Police Bhavan Kalaburagi

Police Bhavan Kalaburagi

Saturday, May 28, 2011

ಗುಲಬರ್ಗಾ ಜಿಲ್ಲೆ ಅಪರಾದಗಳ ಮಾಹಿತಿ

ಚಿಂಚೋಳಿ ಪೊಲೀಸ್‌ ಠಾಣೆ .

ಲಕ್ಷ್ಮ ಗಂಡ ಜಗನ್ನಾಥ ಅವಂಟಗಿ ಐನ್ನೋಳಿರವರ ಮಗಳಾದ ಮಿನಾಕ್ಷಿ ವಯಸ್ಸು 16 ಪಕ್ಕದ ಮನೆಯವನಾದ ಸುರೇಶ ತಂದೆ ನರಸಪ್ಪಾ ಕೊರವೆಯರ ಇತನು ಮದುವೆ ಆಗುತ್ತೇನೆ ಅಂತಾ ನಂಬಿಸಿ ಮಿನಾಕ್ಷಿಯನ್ನು ದಿನಾಂಕ 24/05/2011 ರಂದು ಅಪಹರಿಸಿಕೊಂಡು ಹೋಗಿರುತ್ತಾನೆ ಅಪ್ರಾಪ್ತ ವಯಸ್ಸಿನವಳಾದ ಮಿನಾಕ್ಷಿ ಇವಳಿಗೆ ಕಳೆದ 24/05/2011 ರಿಂದ ಮನೆಯವರು ಹುಡುಕಾಡಿರುತ್ತಾರೆ. ಅವಳಿಗೆ ಅಪಹರಿಸಿಕೊಂಡು ಹೋಗಿರುವ ಕಾರಣ ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾಧಿ ಸಾರಾಂಶದ ಮೇಲೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೇವರ್ಗಿ ಪೊಲೀಸ್ ಠಾಣೆ

ಜೇವರ್ಗಿ ತಾಲೂಕಿನ್ ಮುದಬಾಳ (ಬಿ) ಗ್ರಾಮದ ಹತ್ತಿರ ಯಾವುದೋ ವಾಹನವು ರಾತ್ರಿ ವೇಳೆಯಲ್ಲಿ ಸಂತೋಷ ಕುಮಾರ ತಂದೆ ಮೋಹನರಾವ ಪತ್ತಾರ ಆಳಂದ ಇವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹಾಗೇಯೇ ಹೋಗಿದ್ದು ಪರಿಣಾಮ ಸಂತೊಷ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸ್ಟೇಷನ ಬಜಾರ ಪೊಲಿಸ್ ಠಾಣೆ

ಸ್ಟೇಷನ ಬಜಾರ ಹತ್ತಿರ ಚಿಕನ ಫುಡ್ ಸೆಂಟರ ಮುಂದೆ ಶಿವು ತಂದೆ ಸಂಗಣ್ಣ ಮತ್ತುಕೊ ಅವನ ಜೊತೆ ಎರಡು ಜನರು ಕುಡಿಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಜಗಳತೆಗೆದು ಆನಂದನಿಗೆ ಹೊಡೆದು ಗಾಯಪಡಿಸಿದ್ದ ಕಾರಣ ಅನಂದ ಈತನು ಬಸವೇಶ್ವರ ಆಸ್ಪತ್ರೆ ಯಲ್ಲಿ ಉಪಚಾರ ಪಡೆದುತ್ತಿರುತ್ತಾನೆ ಮತ್ತು ಜೀವಕ್ಕೆ ಭಯ ಹಾಕಿರುತ್ತಾರೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: