್ಪ ರವರು ದಿನಾಂಕ:03/11/2020 ರಂದು ನಸುಕಿನ ಜಾವ 03.00 .ಎಮ್. ಗಂಟೆಯಿಂದ 05.00 .ಎಮ್. ಗಂಟೆ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋದವರು ಮರಳಿ ಬರದೇ ಕಾಣೆಯಾಗಿರುತ್ತಾರೆ. ಹೆಸರು : ಗುಂಡಪ್ಪಾ, ತಂದೆ : ಪ್ರಭು ಭಾವಿಕಟ್ಟಿ, ಲಿಂಗ : ಗಂಡು, ವಯಸ್ಸು : 27 ವರ್ಷ, ಎತ್ತರ : 5’ 2’’, ಚಹರೆ ಪಟ್ಟಿ : ಸಾಧಾರಣ ಮೈಕಟ್ಟು & ಗೋಧಿ ವರ್ಣ, ಧರಿಸಿದ ಬಟ್ಟೆಗಳು : ಕೆಂಪುಬಣ್ಣದ ಟೀ-ಶರ್ಟ ಹಾಗು ಕಪ್ಪು ಪ್ಯಾಂಟ, ಭಾಷೆ : ಕನ್ನಡ, ಹಿಂದಿ ಹಾಗು ಮರಾಠಿ  ಕಾಣೆಯಾದ ನನ್ನ ಗಂಡನ್ನು ಹುಡುಕಾಡಿ ಠಾಣೆಗೆ ಬರಲು ತಡವಾಗಿರುತ್ತದೆ. ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ  ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 11/2020 ಕಲಂ 174 (ಸಿ) ಸಿಆರ್.ಪಿ.ಸಿ. :-

 

ದಿನಾಂಕ: 04-11-2020 ರಂದು 1000 ಗಂಟೆಗೆ ಶ್ರೀ ನಿಖಿಲ್ ತಂದೆ ಬಾಬುರಾವ ಪರಶೆಟ್ಟಿ 20 ವರ್ಷ   ಸಾ: ಶಿವಣಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ, ಇವರು ಇಬ್ಬರು ಸಹೊದರರಿದ್ದು ಇವರ ತಾಯಿ ಸುನೀತಾ ಮತ್ತು  ತಂಗಿ ನಿಕಿತಾ ಇವರು ಫಿರ್ಯಾದಿ ಅಜ್ಜನಾದ ನೀಲಕಂಡ ನಾಗಶಂಕರ ಇವರ ಗ್ರಾಮವಾದ ಕಾಸರ ತೂಗಾಂವ ಗ್ರಾಮದ ಅವರ ಮನೆಯಲ್ಲಿ ವಾಸವಾಗಿರುತ್ತಾರೆ. ಫಿರ್ಯಾದಿ ಮತ್ತು ಇವರ ಅಣ್ಣ ಶಿವಕುಮಾರ ತಂದೆಯ ಜೊತೆಯಲ್ಲಿ ಶಿವಣಿ ಗ್ರಾಮದಲ್ಲಿ ವಾಸವಾಗಿರುತ್ತಾರೆ ಇವರ ತಾಯಿ ಸುನೀತಾ ಇವರು 2015 ನೇ ಸಾಲಿನಲ್ಲಿ  ತಂದೆಗೆ ಬಿಟ್ಟು ಕಾಸರತೂಗಾಂವ ಗ್ರಾಮಕ್ಕೆ ಹೋಗಿ  ಅಜ್ಜನ ಹತ್ತಿರ ಅಲ್ಲಿಯೇ ಉಳಿದಿರುತ್ತಾರೆ ಹೀಗಿರಲು ದಿನಾಂಕ:02-11-2020 ರಂದು 1000 ಗಂಟೆಗೆ ಫಿರ್ಯಾದಿ ತಂದೆ ಬಾಬುರಾವ ಇವರು ಫಿರ್ಯಾದಿಯ ತಾಯಿಯ ಹತ್ತಿರ ಕಾಸರತೂಗಾಂವ ಗ್ರಾಮಕ್ಕೆ ಹೋಗಿ ಬರುತ್ತೇನೆಂದು   ಹೇಳಿ ಕಾಸರತೂಗಾಂವ ಗ್ರಾಮಕ್ಕೆ ಹೋಗಿರುತ್ತಾರೆ.  ಇವರ ತಂಗಿ ನಿಕಿತಾ ಇವಳು ನನಗೆ ಫೋನ ಮಾಡಿ ತಂದೆ ಕಾಸರತೂಗಾಂವ ಗ್ರಾಮಕ್ಕೆ ಬಂದಿರುತ್ತಾರೆ ಅಂತ ತಿಳಿಸಿರುತ್ತಾಳೆ ನಂತರ ಸಾಯಂಕಾಲ 5:00 ಗಂಟೆಗೆ ತಂದೆಯವರು ಮನೆಯಿಂದ ಬಿಟ್ಟಿರುತ್ತಾರೆ ಅಂತ ತಿಳಿಸಿರುತ್ತಾಳೆ ಆದರೆ ಇವರ ತಂದೆ ಶಿವಣಿ ಗ್ರಾಮಕ್ಕೆ ಬಂದಿರುವುದಿಲ್ಲ ಕಾಸರತೂಗಾಂವ ಗ್ರಾಮದ ನಮ್ಮ ತಾಯಿಯ ಮನೆಯ ಕಕಡೆಗೂ ಹೋಗಿರುವುದಿಲ್ಲ ಅಂದಿನಿಂದ ಎಲ್ಲಾ ಕಡೆಗೂ ಹುಡುಕಾಡಿದರೂ  ತಂದೆ ಸಿಕ್ಕಿರುವುದಿಲ್ಲ ನಂತರ ದಿನಾಂಕ:04-11-2020 ರಂದು 0800 ಗಂಟೆಗೆ ಫಿರ್ಯಾದಿ ಮತ್ತು ಸಂಜೀವಕುಮಾರ ಪರಶೆಟ್ಟಿ, ಗಣಪತಿ ಪಾರಶೆಟ್ಟಿ ಅವರೆಲ್ಲರೂ ತಂದೆಗೆ ಹುಡುಕುತ್ತಾ ಕಾಸರತೂಗಾಂವ ಗ್ರಾಮದ ನದಿಯ  ಕಡೆಗೆ ಹೋದಾಗ ನದಿಯಲ್ಲಿ ಮೃತಪಟ್ಟ ಮೃತ ದೇಹ ಇರುತ್ತದೆ. ಇವರ ತಂದೆಯವರು ಜೀವನದಲ್ಲಿ ಜಿಗಪ್ಸೆ ಹೊಂದಿ ಸತ್ತಿರುತ್ತಾರೆ   ಯಾರ ಮೇಲೆ ಯಾವುದೇ ತರಹದ ದೂರು ವಗೈರೆ ಇರುವುದಿಲ್ಲ ಮೃತಪಟ್ಟ ಬಗ್ಗೆ ಸಂಶಯ ಇರುತ್ತದೆ. ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ   ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.