Police Bhavan Kalaburagi

Police Bhavan Kalaburagi

Friday, January 8, 2021

BIDAR DISTRICT DAILY CRIME UPDATE 08-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-01-2021

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 07-01-2021 ರಂದು ಫಿರ್ಯಾದಿ ಬಸಮ್ಮಾ ಗಂಡ ಶಾಂತಯ್ಯಾ ವಯ: 60 ವರ್ಷ, ಜಾತಿ: ಜಂಗಮ, ಸಾ: ಬರದಾಪುರ, ಸದ್ಯ: ತರನಳ್ಳಿ ರವರ ಗಂಡನಾದ ಶಾಂತಯ್ಯ ತಂದೆ ಚನ್ನಬಸಯ್ಯ ವಯ: 65 ವರ್ಷ ಇವರುಮ್ಮ ಮಕ್ಕಳ ಮದುವೆಗೆ ಮತ್ತು ವಿದ್ಯಾಭ್ಯಾಸಕ್ಕೆಂದು ಮಾಸಿದ ಸಾಲದಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ಮೃತ ಮಹಾದೇವ ತಂದೆ ಅರ್ಜುನ ಮಾನೆ ಸಾ: ಬಾರ್ಸಿ ಮಹಾರಾಷ್ಟ್ರ ಇತನು ಔರಾದ [ಬಿ] ಪಟ್ಟಣದ ವಸಂತ ವೈನ ಶ್ಯಾಪ ಎದುರಿಗೆ ರೇಹಮಾನ ಮನಿಯಾರ ಮತ್ತು ಶ್ರೀ ಜೇವಿಲಿಯರ್ಸ ಅಂಗಡಿಯ ಎದುರಿಗೆ ರಸ್ತೆಯ ಪಕ್ಕದಲ್ಲಿ ಸುಮಾರು 2 ದಿವಸಗಳ ವರೆಗೆ ಸರಾಯಿ ಕುಡಿದು ನಶೆಯಲ್ಲಿ ಮಲಗಿ ಬಿ.ಪಿ. ಶುಗರ ಹೆಚ್ಚಾಗಿ ಔರಾದ[ಬಿ] ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲು ಮಾಡಿದಾಗ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06-01-2021 ರಂದು ಬೆಳ್ಳಿಗ್ಗೆ 1030 ಗಂಟೆಗೆ ಮೃತಪಟ್ಟ ಬಗ್ಗೆ ಫಿರ್ಯಾದಿ ತಿಪ್ಪಣಾ್ಣ ತಂದೆ ಯಲ್ಲಪ್ಪಾ ವಡಿಯರ ಸಾ: ಔರಾದ(ಬಿ) ರವರಿಗೆ ಗೋತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 06-01-2021 ರಂದು ಫಿರ್ಯಾದಿ ಬಾಲರಾಜ ತಂದೆ ಗಣಪತರಾವ ಶೆಟಕಾರ ವಯ: 38 ವರ್ಷ, ಸಾ: ಶೆಟಕಾರ ಗಲ್ಲಿ ಔರಾದ (ಬಿ) ರವರ ಅಣ್ಣನಾದ ಧನರಾಜ ಇವರು ಮಾನಸಿಕ ರೋಗಿಯಾಗಿದ್ದು, ಅವರು 2 ಗುಳಿಗೆಗಳು ನುಂಗುವ ಬದಲು ಪುರ್ತಿ 10-12 ಗುಳಿಗೆಗಳು ನುಂಗಿ ಮಲಗಿದ್ದು ನಂತರ ದಿನಾಂಕ 07-01-2021 ರಂದು ಬೆಳಿಗ್ಗೆಯಾದರು ಅಣ್ಣ ಎಳಲಿಲ್ಲ ಅಂತಾ ಎಬ್ಬಿಸಲು ಹೋದಾಗ ಮಾತನಾಡದೆ ಕಣ್ಣುಗಳು ತೆರೆಯದೆ ಹಾಗೆ ಮಲಗಿದ್ದರಿಂದ ಗಾಬರಿಗೊಂಡು ಖಾಸಗಿ ವಾಹನದಲ್ಲಿ  ಆಸ್ಪತ್ರೆಗೆ ತಂದು ವೈದ್ಯಾಧಿಕರಿಯವರಿಗೆ  ತೋರಿಸಿದಾಗ ಅವರು ಗುಳಿಗೆಗಳು ನುಂಗಿರುತ್ತಾರೆ ಅಂತಾ ತಿಳಿಸಿದ್ದು, ಆಸ್ಪತ್ರೆಯಲ್ಲಿ ಗುಣಮುಖವಾಗದೆ ಮೃತಪಟ್ಟಿದ್ದು ಇರುತ್ತದೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯವಿರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 02/2021, ಕಲಂ. 323, 498(), ,506, 504 ಜೊತೆ 34 ಐಪಿಸಿ :-

ದಿನಾಂಕ 07-01-2021 ರಂದು ಫಿರ್ಯಾದಿ ಶಿಲ್ಪಾ  ಗಂಡ ದೇವಿದಾಸ ಬಾವುಗೆ ಸಾ: ಸಿಕಿಂದ್ರಬಾದ ವಾಡಿ ರವರಿಗೆ ತಂದೆಯವರಾದ ನಾಗನಾಥ ಬನವಾ ಇವರು ಸುಮಾರು 13-14 ವರ್ಷಗಳ ಹಿಂದೆ ಸಿಕಿಂದ್ರಬಾದ ವಾಡಿ ಗ್ರಾಮದ ಬಾಬುರಾವ ಬಾವುಗೆ ರವರ ಮಗನಾದ ದೇವಿದಾಸ ಇವರಿಗೆ ಬೆಡಕುಂದಾ ಗ್ರಾಮದಲ್ಲಿ ತಮ್ಮ ಜಾತಿ ಪದ್ದತಿಯಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಸುಮಾರು 7-8 ವರ್ಷಗಳವರೆಗೆ ಗಂಡ ದೇವಿದಾಸ, ಅತ್ತೆ ನಾಗಮ್ಮಾ, ಮಾವ ಬಾಬುರಾವ, ನಾದಣಿ ಗುಂಡಮ್ಮಾ ಇವರೆಲ್ಲರು ಒಟ್ಟಿಗೆ ಅನ್ಯೋನ್ಯವಾಗಿದ್ದು, ನಂತರ ಇಗ 4-5 ವರ್ಷಗಳಿಂದ ಆರೋಪಿತರಾದ ಗಂಡ, ಅತ್ತೆ, ಮಾವ ಹಾಗೂ ನಾದಣಿ ಇವರೆಲ್ಲರೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ನೀನು ಅರೆ ಹುಚ್ಚಿ ಇದ್ದು ನಿನಗೆ ಮನೆಕೆಲಸ ಮಾಡಲು ಬರುವುದಿಲ್ಲ ಅಂತ ಆಪಾದಿಸಿ, ಕಿರುಕುಳ ನೀಡಿ, ಹೊಡೆ-ಬಡೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 02-01-2021 ರಂದು ಅತ್ತೆ ನಾಗಮ್ಮಾ ಇಕೆಯು ಫಿರ್ಯಾದಿಯ ಕುದಲು ಹಿಡಿದು ಎಳದಾಡಿ ಬೆನ್ನಲ್ಲಿ ಹಾಗೂ ಹೊಟ್ಟೆಯಲ್ಲಿ ಹೊಡೆದಿರುತ್ತಾಳೆ, ನಾದಣಿ ಇವಳಿಗೆ ಸೋಕ ಜಾಸ್ತಿಯಾಗಿದೆ ಅಂತ ಅವಾಚ್ಯವಾಗಿ ಬೈದಿರುತ್ತಾಳೆ, ಮಾವ ಇತನು ಫಿರ್ಯಾದಿಗೆ ಗಂಡನಿಗೆ ನೀನು ಇಕೆಗೆ ಖತಂ ಮಾಡು ಅಂತ ಜೀವ ಬೇದರಿಕೆ ಹಾಕಿದ್ದು, ಗಂಡ ಎರಡು ಕಪಾಳದಲ್ಲಿ ಹೊಡೆದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Thursday, January 7, 2021

BIDAR DISTRICT DAILY CRIME UPDATE 07-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-01-2021

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 01/2021, ಕಲಂ. 318 ಐಪಿಸಿ :-

ದಿನಾಂಕ 06-01-2021 ರಂದು 0600 ಗಂಟೆಗೆ ಫಿರ್ಯಾದಿ ವೈಜಿನಾಥ ತಂದೆ ಕಂಠೆಪ್ಪಾ ಬರಸಂಗಿ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಧೂಮ್ಮನಸೂರ, ತಾ: ಹುಮನಾಬಾದ ರವರು ತಮ್ಮೂನಿಂದ ಕನಕಟ್ಟಾ ಕಟೆಗೆ ಹೋಗುವ ಕಚ್ಚಾ ರಸ್ತೆ ಕಡೆಗೆ ವಾಕಿಂಗ್ ಹೋಗಿ ಮರಳಿ 0700 ಗಂಟೆಗೆ ರಮೇಶ ರವರ ಹೊಲದಲ್ಲಿರುವ ಹಾಳೂ ಬಾವಿ ಹತ್ತಿರ ಬಂದು ಬಾವಿಯಲ್ಲಿ ನೋಡಲು ಒಂದು ಅಂದಾಜು 3-4 ದಿವಸಗಳ ಹಿಂದೆ ಜನನವಾದ ಮಗು ಬಾವಿಯಲ್ಲಿ ಬಿದ್ದಿರುವದನ್ನು ನೋಡಿ ತಮ್ಮೂರ ಜನರಿಗೆ ತಿಳೀಸಿದಾಗ ಎಲ್ಲರೂ ಬಂದು ನೋಡಲು ಈಗ 3-4 ದಿವಸಗಳ ಹಿಂದೆ ಯಾರೋ ಅಪರಿಚತರು ಕ್ರಮ ಸಂಬಂಧ ಬೆಳೆಸಿ ಅವರಿಗೆ ಹುಟ್ಟಿದ ಮಗುವಿನ ಜನನ ಮುಚ್ಚಿಡುವ ಉದ್ದೇಶದಿಂದ ನವಜಾತ ಒಂದು ಹೆಣ್ಣು ಮಗುವನ್ನು ಮಾಣಿಕನಗರ ಶಿವಾರದ ಹೊಲ ಸರ್ವೆ ನಂ. 1 ರಮೇಶ ರವರ ಹೊಲದ ಹಾಳು ಬಾವಿಯಲ್ಲಿ ಬಿಸಾಡಿದ್ದು ಇರುತ್ತದೆ, ಬಾವಿಯಲ್ಲಿ ಬಿದ್ದ ಮಗು ಮೃತಪಟ್ಟಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 06-01-2021 ರಂದು ಫಿರ್ಯಾದಿ ಬಾಲಿಕಾ ಗಂಡ ದಿಲಿಪ ಹುಲಸೂರೆ ವಯ: 38 ವರ್ಷ, ಸಾ: ಸೇಡೋಳ, ತಾ: ಹುಮನಾಬಾದ ರವರ ಮನೆಯವರೆಲ್ಲರೂ ತೊಗರೆ ರಾಶಿ ಮಾಡಲು ಹೊಲಕ್ಕೆ ಹೋದಾಗ ಮನೆಯಲ್ಲಿ ಫಿರ್ಯಾದಿಯವರ ಗಂಡನಾದ ದಿಲೀಪ ಹುಲಸೂರೆ ರವರು ಸಾಲದ ಬಾಧೆ ತಾಳಲಾರದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 06-01-2021 ರಂದು ಫಿರ್ಯಾದಿ ಚಿಕ್ಕಮಯ ಗಂಡ ಯಲ್ಲಪ್ಪಾ ವಯ: 60 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸೋಲುರು, ತಾ: ಆನೇಕಲ್, ಜಿ: ಬೆಂಗಳುರು ರವರ ಮಗಳಾದ ಭಾಗ್ಯ ಇಕೆಯು ಸುಮಾರು 5 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಬೀದರ ಜಿಲ್ಲೆಯ ನಿಡೋದಾ ನಿವಾಸಿಯಾದ ಚಂದ್ರಶೇಖರ ಗುಪ್ತಾ ಈತನೊಂದಿಗೆ ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತಾಳೆ, ಮದುವೆಯಾಗಿ 5 ವರ್ಷ ಕಳೆದಿದ್ದು ಇನ್ನೂ ಮಕ್ಕಳಾಗುತ್ತಿಲ್ಲ ಅಂತ ಬೇಸರ ಮಾಡಿಕೊಂಡು ಹೇಳುತ್ತಿದ್ದಳು, ಹೀಗಿರುವಾಗ ಮಗಳು ಭಾಗ್ಯ ಇವಳು ತನಗೆ ಮದುವೆಯಾಗಿ 5 ವರ್ಷ ಕಳೆದಿದ್ದು ಮಕ್ಕಳಾಗಿರುವುದಿಲ್ಲ ಎಂಬ ಕೋರಗಿನಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 01-01-2021 ರಂದು ನಿಡೋದಾ ಗ್ರಾಮದ ತನ್ನ ಗಂಡನ ಮನೆಯಲ್ಲಿ ವಿಷ ಕುಡಿದಿರುವ ಪ್ರಯುಕ್ತ ಆಕೆಗೆ ಚಿಕಿತ್ಸೆ ಕುರಿತು ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಚಿಕಿತ್ಸೆ ಫಲಿಸದೇ ದಿನಾಂಕ 05-01-2021 ರಂದು ಮೃತಪಟ್ಟಿದ್ದು, ಆಕೆಯ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.