Police Bhavan Kalaburagi

Police Bhavan Kalaburagi

Saturday, June 1, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 31-05-2019 ರಂದು ಬಡದಾಳ ಗ್ರಾಮದ ಶರಣಪ್ಪ ತಂದೆ ಶಿವಪ್ಪ ಮಾಶಾಳ ಎಂಬುವವರು ಮಣೂರ ಯಲ್ಲಮ್ಮ ಧೇವಿಗೆ ದೇವರ ಕಾರ್ಯಕ್ರಮ ಮಾಡಿರುತ್ತಾರೆ. ಸದರಿ ಕಾರ್ಯಕ್ರಮಕ್ಕೆ ನನ್ನ ತಮ್ಮನು ಸಹ ಹೋಗಿರುತ್ತಾನೆ. ಇಂದು ಸಾಯಂಕಾಲ 4:45 ಗಂಟೆಗೆ ನಾನು ನಮ್ಮೂರಿನಲ್ಲಿದ್ದಾಗ ನಮ್ಮ ಸೋದರ ಮಾವನಾದ ಸಿದ್ದಪ್ಪ ತಂದೆ ಸಂಗಪ್ಪ ನಾಟಿಕಾರ ಸಾ|| ಬಡದಾಳ ಈತನು ನನಗೆ ಪೋನ ಮಾಡಿ ನಿಮ್ಮ ತಮ್ಮನಾದ ಬಸವರಾಜ ಅವನ ಗೆಳೆಯನಾದ ಹೋನ್ನಪ್ಪ ತಂದೆ ಬಸಣ್ಣ ಪರೀಟ್ ಇಬ್ಬರು ಕೂಡಿ ಯಲ್ಲಪ್ಪ ತಂದೆ ಭೀಮಶಾ ತಳವಾರ ಸಾ|| ಸಿಂದಗಿ ಇವರ ಹಿರೊ ಸಿಡಿ ಡಿಲೆಕ್ಸ ಕಂಪನಿಯ ಮೋಟರ ಸೈಕಲ ನಂ ಕೆಎ-28 ಇಬಿ-8506 ನೇದ್ದರ ಮೇಲೆ ಮಣೂರ ಯಲ್ಲಮ್ಮ ಧೇವಿಯ ದೇವರ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬಡದಾಳಕ್ಕೆ ಹೋಗುತ್ತಿದ್ದಾಗ ಈಗ ಸಾಯಂಕಾಲ 4:30 ಗಂಟೆ ಸುಮಾರಿಗೆ ಕರಜಗಿ ಗ್ರಾಮದ ಹೈದ್ರಾ ಕ್ರಾಸಿನಲ್ಲಿರುವ ಪೆಟ್ರೋಲ ಬಂಕ ಹತ್ತಿರ ನಿನ್ನ ತಮ್ಮನು ನಡೆಸುತ್ತಿದ್ದ ಮೋಟರ ಸೈಕಲಕ್ಕೆ ಟಂ ಟಂ ನಂ ಕೆಎ-32 -5467 ನೇದ್ದರ ಚಾಲಕ ಟಂ ಟಂ ನ್ನು ಎದುರಿನಿಂದ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಡಿಕ್ಕಿ ಪಡಿಸಿರುತ್ತಾನೆ ಇದರಿಂದ ನಿನ್ನ ತಮ್ಮನಿಗೆ ಮತ್ತು ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಹೊನ್ನಪ್ಪ ಪರೀಟ್ ಇಬ್ಬರಿಗೂ ಭಾರಿ ಗಾಯಗಳಾಗಿರುತ್ತವೆ. ನಿನ್ನ ತಮ್ಮನನ್ನು ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಬನ್ನಿ ಅಂತಾ ತಿಳಿಸಿರುತ್ತಾರೆ. ಸದರಿ ಸುದ್ದಿ ಕೇಳಿ ನಾನು ಮತ್ತು ನನ್ನ ತಂದೆಯ ಅಣ್ಣ ತಮ್ಮರಾದ ಸಂಜೀವ ವಾಲಿಕಾರ, ಶ್ರೀಶೈಲ ವಾಲಿಕಾರ, ಶಿವಪ್ಪ ವಾಲಿಕಾರ ನಾಲ್ಕು ಜನರು ಕೂಡಿ ಅಫಜಲಪೂರಕ್ಕೆ ಹೊರಟಿರುತ್ತೇವೆ. ನಂತರ 6:00 ಗಂಟೆ ಸುಮಾರಿಗೆ ನನ್ನ ಮಾವನಾದ ಸಿದ್ದಪ್ಪ ನಾಟಿಕಾರ ಈತನು ನನಗೆ ಪೋನ ಮಾಡಿ ನಿನ್ನ ತಮ್ಮನು ಕಲಬುರಗಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಗೋಬ್ಬುರ (ಬಿ) ಹತ್ತಿರ ಮೃತ ಪಟ್ಟಿರುತ್ತಾನೆ. ನೀವು ಅಫಜಲಪೂರಕ್ಕೆ ಬನ್ನಿ ಅಂತ ತಿಳಿಸಿದ ಮೇರೆಗೆ ನಾವು ಅಫಜಲಪೂರಕ್ಕೆ ಬಂದಿದ್ದು, ಸ್ವಲ್ಪ ಸಮಯದ ನಂತರ ನನ್ನ ತಮ್ಮನ ಶವವು ಅಫಜಲಪೂರಕ್ಕೆ ಬಂದಿದ್ದು, ನನ್ನ ತಮ್ಮನ ಶವವನ್ನು ಅಫಜಲಪೂರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ತಂದು ಹಾಕಿರುತ್ತೇವೆ. ಅಂತಾ ಶ್ರೀ ಸಿದ್ದಾರಾಮ ತಂದೆ ಬುದ್ದಪ್ಪ ವಾಲಿಕಾರ ಸಾ|| ಚಿಕ್ ಬೇನೂರ ತಾ|| ಇಂಡಿ ಜಿ|| ವಿಜಯಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಸ್ವಾಭಾವಿಕ ಸಾವು ಪ್ರಕರಣಗಳು :
ಚೌಕ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಸಿದ್ರಾಮಪ್ಪ ಕಣ್ಣಿ, ಸಾ: ಸಂಜಯಗಾಂಧಿನಗರ ದುಬೈಕಾಲೂನಿ ಕಲಬುರಗಿ ರವರ ಮದುವೆಯು ಕಳೆದ ಆರು ವರ್ಷಗಳ ಹಿಂದೆ ಕಲಬುರಗಿಯ ಸಂಜಯಗಾಂಧಿ ನಗರ ದುಬೈ ಕಾಲೂನಿಯ ಸಿದ್ರಾಮಪ್ಪ ತಂದೆ ಸುಭಾಶ ಕಣ್ಣಿ ಇವರೊಂದಿಗೆ ಆಗಿದ್ದು ಇರುತ್ತದೆ. ನಮಗೆ ಸೃಷ್ಠಿ ಅಂತಾ ಐದು ತಿಂಗಳ ಹೆಣ್ಣುಮಗಳು ಇರುತ್ತಾಳೆ. ನನ್ನ ಗಂಡ ಸಿದ್ರಾಮಪ್ಪ ತಂದೆ ಸುಭಾಶ ಕಣ್ಣಿ, ಇವರ ಎಡಗಾಲು ಅಂಗವಿಕಲಾಗಿ ಕುಂಟುತ್ತಾ ನಡೆಯುತ್ತಿದ್ದರು. ಆದರೂ ಸಹ ಒಂದು ಟಾಟಾ ಎಸಿ ವಾಹನ ಇಟ್ಟುಕೊಂಡು ಅದರ ಮೇಲೆ ಡ್ರೈವರ ಕೆಲಸ ಮಾಡಿಕೊಂಡಿದ್ದರು. ಈಗ 2-3 ದಿವಸಗಳ ಹಿಂದೆ ನನ್ನ ಗಂಡನಿಗೆ ಆರಾಮ ತಪ್ಪಿದ್ದರಿಂದ ಖಾಸಗಿಯಾಗಿ ವೈದ್ಯರ ಹತ್ತಿರ ಉಪಚಾರ ಪಡೆದುಕೊಂಡಿದ್ದು ವೈದ್ಯರು ಅವರಿಗೆ ಗೊಳಿ, ಔಷದ ತಗೆದುಕೊಳ್ಳುವಂತೆ ತಿಳಿಸಿದ ಮೇರೆಗೆ ಮನೆಯಲ್ಲಿಯೇ ಗೊಳಿ, ಔಷದ ತಗೆದುಕೊಳ್ಳುತ್ತಿದ್ದರು. ದಿನಾಂಕ.30.05.2019 ರಂದು ಬೆಳಿಗ್ಗೆ 8.30 ಗಂಟೆಗೆ ನನ್ನ ಗಂಡ ಮನೆಯಿಂದ ಹೊರಗೆ ಹೋಗಿ ಮರಳಿ ರಾತ್ರಿ 9.00 ಗಂಟೆಗೆ ಮನೆಗೆ ಬಂದಿದ್ದು ಆಗ ನಾನು ನಮ್ಮ ಅತ್ತೆ ಮಹಾದೇವಿ, ನೆಗೆಣಿ ಸರೋಜಾ, ಮೈದುನ ಶರಣಕುಮಾರ ಕೂಡಿ ಮನೆಯಲ್ಲಿ ಊಟ ಮಾಡುತ್ತಿದ್ದೇವು. ನನ್ನ ಗಂಡನಿಗೂ ಸಹ ಊಟ ಮಾಡಲು ಕರೆದಿದ್ದು ಆಗ ಅವರು ಊಟ ಮಾಡುವುದಿಲ್ಲ ಅಂತಾ ಹೇಳಿ ನೀರು ಕುಡಿದು ಮಲಗಿಕೊಂಡರು. ಬೆಳಿಗ್ಗೆ 4.00 ಗಂಟೆ ಸುಮಾರಿಗೆ ನನ್ನ ಗಂಡ ನನಗೆ ಎಬ್ಬಿಸಿ ರಾತ್ರಿ ದವಖಾನಿ ಗೊಳಿ ತಗೆದುಕೊಳ್ಳಲು ಹೋಗಿ ಪಕ್ಕದಲ್ಲಿದ್ದ ಇಲಿ ಸಾಯುವ ಔಷದ ಗೊಳಿ ತಪ್ಪಾಗಿ ತಗೆದುಕೊಂಡಿರುತ್ತೇನೆ ನನಗೆ ಕಸಿವಿಸಿಯಾಗಿ ಉಲ್ಟಿ ಬರುತ್ತಾಯಿದೆ ಅಂತಾ ಹೇಳಿದ್ದರಿಂದ ನಮ್ಮ ಅತ್ತೆ ಮತ್ತು ನಮ್ಮ ಮೈದುನ ಕುಡಿ ನನ್ನ ಗಂಡನಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಹೋದರು. ನಂತರ ನಾನು ಸಹ ಸರ್ಕಾರಿ ಆಸ್ಪತ್ರೆಗೆ ಹೋಗಿರುತ್ತೇನೆ. ಅಲ್ಲಿಯ ವೈದ್ಯರು ನನ್ನ ಗಂಡನಿಗೆ ಹೆಚ್ಚಿನ ಉಪಚಾರಕ್ಕಾಗಿ ಸನರೈಸ್ ಆಸ್ಪತ್ರೆಗೆ  ತಗೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಗಂಡನಿಗೆ ಸರ್ಕಾರಿ ಆಸ್ಪತ್ರೆಯಿಂದ ಸನರೈಸ್ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು, ನನ್ನ ಗಂಡ ಸನರೈಸ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಚಿಕಿತ್ಸೆ ಪಲಕಾರಿಯಾಗದೇ ಇಲಿ ಸಾಯುವ ಔಷದಿ ಗೊಳಿಗಳನ್ನು ನುಂಗಿದ್ದರಿಂದ ಇಂದು ದಿನಾಂಕ.31.05.2019 ರಂದು ಬೆಳಗಿನ ಜಾವ 5.06 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Friday, May 31, 2019

KALABURAGI DISTRICT REPORTED CRIMES

ಹಲ್ಲೆ ಪ್ರಕರಣಗಳು  :
ಅಶೋಕ ನಗರ ಠಾಣೆ : ಶ್ರೀಮತಿ ಸುರೇಖಾ ತಂದೆ ಲಾಲಪ್ಪ ಶಾಸ್ತ್ರಿ ಸಾ:ಅಶೋಕ ನಗರ ಕಲಬುರಗಿ. ರವರು ದಿನಾಂಕ: 30.05.2019 ರಂದು ನನ್ನ ಮತ್ತು ನನ್ನ ತಾಯಿಯ ಮುಂದಿನ ಜೀವನದ ಬಗ್ಗೆ ಹೇಗೆ ಅಂತ ನನ್ನ ಅಣ್ಣನಾದ ದತ್ತಾತ್ರೇಯ ತಂದೆ ಲಾಲಪ್ಪ ಶಾಸ್ತ್ರಿ ಮತ್ತು ಜೀತೆಂದ್ರ ತಂದೆ ಲಾಲಪ್ಪ ಶಾಸ್ತ್ರಿ, ಜೈಭೀಮ ತಂದೆ ಲಾಲಪ್ಪ ಶಾಸ್ತ್ರಿ ಇವರಿಗೆ ಕೆಳಲಾಗಿ ನೀವು ಏನು ಕೇಳುತ್ತಿರಿ ರಂಡಿ ಮಕ್ಕಳ, ಭೊಸಡಿ ಮಕ್ಕಳೆ ದತ್ತಾತ್ರೆಯ ಇತನು ಅವಾಚ್ಯವಾಗಿ ಬೈಯುತ್ತಿದ್ದಾಗ ಅವನ ಹೆಂಡತಿಯಾದ ಲತಾ ಗಂಡ ದತ್ತಾತ್ರೇಯ ಇವಳು ಕೈಯಲ್ಲಿ ಒಂದು ಪ್ಲಾಸ್ಟೀಕ್ ಪೈಪ್ ಕೈಯಲ್ಲಿ ಹಿಡಿದುಕೊಂಡು ಬಂದವಳೆ ನನ್ನ ತಲೆಯ ಮೇಲಿನ ಕೂದಲು ಹಿಡಿದು ಒಂದು ಕೈಯಿಂದ ದಬ್ಬಿಸಿ ಒಂದು ಕೈಯಲ್ಲಿದ್ದ ಪೈಪ ನಿಂದ ಬೆನ್ನಿನ ಮೇಲೆ ಹೊಡೆದು ಗುಪ್ತ ಗಾಯ ಪಡಿಸಿದು ಹೊಡೆಯ ಬೇಡ ಅಂತ ಬಲಗೈ ಮೇಲೆ ಮಾಡಿದಾಗ ಬಲಗೈ ಹೆಬ್ಬೆರಳಿಗೆ ಅದೆ ಪೈಪನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾಳೆ. ಬಿಡಿಸಲು ಬಂದ ನನ್ನ ತಾಯಿಗೆ ಉಮಾ ಗಂಡ ಬಸವರಾಜ ಕಾಲಿನಿಂದ ನನ್ನ ತಾಯಿ ಕಸ್ತೂರಿಬಾಯಿಯ ಟೊಂಕದ ಮೇಲೆ ಒದ್ದಾಗ ಕುಸಿದು ನೆಲಕ್ಕೆ ಬಿದ್ದಿರುತ್ತಾಳೆ. ಇದನ್ನು ನೋಡಿ ನನ್ನ ಅಣ್ಣನಾದ ಜೀತೆಂದ್ರ ತಂದೆ ಲಾಲಪ್ಪ ಶಾಸ್ತ್ರಿ ಇತನು ಬಿಡಿಸಲು ಬಂದರೆ ನಿನು ಏಕೆ ಬಂದಿದ್ದಿ ಭೊಸಡಿ ಮಗನೆ ಅಂತ ವಿಷ್ಣು ತಂದೆ ದತ್ತಾತ್ರೇ ಇತನು ಕೈಯಲ್ಲಿ ಬಡಿಗೆ ತೆಗೆದುಕೊಂಡು ತನ್ನ ಅಣ್ಣನ ಬೆನ್ನ ಮೇಲೆ ಮತ್ತು ಎರಡು ಕಾಲುಗಳ ಮೇಲೆ ಹೊಡದು ಗುಪ್ತ ಗಾಯ ಪಡಿಸಿರುತ್ತಾರೆ. ಅನಿಲ ಇತನು ಓಡಿ ಬಂದವನೆ ನನ್ನ ಅತ್ತಿಗೆಯಾದ ಪ್ರೀಯಾಂಕಾ ಗಂಡ ಜೈಭೀಮ ಶಾಸ್ತ್ರಿ ಇವಳ ಸಿರೆ ಹಿಡಿದು ಜಗ್ಗಾಡಿ ಬೆನ್ನ ಮೇಲೆ ಕಾಲು ಮೇಲೆ ಒದ್ದಿರುತ್ತಾರೆ. ಇದನ್ನು ನೊಡಿದ ಅನಸೂಯಾ ಗಂಡ ದಿ|| ದಶರಥ ಹೊಡಲ್ಕರ ಸಾ:ಸಿ..ಬಿ ಕಾಲೋನಿ ಕಲಬುರಗಿ ಇವರು ಮತ್ತು ಪ್ರಮೀಳಾ ತಂದೆ ಕುಪೇಂದ್ರ ಮತ್ತು ಮಹೇಶ ಇಳಗೇರ ಸಾ:ಅಶೋಕ ನಗರ ಇವರು ಇಲ್ಲರಿಗೂ ಬುದ್ದಿ ಮಾತು ಹೇಳಿ ಜಗಳ ಬಿಡಿಸಿರುತ್ತಾರೆ. ಇಲ್ಲದಿದ್ದರೆ ನಮಗೆ ಇನ್ನು ಬಹಳ ಹೊಡೆಯುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀಮತಿ ಲಾಲಮ್ಮಾ ಗಂಡ ಬಸವರಾಜ ಸಾ:ಸಂಜು ನಗರ ಕಲಬುರಗಿ. ರವರು ದಿನಾಂಕ: 30.05.2019 ರಂದು ಅಶೊಕ ನಗರದಲ್ಲಿರುವ ಮಮ್ಮಗಳಾದ ಲತಾ ಗಂಡ ದತ್ತಾತ್ರೇಯ ಇವರಿಗೆ ಮಾತನಾಡಿಸಲು ಬಂದಾಗ ಪಕ್ಕದ ಮನೆಯವನಾದ ಜೀತೆಂದ್ರ ತಂದೆ ಲಾಲಪ್ಪ ಇತನು ಕೈಯಲ್ಲಿ ಬಡಿಗೆ ಹಿಡಿದುಕೊಂಡು ನನಗೆ ನೊಡಿದವನೆ ರಂಡಿ ನಿನು ಇಲ್ಲಿಗೆ ಏಕೆ ಬಂದಿದ್ದಿ ನಿನು ನಮಗೆ ಏನು ಸಂಬಂಧ ಇಲ್ಲಾ ನಿನಗೆ ಖಾಲಾಸ ಮಾಡುತ್ತೇನೆ ಅಂದವನೆ ತಲೆ ಹಿಂಬಾಗದ ಬಲ ಭಾಗಕ್ಕೆ ಜೊರಾಗಿ ಹೊಡೆದಿದ್ದರಿಂದ ತಲೆ ಒಡೆದು ರಕ್ತ ಸೊರುತ್ತಿತ್ತು. ಇದನ್ನು ನೊಡಿದ ಲತಾ ಗಂಡ ದತ್ತಾತ್ರೇ ಇವಳು ನನ್ನ ಅಜ್ಜಿಗೆ ಏಕೆ ಹೊಡೆಯುತ್ತಿಯಾ ಅಂತ ಬಿಡಿಸಲು ಹೊದರೆ ಲತಾ ಇವಳಿಗು ಕೈಯಿಂದ ತಲೆಯ ಮೇಲೆ ಎದೆಯ ಮೇಲೆ ಹೊಡೆದಿರುತ್ತಾನೆ. ಇದನ್ನು ನೊಡಿ ಮಲ್ಲಿಕಾರ್ಜುನ ತಂದೆ ಶಿವಲಿಂಗಪ್ಪ ದೊಡ್ಡಮನಿ ಮತ್ತು ಗುಂಡಮ್ಮಾ ಗಂಡ ಮಲ್ಲಿಕಾರ್ಜುನ ದೊಡ್ಡಮನಿ ಇವರು ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ. ಮಹಮ್ಮದ ಉಸ್ಮಾನ ತಂದೆ ಮಹಮ್ಮದ ರಶೀದ ಸಾ; ಮಟನ ಮಾರ್ಕೇಟ ಹತ್ತಿರ ದರ್ಗಾ ಹತ್ತಿರ ಛೋಟಾ ರೋಜಾ ಕಲಬುರಗಿ  ರವರು ದಿನಾಂಕ.28-05-2019 ರಂದು ರಾತ್ರಿ ನಾನು ಮತ್ತು ನನ್ನ ಗೆಳೆಯನಾದ ಮಹಮ್ಮದ ಖಮರಶಾ ತಂದೆ ಮಶಾಕ ಶಾ ಇಬ್ಬರು ಕೂಡಿಕೊಂಡು ಆತನ ಆಟೋರಿಕ್ಷಾದಲ್ಲಿ ಹುಮನಾಬಾದರಿಂಗರೋಡ ಕಡೆಯಿಂದ ಹಾಗರಗಾ ರಿಂಗರೋಡ ಕಡೆಗೆ ಬರುತ್ತಿರುವಾಗ ಟಿಪ್ಪು ಸುಲ್ತಾನ ಮೆಡಿಕಲ್ ಕಾಲೇಜ/ಆಸ್ಪತ್ರೆಯ ಎದರುಗಡೆ ರಿಂಗರೋಡ ಪಕ್ಕದ ನಾಲೆಯ ಹತ್ತಿರ ಕೆಲವು ಜನರು ಸೇರಿದ್ದರು ಆಗ ನಾವು ಕೂಡಾ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ವಯಸ್ಸು ಅಂದಾಜು 35-40 ವರ್ಷದ ವ್ಯಕ್ತಿ ಇದ್ದು ಹೆಸರು ವಿಳಾಸ ಗೊತ್ತಾಗಿರುವದಿಲ್ಲ ಸದರಿಯವನು ತಳ್ಳನೆಯ ಮೈಕಟ್ಟು ಹೊಂದಿದ್ದು ಅಶಕ್ತನಾಗಿ ಬಡಕಲು ಶರೀರ ಹೊಂದಿದ್ದು ಯಾವುದೋ ಕಾಯಿಲೆಯಿಂದ ಬಳಲುತಿದ್ದಂತೆ ಕಾಣುತ್ತದೆ ರೋಡಿನ ಪಕ್ಕದ ನಾಲೆಯ ಹತ್ತಿರ ಕುಳಿತಲ್ಲಿಯೇ ಬಿದ್ದು ಮಲಗಿದಲ್ಲಿಯೇ ಮೃತ ಪಟ್ಟಂತೆ ಕಂಡು ಬರುತ್ತದೆ. ಸದರಿಯವನು ತಳ್ಳನೆಯ ಮೈಕಟ್ಟು ಹೊಂದಿದ್ದು, ಕಣ್ಣುಗಳು ತೆರೆದಿದ್ದು, ಬಾಯಿಯಲ್ಲಿನ ಮೇಲಿನ 3-4 ಹಲ್ಲು ಬಿದ್ದಿರುತ್ತವೆ, ಮೈ ಮೇಲೆ ಯಾವುದೇ ಗಾಯವಗೈರೆ ಕಂಡು ಬಂದಿರುವದಿಲ್ಲಾ.  ಸದರಿಯವನು ಮುಸ್ಲಿಂನಂತೆ ಕಾಣುತ್ತಾನೆ , ಸದರಿಯವನ ಮೈ ಮೇಲೆ ಒಂದು ಖಾಕಿ ಕಲರ ಶರ್ಟ , ಒಂದು ಬ್ರೌನಕಲರ ಪ್ಯಾಂಟ, ಹಸಿರು ಕಲರ ಜ್ಯಾಂಗಾ ಧರಿಸಿರುತ್ತಾನೆ. ಇತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ . ಆದುರಿಂದ ಸದರಿ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಬಳಲುತಿದು , ಆಶಕ್ತನಾಗಿದ್ದು ,ರೋಡಿನ ಪಕ್ಕದಲ್ಲಿ ಕುಳಿತಲ್ಲೆಯೇ ಬಿದ್ದು ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.